Homeಅಂತರಾಷ್ಟ್ರೀಯಕಣ್ಣಿಗೆ ಕಾಣದ ವೈರಸ್ ಏನೆಲ್ಲಾ ಮಾಡಿತು? ಮತ್ತೇನು ನಿರೀಕ್ಷಿಸಬಹುದು?

ಕಣ್ಣಿಗೆ ಕಾಣದ ವೈರಸ್ ಏನೆಲ್ಲಾ ಮಾಡಿತು? ಮತ್ತೇನು ನಿರೀಕ್ಷಿಸಬಹುದು?

- Advertisement -
- Advertisement -

‘ಮುಂದೇನಾಗಬಹುದು ಎಂದು ಹೇಳುವುದು ಕಷ್ಟ. ಅದರಲ್ಲೂ ಭವಿಷ್ಯದ ಬಗ್ಗೆ’ ಎಂದಿದ್ದ ಭೌತಶಾಸ್ತ್ರಜ್ಞ ನೀಲ್ ಬೋರ್. ಸದ್ಯಕ್ಕೆ ಕೊರೊನಾ ಕಾಯಿಲೆಯ ಪರಿಸ್ಥಿತಿಯೂ ಹಾಗೆ ಇದೆ. ಆದರೂ ರೋಗ ಶಾಸ್ತ್ರಜ್ಞರು, ಸಂಖ್ಯಾ ಶಾಸ್ತ್ರಜ್ಞರು (ಜ್ಯೋತಿಷ್ಯಿಗಳಲ್ಲ), ನೆಟ್‍ವರ್ಕ್ ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‍ಅನ್ನು ಬಳಸಿ ವಿವಿಧ ದೇಶಗಳಲ್ಲಿ ಎಷ್ಟು ಲಕ್ಷ ಜನ ಸಾವನ್ನಪ್ಪಬಹುದು ಎನ್ನುವುದನ್ನು ವಿಶ್ಲೇಷಿಸುತ್ತಿದ್ದಾರೆ. ಇದೆಲ್ಲವೂ ನಾವು ಹೇಗೆ ಸಾಮಾಜಿಕವಾಗಿ ಮತ್ತು ವೈಯುಕ್ತಿಕವಾಗಿ ವ್ಯವಹರಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿದೆ.

ವ್ಯಕ್ತಿಯಿಂದ ಕುಟುಂಬ ದಾಟಿ ಸಮುದಾಯದತ್ತ ಕಾಲಿಟ್ಟಿರುವಂತೆ ಕಾಣುತ್ತಿದೆ. ಮುಂದಿನ ಸಾಧ್ಯತೆಗಳು: ಇಡೀ ದೇಶವನ್ನು ಆವರಿಸಿ ತನಗೆ ಬೇಕಾದಷ್ಟು ಬಲಿ ತೆಗೆದುಕೊಂಡು ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ತರುವಂತದ್ದು (herd immunity). ಇದು ನಾಗರಿಕ ಸಮಾಜ ಕೈಚೆಲ್ಲಿದಾಗ ನಡೆಯುವಂತದ್ದು. ಇಲ್ಲವೇ ಇದರ ವಿರುದ್ಧ ಇದಾಗಲೇ 69 ಹಳೆಯ ಔಷಧಿಗಳನ್ನು ಹೊಸ ಕಾಯಿಲೆಗೆ ಬಳಸಬಹುದೇ ಎನ್ನುವ ಪರೀಕ್ಷೆಯಲ್ಲಿ ಯಶಸ್ಸು ಕಂಡರೆ ಕಾಯಿಲೆಗೆ ಅವುಗಳಲ್ಲಿ ಯಾವದಾದರೊಂದು ಉತ್ತಮ ಔಷಧವಾಗಬಹುದು ಅಥವಾ ಕಾಯಿಲೆ ಒಂದೇ ಸಮನೇ ಏರಿಳಿದು ಅತ್ಯಂತ ಹೆಚ್ಚು ಬಲಿ ಪಡೆಯುವುದನ್ನು ತಡೆಗಟ್ಟಿ, ಮಂದಗತಿಯಲ್ಲಿ ಮೂಗುದಾರ ಹಾಕಿ, ಸಾಗಿಸಿ ಒಂದುವರೆ ವರ್ಷ ಅಥವಾ ಎರಡುವರೆ ವರ್ಷದಲ್ಲಿ ಲಸಿಕೆಯನ್ನು ಕಂಡುಹಿಡಿದು ನಿಯಂತ್ರಿಸಬಹುದು.

