Homeಮುಖಪುಟಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ...

ಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ…

ಕರ್ನಾಟಕದ ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ

- Advertisement -
- Advertisement -

ಪ್ರಭುತ್ವದ ತಪ್ಪುಗಳ ಬಗ್ಗೆ ಮಾತನಾಡುವವರನ್ನು ಅಮಾನವೀಯವಾಗಿ ದಮನಿಸುವುದು ಹಿಂದಿನಿಂದಲೂ ನಡೆದುಬಂದಿರುವ ಪದ್ದತಿ. ಆ ಪ್ರಭುತ್ವಕ್ಕೆ ಇದರಿಂದ ತಾನೆಷ್ಟು ಬೆತ್ತಲಾಗುತ್ತೇನೆ ಎಂಬ ಅರಿವು ಸಹ ಇಲ್ಲದೇ ಅದು ಕ್ರೂರವಾಗಿ ವರ್ತಿಸುತ್ತದೆ. ಮೈಸೂರಿನ ಫ್ರಿ ಕಾಶ್ಮೀರ್ ವಿವಾದ, ಕೊಪ್ಪಳದ ಸಿರಾಜ್‌ರವರ ಕವನದ ಮೇಲೆ ಕೇಸು ಮತ್ತು ಬೀದರ್‌ನ ಶಾಹಿನ್ ಅನುದಾನಿತ ಶಾಲೆಯ ಸಿಎಎ ವಿರುದ್ಧದ ನಾಟಕಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಪ್ರಭುತ್ವದ ದಮನಕ್ಕೆ ಹಿಡಿದ ಕನ್ನಡಿಗಳಾಗಿವೆ.

ಒಂದು ಪ್ಲೆಕಾರ್ಡ್, ಒಂದು ಕವನ, ಒಂದು ನಾಟಕಕ್ಕೆ ಬಲಪಂಥೀಯ ಸರ್ಕಾರ ಎಷ್ಟು ಬೆದರುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದಾಗಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಅದು ಎಂತಹ ಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಬೀದರ್‌ನ ಘಟನೆ ಕೇಳಿದರಂತೂ ನಮ್ಮನ್ನು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಸಿಎಎ ವಿರುದ್ಧದ ನಾಟಕದಲ್ಲಿ 5ನೇ ತರಗತಿಯ ಮಗುವೊಬ್ಬಳು ಆಕ್ಷೆಪಾರ್ಯ ಸಂಭಾಷಣೆ ಬಳಸಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯ ತಾಯಿಯನ್ನು ಮತ್ತು ಆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪೊಲೀಸರು ಒಂದು ವಾರದಿಂದ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ತಂದೆಯಿಲ್ಲದ, ಕೇವಲ ತಾಯಿಯನ್ನೇ ನೆಚ್ಚಿಕೊಂಡಿದ್ದ 11 ವರ್ಷದ ಆ ಮಗು ಈ ಪ್ರಭುತ್ವದ ಕಣ್ಣಿಗೆ ದೇಶದ್ರೋಹಿಯಾಗಿ ಕಾಣುತ್ತದೆಯೆಂದರೆ ಅದರ ಸಿದ್ಧಾಂತ ಎಷ್ಟು ಟೊಳ್ಳು ಅಲ್ಲವೇ?

ನಡೆದಿದ್ದೇನು?

