ಉಡುಪಿಯ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ದಿವಂಗತ ವಿಶ್ವೇಶ ತೀರ್ಥರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೊ ಈಗ ವೈರಲ್ ಆಗಿದೆ. ಮಾಂಸಾಹಾರ ಹಾಗೂ ಸಸ್ಯಾಹಾರ ವಿವಾದಕ್ಕೆ ಹೊಸ ತಿರುವು ನೀಡಿದೆ.
ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ದಲಿತರ ಮನೆಗೆ ಹೋಗುವುದು ಮುಖ್ಯವಲ್ಲ, ದಲಿತರನ್ನು ತಮ್ಮ ಮನೆಗೆ ಬಲಿತರು ಕರೆಸಿಕೊಳ್ಳುವುದು ಮುಖ್ಯ ಎಂದಿದ್ದರು. ಆಗ ಮಾತನಾಡುತ್ತ, ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪ್ರಸ್ತಾಪವನ್ನು ಮಾಡಿದ್ದರು. “ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? ಕುರಿಯ ರಕ್ತ ಉರಿದುಕೊಟ್ಟರೆ ತಿನ್ನುತ್ತಾರಾ?” ಎಂದು ಪ್ರಾಸಂಗಿಕವಾಗಿ ಪ್ರಶ್ನಿಸಿದ್ದರು.
ವಿಡಿಯೊ ವೈರಲ್ ಆದ ಬಳಿಕ ಹಂಸಲೇಖರ ವಿರುದ್ಧ ಮುಗಿಬಿದ್ದ ಮತೀಯವಾದಿ ಟ್ರೋಲ್ ಪಡೆ, ಹಂಸಲೇಖ ಅವರ ಕುರಿತು ತುಚ್ಛವಾಗಿ ಮಾತನಾಡಲು ಆರಂಭಿಸಿತು. ಹಂಸಲೇಖ ಅವರು ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಂಬಿಸಿತು. ಹಂಸಲೇಖ ಅವರು ಕ್ಷಮೆ ಯಾಚಿಸಿದ ಬಳಿಕವೂ ವಿವಾದ ಮುಂದುವರಿದಿದೆ.
ಮೀರಾ ರಾಘವೇಂದ್ರ ಎಂಬವರು ಹಂಸಲೇಖ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ವೈವಿಧ್ಯಮಯ ಆಹಾರ ಸಂಸ್ಕೃತಿ ಕುರಿತು ಲಘುವಾಗಿ ಮಾತನಾಡಿ, ‘ಬಾಡೇ ನಮ್ ಗಾಡು’ ಎಂಬ ವಿನೂತನ ಅಭಿಯಾನ ಆರಂಭವಾಗಲೂ ಕಾರಣಕರ್ತರಾದರು. ಒಂದು ಸಪ್ತಾಹವಾಗಿ ನಡೆಯುತ್ತಿರುವ ‘ಬಾಡೇ ನಮ್ ಗಾಡು’ ಅಭಿಯಾನದ ಜೊತೆಜೊತೆಗೆ ಮಾಂಸಾಹಾರಿಗಳ ಕುರಿತು ಒಂದು ವರ್ಗದ ಜನಕ್ಕೆ ಯಾಕಿಷ್ಟು ಅಸಹನೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಹಾರ ಸಂಸ್ಕೃತಿಯನ್ನು ಅಣಕಿಸುವುದರ ವಿರುದ್ಧ ಜನರು ದನಿಎತ್ತಿದ್ದಾರೆ.
ಪೇಜಾವರ ಶ್ರೀಗಳು ಹಿಂದೊಮ್ಮೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕು ಈಗ, “ಮಾಂಸಾಹಾರ, ಸಸ್ಯಾಹಾರ” ವಿವಾದದ ಬೆನ್ನಲ್ಲೇ ವೈರಲ್ ಆಗಿದೆ. ಸಂದರ್ಶನದಲ್ಲಿ ಪೇಜಾವರ ಶ್ರೀಗಳು ಹಿರಿಯ ಪತ್ರಕರ್ತ ಎಚ್.ಆರ್.ರಂಗನಾಥ್ ಅವರಿಗೆ ಉತ್ತರಿಸುತ್ತಾ, “ಮಾಂಸಾಹಾರವನ್ನು ಕೆಲವು ಬ್ರಾಹ್ಮಣರು ಗುಟ್ಟುಗುಟ್ಟಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿರುವುದು ದಾಖಲಾಗಿದೆ.
