Homeಅಂತರಾಷ್ಟ್ರೀಯಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು.

- Advertisement -
- Advertisement -

ಸ್ವೀಡನ್‌ನ ಮೂರನೇ ಅತಿ ದೊಡ್ಡ ನಗರ ಮಾಲ್ಮೊದಲ್ಲಿ ಬೆಂಗಳೂರು ಮಾದರಿ ಗಲಭೆ ನಡೆದಿದ್ದು, ನಗರ ಹೊತ್ತಿ ಉರಿದಿದೆ. ಅಲ್ಲಿನ ರೋಸನ್ ಗಾರ್ಡ್‌ ಪ್ರದೇಶದಲ್ಲಿ ನೆರೆದಿದ್ದ 300ಕ್ಕೂ ಹೆಚ್ಚು ಜನರಿದ್ದ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದೆ. ಅವರೆಲ್ಲರೂ ಇಸ್ಲಾಂ ವಿರುದ್ಧದ ಚಟುವಟಿಕೆಗಳನ್ನು ವಿರೋಧಿಸಿ, ಇಸ್ಲಾಮೋಫೋಬಿಯಾದ ವಿರುದ್ಧ ಪ್ರತಿಭಟಿಸಲು ಸೇರಿದ್ದರು ಎನ್ನಲಾಗಿದೆ.

ಸ್ವೀಡನ್‌ನ ಮಾಲ್ಮೊದಲ್ಲಿ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸದಸ್ಯರು ಕುರಾನ್ ಪ್ರತಿಯನ್ನು ಸುಟ್ಟು ಹಾಕಿದ ನಂತರ ಗಲಭೆ ಆರಂಭವಾಗಿದೆ. ಅದಕ್ಕೂ ಹಿಂದಿನ ದಿನ ಪಕ್ಷದ ನಾಯಕ ರಾಸ್ಮಸ್ ಪಲುಡಾನ್ ಅವರಿಗೆ “ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ” ವಿಷಯದ ಕುರಿತು ಮಾಲ್ಮೋದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಲಾದ್ದರಿಂದ ರೊಚ್ಚಿಗೆದ್ದ ಬಲಪಂಥೀಯ ಕಾರ್ಯಕರ್ತರು ಕುರಾನ್ ಸುಟ್ಟಿದ್ದಾರೆ ಎಂದು ಸ್ವೀಡಿಸ್ ಪ್ರತಿಕೆ ಅಫ್ಟನ್ಬ್ಲಾಡೆಟ್ ವರದಿ ಮಾಡಿದೆ. ಈ ಹಿಂದೆ ಜನಾಂಗೀಯ ಗುಂಪುಗಳ ವಿರುದ್ಧ ಪ್ರಚೋದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ಸ್ವೀಡಿಷ್ ಕಲಾವಿದ ಡಾನ್ ಪಾರ್ಕ್ ರಾಸ್ಮಸ್ ಪಲುಡಾನ್ ಅವರನ್ನು ಆಹ್ವಾನಿಸಿದ್ದರು.

ರಾಸ್ಮಸ್ ಪಲುಡಾನ್ ಯಾರು?

ಡೆನ್ಮಾರ್ಕ್‌ನ ವಕೀಲ ರಾಸ್ಮಸ್ ಪಲುಡಾನ್ 2017ರಲ್ಲಿ ತೀವ್ರ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸ್ಥಾಪಕ. ಈತನ ಪಕ್ಷ ಮುಸ್ಲಿಂ ವಿರೋಧಿ ಮನೋಭಾವವನ್ನು ಹೊಂದಿದೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸದಾ ಮುಸ್ಲಿಂ ವಿರೋದಿ ಅಂಶಗಳನ್ನು ಪ್ರಸಾರ ಮಾಡುವ, ಕುರಾನ್ ಸುಟ್ಟು ಹಾಕುವ ವಿಡಿಯೋಗಳನ್ನು ಈತ ಅಪ್‌ಲೋಡ್‌ ಮಾಡಿದ್ದಾನೆ. ಆ ರೀತಿಯ ಮುಸ್ಲಿಂ ಜನಾಂಗೀಯ ಅವಹೇಳನದ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್‌ನಲ್ಲಿ ಆತನಿಗೆ ಮೂರು ತಿಂಗಳು ಜೈಲುವಾಸ ಮತ್ತು ವಕೀಲ ವೃತ್ತಿ ಮಾಡದಂತೆ ನಿಷೇಧ ಹೇರಿತ್ತು. 2019ರಲ್ಲಿಯೂ ಸಹ ಜನಾಂಗೀಯ ಅವಹೇಳನದ ಭಾಷಣ ಮಾಡಿದ್ದಕ್ಕಾಗಿ ಆತನಿಗೆ 14 ದಿನಗಳ ಬಂಧನ ಶಿಕ್ಷೆ ವಿಧಿಸಲಾಗಿತ್ತು. ಜನಾಂಗೀಯ ನಿಂದನೆ, ದ್ವೇ‍ಷ ಭಾಷಣ, ಮಾನಹಾನಿ, ಯದ್ವಾತದ್ವಾ ವಾಹನ ಚಾಲನೆ ಸೇರಿದಂತೆ ಇದುವರೆಗೂ ಸುಮಾರು 14 ಪ್ರಕರಣಗಳಲ್ಲಿ ಈತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಸ್ಮಸ್ ಪಲುಡಾನ್. Photo Courtesy: DR

