Homeಕರ್ನಾಟಕಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಕೆಲವು ಬ್ರಾಹ್ಮಣರು ಮಾಂಸಾಹಾರ ತಿನ್ನುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವ ಹಳೆಯ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

- Advertisement -
- Advertisement -

ಉಡುಪಿಯ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ದಿವಂಗತ ವಿಶ್ವೇಶ ತೀರ್ಥರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೊ ಈಗ ವೈರಲ್ ಆಗಿದೆ. ಮಾಂಸಾಹಾರ ಹಾಗೂ ಸಸ್ಯಾಹಾರ ವಿವಾದಕ್ಕೆ ಹೊಸ ತಿರುವು ನೀಡಿದೆ.

ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ದಲಿತರ ಮನೆಗೆ ಹೋಗುವುದು ಮುಖ್ಯವಲ್ಲ, ದಲಿತರನ್ನು ತಮ್ಮ ಮನೆಗೆ ಬಲಿತರು ಕರೆಸಿಕೊಳ್ಳುವುದು ಮುಖ್ಯ ಎಂದಿದ್ದರು. ಆಗ ಮಾತನಾಡುತ್ತ, ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪ್ರಸ್ತಾಪವನ್ನು ಮಾಡಿದ್ದರು. “ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? ಕುರಿಯ ರಕ್ತ ಉರಿದುಕೊಟ್ಟರೆ ತಿನ್ನುತ್ತಾರಾ?” ಎಂದು ಪ್ರಾಸಂಗಿಕವಾಗಿ ಪ್ರಶ್ನಿಸಿದ್ದರು.

ವಿಡಿಯೊ ವೈರಲ್‌ ಆದ ಬಳಿಕ ಹಂಸಲೇಖರ ವಿರುದ್ಧ ಮುಗಿಬಿದ್ದ ಮತೀಯವಾದಿ ಟ್ರೋಲ್‌ ಪಡೆ, ಹಂಸಲೇಖ ಅವರ ಕುರಿತು ತುಚ್ಛವಾಗಿ ಮಾತನಾಡಲು ಆರಂಭಿಸಿತು. ಹಂಸಲೇಖ ಅವರು ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಂಬಿಸಿತು. ಹಂಸಲೇಖ ಅವರು ಕ್ಷಮೆ ಯಾಚಿಸಿದ ಬಳಿಕವೂ ವಿವಾದ ಮುಂದುವರಿದಿದೆ.

ಮೀರಾ ರಾಘವೇಂದ್ರ ಎಂಬವರು ಹಂಸಲೇಖ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ವೈವಿಧ್ಯಮಯ ಆಹಾರ ಸಂಸ್ಕೃತಿ ಕುರಿತು ಲಘುವಾಗಿ ಮಾತನಾಡಿ, ‘ಬಾಡೇ ನಮ್‌ ಗಾಡು’ ಎಂಬ ವಿನೂತನ ಅಭಿಯಾನ ಆರಂಭವಾಗಲೂ ಕಾರಣಕರ್ತರಾದರು. ಒಂದು ಸಪ್ತಾಹವಾಗಿ ನಡೆಯುತ್ತಿರುವ ‘ಬಾಡೇ ನಮ್‌ ಗಾಡು’ ಅಭಿಯಾನದ ಜೊತೆಜೊತೆಗೆ ಮಾಂಸಾಹಾರಿಗಳ ಕುರಿತು ಒಂದು ವರ್ಗದ ಜನಕ್ಕೆ ಯಾಕಿಷ್ಟು ಅಸಹನೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಹಾರ ಸಂಸ್ಕೃತಿಯನ್ನು ಅಣಕಿಸುವುದರ ವಿರುದ್ಧ ಜನರು ದನಿಎತ್ತಿದ್ದಾರೆ.

ಪೇಜಾವರ ಶ್ರೀಗಳು ಹಿಂದೊಮ್ಮೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕು ಈಗ, “ಮಾಂಸಾಹಾರ, ಸಸ್ಯಾಹಾರ” ವಿವಾದದ ಬೆನ್ನಲ್ಲೇ ವೈರಲ್ ಆಗಿದೆ. ಸಂದರ್ಶನದಲ್ಲಿ ಪೇಜಾವರ ಶ್ರೀಗಳು ಹಿರಿಯ ಪತ್ರಕರ್ತ ಎಚ್‌.ಆರ್‌.ರಂಗನಾಥ್ ಅವರಿಗೆ ಉತ್ತರಿಸುತ್ತಾ, “ಮಾಂಸಾಹಾರವನ್ನು ಕೆಲವು ಬ್ರಾಹ್ಮಣರು ಗುಟ್ಟುಗುಟ್ಟಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿರುವುದು ದಾಖಲಾಗಿದೆ.