ಜನವರಿ 21ರಂದು ಬೀದರ್‌ನ ಅನುದಾನಿತ ಶಾಹಿನ್ ಶಾಲೆಯಲ್ಲಿ “ಸಿಎಎ ವಿರುದ್ಧ ಮಕ್ಕಳ ನಾಟಕವೊಂದು” ನಡೆದಿದೆ. ನಾಟಕದಲ್ಲಿ “ದಾಖಲೆ ಕೇಳುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಎಂಬ ಮಾತುಗಳನ್ನು 5ನೇ ತರಗತಿಯ ಮಗು ಹೇಳಿದೆ. ಅಷ್ಟಕ್ಕೆ ಅದನ್ನು ಕೇಳಿದ ಎಬಿವಿಪಿ ಕಾರ್ಯಕರ್ತನಿಗೆ ದೇಶವೇ ಕುಸಿದುಹೋಯಿತು ಅನ್ನಿಸಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಟ್ಟಿದ್ದಾನೆ. ಅದಕ್ಕಾಗಿಯೇ ಕಾಯುತ್ತಿದ್ದರೋ ಎನ್ನುವ ರೀತಿಯಲ್ಲಿ ಪೊಲೀಸರು ದಿಢೀರ್ ಶಾಲೆಗೆ ನುಗ್ಗಿದ್ದಲ್ಲದೇ, ಎಳೆಯ ಮಕ್ಕಳನ್ನು ಕೂರಿಸಿಕೊಂಡು ತಾಸುಗಟ್ಟಲೇ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಅವರು ಕೇಳಿದ ಪ್ರಶ್ನೆಗಳೆಂದರೆ ಆ ಡೈಲಾಗ್ ಅನ್ನು ಯಾರು ಹೇಳಿಕೊಟ್ಟರು? ನಾಟಕದ ಸ್ಕ್ರಿಪ್ಟ್ ಬರೆದುಕೊಟ್ಟ ಶಿಕ್ಷಕರು ಯಾರು?.. ಇಷ್ಟಕ್ಕೆ ಆ ಮಕ್ಕಳು ನಡುಗಿಹೋಗಿದ್ದಾರೆ.

ಪೊಲೀಸರ ಈ ದುರ್ವತನೆಯ ಫೋಟೊಗಳು ವೈರಲ್ ಆಗಿ ಸಾವಿರಾರು ಜನ ಈ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ತಪ್ಪಿನ ಮೇಲೆ ತಪ್ಪು ಮಾಡಿದ ಪೊಲೀಸರು ಜನವರಿ 30ರಂದು 5ನೇ ತರಗತಿಯ ಮಗುವಿನ ತಾಯಿ ನಾಜುಬುನ್ನೀಸ ಮತ್ತು ಶಾಲೆಯ ಮುಖ್ಯೋಪಾಧ್ಯಯಿನಿ ಫರಿದಾ ಬೇಗಂರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿದ್ದಾರೆ. ವಾರ ಕಳೆದರೂ ಅವರಿಬ್ಬರಿಗೂ ಬೇಲ್ ಸಿಕ್ಕಿಲ್ಲ. ಏಕೆಂದರೆ ಜಡ್ಜ್ ರಜೆಯಲ್ಲಿದ್ದಾರೆ.. ಕಾಕತಾಳಿಯವೆಂದರೆ ದೇಶದ ನ್ಯಾಯವೂ ಕೂಡ ರಜೆಯಲ್ಲಿದೆ..!

ನೋವಿನ ಕಥೆ

ಬಂಧನದಲ್ಲಿರುವ ನಾಜುಬುನ್ನೀಸ ಎಂಬ ಮಹಿಳೆಯ ಗಂಡ ತೀರಿಕೊಂಡಿದ್ದಾನೆ. ಚಿಕ್ಕಮಗುವಿನೊಂದಿಗೆ ಬೀದರ್ ಜಿಲ್ಲೆಯ ಹಳ್ಳಿಯಲ್ಲಿ ವಾಸವಿದ್ದ ಆಕೆ, ಇದ್ದ ತುಂಡು ಭೂಮಿಯನ್ನು ಗೇಣಿಗೆ ಕೊಟ್ಟು ತನ್ನ ಮಗಳು ಚೆನ್ನಾಗಿ ಓದಬೇಕೆಂಬ ಅದಮ್ಯ ಆಸೆಯಿಂದ ಎರಡು ತಿಂಗಳ ಹಿಂದೆ ತಾನೇ ಬೀದರ್ ನಗರಕ್ಕೆ ವಲಸೆ ಬಂದಿದ್ದಾಳೆ. ಆದರೆ ತನ್ನದಲ್ಲದ ತಪ್ಪಿಗೆ ಆಕೆ ದುರಂತ ಸ್ಥಿತಿಯಲ್ಲಿ ಜೈಲಿನಲ್ಲಿದ್ದರೆ, ಆಕೆಯ ಮಗಳು ತಾನು ಬಾಡಿಗೆಗೆ ಇದ್ದ ಮನೆಯ ಯಜಮಾನರ ಮನೆಯಲ್ಲಿ ಆಶ್ರಯ ಪಡೆದಿದ್ದು, ತನ್ನ ತಾಯಿಯ ಆಗಮನಕ್ಕಾಗಿ ಕಣ್ಣು ಬಿಟ್ಟಿಕೊಂಡು ಕಾಯುತ್ತಿದ್ದಾಳೆ..

