Homeಮುಖಪುಟಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ 'ಬಾಡಿ ಲಾಂಗ್ವೇಜ್' ಹೇಗಿರಬೇಕು ಗೊತ್ತೆ?

ಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ ‘ಬಾಡಿ ಲಾಂಗ್ವೇಜ್’ ಹೇಗಿರಬೇಕು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ -14

ಸಂವಹನ ಕಲೆ –2 ಶಬ್ದಾತೀತ ಭಾಷೆ (ಬಾಡಿ ಲಾಂಗ್ವೇಜ್ – ನಾನ್ ವರ್ಬಲ್ ಕಮ್ಯುನಿಕೇಷನ್)

ಸಂವಹನ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಾಧ್ಯಮ ಶಬ್ದಾತೀತ ದೈಹಿಕ ಭಾಷೆ ಅಥವಾ ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಎಂದು ಕರೆಯಲ್ಪಡುತ್ತದೆ. ಇದು ಶಬ್ದ ಅಥವಾ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮ. ಶಬ್ದ ಮತ್ತು ಭಾಷೆಯ ಜೊತೆ ಸೇರಿದಾಗ ಇದು ಸಂಪೂರ್ಣ ಶಕ್ತಿಶಾಲಿ ವಾಕ್-ದೃಶ್ಯ ಮಾಧ್ಯಮವಾಗುತ್ತದೆ. ನಮ್ಮ ದಿನನಿತ್ಯದ ಸಂವಹನದಲ್ಲಿ ಸುಮಾರು 60-70% ಸಮಯ ಬಳಕೆಯಾಗುವ ಮಾಧ್ಯಮ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್, ಇ-ಮೇಲ್ ಮುಂತಾದವುಗಳಲ್ಲಿ ಇದರ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಾವನೆಗಳನ್ನು ಸ್ಥಬ್ದ ಅಥವಾ ಚಲಿಸುವ ಚಿತ್ರಗಳ ಮೂಲಕ ಬಿಂಬಿಸುವ ಇವನ್ನು ಎಮೋಟಿಕಾನ್ ಅಥವಾ ಎಮೋಜಿ ಎನ್ನುತ್ತಾರೆ.

ದೈಹಿಕ ಭಾಷೆ ನಾವು ಆಡುವ ಭಾಷೆಗಿಂತ 10-15 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಇದರ ಬಳಕೆಯಿಂದ ಸಂವಹನ ಸುಲಭವಾಗುತ್ತದೆ, ಆದರೆ ದೈಹಿಕ ಭಾಷೆ ಅಸಮರ್ಪಕವಾಗಿದ್ದಾಗ ಸಂದೇಶ ತನ್ನ ಅರ್ಥ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಶಬ್ದಾತೀತ ದೈಹಿಕ ಭಾಷೆಯಲ್ಲಿ ಬಳಕೆಯಾಗುವ ಅಂಶಗಳು:

·         ದೃಷ್ಟಿ ಸಂಪರ್ಕ (ಐ ಕಾಂಟ್ಯಾಕ್ಟ್)

·         ಮುಖ ತಿರುಚುವಿಕೆ

·         ಕಣ್ಣು ಮಿಟುಕಿಸುವುದು

·         ಮೈ-ಕೈ ಹಾವಭಾವ

·         ದೇಹದ ನಿಲುವು (ಪಾಷ್ಚರ್)

·         ಸಾಮೀಪ್ಯ (ಅಥವಾ ದೂರ)

