Homeಅಂಕಣಗಳುನಾಗಸುಧೆ ಜಗಲಿಯಿಂದನಮಿಸುವ ಹೃದಯದ ನಂದೂರ

ನಮಿಸುವ ಹೃದಯದ ನಂದೂರ

ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ 'ಬೆರಗು' ಎನಿಸುವರು.

- Advertisement -
- Advertisement -

ನನ್ನ ಮನೆಯಲ್ಲೊಂದು ಹೂಗಿಡ
ಬೆಳೆಸಿದ್ದೇನೆ ; ಅದು
ನಿತ್ಯ ನಗುತ್ತದೆ
ಅರಳಿಸುತ್ತದೆ ಹೂ
ಮರಳಿಸುತ್ತದೆ ಮನಸ್ಸು
ಅದರೆಡೆಗೆ ಮತ್ತೆ ಮತ್ತೆ ;
ನಾನದನ್ನು ಪ್ರೀತಿಸುತ್ತೇನೆ
ಹೆಸರು ಗೊತ್ತಿಲ್ಲದಿದ್ದರೂ…..

ಎಂಬ ಹೂ ಮನಸ್ಸಿನ, ಮನುಷ್ಯ ಪ್ರೀತಿಯ, ಪ್ರಗತಿ ಪರ ಚಿಂತನೆಯ, ಜನಪರ ಕಾಳಜಿಯ ಕವಿ ಮಹಾಂತಪ್ಪ ನಂದೂರ ಮೂಲತಃ ಕಲ್ಬುರ್ಗಿ ಜಿಲ್ಲೆಯ ‘ಪಟ್ಟಣ’ ಎಂಬ ಊರಿನವರು. ಬಡತನದ ನಡುವೆ ಅರಳಿದ ಪ್ರತಿಭಾವಂತ ನಂದೂರ. ಹೊಟ್ಟೆಪಾಡಿಗಾಗಿ ಮುಂಜಾನೆ ದುಡಿದು, ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಬಾಕಿ ಸಮಯದಲ್ಲಿ ಟ್ಯೂಷನ್ ಹೇಳಿ ತಮ್ಮ ಮೂಲ ನೆಲದಲ್ಲೇ ವಿದ್ಯಾಭ್ಯಾಸ ಮುಗಿಸಿ ಅರ್ಥಶಾಸ್ತ್ರದಲ್ಲಿ ಎಂ.ಎ. ಬಿ.ಎಡ್ ಪದವಿ ಪಡೆದವರು. ನಂತರ ಕೆಲ ಸಮಯ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸಿ ಈಗ ಬಹು ವರ್ಷಗಳಿಂದ ಹುಬ್ಬಳ್ಳಿಯ ನೈರುತ್ಯ ರೇಲ್ವೆಯ ಲೆಕ್ಕ ಪತ್ರ ವಿಭಾಗದಲ್ಲಿ ಹಿರಿಯ ‘ಅನುಭಾವ’ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪದವಿಯ ಹಂತದಲ್ಲೇ ಕವಿತೆ ಬರೆದು ಜನ ಮನ್ನಣೆ ಪಡೆದ ನಂದೂರ, ನಂತರದ ದಿನಗಳಲ್ಲಿ ಸಾಹಿತ್ಯವೇ ತಮ್ಮ ಉಸಿರೆಂದು ತಿಳಿದು ಕನ್ನಡಮ್ಮನ ಸೇವೆಯಲ್ಲಿ ತೊಡಗಿ, ತಮ್ಮ ನೌಕರಿಗೆ ಎಂದೂ ಚ್ಯುತಿ ಬಾರದಂತೆ ವೃತ್ತಿ ಮತು ಪ್ರವೃತ್ತಿಯಲ್ಲಿ ಸಮಾನತೆಯ ಮಂತ್ರದೊಂದಿಗೆ ಬದುಕಿನಲಿ ಬೆಳಕು ಕಂಡವರು. ಮತ್ತೊಬ್ಬರ ಮನಸ್ಸಿಗೆ ಎಂದೂ ನೋವಾಗದಂತೆ ಎಲ್ಲರೊಳಗೊಂದಾಗುವ ನಗುಮೊಗದ ನಂದೂರ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕಲ್ಬುರ್ಗಿಯಿಂದ ಹುಬ್ಬಳ್ಳಿಗೆ ನೌಕರಿಗೆ ಬಂದ ಮಹಾಂತಪ್ಪ ನಂದೂರರಿಗೆ ಹುಬ್ಬಳ್ಳಿಯ ಪರಿಸರ ತುಂಬಾ ಹಿಡಿಸಿತು. ತಮಗೊಪ್ಪುವ ನೌಕರಿಯೊಂದಿಗೆ ಸಾಹಿತ್ಯದ ಅಭಿಮಾನಿಗಳೂ ಮಾರ್ಗದರ್ಶಕರೂ ಸ್ನೇಹಿತರೂ ದೊರೆತಿದ್ದರಿಂದ ಹುಬ್ಬಳ್ಳಿಯಲ್ಲಿ ಸದ್ದು ಗದ್ದಲವಿಲ್ಲದೇ ತಮ್ಮ ಬರವಣಿಗೆ ಪ್ರಾರಂಭಿಸಿದರು. ಡಾ. ಪ್ರಹ್ಲಾದ ಅಗಸನಕಟ್ಟೆ, ಜಗದೀಶ ಮಂಗಳೂರ ಮಠ ಮತ್ತು ಆರೂರು ಲಕ್ಷ್ಮಣ ಶೇಟ್‌ರಂತಹ ಹಿರಿಯರೊಂದಿಗಿನ ಚರ್ಚೆಯ ಫಲವಾಗಿ ಇವರ ಸಾಹಿತ್ಯದ ನೆಲೆ ಬಲಗೊಂಡಿತು ; ಗೆಳೆಯ ಮುನಿಸ್ವಾಮಿಯ ಸಾಂಗತ್ಯದಿಂದಲೂ ಸಹ. ಇದೇ ಸಂದರ್ಭದಲ್ಲಿ ವಾಣಿಜ್ಯ ನಗರಿ ಎಂದು ಹೆಸರು ಪಡೆದ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಚಟುವಟಿಕೆಗಳು ನವಿಲಿನಂತೆ ಗರಿಗೆದರಿದವು. ಅನ್ವೇಷಣಾ ಸಾಹಿತ್ಯ, ಅಕ್ಷರ ಸಾಹಿತ್ಯ ವೇದಿಕೆ ಮತ್ತು ನೈರುತ್ಯ ರೇಲ್ವೆ ಕನ್ನಡ ಸಂಘಗಳು ಮೂಲಕ ಮಹಾಂತಪ್ಪ, ಕನ್ನಡದ ಮನಸ್ಸುಗಳೊಳಗೂಡಿ ಹುಬ್ಬಳ್ಳಿಯಲ್ಲಿ ಸಾಹಿತ್ಯದ ಕಂಪು ಇಂಪಾಗಿಸಿದರು. ಮನೆ ಮನೆ ಕವಿಗೋಷ್ಠಿ, ತಿಂಗಳಿಗೊಮ್ಮೆಯ ಸಾಹಿತ್ಯಿಕ ಚರ್ಚೆ, ಪುಸ್ತಕ ಬಿಡುಗಡೆ ಮತ್ತು ಇನ್ನಿತರ ಸಾಹಿತ್ಯದ ಕಾರ್ಯಕ್ರಮಗಳಿಗೆ ಸುನಂದಾ ಕಡಮೆಯವರನ್ನು ಒಳಗೊಂಡಂತೆ ಇಲ್ಲೊಂದು ಸಮಾನ ಮನಸ್ಸಿನ ಪಡೆಯೇ ಸಿದ್ಧವಾಯಿತು. ಅಧ್ಯಯನ ಅಧ್ಯಾಪನಗಳ ಮೂಲಕ ಸಾಹಿತ್ಯಿಕ ನೆಲೆಗಟ್ಟು ಭದ್ರವಾಗುತ್ತಾ ನಂದೂರರು, ಅಲ್ಲಿ ರೇಲ್ವೆಯಲ್ಲಿಯೂ ಸಹ ತಮ್ಮದೇ ಛಾಪಿನಿಂದ ದಕ್ಷ ಅಧಿಕಾರಿ ಎಂದೆನಿಸಿಕೊಳ್ಳುತ್ತಾ, ಇಲ್ಲಿ ವೈಶಿಷ್ಟ್ಯಪೂರ್ಣ ಬರವಣಿಗೆಯ ಮೂಲಕ ಸಾಹಿತ್ಯಾಭಿಮಾನಿಗಳ ಗಮನ ಸೆಳೆದರು.

