Homeಅಂಕಣಗಳುನಾಗಸುಧೆ ಜಗಲಿಯಿಂದಮಮತೆಯ ಮಮತಾಗೆ 'ಮಯೂರ' ನ ಮನ್ನಣೆ: ಪ್ರಕಾಶ ಕಡಮೆ

ಮಮತೆಯ ಮಮತಾಗೆ ‘ಮಯೂರ’ ನ ಮನ್ನಣೆ: ಪ್ರಕಾಶ ಕಡಮೆ

ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವ ಮಮತ ಅರಸೀಕೆರೆಯವರ ಕುರಿತು

- Advertisement -
- Advertisement -

ಹಸಿವಲ್ಲೂ ಸೊಗಸಿತ್ತು, ಬಗೆಬಗೆಯ ವಿಧವಿತ್ತು
ಮರಿ ಹಸಿವು, ಮುದಿ ಹಸಿವು,
ಗಂಡು ಹೆಣ್ಣಸಿವು ಮತ ಜಾತಿಯ ಹಂಗಿಲ್ಲದ ಹಸಿವು
ಏಕತೆಯಿತ್ತು ವೈವಿಧ್ಯಮಯಲ್ಲಿ
ಒಗ್ಗಟ್ಟಾಯಿತು ಧರ್ಮ ಗಡಿ ಮೀರಿದ ಭಾವದಲ್ಲಿ

ಎಂಬ ಮಾನವೀಯ ಭಾವನೆಗಳ ಕವಿತೆ ಬರೆಯುತ್ತಾ ಮತ್ತೊಬ್ಬರ ಹಸಿವು, ನೋವು, ಸಂಕಟ, ಸಂಕಷ್ಟಗಳನ್ನು ಅರಿತು ಶಿಕ್ಷಣ-ರಂಗಭೂಮಿ-ತಿರುಗಾಟ, ಸಾಹಿತ್ಯ-ಸಂಘಟನೆಗಳಲ್ಲಿ ತೊಡಗಿಸಿಕೊಂಡು ತನ್ನ ವೃತ್ತಿ ಬದುಕಿಗೆ ಧಕ್ಕೆ ಬರದ ಹಾಗೇ ಸದಾ ಜಾಗೃತೆಯೊಂದಿಗೆ; ಪ್ರಗತಿಪರ ನಿಲುವನ್ನು ಮೈಗೂಡಿಸಿಕೊಂಡು, ಅನ್ಯಾಯ ಕಂಡಲ್ಲೆಲ್ಲಾ ಪ್ರತಿಭಟಿಸುವ ಜನಪರ ನಿಲುವಿನ ಲೇಖಕಿ ಮಮತ ಅರಸೀಕೆರೆ ಇವರಿಗೆ, ಸಾಹಿತ್ಯದ ವಿವಿಧ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಲವತ್ತೈದು ವರ್ಷದೊಳಗಿನ ಯುವ ಸಾಹಿತಿಗಳಿಗೆ, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಯವರು ಕೊಡ ಮಾಡುವ ರಾಜ್ಯ ಮಟ್ಟದ “ಮಯೂರವರ್ಮ” ಪ್ರಶಸ್ತಿಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ ನೇತೃತ್ವದ ಆಯ್ಕೆ ಸಮಿತಿಯಿಂದ ಇನ್ನಿತರ ನಾಲ್ವರು ಯುವ ಸಾಧಕರೊಂದಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ.

ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಮತ ಅರಸೀಕೆರೆ

ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿಯಲ್ಲಿ ಜನಿಸಿದ ಮಮತಾಗೆ ತಂದೆ-ತಾಯಿ ಸರಕಾರೀ ನೌಕರಿ ಮಾಡುತ್ತಿದ್ದರಿಂದ ಚಿಕ್ಕಂದಿನಿಂದಲೂ ಬಡತನದ ಅರಿವಿಲ್ಲದಿದ್ದರೂ ಬಡತನಕಾಗಿ ಮಿಡಿಯುವ ಮನಸ್ಸು ಮತ್ತು ಹೃದಯವಿತ್ತು. ಅಪ್ಪ ಅಂಚೆಯಣ್ಣನಾದರೆ, ಅಮ್ಮ ಮಕ್ಕಳ ಹೃದಯದಲ್ಲಿ ಅಕ್ಷರಗಳ ಬೀಜ ಬಿತ್ತುವ ಶಿಕ್ಷಕಿ. ಇದರಿಂದಾಗಿ ಮಮತಾ ಭಾವೈಕ್ಯತೆಯ ಮಡಿಲಲ್ಲೇ ಬೆಳೆದರು. ಊರಿನ ಸುಖ-ದುಃಖ, ನೋವು-ನಲಿವು, ಸಂಭ್ರಮ, ಮಂದಿರ-ಮಸೀದೆಯ ಸುದ್ಧಿ, ಮನಿಆರ್ಡರ್, ಪೆನ್ಷನ್, ದೇಶ ವಿದೇಶಗಳ ಸಣ್ಣ ಸಣ್ಣ ವಿಷಯದ ದೊಡ್ಡ ದೊಡ್ಡ ಸುದ್ದಿಗಳು ಸಂಜೆ ಅಪ್ಪ ಖುಷಿಯಲಿ ವಿವರಿಸುತ್ತಿದ್ದಂತೇ ಮಮತಾರಿಗೆ ಆಗಿನಿಂದಲೇ ಜಗತ್ತಿನ ಜನ ಲೋಕದ ಪರಿಚಯ ಮನೆ ಮಾಡುತ್ತಿದ್ದಂತೇ ಅಮ್ಮನ ಬದುಕು ಕಟ್ಟಿಕೊಳ್ಳುವಿಕೆಯ, ಮನುಷ್ಯ ಸಂಬಂಧದ ಪಾಠ ಮನೆಯಲ್ಲಿಯೂ ನಡೆದುದರಿಂದ, ಚಿಕ್ಕಂದಿನಿಂದಲೂ ಪುಸ್ತಕದ ಗೆಳೆತನ ಬೆಳೆದು ಭಾವನೆಗಳ ಹೊರ ಹಾಕಲೇಬೇಕಾದ ಅನಿವಾರ್ಯತೆ, ಒತ್ತಡಗಳಿಂದ ತಾನು ಅಕ್ಷರ ಲೋಕಕ್ಕೆ ಪಾದಾರ್ಪಣೆ ಮಾಡಬೇಕಾಯಿತು ಎನ್ನುವಾಗ ಇವರ ಕಣ್ಣಲ್ಲಿ ಕ್ರಾಂತಿ-ಶಾಂತಿಯ ಹೊಳಪು ಹೊರಹೊಮ್ಮುತಿತ್ತು. ಬದುಕು ರೂಪಿಸಿದ ಅಮ್ಮ, ಕಥೆಗಳನ್ನು ಹೊತ್ತು ತರುವ ಅಪ್ಪ ಮತ್ತು ಪುಸ್ತಕದ ಒಡನಾಟದ ಓದು ನನ್ನ ಭವಿಷ್ಯತ್ತನ್ನು ರೂಪಿಸಿತು ಎನ್ನುವಾಗ ಮಮತೆಯ ಮಮತಾಳ ಮೊಗದಲ್ಲಿ ವಿಶ್ವಾಸದ ನಗೆ ತುಂಬಿ ತುಳುಕುತ್ತಿತ್ತು.