ಮೂಗುದಾರವೆಂದರೆ, ಇದಾಗಲೇ ಸುದ್ದಿಯಲ್ಲಿರುವ ಪರಸ್ಪರ ಜನರ ಮಧ್ಯೆ ಅಂತರವನ್ನು ಕಾಪಾಡಿಕೊಳ್ಳುವುದು; ಜನಜಂಗುಳಿ, ಹಬ್ಬಹರಿದಿನ, ಜಾತ್ರೆ ಮತ್ತು ದೇವಾಲಯಗಳಲ್ಲಿ ಸಾವಿರಾರು ಜನ ಒಟ್ಟಿಗೆ ಸೇರದಿರುವುದು. ಸೋಂಕಿತರು ತಾವಾಗಿಯೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗುವುದು. ದಕ್ಷಿಣ ಕೊರಿಯಾದಂತೆ ಅತೀ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು, ಶೀಘ್ರಗತಿಯಲ್ಲಿ ತೀವ್ರ ನಿಗಾಯಿಡುವ ಆಸ್ಪತ್ರೆಯ ಹಾಸಿಗೆಗಳನ್ನು ಸಿದ್ಧ ಮಾಡುವುದು, ಸಾವಿರಾರು ಕೃತಕ ಉಸಿರಾಟ ಉಪಕರಣಗಳನ್ನು ವ್ಯವಸ್ಥೆ ಮಾಡುವುದು. ಸ್ಟೇಡಿಯಂ, ಮದುವೆ ಚೌಲ್ಟ್ರಿ, ಹೊಟೇಲ್‍ಗಳನ್ನು ಈ ರೋಗಕ್ಕೆ ಆಸ್ಪತ್ರೆಗಳಾಗಿ ಸಿದ್ಧಮಾಡಿಕೊಳ್ಳುವುದು.

ಬ್ರಿಟಿಶ್ ಸರ್ಕಾರ ಜಗತ್ತಿನ ಶ್ರೇಷ್ಟ ಕಾರು ಮತ್ತು ವಿಮಾನ ಇಂಜಿನ್ ತಯಾರಿಕೆಯ ರೋಲ್ಸ್‍ರಾಯ್ಸ್ ಕಂಪೆನಿಗೆ ಕೃತಕ ಉಸಿರಾಟ ಯಂತ್ರಗಳನ್ನು ತಯಾರಿಸುವಂತೆ ನಿರ್ದೇಶಿಸಿದೆ. ಉಸಿರು ಉಳಿದರೆ ಹಾರಾಟ ಮುಂದೆ ನೋಡೋಣ ಎನ್ನುವಂತಾಗಿದೆ. 69 ಹಳೆಯ ಔಷಧಿಗಳನ್ನು ಕೊರೊನಾಗೆ ಪರೀಕ್ಷಿಸುತ್ತಿರುವ (repurposing) ಪಟ್ಟಿಯಲ್ಲಿ ಮಲೇರಿಯಾ ಕಾಯಿಲೆಗೆ ಬಳಸುತ್ತಿದ್ದ ಕ್ಲೋರೊಕ್ವಿನ್, ಎಚ್‍ಐವಿ ಏಡ್ಸ್‍ಗೆ ಬಳಸುತ್ತಿರುವ ಔಷಧಿಗಳು, ಮಧುಮೇಹ ಔಷಧಿಗಳು ಸೇರಿವೆ.

