Homeಮುಖಪುಟಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ 'ಬಾಡಿ ಲಾಂಗ್ವೇಜ್' ಹೇಗಿರಬೇಕು ಗೊತ್ತೆ?

ಮತ್ತೊಬ್ಬರೊಂದಿಗೆ ಮಾತಾಡುವಾಗ ನಿಮ್ಮ ‘ಬಾಡಿ ಲಾಂಗ್ವೇಜ್’ ಹೇಗಿರಬೇಕು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ -14

ಸಂವಹನ ಕಲೆ –2 ಶಬ್ದಾತೀತ ಭಾಷೆ (ಬಾಡಿ ಲಾಂಗ್ವೇಜ್ – ನಾನ್ ವರ್ಬಲ್ ಕಮ್ಯುನಿಕೇಷನ್)

ಸಂವಹನ ಕಲೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಮಾಧ್ಯಮ ಶಬ್ದಾತೀತ ದೈಹಿಕ ಭಾಷೆ ಅಥವಾ ಬಾಡಿ ಲಾಂಗ್ವೇಜ್ (ನಾನ್-ವರ್ಬಲ್ ಕಮ್ಯುನಿಕೇಷನ್) ಎಂದು ಕರೆಯಲ್ಪಡುತ್ತದೆ. ಇದು ಶಬ್ದ ಅಥವಾ ಭಾಷೆಗಿಂತಲೂ ಹೆಚ್ಚು ಪ್ರಭಾವಶಾಲಿಯಾದ ಮಾಧ್ಯಮ. ಶಬ್ದ ಮತ್ತು ಭಾಷೆಯ ಜೊತೆ ಸೇರಿದಾಗ ಇದು ಸಂಪೂರ್ಣ ಶಕ್ತಿಶಾಲಿ ವಾಕ್-ದೃಶ್ಯ ಮಾಧ್ಯಮವಾಗುತ್ತದೆ. ನಮ್ಮ ದಿನನಿತ್ಯದ ಸಂವಹನದಲ್ಲಿ ಸುಮಾರು 60-70% ಸಮಯ ಬಳಕೆಯಾಗುವ ಮಾಧ್ಯಮ. ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಮ್, ಇ-ಮೇಲ್ ಮುಂತಾದವುಗಳಲ್ಲಿ ಇದರ ಬಳಕೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಭಾವನೆಗಳನ್ನು ಸ್ಥಬ್ದ ಅಥವಾ ಚಲಿಸುವ ಚಿತ್ರಗಳ ಮೂಲಕ ಬಿಂಬಿಸುವ ಇವನ್ನು ಎಮೋಟಿಕಾನ್ ಅಥವಾ ಎಮೋಜಿ ಎನ್ನುತ್ತಾರೆ.

ದೈಹಿಕ ಭಾಷೆ ನಾವು ಆಡುವ ಭಾಷೆಗಿಂತ 10-15 ಪಟ್ಟು ಹೆಚ್ಚು ಬಲಶಾಲಿಯಾಗಿರುತ್ತದೆ. ಇದರ ಬಳಕೆಯಿಂದ ಸಂವಹನ ಸುಲಭವಾಗುತ್ತದೆ, ಆದರೆ ದೈಹಿಕ ಭಾಷೆ ಅಸಮರ್ಪಕವಾಗಿದ್ದಾಗ ಸಂದೇಶ ತನ್ನ ಅರ್ಥ ಕಳೆದುಕೊಳ್ಳುವುದಷ್ಟೇ ಅಲ್ಲ, ಅಪಾರ್ಥಕ್ಕೂ ಎಡೆ ಮಾಡಿಕೊಡುತ್ತದೆ. ಶಬ್ದಾತೀತ ದೈಹಿಕ ಭಾಷೆಯಲ್ಲಿ ಬಳಕೆಯಾಗುವ ಅಂಶಗಳು:

·         ದೃಷ್ಟಿ ಸಂಪರ್ಕ (ಐ ಕಾಂಟ್ಯಾಕ್ಟ್)

·         ಮುಖ ತಿರುಚುವಿಕೆ

·         ಕಣ್ಣು ಮಿಟುಕಿಸುವುದು

·         ಮೈ-ಕೈ ಹಾವಭಾವ

·         ದೇಹದ ನಿಲುವು (ಪಾಷ್ಚರ್)

·         ಸಾಮೀಪ್ಯ (ಅಥವಾ ದೂರ)