“ಪುರಾಣ ಕಾಲದಿಂದಲೂ ಬಂದಿರುವ ಮಾಂಸದ ಭಕ್ಷಣೆ, ಪೇಜಾವರರು ಹೇಳಿದ ತಕ್ಷಣ ನಿಂತು ಹೋಗಿಬಿಡುತ್ತದೆಯೇ?” ಎಂದು ರಂಗನಾಥ್‌ ಅವರು ಕೇಳುತ್ತಾರೆ.

“ಪುರಾಣ ಕಾಲದಿಂದ ಬಂದದ್ದು ನಿಂತು ಹೋಗಿ ಸಾವಿರಾರು ವರ್ಷಗಳಾಗಿದೆ. ಪುರಾಣ ಕಾಲದಲ್ಲಿ ಇದ್ದದ್ದು ಕಲಿಯುಗ ಪ್ರಾರಂಭದ ಬಳಿಕ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ನಿಂತು ಹೋಗಿದೆ. ಇದು ಪೇಜಾವರರು ಹೇಳಿದ್ದಲ್ಲ. ಬ್ರಾಹ್ಮಣರಲ್ಲಿ ಮಾಂಸಾಹಾರಿ ಪದ್ಧತಿ ಇತ್ತು, ಇಲ್ಲ ಎಂಬ ಚರ್ಚೆ ಇದೆ. ಇತ್ತು ಎಂದು ಇಟ್ಟುಕೊಂಡರೂ ಕೂಡ ಅದನ್ನೆಲ್ಲ ನಿಲ್ಲಿಸಿದ್ದಾರೆ. ಮಾಂಸಾಹಾರ ಕೂಡದು, ಅದು ಬ್ರಾಹ್ಮಣರಲ್ಲಿ ಇರಬಾರದು ಎಂದು ಹಿಂದಿನವರು ಹಠ ತೊಟ್ಟು, ಅನೇಕ ಶತಮಾನಗಳ ಪ್ರಯತ್ನದಿಂದ ನಿಂತುಹೋಗಿದೆ” ಎಂದು ವಿಶ್ವೇಶತೀರ್ಥರು ಹೇಳುತ್ತಾರೆ.

“ಒಂದು ಅಭ್ಯಾಸವಾಗಿ…” ಎಂದು ರಂಗನಾಥ್‌ ಅವರು ಏನನ್ನೋ ಕೇಳಲು ಹೊರಡುತ್ತಾರೆ, ಅಷ್ಟರಲ್ಲಿ ಮಾತು ಮುಂದುವರಿಸುವ ಶ್ರೀಗಳು, “ನಿಂತು ಹೋಗಿದ್ದು, ಪುನಃ ಪ್ರಾರಂಭವಾಗಿದೆ. ಯಾಕೆಂದರೆ ಇವತ್ತಿನ ವಾತಾವರಣದಲ್ಲಿ ಬ್ರಾಹ್ಮಣರು ಕೂಡ ಗುಟ್ಟುಗುಟ್ಟಾಗಿ, ಕೆಲವರು ಬಹಿರಂಗವಾಗಿ ಮದ್ಯ ಮಾಂಸವನ್ನು ಸ್ವೀಕಾರ ಮಾಡುತ್ತಿದ್ದಾರೆ…. ಬ್ರಾಹ್ಮಣ್ಯವನ್ನು ಅವರು (ಬ್ರಾಹ್ಮಣರು) ಮತ್ತಷ್ಟು ಚೆನ್ನಾಗಿ ಉಳಿಸಿಕೊಳ್ಳಬೇಕು. ಇದು ಮೊದಲಿನಿಂದಲೂ ಇದೆ. ಆದರೆ ಶಿಥಿಲವಾಗುತ್ತಿದೆ. ಇದು ಶಿಥಿಲವಾಗಬಾರದು ಅಂತ ಎರಡು ಜವಾಬ್ದಾರಿ ಇದೆ. ಒಂದು: ಬ್ರಾಹ್ಮಣ್ಯದ ರಕ್ಷಣೆಯಾಗಬೇಕು. ಹಿಂದುತ್ವ ರಕ್ಷಣೆಯಾಗಬೇಕು. ಈ ಎರಡು ಜವಾಬ್ದಾರಿ…” ಎನ್ನುತ್ತಾರೆ.

“ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧ ಇದೆಯಾ?” ಎಂದು ರಂಗನಾಥ್‌ ಮರುಪ್ರಶ್ನಿಸುತ್ತಾರೆ. “ಸಂಬಂಧ ಇಲ್ಲ. ಎರಡೂ ಬೇಕು. ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಸೀಮಿತ, ಹಿಂದುತ್ವ ಎಲ್ಲರಿಗೂ ಸಂಬಂಧಪಟ್ಟಿರುವಂತಹದ್ದು” ಎಂದು ಶ್ರೀಗಳು ಪ್ರತಿಕ್ರಿಯಿಸುತ್ತಾರೆ.

ಶ್ರೀಗಳು ಬ್ರಾಹ್ಮಣವನ್ನು ಉಳಿಸಿಕೊಳ್ಳಬೇಕು ಎನ್ನುತ್ತಿರುವುದು, ಹಿಂದುತ್ವ ಹಾಗೂ ಬ್ರಾಹ್ಮಣ್ಯಕ್ಕೆ ಸಂಬಂಧ ಇಲ್ಲ ಎಂದು ಹೇಳುತ್ತಿರುವುದು ಹಾಗೂ ಮಾಂಸಾಹರದ ಕುರಿತು ಅವರು ಪ್ರಸ್ತಾಪಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

ಬರಹಗಾರ, ಚಿಂತಕ ನಾಗೇಗೌಡ ಕೀಲಾರ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ಅನ್ನು ಸುಮಾರು 300ಕ್ಕೂ ಹೆಚ್ಚು ಜನರು (ಈ ವರದಿ ಮಾಡುವ ವೇಳೆಗೆ) ಶೇರ್‌ ಮಾಡಿದ್ದಾರೆ. ಈ ಮೂಲಕ ವಿಡಿಯೊ ವೈರಲ್‌ ಆಗಿದೆ.


ಇದನ್ನೂ ಓದಿರಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಹಿಂದೂ ಧರ್ಮದಲ್ಲಿ ಜಾತಿ ಬೇಧ ಜಾಸ್ತಿ ಅಂದರೆ ಬೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಲ್ಲಾರು ಸಮಾನರು ನಮೋ ಬುದ್ಧ ಜೈ ಬಸವಣ್ಣ ಜೈ ಭೀಮ್ ✍️✍️✍️✍️🇪🇺🏳️‍🌈

  2. Bhudda dhrama ondhu dharma Kintha, Hindha Dharmada ondu Bhaga ಎಂದು nambiddene. Lord Budda adhu bereye Dharma ಎಂದು helalulla. ಎಂದು nanu nambiddene. Lord Budda🙏🙏🙏

  3. ಮಾಂಸ ತಿನ್ನುವುದು ಮೃಗೀಯ ಗುಣ. ಅದನ್ನೂ ಸಾಧಿಸಿಕೊಳ್ಳಬೇಡಿ. ಈ ಮೃಗೀಯ ಗುಣ ನನ್ನಲ್ಲೂ ಇದೆ. ನನ್ನಲ್ಲಿದೆ ಎಂದ ಮಾತ್ರಕ್ಕೆ ಸರಿಯಲ್ಲ. ಸಾತ್ವಿಕ ಗುಣವಿರುವವರನ್ನು ದೂಷಿಸುವುದು ಸರಿಯಲ್ಲ. ಕಾಡಿನಲ್ಲಿ ಜಿಂಕೆ ಬಳಿ ಹೋಗುತ್ತೀರೊ ಇಲ್ಲ ಹುಲಿಯ ಬಳಿ ಹೋಗುತ್ತೀರೊ.

  4. ಮಂಗನಿಂದ ಮಾನವರಾದ ಯಾವ ಜಾತಿ,ಯಾವ ಧರ್ಮ ಇರಲಿಲ್ಲ.ಯುಗಗಳು ಕಳೆಯುತ್ತಾ ಜಾತಿ ಧರ್ಮ ಸೃಷ್ಟಿ ಆಯ್ತು.ಆಹಾರ ಪದ್ಧತಿ ಬದಲಾಯಿತು,ಇಲ್ಲಿ ಯಾವ ಜಾತಿ ಮೇಲೆ ಅಲ್ಲಾ,ಕೀಳು ಅಲ್ಲಾ.ಎಲ್ಲಾರು ಒಂದೆ.

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...