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಮೂಲತಃ ಇರುವ ಸಮಸ್ಯೆಗಳೆಂದರೆ ಸರ್ಕಾರ ನಮ್ಮ ಒಟ್ಟು ಆರ್ಥಿಕ ವ್ಯವಸ್ಥೆ (ಜಿಡಿಪಿ)ಯ ಶೇ.1.2ನ್ನು ಮಾತ್ರ ಆರೋಗ್ಯಕ್ಕೆ ಖರ್ಚು ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅದು ಕನಿಷ್ಟ ಶೇ.2.5 ಆಗಿರಬೇಕು. ಜಗತ್ತಿನಲ್ಲಿ ಸರಾಸರಿ ಶೇ.18ರಷ್ಟು ಆರೋಗ್ಯದ ಖರ್ಚನ್ನು ಜನರು ತಮ್ಮ ಜೇಬಿನಿಂದ ನಿರ್ವಹಿಸುತ್ತಾರೆ. ಆದರೆ ಬಡ ಭಾರತದಲ್ಲಿ ಜನರು ತಮ್ಮ ಆರೋಗ್ಯದ ಶೇ.67ರಷ್ಟು ಖರ್ಚನ್ನು ತಾವೇ ಭರಿಸುತ್ತಿದ್ದಾರೆ. ಸಾವಿರ ಜನಕ್ಕೆ ಒಬ್ಬ ವೈದ್ಯ ಬೇಕೆನ್ನುವುದು ಇನ್ನೊಂದು ನಿಯಮ. ನಮ್ಮಲ್ಲಿ 1500 ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಅಲ್ಲದೇ ನಗರ ಕೇಂದ್ರಿತವಾಗಿರುವ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಶೇ.80ರಷ್ಟು ವೈದ್ಯರು ಶೇ.20ರಷ್ಟು ಜನರಿಗಾಗಿ ಮಾತ್ರ ಮೀಸಲಾಗಿದ್ದಾರೆ. ಜೊತೆಗೆ ಇಡೀ ದೇಶಕ್ಕೆ ಸುಮಾರು 35 ಸಾವಿರ ತೀವ್ರ ನಿಗಾ ಇಡುವ ಹಾಸಿಗೆಗಳಿವೆ ಎಂದು ಸರ್ಕಾರ ಹೇಳುತ್ತಿದೆ (2.3 bed per lakh). ನಮ್ಮಲ್ಲಿ ಹುಟ್ಟಿನಿಂದ ಬದುಕುಳಿಯುವ ಆಯಸ್ಸು 68 ಎಂದು ಪರಿಗಣಿಸಲಾಗಿದೆ. ಜಗತ್ತಿನ ಸರಾಸರಿ 72 ಆಗಿದೆ. ಆದರೂ 138 ಕೋಟಿ ಜನಸಂಖ್ಯೆಯಲ್ಲಿ ಸುಮಾರು 14 ಕೋಟಿ 60 ವರ್ಷ ದಾಟಿದವರಿದ್ದಾರೆ. ಹೀಗಾಗಿ ಆಕಸ್ಮಿಕವಾಗಿ ಕಾಯಿಲೆ ವೇಗಗತಿಯಲ್ಲಿ ಹರಡಿ ಇದರಲ್ಲಿ ಶೇ.1ರಷ್ಟು ಜನಕ್ಕೆ ತೀವ್ರ ನಿಗಾ ಇಡುವ ಅವಶ್ಯಕತೆ ಇದ್ದರೂ, 14 ಲಕ್ಷ ಕೃತಕ ಉಸಿರಾಟ ವ್ಯವಸ್ಥೆ ಇರುವ ಹಾಸಿಗೆ ಬೇಕಾಗಬಹುದು.

