Homeಮುಖಪುಟಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ 'ಬಾಡಿ ಲಾಂಗ್ವೇಜ್' ಹೇಗಿರಬೇಕು ಗೊತ್ತೆ?

ಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ ‘ಬಾಡಿ ಲಾಂಗ್ವೇಜ್’ ಹೇಗಿರಬೇಕು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ -14

ಸಂವಹನ ಕಲೆ –2 ಶಬ್ದಾತೀತ ಭಾಷೆ (ಬಾಡಿ ಲಾಂಗ್ವೇಜ್ – ನಾನ್ ವರ್ಬಲ್ ಕಮ್ಯುನಿಕೇಷನ್)

ಸಂವಹನ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಾಧ್ಯಮ ಶಬ್ದಾತೀತ ದೈಹಿಕ ಭಾಷೆ ಅಥವಾ ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಎಂದು ಕರೆಯಲ್ಪಡುತ್ತದೆ. ಇದು ಶಬ್ದ ಅಥವಾ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮ. ಶಬ್ದ ಮತ್ತು ಭಾಷೆಯ ಜೊತೆ ಸೇರಿದಾಗ ಇದು ಸಂಪೂರ್ಣ ಶಕ್ತಿಶಾಲಿ ವಾಕ್-ದೃಶ್ಯ ಮಾಧ್ಯಮವಾಗುತ್ತದೆ. ನಮ್ಮ ದಿನನಿತ್ಯದ ಸಂವಹನದಲ್ಲಿ ಸುಮಾರು 60-70% ಸಮಯ ಬಳಕೆಯಾಗುವ ಮಾಧ್ಯಮ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್, ಇ-ಮೇಲ್ ಮುಂತಾದವುಗಳಲ್ಲಿ ಇದರ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಾವನೆಗಳನ್ನು ಸ್ಥಬ್ದ ಅಥವಾ ಚಲಿಸುವ ಚಿತ್ರಗಳ ಮೂಲಕ ಬಿಂಬಿಸುವ ಇವನ್ನು ಎಮೋಟಿಕಾನ್ ಅಥವಾ ಎಮೋಜಿ ಎನ್ನುತ್ತಾರೆ.

ದೈಹಿಕ ಭಾಷೆ ನಾವು ಆಡುವ ಭಾಷೆಗಿಂತ 10-15 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಇದರ ಬಳಕೆಯಿಂದ ಸಂವಹನ ಸುಲಭವಾಗುತ್ತದೆ, ಆದರೆ ದೈಹಿಕ ಭಾಷೆ ಅಸಮರ್ಪಕವಾಗಿದ್ದಾಗ ಸಂದೇಶ ತನ್ನ ಅರ್ಥ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಶಬ್ದಾತೀತ ದೈಹಿಕ ಭಾಷೆಯಲ್ಲಿ ಬಳಕೆಯಾಗುವ ಅಂಶಗಳು:

·         ದೃಷ್ಟಿ ಸಂಪರ್ಕ (ಐ ಕಾಂಟ್ಯಾಕ್ಟ್)

·         ಮುಖ ತಿರುಚುವಿಕೆ

·         ಕಣ್ಣು ಮಿಟುಕಿಸುವುದು

·         ಮೈ-ಕೈ ಹಾವಭಾವ

·         ದೇಹದ ನಿಲುವು (ಪಾಷ್ಚರ್)

·         ಸಾಮೀಪ್ಯ (ಅಥವಾ ದೂರ)

·         ಸ್ಪರ್ಶ

·         ವಿನೋದ/ಅಣಕು

·         ಮೌನ

·         ಸಂಕೇತಗಳು

·         ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು

ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿದಲ್ಲಿ ಸಂವಹನ ಪ್ರಭಾವಶಾಲಿಯಾಗಿರುತ್ತದೆ. ದೈಹಿಕ ಸಂದೇಶಗಳು ಮಾತಿನ ಅರ್ಥಕ್ಕೆ ಪೂರಕವಾಗಿರಬೇಕು, ಅದರ ಮೌಲ್ಯವನ್ನು ವೃದ್ಧಿಸುವಂತಿರಬೇಕು, ಹಾಗಿಲ್ಲದಿದ್ದಾಗ  ಅನರ್ಥಕ್ಕೂ ಆಸ್ಪದವಿರುತ್ತದೆ. ಕೆಳಕಂಡ ಚಿತ್ರದಲ್ಲಿ ದೈಹಿಕ ಭಾಷೆಗೂ ಹೇಳಿರುವ ಮಾತಿಗೂ ತಾಳೆ ಇಲ್ಲದಿರುವುದನ್ನು ಕಾಣಬಹುದು.

