Homeಚಳವಳಿಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನೂ ಪಾಠ ಆರಂಭಿಸದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ವಿರುದ್ಧ ಬನಾರಸ್ ಹಿಂದೂ ವಿ.ವಿ.ಯಲ್ಲಿ ಪ್ರತಿಭಟನೆ!!!! ಇದು ಎಬಿವಿಪಿ-ಆರೆಸ್ಸೆಸ್‌ನ ಕೋಮುವಾದಿ ಪ್ರಹಸನ!

- Advertisement -
- Advertisement -

ಕೃಪೆ: ದಿ ಕ್ವಿಂಟ್‌

ಐಶ್ವರ್ಯ ಎಸ್. ಅಯ್ಯರ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನು ಪಕ್ಕಾ ರಾಜಕೀಯ ಪ್ರೇರಿತ ಕೋಮುವಾದ ಎನ್ನದೇ ಬೇರೆ ದಾರಿಯೇ ಇಲ್ಲ. ಇನ್ನೂ ಪಾಠವನ್ನೇ ಮಾಡದ, ಪರಿಚಯವೇ ಆಗದ ಹೊಸ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣ ಅವರು ಮುಸ್ಲಿಂ ಎಂಬುದು ಮಾತ್ರ!

“ನೀವು ನನಗೊಂದು ಅವಕಾಶ ಕೊಡಿ. ಆಗ ನಿಮ್ಮ ಪ್ರತಿಭಟನೆಗೆ ಅಗತ್ಯವೇ ಇಲ್ಲವೆಂದು ನಿಮಗೆ ತಿಳಿಯಲೂ ಬಹುದು” ಹೀಗೆಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದ ವಿದ್ಯಾರ್ಥಿಗಳಿಗೆ ಮನವಿ ಮಾಡಿದವರು ರಾಜಸ್ಥಾನದ ಜೈಪುರ ಜಿಲ್ಲೆಯವರಾದ 28ರ ಹರೆಯದ ಫಿರೋಜ್ ಖಾನ್.

ಅವರು ನವೆಂಬರ್ 7ರಂದು ಇಲ್ಲಿ ಬಂದಿಳಿದಿದ್ದರು. ಆದರೆ, ಹಿಂದಿನ ದಿನವೇ ಅವರ ಇಮೇಲ್ ಬಾಕ್ಸಿಗೆ ಅವರನ್ನು ಬಿಎಚ್‌ಯುವಿನ ಸಹಾಯಕ ಸಂಸ್ಕೃತ ಪ್ರಾಧ್ಯಾಪಕರಾಗಿ ನಿಯುಕ್ತಿಗೊಳಿಸಿದ ಪತ್ರ ತಲಪಿತ್ತು. ಆಗಲೇ ಬಿಜೆಪಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆದುದರಿಂದ, ದೇಶದ ಪ್ರತಿಷ್ಟಿತ ಮತ್ತು ಹಳೆಯ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಅವರ ಕಾತರವು ತಕ್ಷಣವೇ ಆತಂಕವಾಗಿ ಬದಲಾಯಿತು.

ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಗೊತ್ತೆ? “ಹಿಂದೂವೊಬ್ಬ ಹೇಗೆ ಮದರಸದಲ್ಲಿ ಪಾಠ ಮಾಡಲು ಸಾಧ್ಯವಿಲ್ಲವೋ, ಹಾಗೆಯೇ ಮುಸ್ಲಿಮನೊಬ್ಬ ‘ಗುರುಕುಲ’ದಲ್ಲಿ ಪಾಠಮಾಡಲು ಸಾಧ್ಯವಿಲ್ಲ ಎಂಬುದು!(ವಿಶ್ವವಿದ್ಯಾಲಯವೊಂದು ‘ಗುರುಕುಲ’ವಾದದ್ದು ಯಾವಾಗ ಎಂದು ಅವರೇ ಬಲ್ಲರು!). ಈಗ, ಸಂಸ್ಕೃತ ವಿಭಾಗಕ್ಕೇ ಬೀಗ ಜಡಿಯಲಾಗಿದ್ದು, ಖಾನ್ ಅವರು ಒಂದೇ ಒಂದು ಪಾಠವನ್ನೂ ಮಾಡಿಲ್ಲ. ಆದರೂ, ಅವರು ಪರಿಸ್ಥಿತಿ ಸುಧಾರಿಸಿ, ತಿಳಿಯಾಗುವ ಬಗ್ಗೆ ವಿಶ್ವಾಸ ಕಳೆದುಕೊಂಡಿಲ್ಲ.

