Homeಮುಖಪುಟಬಂಗಾಳಿ ಚಂಡಮಾರುತ: ಕೊಚ್ಚಿ ಹೋದ ಸಂಘಪರಿವಾರದ ಅಜೆಂಡಾ!

ಬಂಗಾಳಿ ಚಂಡಮಾರುತ: ಕೊಚ್ಚಿ ಹೋದ ಸಂಘಪರಿವಾರದ ಅಜೆಂಡಾ!

ಸೋತು ಗೆದ್ದ ದೀದಿ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸುವರೇ?

- Advertisement -
- Advertisement -

ನಾಯಕರಾದವರು ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳುತ್ತಾರೆ. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅಂತಹ ರಿಸ್ಕ್ ತೆಗೆದುಕೊಂಡರು, ಅಲ್ಲಿ ಅವರು ಸೋತರಾದರೂ ಇಡೀ ರಾಜ್ಯವನ್ನೇ ಗೆದ್ದುಕೊಂಡರು ಮತ್ತು ಇಡೀ ದೇಶದ ಕೋಮುವಾದಕ್ಕೆ ವಿರೋಧವಾಗಿರುವ ಎಲ್ಲರ ಮೆಚ್ಚುಗೆ ಪಡೆದರು.

ಧ್ರುವೀಕರಣ ಮಾಡಲು ಹೆಣಗಾಡಿದವರನ್ನು ನೇರಾನೇರ ಎದುರಿಸಿದರು. ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳ ಜೊತೆಗೆ ಚುನಾವಣಾ ಆಯೋಗ ಮತ್ತು ಅರೆಸೇನಾ ಪಡೆಗಳನ್ನೂ ದೀದಿ ವಿರುದ್ಧ ಪ್ರಯೋಗಿಸಲಾಗಿತ್ತು ಎಂಬ ಆರೋಪಗಳು ಕೂಡ ಕೇಳಿ ಬರುತ್ತಲೇ ಇದ್ದವು. ಆದರೆ, ಮಮತಾ ಬೀರಿರುವ ಗೆಲುವಿನ ಚಂಡಮಾರುತದ ಎದುರು ಮೋದಿ-ಶಾಗಳೆಂಬ ’ಚುನಾವಣಾ ದಿಗ್ಗಜರು’ ಕೊಚ್ಚಿ ಹೋಗಿದ್ದಾರೆ.

ರಾಜಕೀಯ ಚಿಂತಕ ಪ್ರೊ. ಮುಜಾಫರ್ ಅಸ್ಸಾದಿ ಅವರ ಮಾತುಗಳಲ್ಲಿ ಕೇಳುವುದಾದರೆ, “ಮಮತಾ ದುರ್ಗಿಯಂತೆ ಕಾಣುತ್ತಿದ್ದಾರೆ. ಇದು ಕೋಮುವಾದದ ವಿರುದ್ಧ ಗೆಲುವು. ಎಲ್ಲವನ್ನೂ ನಿಯಂತ್ರಿಸಲು ಹೊರಟಿರುವ ಇಬ್ಬರು ಘಟಾನುಘಟಿಗಳನ್ನು ಮಣ್ಣು ಮುಕ್ಕಿಸಿದ ಗೆಲುವು” ಎನ್ನುತ್ತಾರೆ.

ಈ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದೇಶ ನಲುಗುತ್ತಿರುವಾಗ ಬಂಗಾಳ ಚುನಾವಣೆಯ ಪ್ರಚಾರಗಳಲ್ಲೇ ಕಾಲ ಕಳೆದ ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ವಿರುದ್ಧ ಭುಗಿಲೆದ್ದಿರುವ ಅಸಮಾಧಾನ, ಆಕ್ರೋಶದ ಪ್ರತೀಕದಂತೆ ಬಂಗಾಳದ ಫಲಿತಾಂಶ ಹೊರ ಬಂದಿದೆ. ಕೇರಳ, ತಮಿಳುನಾಡು ಫಲಿತಾಂಶಗಳು ಕೂಡ ಸರ್ವಾಧಿಕಾರಿ ಧೋರಣೆ, ಅತಿಯಾದ ಕೇಂದ್ರೀಕರಣದ ವಿರುದ್ಧವೇ ಇದ್ದರೂ, ಬಂಗಾಳ ಚುನಾವಣೆಯ ಫಲಿತಾಂಶ ಬಹುಮುಖ್ಯ ಸಂದೇಶವೊಂದನ್ನು ರಾಷ್ಟ್ರಕ್ಕೆ ನೀಡಿದೆ.

