Homeಸಾಹಿತ್ಯ-ಸಂಸ್ಕೃತಿಕಥೆಬಿ.ಎಲ್.ವೇಣು ಅವರ ದುವಾ ಕಥೆ

ಬಿ.ಎಲ್.ವೇಣು ಅವರ ದುವಾ ಕಥೆ

- Advertisement -
- Advertisement -

| ಬಿ.ಎಲ್.ವೇಣು |

ಮೂಲತಃ ಚಿತ್ರದುರ್ಗದವರಾದ ಬಿ.ಎಲ್.ವೇಣುರವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ಚಿತ್ರಸಾಹಿತಿಯಾಗಿ ಅಪಾರ ಮನ್ನಣೆ ಗಳಿಸಿದವರು. ತಂದೆ-ತಾಯಿ ಇಬ್ಬರೂ ರಂಗಕಲೆ ಹಿನ್ನೆಲೆಯವರಾಗಿದ್ದರಿಂದ ಸಾಹಿತ್ಯಾಸಕ್ತಿ ಅವರಲ್ಲಿ ಸಹಜವಾಗಿಯೇ ಬೆಳೆದುಬಂದಿದೆ. ಚಾರಿತ್ರಿಕ ಹಿನ್ನೆಲೆಯ ನೆಲದಿಂದ ಬಂದ ಅವರು ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳು ಸೇರಿದಂತೆ 26 ಕಾದಂಬರಿಗಳನ್ನು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಅವರ `ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‍ಸ್ಟೋರಿಗಳ ಟ್ರೆಂಡ್‍ಗೆ ನಾಂದಿ ಹಾಡಿತಲ್ಲದೆ, ನಾಲ್ಕು ಭಾಷೆಗಳಲ್ಲಿ ತೆರೆಕಂಡಿತು. ಪುಟ್ಟಣ್ಣ ಕಣಗಾಲರ `ಅಮೃತಘಳಿಗೆ’ ಸಿನಿಮಾ ಮೂಲಕ ಸಂಭಾಷಣೆ ಬರೆಯಲು ಶುರು ಮಾಡಿದ ಅವರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಸಾಹಿತಿಯಾಗಿ ದುಡಿದಿದ್ದಾರೆ. ನಿರ್ದೇಶಕ ಭಾರ್ಗವ, ನಟ ವಿಷ್ಣುವರ್ಧನ್ ಮತ್ತು ಬಿ.ಎಲ್.ವೇಣುರವರ ಜೋಡಿ ಎಂಬತ್ತರ ದಶಕದಲ್ಲಿ ಯಶಸ್ವಿ ಸಿನಿ ಜೋಡಿಯಾಗಿ ಗುರುತಿಸಿಕೊಂಡಿತ್ತು. ಸಾಹಿತ್ಯ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅವರು ಈಗಲೂ ಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೊರಗಡೆ ತಲೆ ಎತ್ತಿ ತಿರುಗಾಡಲೂ ಶರಮ್ ಆಗ್ತದೆ. ಮಾನಸಿಕ ಹಿಂಸೆಯಿಂದಾಗಿ ಬದುಕೇ ಬೇಡವೆನ್ನಿಸಿದೆ. ನನ್ನನ್ನೇ ಉಗ್ರನಂತೆ ನೋಡುತ್ತಿದ್ದಾರೇನೋ ಎಂಬ ಅಳಕು. ಯಾರೋ ಮಾಡುವ ಗಲತ್ತಿಗೆ ನಾನೇಕೆ ಶರಮ್ ಆಗಬೇಕು? ಇತಿಹಾಸದಲ್ಲಿ ಸಂಭವಿಸಿದ್ದಕ್ಕೆಲ್ಲಾ ಹೊಣೆಗಾರನಾಗಬೇಕೇಕೆ? ನನ್ನ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲವೆಂಬ ಸಂಕಟ. ಪ್ರೇಯರ್ ಮಾಡಲು ಬಂದ ಇಸ್ಮಾಯಿಲ್ ತಂಪು ಆವರಿಸಿದ ಮಸೀದಿಯಲ್ಲೂ ಬೆವರೊಡೆದ. ಮನಸ್ಸು ಬಲೆಯಲ್ಲಿ ಸಿಕ್ಕ ಜೇಡ. ಮಸೀದಿ ಕೆಡವಿದರು. ಕೆಡವಿದವರೇ ಗದ್ದಲವೆಬ್ಬಿಸಿ ಅನೇಕರನ್ನು ಸಾಯಬಡಿದರು. ಪ್ರಾಣ್ ಬಚಾವ್ ಮಾಡಿಕೊಳ್ಳಲು ಹೊಡೆದಾಡಿದ್ದೆವು. ತಲವಾರ್ ಹಿಡಿದುಬಂದವರು ಇವರ ಮನೇಲಿ ವೆಪನ್ಸ್ ಅದಾವೆ ಅಂದರು. ಮಸೀದಿನಾಗೂ ಇಟ್ಕಂಡವರೆ ಅಂದರು. ಮಸೀದಿಗೂ ನುಗ್ಗಿದರು. ಇದೆಲ್ಲಾ ಪುರಾನಿ ಕಹಾನಿಯಾದರೂ ನಾವಿಲ್ಲೇ ಬದುಕಿದ್ದೇವೆ. ನಮ್ಮ ದೇಶದಲ್ಲೇ ಪರಕೀಯರಂತೆ! ಚರಿತ್ರೆ ಪುಟಗಳಲ್ಲೆಂದೋ ನಮ್ಮವರು ದರ್ಬಾರ್ ಮಾಡಿದ ನೆಲದಲ್ಲಿಂದು ಗುಲಾಮರಂತೆ ಬದುಕುವುದೂ ಕಷ್ಟವಾಗಿದೆ. ನೀವೆಲ್ಲಾ ಕನ್ವರ್ಟೆಡ್ ಮುಸ್ಲಿಮರು ಅಂತಾರೆ. ಹಿಂದೆ ನಮ್ಮವರೇ ಆಗಿದ್ದೀರಿ ಅಂತ ಜೋಕ್ಸ್ ಹೊಡಿತಾರೇ ವಿನಹ ತಮ್ಮವರಂತೆ ಕಂಡಿದ್ದಿಲ್ಲ. ನವಾಬರು ಆರನೂರು ವರ್ಷ ಆಳಿದರೂ ದೇಶವನ್ನು ದೋಚಲಿಲ್ಲ. ಇಲ್ಲಿಯೇ ಮೀನಾರು ಮಸೀದಿ ಮಹಲುಗಳನ್ನು ಕಟ್ಕೊಂಡು ಬೇಪಾರ್ ಮಾಡ್ಕೊಂಡು ಬದುಕಿದರು. ಬ್ರಿಟಿಷರಂಗೆ ದೇಶವನ್ನೇ ಲೂಟ್ ಮಾಡಿ ಹೊತ್ತೊಯ್ಯಲಿಲ್ಲ. ಬ್ರಿಟಿಷರನ್ನು ಓಡಿಸೋಕೆ ನಾವೂ ನಮ್ಮದೇ ವತನ್ ಅನ್ನೋ ಭಾವನೆಯಿಂದ್ಲೇ ಹೋರಾಡಿದೆವು. ಅವರು ಹೋಗಬೇಕಾದರೆ ದೇಶನಾ ಎರಡು ಭಾಗ ಮಾಡಿ ಮನಸ್ಸುಗಳನ್ನೂ ಒಡೆದರು. ದೇಶದ ಮೇಲೆ ಮೊಹಬತ್ ಇಲ್ಲದಿದ್ದರೆ ನಾವೇಕೆ ಇಲ್ಲಿ ಉಳೀತಿದ್ದೆವು? ನಮ್ಮ ಪಾಡಿಗೆ ನಾವು ಬೆವರು ಬಸಿದು ದುಡ್ಕೊಂಡು ಬದುಕ್ತಿದ್ದೀವಿ. ಯಾವನೋ ಸಾಬರವನು ಶತ್ರು ದೇಶದ ಜೊತೆ ದೋಸ್ತಿ ಮಾಡ್ಕೊಂಡು ಬಾಂಬ್ ಉಡಾಯಿಸಿ ಸೈನಿಕರ ಜೀವ ತೆಗೆದರೆ ಸಾರಾಸಗಟಾಗಿ ಅನುಮಾನಿಸೋದು ಹೀಯಾಳಿಸೋದು ಸರೀನಾ? ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಲ್ಲಿದೆ? ಮಾಧ್ಯಮಗಳಲ್ಲಿ ಬೇರೆ ಟೀಕೆ, ತೀರ್ಪು! ಗಡ್ಡಬಿಟ್ಟೋರೆಲ್ಲಾ ಘಾತಕರೆಂಬ ಇರಿಯುವ ನೋಟ. ದೇಶವನ್ನೇ ಬಿಟ್ಟು ತೊಲಗಿ ಎಂಬಷ್ಟು ದ್ವೇಷ. ಬುದ್ಧ ಬಸವ ಗಾಂಧಿ ಹುಟ್ಟಿದ ದೇಶದಲ್ಲೇ ನಿಮ್ಮ ಹಾಗೆ ಹುಟ್ಟಿದ್ದೇವಲ್ಲ. ಗಾಂಧಿಯನ್ನು ಕೊಂದಿದ್ದು ಯಾರು? ಮುಸಲ್ಮಾನರಾ? ಬ್ರಿಟಿಷರಾ? ಹೇಳಿ? ಪಾಕಿಸ್ತಾನಕ್ಕೇ ನುಗ್ಗಿ ಬಗ್ಗುಬಡಿದು, ವಾಜಪೇಯಿರಂತಹ ಸಜ್ಜನನಿಂದ ‘ದುರ್ಗಿ’ ಅಂತ ತಾರೀಫ್ ಮಾಡಿಸಿಕೊಂಡ ಇಂದಿರಾಗಾಂಧಿನಾ, ಜಂಟ್ಲಮೆನ್ ರಾಜೀವಗಾಂಧಿನಾ ಕೊಂದಿದ್ದು ನಾವಾ? ಹಿಂದುಗಳಲ್ಲೂ ಭಯೋತ್ಪಾದಕರಿಲ್ಲವೆ ಅಂತ ಕೇಳಿದ್ರೆ ಉರ್ಕೊಂಡು ಬೀಳ್ತಿರಲ್ವೆ. ಭಯೋತ್ಪಾದಕರಿಗೆ ಯಾವ ಜಾತಿ? ಯಾವ ಧರ್ಮ? ಅವರಿಗೆ ಬೇಕಿರೋದು ಗೆಲವೂ ಅಲ್ಲ. ಎದುರಿಗೆ ನಿಂತು ಹೋರಾಡೋರಿಗೆ ಸೋಲು ಗೆಲವು ಮುಖ್ಯ. ಮೋಸಗಾರರಿಗೆ ಬೇಕಿರೋದು ನೆತ್ತರು. ಮೊನ್ನೆ ಅಸುನೀಗಿದ ನಲವತ್ತು ನಾಲ್ಕಕ್ಕೂ ಹೆಚ್ಚು ಸೈನಿಕರಲ್ಲಿ ನಸೀರ್ ಅಹ್ಮದ್ ಕೂಡ ಇದ್ದನಲ್ಲ. ಅವನದ್ದು ದೇಶನಿಷ್ಠೆಯಲ್ಲವೆ? ಜೀವ ಅಲ್ಲವೆ? ಕುಟುಂಬಸ್ಥನಲ್ಲವೆ? ನೆನಪಿಸಿಕೊಳ್ಳೋರೇ ಇಲ್ಲ! ಹಡಬೆ ಚಾನಲ್‍ನವರೂ ತುಟಿಬಿಚ್ಚಲಿಲ್ಲ! ಯಾರಿಗೂ ನಾವು ನೀವೆಲ್ಲಾ ಒಟ್ಟಿಗೆ ಬಾಳೋದು ಬೇಕಿಲ್ಲ. ದೇಶದ ಶಕ್ತಿ ಹೆಚ್ಚೋದೂ ಬೇಕಿಲ್ಲ.