ಕೊರೊನಾ ಸದ್ಯಕ್ಕೆ ಇಡೀ ಜಗತ್ತಿನ ವ್ಯವಹಾರವನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೇ ಬದುಕಿನ ಮೂಲಭೂತ ಪ್ರಕ್ರಿಯೆಗೂ ಕುತ್ತು ತಂದಿದೆ. ಮಾರ್ಕ್ ಟ್ವೈನ್ ಹೀಗೆಂದಿದ್ದ “ಸರಳ ಜೀವನ, ಪ್ರಖರ ಪ್ರೇಮ, ಹಾಗೆಯೇ ಹಾದಿಯ ಬದಿಯಲ್ಲಿ ಅರಳಿದ ಮಲ್ಲಿಗೆಯ ಮೊಗ್ಗಿನ ಕಂಪನ್ನು ಸವಿಯಲು ಮರೆಯದಿರಿ ಎಂದಿದ್ದ”. ಆದರೆ ದುರಂತವೆಂದರೆ ಕೊರೊನಾ ಕಾಯಿಲೆ ತಗುಲಿದವರಿಗೆ ನಾಸಿಕ ಗ್ರಂಥಿಯ ಸೂಕ್ಷ್ಮಗಳೇ ಮರೆಯಾಗುತ್ತವೆಯಂತೆ. ಇದು ಕೂಡ ರೋಗ ಲಕ್ಷಣದ ಸೂಚನೆ ಎಂದು ನಿನ್ನೆ ಮೊನ್ನೆ ಕಂಡುಕೊಂಡಿದ್ದಾರೆ. ಏಡ್ಸ್ ವೈರಾಣು ಎಪಿಡೆಮಿಕ್ ಆಗಿ ಹುಟ್ಟಿ ಪ್ಯಾಂಡೆಮಿಕ್ ಆಗಿ ಹರಡಿ ಎಂಡೆಮಿಕ್ ಆಗಿ ಇಲ್ಲಿಯೇ ಉಳಿಯಿತು. ಎಪಿಡೆಮಿಕ್ ಎಂದರೆ ಸ್ಥಳೀಯವಾಗಿಯೇ ಹುಟ್ಟಿ ಅಲ್ಲಿಯೇ ಹರಡಿಕೊಳ್ಳುವುದು. ಪ್ಯಾಂಡೆಮಿಕ್ ಎಂದರೆ ವಿಶ್ವವ್ಯಾಪಿಯಾಗುವುದು. ಎಂಡೆಮಿಕ್ ಎಂದರೆ ಬಂದು ತೊಲಗದೆ ಇಲ್ಲಿಯೇ ನೆಲಕಚ್ಚಿಕೊಳ್ಳುವುದು. ಎಚ್‍ಐವಿ ಏಡ್ಸ್ ಗಂಡು ಹೆಣ್ಣಿನ ಮೂಲಭೂತ ಸಂಬಂಧವನ್ನೇ ಛಿದ್ರಮಾಡಿತು. ಈ ಕೊರೊನಾ ಜನಜನರ ನಡುವೆ ಆರು ಅಡಿ ದೂರವಿರುವಂತೆ ಮಾಡಿದೆ.

ಸೂಕ್ಷ್ಮಜೀವಿಗಳ ಜಗತ್ತೇ ವಿಚಿತ್ರ. ಸೂಕ್ಷ್ಮಜೀವಿಗಳ ತಂತ್ರಗಾರಿಕೆಯನ್ನು ಇನ್ನೂ ನಾವು ಸರಿಯಾಗಿ ಗ್ರಹಿಸಿಲ್ಲ. ಇಲ್ಲೊಂದು ವಿಚಿತ್ರ ರೀತಿಯ ಸೂಕ್ಷ್ಮಜೀವಿಗಳ ವ್ಯವಹಾರವನ್ನು ಗಮನಿಸೋಣ. ಟಾಕ್ಸೊಪ್ಲಾಸ್ಮ ಗುಂಡಿಯೈ ಎನ್ನುವ ಪೆಟೊಜೋವಾ ರೋಗಾಣು ಇಲಿಯ ದೇಹಕ್ಕೆ ಹೊಕ್ಕಿ ಇಲಿಯ ಮೆದುಳಿನ ಕಾರ್ಯವೈಖರಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಇಲಿಯಲ್ಲಿ ಬೆಕ್ಕಿನ ಉಚ್ಚೆಯ ಆಸೆಯನ್ನು ಹುಟ್ಟಿಸುತ್ತದೆ. ಇಲಿ ಆಗ ಬೆಕ್ಕನ್ನು ಹುಡುಕಿಕೊಂಡು ಅಲೆದಾಡುತ್ತದೆ. ಈ ಇಲಿಗೆ ಬೆಕ್ಕೆಂದರೆ ಭಯವಿಲ್ಲ. ಬೆಕ್ಕನ್ನು ಬಯಸಿ ಬೇಡುತ್ತಿರುವ ಈ ಇಲಿ ಬೆಕ್ಕಿಗೆ ಸುಲಭವಾಗಿ ಸಿಕ್ಕಿ ಅಥವಾ ತಾನೇ ಅದರ ಬಾಯಿಗೆ ಬಿದ್ದು ತಿನ್ನಲ್ಪಡುತ್ತದೆ. ಆಗ ಈ ಟಾಕ್ಸೊಪ್ಲಾಸ್ಮ ಗುಂಡಿಯೈ ಬೆಕ್ಕಿನ ಹೊಟ್ಟೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಉಚ್ಚೆಯ ಮೂಲಕ ಹೊರಬರುತ್ತದೆ. ಇದೆಲ್ಲ ಈ ಸೂಕ್ಷ್ಮಜೀವಿ ತನ್ನ ಸಂತಾನೋತ್ಪತ್ತಿಗಾಗಿ ಹೆಣೆದ ಮಾಯಾಜಾಲ. ಹೀಗಾಗಿ ಬೆಕ್ಕಿನ ಉಚ್ಚೆಯಿಂದ ದೂರವಿರುವುದು ಆರೋಗ್ಯಕ್ಕೆ ಉತ್ತಮವೆನ್ನುವುದು ವೈದ್ಯಕೀಯ ರಂಗದಲ್ಲಿ ತಿಳಿದಿರುವ ಸಂಗತಿ.

