HomeUncategorizedಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

ಔರಂಗಜೇಬ್ ಮತ್ತು ಮನಸು ಕಟ್ಟುವ ಕೆಲಸ

- Advertisement -
ಲೇಖನ: ಸಿದ್ದು. ಯಾಪಲಪರವಿ 
ನಟರಾಜ್ ಹೊನ್ನವಳ್ಳಿ ಅವರು ನಿರ್ದೇಶಿಸಿದ ಔರಂಗಜೇಬ್ ನಾಟಕವನ್ನು ಸಾಣೆಹಳ್ಳಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವೀಕ್ಷಿಸುವ ಅವಕಾಶ ಲಭಿಸಿತು. ಈಗಿರುವ ಸೂಕ್ಷ್ಮ ವಾತಾವರಣದಲ್ಲಿ ಮುಸ್ಲಿಂ ದೊರೆಗಳ ಜೀವನ ಆಧರಿಸಿ ನಾಟಕ ಆಡುವುದು ಕೊಂಚ ರಿಸ್ಕ್. ಅನವಶ್ಯಕ ವಿವಾದಗಳು ಸುತ್ತಿಕೊಳ್ಳುವ ಹೊತ್ತಿನಲ್ಲಿ ಯಾರ ಪರವಾಗಿ ಮಾತನಾಡಿದರೂ ಕಷ್ಟ.
ಪರ, ವಿರೋಧವೆಂಬ ಪೂರ್ವಗ್ರಹ ಇಟ್ಟುಕೊಂಡು ನಾಟಕ ನೋಡಿದೆ. ಆದರೆ ನಾಟಕ ನೋಡಿದ ಮೇಲೆ ಸಮಾಧಾನವಾಯಿತು. ನಾಟಕ ಯಾರ ಪರ ಅಥವಾ ವಿರೋಧವಾಗಿಯೂ ಇರದೆ ಕೇವಲ ಜೀವ ಪರವಾಗಿದೆ. ಶಹಜಾನ್, ದಾರಾ ಮತ್ತು ಔರಂಗಜೇಬ್ ಪಾತ್ರಗಳ ಮೂಲಕ ಮನುಷ್ಯನ ವಿವಿಧ ಮುಖಗಳನ್ನು ನಾಟಕ ಪರಿಚಯಿಸುವುದರಲ್ಲಿ ಯಶಸ್ವಿಯಾಗಿದೆ.
ಬುದ್ಧ ಬೋಧಿಸಿದ ಅನಾರೋಗ್ಯ, ಮುಪ್ಪು ಮತ್ತು ಸಾವಿನ ಭಯಾನಕತೆ ನಾಟಕ ನೋಡುವಾಗ ಅನುಭವಕ್ಕೆ ದಕ್ಕುತ್ತದೆ. ಸಾಯುವ ಹಂತದಲ್ಲಿ ಇರುವ ಮುದುಕ ಶಹಜಾನ್ ಕಾಣುವ ಕಪ್ಪು ಶಿಲೆಯ ಕನಸಿನ ಮಹಲಿನಿಂದ ನಾಟಕ ಆರಂಭವಾಗುತ್ತದೆ. ತಂದೆಯ ಕನಸು ನನಸಾಗಿಸಲು ಒಪ್ಪಿಕೊಳ್ಳುವ ದಾರಾನ ಜ್ಞಾನ, ಮಾನವೀಯತೆ ಮತ್ತು ಧರ್ಮ ಸಹಿಷ್ಣುತೆ ತಂದೆಯ ಕನಸನ್ನು ನನಸಾಗಿಸಲು ಸಾಲುವುದಿಲ್ಲ.
ಸಂಸ್ಕೃತಿ ಮತ್ತು ಕಲೆಯ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ಧಾರ್ಮಿಕ ನಂಬಿಕೆಗಳ ಕಾರಣದಿಂದ ವಿರೋಧಿಸುವ ಔರಂಗಜೇಬ್ ತಂದೆಯ ಕನಸನ್ನು ನನಸಾಗಿಸಲು ಅಡ್ಡಿಯಾಗುತ್ತಾನೆ. ಮುಸ್ಲಿಂ ಆಡಳಿತದ ಸಂದರ್ಭದಲ್ಲಿ ಅನೇಕ ಗೊಂದಲಗಳಿದ್ದವು, ಇಸ್ಲಾಂ ಧರ್ಮದ ಪರಿಪಾಲನೆಯ ಭರದಲ್ಲಿ ಧಾರ್ಮಿಕ ಸಹಿಷ್ಣುತೆಗೆ ಧಕ್ಕೆ ಆದದ್ದು ಸಹಜ.
ಧರ್ಮ ಮತ್ತು ರಾಜಕೀಯ ಸಂಘರ್ಷದ ಮೂಲ ಉದ್ದೇಶ ಅಧಿಕಾರ ಹಿಡಿದು ತಾವು ನಂಬಿದ ಸಿದ್ಧಾಂತಗಳೇ ಸರಿ ಎಂಬ ಅಭಿಪ್ರಾಯ ರೂಪಿಸುವುದು. ರಾಜ ಮಹಾರಾಜರುಗಳ ಮೋಜು ಮಸ್ತಿಗೆ ಬಹುಪತ್ನಿತ್ವ ಬಹು ದೊಡ್ಡ ಪ್ರತಿಷ್ಠೆಯಾಗಿತ್ತು ಎಂಬುದನ್ನು ನಾಟಕಕಾರ ಔರಂಗಜೇಬ್ ಮೂಲಕ ಹೇಳಿಸುತ್ತಾನೆ. ಹಾಗಂತ ಅವನೇನು ಸಾಚಾ ಅಲ್ಲ. ಅಧಿಕಾರದ ಆಸೆಗೆ ಅಣ್ಣನನ್ನೇ ಕೊಲ್ಲುತ್ತಾನೆ.
