Homeಕರ್ನಾಟಕಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್...

ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ

- Advertisement -
- Advertisement -

‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ ವ್ಯಕ್ತಿ ಪ್ರಾಮಾಣಿಕವಾಗಿದ್ದಂತೆ ಎಲ್ಲರಿಗೂ ಅನ್ನಿಸುತ್ತಿತ್ತಾದರೂ, ಇಂದಿನ ರಾಜಕಾರಣದಲ್ಲಿ ಇಂತಹ ಒಬ್ಬ ಶಾಸಕ ಇರಲು ಸಾಧ್ಯವೇ ಎಂಬ ಗುಮಾನಿಯೂ ಇತ್ತು. ನಾರಾಯಣರಾವ್‍ರನ್ನು ಬಲ್ಲವರಿಗೆ ಅಂತಹ ಅನುಮಾನವೇನೂ ಇಲ್ಲ. ‘80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ ಉತ್ಸಾಹಿ ಅವರು. ಬಸವಕಲ್ಯಾಣದ ಹಿಂದುಳಿದ ಜಾತಿಯ ಅವರು ನಿರಂತರವಾಗಿ ರಾಜಕಾರಣದಲ್ಲಿದ್ದರೂ ಅಧಿಕಾರದ ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಆ ನಂತರ ದೇವೇಗೌಡರೊಮ್ಮೆ ತಮ್ಮ ಪಕ್ಷದಿಂದ ‘89ರಲ್ಲಿ ಎಂಎಲ್‍ಎ ಟಿಕೆಟ್ ಕೊಟ್ಟಿದ್ದರಾದರೂ ಯಶಸ್ವಿಯಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, 2018ರಲ್ಲಿ ಗೆದ್ದರು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅತಿಥಿಗೃಹದಲ್ಲಿ ಪತ್ರಿಕೆಯ ತಂಡಕ್ಕೆ ನಾರಾಯಣರಾವ್ ಮಾತಿಗೆ ಸಿಕ್ಕರು.

ಚಿತ್ರಕೃಪೆ: ಯೋಯೋ ಟಿವಿ

ಪತ್ರಿಕೆ: ವಿಧಾನಸಭೆಯಲ್ಲಿ ನೀವು ಮಾತಾಡಿದ್ದನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. ನಿಮ್ಮಂತಹ ವ್ಯಕ್ತಿಗಳು ರಾಜಕಾರಣ ಮಾಡುವ ಪರಿಸ್ಥಿತಿ ಇದೆಯೇ? ನೀವು ಬಯಸುವಂತಹ ಬದಲಾವಣೆ ರಾಜಕಾರಣದಲ್ಲಿ ಸಾಧ್ಯವೇ?

ಬಿ.ನಾರಾಯಣರಾವ್: ಯಾರು ಬದಲಾವಣೆ ಆಗುತ್ತಾರೋ ಬಿಡುತ್ತಾರೋ ಅದು ನಮಗೆ ಸಂಬಂಧಿಸಿಲ್ಲ. ನಾವು, ನಮ್ಮಂತಹ ನಿಷ್ಠಾವಂತರು ಪ್ರಾಮಾಣಿಕರು, ಜನಪರ ಕಾಳಜಿಯಿಟ್ಟು ಹೋರಾಟ ಮಾಡಿದಂತವರು ಬದಲಾಗಬಾರದು.

ಯಾರು ಏನ್ ಮಾಡ್ತರೋ ಬಿಡ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಮಹಾತ್ಮಗಾಂಧಿ ಎಲ್ಲರಿಗಿಂತ ಭಿನ್ನವಾದ ನಾಯಕತ್ವ ಕೊಟ್ಟರು. ಹಾಗಾಗಿ ನಮ್ಮಂತವರು ಅಲ್ಲೊಬ್ಬರು ಇಲ್ಲೊಬ್ಬರು ಉಳಿದುಕೊಂಡಿದ್ದೇವೆ. ಇದು ಬದಲಾವಣೆ ಆಗುವುದಿಲ್ಲ ಅಂತ ನಾವು ಕೆಟ್ಟವರ ಜೊತೆ ಹೋಗೋಕ್ಕಾಗಲ್ಲ.

ಪತ್ರಿಕೆ: ಅನರ್ಹ ಶಾಸಕರು – ಮಾರಿಕೊಂಡು ಹೋದವರನ್ನು ನಿಮ್ಮ ಪಕ್ಷದವರು, ನೀವು ಬೈದಿರಿ. ಆದರೆ ಅಂತಹವರಿಗೆ ಟಿಕೆಟ್ ಕೊಟ್ಟಿದ್ದೇ ನಿಮ್ಮ ಪಕ್ಷವಲ್ಲವೇ?

