Homeಕರ್ನಾಟಕಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ...

ಗಟ್ಟಿ ಗಿತ್ತಿಯಾಗಿ ಜೀವಂತವಾಗಿರುವ ಗೌರಿ ಲಂಕೇಶ್ ಹಾಗೂ ಮಂತ್ರಿ ರಾಜಶೇಖರ ಪಾಟೀಲರೂ…

- Advertisement -
- Advertisement -

ಬಸವಾದಿ ಶರಣರ ವಚನಗಳ ಓದು ನಮ್ಮನ್ನು ಒಂದು ಕಡೆ ನಿಲ್ಲಿಸಲಾರದು. ಕಾಲಿಗೆ ಚಕ್ರ ಕಟ್ಟಿಕೊಂಡು ಊರೂರು ಅಲೆದು ತತ್ವ ಪ್ರಸಾರ ಮಾಡಲೇಬೇಕು ಎಂಬ ತುಡಿತ ಉಂಟಾಗುತ್ತದೆ. ಜನ ಸಾಮಾನ್ಯರಲ್ಲಿ ಹಬ್ಬಿರುವ ಜಾತಿಯತೆ, ಮೌಢ್ಯ, ಮೇಲು ಕೀಳು ಭಾವನೆಗಳನ್ನು ಶರಣರ ವಚನ ಸಾಹಿತ್ಯದ ಔಷಧದ ಮೂಲಕ ಇಲಾಜು ಮಾಡಲು ಖಂಡಿತ ಸಾಧ್ಯವಿದೆ. ನಮ್ಮ ಸಮಾಜಕ್ಕೆ ಅಂಟಿಕೊಂಡಿರುವ ವೈದಿಕ ವೈರಸ್‍ಗಳು ನಾಶಗೊಳಿಸುವ ಶಕ್ತಿ ವಚನ ಸಾಹಿತ್ಯಕ್ಕೆ ಇದೆ. ಇದನ್ನೆಲ್ಲ ಮನಗಂಡು ಬಸವಾದಿ ಶರಣರ ತತ್ವಗಳನ್ನು ಪಸರಿಸುವ ಕೆಲಸವನ್ನು ಮಾಡಲು ನಾನು ಯಾವತ್ತೂ ಸಿದ್ಧನಾಗಿರುತ್ತೇನೆ.

ಬಸವ ಜಯಂತಿಯ ಸಂದರ್ಭದಲ್ಲಂತೂ ನಾನು ಊರಲ್ಲಿರುವುದು ಸಾಧ್ಯವೆ ಇಲ್ಲ. ಈ ಬಾರಿಯ ಬಸವ ಜಯಂತಿಗೆ ಬಸವನ ಕರ್ಮಭೂಮಿಗೆ ಹತ್ತಿರ ಇರುವ ಹುಮ್ನಾಬಾದಗೆ ಹೋಗುವ ಸಂದರ್ಭ ಒದಗಿ ಬಂತು. ಹುಮ್ನಾಬಾದಗೆ ಸಮೀಪ ಇರುವ ಚಿಟಗುಪ್ಪದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಾ. ದೇ.ಜ.ಗೌಡರ ಮಾತುಗಳು ನನಗೆ ನೆನಪಾದವು. ಅರಿಕೇಸರಿ ಆಸ್ಥಾನದ ಕವಿ ಪಂಪ ತನ್ನ ಕಾವ್ಯದಲ್ಲಿ “ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎನ್ನುವಂತೆಯೆ ಡಾ. ದೇ.ಜವರೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ “ಬಸವಾದಿ ಶರಣರ ವಚನಗಳನ್ನು ಓದಿದ ಮೇಲೆ ನನಗೆ ಮರು ಹುಟ್ಟಿನ ಬಗೆಗೆ ಯಾವುದೆ ನಂಬಿಕೆಗಳಿಲ್ಲ. ಆದರೆ ಆಕಸ್ಮಿಕವಾಗಿ ಹಾಗೇನಾದರೂ ಇದ್ದರೆ, ನಾನು ಮುಂದಿನ ಜನ್ಮದಲ್ಲಿ ಕಲ್ಯಾಣದ ಪರಿಸರದಲ್ಲಿ ಹುಟ್ಟುವಂತೆ ಮಾಡು ಎಂದು ಕೇಳಿಕೊಳ್ಳುತ್ತೇನೆ. ಮರಿ ದುಂಬಿ ಬೇಡ ಕನಿಷ್ಟ ಪಕ್ಷ ಮರಿ ಹಂದಿಯನ್ನಾಗಿಯಾದರೂ ಈ ಕಲ್ಯಾಣ ನಾಡಿನಲ್ಲಿ ಹುಟ್ಟಿಸು!” ಎಂದು ಸಾರ್ವಜನಿಕ ಸಭೆಯಲ್ಲಿಯೆ ಅವಲತ್ತುಕೊಳ್ಳುತ್ತಾರೆ.

