Homeಕರ್ನಾಟಕಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

ಮನುವಾದಿ ಮೀಸಲಾತಿ ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ: ಬರಗೂರು ರಾಮಚಂದ್ರಪ್ಪ

- Advertisement -
- Advertisement -

ಶತಮಾನಗಳಿಂದ ನಮ್ಮ ಮೇಲೆ ಹೇರಲ್ಪಟ್ಟ ಮನುವಾದಿ ಮೀಸಲಾತಿಯನ್ನು ಧಿಕ್ಕರಿಸಿ ಮಾನವತಾವಾದಿ ಮೀಸಲಾತಿ ಜಾರಿಗೆ ತಂದಿದ್ದೇವೆ. ಸ್ವತಂತ್ರ ಭಾರತದಲ್ಲಿ ಮೀಸಲಾತಿಗೆ ಶಾಸನಬದ್ಧತೆಯನ್ನು ತಂದು ಕೊಟ್ಟವರು ಅಂಬೇಡ್ಕರ್‌ರವರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ, ’ಮೀಸಲಾತಿ ನೂರು ವರ್ಷ’ ಕುರಿತ ರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಸಂವಿಧಾನ ಎಂದರೆ ಮೀಸಲಾತಿ, ಮೀಸಲಾತಿ ಎಂದರೆ ಸಂವಿಧಾನ ಎಂದು ತಪ್ಪಾಗಿ ಭಾವಿಸಿದ್ದಾರೆ. ಮೀಸಲಾತಿ ಸಂವಿಧಾನದ ಒಂದು ಅಂಶವೇ ಹೊರತು ಮೀಸಲಾತಿಯೇ ಸಂವಿಧಾನವಲ್ಲ. ಸಂವಿಧಾನ ಆಡಳಿತಕ್ಕೆ ಬೇಕಾದಂತ ಎಲ್ಲಾ ತಾಂತ್ರಿಕ ಮತ್ತು ತಾತ್ವಿಕ ಚೌಕಟ್ಟನ್ನು ಒದಗಿಸಿದೆ. ಸಂವಿಧಾನ ಶಾಸ್ತ್ರಕ್ಕೆ ಸಿಗದ ಸಂವೇದನೆ. ಇಲ್ಲಿ ಸಂವೇದನೆ ಎಂದರೆ ಸಾಮಾಜಿಕ ನ್ಯಾಯದ ಆಶಯ, ಸಮಾನತೆಯ ಆಶಯವಾಗಿದೆ ಎಂದರು.

ಮೀಸಲಾತಿಯಿಂದ ಪ.ಜಾತಿ/ಪ.ಪಂಗಡದವರಿಗೆ ಮಾತ್ರ ಉದ್ಯೋಗ ಸಿಕ್ಕಿದೆ ಎಂದು ಬಹಳಷ್ಟು ಜನರಿಗೆ ಅಸಮಾಧಾನವಿದೆ. ಮೀಸಲಾತಿಯಿಂದ ಅನೇಕ ಸುಧಾರಣೆಗಳು ನಡೆದಿವೆ ನಿಜ, ಆದರೆ ಮೀಸಲಾತಿಯ ಕುರಿತು ಅಸಹನೆ ವ್ಯಕ್ತಪಡಿಸುವಷ್ಟು ಉನ್ನತ ಉದ್ಯೋಗಗಳು ದಲಿತರಿಗೆ ಸಿಕ್ಕಿವೆ ಎನ್ನುವುದು ಸತ್ಯವಲ್ಲ. ಯೋಗೇಂದ್ರಯಾದವ್ ಅವರ ಸಮೀಕ್ಷೆಯ ವರದಿ ಮತ್ತು ಕೇಂದ್ರ ಸರ್ಕಾರದ ಅಂಕಿ ಅಂಶಗಳನ್ನು ನೋಡಿದರೆ ದೊಡ್ಡ ದೊಡ್ಡ ಸಂಸ್ಥೆಗಳಾದ ಐಐಎಂ, ಐಐಟಿಗಳಲ್ಲಿ ಎಷ್ಟು ಎಸ್ಸಿ ಎಸ್ಟಿಯ ಪ್ರಾಧ್ಯಾಪಕರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದರು.

ಆದರೆ ಮೀಸಲಾತಿ ಮೆರಿಟ್‌ಗೆ ವಿರುದ್ಧ ಎನ್ನುವವರಿದ್ದಾರೆ. ದೇಶದ ಎಲ್ಲಾ ಉನ್ನತ ವಿವಿಗಳಲ್ಲಿ ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಪ್ರಾಧ್ಯಾಪಕರೆ ಇದ್ದಾರೆ. ಆದರೂ ಜಗತ್ತಿನ ಉತ್ತಮ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದು ವಿವಿ ಇಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಮೆರಿಟ್ ಎಂಬ ಮಿಥ್ಯೆ ಇಟ್ಟುಕೊಂಡು ಮೀಸಲಾತಿ ವಿರೋಧ ಮಾಡುವ ಪ್ರವೃತ್ತಿ ಅಪ್ಪಟ ಹುಸಿತನದ್ದು ಎಂದರು.

ಇನ್ನು ಮೀಸಲಾತಿ ವಿಚಾರಕ್ಕೆ ಬಂದರೆ, ಜಾತಿವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ಮೀಸಲಾತಿ ಇರಬೇಕು. ಮೀಸಲಾತಿಯನ್ನು ಅಸಹನೀಯವಾಗಿ ಬಿಂಬಿಸುವ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಅವರಿಗೆ ತಿಳಿದಿರಲಿ, ಹತ್ತಾರು ಶತಮಾನಗಳಿಂದ ಮೀಸಲಾತಿ ಜಾರಿಯಲ್ಲಿದೆ. ಶಿಕ್ಷಣ, ದೇವಾಲಯ ಪ್ರವೇಶ, ಮನೆ, ಬಾವಿ ನೀರು, ಕೆರೆ, ಬೀದಿಗಳು ಕೆಲವರಿಗೆ ಮೀಸಲಾಗಿತ್ತು. ಅಷ್ಟೇ ಅಲ್ಲದೆ, ಸ್ಪರ್ಶ ಸಹ ಮೀಸಲಾಗಿತ್ತು. ಆದರೆ, ಇದನ್ನು ನಾವು ಧಿಕ್ಕರಿಸಿದ ಕಾರಣ, ಕೆಲವರು ಇಂದಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾದ ಮೀಸಲಾತಿಯನ್ನು ಟೀಕಿಸುತ್ತಾರೆ ಎಂದರು.

ಗೋಡ್ಸೆ ಕೊಲೆಗಾರ ಎನ್ನಲು ಹಿಂದೇಟು ಏಕೆ?:

ಕರ್ನಾಟಕ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬರೇ, ಸಂವಿಧಾನ ಬರೆದಿಲ್ಲ ಎಂದಿರುವುದು ಅವರ ವಿಕೃತ ಮನಸ್ಥಿತಿಯನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ, ಒರಿಸ್ಸಾದ ಪಠ್ಯವೊಂದರಲ್ಲಿ ಮಹಾತ್ಮ ಗಾಂಧಿ ಅವರು ಅವಘಡದಿಂದಾಗಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಗಾಂಧಿಯನ್ನು ಹತ್ಯೆಗೈದವನು ಗೋಡ್ಸೆ ಎಂದು ಹೇಳಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿದರು. 2018ರ ಆಗಸ್ಟ್‌ನಲ್ಲಿ ದೆಹಲಿಯ ಜಂತರ್ ಮಂತರ್ ಅಲ್ಲಿ ಭಾರತೀಯ ಸಂವಿಧಾನವನು ಸುಟ್ಟು ಅಂಬೇಡ್ಕರ್ ವಿರುದ್ಧ ದಿಕ್ಕಾರ ಕೂಗುವ ಘಟನೆ ನಡೆಯುತ್ತದೆ. 2019 ಜನವರಿಯಲ್ಲಿ ಗಾಂಧೀಜಿಯವರ ಭಾವಚಿತ್ರದಲ್ಲಿ ಅವರ ಎದೆಗೆ ಅಣಕು ಗುಂಡನ್ನು ಹಾರಿಸಿ ವಿಕಾರ ಸಂಭ್ರಮ ಪಡುವ ಘಟನೆ ನಡೆಯುತ್ತದೆ. ಇವೆಲ್ಲವೂ ದೇಶದ ಸಂವಿಧಾನವನ್ನು ಮರೆಮಾಚುವ ಹುನ್ನಾರ ಎಂದರು.

ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಅವರ ನಡುವೆ ತಾರ್ಕಿಕ ಭಿನ್ನಾಭಿಪ್ರಾಯಗಳು ಮಾತ್ರ ಇದ್ದವು. ಅದನ್ನೇ ನೆಪವಾಗಿಟ್ಟುಕೊಂಡು ಅವರ ಅನುಯಾಯಿಗಳ ನಡುವೆ ಅಸಹನೆ ಹೆಚ್ಚಾಗಿದೆ ಎಂದ ಅವರು, ಗಾಂಧಿ ಮತ್ತು ಅಂಬೇಡ್ಕರ್ ನಮಗೆ ಮುಖ್ಯವಾಗಬೇಕು. ಇದೀಗ ಮೂಲಭೂತವಾದಿಗಳು ಗಾಂಧಿಯನ್ನು ತಳ್ಳುತ್ತಾ, ಅಂಬೇಡ್ಕರ್ ಅವರನ್ನು ವಶಪಡೆಸಿಕೊಳ್ಳುತ್ತಿರುವ ಪ್ರಕ್ರಿಯಲ್ಲಿ ನಿರತರಾಗಿರುವಾಗ ನಾವು ಎಚ್ಚೆತ್ತುಕೊಳ್ಳಬೇಕು ಎಂದರು.

ಸಮಾವೇಶದ ಅಧ್ಯಕ್ಷತೆಯನ್ನು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್, ಡಾ.ಕಿರಣ್ ಗಾಜನೂರು, ಡಾ.ರಾಜಪ್ಪ ದಳವಾಯಿ ಸಂಘಟನೆ ಸಂಚಾಲಕರಾದ ಡಾ.ರಾಜು ಗುಂಡಾಪುರ, ಬಿ.ರಾಜಶೇಖರ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ಇವತ್ತಿನ ಸ್ವಸ್ಥ ಸಮಸಮಾಜ ನಿರ್ಮಾಣ ದಲ್ಲಿ ಗೌರಿ ಮೇಡಮ್ ರವರ ಪತ್ರಿಕೆ ತುಂಬಾ ಆವಶ್ಯಕವಾದುದು.

  2. ಪಂಗಡ,ಪಂಗಡಗಳೊಳಗೆ ಹಣಕಾಸು ಮಾನದಂಡದಡಿಯಲ್ಲಿ ಶೇ.ನೂರು ಮೀಸಲಾತಿ ಒದಗಿಸುವುದೊಂದೇ ಮೀಸಲಾತಿ ಕಗ್ಗಂಟಿಗಿರುವ ಪರಿಹಾರ.
    ಶೆ.ಅಯ್ವತ್ತರ ಮಿತಿಯನ್ನು ತಕ್ಕ ತಿದ್ದುಪಡಿ ಮಾಡಿ ಸಡಿಲಮಾಡಬೇಕಾಗಿದೆ

