Homeಅಂತರಾಷ್ಟ್ರೀಯಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು.

- Advertisement -
- Advertisement -

ಸ್ವೀಡನ್‌ನ ಮೂರನೇ ಅತಿ ದೊಡ್ಡ ನಗರ ಮಾಲ್ಮೊದಲ್ಲಿ ಬೆಂಗಳೂರು ಮಾದರಿ ಗಲಭೆ ನಡೆದಿದ್ದು, ನಗರ ಹೊತ್ತಿ ಉರಿದಿದೆ. ಅಲ್ಲಿನ ರೋಸನ್ ಗಾರ್ಡ್‌ ಪ್ರದೇಶದಲ್ಲಿ ನೆರೆದಿದ್ದ 300ಕ್ಕೂ ಹೆಚ್ಚು ಜನರಿದ್ದ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದೆ. ಅವರೆಲ್ಲರೂ ಇಸ್ಲಾಂ ವಿರುದ್ಧದ ಚಟುವಟಿಕೆಗಳನ್ನು ವಿರೋಧಿಸಿ, ಇಸ್ಲಾಮೋಫೋಬಿಯಾದ ವಿರುದ್ಧ ಪ್ರತಿಭಟಿಸಲು ಸೇರಿದ್ದರು ಎನ್ನಲಾಗಿದೆ.

ಸ್ವೀಡನ್‌ನ ಮಾಲ್ಮೊದಲ್ಲಿ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸದಸ್ಯರು ಕುರಾನ್ ಪ್ರತಿಯನ್ನು ಸುಟ್ಟು ಹಾಕಿದ ನಂತರ ಗಲಭೆ ಆರಂಭವಾಗಿದೆ. ಅದಕ್ಕೂ ಹಿಂದಿನ ದಿನ ಪಕ್ಷದ ನಾಯಕ ರಾಸ್ಮಸ್ ಪಲುಡಾನ್ ಅವರಿಗೆ “ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ” ವಿಷಯದ ಕುರಿತು ಮಾಲ್ಮೋದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಲಾದ್ದರಿಂದ ರೊಚ್ಚಿಗೆದ್ದ ಬಲಪಂಥೀಯ ಕಾರ್ಯಕರ್ತರು ಕುರಾನ್ ಸುಟ್ಟಿದ್ದಾರೆ ಎಂದು ಸ್ವೀಡಿಸ್ ಪ್ರತಿಕೆ ಅಫ್ಟನ್ಬ್ಲಾಡೆಟ್ ವರದಿ ಮಾಡಿದೆ. ಈ ಹಿಂದೆ ಜನಾಂಗೀಯ ಗುಂಪುಗಳ ವಿರುದ್ಧ ಪ್ರಚೋದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ಸ್ವೀಡಿಷ್ ಕಲಾವಿದ ಡಾನ್ ಪಾರ್ಕ್ ರಾಸ್ಮಸ್ ಪಲುಡಾನ್ ಅವರನ್ನು ಆಹ್ವಾನಿಸಿದ್ದರು.

ರಾಸ್ಮಸ್ ಪಲುಡಾನ್ ಯಾರು?

ಡೆನ್ಮಾರ್ಕ್‌ನ ವಕೀಲ ರಾಸ್ಮಸ್ ಪಲುಡಾನ್ 2017ರಲ್ಲಿ ತೀವ್ರ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸ್ಥಾಪಕ. ಈತನ ಪಕ್ಷ ಮುಸ್ಲಿಂ ವಿರೋಧಿ ಮನೋಭಾವವನ್ನು ಹೊಂದಿದೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸದಾ ಮುಸ್ಲಿಂ ವಿರೋದಿ ಅಂಶಗಳನ್ನು ಪ್ರಸಾರ ಮಾಡುವ, ಕುರಾನ್ ಸುಟ್ಟು ಹಾಕುವ ವಿಡಿಯೋಗಳನ್ನು ಈತ ಅಪ್‌ಲೋಡ್‌ ಮಾಡಿದ್ದಾನೆ. ಆ ರೀತಿಯ ಮುಸ್ಲಿಂ ಜನಾಂಗೀಯ ಅವಹೇಳನದ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್‌ನಲ್ಲಿ ಆತನಿಗೆ ಮೂರು ತಿಂಗಳು ಜೈಲುವಾಸ ಮತ್ತು ವಕೀಲ ವೃತ್ತಿ ಮಾಡದಂತೆ ನಿಷೇಧ ಹೇರಿತ್ತು. 2019ರಲ್ಲಿಯೂ ಸಹ ಜನಾಂಗೀಯ ಅವಹೇಳನದ ಭಾಷಣ ಮಾಡಿದ್ದಕ್ಕಾಗಿ ಆತನಿಗೆ 14 ದಿನಗಳ ಬಂಧನ ಶಿಕ್ಷೆ ವಿಧಿಸಲಾಗಿತ್ತು. ಜನಾಂಗೀಯ ನಿಂದನೆ, ದ್ವೇ‍ಷ ಭಾಷಣ, ಮಾನಹಾನಿ, ಯದ್ವಾತದ್ವಾ ವಾಹನ ಚಾಲನೆ ಸೇರಿದಂತೆ ಇದುವರೆಗೂ ಸುಮಾರು 14 ಪ್ರಕರಣಗಳಲ್ಲಿ ಈತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಸ್ಮಸ್ ಪಲುಡಾನ್. Photo Courtesy: DR