ದೇ.ಜ.ಗೌಡರ ಈ ಮಾತುಗಳನ್ನು ನೆನಪಿಸುತ್ತಲೆ ಬಸವಾದಿ ಶರಣರು ಕಟ್ಟ ಬಯಸಿದ ಸಮಾಜದ ಕುರಿತು ನಾನು ಮುಕ್ತವಾಗಿ ಮನಬಿಚ್ಚಿ ಮಾತನಾಡಿದೆ.
ಗುರು ಉಪದೇಶ ಮಂತ್ರ ವೈದ್ಯ.
ಜಂಗಮ ಉಪದೇಶ ಶಸ್ತ್ರ ವೈದ್ಯ ನೋಡಾ,
ಭವರೋಗ ಕಳೆವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ ಮಡಿವಾಳನ ಕಾಯಕದಂತೆ.

ಎಂಬ ಬಸವಣ್ಣನವರ ವಚನಗಳನ್ನು ಸಾಂದರ್ಭಿಕವಾಗಿ ಹೇಳುತ್ತ ಲಿಂಗಾಯತವೆಂಬುದು ಒಂದು ಜಾತಿ ಅಲ್ಲವೆ ಅಲ್ಲ. ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವೆ, ಕದಿರೆಯ ರೆಮ್ಮವ್ವ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಿದೇವ, ಅಲ್ಲಮ ಹೀಗೆ 770 ಅಮರ ಗಣಂಗಳು ಕೂಡಿ ಕಟ್ಟಿದ ಸಂಸ್ಥೆ ಲಿಂಗಾಯತ ಎಂದು ಸಭೆಗೆ ವಿವರಿಸಿದೆ. ಇಷ್ಟಲಿಂಗ ಅರಿವಿನ ಕುರುಹು. ಆಚಾರದ ಪ್ರತೀಕ. ಲಿಂಗ ಕಟ್ಟಿಕೊಂಡ ಮೇಲೆ ಸಕಲ ಜೀವಾತ್ಮರಿಗೆ ಲೇಸಬಯಸುವವರಾಗಬೇಕು. ರಾಗ ದ್ವೇಷಗಳು ಇರಬಾರದು. ಗುಡಿ ಗುಂಡಾರ ಕಟ್ಟುವುದು ಮುಖ್ಯ ಅಲ್ಲವೇ ಅಲ್ಲ. ಗಂಟೆ ಶಂಖ ಜಾಗಟೆಗಳು ಅರ್ಥ ಕಳೆದುಕೊಂಡು ನಮ್ಮ ಆತ್ಮಸಾಕ್ಷಿಯ ಗಂಟೆ ನಿನದಿಸಬೇಕು. ಯಾವ ಶಾಸ್ತ್ರ ಪುರಾಣ ವೇದ ಆಗಮಗಳಿಗಿಂತ ಎದೆಯ ದನಿ ಬಹಳ ಪ್ರಮುಖವಾದುದು.

ಲಿಂಗವ ಪೂಜಿಸಿ ಫಲವೇನಯ್ಯಾ,
ಸಮರತಿ ಸಮಕಳೆ ಸಮ ಸುಖವನರಿಯದನ್ನಕ್ಕ
ಲಿಂಗವ ಪೂಜಿಸಿ ಫಲವೇನಯ್ಯಾ
ಕೂಡಲಸಂಗಮದೇವರ ಪೂಜಿಸಿ ನದಿಯೊಳಗೆ
ನದಿ ಬೆರಸಿದಂತಾಗದನ್ನಕ್ಕ

ಇಷ್ಟಲಿಂಗ ಕಟ್ಟಿಕೊಂಡೂ ಸ್ಥಾವರ ದೇವರಿಗೆ ಹೋಗುವುದೆಂದರೆ ಮಾಡಿಕೊಂಡು ಗಂಡನ ಬಿಟ್ಟು ಅನ್ಯ ಪುರುಷನತ್ತ ಹಾತೊರೆವಂತೆ ಎಂದು ತೀಕ್ಷ್ಣವಾಗಿ ನುಡಿದಾಗ ಹುಮ್ನಾಬಾದನ ಶಾಸಕ, ಗಣಿ ಮತ್ತು ಭೂಗರ್ಭ ಇಲಾಖೆಯ ಮಂತ್ರಿ ರಾಜಶೇಖರ ಪಾಟೀಲ ನನ್ನತ್ತ ಬೆಕ್ಕಸ ಬೆರರಾಗಿ ನೋಡಿದರು. ಕುಲ ಶ್ರೇಷ್ಠ ಎನ್ನುವುದು ಬ್ರಾಹ್ಮಣ್ಯ. ದುಡಿದು ಉಣ್ಣುವವನು ದೊಡ್ಡವನು. ಕಾಯಕದಲ್ಲಿ ದೊಡ್ಡದು ಸಣ್ಣದು ಎಂಬುದು ಇಲ್ಲವೇ ಇಲ್ಲ. ದಲಾಲಿಗಳಿಲ್ಲದ, ಸ್ಥಾವರ ದೇವರುಗಳನ್ನು ಗುಡಿಸಿ ಗುಂಡಾಂತರ ಹಾಕಿದ ಧರ್ಮ ಲಿಂಗಾಯತವೆಂದಾಗ ನನ್ನೊಂದಿಗೆ ವೇದಿಕೆಯಲ್ಲಿ ಕುಳಿತ ರಾಜಶೇಖರ ಪಾಟೀಲರಿಗೆ ಇರಿಸು ಮುರಿಸು. ಅವರು ಹುಟ್ಟಾ ಲಿಂಗಾಯತರಾಗಿದ್ದರು. ವೈದಿಕರ ಕಪಿಮುಷ್ಠಿಯಲ್ಲಿ ಸಿಲುಕಿದವರು. ಮಂತ್ರಿಯಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ತಮ್ಮ ಊರಿನ ಸ್ಥಾವರ ದೇವರಾದ ವೀರಭದ್ರನ ಹೆಸರಿನ ಮೇಲೆ ವಿಶ್ವಾಸವಿರಿಸಿದವರು.