PC : New Indian Express

“ಇದು ಕೇವಲ ಪಶ್ಚಿಮ ಬಂಗಾಳದ ಗೆಲುವಲ್ಲ, ಇಡೀ ಭಾರತದ ಗೆಲುವು. ಇಡೀ ದೇಶವನ್ನೇ ನಾವು ಆಳಲಿದ್ದೇವೆ ಎಂಬ ಮನುವಾದದ ಗರ್ವ ಮತ್ತು ಅಹಂ ಇತ್ತಲ್ಲ, ಅದಕ್ಕೆ ಈ ಫಲಿತಾಂಶ ದೊಡ್ಡ ಪೆಟ್ಟು ನೀಡಿದೆ” ಎಂದು ಜಾನಪದ ವಿವಿಯ ಸಂಶೋಧಕ, ಪ್ರಾಧ್ಯಾಪಕ ಅರುಣ್ ಜೋಳದಕೂಡ್ಲಿಗಿ ಹೇಳುತ್ತಾರೆ.

“ಅಲ್ಲಿ ಮಮತಾ ಎಷ್ಟು ಜನಪರ ಕೆಲಸ ಮಾಡಿದ್ದಾರೆ ಎನ್ನುವುದಕ್ಕಿಂತಲೂ ಇಲ್ಲಿ, ಇಡೀ ದೇಶವನ್ನೇ ದುಸ್ಥಿತಿಗೆ ತಂದಿದ್ದಕ್ಕೆ ಕೇಂದ್ರದ ವಿರುದ್ಧ ಆಡಳಿತ ವಿರೋಧಿ ಅಲೆ, ತಳಸ್ತರದಲ್ಲಿ ಹುಟ್ಟಿಕೊಳ್ಳುತ್ತಿದೆ ಎಂಬುದಕ್ಕೆ ಬಂಗಾಳ ಫಲಿತಾಂಶ ಒಂದು ಪ್ರಾತಿನಿಧಿಕ ಮತ್ತು ಸಾಂಕೇತಿಕ ಮುನ್ಸೂಚನೆ” ಎನ್ನುತ್ತಾರೆ ಅರುಣ್.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಖುದ್ದು ಪ್ರಧಾನಿ ಬೃಹತ್ ಜನಸ್ತೋಮಗಳನ್ನು ಕಂಡು ಉತ್ಸುಕರಾಗಿ ವೀರನಗೆ ಬೀರುವುದು ಆದರೆ ದೆಹಲಿಗೆ ಬಂದು ಜನರು ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಹೇಳಿ ವಿರೋಧಾಭಾಸವನ್ನು ಪ್ರದರ್ಶಿಸುವುದು ಈ ಚುನಾವಣೆ ಸಂದರ್ಭದಲ್ಲಿ ಜನರಿಗೆ ದಟ್ಟವಾಗಿ ಗೋಚರಿಸಿತ್ತು.

ಒಬ್ಬ ಮಹಿಳಾ ನಾಯಕಿಯ ಮೇಲೆ ಅತ್ಯಂತ ಕೀಳು ಟೀಕೆಗಳನ್ನು, ಅಸಭ್ಯ ವ್ಯಂಗ್ಯಗಳನ್ನು ಬಿಜೆಪಿ ಪಕ್ಷದಿಂದ ಮಾಡಲಾಗಿತು. ಕಾಂಗ್ರೆಸ್-ಎಡಪಕ್ಷ ಈ ದುರುದ್ದೇಶದ, ಕೀಳುಮಟ್ಟದ ಪ್ರಚಾರವನ್ನು ಆಕ್ಷೇಪಿಸಬೇಕಿತ್ತು. ಅವು ಹಿನ್ನಲೆಗೆ ಸರಿದವು. ಆದರೆ ಇವೆಲ್ಲವನ್ನೂ ಮೀರಿ ಮಮತಾ ನಾಯಕತ್ವದ ಟಿಎಂಸಿ ಹುಟ್ಟುಹಾಕಿದ್ದ ಚಂಡಮಾರುತದ ಅಲೆಯಲ್ಲಿ ಇಬ್ಬರು ರಾಷ್ಟ್ರೀಯ ಲೀಡರುಗಳಿಗೆ ತಾವು ಎಣಿಸಿದ್ದರಲ್ಲಿ ಓಂದನೇ ಮೂರು ಭಾಗದಷ್ಟು ಅಷ್ಟೇ ಗಳಿಸಲು ಸಾಧ್ಯವಾಯಿತು.