3 ಲಕ್ಷ ಮುಸ್ಲಿಮರನ್ನು ಡೆನ್ಮಾರ್ಕ್‌ನಿಂದ ಹೊರಹಾಕುವ ಮತ್ತು ಇಸ್ಲಾಂ ಧರ್ಮವನ್ನು ನಿಷೇಧಿಸುವುದಾಗಿ ಘೋಷಿಸಿ ಈತ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾನೆ. ಈ ಶುಕ್ರವಾರ ಸ್ವೀಡನೆ ಆತನನ್ನು 2 ವರ್ಷಗಳ ಕಾಲ ಸ್ವೀಡನ್‌ಗೆ ಕಾಲಿಡದಂತೆ ನಿಷೇಧ ಹೇರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ವೀಡನ್‌ನಲ್ಲಿನ ವಲಸಿಗರ ಸ್ಥಿತಿಗತಿ

ಸ್ವೀಡನ್ ಐತಿಹಾಸಿಕವಾಗಿ ನಿರಾಶ್ರಿತರ ಸ್ವರ್ಗ ಎಂದು ಹೆಸರು ಗಳಿಸಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ ಇದಾಗಿದೆ. 2013-2014ರ ಸಮಯದಲ್ಲಿ ಸಿರಿಯಾದಿಂದ ವಲಸೆ ಬಂದ ಹಲವಾರು ಜನರಿಗೆ ಇದು ಖಾಯಂ ವಾಸಿಸಲು ಅನುಮತಿ ನೀಡಿದೆ. ಸಿರಿಯಾ ಯುದ್ದ ಆರಂಭವಾದಾಗಿನಿಂದ ಸುಮಾರು 70,000 ಸಿರಿಯನ್ನರು ಇಲ್ಲಿಗೆ ವಲಸೆ ಬಂದಿದ್ದಾರೆ.

2015 ರ ವರ್ಷವೊಂದರಲ್ಲೇ ಸ್ವೀಡನ್‌ ಆಶ್ರಯಕ್ಕಾಗಿ ದಾಖಲೆಯ 1,62,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಮುಖ್ಯವಾಗಿ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮತ್ತು ಯುದ್ಧ ಪೀಡಿತ ದೇಶಗಳಿಂದ ಆಶ್ರಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಲಪಂಥೀಯರ ವಾದ

ಸ್ವೀಡಿಷ್ ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷವಾಗಿರುವ ಬಲಪಂಥೀಯ ಸ್ವೀಡನ್ ಡೆಮೋಕ್ರಾಟ್ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವಲಸಿಗರ ಒಳಹರಿವು ಅಪರಾಧದ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅದು ಆರೋಪಿಸಿದೆ. ಇದು ವಿಶ್ವದ ಅತ್ಯಂತ ಉದಾರವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಹೇರುತ್ತಿದೆ ಎಂದು ಪಕ್ಷ ಆರೋಪಿಸಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರಲ್ಲಿ ಕೌಶಲ್ಯ ಮತ್ತು ವಿದ್ಯಾರ್ಹತೆಯ ಸಮಸ್ಯೆಯಿದೆ. ಹಾಗಾಗಿ ಅವರೆಲ್ಲರೂ ಕೆಲಸ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಇದು ಇತರ ಹೆಚ್ಚು ತೆರಿಗೆ ಕಟ್ಟುವವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ 2018 ರಲ್ಲಿ ಸ್ವೀಡನ್‌ನಲ್ಲಿ ನಿರುದ್ಯೋಗ ದರವು ಶೇಕಡಾ 3.8 ರಷ್ಟಿದ್ದರೆ, ವಲಸಿಗ ಸ್ವೀಡಿಶ್ ಜನಸಂಖ್ಯೆಯಲ್ಲಿ ಇದು ಶೇ. 15ಕ್ಕೇರಿತ್ತು. ಇದನ್ನಿಟ್ಟುಕೊಂಡು ಅಲ್ಲಿನ ಬಲಪಂಥೀಯ ಪಕ್ಷಗಳು ವಲಸಿಗ ವಿರೋಧಿ ಭಾವನೆ, ಮುಸ್ಲಿಂ ವಿರೋಧಿ ಭಾವನೆ ಮೂಡಿಸಲು ನಿರತವಾಗಿವೆ ಎನ್ನಲಾಗುತ್ತಿದೆ.