·         ಸ್ಪರ್ಶ

·         ವಿನೋದ/ಅಣಕು

·         ಮೌನ

·         ಸಂಕೇತಗಳು

·         ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು

ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿದಲ್ಲಿ ಸಂವಹನ ಪ್ರಭಾವಶಾಲಿಯಾಗಿರುತ್ತದೆ. ದೈಹಿಕ ಸಂದೇಶಗಳು ಮಾತಿನ ಅರ್ಥಕ್ಕೆ ಪೂರಕವಾಗಿರಬೇಕು, ಅದರ ಮೌಲ್ಯವನ್ನು ವೃದ್ಧಿಸುವಂತಿರಬೇಕು, ಹಾಗಿಲ್ಲದಿದ್ದಾಗ  ಅನರ್ಥಕ್ಕೂ ಆಸ್ಪದವಿರುತ್ತದೆ. ಕೆಳಕಂಡ ಚಿತ್ರದಲ್ಲಿ ದೈಹಿಕ ಭಾಷೆಗೂ ಹೇಳಿರುವ ಮಾತಿಗೂ ತಾಳೆ ಇಲ್ಲದಿರುವುದನ್ನು ಕಾಣಬಹುದು.

ದೈಹಿಕ ಭಾಷೆಯನ್ನು ಬಳಸಿಕೊಳ್ಳುವುದು ಹೇಗೆ?

ದೃಷ್ಟಿ-ಸಂಪರ್ಕ: ನೀವು ಮಾತನಾಡುತ್ತಿರುವವರ ಜೊತೆ ದೃಷ್ಟಿ ಸಂಪರ್ಕದಿಂದಿರಿ. ಎಲ್ಲೋ ನೋಡಿಕೊಂಡು ಮಾತನಾಡಿದಲ್ಲಿ ನಿಮಗೆ ನಿಮ್ಮ ಮೇಲೆ ಅಥವಾ ಅವರ ಮೇಲೆ ನಂಬಿಕೆ/ಆಸಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ. ಗುಂಪನ್ನು ಸಂಬೋಧಿಸಿ ಮಾತನಾಡುವಾಗ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಡಿ, ಮಿಕ್ಕವರು ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಯಾರು ಹೆಚ್ಚು ಆಸಕ್ತಿ (ಪ್ರತ್ಯಾದಾನ) ನೀಡುತ್ತಿದ್ದಾರೋ ಅವರನ್ನು ಹೆಚ್ಚು ಸಲ ಗಮನಿಸುವುದರಲ್ಲಿ ತಪ್ಪಿಲ್ಲ ಅಥವಾ ಯಾರು ಋಣಾತ್ಮಕ ಪ್ರತ್ಯಾದಾನ ನೀಡುತ್ತಿದ್ದಾರೋ ಅವರನ್ನು ನಿರ್ಲಕ್ಷಿಸುವುದರಲ್ಲಿ ಅಡ್ಡಿಯಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಸ್ಥೈರ್ಯವೂ ಹೆಚ್ಚುತ್ತದೆ.

ಮುಖ ತಿರುಚುವಿಕೆ: ನಾವು ಮಾತನಾಡುತ್ತಿರುವ ವಿಷಯಕ್ಕೆ ತಕ್ಕ ಮುಖಚರ್ಯೆ ಇರಬೇಕು ಆದರೆ ಮುಖದಲ್ಲಿ ಮಂದಹಾಸ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮುಖಚರ್ಯೆಯಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ, ಎಂಬ (ಒಂಬತ್ತು) ನವರಸಗಳನ್ನು ಸಮರ್ಪಕವಾಗಿ ಬಿಂಬಿಸಬಹುದು. ಅದಕ್ಕೆ ನೀವು ಭರತನಾಟ್ಯ ಅಥವಾ ಮಿಕ್ಕ ಪ್ರದರ್ಶನ ಕಲೆಯ ತಜ್ಞರಾಗಿರಲೇಬೇಕೆಂದಿಲ್ಲ.

ನಿಮ್ಮ ಮಾತಿನ ಸಂದರ್ಭಕ್ಕೆ ತಕ್ಕಂತೆ ಮುಖಚರ್ಯೆ ಹೊಂದಿಸಿಕೊಳ್ಳಿ ಆದರೆ ಮಿಕ್ಕವರ ಬಗ್ಗೆ ಸೊಟ್ಟಮೂತಿ ಮಾಡುವುದನ್ನು ತಪ್ಪಿಸಿ.