ದೈಹಿಕ ಭಾಷೆಯನ್ನು ಬಳಸಿಕೊಳ್ಳುವುದು ಹೇಗೆ?

ದೃಷ್ಟಿ-ಸಂಪರ್ಕ: ನೀವು ಮಾತನಾಡುತ್ತಿರುವವರ ಜೊತೆ ದೃಷ್ಟಿ ಸಂಪರ್ಕದಿಂದಿರಿ. ಎಲ್ಲೋ ನೋಡಿಕೊಂಡು ಮಾತನಾಡಿದಲ್ಲಿ ನಿಮಗೆ ನಿಮ್ಮ ಮೇಲೆ ಅಥವಾ ಅವರ ಮೇಲೆ ನಂಬಿಕೆ/ಆಸಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ. ಗುಂಪನ್ನು ಸಂಬೋಧಿಸಿ ಮಾತನಾಡುವಾಗ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಡಿ, ಮಿಕ್ಕವರು ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಯಾರು ಹೆಚ್ಚು ಆಸಕ್ತಿ (ಪ್ರತ್ಯಾದಾನ) ನೀಡುತ್ತಿದ್ದಾರೋ ಅವರನ್ನು ಹೆಚ್ಚು ಸಲ ಗಮನಿಸುವುದರಲ್ಲಿ ತಪ್ಪಿಲ್ಲ ಅಥವಾ ಯಾರು ಋಣಾತ್ಮಕ ಪ್ರತ್ಯಾದಾನ ನೀಡುತ್ತಿದ್ದಾರೋ ಅವರನ್ನು ನಿರ್ಲಕ್ಷಿಸುವುದರಲ್ಲಿ ಅಡ್ಡಿಯಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಸ್ಥೈರ್ಯವೂ ಹೆಚ್ಚುತ್ತದೆ.

ಮುಖ ತಿರುಚುವಿಕೆ: ನಾವು ಮಾತನಾಡುತ್ತಿರುವ ವಿಷಯಕ್ಕೆ ತಕ್ಕ ಮುಖಚರ್ಯೆ ಇರಬೇಕು ಆದರೆ ಮುಖದಲ್ಲಿ ಮಂದಹಾಸ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮುಖಚರ್ಯೆಯಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ, ಎಂಬ (ಒಂಬತ್ತು) ನವರಸಗಳನ್ನು ಸಮರ್ಪಕವಾಗಿ ಬಿಂಬಿಸಬಹುದು. ಅದಕ್ಕೆ ನೀವು ಭರತನಾಟ್ಯ ಅಥವಾ ಮಿಕ್ಕ ಪ್ರದರ್ಶನ ಕಲೆಯ ತಜ್ಞರಾಗಿರಲೇಬೇಕೆಂದಿಲ್ಲ.

ನಿಮ್ಮ ಮಾತಿನ ಸಂದರ್ಭಕ್ಕೆ ತಕ್ಕಂತೆ ಮುಖಚರ್ಯೆ ಹೊಂದಿಸಿಕೊಳ್ಳಿ ಆದರೆ ಮಿಕ್ಕವರ ಬಗ್ಗೆ ಸೊಟ್ಟಮೂತಿ ಮಾಡುವುದನ್ನು ತಪ್ಪಿಸಿ.

ದೇಹದ ನಿಲುವು (ಪಾಷ್ಚರ್): ಇತರರೊಂದಿಗೆ ಮಾತನಾಡುವಾಗ ನೀವು ಸ್ವಲ್ಪ ಅವರ ಮುಂದಕ್ಕೆ ಬಗ್ಗಿದ್ದರೆ ಅವರ ಬಗ್ಗೆ ವಿನಯ/ಆಸಕ್ತಿ ತೋರಿಸುತ್ತದೆ, ತೀರಾ ಮುಂದಕ್ಕೆ ಬಗ್ಗಿದ್ದರೆ ಅದು ಅತಿ ವಿನಯ ಸೂಚಿಸುತ್ತದೆ ಅಥವಾ ಮುಗ್ಗರಿಸಿ ಮುಂದಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು: ದೃಷ್ಟಿ-ಸಂಪರ್ಕ ಮತ್ತು ನವರಸಕ್ಕೆ ಅನುಗುಣವಾಗಿಲ್ಲವಾದಾಗ ವೃಥಾ ಕಣ್ಣು ಮಿಟುಕಿಸುವುದು ಅಥವಾ ರೆಪ್ಪೆ ಬಡಿಯುವುದನ್ನು ಬಿಡಿ. ಇದೂ ಸಹ ತಪ್ಪು ಸಂದೇಶ ರವಾನಿಸುತ್ತದೆ.

ಮೈ-ಕೈ ಹಾವಭಾವ: ನಿಮ್ಮ ಭಾವನೆಗನುಗುಣವಾಗಿ ಕೈಗಳನ್ನು ಬಳಸಿ, ಅವನ್ನು ಕೋಟ್-ಪ್ಯಾಂಟ್ ಜೇಬಿನಲ್ಲಿ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಬೇಡಿ. ಅಂಗೈಗಳನ್ನು ಮೇಲಕ್ಕೆ ಮಾಡಿದ್ದಾಗ ಅದು ನಿಮ್ಮ ಮುಕ್ತ ವ್ಯಕ್ತಿತ್ವ ಸೂಚಿಸುತ್ತದೆ. ಕೈಗಳು ನಿಮ್ಮ ಕಡೆಗೇ ತೋರಿಸುತ್ತಿದ್ದಲ್ಲಿ ಇತರರಿಂದ ನಿಮ್ಮನ್ನು ನೀವೇ ದೂರ ಇರಿಸುತ್ತಿದ್ದೀರೆಂಬುದನ್ನು ತೋರಿಸುತ್ತದೆ.

ಸಾಮೀಪ್ಯ (ಅಥವಾ ದೂರ): ಇದು ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸಾಮೀಪ್ಯ ಅಥವಾ ದೂರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಎಲ್ಲೆ ಮೀರಬೇಡಿ. ಅದರಲ್ಲೂ ಲಿಂಗಬೇಧ ಗಮನದಲ್ಲಿಟ್ಟುಕೊಂಡು, ನಿಮ್ಮ ಲಕ್ಷ್ಮಣ ರೇಖೆ ನೀವೇ ಎಳೆದುಕೊಂಡು, ಅದನ್ನು ದಾಟದಂತೆ ಎಚ್ಚರಿಕೆ ವಹಿಸಿ.

ಸ್ಪರ್ಶ:ಇದು ಸಹ ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸ್ಪರ್ಷದ ಬಳಕೆ ಇರುವಂತೆ ನೋಡಿಕೊಳ್ಳಿ.

ವಿನೋದ/ಅಣಕು: ವಿನೋದ/ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವೂ ಸಹ ಹಾಸ್ಯ ಕಲಾವಿದರಾಗಿಲ್ಲದಿದ್ದರೆ, ಇತರರನ್ನು ಅಣಕಿಸಿ ಹಾಸ್ಯದ ಉತ್ಪನ್ನಕ್ಕೆ ಪ್ರಯತ್ನಿಸಬೇಡಿ. ಇದು ತೊಂದರೆಗೆ ಕಾರಣವಾಗುತ್ತದೆ.

ಮೌನ: ಮಾತು ಮುತ್ತಾದರೆ ಮೌನ ಚಿನ್ನ ಎನ್ನುತ್ತಾರೆ. ಸಮರ್ಪಕವಾಗಿ ಬಳಸಿಕೊಳ್ಳಿ. ಇನ್ನೊಬ್ಬರು ಪ್ರತಿಕ್ರಯಿಸುತ್ತಿರುವಾಗ ನೀವು ಮೌನವಾಗಿರಿ. ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಮೌನವೇ ಉತ್ತರವಾದಲ್ಲಿ ಅದನ್ನು ಮಿಕ್ಕವರು ತಪ್ಪಾಗಿ ಗ್ರಹಿಸಬಹುದು.

