Homeಕರ್ನಾಟಕಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್...

ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ

- Advertisement -
- Advertisement -

‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ ವ್ಯಕ್ತಿ ಪ್ರಾಮಾಣಿಕವಾಗಿದ್ದಂತೆ ಎಲ್ಲರಿಗೂ ಅನ್ನಿಸುತ್ತಿತ್ತಾದರೂ, ಇಂದಿನ ರಾಜಕಾರಣದಲ್ಲಿ ಇಂತಹ ಒಬ್ಬ ಶಾಸಕ ಇರಲು ಸಾಧ್ಯವೇ ಎಂಬ ಗುಮಾನಿಯೂ ಇತ್ತು. ನಾರಾಯಣರಾವ್‍ರನ್ನು ಬಲ್ಲವರಿಗೆ ಅಂತಹ ಅನುಮಾನವೇನೂ ಇಲ್ಲ. ‘80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ ಉತ್ಸಾಹಿ ಅವರು. ಬಸವಕಲ್ಯಾಣದ ಹಿಂದುಳಿದ ಜಾತಿಯ ಅವರು ನಿರಂತರವಾಗಿ ರಾಜಕಾರಣದಲ್ಲಿದ್ದರೂ ಅಧಿಕಾರದ ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಆ ನಂತರ ದೇವೇಗೌಡರೊಮ್ಮೆ ತಮ್ಮ ಪಕ್ಷದಿಂದ ‘89ರಲ್ಲಿ ಎಂಎಲ್‍ಎ ಟಿಕೆಟ್ ಕೊಟ್ಟಿದ್ದರಾದರೂ ಯಶಸ್ವಿಯಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, 2018ರಲ್ಲಿ ಗೆದ್ದರು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅತಿಥಿಗೃಹದಲ್ಲಿ ಪತ್ರಿಕೆಯ ತಂಡಕ್ಕೆ ನಾರಾಯಣರಾವ್ ಮಾತಿಗೆ ಸಿಕ್ಕರು.

ಚಿತ್ರಕೃಪೆ: ಯೋಯೋ ಟಿವಿ

ಪತ್ರಿಕೆ: ವಿಧಾನಸಭೆಯಲ್ಲಿ ನೀವು ಮಾತಾಡಿದ್ದನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. ನಿಮ್ಮಂತಹ ವ್ಯಕ್ತಿಗಳು ರಾಜಕಾರಣ ಮಾಡುವ ಪರಿಸ್ಥಿತಿ ಇದೆಯೇ? ನೀವು ಬಯಸುವಂತಹ ಬದಲಾವಣೆ ರಾಜಕಾರಣದಲ್ಲಿ ಸಾಧ್ಯವೇ?

ಬಿ.ನಾರಾಯಣರಾವ್: ಯಾರು ಬದಲಾವಣೆ ಆಗುತ್ತಾರೋ ಬಿಡುತ್ತಾರೋ ಅದು ನಮಗೆ ಸಂಬಂಧಿಸಿಲ್ಲ. ನಾವು, ನಮ್ಮಂತಹ ನಿಷ್ಠಾವಂತರು ಪ್ರಾಮಾಣಿಕರು, ಜನಪರ ಕಾಳಜಿಯಿಟ್ಟು ಹೋರಾಟ ಮಾಡಿದಂತವರು ಬದಲಾಗಬಾರದು.

ಯಾರು ಏನ್ ಮಾಡ್ತರೋ ಬಿಡ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಮಹಾತ್ಮಗಾಂಧಿ ಎಲ್ಲರಿಗಿಂತ ಭಿನ್ನವಾದ ನಾಯಕತ್ವ ಕೊಟ್ಟರು. ಹಾಗಾಗಿ ನಮ್ಮಂತವರು ಅಲ್ಲೊಬ್ಬರು ಇಲ್ಲೊಬ್ಬರು ಉಳಿದುಕೊಂಡಿದ್ದೇವೆ. ಇದು ಬದಲಾವಣೆ ಆಗುವುದಿಲ್ಲ ಅಂತ ನಾವು ಕೆಟ್ಟವರ ಜೊತೆ ಹೋಗೋಕ್ಕಾಗಲ್ಲ.

ಪತ್ರಿಕೆ: ಅನರ್ಹ ಶಾಸಕರು – ಮಾರಿಕೊಂಡು ಹೋದವರನ್ನು ನಿಮ್ಮ ಪಕ್ಷದವರು, ನೀವು ಬೈದಿರಿ. ಆದರೆ ಅಂತಹವರಿಗೆ ಟಿಕೆಟ್ ಕೊಟ್ಟಿದ್ದೇ ನಿಮ್ಮ ಪಕ್ಷವಲ್ಲವೇ?