ಈ ಕುರಿತು ಪತ್ರಕರ್ತೆ ಸ್ವಾತಿ ಚತುರ್ವೇದಿ ದಿ ವೈರ್‌ನಲ್ಲಿ ಹೀಗೆ ಬರೆಯುತ್ತಾರೆ: “ಎಂಟು ಹಂತಗಳ ಚುನಾವಣೆ ನಡೆಸುವ ಮೂಲಕ ಬಿಜೆಪಿ ಪರ ಚುನಾವಣಾ ಆಯೋಗ ಕೆಲಸ ಮಾಡಿತು. ಕೇಂದ್ರದ ಅಧೀನದಲ್ಲಿರುವ ಎಲ್ಲ ಆಡಳಿತ ಶಕ್ತಿಗಳನ್ನೂ ಬಿಜೆಪಿ ಬಳಸಿಕೊಂಡಿತು. ದೇಶದಲ್ಲಿನ ಕೋವಿಡ್ ಎರಡನೆ ಅಲೆಯ ತೀವ್ರತೆಯನ್ನು ನಿರ್ಲಕ್ಷಿಸಿದ ಪ್ರಧಾನಿ ಮೋದಿ ಬಂಗಾಳದಲ್ಲಿ 20 ಬೃಹತ್ ರ್‍ಯಾಲಿಗಳನ್ನು, ಬಂಗಾಳ ಚುನಾವಣೆಯ ಸ್ಟ್ರಾಟಜಿಸ್ಟ್ ಆಗಿದ್ದ ಗೃಹ ಸಚಿವ ಅಮಿತ್ ಶಾ 50 ರ್‍ಯಾಲಿಗಳನ್ನು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ 40 ರ್‍ಯಾಲಿಗಳನ್ನು ನಡೆಸಿದರು. ನಾನು ಒಬ್ಬ ರಾಜಕೀಯ ವಿಶ್ಲೇಷಕಿ ನಿಜ, ಆದರೆ ಒಬ್ಬ ಮಹಿಳೆಯಾಗಿ ನನ್ನ ಮೈ ಉರಿದು ಹೋಗಿದ್ದು, ’ದೀದಿ ಹೋ ದೀದಿ’ ಎಂದು ವ್ಯಂಗ್ಯಭರಿತ ವಿಕಾರದ ಧ್ವನಿಯಲ್ಲಿ ಈ ದೇಶದ ಪ್ರಧಾನಿ ಅರಚಿದ್ದನ್ನು ನೋಡಿದಾಗ… ಇದು ಈಗ ತಿರುಗೇಟು ನೀಡಿದೆ….”.

ಪ್ರೊ. ಮುಜಾಫ್ರ್ ಅಸ್ಸಾದಿ ಕೂಡ ಇದೇ ಮಾತುಗಳನ್ನು ಧ್ವನಿಸುತ್ತಾರೆ. “ದೀದಿ ಹೋ ದೀದಿ ಎನ್ನುವುದು ಮಮತಾರಿಗೆ ಅಷ್ಟೇ ಅಲ್ಲ, ಇಡೀ ಬಂಗಾಳದ ಅಸ್ಮಿತೆಗೆ, ಮಹಿಳೆಯರಿಗೆ ಅವಮಾನ ಮಾಡಿದ ಪ್ರಸಂಗವಾಗಿತ್ತು, ಅದು ಪ್ರಚಾರದ ಅಸಹ್ಯತೆಗೆ ಸಾಕ್ಷಿಯಾಗಿದೆ” ಎನ್ನುತ್ತಾರೆ.

ಈ ಗೆಲುವಿನ ಮಹತ್ವವೇನು?

ಒಂದು ತಿಂಗಳ ಕಾಲ ನಡೆದ ಚುನಾವಣಾ ಪ್ರಚಾರದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರ ದೊಡ್ಡ ತಂಡವೇ ಅಲ್ಲಿ ಜಮಾಯಿಸಿತ್ತು. ಬಿಜೆಪಿಯ ಐಟಿ ಸೆಲ್ ಕೊಲ್ಕೊತ್ತಾಕ್ಕೆ ಸ್ಥಳಾಂತರಗೊಂಡಿತ್ತು.