ದೇಹದ ನಿಲುವು (ಪಾಷ್ಚರ್): ಇತರರೊಂದಿಗೆ ಮಾತನಾಡುವಾಗ ನೀವು ಸ್ವಲ್ಪ ಅವರ ಮುಂದಕ್ಕೆ ಬಗ್ಗಿದ್ದರೆ ಅವರ ಬಗ್ಗೆ ವಿನಯ/ಆಸಕ್ತಿ ತೋರಿಸುತ್ತದೆ, ತೀರಾ ಮುಂದಕ್ಕೆ ಬಗ್ಗಿದ್ದರೆ ಅದು ಅತಿ ವಿನಯ ಸೂಚಿಸುತ್ತದೆ ಅಥವಾ ಮುಗ್ಗರಿಸಿ ಮುಂದಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು: ದೃಷ್ಟಿ-ಸಂಪರ್ಕ ಮತ್ತು ನವರಸಕ್ಕೆ ಅನುಗುಣವಾಗಿಲ್ಲವಾದಾಗ ವೃಥಾ ಕಣ್ಣು ಮಿಟುಕಿಸುವುದು ಅಥವಾ ರೆಪ್ಪೆ ಬಡಿಯುವುದನ್ನು ಬಿಡಿ. ಇದೂ ಸಹ ತಪ್ಪು ಸಂದೇಶ ರವಾನಿಸುತ್ತದೆ.

ಮೈ-ಕೈ ಹಾವಭಾವ: ನಿಮ್ಮ ಭಾವನೆಗನುಗುಣವಾಗಿ ಕೈಗಳನ್ನು ಬಳಸಿ, ಅವನ್ನು ಕೋಟ್-ಪ್ಯಾಂಟ್ ಜೇಬಿನಲ್ಲಿ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಬೇಡಿ. ಅಂಗೈಗಳನ್ನು ಮೇಲಕ್ಕೆ ಮಾಡಿದ್ದಾಗ ಅದು ನಿಮ್ಮ ಮುಕ್ತ ವ್ಯಕ್ತಿತ್ವ ಸೂಚಿಸುತ್ತದೆ. ಕೈಗಳು ನಿಮ್ಮ ಕಡೆಗೇ ತೋರಿಸುತ್ತಿದ್ದಲ್ಲಿ ಇತರರಿಂದ ನಿಮ್ಮನ್ನು ನೀವೇ ದೂರ ಇರಿಸುತ್ತಿದ್ದೀರೆಂಬುದನ್ನು ತೋರಿಸುತ್ತದೆ.

ಸಾಮೀಪ್ಯ (ಅಥವಾ ದೂರ): ಇದು ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸಾಮೀಪ್ಯ ಅಥವಾ ದೂರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಎಲ್ಲೆ ಮೀರಬೇಡಿ. ಅದರಲ್ಲೂ ಲಿಂಗಬೇಧ ಗಮನದಲ್ಲಿಟ್ಟುಕೊಂಡು, ನಿಮ್ಮ ಲಕ್ಷ್ಮಣ ರೇಖೆ ನೀವೇ ಎಳೆದುಕೊಂಡು, ಅದನ್ನು ದಾಟದಂತೆ ಎಚ್ಚರಿಕೆ ವಹಿಸಿ.

ಸ್ಪರ್ಶ:ಇದು ಸಹ ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸ್ಪರ್ಷದ ಬಳಕೆ ಇರುವಂತೆ ನೋಡಿಕೊಳ್ಳಿ.

