Homeಮುಖಪುಟನೆನೆಯಬೇಕಿದೆ ಮಹಾತ್ಮನ ಮಡದಿಯನು.... : ಡಿ.ಉಮಾಪತಿ

ನೆನೆಯಬೇಕಿದೆ ಮಹಾತ್ಮನ ಮಡದಿಯನು…. : ಡಿ.ಉಮಾಪತಿ

- Advertisement -
- Advertisement -

ಬಹುಜನ ಭಾರತ: ಡಿ.ಉಮಾಪತಿ

ಇಂದು ಗಾಂಧೀ ಜಯಂತಿ. ಗಾಂಧೀ ಹುಟ್ಟಿ 150 ವರ್ಷಗಳು. ಹಾಗೆಯೇ ಕಸ್ತೂರ ಬಾ ಜನಿಸಿಯೂ 150 ವರ್ಷಗಳು. ಗಾಂಧೀ ಏರಿದ ಎತ್ತರದ ಎಲ್ಲ ಶ್ರೇಯಸ್ಸು ಕಸ್ತೂರ ಬಾ ಅವರದು ಎಂದಿದ್ದ ಈ ದಂಪತಿಗಳ ಹಿರಿಯ ಮಗ ಹರಿಲಾಲ್. ಪುಣೆಯ ಸೆರೆಮನೆ ವಾಸದಲ್ಲಿ ಪತಿಯ ಬಾಹುಗಳಲ್ಲೇ ಪ್ರಾಣಬಿಟ್ಟರು ಕಸ್ತೂರಬಾ.

ಹದಿಮೂರನೆಯ ವಯಸ್ಸಿಗೆ ಮದುವೆ. 1888ರಲ್ಲಿ ತಮ್ಮ 19ನೆಯ ವರ್ಷದಲ್ಲಿ ಮೊದಲ ಮಗ ಹರಿಲಾಲನ ಜನನ. ಮಣಿಲಾಲ್, ರಾಮದಾಸ್ ನಂತರ ಕಿರಿಯ ಮಗ ದೇವದಾಸ್ ಜನಿಸಿದ್ದು 1900ರಲ್ಲಿ. ಆನಂತರ ಪತ್ನಿಯ ಅಭಿಪ್ರಾಯವನ್ನು ಕೇಳುವ ಗೋಜಿಗೆ ಹೋಗದ ಗಾಂಧೀ ಅವರಿಂದ ಬ್ರಹ್ಮಚರ್ಯ ಪಾಲನೆಯ ಏಕಪಕ್ಷೀಯ ನಿರ್ಧಾರ. ಆಗ ಕಸ್ತೂರಬಾ ಅವರ ವಯಸ್ಸು 31. ದಾಂಪತ್ಯ ಜೀವನದ ಈ ಗುರುತರ ನಿರ್ಧಾರ ಕುರಿತು ತಮ್ಮ ನಿಲುಮೆ ಏನಿತ್ತೆಂದು ಆಕೆಯ ಬಾಯಿಂದಲೇ ಹೊರಬಿದ್ದ ಮಾತುಗಳು ಎಲ್ಲಿಯೂ ದಾಖಲಾಗಿಲ್ಲ.

ಕಡುಕೋಪದ ಗಳಿಗೆಗಳಲ್ಲಿ ಕಸ್ತೂರಬಾ ಅವರನ್ನು ಮನೆಯಿಂದ ಹೊರಹಾಕಲು ತಾವು ಮುಂದಾದದ್ದನ್ನು ಗಾಂಧಿಯೇ ಹೇಳಿಕೊಂಡಿದ್ದಾರೆ. ಆಶ್ರಮದ ಕಕ್ಕಸುಗಳನ್ನು ತೊಳೆಯಬೇಕೆಂಬ ಪತಿಯ ಆದೇಶವನ್ನು ಅವರು ತಿರಸ್ಕರಿಸುತ್ತಾರೆ. ಅಹಿಂಸೆ ಮತ್ತು ಸತ್ಯಾಗ್ರಹದ ಮೂಲತತ್ವಗಳನ್ನು ಗಾಂಧೀ ಕಲಿತದ್ದು ತಮ್ಮ ಪತ್ನಿಯಿಂದಲೇ..