ಅವರು ಬಹಿರಂಗಪಡಿಸಲು ಇಚ್ಚಿಸದ ಸ್ಥಳವೊಂದರಲ್ಲಿ ‘ದಿ ಕ್ವಿಂಟ್’ ಜೊತೆ ಮುಕ್ತವಾಗಿ ಮಾತನಾಡಿ, “ಬಹುಶಃ ನಾನು ಬಿಎಚ್‌ಯು ವಿದ್ಯಾರ್ಥಿಗಳ ಯೋಚನಾ ರೀತಿಯನ್ನು ಬದಲಿಸಲೂ ಸಾಧ್ಯವಾಗಬಹುದು. ಇದನ್ನು ಹೇಗೆ ಮಾಡುವುದು ಎಂದು ನನಗೆ ಗೊತ್ತಿಲ್ಲ. ಅವರು ನನ್ನನ್ನು ಸರಿಯಾಗಿ ತಿಳಿದುಕೊಂಡರೆ, ನನ್ನನ್ನು ಮೆಚ್ಚಿಕೊಳ್ಳಬಹುದು” ಎಂದರು.

ಫಿರೋಜ್ ಜೈಪುರ ಜಿಲ್ಲೆಯ ಬಗ್ರು ಎಂಬ ಪಟ್ಟಣದಲ್ಲಿ ಜನಿಸಿದವರು. ನಾಲ್ವರು ಗಂಡುಮಕ್ಕಳಲ್ಲಿ ಮೂರನೆಯವರು. ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್‌ನಿಂಧ ಸಂಸ್ಕೃತ ಸಾಹಿತ್ಯದಲ್ಲಿ ಬಿ.ಎಡ್. ಮತ್ತು ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಅವರನ್ನು ಸಂಸ್ಕೃತ ಶಾಲೆಗೆ ಸೇರಿಸಲಾಗಿತ್ತು.

ತನ್ನ ಅಜ್ಜ ಮತ್ತು ತಂದೆಯ ಬಗ್ಗೆ ಮಾತನಾಡುತ್ತಾ, ಪಿರೋಜ್ ಹೇಳುತ್ತಾರೆ: “ನನ್ನ ಅಜ್ಜ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರೀಗ ಇಲ್ಲ. ಆದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ, ಅಜ್ಜನನ್ನು ಹಾಡಲು ಕರೆಯುತ್ತಿದ್ದರು. ತಂದೆಯವರು ಅವರಿಂದ ಕಲಿತರು. ನಮ್ಮ ಮನೆಯಿಂದ 2-3 ಕಿ.ಮೀ. ದೂದದಲ್ಲಿ ಒಂದು ಹಸುಗಳ ಹಟ್ಟಿಯಿದೆ. ಅದನ್ನು ರಾಮದೇವ್ ಗೋಶಾಲೆ ಎಂದು ಕರೆಯುತ್ತಾರೆ. ನನ್ನ ತಂದೆಯವರು ಪ್ರತೀ ದಿನ ಅಲ್ಲಿಗೆ ಹೋಗಿ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಾರೆ”.

ಫಿರೋಜ್ ಅವರ ತಂದೆ ಸಂಸ್ಕೃತದಲ್ಲಿ ಪರಿಣಿತರಾಗಿದ್ದು, ಶಾಲೆ ಕಲಿಯುವ ಸಮಯದಲ್ಲಿ ಮಗನಿಗೆ ನೆರವಾಗುತ್ತಿದ್ದರಃ. ಫಿರೋಜ್, ಸಂಸ್ಕೃತದಲ್ಲಿ ಪಂಡಿತನಾಗಬೇಕು ಎಂದು ಬಯಸಿದ್ದರು. ಆದರೆ ಈಗ, ತನ್ನ ಮಗ ಒಮ್ಮೆ ಮನೆಗೆ ಹಿಂತಿರುಗಿ ಬರಲಿ ಎಂದು ಕಾತರರಾಗಿದ್ದಾರೆ.

