Homeಅಂತರಾಷ್ಟ್ರೀಯಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಬೆಂಗಳೂರು ಮಾದರಿ ಗಲಭೆ: ಸ್ವೀಡನ್‌ನ ಮಾಲ್ಮೊ ನಗರ ಹೊತ್ತಿ ಉರಿಯಲು ಕಾರಣವೇನು?

ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು.

- Advertisement -
- Advertisement -

ಸ್ವೀಡನ್‌ನ ಮೂರನೇ ಅತಿ ದೊಡ್ಡ ನಗರ ಮಾಲ್ಮೊದಲ್ಲಿ ಬೆಂಗಳೂರು ಮಾದರಿ ಗಲಭೆ ನಡೆದಿದ್ದು, ನಗರ ಹೊತ್ತಿ ಉರಿದಿದೆ. ಅಲ್ಲಿನ ರೋಸನ್ ಗಾರ್ಡ್‌ ಪ್ರದೇಶದಲ್ಲಿ ನೆರೆದಿದ್ದ 300ಕ್ಕೂ ಹೆಚ್ಚು ಜನರಿದ್ದ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿದೆ. ಅವರೆಲ್ಲರೂ ಇಸ್ಲಾಂ ವಿರುದ್ಧದ ಚಟುವಟಿಕೆಗಳನ್ನು ವಿರೋಧಿಸಿ, ಇಸ್ಲಾಮೋಫೋಬಿಯಾದ ವಿರುದ್ಧ ಪ್ರತಿಭಟಿಸಲು ಸೇರಿದ್ದರು ಎನ್ನಲಾಗಿದೆ.

ಸ್ವೀಡನ್‌ನ ಮಾಲ್ಮೊದಲ್ಲಿ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸದಸ್ಯರು ಕುರಾನ್ ಪ್ರತಿಯನ್ನು ಸುಟ್ಟು ಹಾಕಿದ ನಂತರ ಗಲಭೆ ಆರಂಭವಾಗಿದೆ. ಅದಕ್ಕೂ ಹಿಂದಿನ ದಿನ ಪಕ್ಷದ ನಾಯಕ ರಾಸ್ಮಸ್ ಪಲುಡಾನ್ ಅವರಿಗೆ “ನಾರ್ಡಿಕ್ ದೇಶಗಳಲ್ಲಿ ಇಸ್ಲಾಮೀಕರಣ” ವಿಷಯದ ಕುರಿತು ಮಾಲ್ಮೋದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಲಾದ್ದರಿಂದ ರೊಚ್ಚಿಗೆದ್ದ ಬಲಪಂಥೀಯ ಕಾರ್ಯಕರ್ತರು ಕುರಾನ್ ಸುಟ್ಟಿದ್ದಾರೆ ಎಂದು ಸ್ವೀಡಿಸ್ ಪ್ರತಿಕೆ ಅಫ್ಟನ್ಬ್ಲಾಡೆಟ್ ವರದಿ ಮಾಡಿದೆ. ಈ ಹಿಂದೆ ಜನಾಂಗೀಯ ಗುಂಪುಗಳ ವಿರುದ್ಧ ಪ್ರಚೋದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ಸ್ವೀಡಿಷ್ ಕಲಾವಿದ ಡಾನ್ ಪಾರ್ಕ್ ರಾಸ್ಮಸ್ ಪಲುಡಾನ್ ಅವರನ್ನು ಆಹ್ವಾನಿಸಿದ್ದರು.

ರಾಸ್ಮಸ್ ಪಲುಡಾನ್ ಯಾರು?