ವಿಧಾನಸಭೆಯಲ್ಲೇ ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮೂರು ಜನರಿಗೆ ಸೇರಿಸಿ ಹೇಳಿದ್ದೀನಿ. ಚುನಾವಣೆಗೆ ಕೇವಲ ಹದಿನೈದು ದಿನ ಇದ್ದಾಗ, ಹಣವಂತರು, ಸಾರಾಯಿ ಮಾರುವವರು, ರಿಯಲ್ ಎಸ್ಟೇಟ್‍ನವರು ಕಪ್ಪು ಹಣ ಉಳ್ಳವರಿಗೆ ಟಿಕೆಟ್ ಕೊಟ್ಟಿದ್ದೇ ಈ ಅನಾಹುತಕ್ಕೆ ನಿಜವಾದ ಕಾರಣ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯನು ಕಟ್ಟಿ,
ಸವಿಜೇನು ಹಾಲು ತುಪ್ಪವನ್ನು ಎರೆದರೆ
ಕಹಿಯಲ್ಲದೇ ಸಿಹಿಯಾಗಬಲ್ಲುದೇ
ನಮ್ಮ ಕೂಡಲ ಸಂಗಮದೇವ

ಎಂದು ಬಸವಣ್ಣನವರು 800 ವರ್ಷಕ್ಕಿಂತ ಮುಂಚೆಯೇ ಹೇಳಿದ ಕಟುಸತ್ಯವನ್ನು ಉಲ್ಲೇಖಿಸಿದ್ದೆ. ಬೇವು ಬೀಜ ಬಿತ್ತಿದರೆ ಬೇವೇ ಸಿಗುತ್ತದೆ. ಮಾವು ಬಿತ್ತಿದರೆ ಮಾವೇ ಸಿಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲವೇ?

ಪತ್ರಿಕೆ: ನೀವು ಬಸವ ತತ್ವದ ಕುರಿತು ಇಷ್ಟೊಂದು ಮಾತಾಡುತ್ತೀರಿ. ಆದರೆ ಅದೇಕೆ ಬೆಳೆದು ನಿಲ್ಲಲಿಲ್ಲ?

ಬಿ.ನಾರಾಯಣರಾವ್: ಬಸವ ತತ್ವ ದ್ರಾವಿಡಿಯನ್ ಭಾಗದಲ್ಲಿ ನಮ್ಮ ದಕ್ಷಿಣದಲ್ಲಿ ಹುಟ್ಟಿರುವುದರಿಂದ ಇದು ಬೆಳೆದಿಲ್ಲ. ವಿಂಧ್ಯಪರ್ವತದ ಆಚೆ ಹುಟ್ಟಿದ ಧರ್ಮಗಳು – ಉದಾಹರಣೆಗೆ ಬುದ್ಧ ಧರ್ಮ ಇವತ್ತು ವಿಶ್ವವ್ಯಾಪಿಯಾಗಿಲ್ಲವೇ? ಮಹಾವೀರನ ಧರ್ಮವೂ ಬೆಳೆದಿದೆ. ಮೂರ್ನಾಲ್ಕು ಧರ್ಮಗಳು ವಿಂಧ್ಯ ಪರ್ವತದ ಆಚೆ ಹುಟ್ಟಿದವು ವಿಶ್ವವ್ಯಾಪಿಯಾಗಿವೆ.

ವಿಂಧ್ಯಪರ್ವತ ಈಚೆ ಹುಟ್ಟಿರುವುದು ಒಂದೇ ಒಂದು ಧರ್ಮ ಅದು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯಿತ ಧರ್ಮ. ಅಂಥ ಒಂದು ಧರ್ಮಕ್ಕೆ ರಾಜಕೀಯ ರಕ್ಷಣೆ ಸಿಕ್ಕಿಲ್ಲ. ರಾಜಾಶ್ರಯ ಸಿಕ್ಕಿಲ್ಲ. ಇದು ಒಂದೇ ಧರ್ಮಕ್ಕೆ ರಾಜಾಶ್ರಯ ಸಿಕ್ಕಿಲ್ಲ. ಬೌದ್ಧ ಧರ್ಮಕ್ಕೂ ರಾಜಾಶ್ರಯ ಸಿಕ್ಕಿತ್ತು.