ಪತಿಗಿಂತ ನಾಲ್ಕು ತಿಂಗಳು 22 ದಿವಸಗಳಷ್ಟು ವಯಸ್ಸಿನಲ್ಲಿ ದೊಡ್ಡವರು ಕಸ್ತೂರಬಾ. ಏಪ್ರಿಲ್ ಹನ್ನೊಂದರಂದು ಆಕೆಯ ಜನ್ಮದಿನದಿಂದು ಬಾ ಅವರನ್ನು ದೇಶ ನೆನೆದದ್ದನ್ನು ಕಂಡವರಿಲ್ಲ. ಗಾಂಧೀಯನ್ನು ಬಿಟ್ಟು ಕಸ್ತೂರಬಾಗೆ ಸ್ವತಂತ್ರ ಅಸ್ತಿತ್ವ ಇಲ್ಲ. ಗಾಂಧೀಯನ್ನು ನೆನೆದರೆ ಕಸ್ತೂರಬಾ ಅವರನ್ನು ನೆನೆದಂತೆಯೇ ಎಂಬುದು ನಮ್ಮ ಗಂಡಾಳಿಕೆಯ ಸಾಮೂಹಿಕ ಸಾಕ್ಷಿಪ್ರಜ್ಞೆ. ಗುರುತಿಸದೆ ಮಣ್ಣಾಗಿರುವ ಸಾವಿರಾರು ಅಜ್ಞಾತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಪ್ರತೀಕ ಕಸ್ತೂರಬಾ ಎನ್ನುತ್ತಾರೆ ಹಿರಿಯ ಸರ್ವೋದಯ ಕಾರ್ಯಕರ್ತ ಬಿಜು ನೇಗಿ.

ಹಿರಿಯರು ನಿಶ್ಚಯಿಸಿದಂತೆ ಮೋಹನದಾಸನನ್ನು ವರಿಸಿದ ಕಸ್ತೂರ್ ಕಪಾಡಿಯಾ ವೈವಾಹಿಕ ಜೀವನದ 62 ವರ್ಷಗಳನ್ನು ಗಾಂಧಿಯೊಂದಿಗೆ ಕಳೆದರು. ಕಸ್ತೂರ ಬಾ ಆದರು. ಗುಜರಾತಿನ ಪಟ್ಟಣವೊಂದರ ಶಾಲಾಬಾಲಕನಿಂದ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಸ್ವರಾಜ್ಯ ಗಳಿಕೆಯ ಹೋರಾಟದ ನಾಯಕನಾಗಿ ಪತಿಯ ರೂಪಾಂತರದಲ್ಲಿ ಜೊತೆಗಿದ್ದು ಏರಿಳಿತಗಳನ್ನು ಹಂಚಿಕೊಂಡವರು. ಪತಿಯ ಪ್ರಯೋಗಗಳಲ್ಲಿ ಪಾಲುಗೊಂಡು, ಆಶ್ರಮವಾಸದ ಕಾಠಿಣ್ಯವನ್ನು ಅನುಭವಿಸಿ, ಹಲವು ಬಾರಿ ಸೆರೆವಾಸ ಅನುಭವಿಸಿದವರು. ಇತಿಹಾಸದ ಈ ಹಂತದ ಮಧ್ಯಭೂಮಿಕೆಯಲ್ಲಿದ್ದರೂ ಅವರ ವ್ಯಕ್ತಿತ್ವ ಮಸುಕಾಗಿ ಮಹಾತ್ಮನ ನೆರಳಿನಲ್ಲಿ ಮಸುಕಾಗಿದೆ. ಮಹಾತ್ಮನ ಮಡದಿಯ ಹುಡುಕಾಟ ಕಠಿಣವಾದದ್ದು. ಆಕೆಯ ಕಾಲದ ಬಹುಪಾಲು ಮಹಿಳೆಯರಂತೆ ಆಕೆಯೂ ನಿರಕ್ಷರಸ್ಥೆ. ಅನಿಸಿದ್ದನ್ನು ಅಕ್ಷರಕ್ಕೆ ಇಳಿಸಲಾಗಲಿಲ್ಲ. ಬಾ ಅವರನ್ನು ಕುರಿತು ಬೇರೆಯವರು ಬರೆದದ್ದು ಮಾತ್ರವೇ ಲಭ್ಯ. ಪತಿಯ ಆತ್ಮಚರಿತ್ರೆಯ ಪದಗಳನ್ನು ಸೋಸಿ ಸೋಸಿ ಆಕೆಯನ್ನು ಸಮೀಪಿಸಬೇಕಿದೆ ಎನ್ನುತ್ತಾರೆ ಐರೋಪ್ಯ ಬರೆಹಗಾರ್ತಿ ಎಮ್ಮಾ ಟಾರ್ಲೋ.