3 ಲಕ್ಷ ಮುಸ್ಲಿಮರನ್ನು ಡೆನ್ಮಾರ್ಕ್‌ನಿಂದ ಹೊರಹಾಕುವ ಮತ್ತು ಇಸ್ಲಾಂ ಧರ್ಮವನ್ನು ನಿಷೇಧಿಸುವುದಾಗಿ ಘೋಷಿಸಿ ಈತ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾನೆ. ಈ ಶುಕ್ರವಾರ ಸ್ವೀಡನೆ ಆತನನ್ನು 2 ವರ್ಷಗಳ ಕಾಲ ಸ್ವೀಡನ್‌ಗೆ ಕಾಲಿಡದಂತೆ ನಿಷೇಧ ಹೇರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ವೀಡನ್‌ನಲ್ಲಿನ ವಲಸಿಗರ ಸ್ಥಿತಿಗತಿ

ಸ್ವೀಡನ್ ಐತಿಹಾಸಿಕವಾಗಿ ನಿರಾಶ್ರಿತರ ಸ್ವರ್ಗ ಎಂದು ಹೆಸರು ಗಳಿಸಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ ಇದಾಗಿದೆ. 2013-2014ರ ಸಮಯದಲ್ಲಿ ಸಿರಿಯಾದಿಂದ ವಲಸೆ ಬಂದ ಹಲವಾರು ಜನರಿಗೆ ಇದು ಖಾಯಂ ವಾಸಿಸಲು ಅನುಮತಿ ನೀಡಿದೆ. ಸಿರಿಯಾ ಯುದ್ದ ಆರಂಭವಾದಾಗಿನಿಂದ ಸುಮಾರು 70,000 ಸಿರಿಯನ್ನರು ಇಲ್ಲಿಗೆ ವಲಸೆ ಬಂದಿದ್ದಾರೆ.

2015 ರ ವರ್ಷವೊಂದರಲ್ಲೇ ಸ್ವೀಡನ್‌ ಆಶ್ರಯಕ್ಕಾಗಿ ದಾಖಲೆಯ 1,62,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಮುಖ್ಯವಾಗಿ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮತ್ತು ಯುದ್ಧ ಪೀಡಿತ ದೇಶಗಳಿಂದ ಆಶ್ರಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಲಪಂಥೀಯರ ವಾದ

ಸ್ವೀಡಿಷ್ ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷವಾಗಿರುವ ಬಲಪಂಥೀಯ ಸ್ವೀಡನ್ ಡೆಮೋಕ್ರಾಟ್ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವಲಸಿಗರ ಒಳಹರಿವು ಅಪರಾಧದ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅದು ಆರೋಪಿಸಿದೆ. ಇದು ವಿಶ್ವದ ಅತ್ಯಂತ ಉದಾರವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಹೇರುತ್ತಿದೆ ಎಂದು ಪಕ್ಷ ಆರೋಪಿಸಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರಲ್ಲಿ ಕೌಶಲ್ಯ ಮತ್ತು ವಿದ್ಯಾರ್ಹತೆಯ ಸಮಸ್ಯೆಯಿದೆ. ಹಾಗಾಗಿ ಅವರೆಲ್ಲರೂ ಕೆಲಸ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಇದು ಇತರ ಹೆಚ್ಚು ತೆರಿಗೆ ಕಟ್ಟುವವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ 2018 ರಲ್ಲಿ ಸ್ವೀಡನ್‌ನಲ್ಲಿ ನಿರುದ್ಯೋಗ ದರವು ಶೇಕಡಾ 3.8 ರಷ್ಟಿದ್ದರೆ, ವಲಸಿಗ ಸ್ವೀಡಿಶ್ ಜನಸಂಖ್ಯೆಯಲ್ಲಿ ಇದು ಶೇ. 15ಕ್ಕೇರಿತ್ತು. ಇದನ್ನಿಟ್ಟುಕೊಂಡು ಅಲ್ಲಿನ ಬಲಪಂಥೀಯ ಪಕ್ಷಗಳು ವಲಸಿಗ ವಿರೋಧಿ ಭಾವನೆ, ಮುಸ್ಲಿಂ ವಿರೋಧಿ ಭಾವನೆ ಮೂಡಿಸಲು ನಿರತವಾಗಿವೆ ಎನ್ನಲಾಗುತ್ತಿದೆ.

