Homeಸಾಹಿತ್ಯ-ಸಂಸ್ಕೃತಿಕಥೆಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ - ಯೋಗೇಶ್ ಮಾಸ್ಟರ್

ಬೆಳ್ಳಿ ತಿಂಮ ನೂರೆಂಟು ಹೇಳಿದ :ಬೀಚಿ – ಯೋಗೇಶ್ ಮಾಸ್ಟರ್

- Advertisement -
- Advertisement -

“ತಿಂಮ, ನಾಟಕ ನೋಡಿದೆಯೇನೋ?” ಬುದ್ಧನ ನಾಟಕ ನೋಡಲು ರಾತ್ರಿ ಮಗನ ಕಳುಹಿಸಿದ್ದ ತಂದೆ ಬೆಳಗ್ಗೆ ಕೇಳಿದ.
“ನೋಡಿದೆ ಅಪ್ಪಾ.”
“ಎಲ್ಲಾ ಅರ್ಥ ಆಯ್ತೇನೋ?”
“ಆಯ್ತಪ್ಪಾ” ಎನ್ನುವ ತಿಂಮ ಮತ್ತೆ ನೆನಪಿಸಿಕೊಂಡು ಹೇಳುತ್ತಾನೆ, “ಆದರೆ, ಒಂದರ್ಥ ಆಗಲಿಲ್ಲ. ಬುದ್ಧ ರಾಜ್ಯ, ಹೆಂಡತಿ, ಮಗ; ಎಲ್ಲವನ್ನೂ ಬಿಟ್ಟು ಹೋದವನು, ತಗಡಿನ ಬಿಲ್ಲೆ ಕೊಡ್ತೀವಿ ಅಂದ ತಕ್ಷಣ ಓಡಿ ಬಂದುಬಿಟ್ಟನಲ್ಲಪ್ಪಾ?”ಬೀಚಿಯ ಬೆಳ್ಳಿ ತಿಂಮ ಒಬ್ಬ ಬಾಲಕ. ಅವನು ತಾನು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ನೋಡುವುದನ್ನೆಲ್ಲಾ ಪ್ರಶ್ನಿಸುತ್ತಾನೆ. ಅವನ ಪ್ರಶ್ನೆಗಳು ಸಮಾಜವು ಯಾವುದನ್ನು ಗಂಭೀರ ಅಂತ ಪರಿಗಣಿಸುತ್ತದೋ ಅದನ್ನು ಲೇವಡಿ ಮಾಡುತ್ತದೆ. ಹೀಗೆ ವ್ಯಂಗ್ಯವಾಡುವುದು ವ್ಯವಸ್ಥೆಯನ್ನು ಪ್ರತಿಭಟಿಸುವ, ಚಿಂತನೆಗೆ ಹಚ್ಚುವ ಬೀಚಿಯವರ ರೀತಿ.

ಬುದ್ಧ ತಗಡಿನ ಬಿಲ್ಲೆಗೆ ಓಡಿ ಬರುವುದು, ತಿಂಮನಿಗೆ ನಾಟಕ ಮತ್ತು ವಾಸ್ತವದ ಅರಿವಿಲ್ಲ ಅಂತಲ್ಲ. ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ, ಅದಕ್ಕೆ ಪ್ರಶಸ್ತಿ ಬರಲೆಂದು ಅರ್ಜಿ ಹಾಕುವುದನ್ನು, ಲಾಬಿ ಮಾಡುವ ವಾಸ್ತವವನ್ನು ಅದು ಅಣಕಿಸುತ್ತದೆ.

ರಸ್ತೆಯಲ್ಲಿ ಯಾರಿಗೋ ಕೈಕೋಳ, ಕಾಲ್ಗಳಿಗೆ ಸರಪಳಿ ಹಾಕಿ ಎಳೆದೊಯ್ಯುತ್ತಿದ್ದ ಗಲಾಟೆ. ತಿಂಮ ಕೇಳಿದ ಅದೇನೆಂದು. ಜೈಲಿಗೆಂದರು ಯಾರೋ. ‘ಜೈಲಿಗೋ ಇಷ್ಟು ರಂಪು! ನಾನೆಲ್ಲೋ ಸ್ಕೂಲಿಗೆ ಎಂದುಕೊಂಡೆ’ ಎನ್ನುತ್ತಾ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತಾನೆ ತಿಂಮ.