“ನಮ್ಮ ತಂದೆಗೆ ಚಿಂತೆಯಿಂದ ನಿದ್ದೆ ಬರುತ್ತಿಲ್ಲ. ನೀನು ಮರಳಿ ಬಾ. ನಮಗೆ ಇರುವ ಸ್ವಲ್ಪದರಲ್ಲೇ ಬದುಕಬಹುದು. ಮನೆಯಿಂದ ದೂರ ಇರುವ ಅಗತ್ಯ ಇಲ್ಲ ಎಂದು ಅಣ್ಣ ಪಾಪಾಸು ಕರೆಯುತ್ತಾರೆ. ನಾನು ಏನನ್ನೂ ಹೇಳುವುದಿಲ್ಲ. ಆದರೆ, ನಾನಿಲ್ಲಿ ಉಳಿಯಬೇಕೆಂದು ನನ್ನ ನಂಬಿಕೆ” ಎನ್ನುತ್ತಾರೆ ಫಿರೋಜ್.

ಅವರ ನೇಮಕಾತಿ ವಿರುದ್ದ ನೇರವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುವ ಉದ್ದೇಶ ಇದೆಯೇ ಎಂದು ಕೇಳಿದಾಗ, ತಾನು ಮಾತುಕತೆಗೆ ಮುಕ್ತವಾಗಿದ್ದು, ಆಡಳಿತವು ಬಯಸಿದರೆ ಮಾತುಕತೆಗೆ ಸಿದ್ಧ ಎನ್ನುತ್ತಾರೆ. ಸದ್ಯಕ್ಕೆ ತಾನು ಯಾವಾಗ ಪಾಠ ಮಾಡಲು ಆರಂಭಿಸಬಹುದು ಎಂಬ ಬಗ್ಗೆ ತನಗೇ ಗೊತ್ತಿಲ್ಲ ಎನ್ನುತ್ತಾರೆ.

ಬಿಎಚ್‌ಯುವಿನ ಅವಕಾಶವನ್ನು ಬಿಟ್ಟುಕೊಡಲು ಸಿದ್ಧವಿಲ್ಲದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ, ಬಿಎಚ್‌ಯುವಿಗೆ ಅವರು ನೀಡಿದ ಮೊದಲ ಭೇಟಿಯ ನೆನಪುಗಳು. ಹಿಂದಕ್ಕೆ ಹೋಗುತ್ತಾ ಅವರು ಹೇಳುತ್ತಾರೆ: “2017ರಲ್ಲಿ ಬಿಎಚ್‌ಯು ತನ್ನ ಸಂಸ್ಕೃತ ಉತ್ಸವಕ್ಕೆ ನನ್ನನ್ನು ಆಹ್ವಾನಿಸಿತ್ತು. ನಾನು ಓಂಕಾರನಾಥ ಠಾಕೂರ್ ಅಪೇಕ್ಷಾ ಸದನದಲ್ಲಿ ಹಾಡಿದ್ದೆ. ಪ್ರತಿಯೊಂದೂ ಸ್ಮರಣೀಯವಾಗಿತ್ತು. ಅವರು ನನ್ನನ್ನು ತಮ್ಮ ಅತಿಥಿಗೃಹದಲ್ಲಿ ಇರಿಸಿಕೊಂಡು ನನ್ನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಸತ್ಕರಿಸಿದ್ದರು. ನನಗೆ ಬಹಳ ಗೌರವ ಕೊಟ್ಟಿದ್ದರು.”