ಸಂಕೇತಗಳು: ಯಾವುದೇ ರೀತಿಯದ್ದಾಗಿರಬಹುದು. ಕೈ ಸಂಜ್ಞೆ ಅಥವಾ ಬೆರಳಸಂಜ್ಞೆ ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದಿರಿ. ಕೆಲವು ಬೆರಳು ಅಷ್ಟು ಗೌರಪೂರ್ವಕವಲ್ಲ. ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸುವಾಗ ಮೂರು ಬೆರಳು ನಮ್ಮ ಕಡೆಗೆ ಇರುತ್ತವೆ ಎಂಬುದನ್ನು ಮರೆಯಬೇಡಿ.

ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು:  ಇವು ನಿಮ್ಮ ಪೋಷಾಕು, ಅದರ ಬಣ್ಣ ಅಥವಾ ಅದರೊಂದಿಗೆ ಧರಿಸಿರುವ ಇತರ ಸಾಧನ ಸಾಮಗ್ರಿಗಳಾಗಿರಬಹುದು. ಯೋಚಿಸಿ ಧರಿಸಿ. ಅಪಾರ್ಥಕ್ಕೆ ಎಡೆಯಾಗದಂತೆ ನೋಡಿಕೊಳ್ಳಿ. ಚಿತ್ರದ ಎಡಬದಿಯಲ್ಲಿರುವ ಟಿ-ಶರ್ಟ್ ಬದಲಿಗೆ ಬಲಬದಿಯಲ್ಲಿರುವ ಟಿ-ಶರ್ಟ್ ಧರಿಸಿ, ಜನರ ಪ್ರತಿಕ್ರಿಯೆ ಗಮನಿಸಿ.

ನೀವು ಇನ್ನೊಬ್ಬರಿಗೆ ಹೇಳಿಕೊಳ್ಳಬೇಕೆಂದಿರುವುದನ್ನು ಇತರರು ತಾವೇ ನಿಮಗೆ ಓದಿ ಹೇಳುತ್ತಾರೆ.

ನಿಮ್ಮ ಬಾಡಿ ಲಾಂಗ್ವೇಜ್ ಸುಧಾರಿಸಿಕೊಳ್ಳಲು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ಅಥವಾ ಯಾವುದಾದರೂ ಸಂದರ್ಭದಲ್ಲಿ ವೀಡಿಯೋ ತೆಗೆದಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಕೇಳಿ ಫೀಡ್-ಬ್ಯಾಕ್ ಪಡೆಯಿರಿ. ನಿಮ್ಮ ದೈಹಿಕ ಭಾಷೆ ಉತ್ತಮಗೊಂಡಷ್ಟೂ ನಿಮ್ಮ ಸಂವಹನ ಕಲೆಯೂ ಉತ್ತಮಗೊಳ್ಳುತ್ತದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಜಾ; ಗೊಂಬೆಯೊಂದಿಗೆ ‘ಅಂತ್ಯಕ್ರಿಯೆ’ ಆಟ ಆಡುವ ಎಳೆಯ ಮಕ್ಕಳ ವಿಡಿಯೋ ವೈರಲ್; ಸುತ್ತಲಿನ ಘಟನೆಯನ್ನು ಪುನರಾವರ್ತಿಸುವ ಮಕ್ಕಳು

ಅಕ್ಟೋಬರ್ 2023 ರಲ್ಲಿ ಇಸ್ರೇಲಿ ಮಿಲಿಟರಿ ದಾಳಿಯನ್ನು ಪ್ರಾರಂಭಿಸಿದ ನಂತರ ಗಾಜಾದಿಂದ ದುಃಖಕರ ದೃಶ್ಯಗಳು ಹೊರಹೊಮ್ಮುತ್ತಿವೆ. ಇತ್ತೀಚಿನ ಒಂದು ಘಟನೆಯಲ್ಲಿ, ಚಿಕ್ಕ ಮಕ್ಕಳು ಅಂತ್ಯಕ್ರಿಯೆಗಾಗಿ ಗೊಂಬೆಯನ್ನು ಹೊತ್ತುಕೊಂಡು ಹೋಗುವುದನ್ನು ಕಾಣಬಹುದು - ಇದು ಅವರು...