ತಮ್ಮ ತವರಿನಿಂದ ದೊರೆತ ಬಾಗಿನಗಳನ್ನು ದೇಶಸೇವೆಗೆ ಒಪ್ಪಿಸುವಂತೆ ಬಾ ಅವರನ್ನು ಬಲವಂತ ಮಾಡಿದ್ದರು ಗಾಂಧೀ. ಮಕ್ಕಳನ್ನು ಸಾಧುಗಳನ್ನು ಮಾಡಿ ಅವರ ಹೆಂಡತಿಯರನ್ನು ಆಭರಣಗಳಿಂದ ದೂರ ಇರಿಸಿದ್ದ ಬಾಪೂ ಅವರ ಮೇಲೆ ಸಿಡಿದಿದ್ದರು ಕಸ್ತೂರಬಾ. ಒಮ್ಮೆ ಕಸ್ತೂರಬಾಗೆ ಕಂಠಾಭರಣದ ಉಡುಗೊರೆ ದೊರೆತದ್ದು ನನ್ನ (ದೇಶ) ಸೇವೆಗೋ ಅಥವಾ ನಿನ್ನ ಸೇವೆಗೋ ಎಂದು ದನಿಯೇರಿಸಿದ್ದರು ಬಾಪೂ. ತಿರುಗಿ ಬಾ ನೀಡಿದ ಉತ್ತರ ಹೀಗಿತ್ತು- ‘ಒಪ್ಪುತ್ತೇನೆ. . . ಆದರೆ ನೀವು ಸಲ್ಲಿಸಿದ ಸೇವೆ ನಾನು ಸಲ್ಲಿಸಿದ ಸೇವೆಯೆಂದೇ ಲೆಕ್ಕ. ನಿಮಗಾಗಿ ನಾನು ಹಗಲಿರುಳು ದೇಹ ಸವೆಸಿ ದುಡಿದಿದ್ದೇನೆ. ಅದು ಸೇವೆ ಅಲ್ಲವೇನು. . . .’

ಅಂದಿನಿಂದಲೇ ಅಜ್ಜಿಯ ಬದುಕಿನ ಕತೆಯನ್ನು ತಾತನ ಬದುಕು ಮಬ್ಬಿಗೆ ಸರಿಸಿಬಿಟ್ಟಿತು ಎಂದಿದ್ದಾರೆ ಮೊಮ್ಮಗ ಅರುಣ್ ಗಾಂಧೀ. ಹದಿಮೂರನೆಯ ವಯಸ್ಸಿಗೆ ವಿವಾಹದ ನಂತರ. ಕಸ್ತೂರ್ ಕಪಾಡಿಯಾ ಕಸ್ತೂರಬಾ ಗಾಂಧೀ. ಪೋರಬಂದರು ತೊರೆದು ರಾಜಕೋಟ್ ಮನೆಯಲ್ಲಿ ವಾಸ. ಹೊಸ ಊರು, ಹೊಸ ಮನೆ, ಹೊಸ ಹೆಸರು. ಮೋಹನದಾಸ್ ಶಾಲಾ ವಿದ್ಯಾರ್ಥಿ ಮತ್ತು ಗೃಹಸ್ಥ ಎರಡೂ ಆಗಿದ್ದ. ಪತ್ನಿ ತಾನು ಹೇಳಿದಂತೆ ಕೇಳಬೇಕು ಎಂಬ ಇರಾದೆಗೆ ಬಿದ್ದಿದ್ದ. ಮನೆ ಬಿಟ್ಟು ಹೊರಗೆ ಹೋಗುವುದಾದರೆ ತನ್ನ ಅನುಮತಿ ಪಡೆಯಲೇಬೇಕು. ಎಲ್ಲಿ, ಯಾವಾಗ, ಯಾರನ್ನು, ಯಾಕೆ ಭೇಟಿ ಮಾಡಿ ಮಾತನಾಡಿದೆ ಎಂದು ತಿಳಿಸಬೇಕು. ತನಗೇ ನಿಷ್ಠಳಾಗಿರಬೇಕು ಎಂದು ವಿಧಿಸಿದ್ದ. ಕಸ್ತೂರಬಾ ಎದುರು ವಾದಿಸುತ್ತಿದ್ದಿಲ್ಲ. . . .ಪ್ರಶ್ನಿಸುತ್ತಿರಲಿಲ್ಲ. ಗಂಡ ಹೇಳುವುದು ಸಕಾರಣ ಅಲ್ಲ ಎನಿಸಿದ್ದನ್ನು ಮೌನವಾಗಿ ತಳ್ಳಿ ಹಾಕುತ್ತಿದ್ದರು. ರಾತ್ರಿ ಆಯಿತೆಂದರೆ ಪತಿಯಿಂದ ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಿತ್ತು. ಈ ಮಾತುಗಳನ್ನು ಆಡುತ್ತಿರುವುದು ತನ್ನ ಪತಿಯೇ ಎಂಬ ಸೋಜಿಗ ಬೆರೆತ ವ್ಯಥೆ ಆಕೆಯನ್ನು ಕಾಡಿತ್ತು. ಪತಿ ಸತ್ಯದೊಂದಿಗೆ ಪ್ರಯೋಗಗಳನ್ನು ಮಾಡಿದರೆ, ಆ ಪ್ರಯೋಗಗಳ ಅನುಭವಿಸಿದ್ದು ಪತ್ನಿ.