ಮಮತಾರದು ಬಹುಮುಖ ಪ್ರತಿಭೆಯ ನಗು ಮೊಗದ ಮಗು ಮನಸ್ಸು. ಶಾಲೆಯಲ್ಲಿ ಶಿಕ್ಷಕಿಯಾಗಿ ಆ ಮಕ್ಕಳೊಡನೆಯ ಒಡನಾಟವೇ ಒಂದು ಅವಿಸ್ಮರಣೀಯ ಖುಷಿ ಎಂದು ನೆನೆದು ತಾವೂ ಮಗುವಾಗಿ ಬಿಡುವರು. ಸಾಹಿತ್ಯದೊಂದಿಗೆ ನಾಟಕ-ನಟನೆಯ ಅಭಿರುಚಿಯೂ ಬೆಳೆಯತೊಡಗಿತು. ಸಂಗೀತ-ರಂಗಭೂಮಿಯೂ ಮನದಲ್ಲಿ ಹಸಿರಾಯಿತು. ವಿಜ್ಞಾನ ಪರಿಷತ್ತಿನ ಕೆಲಸವೆಂದರೆ ಮಮತಾಗೆ ಪಂಚ ಪ್ರಾಣ. ಬೀದಿ ನಾಟಕ, ಪಪೆಟ್ ಶೋ, ಚಾರಣ, ಪರಿಸರ ಪಾಠ, ಬೀಜ ಬಿತ್ತುವಿಕೆ, ಗಿಡ ನಡುವದು, ನಟನೆ-ಸಂಘಟನೆಯಿಂದಾಗಿ ರಾಜ್ಯಾದ್ಯಂತ ಪ್ರವಾಸ; ತಮ್ಮ ಇತಿ ಮಿತಿಯ ಸಮಯದಲ್ಲಿ. ಓಡಾಟ ಒಡನಾಟದಿಂದಲೇ ಆತ್ಮಸ್ಥೈರ್ಯ ಎನ್ನುವ ಮಮತಾರಿಗೆ, ಗುರಿ ಉದ್ದೇಶ ಮುಖ್ಯ ಎನ್ನುವ ಕಾರ್ಯ ಸಾಧನೆಯ ಮನಸ್ಸಿದೆ. ಸಂಪ್ರದಾಯಿಕ ಹಿನ್ನೆಲೆಯಿಂದ ಬಂದ ಮಮತಾ ಅಂಜಿಕೆ, ಹಿಂಜರಿಕೆ, ಅಡಗಿಕೊಳ್ಳುವಿಕೆಯನ್ನು ಭೇದಿಸಿ ಸ್ತ್ರೀವಾದಿ ಪಟ್ಟ ಕಟ್ಟಿಕೊಳ್ಳುವಾಗ ಅನೇಕರ ಕೆಂಗಣ್ಣಿಗೂ ಗುರಿಯಾದರು. ಸಂಘಟನೆ-ತಿರುಗಾಟದ ನಡುವೆ ತಮ್ಮ ಸೃಜನಶೀಲತೆ ಬತ್ತಿಹೋಗದಂತೆ ಎಲ್ಲವನ್ನೂ ಕಾಪಿಟ್ಟು ನಿಭಾಯಿಸಿಕೊಂಡು ಬಂದವರು.

ಅರಸೀಕೆರೆಯ ಆ ಸುಂದರ ನೆಲದಲ್ಲಿ ಸುಮಾರು 15 ವರ್ಷಗಳ ಕಾಲ ಮಕ್ಕಳ ಬೇಸಿಗೆ ಶಿಬಿರ, ಮಕ್ಕಳ ನಾಟಕ ನಿರ್ಮಾಣ, ನಾಟಕೋತ್ಸವ, ಸಾಹಿತ್ಯ ಮತ್ತು ಜಾನಪದ ಕಮ್ಮಟಗಳು, ಕವಿಗೋಷ್ಠಿಗಳು, ಮಹಿಳೆಯರು ಮತ್ತು ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನಾ ಕ್ಷೇತ್ರದಲ್ಲಿ ಮಮತಾ ತಮ್ಮನ್ನು ತಾವೇ ತೊಡಗಿಸಿಕೊಂಡು, ಈ ಪುಟ್ಟ ಊರನ್ನು ಕನ್ನಡ ನಾಡಿಗೇ ಪರಿಚಯಿಸಿ ತಮ್ಮ “ಅರಸೀ ಸಾಂಸ್ಕೃತಿಕ ವೇದಿಕೆ”ಯ ಮುಖಾಂತರ ಹಿರಿಯ ಸಾಹಿತಿಗಳು, ಕಲಾವಿದರು, ರಂಗ ಕರ್ಮಿಗಳು ಈ ಊರನ್ನು ಬೆರಗಿನಿಂದ ಕಾಣಲು ಕಾರಣರಾದವರು ಮಮತ ಅರಸೀಕೆರೆಯವರೇ.

ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿ ಮತ್ತು ಸಿಆರ್‌ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಮತಾ ರಾಜ್ಯ ಶಾಸ್ತ್ರದ ಎಂಎ ಸ್ನಾತಕೋತ್ತರ ಪದವೀಧರೆ. ಹಿಂದಿಯಲ್ಲಿ ಬಿ.ಎ, ಬಿಎಡ್ ಮುಗಿಸಿದ ಇವರು ಅಭಿರುಚಿಗೆ ತಕ್ಕಂತೇ ಸಂಗೀತದ ಜ್ಯೂನಿಯರ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿರುವರು. ಶಿಕ್ಷಣದಲ್ಲಿ ರಂಗ ಕಲೆ ತರಬೇತಿಯನ್ನು ಎನ್.ಎಸ್.ಡಿ ಬೆಂಗಳೂರು ಮುಖಾಂತರ ಮುಗಿಸಿದ ಇವರು ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣವನ್ನೇ ತಮ್ಮ ಉಸಿರೆಂದು ನಂಬಿದವರು.

ಮಮತಾ ಸಾಂಸ್ಕೃತಿಕ ಸಂಘಟನೆ, ಅನ್ನ ಕೊಡುವ ವೃತ್ತಿ ಮತ್ತು ತಿರುಗಾಟದ ನಡುವೆ ತಾನು ಬರೆದದ್ದನ್ನು ಪ್ರಕಟಿಸಲು ವಿಳಂಬವಾದರೂ ಸಂತೆಯ ಸರಕು (ಕವನ ಸಂಕಲನ) ಕಾಲಡಿಯ ಮಣ್ಣು(ಹಿಂದಿಯಿಂದ ಅನುವಾದ) ಮಕ್ಕಳ ಮೂರು ನಾಟಕ (ವಿವಿಧ ಲೇಖಕರನ್ನೊಳಗೊಂಡು) ಕೃತಿಗಳನ್ನು ಪ್ರಕಟಿಸಿದ್ದು ಸದ್ಯದಲ್ಲಿಯೇ ಎರಡು ಕವನ ಸಂಕಲನ ಮತ್ತು ಒಂದು ಮಕ್ಕಳ ನಾಟಕ ಪುಸ್ತಕ ಹೊರಬರಲಿದೆ. ‘ಸಂತೆಯ ಸರಕು’ ಕವಿತೆಗಳು ಈಗಾಗಲೇ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದು ಅದಕ್ಕೆ ಹಾವೇರಿಯ ಕಣವಿ ಕಾವ್ಯ ಪುರಸ್ಕಾರ, ಮಂಡ್ಯದ ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಬೆಂಗಳೂರಿನ ಹರಿಹರ ಯುವ ಪ್ರತಿಭಾ ಪುರಸ್ಕಾರ ಮತ್ತು ಹರಿಹರ ಶ್ರೀ ಪ್ರಶಸ್ತಿ ದೊರಕಿದೆ. ಅನುವಾದವೆಂದರೆ ಭಾಷೆಯ ಕೊಡ ಕೊಳ್ಳುವಿಕೆ; ಮತ್ತೊಂದು ಸಂಸ್ಕೃತಿಯ ಚಿತ್ರ. ಹಿಂದಿಯಿಂದ ಅನುವಾದ ಮಾಡಿದ ‘ಕಾಲಡಿಯ ಮಣ್ಣು’ ನವಿರಾದ ಭಾಷೆ ಮತ್ತು ವಸ್ತು ವಿನ್ಯಾಸದಲ್ಲಿ ಹೊಸತನದಿಂದ ತುಂಬಿದೆ. ಗೆಳೆಯರಿಂದೊಡಗೂಡಿ ರಚಿಸಿದ ‘ಮಕ್ಕಳ ಮೂರು ನಾಟಕ’ವೂ ವಿಭಿನ್ನ ದೃಷ್ಟಿಕೋನದಿಂದ ಒಳಗೊಂಡಿದ್ದು ಅನೇಕ ರಂಗ ಪ್ರಯೋಗವನ್ನು ಕಂಡು ಪ್ರೇಕ್ಷಕರ ಮನ ಸೂರೆಗೊಂಡಿದೆ.