ಡೆನ್ಮಾರ್ಕ್‌ನ ವಕೀಲ ರಾಸ್ಮಸ್ ಪಲುಡಾನ್ 2017ರಲ್ಲಿ ತೀವ್ರ ಬಲಪಂಥೀಯ ಸ್ಟ್ರಾಮ್ ಕುರ್ಸ್ ಪಕ್ಷದ ಸ್ಥಾಪಕ. ಈತನ ಪಕ್ಷ ಮುಸ್ಲಿಂ ವಿರೋಧಿ ಮನೋಭಾವವನ್ನು ಹೊಂದಿದೆ. ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸದಾ ಮುಸ್ಲಿಂ ವಿರೋದಿ ಅಂಶಗಳನ್ನು ಪ್ರಸಾರ ಮಾಡುವ, ಕುರಾನ್ ಸುಟ್ಟು ಹಾಕುವ ವಿಡಿಯೋಗಳನ್ನು ಈತ ಅಪ್‌ಲೋಡ್‌ ಮಾಡಿದ್ದಾನೆ. ಆ ರೀತಿಯ ಮುಸ್ಲಿಂ ಜನಾಂಗೀಯ ಅವಹೇಳನದ ವಿಡಿಯೋ ಪೋಸ್ಟ್ ಮಾಡಿದ್ದಕ್ಕಾಗಿ ಜೂನ್‌ನಲ್ಲಿ ಆತನಿಗೆ ಮೂರು ತಿಂಗಳು ಜೈಲುವಾಸ ಮತ್ತು ವಕೀಲ ವೃತ್ತಿ ಮಾಡದಂತೆ ನಿಷೇಧ ಹೇರಿತ್ತು. 2019ರಲ್ಲಿಯೂ ಸಹ ಜನಾಂಗೀಯ ಅವಹೇಳನದ ಭಾಷಣ ಮಾಡಿದ್ದಕ್ಕಾಗಿ ಆತನಿಗೆ 14 ದಿನಗಳ ಬಂಧನ ಶಿಕ್ಷೆ ವಿಧಿಸಲಾಗಿತ್ತು. ಜನಾಂಗೀಯ ನಿಂದನೆ, ದ್ವೇ‍ಷ ಭಾಷಣ, ಮಾನಹಾನಿ, ಯದ್ವಾತದ್ವಾ ವಾಹನ ಚಾಲನೆ ಸೇರಿದಂತೆ ಇದುವರೆಗೂ ಸುಮಾರು 14 ಪ್ರಕರಣಗಳಲ್ಲಿ ಈತ ತಪ್ಪಿತಸ್ಥನೆಂದು ನ್ಯಾಯಾಲಯ ತೀರ್ಪು ನೀಡಿದೆ.

ರಾಸ್ಮಸ್ ಪಲುಡಾನ್. Photo Courtesy: DR

3 ಲಕ್ಷ ಮುಸ್ಲಿಮರನ್ನು ಡೆನ್ಮಾರ್ಕ್‌ನಿಂದ ಹೊರಹಾಕುವ ಮತ್ತು ಇಸ್ಲಾಂ ಧರ್ಮವನ್ನು ನಿಷೇಧಿಸುವುದಾಗಿ ಘೋಷಿಸಿ ಈತ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದಾನೆ. ಈ ಶುಕ್ರವಾರ ಸ್ವೀಡನೆ ಆತನನ್ನು 2 ವರ್ಷಗಳ ಕಾಲ ಸ್ವೀಡನ್‌ಗೆ ಕಾಲಿಡದಂತೆ ನಿಷೇಧ ಹೇರಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ವೀಡನ್‌ನಲ್ಲಿನ ವಲಸಿಗರ ಸ್ಥಿತಿಗತಿ

ಸ್ವೀಡನ್ ಐತಿಹಾಸಿಕವಾಗಿ ನಿರಾಶ್ರಿತರ ಸ್ವರ್ಗ ಎಂದು ಹೆಸರು ಗಳಿಸಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ನಂತರ ಅತಿ ಹೆಚ್ಚು ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ ಇದಾಗಿದೆ. 2013-2014ರ ಸಮಯದಲ್ಲಿ ಸಿರಿಯಾದಿಂದ ವಲಸೆ ಬಂದ ಹಲವಾರು ಜನರಿಗೆ ಇದು ಖಾಯಂ ವಾಸಿಸಲು ಅನುಮತಿ ನೀಡಿದೆ. ಸಿರಿಯಾ ಯುದ್ದ ಆರಂಭವಾದಾಗಿನಿಂದ ಸುಮಾರು 70,000 ಸಿರಿಯನ್ನರು ಇಲ್ಲಿಗೆ ವಲಸೆ ಬಂದಿದ್ದಾರೆ.