ಪತ್ರಿಕೆ: ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿದ್ದಾರೆ.. ಅದು ರಾಜಾಶ್ರಯ ಸಿಕ್ಕ ಹಾಗಲ್ಲವೇ?
ಬಿ.ನಾರಾಯಣರಾವ್: ಯಡಿಯೂರಪ್ಪನವರು ಎಷ್ಟು ಕೆಲಸ ಮಾಡುತ್ತಾರೋ ಅಷ್ಟನ್ನು ನಾವು ಸ್ವಾಗತಿಸುತ್ತೇವೆ. ಅವರ ಮನಸ್ಸು ಬಸವಣ್ಣನವರ ಬಗ್ಗೆ ತುಡಿತ ಇದ್ರೂ, ಕಾಳಜಿ ಇದ್ರೂ ಕೂಡ ಅವರು ವೈದಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರು ಪೂರ್ಣ ಪ್ರಮಾಣದಲ್ಲಿ ಮಾಡಲಿಕ್ಕೆ (ಆ ವ್ಯವಸ್ಥೆ) ಬಿಡುವುದಿಲ್ಲ. ವೈದಿಕ ವ್ಯವಸ್ಥೆಯನ್ನು ಸಮಾಧಾನಪಡಿಸಲಿಕ್ಕೇನೇ ಅವರ ಒಂದು ಜೀವಮಾನ ಹೋಯ್ತು.

ಪ: ನೀವು ವ್ಯಕ್ತಿಗತ ನೆಲೆಯಲ್ಲಿ ಮಾತಾಡುತ್ತಿದ್ದೀರಿ. ಆದರೆ, ಸಮಗ್ರ ಬದಲಾವಣೆ ಬರಬೇಕಾದರೆ ಒಂದು ಪಕ್ಷ, ಸಂಘಟನೆ ಸರಿಯಿರಬೇಕು. ನಿಮ್ಮ ಪಕ್ಷವೂ ಸರಿಯಿಲ್ಲ. ಹೀಗಿದ್ದ ಮೇಲೆ ಸಮಾಜ ಬದಲಾವಣೆ ಹೇಗೆ ಸಾಧ್ಯ?

ಬಿ.ನಾರಾಯಣರಾವ್: ಹಾಗಂತ ನಾವು ಮನುವಾದಿಗಳ ಜೊತೆ, ಬಿಜೆಪಿ ಗುರುತಿಸಿಕೊಳ್ಳಲು ಆಗುವುದಿಲ್ಲ. ಅದು ನಾಗ್ಪುರದಿಂದ ನಡೆಯುವ ಪಕ್ಷ. ಆರ್‌ಎಸ್‍ಎಸ್‍ನವರ ಕೈಯಲ್ಲಿ ಅದರ ಜುಟ್ಟಿದೆ. ಮೋದಿ ಕೂಡ ಅವರ ಕೈಗೊಂಬೆ. ಯಡಿಯೂರಪ್ಪನವರು ಸಹ ಕೈಗೊಂಬೆಯೇ.. ಅವರು ಪೇಟಿ ಬಾರಿಸುತ್ತಾರೆ ಇವರು ಕುಣಿತಾರೆ. ಕಾನೂನುಗಳು ನಾಗ್ಪುರದಲ್ಲಿ ತಯಾರಾಗ್ತಾವೆ. ಅವರು ಪುಟ ಓದೋದು ಪಾರ್ಲಿಮೆಂಟಲ್ಲಿ. ಇದು ಕಟುಸತ್ಯ. ಎರಡು ಮಾತಿಲ್ಲ. ಈಗ ನಾವು ಇದ್ದುದರಲ್ಲಿ ಇಲ್ಲಿರಬೇಕು.. ಜೆಡಿಎಸ್ ಒಂದು ಕುಟುಂಬದ ಪಕ್ಷ ಆಗಿಬಿಟ್ಟಿದೆ. ಬಿಜೆಪಿಗೆ ನಾವು ಹೋಗುವಂತಿಲ್ಲ. ಕಾಂಗ್ರೆಸ್ಸೂ ಕೂಡ ನೈತಿಕವಾಗಿ ಅಷ್ಟೇನು ಒಳ್ಳೆದಿಲ್ಲ. ಅಲ್ಲಿ ಕೂಡ ಜನಪರ ಕಾಳಜಿ ಇರುವವರು ಒಂದು ಕಡೆ ಇದ್ದಾರೆ, ವೈದಿಕ ವ್ಯವಸ್ಥೆಯನ್ನು ಒಪ್ಪಿ ಕೊಂಡಿರುವವರು ಸಹ ಇದ್ದಾರೆ. ಅಲ್ಲಿ ಎಲ್ಲಾ ಸಾಚಾ ಇಲ್ಲ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಬರಬೇಕೆಂಬ ತುಡಿತ ನಮಗೂ ಇದೆ.

ಪ: ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಕಚ್ಚಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಹಾ ಇಲ್ಲ. ಈ ದುರಂತಕ್ಕೆ ಏನು ಹೇಳುತ್ತೀರಿ?