ದೆಹಲಿ| ಆಳವಾದ ಚರಂಡಿಗೆ ಬಿದ್ದು ನೈರ್ಮಲ್ಯ ಕಾರ್ಮಿಕ ಸಾವು; ನ್ಯಾಯಕ್ಕೆ ಆಗ್ರಹಿಸಿದ ಮೃತನ ಕುಟುಂಬ

ಮಾರ್ಚ್ 30 ರಂದು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್ ಪ್ರದೇಶದಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಆಳವಾದ ಚರಂಡಿ ಸ್ವಚ್ಛಗೊಳಿಸುವ ಸಮಯದಲ್ಲಿ ಯುವ ನೈರ್ಮಲ್ಯ ಕಾರ್ಮಿಕ ರಾಹುಲ್ ಎಂಬುವವರು ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 2:00 ರ ಸುಮಾರಿಗೆ...

ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಆಸ್ಪತ್ರೆಗೆ ದಾಖಲು; ಕಾರ್ಯಕ್ರಮದಲ್ಲಿ ಏಕಾಏಕಿ ಕುಸಿದು ಬಿದ್ದು ಅಸ್ವಸ್ಥ

ಬೆಂಗಳೂರು: ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಭಾಷಣದ ವೇಳೆ ಕುಸಿದು ಬಿದ್ದು ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಪ್ರಿಲ್ 4ರ, ಶುಕ್ರವಾರ ಬೆಂಗಳೂರಿನ ಕೊಂಡಜಿ ಬಸಪ್ಪ ಸಭಾಂಗಣದಲ್ಲಿ...

ಎಸ್‌ಎಸ್‌ಎಲ್‌ಸಿಯಲ್ಲಿ ತೃತೀಯ ಭಾಷೆಗೆ ಗ್ರೇಡ್: ನಿರ್ಧಾರ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ರಾಜ್ಯಪಾಲ ಗೆಹ್ಲೋಟ್ 

ಬೆಂಗಳೂರು: 10ನೇ ತರಗತಿ ಪರೀಕ್ಷೆಯಲ್ಲಿ ತೃತೀಯ ಭಾಷೆಯ ವಿಷಯಕ್ಕೆ ಅಂಕಗಳನ್ನು ಬದಲಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ. ಸರ್ಕಾರವು ಈ ನಿರ್ಧಾರವನ್ನು "ಸಮಗ್ರವಾಗಿ ಪರಿಶೀಲಿಸಬೇಕು" ಎಂದು ಲೋಕಭವನವು...

ತಿರುಚ್ಚಿ ಪೂರ್ವದ ಪೆರಂಬೂರಿನಲ್ಲಿ ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ಹಲವು ವ್ಯತ್ಯಾಸಗಳಿರುವುದಾಗಿ ವರದಿ  

ಚೆನ್ನೈ: ನಟ ಮತ್ತು ಟಿವಿಕೆ ಸಂಸ್ಥಾಪಕ ವಿಜಯ್ ಸಲ್ಲಿಸಿದ ಎರಡು ಪ್ರತ್ಯೇಕ ಚುನಾವಣಾ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡಿದ್ದು, ವಿಧಾನಸಭಾ ಚುನಾವಣೆಗೆ ಮುನ್ನ ಕಾನೂನು ಮತ್ತು ರಾಜಕೀಯ ಪರಿಶೀಲನೆಗೆ ಅವಕಾಶ ನೀಡುವ ಸಾಧ್ಯತೆಯಿದೆ. ಪೆರಂಬೂರು ಮತ್ತು...

ಉತ್ತಮ್ ನಗರದಲ್ಲಿ ಶಾಂತಿ ಕಾಪಾಡುವಲ್ಲಿ ದೆಹಲಿ ಪೊಲೀಸರ ಪ್ರಯತ್ನಗಳನ್ನು ಶ್ಲಾಘಿಸಿದ ಎಪಿಸಿಆರ್

ಈದ್ ಅಲ್-ಫಿತರ್, ರಾಮ ನವಮಿ ಮತ್ತು ಹನುಮಾನ್ ಜಯಂತಿ ಸೇರಿದಂತೆ ಧಾರ್ಮಿಕ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಉತ್ತಮ್ ನಗರ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ರಕ್ಷಣಾ...