·         ಸ್ಪರ್ಶ

·         ವಿನೋದ/ಅಣಕು

·         ಮೌನ

·         ಸಂಕೇತಗಳು

·         ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು

ಇವೆಲ್ಲವನ್ನೂ ಸಮರ್ಪಕವಾಗಿ ಬಳಸಿದಲ್ಲಿ ಸಂವಹನ ಪ್ರಭಾವಶಾಲಿಯಾಗಿರುತ್ತದೆ. ದೈಹಿಕ ಸಂದೇಶಗಳು ಮಾತಿನ ಅರ್ಥಕ್ಕೆ ಪೂರಕವಾಗಿರಬೇಕು, ಅದರ ಮೌಲ್ಯವನ್ನು ವೃದ್ಧಿಸುವಂತಿರಬೇಕು, ಹಾಗಿಲ್ಲದಿದ್ದಾಗ  ಅನರ್ಥಕ್ಕೂ ಆಸ್ಪದವಿರುತ್ತದೆ. ಕೆಳಕಂಡ ಚಿತ್ರದಲ್ಲಿ ದೈಹಿಕ ಭಾಷೆಗೂ ಹೇಳಿರುವ ಮಾತಿಗೂ ತಾಳೆ ಇಲ್ಲದಿರುವುದನ್ನು ಕಾಣಬಹುದು.

ದೈಹಿಕ ಭಾಷೆಯನ್ನು ಬಳಸಿಕೊಳ್ಳುವುದು ಹೇಗೆ?

ದೃಷ್ಟಿ-ಸಂಪರ್ಕ: ನೀವು ಮಾತನಾಡುತ್ತಿರುವವರ ಜೊತೆ ದೃಷ್ಟಿ ಸಂಪರ್ಕದಿಂದಿರಿ. ಎಲ್ಲೋ ನೋಡಿಕೊಂಡು ಮಾತನಾಡಿದಲ್ಲಿ ನಿಮಗೆ ನಿಮ್ಮ ಮೇಲೆ ಅಥವಾ ಅವರ ಮೇಲೆ ನಂಬಿಕೆ/ಆಸಕ್ತಿ ಇಲ್ಲ ಎಂಬ ಸಂದೇಶ ಹೋಗುತ್ತದೆ. ಗುಂಪನ್ನು ಸಂಬೋಧಿಸಿ ಮಾತನಾಡುವಾಗ ಕೇವಲ ಓರ್ವ ವ್ಯಕ್ತಿಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಬೇಡಿ, ಮಿಕ್ಕವರು ತಪ್ಪು ಕಲ್ಪನೆಗೆ ಒಳಗಾಗುತ್ತಾರೆ. ಯಾರು ಹೆಚ್ಚು ಆಸಕ್ತಿ (ಪ್ರತ್ಯಾದಾನ) ನೀಡುತ್ತಿದ್ದಾರೋ ಅವರನ್ನು ಹೆಚ್ಚು ಸಲ ಗಮನಿಸುವುದರಲ್ಲಿ ತಪ್ಪಿಲ್ಲ ಅಥವಾ ಯಾರು ಋಣಾತ್ಮಕ ಪ್ರತ್ಯಾದಾನ ನೀಡುತ್ತಿದ್ದಾರೋ ಅವರನ್ನು ನಿರ್ಲಕ್ಷಿಸುವುದರಲ್ಲಿ ಅಡ್ಡಿಯಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಆತ್ಮಸ್ಥೈರ್ಯವೂ ಹೆಚ್ಚುತ್ತದೆ.

ಮುಖ ತಿರುಚುವಿಕೆ: ನಾವು ಮಾತನಾಡುತ್ತಿರುವ ವಿಷಯಕ್ಕೆ ತಕ್ಕ ಮುಖಚರ್ಯೆ ಇರಬೇಕು ಆದರೆ ಮುಖದಲ್ಲಿ ಮಂದಹಾಸ ಎಲ್ಲರಿಗೂ ಇಷ್ಟವಾಗುತ್ತದೆ. ನಮ್ಮ ಮುಖಚರ್ಯೆಯಲ್ಲಿ ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ, ಎಂಬ (ಒಂಬತ್ತು) ನವರಸಗಳನ್ನು ಸಮರ್ಪಕವಾಗಿ ಬಿಂಬಿಸಬಹುದು. ಅದಕ್ಕೆ ನೀವು ಭರತನಾಟ್ಯ ಅಥವಾ ಮಿಕ್ಕ ಪ್ರದರ್ಶನ ಕಲೆಯ ತಜ್ಞರಾಗಿರಲೇಬೇಕೆಂದಿಲ್ಲ.