ವಿಧಾನಸಭೆಯಲ್ಲೇ ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮೂರು ಜನರಿಗೆ ಸೇರಿಸಿ ಹೇಳಿದ್ದೀನಿ. ಚುನಾವಣೆಗೆ ಕೇವಲ ಹದಿನೈದು ದಿನ ಇದ್ದಾಗ, ಹಣವಂತರು, ಸಾರಾಯಿ ಮಾರುವವರು, ರಿಯಲ್ ಎಸ್ಟೇಟ್‍ನವರು ಕಪ್ಪು ಹಣ ಉಳ್ಳವರಿಗೆ ಟಿಕೆಟ್ ಕೊಟ್ಟಿದ್ದೇ ಈ ಅನಾಹುತಕ್ಕೆ ನಿಜವಾದ ಕಾರಣ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯನು ಕಟ್ಟಿ,
ಸವಿಜೇನು ಹಾಲು ತುಪ್ಪವನ್ನು ಎರೆದರೆ
ಕಹಿಯಲ್ಲದೇ ಸಿಹಿಯಾಗಬಲ್ಲುದೇ
ನಮ್ಮ ಕೂಡಲ ಸಂಗಮದೇವ

ಎಂದು ಬಸವಣ್ಣನವರು 800 ವರ್ಷಕ್ಕಿಂತ ಮುಂಚೆಯೇ ಹೇಳಿದ ಕಟುಸತ್ಯವನ್ನು ಉಲ್ಲೇಖಿಸಿದ್ದೆ. ಬೇವು ಬೀಜ ಬಿತ್ತಿದರೆ ಬೇವೇ ಸಿಗುತ್ತದೆ. ಮಾವು ಬಿತ್ತಿದರೆ ಮಾವೇ ಸಿಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲವೇ?

ಪತ್ರಿಕೆ: ನೀವು ಬಸವ ತತ್ವದ ಕುರಿತು ಇಷ್ಟೊಂದು ಮಾತಾಡುತ್ತೀರಿ. ಆದರೆ ಅದೇಕೆ ಬೆಳೆದು ನಿಲ್ಲಲಿಲ್ಲ?

ಬಿ.ನಾರಾಯಣರಾವ್: ಬಸವ ತತ್ವ ದ್ರಾವಿಡಿಯನ್ ಭಾಗದಲ್ಲಿ ನಮ್ಮ ದಕ್ಷಿಣದಲ್ಲಿ ಹುಟ್ಟಿರುವುದರಿಂದ ಇದು ಬೆಳೆದಿಲ್ಲ. ವಿಂಧ್ಯಪರ್ವತದ ಆಚೆ ಹುಟ್ಟಿದ ಧರ್ಮಗಳು – ಉದಾಹರಣೆಗೆ ಬುದ್ಧ ಧರ್ಮ ಇವತ್ತು ವಿಶ್ವವ್ಯಾಪಿಯಾಗಿಲ್ಲವೇ? ಮಹಾವೀರನ ಧರ್ಮವೂ ಬೆಳೆದಿದೆ. ಮೂರ್ನಾಲ್ಕು ಧರ್ಮಗಳು ವಿಂಧ್ಯ ಪರ್ವತದ ಆಚೆ ಹುಟ್ಟಿದವು ವಿಶ್ವವ್ಯಾಪಿಯಾಗಿವೆ.

ವಿಂಧ್ಯಪರ್ವತ ಈಚೆ ಹುಟ್ಟಿರುವುದು ಒಂದೇ ಒಂದು ಧರ್ಮ ಅದು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯಿತ ಧರ್ಮ. ಅಂಥ ಒಂದು ಧರ್ಮಕ್ಕೆ ರಾಜಕೀಯ ರಕ್ಷಣೆ ಸಿಕ್ಕಿಲ್ಲ. ರಾಜಾಶ್ರಯ ಸಿಕ್ಕಿಲ್ಲ. ಇದು ಒಂದೇ ಧರ್ಮಕ್ಕೆ ರಾಜಾಶ್ರಯ ಸಿಕ್ಕಿಲ್ಲ. ಬೌದ್ಧ ಧರ್ಮಕ್ಕೂ ರಾಜಾಶ್ರಯ ಸಿಕ್ಕಿತ್ತು.