ಉದಕದೊಳಗಣ ಬೆಂಕಿ (ಕವಿತೆ)
ಅಯಿತಾರ ಅಮಾಸಿ (ಕಥಾ ಸಂಕಲನ)
ದೂರದ ಪದ (ಕವಿತೆ)
ಜೀವ ಕೊಳಲು (ಕವಿತೆ)
ಕಲ್ಯಾಣವೆಂಬ ಪ್ರಣತಿ (ಸುನೀತ ಸಂಗ್ರಹ)
ಪುಟ್ಟರಾಜ ಗವಾಯಿ (ಜೀವನ ಚರಿತ್ರೆ)
ಅರಿವೇ ಪ್ರಮಾಣು (ಜೀವನ ಕಾವ್ಯ)
ಆನಂದ ನಿನಾದ (ವಿಮರ್ಶಾ ಲೇಖನ)

ಇವು ಮಹಾಂತಪ್ಪ ನಂದೂರರ ಪ್ರಮುಖ ಪ್ರಕಟಿತ ವೈವಿಧ್ಯಮಯ ಸಾಹಿತ್ಯದ ಕೃತಿಗಳು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯವಾಗಿದೆ. ಜನಪರ ಮತ್ತು ಜೀವ ಪರ ಕಾಳಜಿ ಇವರ ನಿಲುವು. ಶರಣ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ ಇವರು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ವೈಶಿಷ್ಟ್ಯಪೂರ್ಣ ಕೊಡುಗೆಯನ್ನು ನೀಡಿ ‘ಬೆರಗು’ ಎನಿಸುವರು. ಸಮಾಜದಲ್ಲಿಯ ಅಸಮಾನತೆ, ಅನ್ಯಾಯ, ಭ್ರಷ್ಟಾಚಾರದ ಜೊತೆ ಪ್ರೀತಿ ಪ್ರೇಮದ ಕವನಗಳೂ ಬರೆದ ಇವರು, ಕವಿತೆಗೆ ಒಂದು ಶಾಂತವಾದ ಸುನಾದವನ್ನು ಕೇಳುವ-ಕೇಳಿಸುವ ದನಿಯೂ ಇರಬೇಕು ಎಂದು ನಂಬಿದವರಿವರು. ಸೃಜನಶೀಲ ಬರಹದಲ್ಲಿ ಪ್ರಯೋಗ ಶೀಲತೆ ಇರಬೇಕು ಎನ್ನುವ ಇವರ ಕಥೆಗಳಲ್ಲಿ ಕಲ್ಬುರ್ಗಿ ನೆಲದ ಸೊಗಡು, ಅಲ್ಲಿಯ ಪರಿಸರ, ಜೀವನ, ನಂಬಿಕೆ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಕಥೆಯಾಗಿಸಿರುವರು. ಶರಣು ಸಾಹಿತ್ಯವನ್ನು ಪ್ರೀತಿಸುವ ಮಹಾಂತಪ್ಪ ಬದುಕಿನುದ್ದಕ್ಕೂ ಅಸಮಾನತೆ ಮತ್ತು ಅಸ್ಪ್ರಶ್ಯತೆಗಳಿಗೆ ನೊಂದು ಬೆಂದವರು.

ಸಂಬೋಳಿ ! ಸಂಬೊಳಿ ! ಸಂಬೋಳಿ
ಬಸವಣ್ಣ ಬರುತಿಹರು ಬೀದಿಯಲಿ
ಬಾಗಿಲು ತೆರೆದು ಹೊರ ಬನ್ನಿರಿ
ಬಲದ ಕೈಯಲ್ಲಿ ಭವದ ಬಟ್ಟಲು
ಎಡದ ಕೈಯಲಿ ಅನುಭಾವದ ತೊಟ್ಟಿಲು
ಬರುವ ದಾರಿಯ ತುಂಬಾ ದಯದ ಮೆಟ್ಟಿಲು