2016ರ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ಮೂರು ವರ್ಷಗಳ ನಂತರ, 2019ರ ಲೋಕಸಭಾ ಚುನಾವಣೆ ಫಲಿತಾಂಶವು ತೃಣಮೂಲ ಕಾಂಗ್ರೆಸ್‌ಗೆ ಎಚ್ಚರಿಕೆಯ ಸಂದೇಶ ನೀಡಿತ್ತು. ಬಿಜೆಪಿ 40 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು ಮತ್ತು ಶೇ.40 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿತ್ತು. ಆಗ ಎಚ್ಚೆತ್ತುಕೊಂಡ ಟಿಎಂಸಿ, ಮೊದಲೇ ಜಾರಿಯಲ್ಲಿದ್ದ ಬಡವರ ಕಲ್ಯಾಣ ಯೋಜನೆಗಳ ಜಾಲವನ್ನು ದ್ವಿಗುಣಗೊಳಿಸಿತು. ಕಳೆದ ಒಂದು ದಶಕದಲ್ಲಿ, ತೃಣಮೂಲವು ರೂಪಶ್ರೀ, ಕನ್ಯಾಶ್ರೀ ಮತ್ತು ಸಬೂಜ್ ಸಾಥಿಯಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವೆಲ್ಲವೂ ದೀನದಲಿತರಿಗೆ ವಿತ್ತೀಯ ಲಾಭಗಳನ್ನು ತಲುಪಿಸುತ್ತಿವೆ.

ಇಲ್ಲಿ ಎರಡು ವಿಷಯ: ಮೊದಲನೆಯದಾಗಿ, ತೃಣಮೂಲವು ಜನರಿಗೆ ಈ ಯೋಜನೆಗಳ ಫಲ ಸುಲಭವಾಗಿ ತಲುಪುವಂತೆ ಕೇಂದ್ರೀಕರಿಸಿದೆ. ಅಲ್ಲದೆ ಡುಯರೆ ಸರ್ಕಾರ್ ಮತ್ತು ದೀದಿ ಕೆ ಬೊಲೊ ಫ್ರೀ ಕಾಲ್ ಸೆಂಟರ್‌ಗಳ ಮೂಲಕ ಯಾರಾದರೂ ಸರಿ ದೂರು ಸಲ್ಲಿಸುವ ಅವಕಾಶವಿದೆ. ಉದಾಹರಣೆಗೆ, ಕೆಲವು ಪ್ರದೇಶಗಳಲ್ಲಿ ಎಸ್‌ಸಿ ಪ್ರಮಾಣಪತ್ರಗಳ ಕೊರತೆಯೇ ಸಾಮಾನ್ಯ ದೂರುಗಳಲ್ಲಿ ಒಂದಾಗಿದೆ, ನಂತರ ಅದನ್ನು ಉಚಿತವಾಗಿ ವಿತರಿಸಲಾಯಿತು ಎಂದು ತೃಣಮೂಲ ನಾಯಕರು ಹೇಳಿದ್ದಾರೆ. ಎರಡನೆಯದಾಗಿ, ಈ ಹಲವು ಯೋಜನೆಗಳ ಕೇಂದ್ರಬಿಂದುವೆಂದರೆ ಮಹಿಳೆಯರು. ಜಿಲ್ಲೆಗಳಾದ್ಯಂತ, ಒಂದು ಮನೆಯ ಪುರುಷರು ಬಿಜೆಪಿಗೆ ಮತ ಹಾಕುತ್ತಿದ್ದರೂ, ಅದೇ ಮನೆಯ ಅನೇಕ ಮಹಿಳೆಯರು ಮಮತಾ ದೀದಿಗೆ ಓಟ್ ಹಾಕಿದ್ದಾರೆ ಎನ್ನುತ್ತವೆ ಫಲಿತಾಂಶೋತ್ತರ ವಿಶ್ಲೇಷಣೆಗಳು!