ಇತ್ತೀಚೆಗೆ ಮನುಷ್ಯರಲ್ಲಿ ಕ್ಲಾಸ್ಟ್ರೀಡಿಯಮ್ ಡಿಫಿಕಿಲೆ ಎನ್ನುವ ಬ್ಯಾಕ್ಟೀರಿಯಾ ರೋಗಾಣು ಅಲ್ಲಲ್ಲಿ ಕಂಡು ಬರುತ್ತಿದೆ. ಇದರ ವಿಶೇಷವೇನೆಂದರೆ ಇದಕ್ಕೆ ನಮ್ಮ ಬತ್ತಳಿಕೆಯಲ್ಲಿರುವ ಯಾವುದೇ ಆಂಟಿಬಯಾಟಿಕ್‍ಗಳು ಕೆಲಸ ಮಾಡುವುದಿಲ್ಲ. ಸದ್ಯಕ್ಕೆ ಇದಕ್ಕಿರುವ ಉತ್ತಮ ಔಷಧ ಮಲ ತಿನ್ನಿಸುವುದಾಗಿದೆ. ಇದನ್ನು ಫೀಕಲ್ ಥೆರಫಿ ಎನ್ನುತ್ತಾರೆ. ಆಶ್ಚರ್ಯಕರ ವಿಷಯವೇನೆಂದರೆ ಈ ರೋಗಾಣು ನಮ್ಮ ಹೊಟ್ಟೆಯಲ್ಲಿ ತನ್ನ ಹೆಡೆಯನ್ನು ಚಾಚಲು ಕಾರಣ, ಅತೀ ಹೆಚ್ಚು ಆಂಟಿಬಯಾಟಿಕ್‍ಗಳ ಸೇವನೆಯಿಂದ ಅಥವಾ ಕೃಷಿಯಲ್ಲಿ ಬಳಕೆಮಾಡುವ ಆಂಟಿಬಯಾಟಿಕ್‍ಗಳು ನಮ್ಮ ದೇಹಕ್ಕೆ ಸೇರಿ ನಮಗೆ ಪೂರಕವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರಿಂದಾಗಿದೆ.

ಸೋಂಕು ರೋಗ ತಗಲುವುದು ಸೂಕ್ಷ್ಮಜೀವಿಗಳಿಂದಲೇ ಎನ್ನುವುದು ನಮ್ಮಲ್ಲಿರುವ ಸಾಮಾನ್ಯ ನಂಬಿಕೆ. ಅಂದರೆ ವೈರಾಣು, ಬ್ಯಾಕ್ಟೀರಿಯಾ, ಶಿಲಿಂಧ್ರ ಅಥವಾ ಪೆಟೊಜೋವಾಗಳಾಗಿರಬೇಕು ಎನ್ನುವುದಾಗಿದೆ. ಆದರೆ ಯುರೋಪ್‍ನಲ್ಲಿ ಕಂಡುಬಂದ ಸಿಜೆಡಿ ರೋಗ ಅಂದರೆ ಕ್ರೆಜ್ಡ್ ಫೆಲ್ಡ್ ಯಾಕೊಬ್ ಡಿಸೀಸ್ (creuzfeldt-jakob disease) ಈ ನಂಬಿಕೆಯನ್ನೇ ಬುಡಮೇಲು ಮಾಡಿತು. ಕಾರಣ ನಿರ್ಜೀವಿಯಾದ ರಾಸಾಯನಿಕ ವಸ್ತುವಾದ ಪ್ರಯಾನ್ (prion) ಎನ್ನುವ ಪೆಟೀನ್‍ವೊಂದು ಈ ಸೋಂಕು ರೋಗವನ್ನುಂಟುಮಾಡುವುದಾಗಿದೆ. ಇದಕ್ಕೆ ಕಾರಣ ಹಸು ಮಾಂಸ ತಿಂದದ್ದು. ಅದಕ್ಕೆ ಕಾರಣ ಆ ಸಸ್ಯಹಾರಿ ಹಸುವಿಗೆ ಮಾಂಸದೂಟ ಬಡಿಸಿದ್ದು. ಮಾಂಸದೂಟವೆಂದರೆ ಹುರಿದ ಮಾಂಸವನ್ನು ಮೇವಿನಲ್ಲಿ ತಿನ್ನಿಸಿದಾಗಿತ್ತು. ಉದ್ದೇಶವೇನೊ ಹೆಚ್ಚು ಹಾಲು ಮತ್ತು ಮಾಂಸ ಬರಲಿ ಎನ್ನುವುದಾಗಿತ್ತು. ಆದರೆ ಮೆದುಳಿಗೆ ತಗಲುವ ಈ ಸಿಜೆಡಿ ಕಾಯಿಲೆ ಇಂಗ್ಲೆಂಡ್ ದೇಶವನ್ನು ತಲ್ಲಣಗೊಳಿಸಿತ್ತು. ಇದನ್ನು ತಡೆಹಿಡಿಯಲು ಲಕ್ಷಾಂತರ ಹಸುಗಳನ್ನು ಬೆಂಕಿಯಲ್ಲಿ ಆಹುತಿ ಮಾಡಲಾಯಿತು. ಇದರಿಂದ ಒಂದು ಸಸಾರಜನಕ ಕೂಡ ಸೋಂಕು ರೋಗವನ್ನುಂಟುಮಾಡಬಹುದೆಂದು ಜಗತ್ತಿಗೆ ಹೊಸ ಅರಿವಾಯಿತು. ಆದರೆ ಈ ಸೋಂಕು ತಿಂದ ತಕ್ಷಣವೇ ಬರುವಂತದಲ್ಲ. ರೋಗದ ಚಿಹ್ನೆಗಳು ಕಂಡುಬರಲು ಕೆಲವು ಬಾರಿ ದಶಕಗಳು ಬೇಕಾಗಬಹುದು. ಇಂಗ್ಲೆಂಡ್‍ನಲ್ಲಿ ಲಕ್ಷಾಂತರ ಜನರಲ್ಲಿ ಈ ಕಾಯಿಲೆ ಇದ್ದು, ಇನ್ನೂ ಹೊರಹೊಮ್ಮಿಲ್ಲ ಎನ್ನುವ ವರದಿಗಳಿವೆ.