2015 ರ ವರ್ಷವೊಂದರಲ್ಲೇ ಸ್ವೀಡನ್‌ ಆಶ್ರಯಕ್ಕಾಗಿ ದಾಖಲೆಯ 1,62,000 ಅರ್ಜಿಗಳನ್ನು ಸ್ವೀಕರಿಸಿದೆ. ಅದರಲ್ಲಿ ಮುಖ್ಯವಾಗಿ ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದ ಮುಸ್ಲಿಮರು ಮತ್ತು ಯುದ್ಧ ಪೀಡಿತ ದೇಶಗಳಿಂದ ಆಶ್ರಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಲಪಂಥೀಯರ ವಾದ

ಸ್ವೀಡಿಷ್ ಸಂಸತ್ತಿನ ಮೂರನೇ ಅತಿದೊಡ್ಡ ಪಕ್ಷವಾಗಿರುವ ಬಲಪಂಥೀಯ ಸ್ವೀಡನ್ ಡೆಮೋಕ್ರಾಟ್ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಮುಖವಾಗಿ ಮುಸ್ಲಿಂ ವಲಸಿಗರ ಒಳಹರಿವು ಅಪರಾಧದ ಉಲ್ಬಣಕ್ಕೆ ಕಾರಣವಾಗಿದೆ ಎಂದು ಅದು ಆರೋಪಿಸಿದೆ. ಇದು ವಿಶ್ವದ ಅತ್ಯಂತ ಉದಾರವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಹೇರುತ್ತಿದೆ ಎಂದು ಪಕ್ಷ ಆರೋಪಿಸಿದೆ.

ಹೆಚ್ಚಿನ ಸಂಖ್ಯೆಯ ವಲಸಿಗರಲ್ಲಿ ಕೌಶಲ್ಯ ಮತ್ತು ವಿದ್ಯಾರ್ಹತೆಯ ಸಮಸ್ಯೆಯಿದೆ. ಹಾಗಾಗಿ ಅವರೆಲ್ಲರೂ ಕೆಲಸ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಇದು ಇತರ ಹೆಚ್ಚು ತೆರಿಗೆ ಕಟ್ಟುವವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ 2018 ರಲ್ಲಿ ಸ್ವೀಡನ್‌ನಲ್ಲಿ ನಿರುದ್ಯೋಗ ದರವು ಶೇಕಡಾ 3.8 ರಷ್ಟಿದ್ದರೆ, ವಲಸಿಗ ಸ್ವೀಡಿಶ್ ಜನಸಂಖ್ಯೆಯಲ್ಲಿ ಇದು ಶೇ. 15ಕ್ಕೇರಿತ್ತು. ಇದನ್ನಿಟ್ಟುಕೊಂಡು ಅಲ್ಲಿನ ಬಲಪಂಥೀಯ ಪಕ್ಷಗಳು ವಲಸಿಗ ವಿರೋಧಿ ಭಾವನೆ, ಮುಸ್ಲಿಂ ವಿರೋಧಿ ಭಾವನೆ ಮೂಡಿಸಲು ನಿರತವಾಗಿವೆ ಎನ್ನಲಾಗುತ್ತಿದೆ.

ವಾಸ್ತವ ಮತ್ತು ಮಾಧ್ಯಮಗಳ ಜವಾಬ್ದಾರಿ

ಆದರೆ ಅಲ್ಲಿನ ಬಹುಸಂಖ್ಯಾತ ಜನರು ವಲಸೆಯನ್ನು ಬೆಂಬಲಿಸಿ ಆಶ್ರಯ ನೀಡುವ ಮನೋಭಾವ ಹೊಂದಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ವಲಸೆಗೆ ಕಾರಣವೇನು? ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಅರ್ಥೈಸಬೇಕು, ಮಾನವೀಯ ಆಧಾರದಲ್ಲಿ ಹೇಗೆ ಗ್ರಹಿಸಬೇಕು ಮತ್ತು ಎಲ್ಲರಿಗೂ ಉದ್ಯೋಗ ಸೃಷ್ಠಿ ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಬಲಪಂಥೀಯರು ನಿರಾಕರಿಸುತ್ತಿದ್ದಾರೆ ಎಂಬುದು ಪ್ರಜಾಪ್ರಭುತ್ವವಾದಿಗಳ ವಾದವಾಗಿದೆ.