ವಾಸ್ತವ ಮತ್ತು ಮಾಧ್ಯಮಗಳ ಜವಾಬ್ದಾರಿ

ಆದರೆ ಅಲ್ಲಿನ ಬಹುಸಂಖ್ಯಾತ ಜನರು ವಲಸೆಯನ್ನು ಬೆಂಬಲಿಸಿ ಆಶ್ರಯ ನೀಡುವ ಮನೋಭಾವ ಹೊಂದಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಲಸೆಗೆ ಕಾರಣವೇನು? ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಅರ್ಥೈಸಬೇಕು, ಮಾನವೀಯ ಆಧಾರದಲ್ಲಿ ಹೇಗೆ ಗ್ರಹಿಸಬೇಕು ಮತ್ತು ಎಲ್ಲರಿಗೂ ಉದ್ಯೋಗ ಸೃಷ್ಠಿ ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಬಲಪಂಥೀಯರು ನಿರಾಕರಿಸುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವವಾದಿಗಳ ವಾದವಾಗಿದೆ.

ಇನ್ನು ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು. ಇದೀಗ ಅಲ್ಲಿನ ಪತ್ರಿಕೆಗಳನ್ನು ಹುಡುಕಿದರೆ ಗಲಭೆಯ ಸುದ್ದಿಯೇ ತಿಳಿಯುವುದಿಲ್ಲ. ಭಾರತದ ಮಾಧ್ಯಮಗಳು ಇದನ್ನು ಅನುಸರಿಸುವ ಅಗತ್ಯವಿದೆ ಎನಿಸುತ್ತದೆ.

ಸ್ವೀಡನ್ ನಗರ: Photo Courtesy: Forbes

ಸ್ವೀಡನ್ ಹಲವು ಬಹುವೈವಿಧ್ಯತೆಗಳನ್ನು ಒಳಗೊಂಡಿರುವ ದೇಶ. ಆದರೆ ಅಲ್ಲಿ ಈಗ ಇಸ್ಲೋಮೊಫೋಬಿಯ ಹರಡಲು ಬಲಪಂಥೀಯರು ಸ್ವೀಡನ್‌ನ ವಲಸಿಗರನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಸ್ತೆ ಮತ್ತು ರೈಲು ಸಾರಿಗೆ ಮೂಲಕ ಸ್ವೀಡನ್‌ ಪ್ರವೇಶಿಸಬೇಕಾದರೆ ಮಾಲ್ಮೊ ನಗರದ ಮೂಲಕವೇ ಹಾದುಹೋಗಬೇಕು. ಹಾಗಾಗಿ ಹೆಚ್ಚಿನ ನಿರಾಶ್ರಿತರು ಅಲ್ಲಿ ನೆಲೆಸಿರುವುದು ಹೌದಾದರೂ ಅವರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವುದು, ಅವಹೇಳನ ಮಾಡುವುದು ಗಲಭೆಗೆ ಕಾರಣವಾಗುತ್ತವೆ. ಅದರ ಹೊರತು ಬಹಳಷ್ಟು ಜನರು ಅಲ್ಲಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಗಲಭೆಯ ಕುರಿತು ಮಾತನಾಡಲು ಸ್ನೇಹಿತರಿಗೆ ಫೋನ್ ಮಾಡಿದರೆ ಅದು ಇಲ್ಲಿ ದೊಡ್ಡ ವಿಷಯವಲ್ಲ ಎನ್ನುತ್ತಾರೆ ಎಂದು ಹಲವು ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಭರತ್ ಹೆಬ್ಬಾಳ್ ಹೇಳುತ್ತಾರೆ.

ಸ್ಟಾಕ್‌ಹೋಮ್‌ ಪ್ರಧಾನವಾಗಿ ವಲಸೆ ಬಂದ ಪ್ರದೇಶಗಳಲ್ಲಿ ಒಂದಾಗಿದ್ದು ಅಲ್ಲಿ ಗಲಭೆಗಳು ಹೆಚ್ಚಾಗಿವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಸಮಸ್ಯೆಗಳ ಕುರಿತು ಮಾತನಾಡುವಾಗ ಉದಾಹರಣೆಯಾಗಿ ಸ್ವೀಡನ್‌ ಅನ್ನು ಉಲ್ಲೇಖಿಸಿದ್ದರು. ಆಗ ಸಹ ಗಲಭೆ ಭುಗಿಲೆದ್ದಿದ್ದು, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಮತ್ತು ಲೂಟಿ ನಡೆದಿತ್ತು.


ಇದನ್ನೂ ಓದಿ: ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...