ಕೊರೊನಾ ತನ್ನದೇ ಆದ ರೀತಿಯಲ್ಲಿ ಮಹತ್ತರವಾದ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಕೊರೊನಾ ಕಾಯಿಲೆಗಾಗಿ ಪರಸ್ಪರ ದೂರವನ್ನು ಕಾಪಾಡಿಕೊಳ್ಳಿ ಎನ್ನುವ ವೈದ್ಯಕೀಯ ಸಲಹೆಯನ್ನು, ನಮ್ಮ ದೇಶದ ಹೇಯವಾದ ಅಸ್ಪಶ್ಯತೆಗೆ ತಳುಕುಹಾಕಿ ನಮ್ಮ ಪೂರ್ವಜರು ವೈಜ್ಞಾನಿಕ ಮನೋಭಾವವುಳ್ಳವರು ಎಂದು ಹೊಸ ವ್ಯಾಖ್ಯಾನ ಮಾಡಲು ಹೊರಟಿದ್ದಾರೆ. ಕೊರೊನಾ ಪೀಡಿತರು ಜಾಗತಿಕ ಕಾಯಿಲೆಗೆ ಬಲಿಪಶು ಎನ್ನುವುದನ್ನು ಬಿಟ್ಟು ವ್ಯಕ್ತಿಯನ್ನೇ ಸಾಮಾಜಿಕ ಪಿಡುಗೆಂದು ಕಾಣುವ ಮನಸ್ಸು ನಮ್ಮಲ್ಲಿದೆ. ಮೊನ್ನೆ ಕೊರೊನಾ ಕಾಯಿಲೆಯಿಂದ ಆಸ್ಪತ್ರೆಯಿಂದ ಹೊರ ಬಂದ ವ್ಯಕ್ತಿಯೊಬ್ಬರು ನಮ್ಮನ್ನು ಹೀನಾಯವಾಗಿ ಕುಷ್ಟರೋಗಿಗಳಂತೆ ನೋಡಿಕೊಂಡರು ಎಂದರು. ಅವರ ಮಾತಿನಲ್ಲಿಯೇ ನಮ್ಮ ಮಾನಸಿಕತೆಯ ಮರ್ಮ ಅಡಗಿದೆ. ಕೆಲವರು ಹೇಳುವುದುಂಟು ನನಗೆ ಯಾವ ಜಾತಿಯಲ್ಲೂ ನಂಬಿಕೆಯಿಲ್ಲ. ಅವರ ಬ್ರಾಹ್ಮಣರು ಇರಬಹುದು, ಶೂದ್ರರೂ ಇರಬಹುದು ಎಂದು!

ಆದರೆ ಕೊರೊನಾ ಕಾಯಿಲೆ ಚೈನಾ ದೇಶದಲ್ಲಿ ಸಮುದಾಯ ಪ್ರಜ್ಞೆಯನ್ನು ಹೆಚ್ಚು ಬೆಸೆಯಿತು ಎನ್ನಬಹುದು. ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವವರು ವೈಯಕ್ತಿಕವಾಗಿ ಏನನ್ನು ಕೊಳ್ಳದೇ ಒಟ್ಟಾಗಿ ಸೇರಿ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಆರಂಭಿಸಿದರು. ಒಂದು ಅಪಾರ್ಟ್‍ಮೆಂಟ್‍ನಲ್ಲಿ ಸಾವಿರ ಮನೆಯಿದ್ದರೇ, ಸಾವಿರ ಆರ್ಡರ್ ಮಾಡಿ ಸಾವಿರ ಟ್ರಿಪ್ ಮಾಡುವ ಬದಲು ಒಂದೇ ಟ್ರಿಪ್‍ಗೆ ಇಳಿಸಿದರು.

ಇದರ ಜೊತೆಗೆ ಕೊರೊನಾ ಕಾಯಿಲೆಯಿಂದ ನಮ್ಮ ಕೊಳ್ಳಬಾಕತನಕ್ಕೆ ಕೊಡಲಿ ಏಟು ಬಿದ್ದು ಪರಿಸರ ಪ್ರಜ್ಞೆ ಹೆಚ್ಚಾಗುತ್ತದೆಂದು ನಿರೀಕ್ಷಿಸಬಹುದೇ? ಟಿಬಿ (tuberculosis) ಎಂದರೆ ಮೂಲ ಅರ್ಥ ಕೊಳ್ಳಬಾಕತನವೇ ಆಗಿತ್ತು. Sometimes the best comes out of worst.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...