ರಾಜಕಾರಣಿಗಳ ಪಾಲಿಗೆ ನಾವು ಕೇವಲ ಮತಬ್ಯಾಂಕ್. ನಾವೇನು ಅರ್ಜಿ ಹಾಕ್ಕೊಂಡು ಹುಟ್ಟಿದ್ದೆವಾ? ಕನ್ನಡ ಮಾತನಾಡೋರೆಲ್ಲಾ ಕನ್ನಡಿಗರು ಅನ್ನೋದಾದ್ರೆ ನಾವೂ ಕನ್ನಡಿಗರು. ಹಿಂದಿ ಒಂದಿಷ್ಟು ಗೊತ್ತು. ಉರ್ದು ಗೊತ್ತೇ ಇಲ್ಲ. ನಮ್ಮ ಮಕ್ಕಳೂ ಕಾನ್ವೆಂಟಿಗೇ ಹೋಗೋದು. ಹೀಗೆಲ್ಲಾ ಪ್ರಮಾಣೀಕರಿಸಬೇಕಾದ್ದೂ ಎಂತಹ ಪರಿಶಾನಿ ನೋಡಿ. ದಾಡಿ ಬಿಟ್ಟರೂ ತಪ್ಪು ಬುರ್ಕಾ ತೊಟ್ಟರೂ ತಪ್ಪು. ಒಂದು ಹಿಡಿಯಷ್ಟು ಪ್ರೀತಿ ತೋರಿಸಿದರೂ ಸಾಗರದಷ್ಟು ಪ್ರೀತಿ ಕೊಡೋರು ಕಣ್ರಿ ನಾವು. ಸಲೀಮ್ ಅನಾರ್ಕಲಿ, ಲೈಲಾ ಮಜ್ನು, ಶಿರಿನ್ ಪರಿಹಾದ್ ರಕ್ತವೇ ನಮ್ಮಲ್ಲೂ ಹರೀತಿದೆ. ನಮ್ಮಲ್ಲೂ ಸೂಫಿ ಸಂತರು, ಕಲಾಂನಂತಹ ವಿಜ್ಞಾನಿಗಳು ಹುಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಲಡಾಯಿಗೈದ ಟಿಪ್ಪುನಂತಹ ಶೂರರೂ ಹುಟ್ಟಿದ್ದಾರೆ. ಟಿಪ್ಪು ಹೋರಾಡಿದ್ದು ತನ್ನ ಪಟ್ಟಪದವಿಗಳಿಗಾಗಿ ಅಂತ ವಾದ ಹೂಡೋದು ಯಾವ ನ್ಯಾಯ? ಹಾಗಾದರೆ ಝಾನ್ಸಿರಾಣಿ, ಕಿತ್ತೂರ ರಾಣಿ, ಅಬ್ಬಕ್ಕ ಹೋರಾಡಿದ್ದೇಕೆ? ಇವರೆಲ್ಲಾ ಬ್ರಿಟಿಷರೊಂದಿಗೆ ರಾಜಿಯಾಗಿ ಹಾಯಾಗಿರಬಹುದಿತ್ತಲ್ಲ. ಹಾಗಾಗಿದ್ದಿದ್ದರೆ ಭಾರತ ದೇಶ ಎಂದಿಗೂ ನಮ್ಮದಾಗುತ್ತಿರಲಿಲ್ಲ. ಗಾಂಧೀಜಿ ಬರುವವರೆಗೂ ಹೋರಾಟದ ಕಾವನ್ನು ಕಾಪಾಡಿಕೊಂಡು ಬಂದ ದೇಶಪ್ರೇಮಿಗಳಲ್ಲವೆ ಇವರು? ಈಗೀಗ ಊಟ ಸೇರ್ತಾ ಇಲ್ಲ. ನಿದ್ರೆ ಬರ್ತಾ ಇಲ್ಲ. ಹೊರಗೆ ಹೆಜ್ಜೆ ಇಡಲೂ, ಕಚೇರಿಯಲ್ಲಿ ದುಡಿಯಲೂ ಮುಜುಗರ. ಯಾರೇನಂದರೂ ಸಹನೆಗೆಡುವಂತಿಲ್ಲ. ಬೈದವರನ್ನ ಬಂಧುಗಳಯ್ಯಾ ಅಂತ ಬಸವಣ್ಣೋರೇ ಅಂದಾಗ ನಮ್ಮಂಥವರ ಪಾಡೇನು. ನಾವೂ ದೇಶವಾಸಿಗಳಲ್ಲವೆ. ಭಾಯಿ ಔರ್ ಬೆಹನ್‍ಗಳಲ್ಲವೆ? ಸೈನಿಕರಲ್ಲಿ ಜಾತಿಮತ ಹುಡುಕೋದು ಸಣ್ಣತನವಲ್ಲವೆ

ನಮ್ಮವರೂ ಸೇನೆಯಲ್ಲಿಲ್ಲವೆ? ಯಾರೂ ಸತ್ತೇ ಇಲ್ಲವೆ!? ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ವಿಷವೃಕ್ಷವನ್ನ ಒಂದೇ ಸಲ ಕಿತ್ತು ಹಾಕಿ ನೆಮ್ಮದಿಯಾಗಿ ಬಾಳಲಾದರೂ ಅವಕಾಶ ಕೊಡಿ. ಮುಖ್ಯವಾಹಿನಿಗೆ ಬನ್ನಿರೆಂಬ ವಾಹಿನಿಗಳೇ ವಿಷಜಂತುಗಳಂತೆ ನೋಡುವುದು ಸುಳ್ಳೇ? ನಮ್ಮಲ್ಲಿಯೇ ಬಡಾ ಆದ್ಮಿಗಳು ಮಿಲಿಯನಿಯರ್ಸ್ ಹಾಯಾಗಿ ಮಹಲುಗಳಲ್ಲಿದ್ದಾರೆ. ಮಿಡ್ಲ್‍ಕ್ಲಾಸ್‍ಗಳ ಗತಿಯೇನು? ಸೇನೆಗೆ ಸೇರಿ ದೇಶಪ್ರೇಮವನ್ನು ಸಾಬೀತು ಮಾಡುವ ವಯಸ್ಸೂ ನನ್ನದಲ್ಲ. ಪರರನ್ನು ಕೊಂದರೆ ಜನ್ನತ್ ಸಿಗುವುದೆಂದು ನಂಬಿದವನೂ ಅಲ್ಲ. ವಾರ್‍ಗಿಂತ ಪ್ಯಾರ್ ಈವತ್ತು ಮುಖ್ಯ. ಹೊರದೇಶಗಳಿಗಿಂತ ನಾವಿಲ್ಲಿ ಸುಖವಾಗಿಯೂ ಸುರಕ್ಷಿತವಾಗಿಯೂ ಇದ್ದೇವೆ. ಆದರೆ ಬಾಳಲು ಸುಖ ಸುರಕ್ಷತೆಗಿಂತ ನಂಬಿಕೆ ಮುಖ್ಯ ಕಣ್ರಿ. ದೇಶಭಕ್ತರೆಂದು ಪ್ರೂವ್ ಮಾಡಲು ಎಲ್ಲರ ಜೊತೆ ಪಾಕ್ ಧ್ವಜ ಸುಟ್ಟೆವು. ಮಡಿದ ಧೀರರಿಗಾಗಿ ಕ್ಯಾಂಡಲ್ ಹಿಡಿದೆವು. ಕವಿತೆ ಬರೆದು ಹಾಡಿದೆವು. ಭಾರತಮಾತಾಕಿ ಜೈ ಅಂತ ಕೂಗಿದ್ದಾಯಿತು. ರಾಮಮಂದಿರ ಕಟ್ಟೋಣ ಅಂದಿದ್ದಾಯಿತು. ಹೇಗೆ ನಂಬಿಸೋದು ನಿಮ್ಮನ್ನು! ನೀವೇ ಹೇಳಿ ಕೊಡ್ರಪ್ಪಾ? ಬೆಂಕಿ ಮಧ್ಯೆ ಬದುಕೋದು ಹೇಗೆ. ನಮಗೆ ಬದುಕಲಾದರೂ ಯಾವ ದೇಶವಿದೆ? ಈ ದೇಶ ನಮ್ಮದೂ ಅಲ್ಲವೆ? ಕಾಪಾಡೋದು ಜನ್ನತ್. ನೆರೆಗೆ ಹೊರೆಯಾಗದಿದ್ದರದೇ ಜನ್ನತ್. ನೀವು ತಿನ್ನೋದು ಉಡೋದನ್ನೇ ಅಲ್ಲವೆ ನಾವೂ ಉಡೋದು ತಿನ್ನೋದು. ದಲಿತರೂ ನಿಮ್ಮವರೆ. ನೀವು ಅವರನ್ನು ಮುಟ್ಟೋಕೇ ಹಿಂಜರಿತೀರಲ್ಲ. ನಾವೆಂದೂ ಹಾಗೆ ವರ್ತಿಸಿದವರಲ್ಲ. ನಿಮ್ಮ ದೇವಾಲಯಗಳಿಗೆ ನಾವು ಬಂದಂಗೆ ನೀವು ಮಸೀದಿಗಳಿಗೇಕೆ ಬರೋದಿಲ್ಲ! ಮಸೀದಿಗಳಿಗೆಂದೂ ನಾವು ಬೀಗವೇ ಹಾಕಿದವರಲ್ಲ. ದೇವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆವ ಕೋಮುವಾದಿ ರಾಜಕಾರಣಿಗಳನ್ನು ನಂಬದಿರಿ. ನಿಮ್ಮೊಡನೆ ಒಟ್ಟಾಗೇ ಬಾಳುತ್ತಿರುವ ನಮ್ಮನ್ನು ನಂಬಿ ಪ್ಲೀಸ್. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನೀವು ಪ್ರೀತಿಸಿ ದ್ವೇಷಿಸಿ, ನಮ್ಮ ಸಾವು ಬದುಕು ಈ ನೆಲದಲ್ಲಿಯೇ. ಅಚ್ಚೆದಿನ್ ಬಾರದಿದ್ದರೆ ಬೇಡ, ಬುರೆದಿನ್ ಬಾರದಿದ್ದರೆ ಬಸ್-ಸಾಕಪ್ಪ. ಖುದಾನಲ್ಲಿ ನನ್ನ ದುವಾ ಇದೆ. ಬೊಗಸೆಯಿಂದ ಮುಖ ವರೆಸಿಕೊಂಡ ಇಸ್ಮಾಯಿಲ್ಗೆ ಕೆನ್ನೆಯ ಮೇಲಿಳಿದ ಕಣ್ಣೀರು ತಾಕಿದವು. ಎರಡೂ ಭುಜಗಳತ್ತ ನೋಡಿದ ಶಾಸ್ತ್ರ ಮಾಡಿ ನಿಟ್ಟುಸಿರಿನೊಂದಿಗೆ ಪ್ರೇಯರ್ ಮುಗಿಸಿ ಮೇಲೆದ್ದ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...