ಇದು ಬಸವಣ್ಣನವರ ಕುರಿತಾಗಿ ಇವರು ಬರೆದ ಮತ್ತು ಇವರಿಗೆ ಹೆಸರು ತಂದುಕೊಟ್ಟ ಜನಜನಿತವಾದ ಕವಿತೆ. ಸಮಾನತೆಯ ಪ್ರಣತಿ ಹಿಡಿದು, ಶುಭ್ರ ಬಿಳಿ ಉಡುಗೆ, ಸಹಜ ನಡಿಗೆ, ನಗುಮೊಗಕೆ ನೊಸಲ ವಿಭೂತಿ ತೊಟ್ಟು ನುಡಿದಂತೆ ನಡೆಯುವ ಬಸವ ಪ್ರಭು ಬರುತ್ತಿರುವರು. ಅದಕ್ಕಾಗಿ ಒಳಗೆ ಕೂತಿದ್ದ ಜನರೆಲ್ಲಾ ಎದೆಯ ಕದವ ತೆರೆದು, ಕುಲದ ಕೀಲಿಯ ಕಳಚಿ, ಮಠ ಮಂದಿರ ತೊರೆದು, ಮುಟ್ಟು ಮೈಲಿಗೆಯ ಮಡಿ ಇಲ್ಲದೇ ಮನೆಯ ಹೊಸಿಲ ದಾಟಿ ಹೊರಬನ್ನಿ ಎನ್ನುವಾಗ ಇವರ ಪ್ರಗತಿ ಪರ ನಿಲುವು ಬಸವಣ್ಣನ ಕವಿತೆಯಿಂದ ಸ್ಪಷ್ಟವಾಗಿ ಗೋಚರಿಸುವದು.

ಮಹಾಂತಪ್ಪ ನಂದೂರರ ಬರವಣಿಗೆ-ಬೆಳವಣಿಗೆಗಳನ್ನು ಅತ್ಯಂತ ಪ್ರೀತಿ ಹಾಗೂ ಕುತೂಹಲದಿಂದ ಗಮನಿಸುತ್ತಿರುವ ನಾಡಿನ ಖ್ಯಾತ ಸಾಹಿತಿ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿಯವರು ‘ಕಲ್ಯಾಣವೆಂಬ ಪ್ರಣತಿ’ಯು ಕುರಿತು ಬರೆಯುತ್ತಾ “ಇದೊಂದು ಅಪರೂಪದ ಕಾವ್ಯ ಪ್ರಯೋಗ. ನೀರಿನ ಮೂಲಕವೇ ನೀರಿನ ಧರ್ಮವನ್ನು ಅರಿಯಬಹುದು ಎನ್ನುವಂತೆ, ಇಲ್ಲಿ ವಚನಕಾರರು ಭಾಷೆಯ ಸಮ್ಮರ್ಧದಿಂದಲೇ ಅವರು ಜೀವಿತದ ಅನನ್ಯವಾದ ಅನುಭೂತಿ- ಯನ್ನು ತನ್ನೊಳಗೆ ಆವಾಹಿಸಿಕೊಳ್ಳುವ ಕಾವ್ಯಾನುಸಂಧಾನವಿದೆ. ಈ ರಚನೆಗಳಿಂದ ನಾವು ಪಡೆಯುವ ಕಾವ್ಯಾನುಭೂತಿಯು, ಮೂಲದ ಭಾಷಾ ಸಮ್ಮರ್ದದೊಂದಿಗೇ ನಾವು ಮುಳುಗಾಟ ನಡೆಸಿದ್ದಲ್ಲಿ ಪಡೆಯಬಹುದಾಗಿದ್ದ ಅನುಭೂತಿಗಿಂತ ಯಾವ ಬಗೆಯ ಭಿನ್ನತೆಯನ್ನು ಪಡೆದಿದೆ ಎಂಬುದು ನಾವೀಗ ಚಿಂತಿಸಬೇಕಾದ ಸಂಗತಿ. ಸದ್ಯಕ್ಕಂತೂ ಹರಿಯುವ ಹೊಳೆಯಲ್ಲಿ ಮುಳುಗಿ ಈಗಷ್ಟೇ ಹೊರಗೆ ಬಂದವನ ಮೈನಡುಕದಂತಿದೆ ಈ ಹೃದಯಸ್ಪರ್ಶಿ ರಚನೆಗಳು” ಎಂದಿರುವರು. ಒಟ್ಟೂ 63 ಶರಣರ ಕುರಿತಾಗಿ 75 ಸುನೀತಗಳು ‘ಕಲ್ಯಾಣವೆಂಬ ಪ್ರಣತಿ’ಯಲ್ಲಿದೆ ಎಂಬುದನ್ನು ನಾವಿಲ್ಲಿ ನೆನೆಯಬಹುದಾಗಿದೆ.

