Homeಕರ್ನಾಟಕಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ...

ಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ…

- Advertisement -
- Advertisement -

ಬಸವಾದಿ ಶರಣರ ವಚನಗಳ ಓದು ನಮ್ಮನ್ನು ಒಂದು ಕಡೆ ನಿಲ್ಲಿಸಲಾರದು. ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಅಲೆದು ತತ್ವ ಪ್ರಸಾರ ಮಾಡಲೇಬೇಕು ಎಂಬ ತುಡಿತ ಉಂಟಾಗುತ್ತದೆ. ಜನ ಸಾಮಾನ್ಯರಲ್ಲಿ ಹಬ್ಬಿರುವ ಜಾತಿಯತೆ, ಮೌಢ್ಯ, ಮೇಲು ಕೀಳು ಭಾವನೆಗಳನ್ನು ಶರಣರ ವಚನ ಸಾಹಿತ್ಯದ ಔಷಧದ ಮೂಲಕ ಇಲಾಜು ಮಾಡಲು ಖಂಡಿತ ಸಾಧ್ಯವಿದೆ. ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ವೈದಿಕ ವೈರಸ್‍ಗಳು ನಾಶಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಇದನ್ನೆಲ್ಲ ಮನಗಂಡು ಬಸವಾದಿ ಶರಣರ ತತ್ವಗಳನ್ನು ಪಸರಿಸುವ ಕೆಲಸವನ್ನು ಮಾಡಲು ನಾನು ಯಾವತ್ತೂ ಸಿದ್ಧನಾಗಿರುತ್ತೇನೆ.

ಬಸವ ಜಯಂತಿಯ ಸಂದರ್ಭದಲ್ಲಂತೂ ನಾನು ಊರಲ್ಲಿರುವುದು ಸಾಧ್ಯವೆ ಇಲ್ಲ. ಈ ಬಾರಿಯ ಬಸವ ಜಯಂತಿಗೆ ಬಸವನ ಕರ್ಮಭೂಮಿಗೆ ಹತ್ತಿರ ಇರುವ ಹುಮ್ನಾಬಾದಗೆ ಹೋಗುವ ಸಂದರ್ಭ ಒದಗಿ ಬಂತು. ಹುಮ್ನಾಬಾದಗೆ ಸಮೀಪ ಇರುವ ಚಿಟಗುಪ್ಪದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ. ದೇ.ಜ.ಗೌಡರ ಮಾತುಗಳು ನನಗೆ ನೆನಪಾದವು. ಅರಿಕೇಸರಿ ಆಸ್ಥಾನದ ಕವಿ ಪಂಪ ತನ್ನ ಕಾವ್ಯದಲ್ಲಿ “ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎನ್ನುವಂತೆಯೆ ಡಾ. ದೇ.ಜವರೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ಬಸವಾದಿ ಶರಣರ ವಚನಗಳನ್ನು ಓದಿದ ಮೇಲೆ ನನಗೆ ಮರು ಹುಟ್ಟಿನ ಬಗೆಗೆ ಯಾವುದೆ ನಂಬಿಕೆಗಳಿಲ್ಲ. ಆದರೆ ಆಕಸ್ಮಿಕವಾಗಿ ಹಾಗೇನಾದರೂ ಇದ್ದರೆ, ನಾನು ಮುಂದಿನ ಜನ್ಮದಲ್ಲಿ ಕಲ್ಯಾಣದ ಪರಿಸರದಲ್ಲಿ ಹುಟ್ಟುವಂತೆ ಮಾಡು ಎಂದು ಕೇಳಿಕೊಳ್ಳುತ್ತೇನೆ. ಮರಿ ದುಂಬಿ ಬೇಡ ಕನಿಷ್ಟ ಪಕ್ಷ ಮರಿ ಹಂದಿಯನ್ನಾಗಿಯಾದರೂ ಈ ಕಲ್ಯಾಣ ನಾಡಿನಲ್ಲಿ ಹುಟ್ಟಿಸು!” ಎಂದು ಸಾರ್ವಜನಿಕ ಸಭೆಯಲ್ಲಿಯೆ ಅವಲತ್ತುಕೊಳ್ಳುತ್ತಾರೆ.

