Homeಮುಖಪುಟನೆನೆಯಬೇಕಿದೆ ಮಹಾತ್ಮನ ಮಡದಿಯನು.... : ಡಿ.ಉಮಾಪತಿ

ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

- Advertisement -
- Advertisement -

ಬಹುಜನ ಭಾರತ: ಡಿ.ಉಮಾಪತಿ

ಇಂದು ಗಾಂಧೀ ಜಯಂತಿ. ಗಾಂಧೀ ಹುಟ್ಟಿ 150 ವರ್ಷಗಳು. ಹಾಗೆಯೇ ಕಸ್ತೂರ ಬಾ ಜನಿಸಿಯೂ 150 ವರ್ಷಗಳು. ಗಾಂಧೀ ಏರಿದ ಎತ್ತರದ ಎಲ್ಲ ಶ್ರೇಯಸ್ಸು ಕಸ್ತೂರ ಬಾ ಅವರದು ಎಂದಿದ್ದ ಈ ದಂಪತಿಗಳ ಹಿರಿಯ ಮಗ ಹರಿಲಾಲ್. ಪುಣೆಯ ಸೆರೆಮನೆ ವಾಸದಲ್ಲಿ ಪತಿಯ ಬಾಹುಗಳಲ್ಲೇ ಪ್ರಾಣಬಿಟ್ಟರು ಕಸ್ತೂರಬಾ.

ಹದಿಮೂರನೆಯ ವಯಸ್ಸಿಗೆ ಮದುವೆ. 1888ರಲ್ಲಿ ತಮ್ಮ 19ನೆಯ ವರ್ಷದಲ್ಲಿ ಮೊದಲ ಮಗ ಹರಿಲಾಲನ ಜನನ. ಮಣಿಲಾಲ್, ರಾಮದಾಸ್ ನಂತರ ಕಿರಿಯ ಮಗ ದೇವದಾಸ್ ಜನಿಸಿದ್ದು 1900ರಲ್ಲಿ. ಆನಂತರ ಪತ್ನಿಯ ಅಭಿಪ್ರಾಯವನ್ನು ಕೇಳುವ ಗೋಜಿಗೆ ಹೋಗದ ಗಾಂಧೀ ಅವರಿಂದ ಬ್ರಹ್ಮಚರ್ಯ ಪಾಲನೆಯ ಏಕಪಕ್ಷೀಯ ನಿರ್ಧಾರ. ಆಗ ಕಸ್ತೂರಬಾ ಅವರ ವಯಸ್ಸು 31. ದಾಂಪತ್ಯ ಜೀವನದ ಈ ಗುರುತರ ನಿರ್ಧಾರ ಕುರಿತು ತಮ್ಮ ನಿಲುಮೆ ಏನಿತ್ತೆಂದು ಆಕೆಯ ಬಾಯಿಂದಲೇ ಹೊರಬಿದ್ದ ಮಾತುಗಳು ಎಲ್ಲಿಯೂ ದಾಖಲಾಗಿಲ್ಲ.

ಕಡುಕೋಪದ ಗಳಿಗೆಗಳಲ್ಲಿ ಕಸ್ತೂರಬಾ ಅವರನ್ನು ಮನೆಯಿಂದ ಹೊರಹಾಕಲು ತಾವು ಮುಂದಾದದ್ದನ್ನು ಗಾಂಧಿಯೇ ಹೇಳಿಕೊಂಡಿದ್ದಾರೆ. ಆಶ್ರಮದ ಕಕ್ಕಸುಗಳನ್ನು ತೊಳೆಯಬೇಕೆಂಬ ಪತಿಯ ಆದೇಶವನ್ನು ಅವರು ತಿರಸ್ಕರಿಸುತ್ತಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲತತ್ವಗಳನ್ನು ಗಾಂಧೀ ಕಲಿತದ್ದು ತಮ್ಮ ಪತ್ನಿಯಿಂದಲೇ..

ಪತಿಗಿಂತ ನಾಲ್ಕು ತಿಂಗಳು 22 ದಿವಸಗಳಷ್ಟು ವಯಸ್ಸಿನಲ್ಲಿ ದೊಡ್ಡವರು ಕಸ್ತೂರಬಾ. ಏಪ್ರಿಲ್ ಹನ್ನೊಂದರಂದು ಆಕೆಯ ಜನ್ಮದಿನದಿಂದು ಬಾ ಅವರನ್ನು ದೇಶ ನೆನೆದದ್ದನ್ನು ಕಂಡವರಿಲ್ಲ. ಗಾಂಧೀಯನ್ನು ಬಿಟ್ಟು ಕಸ್ತೂರಬಾಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಗಾಂಧೀಯನ್ನು ನೆನೆದರೆ ಕಸ್ತೂರಬಾ ಅವರನ್ನು ನೆನೆದಂತೆಯೇ ಎಂಬುದು ನಮ್ಮ ಗಂಡಾಳಿಕೆಯ ಸಾಮೂಹಿಕ ಸಾಕ್ಷಿಪ್ರಜ್ಞೆ. ಗುರುತಿಸದೆ ಮಣ್ಣಾಗಿರುವ ಸಾವಿರಾರು ಅಜ್ಞಾತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಪ್ರತೀಕ ಕಸ್ತೂರಬಾ ಎನ್ನುತ್ತಾರೆ ಹಿರಿಯ ಸರ್ವೋದಯ ಕಾರ್ಯಕರ್ತ ಬಿಜು ನೇಗಿ.