‘ಅರಿವೇ ಪ್ರಮಾಣು’ ಇದು ಅಕ್ಕನಾಗಮ್ಮನ ಜೀವನ ಕಾವ್ಯ ಹದಿನಾಲ್ಕು ಸಾಲಿನ 375 ಸುನಿತಗಳು ಈ ಪುಸ್ತಕದಲ್ಲಿ ಒಳಗೊಂಡಿರುತ್ತದೆ. ಅಕ್ಕ ನಾಗಮ್ಮನ ಬದುಕೇ ಈ ಪುಸ್ತಕದ ಕೇಂದ್ರ ಬಿಂದು. ಆಕೆಯ ಸುತ್ತಲೂ ಶರಣ ಸಂಕುಲದ ಬದುಕು ಮತ್ತು ಅಂದಿನ ಸಾಮಾಜಿಕ, ಜೀವನ ಮೌಲ್ಯಗಳು, ಕಾಯಕ, ಸಮತೆ, ಪುರುಷ ಪ್ರಧಾನ ಅಸಮಾನತೆಯ ಅಂಶಗಳೂ ಒಳಗೊಂಡಿದೆ. ಹನ್ನೆರಡನೇ ಶತಮಾನದಲ್ಲಿ ಮೂಡಿ ಬಂದ ಶರಣ ಸಾಹಿತ್ಯ ವಿಶ್ವಮಾನ್ಯವಾಗಿದೆ. ಅಲಕ್ಷಿತ ವಚನಕಾರ್ತಿ ಅಕ್ಕನಾಗಮ್ಮನವರ ಬದುಕು ಮತ್ತು ಚಿಂತನೆಗಳು ಒಳನೋಟವನ್ನು ನಂದೂರರು ಹೃದಯಂಗಮವಾಗಿ ಚಿತ್ರಿಸಿರುವರು.

ಒಂದು ಸುನಿತ ಇಂತಿದೆ ;

ಪುಣ್ಯವೇನು ಪಾಪವೇನು ಭುವಿಯ ಮೇಲೆ
ಹೆಣ್ಣೆಂದು ಶುರು ಶಾಪವೇನೋ… ಹಿಡಿ ಮುಚ್ಚಿ ತೂರಿ
ಮಣ್ಣು ತುಟಿ ಕಚ್ಚಿ ನಿತ್ಯ ಬಾಳು. ಮೊಗದಲಿ ಬರಿ
ತೋರು ನಗು ಮುಗುಳು. ಅಹಾ ! ತಾನು ಮಹಾ ದೇವಿ
ಮನೆ ಬೆಳಗು ಸಿರಿ ದೇವಿ ಸಂತಾನ ಲಕ್ಷ್ಮಿ ಪುರುಷ
ಫಲ ಕೊಟ್ಟು ಪಡೆವ ಪದವಿ. ಅಧಿಕಾರ ಅಂತಸ್ತು
ವಿದ್ಯೆ ಪೂಜೆ ದೇವರು ದರ್ಶನ ಪುರುಷ ಪಾಲು
ತನ್ನ ಪಾಲಿನ ಭಾಗ್ಯ ತಾನೂಡಿಸುವ ಎದೆ ಹಾಲು
ಅಂತಃಕರಣ ಬೆರಳು ನೇವರಿಸುತಿತ್ತು ತನ್ನದೇ
ಕರುಳು ಕುಡಿ ತನ್ನದುರಿಗಿದ್ದ ಮುದ್ದು ಮಗಳು….
ಗಂಡನಾಸೆ ಗಂಡಿನಾಸೆ ಹೊತ್ತು ಬಸಿರು ಮಾದಲಾಂಬೆ
ಕಣ್ಣು ಮುಂದೆ ತಾಯಿ ಭೂಮಿ ರೂಪ ತಾಯ್ಗರುಳು
ಬೆಳೆ ಬೆಳೆವ ಮಹಾ ತಾಯಿ ಮುತ್ತಬ್ಬೆ ತಂಪು ತವರು
ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು…

ನಂದೂರರ ಕಾವ್ಯ ಸೃಷ್ಟಿಯೇ ಅಪೂರ್ವ ವಾದುದು. ಪದಗಳ ಲಾಲಿತ್ಯ, ಶಬ್ದ ಜೋಡಣೆ, ಹಾಡಲು ತಂಪು ಕಿವಿಗಳಿಗೂ ಇಂಪು. ಬಸಿರು ಹೊತ್ತ ದಾರಿಯ ತುಂಬಾ ನೆರಳು ಹಚ್ಚ ಹಸಿರು… ಇಂತಹ ಶಬ್ದ ಪ್ರಯೋಗಗಳು ಓದುಗರ ಮನಸೂರೆಗೊಳ್ಳುತ್ತದೆ. ಇವೆಲ್ಲಾ ಸಾಲುಗಳು ನಂದೂರರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಪರೂಪದ ಕೊಡುಗೆಯಾಗಿರುತ್ತದೆ.