ವಾಸ್ತವ ಮತ್ತು ಮಾಧ್ಯಮಗಳ ಜವಾಬ್ದಾರಿ

ಆದರೆ ಅಲ್ಲಿನ ಬಹುಸಂಖ್ಯಾತ ಜನರು ವಲಸೆಯನ್ನು ಬೆಂಬಲಿಸಿ ಆಶ್ರಯ ನೀಡುವ ಮನೋಭಾವ ಹೊಂದಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಲಸೆಗೆ ಕಾರಣವೇನು? ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಅರ್ಥೈಸಬೇಕು, ಮಾನವೀಯ ಆಧಾರದಲ್ಲಿ ಹೇಗೆ ಗ್ರಹಿಸಬೇಕು ಮತ್ತು ಎಲ್ಲರಿಗೂ ಉದ್ಯೋಗ ಸೃಷ್ಠಿ ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಬಲಪಂಥೀಯರು ನಿರಾಕರಿಸುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವವಾದಿಗಳ ವಾದವಾಗಿದೆ.

ಇನ್ನು ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು. ಇದೀಗ ಅಲ್ಲಿನ ಪತ್ರಿಕೆಗಳನ್ನು ಹುಡುಕಿದರೆ ಗಲಭೆಯ ಸುದ್ದಿಯೇ ತಿಳಿಯುವುದಿಲ್ಲ. ಭಾರತದ ಮಾಧ್ಯಮಗಳು ಇದನ್ನು ಅನುಸರಿಸುವ ಅಗತ್ಯವಿದೆ ಎನಿಸುತ್ತದೆ.

ಸ್ವೀಡನ್ ನಗರ: Photo Courtesy: Forbes

ಸ್ವೀಡನ್ ಹಲವು ಬಹುವೈವಿಧ್ಯತೆಗಳನ್ನು ಒಳಗೊಂಡಿರುವ ದೇಶ. ಆದರೆ ಅಲ್ಲಿ ಈಗ ಇಸ್ಲೋಮೊಫೋಬಿಯ ಹರಡಲು ಬಲಪಂಥೀಯರು ಸ್ವೀಡನ್‌ನ ವಲಸಿಗರನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಸ್ತೆ ಮತ್ತು ರೈಲು ಸಾರಿಗೆ ಮೂಲಕ ಸ್ವೀಡನ್‌ ಪ್ರವೇಶಿಸಬೇಕಾದರೆ ಮಾಲ್ಮೊ ನಗರದ ಮೂಲಕವೇ ಹಾದುಹೋಗಬೇಕು. ಹಾಗಾಗಿ ಹೆಚ್ಚಿನ ನಿರಾಶ್ರಿತರು ಅಲ್ಲಿ ನೆಲೆಸಿರುವುದು ಹೌದಾದರೂ ಅವರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವುದು, ಅವಹೇಳನ ಮಾಡುವುದು ಗಲಭೆಗೆ ಕಾರಣವಾಗುತ್ತವೆ. ಅದರ ಹೊರತು ಬಹಳಷ್ಟು ಜನರು ಅಲ್ಲಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಗಲಭೆಯ ಕುರಿತು ಮಾತನಾಡಲು ಸ್ನೇಹಿತರಿಗೆ ಫೋನ್ ಮಾಡಿದರೆ ಅದು ಇಲ್ಲಿ ದೊಡ್ಡ ವಿಷಯವಲ್ಲ ಎನ್ನುತ್ತಾರೆ ಎಂದು ಹಲವು ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಭರತ್ ಹೆಬ್ಬಾಳ್ ಹೇಳುತ್ತಾರೆ.

ಸ್ಟಾಕ್‌ಹೋಮ್‌ ಪ್ರಧಾನವಾಗಿ ವಲಸೆ ಬಂದ ಪ್ರದೇಶಗಳಲ್ಲಿ ಒಂದಾಗಿದ್ದು ಅಲ್ಲಿ ಗಲಭೆಗಳು ಹೆಚ್ಚಾಗಿವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಸಮಸ್ಯೆಗಳ ಕುರಿತು ಮಾತನಾಡುವಾಗ ಉದಾಹರಣೆಯಾಗಿ ಸ್ವೀಡನ್‌ ಅನ್ನು ಉಲ್ಲೇಖಿಸಿದ್ದರು. ಆಗ ಸಹ ಗಲಭೆ ಭುಗಿಲೆದ್ದಿದ್ದು, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಮತ್ತು ಲೂಟಿ ನಡೆದಿತ್ತು.


ಇದನ್ನೂ ಓದಿ: ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...