ಹುಚ್ಚ ಮುದುಕ ಶಹಜಾನ್ ಮಕ್ಕಳ ಸಾವು-ನೋವು ಲೆಕ್ಕಿಸದೆ ಕಪ್ಪು ಶಿಲೆಯ ಮಹಲಿನ ಕನಸು ಕಾಣುತ್ತಾನೆ.
ಪ್ರತಿಭಾ ಸಂಪನ್ನ ದಾರಾ ಸಾಯುವ ಕೊನೆಯ ಕ್ಷಣದ ತನಕ ತನ್ನ ಜೀವಪರ ಸಿದ್ಧಾಂತಗಳ ಪರವಾಗಿ ನಿಲ್ಲುತ್ತಾನೆ. ಮಹಾಭಾರತದ ದಾಯಾದಿ ಕಲಹ, ಮ್ಯಾಕ್‌‌ಬೆತ್ ನ ಮಹತ್ವಾಕಾಂಕ್ಷೆ, ಕಿಂಗ್ ಲಿಯರ್ ನ ಅಸಹಾಯಕತೆ ನಾಟಕ ನೋಡುವಾಗ ನೆನಪಾಗುವುದು ಸಹಜ.
ಪ್ರತಿಯೊಬ್ಬ ವ್ಯಕ್ತಿ ಅಧಿಕಾರ ಕಳೆದುಕೊಂಡಾಗ ಎದುರಿಸುವ ಸಂಕಷ್ಟ ಮತ್ತು ಅಸಹಾಯಕತೆಯನ್ನು ಪರಿಣಾಮಕಾರಿಯಾಗಿ ನಿರೂಪಿಸಲು ನಿರ್ದೇಶಕ ಯಶಸ್ವಿಯಾಗಿದ್ದಾರೆ. ವಿವಿಧ ಉದ್ಯೋಗದಲ್ಲಿರುವ ರಂಗಾಸಕ್ತ‌ ಯುವ ಕಲಾವಿದರು ಪ್ರೌಢಿಮೆಯಿಂದ ಅಭಿನಯಿಸಿದ್ದಾರೆ. ಪ್ರತಿಯೊಬ್ಬ ಕಲಾವಿದರ ನಟನಾ ಕೌಶಲ್ಯದಲ್ಲಿ ನಿರ್ದೇಶಕರ ಪರಿಶ್ರಮ ಎದ್ದು ಕಾಣುತ್ತದೆ.
ಪ್ರೇಕ್ಷಕರು ತಮ್ಮ ಅಭಿರುಚಿ ಕಳೆದುಕೊಂಡ ಹೊತ್ತಿನಲ್ಲಿ ಗಂಭೀರ ನಾಟಕಗಳನ್ನು ತಲುಪಿಸುವುದು ಕಷ್ಟ ಹಾಗಂತ ನಾಟಕಕಾರರು ತಮ್ಮ ಗಂಭೀರ ಅಭಿರುಚಿ ಕಳೆದುಕೊಳ್ಳಬಾರದೆಂಬ ಸಾತ್ವಿಕ ಹಟ ನಿರ್ದೇಶಕ ಹೊನ್ನವಳ್ಳಿ ಅವರದು. ಇಂತಹ ನಾಟಕಗಳ ಉದ್ದೇಶ ಕೇವಲ ಮನೋರಂಜನೆ ಅಲ್ಲ ಮನೋಪರಿವರ್ತನೆ ಎಂಬ ಕಾರಣಕ್ಕಾಗಿ ಇಡೀ ತಂಡದ ಪರಿಶ್ರಮವನ್ನು ಅಭಿನಂದಿಸಬೇಕು.
ತಮಿಳಿನ ಪ್ರಗತಿಪರ ಲೇಖಕ ಇಂದಿರಾ ಪಾರ್ಥಸಾರಥಿ ಅವರ  ನಾಟಕವನ್ನು ರಾಜಪ್ಪ ದಳವಾಯಿ ಮತ್ತು ಕನಕರಾಜ್ ಆರನಕಟ್ಟೆ ಕಾವ್ಯಾತ್ಮಕವಾಗಿ ಕನ್ನಡಿಕರಿಸಿದ್ದಾರೆ. ಗಂಭೀರತೆಯ ತೀವ್ರತೆಯನ್ನು ಕೊಂಚ ತಗ್ಗಿಸಲು ಒಂದೆರಡು ಕಾಮಿಕ್ ಪ್ರಸಂಗಗಳನ್ನು ಸೇರಿಸುವುದು ಒಳಿತು. ಅದು ಕೇವಲ ಪ್ರೇಕ್ಷಕರನ್ನು ಹಿಡಿದಿಡುವ ಕಾರಣದಿಂದಾಗಿ ಮಾತ್ರ. ಹತ್ತು ಹಲವು ಮಾನವನ ಮಿತಿಗಳನ್ನು ಕಣ್ಮುಂದೆ ಚಿತ್ರಿಸಿದ ಔರಂಗಜೇಬ್ ತಂಡವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...