ತಾನು ಸಂಸ್ಕೃತ ಕಲಿಯುವುದಕ್ಕಾಗಿ ವಿನಿಯೋಗಿಸಿದ ಇಷ್ಟು ವರ್ಷಗಳನ್ನು ನೆನಪಿಸಿಕೊಂಡ ಅವರು, ಇವತ್ತಿನ ತನಕ ಯಾರೂ ಸಂಸ್ಕೃತ ತನ್ನ ಸ್ವಂತ ಭಾಷೆಯಲ್ಲ ಎಂಬ ಭಾವನೆ ಬರುವಂತೆ ಮಾಡಿರಲಿಲ್ಲ ಎನ್ನುತ್ತಾರೆ. “ನನಗೆ ಯಾವುದೇ ತೊಂದರೆ ಉಂಟಾದಾಗ ಹಿಂದೂಗಳಾಗಿದ್ದ ಗುರುಗಳ ಬಳಿಗೆ ಹೋಗುತ್ತಿದ್ದೆ. ಅವರು ನನಗೆ ತಮ್ಮ ಶಕ್ತಿ ಮೀರಿ ನೆರವಾಗುತ್ತಿದ್ದರು. ನಾನು ಬೇರೆಯವನು ಎಂಬ ಭಾವನೆ ಬರುವಂತೆ ನನ್ನ ಗುರುಗಳು, ನನ್ನ ಮಿತ್ರರು, ನನ್ನ ಶಿಷ್ಯರಾದಿಯಾಗಿ ಯಾರೂ, ಎಂದೂ ಮಾಡಲಿಲ್ಲ. ಆದರೆ, ಈಗೇಕೆ ಹಾಗಾಗುತ್ತಿದೆ?” ಎಂದು ಅವರು ಕೇಳುತ್ತಾರೆ.

ಅವರ ಸಂಸ್ಕೃತ ಎಷ್ಟು ನಿರರ್ಗಳವಾಗಿದೆ ಎಂದು ಕೇಳಿದಾಗ, ತಾನು ನಿಯಮಿತವಾಗಿ ದೂರದರ್ಶನದಲ್ಲಿ ಸುದ್ದಿ ಓದುತ್ತಿದ್ದೆ ಎನ್ನುತ್ತಾರವರು. “ದೂರದರ್ಶನಲ್ಲಿ ಸಂಸ್ಕೃತ ವಾರ್ತಾವಳಿ ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಬಾಲಿವುಡ್ ಹಾಡುಗಳನ್ನು ಸಂಸ್ಕೃತಕ್ಕೆ ಅನುವಾದಿಸಬೇಕಾಗುತ್ತದೆ. ಅವರು ಹಾಡುಗಳನ್ನು ಅನುವಾದಕ್ಕಾಗಿ ನನಗೆ ಕಳುಹಿಸುತ್ತಿದ್ದರು. ನಾನು ಹಾಡಿದ ಹಾಡುಗಳನ್ನು ಅವರು ಪ್ರಸಾರ ಮಾಡುತ್ತಿದ್ದರು” ಎಂದು ಹೇಳುತ್ತಾರೆ. ಅದಲ್ಲದೇ, 2019ರ ಆಗಸ್ಟ್‌ನಲ್ಲಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಸಂಸ್ಕೃತ ಯುವ ಪ್ರತಿಭಾ ಪುರಸ್ಕಾರ್ ಎಂಬ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಬಿಎಚ್‌ಯು ಆಡಳಿತವು ಮತ್ತೆ ಮತ್ತೆ ಸ್ಪಷ್ಟನೆ ನೀಡಿದ್ದು, ತಾನು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದಿದೆಯಲ್ಲದೆ, ಈ ತನಕ ಫಿರೋಜ್ ಅವರ ಬೆಂಬಲಕ್ಕೆ ನಿಂತಿದೆ. ಅದಲ್ಲದೇ ಹಿಂದೂ, ಮುಸ್ಲಿಮರೆನ್ನದೇ ಬಹುತೇಕ ವಿದ್ಯಾರ್ಥಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬೇರೆ ಧರ್ಮದವರಿಂದ ಪಾಠ ಕಲಿಯುವುದಿಲ್ಲ ಎಂಬ ಸಂಕುಚಿತ ನಿಲುವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, ಪ್ರತಿಭಟನೆ ನಡೆಸುತ್ತಿರುವವರು ಕೇವಲ ಎಬಿವಿಪಿ ಮತ್ತು ಆರೆಸ್ಸೆಸ್‌ಗೆ ಸೇರಿದವರು ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...