ದೇ.ಜ.ಗೌಡರ ಈ ಮಾತುಗಳನ್ನು ನೆನಪಿಸುತ್ತಲೆ ಬಸವಾದಿ ಶರಣರು ಕಟ್ಟ ಬಯಸಿದ ಸಮಾಜದ ಕುರಿತು ನಾನು ಮುಕ್ತವಾಗಿ ಮನಬಿಚ್ಚಿ ಮಾತನಾಡಿದೆ.
ಗುರು ಉಪದೇಶ ಮಂತ್ರ ವೈದ್ಯ.
ಜಂಗಮ ಉಪದೇಶ ಶಸ್ತ್ರ ವೈದ್ಯ ನೋಡಾ,
ಭವರೋಗ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ.

ಎಂಬ ಬಸವಣ್ಣನವರ ವಚನಗಳನ್ನು ಸಾಂದರ್ಭಿಕವಾಗಿ ಹೇಳುತ್ತ ಲಿಂಗಾಯತವೆಂಬುದು ಒಂದು ಜಾತಿ ಅಲ್ಲವೆ ಅಲ್ಲ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವೆ, ಕದಿರೆಯ ರೆಮ್ಮವ್ವ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಿದೇವ, ಅಲ್ಲಮ ಹೀಗೆ 770 ಅಮರ ಗಣಂಗಳು ಕೂಡಿ ಕಟ್ಟಿದ ಸಂಸ್ಥೆ ಲಿಂಗಾಯತ ಎಂದು ಸಭೆಗೆ ವಿವರಿಸಿದೆ. ಇಷ್ಟಲಿಂಗ ಅರಿವಿನ ಕುರುಹು. ಆಚಾರದ ಪ್ರತೀಕ. ಲಿಂಗ ಕಟ್ಟಿಕೊಂಡ ಮೇಲೆ ಸಕಲ ಜೀವಾತ್ಮರಿಗೆ ಲೇಸಬಯಸುವವರಾಗಬೇಕು. ರಾಗ ದ್ವೇಷಗಳು ಇರಬಾರದು. ಗುಡಿ ಗುಂಡಾರ ಕಟ್ಟುವುದು ಮುಖ್ಯ ಅಲ್ಲವೇ ಅಲ್ಲ. ಗಂಟೆ ಶಂಖ ಜಾಗಟೆಗಳು ಅರ್ಥ ಕಳೆದುಕೊಂಡು ನಮ್ಮ ಆತ್ಮಸಾಕ್ಷಿಯ ಗಂಟೆ ನಿನದಿಸಬೇಕು. ಯಾವ ಶಾಸ್ತ್ರ ಪುರಾಣ ವೇದ ಆಗಮಗಳಿಗಿಂತ ಎದೆಯ ದನಿ ಬಹಳ ಪ್ರಮುಖವಾದುದು.

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮ ಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ
ನದಿ ಬೆರಸಿದಂತಾಗದನ್ನಕ್ಕ

ಇಷ್ಟಲಿಂಗ ಕಟ್ಟಿಕೊಂಡೂ ಸ್ಥಾವರ ದೇವರಿಗೆ ಹೋಗುವುದೆಂದರೆ ಮಾಡಿಕೊಂಡು ಗಂಡನ ಬಿಟ್ಟು ಅನ್ಯ ಪುರುಷನತ್ತ ಹಾತೊರೆವಂತೆ ಎಂದು ತೀಕ್ಷ್ಣವಾಗಿ ನುಡಿದಾಗ ಹುಮ್ನಾಬಾದನ ಶಾಸಕ, ಗಣಿ ಮತ್ತು ಭೂಗರ್ಭ ಇಲಾಖೆಯ ಮಂತ್ರಿ ರಾಜಶೇಖರ ಪಾಟೀಲ ನನ್ನತ್ತ ಬೆಕ್ಕಸ ಬೆರರಾಗಿ ನೋಡಿದರು. ಕುಲ ಶ್ರೇಷ್ಠ ಎನ್ನುವುದು ಬ್ರಾಹ್ಮಣ್ಯ. ದುಡಿದು ಉಣ್ಣುವವನು ದೊಡ್ಡವನು. ಕಾಯಕದಲ್ಲಿ ದೊಡ್ಡದು ಸಣ್ಣದು ಎಂಬುದು ಇಲ್ಲವೇ ಇಲ್ಲ. ದಲಾಲಿಗಳಿಲ್ಲದ, ಸ್ಥಾವರ ದೇವರುಗಳನ್ನು ಗುಡಿಸಿ ಗುಂಡಾಂತರ ಹಾಕಿದ ಧರ್ಮ ಲಿಂಗಾಯತವೆಂದಾಗ ನನ್ನೊಂದಿಗೆ ವೇದಿಕೆಯಲ್ಲಿ ಕುಳಿತ ರಾಜಶೇಖರ ಪಾಟೀಲರಿಗೆ ಇರಿಸು ಮುರಿಸು. ಅವರು ಹುಟ್ಟಾ ಲಿಂಗಾಯತರಾಗಿದ್ದರು. ವೈದಿಕರ ಕಪಿಮುಷ್ಠಿಯಲ್ಲಿ ಸಿಲುಕಿದವರು. ಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ತಮ್ಮ ಊರಿನ ಸ್ಥಾವರ ದೇವರಾದ ವೀರಭದ್ರನ ಹೆಸರಿನ ಮೇಲೆ ವಿಶ್ವಾಸವಿರಿಸಿದವರು.