ಆ ಹುಡುಗಿಯ ನೋವಿನ ಕೂಗು
ಇನ್ನೂ ಮಾರ್ಧನಿಸುತ್ತಲೇ ಇದೆ
ನನ್ನ ಕಿವುಡಿಯ ಮಾಡಯ್ಯ ತಂದೆ
ಆಕೆಯ ಮೇಲಿನ ದೌರ್ಜನ್ಯದ ಕಥೆಯ
ಪದ ಪದಗಳಲಿ ವಿವರಿಸದಂತೆ
ಎನ್ನ ಮೂಕಿಯ ಮಾಡಯ್ಯ ತಂದೆ
ಕಾರಣಕ್ಕೇ ಕಾರಣವಾದ
ದೂರ್ತರನ್ನೆಲ್ಲಾ
ಹೆಳವರ ಮಾಡಯ್ಯ ತಂದೆ
ಕ್ಷಮಿಸು ಹಿಂಸೆಯ ತಾಳಲಾರದ
ಈ ಹಳಹಳಿಕೆ
ಕೊನೆಗೊಳ್ಳಲಿ ಇಂದೆ

ಎನ್ನುವ ಮಮತಾರ ಮನಸ್ಸಿನ ಧ್ವನಿಯು ಸದಾ ಮಕ್ಕಳ, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಪ್ರತಿಭಟಿಸುತ್ತಲೇ ಇರುತ್ತದೆ. ಮಮತಾ, ಮಹಿಳೆಯರು ಮತ್ತು ಮಕ್ಕಳಿಗಾಗಿ ಅನೇಕ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವರು.

ಮಮತಾ ರಾಜ್ಯದ ಒಳಗೂ ಹೊರಗೂ ನೂರಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕೆಲ ಕಾವ್ಯ ಪ್ರೇಮಿಗಳ ಮನದಲ್ಲಿ ಇವರ ಕವಿತೆಗಳು ರಿಂಗಣಿಸುವದು. ಧಾರವಾಡದ ಮೇ ಸಾಹಿತ್ಯ ಮೇಳ, ಸಾಹಿತ್ಯ ಸಂಭ್ರಮ, ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಅನೇಕ ಕವಿಗೋಷ್ಠಿ, ಮಹಾರಾಷ್ಟ್ರದ ಅಕ್ಕಲಕೋಟೆಯ ಕವಿ ಸಮ್ಮೇಳನ, ಮುಧೋಳದ ರನ್ನ ಉತ್ಸವದ ಕವಿಗೋಷ್ಠಿ, ಮೈಸೂರಿನ ದಸರಾ ಕವಿಗೋಷ್ಠಿ, ಹಂಪಿ ಉತ್ಸವದ ಕವಿಗೋಷ್ಠಿ ಇವುಗಳಲ್ಲಿ ಅತೀ ಮುಖ್ಯವಾಗಿರುತ್ತದೆ.

ಡಾ.ಎಚ್.ಆರ್ ಸ್ವಾಮಿಯವರೊಂದಿಗೆ ವೇದಿಕೆಯಲ್ಲಿ

ತನ್ನ ಈ ಎಲ್ಲಾ ಪ್ರಗತಿಪರ ಧೋರಣೆಗಳ ಕಾರ್ಯಕ್ರಮಕ್ಕೆ ಪ್ರೇರಣೆ ಡಾ.ಎಚ್.ಆರ್ ಸ್ವಾಮಿ ಮತ್ತು ನನ್ನ ಸಾಹಿತ್ಯಕ್ಕೆ ಬೆನ್ನೆಲವಾಗಿ ನಿಂತವರು ಸತೀಶ ಕುಲಕರ್ಣಿ, ಸರಜೂ ಕಾಟ್ಕರ್ ಮತ್ತು ಬರಗೂರ ರಾಮಚಂದ್ರಪ್ಪನವರು ಎನ್ನುವಾಗ ಇವರ ಮೊಗದಲ್ಲಿ ಧನ್ಯತಾ ಭಾವ ಎದ್ದು ಕಾಣುವುದು.