ನಿಮ್ಮ ಮಾತಿನ ಸಂದರ್ಭಕ್ಕೆ ತಕ್ಕಂತೆ ಮುಖಚರ್ಯೆ ಹೊಂದಿಸಿಕೊಳ್ಳಿ ಆದರೆ ಮಿಕ್ಕವರ ಬಗ್ಗೆ ಸೊಟ್ಟಮೂತಿ ಮಾಡುವುದನ್ನು ತಪ್ಪಿಸಿ.

ದೇಹದ ನಿಲುವು (ಪಾಷ್ಚರ್): ಇತರರೊಂದಿಗೆ ಮಾತನಾಡುವಾಗ ನೀವು ಸ್ವಲ್ಪ ಅವರ ಮುಂದಕ್ಕೆ ಬಗ್ಗಿದ್ದರೆ ಅವರ ಬಗ್ಗೆ ವಿನಯ/ಆಸಕ್ತಿ ತೋರಿಸುತ್ತದೆ, ತೀರಾ ಮುಂದಕ್ಕೆ ಬಗ್ಗಿದ್ದರೆ ಅದು ಅತಿ ವಿನಯ ಸೂಚಿಸುತ್ತದೆ ಅಥವಾ ಮುಗ್ಗರಿಸಿ ಮುಂದಕ್ಕೆ ಬೀಳುವ ಸಾಧ್ಯತೆ ಇರುತ್ತದೆ.

ಕಣ್ಣು ಮಿಟುಕಿಸುವುದು: ದೃಷ್ಟಿ-ಸಂಪರ್ಕ ಮತ್ತು ನವರಸಕ್ಕೆ ಅನುಗುಣವಾಗಿಲ್ಲವಾದಾಗ ವೃಥಾ ಕಣ್ಣು ಮಿಟುಕಿಸುವುದು ಅಥವಾ ರೆಪ್ಪೆ ಬಡಿಯುವುದನ್ನು ಬಿಡಿ. ಇದೂ ಸಹ ತಪ್ಪು ಸಂದೇಶ ರವಾನಿಸುತ್ತದೆ.

ಮೈ-ಕೈ ಹಾವಭಾವ: ನಿಮ್ಮ ಭಾವನೆಗನುಗುಣವಾಗಿ ಕೈಗಳನ್ನು ಬಳಸಿ, ಅವನ್ನು ಕೋಟ್-ಪ್ಯಾಂಟ್ ಜೇಬಿನಲ್ಲಿ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರಬೇಡಿ. ಅಂಗೈಗಳನ್ನು ಮೇಲಕ್ಕೆ ಮಾಡಿದ್ದಾಗ ಅದು ನಿಮ್ಮ ಮುಕ್ತ ವ್ಯಕ್ತಿತ್ವ ಸೂಚಿಸುತ್ತದೆ. ಕೈಗಳು ನಿಮ್ಮ ಕಡೆಗೇ ತೋರಿಸುತ್ತಿದ್ದಲ್ಲಿ ಇತರರಿಂದ ನಿಮ್ಮನ್ನು ನೀವೇ ದೂರ ಇರಿಸುತ್ತಿದ್ದೀರೆಂಬುದನ್ನು ತೋರಿಸುತ್ತದೆ.

ಸಾಮೀಪ್ಯ (ಅಥವಾ ದೂರ): ಇದು ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸಾಮೀಪ್ಯ ಅಥವಾ ದೂರ ಇರುವಂತೆ ನೋಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ಎಲ್ಲೆ ಮೀರಬೇಡಿ. ಅದರಲ್ಲೂ ಲಿಂಗಬೇಧ ಗಮನದಲ್ಲಿಟ್ಟುಕೊಂಡು, ನಿಮ್ಮ ಲಕ್ಷ್ಮಣ ರೇಖೆ ನೀವೇ ಎಳೆದುಕೊಂಡು, ಅದನ್ನು ದಾಟದಂತೆ ಎಚ್ಚರಿಕೆ ವಹಿಸಿ.

ಸ್ಪರ್ಶ:ಇದು ಸಹ ನಿಮ್ಮ ನಡುವಣ ಬಾಂಧವ್ಯ ತೋರಿಸುತ್ತದೆ ಆದ್ದರಿಂದ ವ್ಯಕ್ತಿ, ಸಮಯ, ಪರಿಸ್ಥಿತಿಗೆ ತಕ್ಕಂತೆ ಸ್ಪರ್ಷದ ಬಳಕೆ ಇರುವಂತೆ ನೋಡಿಕೊಳ್ಳಿ.