ವ್ಯಕ್ತಿತ್ವಗಳ ಕದನ

ಎರಡು ಹಂತಗಳ ಮತದಾನದ ನಂತರ ಈ ಚುನಾವಣೆ ವ್ಯಕ್ತಿತ್ವಗಳ ನಡುವಿನ ಕದನವಾಗಿ ಮಾರ್ಪಟ್ಟಿತು. ಅದು ಮಮತಾ ವರ್ಸಸ್ ಮೋದಿ-ಶಾ ಎಂಬ ರೂಪಾಂತರಕ್ಕೆ ತಿರುಗಿತು. ಕೊನೆಯಲ್ಲಿ ಈ ರೂಪಾಂತರವೇ ’ಬಂಗಾಳಿ ಬೇಟಿ’ಯ ಗೆಲುವಿಗೆ ಅನುಕೂಲ ಮಾಡಿತು.

PC : Deccan Herald

ಸ್ಥಳೀಯ ಮಟ್ಟದ ಹಿಂಸಾಚಾರ ಮತ್ತು ಸಣ್ಣ ಪ್ರಮಾಣದ ಭ್ರಷ್ಟಾಚಾರದ ಆರೋಪ ಟಿಎಂಸಿ ಮೇಲಿದ್ದರೂ, ಈ ವಿಷಯದಲ್ಲಿ ಮತದಾರರ ಕೋಪ ತೃಣಮೂಲದ ಸ್ಥಳೀಯ ನಾಯಕರ ವಿರುದ್ಧವಿತ್ತೇ ಹೊರತು ಮಮತಾರ ಮೇಲಲ್ಲ.

ಯಾವಾಗ ಇಬ್ಬರು ದೈತ್ಯರು ತಮ್ಮೆಲ್ಲ ಶಸ್ತ್ರ, ಅಸ್ತ್ರ, ಹಣ, ಮೀಡಿಯಾಗಳನ್ನು ಇಟ್ಟುಕೊಂಡು ಒಬ್ಬ ಮಹಿಳೆಯ ಮೇಲೆ ಅಸಭ್ಯವಾಗಿ ಮುಗಿಬಿದ್ದರೋ, ಆಗಲೇ ಸುಪ್ತವಾಗಿದ್ದ ಬಂಗಾಳಿ ಅಸ್ಮಿತೆ ಕೆರಳಿತು. ಮಮತಾ ಬಂಗಾಳದ ಮಾ ಆದರು, ಬಂಗಾಳದ ಬೇಟಿಯೂ ಆದರು.

ಧ್ರುವೀಕರಣದ ರಾಜಕೀಯ ವಿಫಲ

ಧಾರ್ಮಿಕ ಧ್ರುವೀಕರಣವು ಬಿಜೆಪಿ ಅಭಿಯಾನದ ಕೇಂದ್ರಬಿಂದುವಾಗಿತ್ತು. ತೃಣಮೂಲವನ್ನು ’ಮುಸ್ಲಿಂ ಹಿತೈಷಿ’ ಎಂದು ಆರೋಪಿಸುತ್ತ ಬಂದ ಬಿಜೆಪಿ, ’ಜೈ ಶ್ರೀ ರಾಮ್ ಎಂಬ ಘೋಷಣೆಯನ್ನು ಬಹುತೇಕ ರಾಜಕೀಯ ಘೋಷಣೆಯಾಗಿ ಬಳಸಿತು. ಜೈ ಶ್ರೀರಾಮ್ ಘೋಷಣೆಗಿಂತ ’ಜೈ ಬಂಗಾಳ್ ಮುಖ್ಯ ಎಂದು ಟಿಎಂಸಿ ಪ್ರಚಾರ ಮಾಡಿತು.

ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂಬ ಅಪಾಯವನ್ನು ಗ್ರಹಿಸಿದ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಮತ್ತು ಎಡಪಂಥಗಳ ಭದ್ರಕೋಟೆಗಳಲ್ಲಿಯೂ ತೃಣಮೂಲವನ್ನು ಬೆಂಬಲಿಸಿತು. ಮತ್ತೊಂದೆಡೆ, ಬಿಜೆಪಿ ಶೇ. 30ರಷ್ಟಿರುವ ಮುಸ್ಲಿಂ ಮತಗಳನ್ನು ತಲುಪದೆ ಬಂಗಾಳವನ್ನು ಗೆಲ್ಲುವ ಅತ್ಯುತ್ಸಾಹ ಹೊಂದಿತ್ತು. ಅಲ್ಲಿ ಧ್ರುವೀಕರಣ ಮಾಡುವ ಮೂಲಕವೇ ಅದು ಗೆಲ್ಲಲು ಉದ್ದೇಶಿಸಿತ್ತು.