ಬಾ ಅವರನ್ನು ನಿಯಂತ್ರಿಸುವ ಎಲ್ಲ ಪ್ರಯತ್ನಗಳಲ್ಲೂ ಗಾಂಧೀ ವಿಫಲರಾದದ್ದಾಗಿ ಹೇಳಿಕೊಂಡಿದ್ದಾರೆ. ನಾನೆಷ್ಟೇ ಒತ್ತಡ ಹೇರಿದರೂ ಆಕೆ ಕಟ್ಟಕಡೆಗೆ ತನಗೆ ತಿಳಿದಂತೆಯೇ ಮಾಡುವವಳು. ಈ ಕಾರಣದಿಂದಾಗಿ ಮನಸ್ತಾಪಗಳು ಆಗುತ್ತಿದ್ದವು. ಆದರೆ ನನ್ನ ಬದುಕು ವಿಸ್ತಾರಗೊಂಡಂತೆ ನನ್ನ ಪತ್ನಿ ಅರಳಿ ನನ್ನ ಕೆಲಸದಲ್ಲೇ ತನ್ನನ್ನು ತಾನು ಕಳೆದುಕೊಂಡಳು ಎಂದಿದ್ದಾರೆ. ಬಾ ಅವರ ಕೆಚ್ಚು ಮತ್ತು ದೃಢಸಂಕಲ್ಪಗಳೇ ಬದುಕಿನುದ್ದಕ್ಕೂ ಗಾಂಧೀ ಹೋರಾಟದ ಬೆನ್ನೆಲುಬಾಗಿದ್ದವು. 1908ರಲ್ಲಿ ದಕ್ಷಿಣ ಆಫ್ರಿಕೆಯಲ್ಲಿ ಮಾತ್ರವಲ್ಲದೆ 1932, 1933, 1939 ಹಾಗೂ 1943ರಲ್ಲಿ ಗಾಂಧೀ ಸತ್ಯಾಗ್ರಹಗಳಲ್ಲಿ ಪಾಲ್ಗೊಂಡು ಸೆರೆವಾಸ ಅನುಭವಿಸಿದ್ದರು. ಆಕೆಯ ವಿನಃ ನಾನು ಕತ್ತಲ ಕೂಪದಲ್ಲಿರುತ್ತಿದ್ದೆ. ನನ್ನಲ್ಲಿ ಎಚ್ಚರದ ಬೆಂಕಿ ಆರದಂತೆ ಕಾಪಾಡಿದಳು. ನನ್ನ ಎಲ್ಲ ರಾಜಕೀಯ ಹೋರಾಟಗಳಲ್ಲೂ ಜೊತೆಗೆ ನಿಂತಳು. ಸಾಧಾರಣ ಅರ್ಥದಲ್ಲಿ ಆಕೆ ಅನಕ್ಷರಸ್ಥಳು. ಆದರೆ ನಿಜವಾದ ಶಿಕ್ಷಣದ ಮಾದರಿಯಾಗಿದ್ದಳು.

ಕಸ್ತೂರ ಬಾ ಬಾಳಸಂಗಾತಿ ಆಗದೆ ಹೋಗಿದ್ದಿದ್ದರೆ ಗಾಂಧೀ ಬ್ಯಾರಿಸ್ಟರೂ ಆಗುತ್ತಿರಲಿಲ್ಲ, ಮಹಾತ್ಮಾ ಎಂದೂ ಎನಿಸಿಕೊಳ್ಳುತ್ತಿರಲಿಲ್ಲ. ಇಂಗ್ಲೆಂಡಿಗೆ ಹೋಗಲು ಗಾಂಧೀ ಬಳಿ ಹಣ ಇರಲಿಲ್ಲ. ಕಸ್ತೂರಬಾ ಅವರ ಒಡವೆ ಮಾರಬೇಕಾಯಿತು ಗಾಂಧೀ. ದೇವರಂತೆ ಪೂಜಿಸಬೇಕಾದ ಪರಿಪೂರ್ಣ ಚಿತ್ರವಲ್ಲ, ಪ್ರೀತಿಯಿಂದ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕಿರುವ ವ್ಯಕ್ತಿ ಎಂದಿದ್ದಾರೆ ಗಾಂಧೀ ಮೊಮ್ಮಗ ಗೋಪಾಲಕೃಷ್ಣ ಗಾಂಧೀ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...