ಹಿರಿಯರು ನಿಶ್ಚಯಿಸಿದಂತೆ ಮೋಹನದಾಸನನ್ನು ವರಿಸಿದ ಕಸ್ತೂರ್ ಕಪಾಡಿಯಾ ವೈವಾಹಿಕ ಜೀವನದ 62 ವರ್ಷಗಳನ್ನು ಗಾಂಧಿಯೊಂದಿಗೆ ಕಳೆದರು. ಕಸ್ತೂರ ಬಾ ಆದರು. ಗುಜರಾತಿನ ಪಟ್ಟಣವೊಂದರ ಶಾಲಾಬಾಲಕನಿಂದ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವರಾಜ್ಯ ಗಳಿಕೆಯ ಹೋರಾಟದ ನಾಯಕನಾಗಿ ಪತಿಯ ರೂಪಾಂತರದಲ್ಲಿ ಜೊತೆಗಿದ್ದು ಏರಿಳಿತಗಳನ್ನು ಹಂಚಿಕೊಂಡವರು. ಪತಿಯ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಮಸುಕಾಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ. ಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಒಮ್ಮೆ ಕಸ್ತೂರಬಾಗೆ ಕಂಠಾಭರಣದ ಉಡುಗೊರೆ ದೊರೆತದ್ದು ನನ್ನ (ದೇಶ) ಸೇವೆಗೋ ಅಥವಾ ನಿನ್ನ ಸೇವೆಗೋ ಎಂದು ದನಿಯೇರಿಸಿದ್ದರು ಬಾಪೂ. ತಿರುಗಿ ಬಾ ನೀಡಿದ ಉತ್ತರ ಹೀಗಿತ್ತು- ‘ಒಪ್ಪುತ್ತೇನೆ. . . ಆದರೆ ನೀವು ಸಲ್ಲಿಸಿದ ಸೇವೆ ನಾನು ಸಲ್ಲಿಸಿದ ಸೇವೆಯೆಂದೇ ಲೆಕ್ಕ. ನಿಮಗಾಗಿ ನಾನು ಹಗಲಿರುಳು ದೇಹ ಸವೆಸಿ ದುಡಿದಿದ್ದೇನೆ. ಅದು ಸೇವೆ ಅಲ್ಲವೇನು. . . .’

ಅಂದಿನಿಂದಲೇ ಅಜ್ಜಿಯ ಬದುಕಿನ ಕತೆಯನ್ನು ತಾತನ ಬದುಕು ಮಬ್ಬಿಗೆ ಸರಿಸಿಬಿಟ್ಟಿತು ಎಂದಿದ್ದಾರೆ ಮೊಮ್ಮಗ ಅರುಣ್ ಗಾಂಧೀ. ಹದಿಮೂರನೆಯ ವಯಸ್ಸಿಗೆ ವಿವಾಹದ ನಂತರ. ಕಸ್ತೂರ್ ಕಪಾಡಿಯಾ ಕಸ್ತೂರಬಾ ಗಾಂಧೀ. ಪೋರಬಂದರು ತೊರೆದು ರಾಜಕೋಟ್ ಮನೆಯಲ್ಲಿ ವಾಸ. ಹೊಸ ಊರು, ಹೊಸ ಮನೆ, ಹೊಸ ಹೆಸರು. ಮೋಹನದಾಸ್ ಶಾಲಾ ವಿದ್ಯಾರ್ಥಿ ಮತ್ತು ಗೃಹಸ್ಥ ಎರಡೂ ಆಗಿದ್ದ. ಪತ್ನಿ ತಾನು ಹೇಳಿದಂತೆ ಕೇಳಬೇಕು ಎಂಬ ಇರಾದೆಗೆ ಬಿದ್ದಿದ್ದ. ಮನೆ ಬಿಟ್ಟು ಹೊರಗೆ ಹೋಗುವುದಾದರೆ ತನ್ನ ಅನುಮತಿ ಪಡೆಯಲೇಬೇಕು. ಎಲ್ಲಿ, ಯಾವಾಗ, ಯಾರನ್ನು, ಯಾಕೆ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಬೇಕು. ತನಗೇ ನಿಷ್ಠಳಾಗಿರಬೇಕು ಎಂದು ವಿಧಿಸಿದ್ದ. ಕಸ್ತೂರಬಾ ಎದುರು ವಾದಿಸುತ್ತಿದ್ದಿಲ್ಲ. . . .ಪ್ರಶ್ನಿಸುತ್ತಿರಲಿಲ್ಲ. ಗಂಡ ಹೇಳುವುದು ಸಕಾರಣ ಅಲ್ಲ ಎನಿಸಿದ್ದನ್ನು ಮೌನವಾಗಿ ತಳ್ಳಿ ಹಾಕುತ್ತಿದ್ದರು. ರಾತ್ರಿ ಆಯಿತೆಂದರೆ ಪತಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಿತ್ತು. ಈ ಮಾತುಗಳನ್ನು ಆಡುತ್ತಿರುವುದು ತನ್ನ ಪತಿಯೇ ಎಂಬ ಸೋಜಿಗ ಬೆರೆತ ವ್ಯಥೆ ಆಕೆಯನ್ನು ಕಾಡಿತ್ತು. ಪತಿ ಸತ್ಯದೊಂದಿಗೆ ಪ್ರಯೋಗಗಳನ್ನು ಮಾಡಿದರೆ, ಆ ಪ್ರಯೋಗಗಳ ಅನುಭವಿಸಿದ್ದು ಪತ್ನಿ.