ಆಕೆಯ ತಾಯಿ ಈಗಾಗಲೇ ಮಾಧ್ಯಮಗಳ ಎದುರು ತನ್ನ ಮಗಳು ಆಡಿದ ಮಾತುಗಳು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅವಲತ್ತುಕೊಂಡಿದ್ದಾಳೆ. ಆದರೆ ಪೊಲೀಸರು ಮಾತ್ರ ನಾಟಕದ ಡೈಲಾಗ್‌ಗಳು ಸಿಎಎ, ಎನ್‌ಆರ್‌ಸಿ ವಿರುದ್ಧ ಸುಳ್ಳು ಹರಡುತ್ತಿವೆ ಮತ್ತು ಪ್ರಧಾನಿ ನರೆಂದ್ರ ಮೋದಿಯವರಿಗೆ ಅವಮಾನಿಸುವಂತಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟು ಮಾತ್ರವಲ್ಲ ದೂರು ದಾಖಲಾದ ನಂತರ ಇದುವರೆಗೂ ನಾಲ್ಕು ಬಾರಿ ಶಾಹಿನ್ ಶಾಲೆಗೆ ಭೇಟಿ ಕೊಟ್ಟಿದ್ದಲ್ಲದೇ ಪದೇ ಪದೇ ವಿಚಾರಣೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳಕೊಟ್ಟಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ದೂರಿದೆ. ಪೊಲೀಸರ ಭಯಕ್ಕೆ ಹಲವು ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

ನ್ಯಾಯ ಎಲ್ಲಿದೆ?

ಸರ್ಕಾರ ಒಂದು ಕಡೆ ಎನ್‌ಸಿಆರ್ ಮಾಡುವುದಿಲ್ಲ ಎನ್ನುತ್ತಿದೆ. ಈ ಬಗ್ಗೆ ಪ್ರಧಾನಿ ಒಂದು ಹೇಳಿದರೆ, ಗೃಹಸಚಿವ ಅಮಿತ್ ಶಾ ಮತ್ತೊಂದು ಹೇಳುತ್ತಿದ್ದಾರೆ. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿದೆಯೆಂದು ಒಮ್ಮೆ, ಇಲ್ಲ ಎಂದು ಇನ್ನೊಮ್ಮೆ ಹೇಳುತ್ತಿದ್ದಾರೆ. ದಾಖಲೆ ತೋರಿಸಬೇಕಿಲ್ಲ ಎಂದು ಒಮ್ಮೆ, ತೋರಿಸಬೇಕೆಂದು ಒಮ್ಮೆ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸುಳ್ಳು ಸುದ್ದಿ ಹರಡಿ ದಿಕ್ಕುತಪ್ಪಿಸುತ್ತಿರುವುದು ಸರ್ಕಾರವೇ ಆಗಿದೆ. ಇವರಿಗೆ ಯಾವ ಶಿಕ್ಷೆ ಕೊಡಬೇಕು? ದಾಖಲೆ ಕೇಳಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬುದು ದೇಶದ್ರೋಹವೇ? ಅದಕ್ಕೂ ಪ್ರಧಾನಿಗೂ ಏನು ಸಂಬಂಧ? ಒಟ್ಟಿನಲ್ಲಿ ಕರ್ನಾಟಕ ಪೊಲೀಸರು ಸಂಘಪರಿವಾರದ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ.