ದಲಿತ ಸಮುದಾಯಕ್ಕೆ ಕ್ಷಮೆಯಾಚಿಸಿದ ನೇಪಾಳದ ಹೊಸ ಸರ್ಕಾರ

ಪ್ರಧಾನಿ ಬಾಲೇಂದ್ರ ಶಾ ಅವರ ನೇಪಾಳದ ಹೊಸ ಸರ್ಕಾರದ 100 ಅಂಶಗಳ ಸುಧಾರಣಾ ಕಾರ್ಯಸೂಚಿಯಡಿಯಲ್ಲಿ, ಮುಂದಿನ 15 ದಿನಗಳ ಒಳಗೆ ದಲಿತರು ಮತ್ತು ಐತಿಹಾಸಿಕವಾಗಿ ಹೊರಗಿಡಲ್ಪಟ್ಟ ಇತರೆ ಸಮುದಾಯಗಳಿಗೆ 'ಔಪಚಾರಿಕ ಕ್ಷಮೆಯಾಚನೆ' ಕೇಳುವುದಾಗಿ...

‘ಯಾರು ಹೆದರುತ್ತಾನೋ ಅವನು ಸತ್ತಂತೆ’: ರಾಘವ್ ಛಡ್ಡಾಗೆ ತೀವ್ರವಾಗಿ ಪ್ರತಿಕ್ರಿಯೆ ನೀಡಿದ ಎಎಪಿ ನಾಯಕ ಸೌರಭ್ ಭಾರದ್ವಾಜ್ 

ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ವೀಡಿಯೊ ಸಂದೇಶದಲ್ಲಿ ಆಪ್ ಸಂಸದ ರಾಘವ್ ಛಡ್ಡಾ ಅವರು ಸಂಸತ್ತಿನಲ್ಲಿ "ಸಾಫ್ಟ್ ಪಿಆರ್" ನಲ್ಲಿ ತೊಡಗಿದ್ದಾರೆ...

ಚಂಡೀಗಢ ಬಿಜೆಪಿ ಕಚೇರಿ ಸ್ಫೋಟ: ಪಂಜಾಬ್ ಕೌಂಟರ್ ಇಂಟೆಲಿಜೆನ್ಸ್ ಪಡೆಯಿಂದ ಇಬ್ಬರು ಶಂಕಿತರ ಮನೆಗಳ ಮೇಲೆ ದಾಳಿ

ಚಂಡೀಗಢದಲ್ಲಿರುವ ಪಂಜಾಬ್ ಬಿಜೆಪಿ ಕಚೇರಿಯ ಹೊರಗೆ ಸ್ಫೋಟ ನಡೆಸಿದ ಆರೋಪದ ಮೇಲೆ ಇಬ್ಬರು ಶಂಕಿತರ ಮನೆಗಳ ಮೇಲೆ  ಪಂಜಾಬ್ ಪೊಲೀಸರ ಗುಪ್ತಚರ ನಿಗ್ರಹ ದಳವು ಇಂದು ಮುಂಜಾನೆ ದಾಳಿ ನಡೆಸಿದೆ.  ರೋಪರ್ ಜಿಲ್ಲೆಯ ಮೊರಿಂಡಾ ಪ್ರದೇಶದ...

‘ನನ್ನ ಮೌನವನ್ನು ಸೋಲು ಎಂದು ತಿಳಿಯಬೇಡಿ’’: ರಾಜ್ಯಸಭೆಯಲ್ಲಿ ಪದಚ್ಯುತಿಯ ನಂತರ ಎಎಪಿಗೆ ತಿರಗೇಟು ನೀಡಿದ ಸಂಸದ ರಾಘವ್ ಛಡ್ಡಾ

ರಾಜ್ಯಸಭೆಯಲ್ಲಿ ಪಕ್ಷದ ಉಪ ನಾಯಕನ ಸ್ಥಾನದಿಂದ ತೆಗೆದುಹಾಕಲ್ಪಟ್ಟ ಒಂದು ದಿನದ ನಂತರ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಛಡ್ಡಾ ಅವರು ಶುಕ್ರವಾರ "ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ಪಕ್ಷದ...