ಜಂಗಮ ಉಪದೇಶ ಶಸ್ತ್ರವೈದ್ಯ ಎಂಬಂತೆ ನನ್ನ ಮಾತು ಅವರ ಜಂಘಾಬಲವನ್ನು ಕುಗ್ಗಿಸಿತು. ಹೀಗಾಗಿ ನಾನು ಹೀಗೆ ಮಾತಾಡುತ್ತ ಹೋದರೆ ಕರ್ಮಠ ಲಿಂಗಾಯತರ ಒಳ ಹೂರಣವೆ ಬಯಲಾಗುತ್ತದೆ ಎಂಬ ದಿಗಿಲಿನಿಂದ ಸಂಘಟಕರಿಗೆ ನಾನು ಮಾತಾಡುವುದು ಸಾಕು ಮಾಡಲು ಚೀಟಿ ನೀಡಿ ಎಂದು ಸಂಜ್ಞೆ ಮಾಡಿದರಂತೆ. ಆದರೆ ಆಕಸ್ಮಿಕವಾಗಿ ಅದೇ ಸಮಯಕ್ಕೆ ಸರಿಯಾಗಿ ನಾನು ಸಹ : “ಹೇಳಿ ಕೇಳಿ ನಾನು ‘ಗೌರಿ ಲಂಕೇಶ್ ಪತ್ರಿಕೆಯ’ ವರದಿಗಾರನಾಗಿದ್ದೆ” ಎಂದು ಹೇಳಿದ್ದೆ ತಡ. ರಾಜಶೇಖರ ಪಾಟೀಲ ಇದನ್ನು ಗಮನಿಸಿ ಸಂಘಟಕರಿಗೆ ಮತ್ತೆ ಸೂಚಿಸಿ “ಸತ್ಯಂಪೇಟೆ ಮಾತಾಡಲಿ ಬಿಡಿ. ಆ ಪತ್ರಿಕೆಯವರು ಯಾರನ್ನೂ ಬಿಟ್ಟವರಲ್ಲ. ಅವರು ಸತ್ಯವನ್ನೇ ಹೇಳುತ್ತಾರೆ. ಸುಳ್ಳನ್ನಲ್ಲ !” ಎಂದು ಹೇಳಿದರಂತೆ.

ಹಾಗಾಗಿ ನಾನು ನಿರರ್ಗಳವಾಗಿ ತಾಸೊತ್ತು ಮಾತನಾಡಿದೆ. ಮಡಿವಾಳನ ಕಾಯಕವನ್ನು ಮಾಡಿದೆ. ನನ್ನ ಮಾತು ಅಧರಕ್ಕೆ ಕಹಿ ಅನಿಸಿದರೂ , ಉದರಕ್ಕೆ ಸಿಹಿ ಉಂಟು ಮಾಡುವಂತಹವಾಗಿದ್ದವು. ಮಾತು ಮುಗಿಸಿ ವೇದಿಕೆಯಲ್ಲಿ ಕುಳಿತಾಗ ಮಂತ್ರಿಗಳು ಮನಬಿಚ್ಚಿ ನನ್ನೊಂದಿಗೆ ಬೆರೆತರು. ಗೌರಿ ಲಂಕೇಶ್ ದೈಹಿಕವಾಗಿ ಈಗ ನಮ್ಮೊಂದಿಗೆ ಇಲ್ಲದಿದ್ದರೂ ಸಹ ಅವರ ಗಟ್ಟಿ ನಿಲುವು. ಅವರ ಮಾರ್ಗ ಬಸವ ಮಾರ್ಗ ಎಂಬುದು ನನಗೆ ಮನದಟ್ಟಾಗಿ ತುಂಬಾ ಖುಷಿಯಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...