ಆದರೆ ಭಾಷಾ ಅಸ್ಮಿತೆ, ನಾಡಿನ ಸಂಸ್ಕೃತಿಯ ಅಸ್ಮಿತೆ ಜಾಗೃತವಾದ ಪರಿಣಾಮ ಧ್ರುವೀಕರಣ ವಿಫವಾಗಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ್ತು ಈಗ ಬಿಜೆಪಿಗೆ ಬೇರೆ ಬೇರೆ ಕಾರಣದಿಂದ ಜನರು ವೋಟ್ ಮಾಡಿರಬಹುದು, ಆದರೆ ಅದು ಕೋಮುವಾದಿ ನೆಲೆಯಿಂದಲ್ಲ ಎಂದು ರಾಜಕೀಯ ಚಿಂತಕರು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ.

ಟಿಎಂಸಿಯ ಪ್ರಮುಖ ನಾಯಕರನ್ನು ತನ್ನ ಖೆಡ್ಡಾಕ್ಕೆ ಬಿಜೆಪಿ ಕೆಡವಿಕೊಂಡ ಮೇಲೆ, ಮಮತಾ ಬ್ಯಾನರ್ಜಿ, ಎಸ್‌ಸಿ/ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಸಾಮಾನ್ಯ ಕೇತ್ರಗಳಲ್ಲೂ ಆ ಸಮುದಾಯಗಳ ಹೊಸಬರಿಗೆ ಅವಕಾಶ ನೀಡಿದರು. ಮಹಿಳಾ ಅಭ್ಯರ್ಥಿಗಳ ಸಂಖ್ಯೆಯನ್ನು ಏರಿಸಿದರು. ಇದು ರಾಜಕೀಯ ಸ್ಟ್ರಾಟರ್ಜಿ ಆಗಿದ್ದರೂ, ಇಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಜನರನ್ನು ಸೆಳೆಯಿತು.

’ಗಾಯಗೊಂಡ ಬಂಗಾಳದ ಅಸ್ಮಿತೆಯ ತೀವ್ರ ಪ್ರತಿಕ್ರಿಯೆ’

PC : UNIVERSITY OF MYSORE, (ಪ್ರೊ. ಮುಜಾಫರ್ ಅಸ್ಸಾದಿ)

ಬಂಗಾಳದ ಚುನಾವಣಾ ಫಲಿತಾಂಶ ಗಾಯಗೊಂಡ ಬಂಗಾಳ ಅಸ್ಮಿತೆ ವ್ಯಕ್ತಪಡಿಸಿದ ತೀವ್ರ ಪ್ರತಿಕ್ರಿಯೆ ಆಗಿದೆ. ಇದು ಕೇವಲ ಒಂದು ಟಿಎಂಸಿ ಪಕ್ಷದ ಗೆಲುವಲ್ಲ. ಇದು ಕೋಮುವಾದ ಮತ್ತು ಫ್ಯಾಸಿಸಂ ವಿರುದ್ಧದ ಗೆಲುವು. ಇದು ವಿಪಕ್ಷಗಳನ್ನು ಒಟ್ಟಾಗಿಸುವುದಕ್ಕೆ ನೆರವಾಗಲಿದೆ.

ಮಮತಾರ ಕಾಲಿಗೆ ಆದ ಗಾಯ ಬಂಗಾಳಿ ಅಸ್ಮಿತೆಗೇ ಆದ ಗಾಯವಾಗಿತ್ತು. ಬಂಗಾಳಿಯರು ಯಾವುದ್ಯಾವುದೋ ಕಾರಣಕ್ಕೆ ಬಿಜೆಪಿಗೆ ಮತ ಹಾಕಿರಬಹುದು. ಆದರೆ ಅವರೆಂದೂ ಕಮ್ಯುನಲ್ ಅಲ್ಲ.