ಇನ್ನು ಅಲ್ಲಿನ ಈ ಗಲಭೆಯನ್ನು ಮಾಧ್ಯಮಗಳು ವರದಿ ಮಾಡಿದ ರೀತಿ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಅದನ್ನು ವಿಜೃಂಭಿಸಲಿಲ್ಲ, ದಿನದ 24 ಗಂಟೆ ಅದನ್ನೇ ತೋರಿಸಿ ಪ್ರಚೋದಿಸಲಿಲ್ಲ. ಬದಲಿಗೆ ಕೊನೆ ಪುಟದ ಒಂದು ಸುದ್ದಿಯಾಗಿ ಅಷ್ಟೇ ಪ್ರಸಾರ ಮಾಡಿತು. ಇದೀಗ ಅಲ್ಲಿನ ಪತ್ರಿಕೆಗಳನ್ನು ಹುಡುಕಿದರೆ ಗಲಭೆಯ ಸುದ್ದಿಯೇ ತಿಳಿಯುವುದಿಲ್ಲ. ಭಾರತದ ಮಾಧ್ಯಮಗಳು ಇದನ್ನು ಅನುಸರಿಸುವ ಅಗತ್ಯವಿದೆ ಎನಿಸುತ್ತದೆ.

ಸ್ವೀಡನ್ ನಗರ: Photo Courtesy: Forbes

ಸ್ವೀಡನ್ ಹಲವು ಬಹುವೈವಿಧ್ಯತೆಗಳನ್ನು ಒಳಗೊಂಡಿರುವ ದೇಶ. ಆದರೆ ಅಲ್ಲಿ ಈಗ ಇಸ್ಲೋಮೊಫೋಬಿಯ ಹರಡಲು ಬಲಪಂಥೀಯರು ಸ್ವೀಡನ್‌ನ ವಲಸಿಗರನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರಸ್ತೆ ಮತ್ತು ರೈಲು ಸಾರಿಗೆ ಮೂಲಕ ಸ್ವೀಡನ್‌ ಪ್ರವೇಶಿಸಬೇಕಾದರೆ ಮಾಲ್ಮೊ ನಗರದ ಮೂಲಕವೇ ಹಾದುಹೋಗಬೇಕು. ಹಾಗಾಗಿ ಹೆಚ್ಚಿನ ನಿರಾಶ್ರಿತರು ಅಲ್ಲಿ ನೆಲೆಸಿರುವುದು ಹೌದಾದರೂ ಅವರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಕಾಣುವುದು, ಅವಹೇಳನ ಮಾಡುವುದು ಗಲಭೆಗೆ ಕಾರಣವಾಗುತ್ತವೆ. ಅದರ ಹೊರತು ಬಹಳಷ್ಟು ಜನರು ಅಲ್ಲಿ ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಗಲಭೆಯ ಕುರಿತು ಮಾತನಾಡಲು ಸ್ನೇಹಿತರಿಗೆ ಫೋನ್ ಮಾಡಿದರೆ ಅದು ಇಲ್ಲಿ ದೊಡ್ಡ ವಿಷಯವಲ್ಲ ಎನ್ನುತ್ತಾರೆ ಎಂದು ಹಲವು ವರ್ಷಗಳ ಕಾಲ ಅಲ್ಲಿ ನೆಲೆಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಭರತ್ ಹೆಬ್ಬಾಳ್ ಹೇಳುತ್ತಾರೆ.

ಸ್ಟಾಕ್‌ಹೋಮ್‌ ಪ್ರಧಾನವಾಗಿ ವಲಸೆ ಬಂದ ಪ್ರದೇಶಗಳಲ್ಲಿ ಒಂದಾಗಿದ್ದು ಅಲ್ಲಿ ಗಲಭೆಗಳು ಹೆಚ್ಚಾಗಿವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಲಸೆ ಸಮಸ್ಯೆಗಳ ಕುರಿತು ಮಾತನಾಡುವಾಗ ಉದಾಹರಣೆಯಾಗಿ ಸ್ವೀಡನ್‌ ಅನ್ನು ಉಲ್ಲೇಖಿಸಿದ್ದರು. ಆಗ ಸಹ ಗಲಭೆ ಭುಗಿಲೆದ್ದಿದ್ದು, ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ, ಮತ್ತು ಲೂಟಿ ನಡೆದಿತ್ತು.


ಇದನ್ನೂ ಓದಿ: ಮೋದಿಯವರದ್ದೇ ಯೂಟ್ಯೂಬ್‌ನಲ್ಲಿ ಅವರ ಜನಪ್ರಿಯತೆ ಕುಸಿತ: ಮನ್ ಕಿ ಬಾತ್ ತಿರಸ್ಕರಿಸಿದ ವಿದ್ಯಾರ್ಥಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...