“ಇವತ್ತು ಬರುವ ಅತಿಥಿಯ ಮೂಗಿನ ಬಗ್ಗೆ ಏನೂ ಮಾತಾಡಬೇಡ” ಎಂದು ತಂದೆ ಎಚ್ಚರಿಸಿರುತ್ತಾನೆ. ಅತಿಥಿ ಬಂದಾಗ ಅವರನ್ನೇ ನೋಡಿಕೊಂಡು ತಿಂಮ ಕುಳಿತಿರುತ್ತಾನೆ. ಅತಿಥಿಗೂ ಅದು ಗಮನಕ್ಕೆ ಬಂದು, ಯಾಕಪ್ಪಾ ಎಂದು ಕೇಳುತ್ತಾರೆ. ಅವನು ಏನಿಲ್ಲ ಎಂದು ತಂದೆಗೆ ಕೇಳುತ್ತಾನೆ. “ಅಪ್ಪಾ, ಇವರ ಮೂಗಿನ ಬಗ್ಗೆ ಏನೂ ಮಾತಾಡಬೇಡಾಂದೆ. ಆದರೆ, ಇವರಿಗೆ ಮೂಗೇ ಇಲ್ಲ!” ಎಂದು ಮಕ್ಕಳ ಮುಖವಾಡವಿಲ್ಲದ ಮನಸ್ಸನ್ನು ತೋರಿಸುವ ಮಗುವಿನ ಮನೋವಿಜ್ಞಾನ ಬೀಚಿಯದು.

“ಹಸುವಿಗೆ ನಾಲ್ಕಿರುತ್ತವೆ. ನನಗೆ ಎರಡಿವೆ. ಏನದು ಹೇಳು?” ಶಾಲೆಗೆ ಸೇರಿಸಿಕೊಳ್ಳುವ ಉಪಾಧ್ಯಾಯಿನಿ ತಿಂಮನ ಪರೀಕ್ಷಿಸಿದಳು. ಅವನಿಗೆ ಕಂಡದ್ದು ಹೇಳಿದ. ಶಿಕ್ಷಕಿ ಮುಜುಗರಗೊಂಡು ಇವನು ದೊಡ್ಡ ತರಗತಿಗೆ ಹೋಗಬೇಕೆನ್ನುವಳು. ಪಾಪ, ಕಾಲುಗಳೆಂಬ ಉತ್ತರ ಅವಳು ಬಯಸಿದ್ದಳು. ಕಿರಿಯ ಪೀಳಿಗೆ ದಡ್ಡರಿರುತ್ತಾರೆಂದು ಕಡೆಗಣಿಸದಿರಲು ಬೀಚಿ ಹಿರಿಯರಿಗೆ ಎಚ್ಚರಿಸುತ್ತಾರೆ.

ಪಶುವೈದ್ಯರು ಹಸುವಿಗೆ ಹೇಗೆ ಗುಳಿಗೆ ನುಂಗಿಸಬೇಕೆಂದು ಹೇಳಿ ತಿಂಮನ ಕಳುಹಿಸಿದ್ದರು. ಸ್ವಲ್ಪ ಹೊತ್ತಿಗೆ ತಿಂಮ ಗಾಬರಿಯಿಂದ ಮರಳಿ ಹಸುವಿಗೆ ಗುಳಿಗೆ ನುಂಗಿಸಲಾಗಲಿಲ್ಲವೆಂದು ಹೇಳಿದ.
“ಯಾಕೋ, ಗೊಟ್ಟದಲ್ಲಿ (ಬಿದಿರಿನ ಕೊಳವೆ) ಗುಳಿಗೆ ಇಟ್ಟೆಯೇನೋ?”
“ಇಟ್ಟೆ.”
“ಗೊಟ್ಟವನ್ನು ಹಸುವಿನ ಗಂಟಲಿಗಿಟ್ಟೆಯೇನೋ?”
“ಇಟ್ಟೆ.”
“ಜೋರಾಗಿ ಊದಿದೆಯೇನೋ?”
“ನಾನು ಊದುವಷ್ಟರಲ್ಲಿ ಅದೇ ಊದಿಬಿಟ್ಟಿತು!” ತಿಂಮನ ಗಾಬರಿಯ ಕಾರಣ ಅದು.
ವ್ಯವಸ್ಥೆಯನ್ನು ಬದಲಿಸುತ್ತೇನೆಂದು ಹೋದವರನ್ನು ವ್ಯವಸ್ಥೆಯೇ ಬದಲಿಸುವ ಕತೆ ಈ ತಿಂಮನಲ್ಲಿ.
ಈ ಪುಸ್ತಕದ ಪ್ರತಿ ಈಗ ನನ್ನಲ್ಲಿಲ್ಲ. ಆದರೆ ಸಂದರ್ಭಾನುಸಾರವಾಗಿ ಬೇಕಾದ ಪುಟಗಳು ನನ್ನೊಳಗೆ ತೆರೆದುಕೊಂಡಿರುತ್ತವೆ.
“ತಿಂಮ, ಚೌಡಯ್ಯನವರ ಪಿಟೀಲು ಕೇಳಿದ್ಯೇನೋ?”
“ಕೇಳಿದೆ. ಕೊಡಲಿಲ್ಲಪ್ಪಾ.”…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...