ರಾಹುಲ್ ಗಾಂಧಿ ರ್‍ಯಾಲಿ ರದ್ದು ಮಾಡಿದ್ದಕ್ಕೆ ಕೇವಲ ಕೋವಿಡ್ ಅಷ್ಟೇ ಕಾರಣವಲ್ಲ ಅನಿಸುತ್ತದೆ. ಆ ಮೂಲಕ ಅವರು ತಮ್ಮ ಪಕ್ಷಕ್ಕೆ ಬರಬಹುದಾದ ಮತಗಳು ಟಿಎಂಸಿಗೆ ವರ್ಗಾವಣೆ ಆಗಲಿ ಎಂದು ಈ ನಿರ್ಧಾರ ತೆಗೆದುಕೊಂಡಿರಬಹುದು. ಎಡಪಕ್ಷಗಳಿಗೂ ಇದಕ್ಕೆ ಸಮ್ಮತಿಯಿತ್ತೆನಿಸುತ್ತದೆ.

ನಂದಿಗ್ರಾಮದಲ್ಲಿ ಮಮತಾ ಸೋತಿದ್ದು ಕೂಡ ಆಕೆಯ ಪಾಲಿಗೆ ಪಾಸಿಟಿವ್ ಆಗಬಹುದು. ಈಗ ಅವರು ಗಾಯಗೊಂಡ ವ್ಯಾಘ್ರ. ಈ ವ್ಯಾಘ್ರ ರಾಷ್ಟ್ರಮಟ್ಟದ ರಾಜಕೀಯ ತಲುಪಿ ಸವಾಲು ಎಸೆಯಬಹುದು.
-ಪ್ರೊ. ಮುಜಾಫರ್ ಅಸ್ಸಾದಿ, ರಾಜಕೀಯ ಚಿಂತಕರು

ಮಮತಾ ಮತ್ತು ಮೋದಿ: ಮಟ್ಟು ಅಭಿಪ್ರಾಯ

PC : Daijiworld, (ದಿನೇಶ್ ಅಮಿನ್ ಮಟ್ಟು)

ಮೂರು ತಿಂಗಳ ಹಿಂದೆಯೇ ಜನಪರ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟುರವರು ’ಹೊಸ ಮನುಷ್ಯ’ಕ್ಕೆ ಬರೆದ ಲೇಖನದಲ್ಲಿ, ಮೇನಲ್ಲಿ ಬಂಗಾಳ ಚುನಾವಣೆ ಗೆದ್ದರೆ ಮಮತಾ ರಾಷ್ಟ್ರಮಟ್ಟದಲ್ಲಿ ಮೋದಿಗೆ ಪರ್ಯಾಯವಾಗಬಲ್ಲರು ಎಂಬುದನ್ನು ಹೇಳುತ್ತಲೇ, ಮೋದಿ ಮತ್ತು ಮಮತಾರ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳನ್ನು ವಿವರಿಸಿದ್ದರು.

ಇಬ್ಬರದೂ ಬಡತನದ ಹಿನ್ನೆಲೆ ಎನ್ನುವ ಮಟ್ಟು, ಮೋದಿ ಅದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡರು ಎನ್ನುತ್ತಾರೆ. ಇಬ್ಬರಲ್ಲೂ ಸರ್ವಾಧಿಕಾರಿ ಗುಣವಿದೆ, ಆದರೆ ಮಮತಾ ಕೋಮುವಾದಿಯಲ್ಲ ಎಂದು ಅವರು ಹೇಳುತ್ತಾರೆ. ತೃತೀಯ ರಂಗಕ್ಕೆ ಹೊಸ ಪ್ರಯತ್ನ ನಡೆದರೆ ಮಮತಾರೇ ಮುಂಚೂಣಿಯಲ್ಲಿ ಇರಲಿದ್ದಾರೆ ಎನ್ನುವ ಮಟ್ಟು, ಆ ಸಾಹಸ ತಂತಿ ಮೇಲಿನ ನಡಿಗೆ. ಅದಕ್ಕೆ ಸಹನೆ, ತಾಳ್ಮೆ ಬೇಕು. ಮಮತಾರಲ್ಲಿ ಆ ಕೊರತೆಯಿದೆ ಇದೆ ಎಂದು ಬರೆದಿದ್ದರು.