ಸಹೃದಯತೆ ಇದ್ದರೆ ಮಾತ್ರ ಸಾಹಿತ್ಯ ರಚನೆ ಸಾಧ್ಯ ಎಂಬ ನಂಬಿಕೆಯ ಮಹಾಂತಪ್ಪ ನಂದೂರ, ಚೆನ್ನವೀರ ಕಣವಿ ಮತ್ತು ಎಚ್.ಎಸ್. ವೆಂಕಟೇಶಮೂರ್ತಿಯವರ ಸಾಹಿತ್ಯದಿಂದ ಪ್ರೇರಿತರಾಗಿ ತಾನು ಅಕ್ಷರಗಳನ್ನು ಬರೆದೆ ಎನ್ನುವಾಗ ಅವರ ಮುಖದಲ್ಲಿ ಧನ್ಯತಾ ಭಾವ ಹೊರಹೊಮ್ಮುವದು. ನಯ, ವಿನಯ, ವಿಧೇಯತೆ, ಗಾಂಭೀರ್ಯಗಳನ್ನು ಮೈಗೂಡಿಸಿಕೊಂಡ ಇವರು ಬದುಕು ಮತ್ತು ಬರಹದಲ್ಲಿ ಸಮನ್ವಯತೆ ಸಾಧಿಸಿದವರು. ಸಂಕ್ರಮಣ ಕಥೆ ಮತ್ತು ಕಾವ್ಯ ಬಹುಮಾನ, ಡಿ.ಎಸ್.ಕರ್ಕಿ ಕಾವ್ಯ ಬಹುಮಾನ, ಸೇಡಂನ ಅಮ್ಮ ಪ್ರಶಸ್ತಿ, ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ, ಬೆಟ್ಟದೂರು ಪ್ರತಿಷ್ಟಾನದ ಪ್ರಶಸ್ತಿ, ಗುಲ್ಬರ್ಗ ವಿಶ್ವ ವಿದ್ಯಾಲಯದ ಸಾಹಿತ್ಯ ಪ್ರಶಸ್ತಿ, ಶಿವರಾತ್ರೀಶ್ವರ ಪ್ರಶಸ್ತಿ ಹೀಗೆ ಹತ್ತು ಹಲವು ಸಾಹಿತ್ಯಿಕ ಪ್ರಶಸ್ತಿಗಳು ಇವರ ಪುಸ್ತಕಗಳನ್ನು ಹುಡುಕಿಕೊಂಡು ಬಂದಿದೆ.

ಕಾವ್ಯಕ್ಕೆ ಹೂ ಮುಡಿಸುವ ಮನದನ್ನೆ ಪುಷ್ಪಾ, ಬೆರಗಿನ ಅಕ್ಷರಗಳನ್ನು ಮೂಡಿಸುವ ಮಗಳು ದೀಕ್ಷಾ ಮತ್ತು ವೈದ್ಯಕೀಯ ವ್ಯಾಸಂಗದ ಮಗ ಅಭಿಷೇಕ್ ಇವರಿಂದೊಡಗೂಡಿದ ತುಂಬು ಸಂಸಾರದ ಮಹಾಂತಪ್ಪ ನಂದೂರರಿಗೆ ಶುಭ ಕೋರಿ “ನಾಗಸುಧೆ”ಯಿಂದ ಅಭಿನಂದಿಸಿ, ಮುಂಬರುವ ದಿನಗಳಲ್ಲಿ ಇವರಿಂದ ಇನ್ನೂ ಹೆಚ್ಚು ಹೆಚ್ಚು ಮಾನವೀಯ ಮೌಲ್ಯದ ಪುಸ್ತಕಗಳು ಹುಟ್ಟಲಿ ಎಂದು ಆಶಿಸುವೆನು.

-ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....