ಬಾ ಅವರನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳಲ್ಲೂ ಗಾಂಧೀ ವಿಫಲರಾದದ್ದಾಗಿ ಹೇಳಿಕೊಂಡಿದ್ದಾರೆ. ನಾನೆಷ್ಟೇ ಒತ್ತಡ ಹೇರಿದರೂ ಆಕೆ ಕಟ್ಟಕಡೆಗೆ ತನಗೆ ತಿಳಿದಂತೆಯೇ ಮಾಡುವವಳು. ಈ ಕಾರಣದಿಂದಾಗಿ ಮನಸ್ತಾಪಗಳು ಆಗುತ್ತಿದ್ದವು. ಆದರೆ ನನ್ನ ಬದುಕು ವಿಸ್ತಾರಗೊಂಡಂತೆ ನನ್ನ ಪತ್ನಿ ಅರಳಿ ನನ್ನ ಕೆಲಸದಲ್ಲೇ ತನ್ನನ್ನು ತಾನು ಕಳೆದುಕೊಂಡಳು ಎಂದಿದ್ದಾರೆ. ಬಾ ಅವರ ಕೆಚ್ಚು ಮತ್ತು ದೃಢಸಂಕಲ್ಪಗಳೇ ಬದುಕಿನುದ್ದಕ್ಕೂ ಗಾಂಧೀ ಹೋರಾಟದ ಬೆನ್ನೆಲುಬಾಗಿದ್ದವು. 1908ರಲ್ಲಿ ದಕ್ಷಿಣ ಆಫ್ರಿಕೆಯಲ್ಲಿ ಮಾತ್ರವಲ್ಲದೆ 1932, 1933, 1939 ಹಾಗೂ 1943ರಲ್ಲಿ ಗಾಂಧೀ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಆಕೆಯ ವಿನಃ ನಾನು ಕತ್ತಲ ಕೂಪದಲ್ಲಿರುತ್ತಿದ್ದೆ. ನನ್ನಲ್ಲಿ ಎಚ್ಚರದ ಬೆಂಕಿ ಆರದಂತೆ ಕಾಪಾಡಿದಳು. ನನ್ನ ಎಲ್ಲ ರಾಜಕೀಯ ಹೋರಾಟಗಳಲ್ಲೂ ಜೊತೆಗೆ ನಿಂತಳು. ಸಾಧಾರಣ ಅರ್ಥದಲ್ಲಿ ಆಕೆ ಅನಕ್ಷರಸ್ಥಳು. ಆದರೆ ನಿಜವಾದ ಶಿಕ್ಷಣದ ಮಾದರಿಯಾಗಿದ್ದಳು.

ಕಸ್ತೂರ ಬಾ ಬಾಳಸಂಗಾತಿ ಆಗದೆ ಹೋಗಿದ್ದಿದ್ದರೆ ಗಾಂಧೀ ಬ್ಯಾರಿಸ್ಟರೂ ಆಗುತ್ತಿರಲಿಲ್ಲ, ಮಹಾತ್ಮಾ ಎಂದೂ ಎನಿಸಿಕೊಳ್ಳುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋಗಲು ಗಾಂಧೀ ಬಳಿ ಹಣ ಇರಲಿಲ್ಲ. ಕಸ್ತೂರಬಾ ಅವರ ಒಡವೆ ಮಾರಬೇಕಾಯಿತು ಗಾಂಧೀ. ದೇವರಂತೆ ಪೂಜಿಸಬೇಕಾದ ಪರಿಪೂರ್ಣ ಚಿತ್ರವಲ್ಲ, ಪ್ರೀತಿಯಿಂದ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕಿರುವ ವ್ಯಕ್ತಿ ಎಂದಿದ್ದಾರೆ ಗಾಂಧೀ ಮೊಮ್ಮಗ ಗೋಪಾಲಕೃಷ್ಣ ಗಾಂಧೀ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...