ಗೆಲುವಿಗೆ ಸ್ವಾಗತವಿದೆ, ಆದರೆ……

PC : Prajavani, (ಕೆ. ನೀಲಾ)

ಬಿಜೆಪಿಗೆ ಮುಖ್ಯವಾಗಿ ಮೋದಿ-ಶಾಗಳಿಗೆ ಪಾಠ ಕಲಿಸಿದ್ದಕ್ಕೆ ಟಿಎಂಸಿ ಮತ್ತು ಮಮತಾರನ್ನು ಅಭಿನಂದಿಸುತ್ತೇನೆ. ಅದಕ್ಕೂ ಹೆಚ್ಚಾಗಿ ಅಲ್ಲಿನ ಜನರನ್ನು ಅಭಿನಂದಿಸುತ್ತೇನೆ.

ಮೋದಿ ಒಬ್ಬ ಫ್ಯಾಸಿಸ್ಟ್, ಸರ್ವಾಧಿಕಾರಿ. ಮಮತಾರನ್ನು ಹೀಗೆ ಕರೆಯಲು ಆಗದಿದ್ದರೂ, ಅವರು ಕೂಡ ತಮ್ಮ ಪಾರ್ಟಿಯಲ್ಲಿ ಸರ್ವಾಧಿಕಾರದ ನಡೆಯನ್ನೇ ತೋರುತ್ತ ಬಂದಿದ್ದಾರೆ. ಅಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅವರು ಅಲ್ಲಿನ ಎಡಪಕ್ಷಗಳ ಮೇಲೆ ವಿಪರೀತ ದ್ವೇಷ ಕಾರುತ್ತಾರೆ. ಆದರೆ ಅದೇ ಕೇರಳದ ಎಡ ಸರ್ಕಾರದ ಮೇಲೆ ಅವರಿಗೇನೂ ಸಿಟ್ಟಿಲ್ಲ. ಇದು ಪೊಲಿಟಿಕಲ್ ಸ್ಟ್ರಾಟರ್ಜಿ ಇರಬಹುದು. ಈಗ ಎಡಪಕ್ಷಗಳು ತೀವ್ರವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
– ಕೆ. ನೀಲಾ, ಸಿಪಿಎಂ ನಾಯಕಿ

ಸಂಘ ಪರಿವಾರದ ಅಜೆಂಡಾಕ್ಕೆ ಸೋಲು

ಬಸವರಾಜ ಸೂಳಿಬಾವಿ

ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಗಳ ಚುನಾವಣಾ ಫಲಿತಾಂಶಗಳು ಇಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತ ಎಂಬುದಕ್ಕೆ ಸಾಕ್ಷಿಯಾಗಿವೆ.

ಈ ಮೂರೂ ರಾಜ್ಯಗಳ ನೆಲದಲ್ಲಿ ಪ್ರತಿರೋಧದ ಅಂಶಗಳು ಹಾಸು ಹೊಕ್ಕಾಗಿವೆ, ಅಂತರ್ಗತವಾಗಿವೆ. ಯಾವುದನ್ನು ಮುಖ್ಯವಾಹಿನಿ, ಮೂಲಭೂತ ಎಂದು ಹೇರಲಾಗುತ್ತದೆಯೋ ಅದನ್ನು ಪ್ರತಿರೋಧಿಸಿ ಈ ರಾಜ್ಯಗಳು ಯಶಸ್ವಿಯಾದ ಇತಿಹಾಸವಿದೆ. 2025ಕ್ಕೆ 100 ವರ್ಷ ತುಂಬಲಿರುವ ಆರ್‌ಎಸ್‌ಎಸ್ ಸಂಘಟನೆಯ ಮೂಲ ಉದ್ದೇಶವೇ 100 ವರ್ಷಗಳಲ್ಲಿ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿದೆ. ಅದಕ್ಕೆ ತಕ್ಕಂತೆ ಮೋದಿ ಆಡಳಿತ ಮಾಡುತ್ತ ಬಂದಿದ್ದಾರೆ. ಈ ಅಜೆಂಡಾವನ್ನು ಮೂರು ರಾಜ್ಯಗಳ ಜನ ಸೋಲಿಸಿದ್ದಾರೆ.
ಬಸವರಾಜ ಸೂಳಿಬಾವಿ, ಕವಿ, ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ಸುವೆಂದು ಅಧಿಕಾರಿ ವಿರುದ್ಧ ಸೋಲು: ಕೋರ್ಟಿಗೆ ಹೋಗುತ್ತೇನೆಂದ ಮಮತಾ ಬ್ಯಾನರ್ಜಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...