ಪತ್ರಿಕೆ: ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿದ್ದಾರೆ.. ಅದು ರಾಜಾಶ್ರಯ ಸಿಕ್ಕ ಹಾಗಲ್ಲವೇ?
ಬಿ.ನಾರಾಯಣರಾವ್: ಯಡಿಯೂರಪ್ಪನವರು ಎಷ್ಟು ಕೆಲಸ ಮಾಡುತ್ತಾರೋ ಅಷ್ಟನ್ನು ನಾವು ಸ್ವಾಗತಿಸುತ್ತೇವೆ. ಅವರ ಮನಸ್ಸು ಬಸವಣ್ಣನವರ ಬಗ್ಗೆ ತುಡಿತ ಇದ್ರೂ, ಕಾಳಜಿ ಇದ್ರೂ ಕೂಡ ಅವರು ವೈದಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರು ಪೂರ್ಣ ಪ್ರಮಾಣದಲ್ಲಿ ಮಾಡಲಿಕ್ಕೆ (ಆ ವ್ಯವಸ್ಥೆ) ಬಿಡುವುದಿಲ್ಲ. ವೈದಿಕ ವ್ಯವಸ್ಥೆಯನ್ನು ಸಮಾಧಾನಪಡಿಸಲಿಕ್ಕೇನೇ ಅವರ ಒಂದು ಜೀವಮಾನ ಹೋಯ್ತು.

ಪ: ನೀವು ವ್ಯಕ್ತಿಗತ ನೆಲೆಯಲ್ಲಿ ಮಾತಾಡುತ್ತಿದ್ದೀರಿ. ಆದರೆ, ಸಮಗ್ರ ಬದಲಾವಣೆ ಬರಬೇಕಾದರೆ ಒಂದು ಪಕ್ಷ, ಸಂಘಟನೆ ಸರಿಯಿರಬೇಕು. ನಿಮ್ಮ ಪಕ್ಷವೂ ಸರಿಯಿಲ್ಲ. ಹೀಗಿದ್ದ ಮೇಲೆ ಸಮಾಜ ಬದಲಾವಣೆ ಹೇಗೆ ಸಾಧ್ಯ?

ಬಿ.ನಾರಾಯಣರಾವ್: ಹಾಗಂತ ನಾವು ಮನುವಾದಿಗಳ ಜೊತೆ, ಬಿಜೆಪಿ ಗುರುತಿಸಿಕೊಳ್ಳಲು ಆಗುವುದಿಲ್ಲ. ಅದು ನಾಗ್ಪುರದಿಂದ ನಡೆಯುವ ಪಕ್ಷ. ಆರ್‌ಎಸ್‍ಎಸ್‍ನವರ ಕೈಯಲ್ಲಿ ಅದರ ಜುಟ್ಟಿದೆ. ಮೋದಿ ಕೂಡ ಅವರ ಕೈಗೊಂಬೆ. ಯಡಿಯೂರಪ್ಪನವರು ಸಹ ಕೈಗೊಂಬೆಯೇ.. ಅವರು ಪೇಟಿ ಬಾರಿಸುತ್ತಾರೆ ಇವರು ಕುಣಿತಾರೆ. ಕಾನೂನುಗಳು ನಾಗ್ಪುರದಲ್ಲಿ ತಯಾರಾಗ್ತಾವೆ. ಅವರು ಪುಟ ಓದೋದು ಪಾರ್ಲಿಮೆಂಟಲ್ಲಿ. ಇದು ಕಟುಸತ್ಯ. ಎರಡು ಮಾತಿಲ್ಲ. ಈಗ ನಾವು ಇದ್ದುದರಲ್ಲಿ ಇಲ್ಲಿರಬೇಕು.. ಜೆಡಿಎಸ್ ಒಂದು ಕುಟುಂಬದ ಪಕ್ಷ ಆಗಿಬಿಟ್ಟಿದೆ. ಬಿಜೆಪಿಗೆ ನಾವು ಹೋಗುವಂತಿಲ್ಲ. ಕಾಂಗ್ರೆಸ್ಸೂ ಕೂಡ ನೈತಿಕವಾಗಿ ಅಷ್ಟೇನು ಒಳ್ಳೆದಿಲ್ಲ. ಅಲ್ಲಿ ಕೂಡ ಜನಪರ ಕಾಳಜಿ ಇರುವವರು ಒಂದು ಕಡೆ ಇದ್ದಾರೆ, ವೈದಿಕ ವ್ಯವಸ್ಥೆಯನ್ನು ಒಪ್ಪಿ ಕೊಂಡಿರುವವರು ಸಹ ಇದ್ದಾರೆ. ಅಲ್ಲಿ ಎಲ್ಲಾ ಸಾಚಾ ಇಲ್ಲ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಬರಬೇಕೆಂಬ ತುಡಿತ ನಮಗೂ ಇದೆ.

ಪ: ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಕಚ್ಚಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಹಾ ಇಲ್ಲ. ಈ ದುರಂತಕ್ಕೆ ಏನು ಹೇಳುತ್ತೀರಿ?