ವಿನೋದ/ಅಣಕು: ವಿನೋದ/ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವೂ ಸಹ ಹಾಸ್ಯ ಕಲಾವಿದರಾಗಿಲ್ಲದಿದ್ದರೆ, ಇತರರನ್ನು ಅಣಕಿಸಿ ಹಾಸ್ಯದ ಉತ್ಪನ್ನಕ್ಕೆ ಪ್ರಯತ್ನಿಸಬೇಡಿ. ಇದು ತೊಂದರೆಗೆ ಕಾರಣವಾಗುತ್ತದೆ.

ಮೌನ: ಮಾತು ಮುತ್ತಾದರೆ ಮೌನ ಚಿನ್ನ ಎನ್ನುತ್ತಾರೆ. ಸಮರ್ಪಕವಾಗಿ ಬಳಸಿಕೊಳ್ಳಿ. ಇನ್ನೊಬ್ಬರು ಪ್ರತಿಕ್ರಯಿಸುತ್ತಿರುವಾಗ ನೀವು ಮೌನವಾಗಿರಿ. ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಮೌನವೇ ಉತ್ತರವಾದಲ್ಲಿ ಅದನ್ನು ಮಿಕ್ಕವರು ತಪ್ಪಾಗಿ ಗ್ರಹಿಸಬಹುದು.

ಸಂಕೇತಗಳು: ಯಾವುದೇ ರೀತಿಯದ್ದಾಗಿರಬಹುದು. ಕೈ ಸಂಜ್ಞೆ ಅಥವಾ ಬೆರಳಸಂಜ್ಞೆ ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದಿರಿ. ಕೆಲವು ಬೆರಳು ಅಷ್ಟು ಗೌರಪೂರ್ವಕವಲ್ಲ. ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸುವಾಗ ಮೂರು ಬೆರಳು ನಮ್ಮ ಕಡೆಗೆ ಇರುತ್ತವೆ ಎಂಬುದನ್ನು ಮರೆಯಬೇಡಿ.

ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು:  ಇವು ನಿಮ್ಮ ಪೋಷಾಕು, ಅದರ ಬಣ್ಣ ಅಥವಾ ಅದರೊಂದಿಗೆ ಧರಿಸಿರುವ ಇತರ ಸಾಧನ ಸಾಮಗ್ರಿಗಳಾಗಿರಬಹುದು. ಯೋಚಿಸಿ ಧರಿಸಿ. ಅಪಾರ್ಥಕ್ಕೆ ಎಡೆಯಾಗದಂತೆ ನೋಡಿಕೊಳ್ಳಿ. ಚಿತ್ರದ ಎಡಬದಿಯಲ್ಲಿರುವ ಟಿ-ಶರ್ಟ್ ಬದಲಿಗೆ ಬಲಬದಿಯಲ್ಲಿರುವ ಟಿ-ಶರ್ಟ್ ಧರಿಸಿ, ಜನರ ಪ್ರತಿಕ್ರಿಯೆ ಗಮನಿಸಿ.

ನೀವು ಇನ್ನೊಬ್ಬರಿಗೆ ಹೇಳಿಕೊಳ್ಳಬೇಕೆಂದಿರುವುದನ್ನು ಇತರರು ತಾವೇ ನಿಮಗೆ ಓದಿ ಹೇಳುತ್ತಾರೆ.

ನಿಮ್ಮ ಬಾಡಿ ಲಾಂಗ್ವೇಜ್ ಸುಧಾರಿಸಿಕೊಳ್ಳಲು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ಅಥವಾ ಯಾವುದಾದರೂ ಸಂದರ್ಭದಲ್ಲಿ ವೀಡಿಯೋ ತೆಗೆದಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಕೇಳಿ ಫೀಡ್-ಬ್ಯಾಕ್ ಪಡೆಯಿರಿ. ನಿಮ್ಮ ದೈಹಿಕ ಭಾಷೆ ಉತ್ತಮಗೊಂಡಷ್ಟೂ ನಿಮ್ಮ ಸಂವಹನ ಕಲೆಯೂ ಉತ್ತಮಗೊಳ್ಳುತ್ತದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...