ವಿನೋದ/ಅಣಕು: ವಿನೋದ/ಹಾಸ್ಯ ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವೂ ಸಹ ಹಾಸ್ಯ ಕಲಾವಿದರಾಗಿಲ್ಲದಿದ್ದರೆ, ಇತರರನ್ನು ಅಣಕಿಸಿ ಹಾಸ್ಯದ ಉತ್ಪನ್ನಕ್ಕೆ ಪ್ರಯತ್ನಿಸಬೇಡಿ. ಇದು ತೊಂದರೆಗೆ ಕಾರಣವಾಗುತ್ತದೆ.

ಮೌನ: ಮಾತು ಮುತ್ತಾದರೆ ಮೌನ ಚಿನ್ನ ಎನ್ನುತ್ತಾರೆ. ಸಮರ್ಪಕವಾಗಿ ಬಳಸಿಕೊಳ್ಳಿ. ಇನ್ನೊಬ್ಬರು ಪ್ರತಿಕ್ರಯಿಸುತ್ತಿರುವಾಗ ನೀವು ಮೌನವಾಗಿರಿ. ಮಧ್ಯೆ ಬಾಯಿ ಹಾಕಬೇಡಿ. ನಿಮ್ಮ ಮೌನವೇ ಉತ್ತರವಾದಲ್ಲಿ ಅದನ್ನು ಮಿಕ್ಕವರು ತಪ್ಪಾಗಿ ಗ್ರಹಿಸಬಹುದು.

ಸಂಕೇತಗಳು: ಯಾವುದೇ ರೀತಿಯದ್ದಾಗಿರಬಹುದು. ಕೈ ಸಂಜ್ಞೆ ಅಥವಾ ಬೆರಳಸಂಜ್ಞೆ ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದಿರಿ. ಕೆಲವು ಬೆರಳು ಅಷ್ಟು ಗೌರಪೂರ್ವಕವಲ್ಲ. ಇನ್ನೊಬ್ಬರ ಕಡೆ ಒಂದು ಬೆರಳು ತೋರಿಸುವಾಗ ಮೂರು ಬೆರಳು ನಮ್ಮ ಕಡೆಗೆ ಇರುತ್ತವೆ ಎಂಬುದನ್ನು ಮರೆಯಬೇಡಿ.

ಕಣ್ಣಿಗೆ ಕಾಣುವಂತಹ ಇತರ ಚಿನ್ಹೆಗಳು:  ಇವು ನಿಮ್ಮ ಪೋಷಾಕು, ಅದರ ಬಣ್ಣ ಅಥವಾ ಅದರೊಂದಿಗೆ ಧರಿಸಿರುವ ಇತರ ಸಾಧನ ಸಾಮಗ್ರಿಗಳಾಗಿರಬಹುದು. ಯೋಚಿಸಿ ಧರಿಸಿ. ಅಪಾರ್ಥಕ್ಕೆ ಎಡೆಯಾಗದಂತೆ ನೋಡಿಕೊಳ್ಳಿ. ಚಿತ್ರದ ಎಡಬದಿಯಲ್ಲಿರುವ ಟಿ-ಶರ್ಟ್ ಬದಲಿಗೆ ಬಲಬದಿಯಲ್ಲಿರುವ ಟಿ-ಶರ್ಟ್ ಧರಿಸಿ, ಜನರ ಪ್ರತಿಕ್ರಿಯೆ ಗಮನಿಸಿ.

ನೀವು ಇನ್ನೊಬ್ಬರಿಗೆ ಹೇಳಿಕೊಳ್ಳಬೇಕೆಂದಿರುವುದನ್ನು ಇತರರು ತಾವೇ ನಿಮಗೆ ಓದಿ ಹೇಳುತ್ತಾರೆ.

ನಿಮ್ಮ ಬಾಡಿ ಲಾಂಗ್ವೇಜ್ ಸುಧಾರಿಸಿಕೊಳ್ಳಲು ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ, ಅಥವಾ ಯಾವುದಾದರೂ ಸಂದರ್ಭದಲ್ಲಿ ವೀಡಿಯೋ ತೆಗೆದಿದ್ದಲ್ಲಿ ಅದನ್ನು ಸೂಕ್ಷ್ಮವಾಗಿ ಗಮನಿಸಿ, ನಿಮ್ಮ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಿ. ನಿಮ್ಮ ಸ್ನೇಹಿತರನ್ನು ಕೇಳಿ ಫೀಡ್-ಬ್ಯಾಕ್ ಪಡೆಯಿರಿ. ನಿಮ್ಮ ದೈಹಿಕ ಭಾಷೆ ಉತ್ತಮಗೊಂಡಷ್ಟೂ ನಿಮ್ಮ ಸಂವಹನ ಕಲೆಯೂ ಉತ್ತಮಗೊಳ್ಳುತ್ತದೆ.

 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...