ಬಿ.ನಾರಾಯಣರಾವ್: ಅದೆಲ್ಲಾ 9ನೇ ತಾರೀಖಿಗೆ ಮುಕ್ತಾಯವಾಗುತ್ತದೆ ಸರ್. ಒಂದು ಹೇಳುತ್ತೇನೆ. ಈ ರಾಜ್ಯದಲ್ಲಿ ಜನನಾಯಕರಿರುವುದು ಇಬ್ಬರೆ. ಮೂರು ಪಕ್ಷ ಇವೆ ಮೂರು ಜನ ಇದ್ದಾರೆ. ಕಾಂಗ್ರೆಸ್‍ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‍ಗೆ ದೇವೇಗೌಡ. ಈಗ ಅವರದು – ಜೆಡಿಎಸ್‍ದು ಮುಗಿದಿದೆ. ಇನ್ನು ಯಡಿಯೂರಪ್ಪನವರದು ಎಷ್ಟು ದಿನ ನೋಡಬೇಕು. ಜನರಿಗೆ ನಾಟಕ ನೋಡಬೇಕಾಗಿದೆ. ಜೆಡಿಎಸ್ ನಾಟಕ ಮುಗಿದಿದೆ. ಈಗ ಬಿಜೆಪಿದು ಇದೆ. ಇದು ಎಷ್ಟು ದಿನ ನಡೆಯುತ್ತದೆ ನೋಡಬೇಕು. ಇದು ಮುಗಿದರೆ ಅನಿವಾರ್ಯವಾಗಿ ಕಾಂಗ್ರೆಸ್ ಬರಲೇಬೇಕು ಸರ್. ಇವೂ ಮೂರು ಬೇಡ ಅಂದ್ರೆ ಮತ್ತೊಂದು ಹುಟ್ಟಿದ್ದರೆ ಅದಕ್ಕೆ ಸೇರಬೇಕು.

ಪ: ಲಿಂಗಾಯಿತರು ಬಸವತತ್ವ ವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿಗೆ ಮತ ಕೊಡುತ್ತಾರಲ್ಲಾ. ಅದರ ಬಗ್ಗೆ ನೀವೇನು ಹೇಳುತ್ತೀರಿ?

ಬಿ.ನಾರಾಯಣರಾವ್: ಲಿಂಗಾಯಿತರು ಕಾಂಗ್ರೆಸ್‍ಗೆ ಮತ ಕೊಡದಿದ್ದರೂ ಪರವಾಗಿಲ್ಲ. ಆದರೆ ಬಸವಣ್ಣನವರಿಗೆ ಅನ್ಯಾಯ ಮಾಡದಂತೆ ಅವರ ತತ್ವದ ಮೇಲೆ ಅವರು ನಡೆದರೆ ಸಾಕು. ಅವರಿಗೆ ಶರಣು ಶರಣಾರ್ಥಿ. ತಮಗಿಷ್ಟ ಬಂದವರಿಗೆ ಮತ ಹಾಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಬಸವ ವಿರೋಧಿಯಾಗಿ, ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬಸವಣ್ಣನವರು ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೋ ಆ ವ್ಯವಸ್ಥೆಯ ಒಳಗೆ ಹೋಗಬಾರದು ಅಷ್ಟೇ.

ಸಂದರ್ಶನ:
ಡಾ.ವಾಸು.ಎಚ್.ವಿ ಮತ್ತು
ಸಿದ್ದಪ್ಪ ಮೂಲಗೆ


ಕೊರೊನಾ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಾರಾಯಣ ರಾವ್ ಅವರ ಅನಿಸಿಕೆಗಳು ವಾಸ್ತವಿಕವಾಗಿವೆ. ಈಗ ಈಗಿರುವ ಮೂರೂ ಪಕ್ಷಗಳ ಬದಲಿಗೆ ಇನ್ನೊಂದು ಪಕ್ಷ ದೆಹಲಿ ಅವಶ್ಯಕತೆಯಿದೆ. ದುದೈ೯ವವೆಂರರೆ ಅಂತಹ ಪಕ್ಷವನ್ನು ಕಟ್ಟುವ, ಬೆಳೆಸುವ ನಾಯಕನಿಲ್ಲ. ಹಾಗೆ ನೋಡಿದರೆ ಹಳೆಯ ಜನತಾ ದಳ ಭರವಸೆಯ ಪಕ್ಷ ವಾಗಿತ್ತು. ಆದರೆ ಪುನರ್ ಜೀವನವಾಗಬೇಕಾಗಿದೆ.

  2. ಹಳೇಪಕ್ಶಗಳಿಗೆ ಅಂಟಿಕೊಳ್ಳುವುದು ಸರಿಯಲ್ಲ.
    ದರ್ಮದ ಹಂಗಿಲ್ಲದ, ಕುಟುಂಬ ರಾಜಕಾರಣದ ಹಂಗಿಲ್ಲದ ಕನ್ನಡನೆಲೆಯ ಹೊಸಕೂಟ ಗಟ್ಟಿಯಾಗಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...