ಅವಳ ಒಂದೊಂದು ಹೆಜ್ಜೆ ಲಯದ ಸೂಕ್ಷ್ಮ ಸದ್ದಾಗಬೇಕು
ಅರಮನೆಯಿಂದ ಆನೆ ಲಾಯದ ದೂರ ಅಳೆಯಬೇಕು
ಅವಳುಟ್ಟ ಬಟ್ಟೆಯಿಂದ ಮುಸುಕು ಮುಚ್ಚಿಕೊಳ್ಳಬೇಕು
ಹೊಸ್ತಿಲ ದಾಟಿ ಪಾದ ಹೊರಗಿಟ್ಟ ಸಮಯ ತಿಳಿಯಬೇಕು
ಅದು ಅರ್ಧರಾತ್ರಿಯೇ ಆಗಿದ್ದರೆ ಸಮಯದ ಸಾಂದ್ರ
ಸವಿಯಬೇಕು
ನಾನೂ ಒಮ್ಮೆ ಅಮೃತಮತಿಯಾಗಬೇಕು.

ಎಂದು ಇವರು ಸದಾ ಹೆಣ್ಣಿನ ಅಸ್ಮಿತೆಯ ಕುರಿತಾಗಿ ಕವಿತೆ ಬರೆಯುತ್ತಾ, ಹೆಣ್ಣಿನ ನೋವು, ಅನ್ಯಾಯದ ಕುರಿತಾಗಿ ತೀವ್ರ ಪ್ರತಿಭಟನೆಯ ಉಸಿರಾಗಿರುವರು.

“ನೀವು ನಿಮ್ಮ ಅರಿವಿನ ಸಮಾಧಿಗೆ ಮೌನದ ಚಾದರ ಹೊದ್ದಿಸಿದ್ದಿರಿ” ಎಂಬ ಮಡುಗಟ್ಟಿದ ನೋವಿನಲ್ಲೂ ಸದಾ ಮೌನದ ನಗುಮೊಗದಲ್ಲೇ ಇಲ್ಲಿ ನಡೆಯುವ ಅನ್ಯಾಯ, ಅನಾಚಾರ, ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇರುವ “ನಾಗಸುಧೆ”ಯ ಮಮತೆಯ ಮಮತಾಳಿಗೆ ನಾಡಿನ ಪ್ರತಿಷ್ಠಿತ “ಮಯೂರ ವರ್ಮ” ಪ್ರಶಸ್ತಿಗಾಗಿ ಶುಭ ಹಾರೈಸಿ ಅಭಿನಂದಿಸುವೆನು.

-ಪ್ರಕಾಶ ಕಡಮೆ

ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಸಪ್ತ ಸಾಗರದಾಚೆ ಕನ್ನಡ ಕಹಳೆಯೂದಿದ ನಾಗ ಐತಾಳ -ಪ್ರಕಾಶ ಕಡಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...

ಇರಾನ್ ‘ಭಯೋತ್ಪಾದಕ ಆಡಳಿತ’ ಎಂದು ಕರೆದ NDTV ಹಿರಿಯ ಸಂಪಾದಕ: ವ್ಯಾಪಕ ಟೀಕೆಯ ನಂತರ ಪೋಸ್ಟ್ ಡಿಲಿಟ್ 

ಹೊಸದಿಲ್ಲಿ: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತದ ಮುಖ್ಯ ಮಾಧ್ಯಮ ಸಂಸ್ಥೆ NDTV ಹಿರಿಯ ಸಂಪಾದಕ ಆದಿತ್ಯ ರಾಜ್ ಕೌಲ್ ಅವರು ಇರಾನ್ “ಭಯೋತ್ಪಾದಕ...

ಎಲ್‌ಪಿಜಿ ಬಿಕ್ಕಟ್ಟು: ಹೋಟೆಲ್ ಮಾಲೀಕರಿಗೆ ವಿದ್ಯುತ್ ಒಲೆಗಳನ್ನು ಬಳಸಲು ಸೂಚಿಸಿದ ಸಚಿವ ಕೆ.ಎಚ್. ​​ಮುನಿಯಪ್ಪ

ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದ ಪ್ರಭಾವ ಭಾರತೀಯರ ಅಡುಗೆ ಮನೆಯನ್ನು ಪ್ರವೇಶಿಸಿದ್ದು, ಎಲ್‌ಪಿಜಿ  ಬಿಕ್ಕಟ್ಟಿನಿಂದ ನಾಗರೀಕರು, ಸೇರಿದಂತೆ ಹೋಟೆಲ್ ಉಧ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ನಡುವೆ ಯುದ್ಧದ ಪರಿಣಾಮ ಭಾರತದ ಮೇಲೆ...