ಜಂಗಮ ಉಪದೇಶ ಶಸ್ತ್ರವೈದ್ಯ ಎಂಬಂತೆ ನನ್ನ ಮಾತು ಅವರ ಜಂಘಾಬಲವನ್ನು ಕುಗ್ಗಿಸಿತು. ಹೀಗಾಗಿ ನಾನು ಹೀಗೆ ಮಾತಾಡುತ್ತ ಹೋದರೆ ಕರ್ಮಠ ಲಿಂಗಾಯತರ ಒಳ ಹೂರಣವೆ ಬಯಲಾಗುತ್ತದೆ ಎಂಬ ದಿಗಿಲಿನಿಂದ ಸಂಘಟಕರಿಗೆ ನಾನು ಮಾತಾಡುವುದು ಸಾಕು ಮಾಡಲು ಚೀಟಿ ನೀಡಿ ಎಂದು ಸಂಜ್ಞೆ ಮಾಡಿದರಂತೆ. ಆದರೆ ಆಕಸ್ಮಿಕವಾಗಿ ಅದೇ ಸಮಯಕ್ಕೆ ಸರಿಯಾಗಿ ನಾನು ಸಹ : “ಹೇಳಿ ಕೇಳಿ ನಾನು ‘ಗೌರಿ ಲಂಕೇಶ್ ಪತ್ರಿಕೆಯ’ ವರದಿಗಾರನಾಗಿದ್ದೆ” ಎಂದು ಹೇಳಿದ್ದೆ ತಡ. ರಾಜಶೇಖರ ಪಾಟೀಲ ಇದನ್ನು ಗಮನಿಸಿ ಸಂಘಟಕರಿಗೆ ಮತ್ತೆ ಸೂಚಿಸಿ “ಸತ್ಯಂಪೇಟೆ ಮಾತಾಡಲಿ ಬಿಡಿ. ಆ ಪತ್ರಿಕೆಯವರು ಯಾರನ್ನೂ ಬಿಟ್ಟವರಲ್ಲ. ಅವರು ಸತ್ಯವನ್ನೇ ಹೇಳುತ್ತಾರೆ. ಸುಳ್ಳನ್ನಲ್ಲ !” ಎಂದು ಹೇಳಿದರಂತೆ.

ಹಾಗಾಗಿ ನಾನು ನಿರರ್ಗಳವಾಗಿ ತಾಸೊತ್ತು ಮಾತನಾಡಿದೆ. ಮಡಿವಾಳನ ಕಾಯಕವನ್ನು ಮಾಡಿದೆ. ನನ್ನ ಮಾತು ಅಧರಕ್ಕೆ ಕಹಿ ಅನಿಸಿದರೂ , ಉದರಕ್ಕೆ ಸಿಹಿ ಉಂಟು ಮಾಡುವಂತಹವಾಗಿದ್ದವು. ಮಾತು ಮುಗಿಸಿ ವೇದಿಕೆಯಲ್ಲಿ ಕುಳಿತಾಗ ಮಂತ್ರಿಗಳು ಮನಬಿಚ್ಚಿ ನನ್ನೊಂದಿಗೆ ಬೆರೆತರು. ಗೌರಿ ಲಂಕೇಶ್ ದೈಹಿಕವಾಗಿ ಈಗ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಗಟ್ಟಿ ನಿಲುವು. ಅವರ ಮಾರ್ಗ ಬಸವ ಮಾರ್ಗ ಎಂಬುದು ನನಗೆ ಮನದಟ್ಟಾಗಿ ತುಂಬಾ ಖುಷಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...