“ಪುರಾಣ ಕಾಲದಿಂದಲೂ ಬಂದಿರುವ ಮಾಂಸದ ಭಕ್ಷಣೆ, ಪೇಜಾವರರು ಹೇಳಿದ ತಕ್ಷಣ ನಿಂತು ಹೋಗಿಬಿಡುತ್ತದೆಯೇ?” ಎಂದು ರಂಗನಾಥ್ ಅವರು ಕೇಳುತ್ತಾರೆ.
“ಪುರಾಣ ಕಾಲದಿಂದ ಬಂದದ್ದು ನಿಂತು ಹೋಗಿ ಸಾವಿರಾರು ವರ್ಷಗಳಾಗಿದೆ. ಪುರಾಣ ಕಾಲದಲ್ಲಿ ಇದ್ದದ್ದು ಕಲಿಯುಗ ಪ್ರಾರಂಭದ ಬಳಿಕ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ನಿಂತು ಹೋಗಿದೆ. ಇದು ಪೇಜಾವರರು ಹೇಳಿದ್ದಲ್ಲ. ಬ್ರಾಹ್ಮಣರಲ್ಲಿ ಮಾಂಸಾಹಾರಿ ಪದ್ಧತಿ ಇತ್ತು, ಇಲ್ಲ ಎಂಬ ಚರ್ಚೆ ಇದೆ. ಇತ್ತು ಎಂದು ಇಟ್ಟುಕೊಂಡರೂ ಕೂಡ ಅದನ್ನೆಲ್ಲ ನಿಲ್ಲಿಸಿದ್ದಾರೆ. ಮಾಂಸಾಹಾರ ಕೂಡದು, ಅದು ಬ್ರಾಹ್ಮಣರಲ್ಲಿ ಇರಬಾರದು ಎಂದು ಹಿಂದಿನವರು ಹಠ ತೊಟ್ಟು, ಅನೇಕ ಶತಮಾನಗಳ ಪ್ರಯತ್ನದಿಂದ ನಿಂತುಹೋಗಿದೆ” ಎಂದು ವಿಶ್ವೇಶತೀರ್ಥರು ಹೇಳುತ್ತಾರೆ.
“ಒಂದು ಅಭ್ಯಾಸವಾಗಿ…” ಎಂದು ರಂಗನಾಥ್ ಅವರು ಏನನ್ನೋ ಕೇಳಲು ಹೊರಡುತ್ತಾರೆ, ಅಷ್ಟರಲ್ಲಿ ಮಾತು ಮುಂದುವರಿಸುವ ಶ್ರೀಗಳು, “ನಿಂತು ಹೋಗಿದ್ದು, ಪುನಃ ಪ್ರಾರಂಭವಾಗಿದೆ. ಯಾಕೆಂದರೆ ಇವತ್ತಿನ ವಾತಾವರಣದಲ್ಲಿ ಬ್ರಾಹ್ಮಣರು ಕೂಡ ಗುಟ್ಟುಗುಟ್ಟಾಗಿ, ಕೆಲವರು ಬಹಿರಂಗವಾಗಿ ಮದ್ಯ ಮಾಂಸವನ್ನು ಸ್ವೀಕಾರ ಮಾಡುತ್ತಿದ್ದಾರೆ…. ಬ್ರಾಹ್ಮಣ್ಯವನ್ನು ಅವರು (ಬ್ರಾಹ್ಮಣರು) ಮತ್ತಷ್ಟು ಚೆನ್ನಾಗಿ ಉಳಿಸಿಕೊಳ್ಳಬೇಕು. ಇದು ಮೊದಲಿನಿಂದಲೂ ಇದೆ. ಆದರೆ ಶಿಥಿಲವಾಗುತ್ತಿದೆ. ಇದು ಶಿಥಿಲವಾಗಬಾರದು ಅಂತ ಎರಡು ಜವಾಬ್ದಾರಿ ಇದೆ. ಒಂದು: ಬ್ರಾಹ್ಮಣ್ಯದ ರಕ್ಷಣೆಯಾಗಬೇಕು. ಹಿಂದುತ್ವ ರಕ್ಷಣೆಯಾಗಬೇಕು. ಈ ಎರಡು ಜವಾಬ್ದಾರಿ…” ಎನ್ನುತ್ತಾರೆ.
“ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧ ಇದೆಯಾ?” ಎಂದು ರಂಗನಾಥ್ ಮರುಪ್ರಶ್ನಿಸುತ್ತಾರೆ. “ಸಂಬಂಧ ಇಲ್ಲ. ಎರಡೂ ಬೇಕು. ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಸೀಮಿತ, ಹಿಂದುತ್ವ ಎಲ್ಲರಿಗೂ ಸಂಬಂಧಪಟ್ಟಿರುವಂತಹದ್ದು” ಎಂದು ಶ್ರೀಗಳು ಪ್ರತಿಕ್ರಿಯಿಸುತ್ತಾರೆ.
ಶ್ರೀಗಳು ಬ್ರಾಹ್ಮಣವನ್ನು ಉಳಿಸಿಕೊಳ್ಳಬೇಕು ಎನ್ನುತ್ತಿರುವುದು, ಹಿಂದುತ್ವ ಹಾಗೂ ಬ್ರಾಹ್ಮಣ್ಯಕ್ಕೆ ಸಂಬಂಧ ಇಲ್ಲ ಎಂದು ಹೇಳುತ್ತಿರುವುದು ಹಾಗೂ ಮಾಂಸಾಹರದ ಕುರಿತು ಅವರು ಪ್ರಸ್ತಾಪಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.
ಬರಹಗಾರ, ಚಿಂತಕ ನಾಗೇಗೌಡ ಕೀಲಾರ ಅವರು ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ ಅನ್ನು ಸುಮಾರು 300ಕ್ಕೂ ಹೆಚ್ಚು ಜನರು (ಈ ವರದಿ ಮಾಡುವ ವೇಳೆಗೆ) ಶೇರ್ ಮಾಡಿದ್ದಾರೆ. ಈ ಮೂಲಕ ವಿಡಿಯೊ ವೈರಲ್ ಆಗಿದೆ.
ಇದನ್ನೂ ಓದಿರಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು
ಹಿಂದೂ ಧರ್ಮದಲ್ಲಿ ಜಾತಿ ಬೇಧ ಜಾಸ್ತಿ ಅಂದರೆ ಬೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಲ್ಲಾರು ಸಮಾನರು ನಮೋ ಬುದ್ಧ ಜೈ ಬಸವಣ್ಣ ಜೈ ಭೀಮ್ ✍️✍️✍️✍️🇪🇺🏳️🌈
Bhudda dhrama ondhu dharma Kintha, Hindha Dharmada ondu Bhaga ಎಂದು nambiddene. Lord Budda adhu bereye Dharma ಎಂದು helalulla. ಎಂದು nanu nambiddene. Lord Budda🙏🙏🙏
Bouddha mathu jaina dharmada unnathiye brahmanaru mavsaharavannu thyajisalu kaarana
ಮಾಂಸ ತಿನ್ನುವುದು ಮೃಗೀಯ ಗುಣ. ಅದನ್ನೂ ಸಾಧಿಸಿಕೊಳ್ಳಬೇಡಿ. ಈ ಮೃಗೀಯ ಗುಣ ನನ್ನಲ್ಲೂ ಇದೆ. ನನ್ನಲ್ಲಿದೆ ಎಂದ ಮಾತ್ರಕ್ಕೆ ಸರಿಯಲ್ಲ. ಸಾತ್ವಿಕ ಗುಣವಿರುವವರನ್ನು ದೂಷಿಸುವುದು ಸರಿಯಲ್ಲ. ಕಾಡಿನಲ್ಲಿ ಜಿಂಕೆ ಬಳಿ ಹೋಗುತ್ತೀರೊ ಇಲ್ಲ ಹುಲಿಯ ಬಳಿ ಹೋಗುತ್ತೀರೊ.
ಮಂಗನಿಂದ ಮಾನವರಾದ ಯಾವ ಜಾತಿ,ಯಾವ ಧರ್ಮ ಇರಲಿಲ್ಲ.ಯುಗಗಳು ಕಳೆಯುತ್ತಾ ಜಾತಿ ಧರ್ಮ ಸೃಷ್ಟಿ ಆಯ್ತು.ಆಹಾರ ಪದ್ಧತಿ ಬದಲಾಯಿತು,ಇಲ್ಲಿ ಯಾವ ಜಾತಿ ಮೇಲೆ ಅಲ್ಲಾ,ಕೀಳು ಅಲ್ಲಾ.ಎಲ್ಲಾರು ಒಂದೆ.
Valle maatu galu yellaru artha madkoluvanta visaya idu 👏👏