NRC or No NRC- – Who is Lying, Modi or Shah- – CAA-NRC Protests – The Wire

NRC or No NRC- – Who is Lying, Modi or Shah- – CAA-NRC Protests – The Wire

Posted by PEclub on Wednesday, December 25, 2019

ಬಿಜೆಪಿ ಮುಖಂಡರು ರಾಜ್ಯದಲ್ಲಿ ಮತ್ತು ದೇಶದಲ್ಲಿ ದಿನಕ್ಕೊಂದು ಕೋಮುಪ್ರಚೋದಿತ, ಶಾಂತಿ -ಸಾಮರಸ್ಯ ಹಾಳುಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಸಿಎಎ ವಿರೋಧಿಸುವವರನ್ನು ಸೆದೆಬಡಿಯುತ್ತೇವೆ ಎಂದೂ, ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡದೇ ಹೆಸರು ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿ ಕರ್ನಾಟಕದ ಸಂಸದ ಅನಂತ್‌ಕುಮಾರ್‌ಹೆಗಡೆ ಹೇಳಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಮರನ್ನು ಕೊಚ್ಚಿ ಹಾಕುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಚಿವ ಸಿ.ಟಿ ರವಿ ಕನ್ನಡಪರ ಸಂಘಟನೆಗಳನ್ನು ತುಕಡೆ ತುಕಡೆ ಗ್ಯಾಂಗ್ ಅನ್ನುತ್ತಾರೆ. ಗೋಧ್ರಾದಲ್ಲಿ ಮುಸ್ಲಿಮರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ದೆಹಲಿಯಲ್ಲಿ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎನ್ನುತ್ತಾರೆ. ಆದರೆ ಇವರ‍್ಯಾರ ಮೇಲೂ ಸಹ ಯಾವುದೇ ದೂರು ದಾಖಲಾಗುವುದಿಲ್ಲ.. ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ.

ಶಾಹಿನ್ ಶಾಲೆಯ ಮೇಲೇಕೆ ಕೋಪ?

ಪೊಲೀಸರು ಪದೇ ಪದೇ ವಿಚಾರಣೆಯ ನೆಪದಲ್ಲಿ ಶಾಹಿನ್ ಶಾಲೆಗೆ ಭೇಟಿಕೊಡುವ ಮೂಲಕ ಆ ಶಾಲೆಯ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. 9-10 ವರ್ಷದ ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಗು, ಅವರ ಪೋಷಕರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಾಹಿನ್ ಸಂಸ್ಥೆಯು ಕಳೆದ 31 ವರ್ಷಗಳಿಂದ ದೇಶದ 8 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದ ಸುಮಾರು 16000 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಕಳೆದ ವರ್ಷವೊಂದರಲ್ಲಿಯೇ 327 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಬಡವರ ಪರವಾಗಿ ಇರುವ ಇಂತಹ ಸಂಸ್ಥೆಯ ಮೇಲೆ ಕಣ್ಣುಬಿದ್ದಿರುವ ದುರುಳರ ಪರವಾಗಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.