ಬಿ.ನಾರಾಯಣರಾವ್: ಅದೆಲ್ಲಾ 9ನೇ ತಾರೀಖಿಗೆ ಮುಕ್ತಾಯವಾಗುತ್ತದೆ ಸರ್. ಒಂದು ಹೇಳುತ್ತೇನೆ. ಈ ರಾಜ್ಯದಲ್ಲಿ ಜನನಾಯಕರಿರುವುದು ಇಬ್ಬರೆ. ಮೂರು ಪಕ್ಷ ಇವೆ ಮೂರು ಜನ ಇದ್ದಾರೆ. ಕಾಂಗ್ರೆಸ್‍ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‍ಗೆ ದೇವೇಗೌಡ. ಈಗ ಅವರದು – ಜೆಡಿಎಸ್‍ದು ಮುಗಿದಿದೆ. ಇನ್ನು ಯಡಿಯೂರಪ್ಪನವರದು ಎಷ್ಟು ದಿನ ನೋಡಬೇಕು. ಜನರಿಗೆ ನಾಟಕ ನೋಡಬೇಕಾಗಿದೆ. ಜೆಡಿಎಸ್ ನಾಟಕ ಮುಗಿದಿದೆ. ಈಗ ಬಿಜೆಪಿದು ಇದೆ. ಇದು ಎಷ್ಟು ದಿನ ನಡೆಯುತ್ತದೆ ನೋಡಬೇಕು. ಇದು ಮುಗಿದರೆ ಅನಿವಾರ್ಯವಾಗಿ ಕಾಂಗ್ರೆಸ್ ಬರಲೇಬೇಕು ಸರ್. ಇವೂ ಮೂರು ಬೇಡ ಅಂದ್ರೆ ಮತ್ತೊಂದು ಹುಟ್ಟಿದ್ದರೆ ಅದಕ್ಕೆ ಸೇರಬೇಕು.

ಪ: ಲಿಂಗಾಯಿತರು ಬಸವತತ್ವ ವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿಗೆ ಮತ ಕೊಡುತ್ತಾರಲ್ಲಾ. ಅದರ ಬಗ್ಗೆ ನೀವೇನು ಹೇಳುತ್ತೀರಿ?

ಬಿ.ನಾರಾಯಣರಾವ್: ಲಿಂಗಾಯಿತರು ಕಾಂಗ್ರೆಸ್‍ಗೆ ಮತ ಕೊಡದಿದ್ದರೂ ಪರವಾಗಿಲ್ಲ. ಆದರೆ ಬಸವಣ್ಣನವರಿಗೆ ಅನ್ಯಾಯ ಮಾಡದಂತೆ ಅವರ ತತ್ವದ ಮೇಲೆ ಅವರು ನಡೆದರೆ ಸಾಕು. ಅವರಿಗೆ ಶರಣು ಶರಣಾರ್ಥಿ. ತಮಗಿಷ್ಟ ಬಂದವರಿಗೆ ಮತ ಹಾಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಬಸವ ವಿರೋಧಿಯಾಗಿ, ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬಸವಣ್ಣನವರು ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೋ ಆ ವ್ಯವಸ್ಥೆಯ ಒಳಗೆ ಹೋಗಬಾರದು ಅಷ್ಟೇ.

ಸಂದರ್ಶನ:
ಡಾ.ವಾಸು.ಎಚ್.ವಿ ಮತ್ತು
ಸಿದ್ದಪ್ಪ ಮೂಲಗೆ


ಕೊರೊನಾ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಾರಾಯಣ ರಾವ್ ಅವರ ಅನಿಸಿಕೆಗಳು ವಾಸ್ತವಿಕವಾಗಿವೆ. ಈಗ ಈಗಿರುವ ಮೂರೂ ಪಕ್ಷಗಳ ಬದಲಿಗೆ ಇನ್ನೊಂದು ಪಕ್ಷ ದೆಹಲಿ ಅವಶ್ಯಕತೆಯಿದೆ. ದುದೈ೯ವವೆಂರರೆ ಅಂತಹ ಪಕ್ಷವನ್ನು ಕಟ್ಟುವ, ಬೆಳೆಸುವ ನಾಯಕನಿಲ್ಲ. ಹಾಗೆ ನೋಡಿದರೆ ಹಳೆಯ ಜನತಾ ದಳ ಭರವಸೆಯ ಪಕ್ಷ ವಾಗಿತ್ತು. ಆದರೆ ಪುನರ್ ಜೀವನವಾಗಬೇಕಾಗಿದೆ.

  2. ಹಳೇಪಕ್ಶಗಳಿಗೆ ಅಂಟಿಕೊಳ್ಳುವುದು ಸರಿಯಲ್ಲ.
    ದರ್ಮದ ಹಂಗಿಲ್ಲದ, ಕುಟುಂಬ ರಾಜಕಾರಣದ ಹಂಗಿಲ್ಲದ ಕನ್ನಡನೆಲೆಯ ಹೊಸಕೂಟ ಗಟ್ಟಿಯಾಗಬೇಕು.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...