  3. ಮೀಸಲಾತಿ ನೆರವಿನಿಂದ ಮೇಲೆ ಬಂದ ಪ.ಪ/ಪ.ಬುಡಕಟ್ಟು ಮಂದಿ ತನ್ನದೇ ಪಂಗಡದ ವಂಚಿತ ಮಂದಿಗೆ ತಕ್ಕ ಪಾಲು ಸಿಗುವಂತೆ ಹೆಜ್ಜೆ ಇಡಬೇಕು. ಇಲ್ಲವಾದರೆ, ಮೀಸಲಾತಿ ಒಪ್ಪದವರ ಎದುರು ದಾಳಿಗೆ ಪದೇಪದೇ ತುತ್ತಾಗಬೇಕಾಗುತ್ತೆ. ಇದು ಮತ್ತೆ ಕೆಲವರ ಎಲೆಕ್ಶನ್ ಇಶ್ಯೂ ಆಗಿ ಒಡಕಿಗೆ ಎಡಮಾಡಲಿದೆ.
    ಮೀಸಲಾತಿಯಿಂದ ಒಂದು ಬಗೆಯ ಹತೋಟಿ ಕೂಟ ಮೂಡಿರುವುದನ್ನೂ ಕೂಡ ಕಡೆಗಣಿಸಬಾರದು.

  4. ಈಗ ಹೆಚ್ಚುಮಂದಿಗೆ ಅನುಕೂಲವಾಗುತ್ತಿರುವ ಮೀಸಲಾತಿ ಏರ್ಪಾಡಿಗಿಂತ ಹತೋಟಿಕೂಟ ಬಡ್ತಿಯಲ್ಲಿ ತನಗೆ ಸಿಗಬೇಕಾದ ಹೆಚ್ಚಿನಪಾಲಿಗೆ ಹಾತೊರೆಯುತ್ತಿರುವ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಬಗೆಹರಿಸಿಕೊಳ್ಳಬೇಕುಉ.
    ಒಳಮೀಸಲಾತಿಯನ್ನು ಪಡೆಯಲು ಮೂಡುತ್ತಿರುವ ದಿಟವಾಗಿಯೂ ತುಳಿತಕ್ಕೊಳಗಾದವರ ಹೋರಾಟವನ್ನು ಮೀಸಲಾತಿ ಒಪ್ಪುವವರು ಬೆಂಬಲಿಸಲು ಯಾವುದೇ ನೆಪ ಹೇಳಬಾರದು.

  5. ಸದಾಶಿವ ರಿಪೋರ್ಟ್, ಸೋಸಿಯೋ ಎಕಾನಮಿಕ್ ಸರ್ವೆ ರಿಪೋರ್ಟ್ ಅನ್ನು ಬಯಲುಗೊಳಿಸಲು ಒತ್ತಾಯಿಸಬೇಕು.

  6. ಈ ಬಗ್ಗೆ ಹೆಚ್ಚಿನ ಒರೆತಮಾಡಿ ತಕ್ಕ ತಿದ್ದುಪಡಿಗೆ ಎಡೆಮಾಡಿಕೊಡಬೇಕು.

  7. ಮೀಸಲಾತಿ ಬಗೆಗೆ ಗಣಿತದಂತೆ ಪಕ್ಕಾ ಪಾರ್ಮುಲ ತಂದರೆ, ಏಳಿಗೆಗೆ ಇರುವ ದಾರಿಯತ್ತ ದಾಪುಗಾಲಿಡಬಹುದು.

LEAVE A REPLY

Please enter your comment!
Please enter your name here

- Advertisment -

ಇರಾನ್‌ನ ಕಿರೀಟ ರತ್ನ ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ : ಟ್ರಂಪ್ ಹೇಳಿಕೆ

ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ 'ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ' ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ದ್ವೀಪದಲ್ಲಿರುವ ತೈಲ ಮೂಲಸೌಕರ್ಯಗಳನ್ನು ನಾಶಪಡಿಸದೆ ಇರಲು ನಿರ್ಧರಿಸಿದ ಅಮೆರಿಕ ಪಡೆಗಳು, ಅಲ್ಲಿನ ಮಿಲಿಟರಿ ಕೇಂದ್ರಗಳನ್ನು...

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...