ಒಟ್ಟಿನಲ್ಲಿ ಮುಂದಾಲೋಚನೆಯಿಲ್ಲದೇ ಸಿಎಎ ಕಾನೂನನ್ನು ತಂದ ಸರ್ಕಾರ, ಅದನ್ನು ಸಮರ್ಥಿಸಿಕೊಳ್ಳಲು ಕಂಡ ಕಂಡವರ ಮೇಲೆ ದೂರು ದಾಖಲಿಸಿ ಹೆದರಿಸುವ ನೀಚತನಕ್ಕೆ ಇಳಿದಿದೆ. ಅದಕ್ಕಾಗಿಯೇ ಅದು ಭಿತ್ತಿಪತ್ರಕ್ಕೆ, ಕವನಕ್ಕೆ, ನಾಟಕಕ್ಕೆ ಹೆದರುತ್ತಿದೆ. ಮೈಸೂರಿನಲ್ಲಿಯೂ ಸಹ ಫ್ರಿ ಕಾಶ್ಮೀರ್ ಭಿತ್ತಿಫಲಕ ಹಿಡಿದ ವಿದ್ಯಾರ್ಥಿನಿಯದು ತಪ್ಪಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಲಾಗಿದೆ. ಹಾಗಾಗಿ ಆಕೆಗೆ ಜಾಮೀನು ದೊರೆತಿದೆ. ಅದೇ ರೀತಿ ಇಲ್ಲಿಯೂ ಸಹ ನ್ಯಾಯಾಲಯದಲ್ಲಿ ಈ ಕೇಸುಗಳು ನಿಲ್ಲುವುದಿಲ್ಲ. ಆದರೆ ಈ ಮೂಲಕ ಜನರಲ್ಲಿ ಭಯ ಉಂಟುಮಾಡಲು ಹೋಗಿ ಪ್ರಭುತ್ವ ಮತ್ತಷ್ಟು ಬೆತ್ತಲಾಗುತ್ತಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನ್ಯೆರೆ,
    ಹಲವಾರು ಹಿಂದಿ, ಕನ್ನಡ, ಇತರ ಭಾಷೆಗಳ ಚಲನ ಚಿತ್ರಗಳಲ್ಲಿ ಐತಿಹಾಸಿಕ ಕಥೆಗಳ ಸಿನೆಮಾಗಳಲ್ಲಿ ದೇಶ ಮತ್ತು ವಿದೇಶಿಗರ ಪಾತ್ರ ನಮ್ಮ ದೇಶ ಕಲಾವಿಧರು ಮಾಡುತ್ತಾರೆ. ಅಂಥಹವರಲ್ಲಿ ಕೆಲವರು ದೇಶ ಭಕ್ತಿಯ ಪಾತ್ರ ವಹಿಸುತ್ತಾರೆ ಕೆಲವರು ದೇಶ ದ್ರೋಹಿಗಳ ಪಾತ್ರ ವಹಿಸುತ್ತಾರೆ. ದೇಶ ಭಕ್ತರ ಪಾತ್ರ ವಹಿಸಿದವರು ಜೈಕಾರ ಹಾಕುತ್ತಾರೆ, ಭಾರತ ಕೀ ಜೈ ಹೋ ಅಂತಾರೆ, ದೇಶ ದ್ರೋಹಿಗಳ ಪಾತ್ರ ವಹಿಸಿದವರು ನಮ್ಮ ವೈರಿ ದೇಶಗಳ ಜೈಕಾರ ಹಾಕುತ್ತಾರೆ.
    ಇಂತಹ ವಿಷಯಗಳಲ್ಲಿ ಬೀದರ ಪೊಲೀಸರಿಗೆ ನನ್ನ ಸವಾಲು, ಆಗ ಸಿನೆಮಾಗಳಲ್ಲಿ ದೇಶ ದ್ರೋಹ ಪಾತ್ರ ವಹಿಸಿದ ಎಷ್ಟು ಜನರ ಮೇಲೆ ಕೇಸ ಹಾಕಿ ಜೇಲಿಗೆ ಕಳಹಿಸಿದಿರಿ ಉತ್ತರ ಕೊಡಿ?
    ನೀವು ಯಾವ ಶಾಲೆಯಲ್ಲಿ ಕಾನೂನು ಕಲಿರುವಿರಿ? ಜನರ ಬಗ್ಗೆ, ಕಾನೂನಿನ ಬಗ್ಗೆ ಕಾಳಜಿಯಿಂದ ವರ್ತಿಸಿ
    ಯಿಂದ:-
    ಸಯದ ಸಜ್ಜಾದ ಅಲಿ ಇನಾಮದಾರ
    ಮಾಜಿ ಉಪ ಮಹಾ ಪೌರರು ಕಲಬುರಗಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...