Homeಮುಖಪುಟಬಿಜೆಪಿ ಆಗ ಬ್ರಿಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬಿಜೆಪಿ ಆಗ ಬ್ರಿಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ: ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್

ಬಿಜೆಪಿ ಪರಿವಾರದ ಒಂದು ನಾಯಿ ಕೂಡ ದೇಶಕ್ಕಾಗಿ ಹುತಾತ್ಮರಾದ ಚರಿತ್ರೆ ಇಲ್ಲ. ಈ ಪಾಪಪ್ರಜ್ಞೆಯಿಂದ ಹೊರಗೆ ಬರಲಾರದ ಆತ್ಮವಂಚನೆ ಅವರದು...

- Advertisement -
- Advertisement -

‘ಕಾಂಗ್ರೆಸ್ ಗುಲಾಮಗಿರಿ ಪಕ್ಷ’ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತಿಗೆ ಕಾಂಗ್ರೆಸ್ ವಕ್ತಾರ ಮತ್ತು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಕ್ರೋಶ ವ್ಯಕ್ತಪಡಿಸಿದ್ದು, “ಬಿಜೆಪಿ ಆಗ ಬ್ರೀಟಿಷರ, ಈಗ ಕಾರ್ಪೊರೇಟ್‌ಗಳ ಗುಲಾಮಿ ಪಕ್ಷ” ಎಂದು ಕಿಡಿಕಾರಿದ್ದಾರೆ.

ಸೆಪ್ಟಂಬರ್ 27 ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ “ಬಿಜೆಪಿ ತಾಲಿಬಾನ್ ಇದ್ದ ಹಾಗೆ” ಎಂಬ ಮಾತಿಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಬೊಮ್ಮಾಯಿ, “ಕಾಂಗ್ರೆಸ್ ಗುಲಾಮಗಿರಿ ಪಕ್ಷ, ನಮ್ಮ ಬಿಜೆಪಿ ದೇಶಭಕ್ತ ಪಕ್ಷ” ಎಂದು ಹೇಳಿದ್ದರು. ಈ ಕುರಿತು ಚರ್ಚೆಗೆ ಬನ್ನಿ ಎಂದು ಪ್ರಕಾಶ್ ರಾಥೋಡ್ ಆಹ್ವಾನಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಇತಿಹಾಸ ಇರುವ ಬಿಜೆಪಿ ಪರಿವಾರ ಬಳಿಕ ನಾಜಿಗಳ ಗುಲಾಮಗಿರಿ ಮಾಡಿ ಈಗ ವರ್ತಮಾನದಲ್ಲೂ ಅಂಬಾನಿ ಅದಾನಿ ಕಾರ್ಪೋರೇಟ್ ಶಾಹಿಯ ಗುಲಾಮಗಿರಿ ಮಾಡುತ್ತಿದೆ” ಎಂದಿದ್ದಾರೆ.

ಆತ್ಮವಂಚನೆಗೂ ಒಂದು ಮಿತಿ ಇರಬೇಕು ಮುಖ್ಯಮಂತ್ರಿಗಳೇ… ಸಂಘ ಪರಿವಾರ ವಿರೋಧಿ ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದ ನೀವು ದೇಶಭಕ್ತಿಯ ಚರಿತ್ರೆ, ಇತಿಹಾಸವೇ ಇಲ್ಲದ ಬಿಜೆಪಿಯನ್ನು ದೇಶಭಕ್ತಿಯ ಪಕ್ಷ ಎಂದು ಕರೆಯುತ್ತಿರುವುದು ಆತ್ಮವಂಚನೆ ಅಲ್ಲವೇ ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ, ಕ್ವಿಟ್ ಚಳವಳಿಯಲ್ಲಿ ಭಾವಹಿಸಿದ ಸ್ವಾತಂತ್ರ್ಯ ವೀರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ಬಿಜೆಪಿ ನಾಯಕರ ಚರಿತ್ರೆಯನ್ನು ನೀವು ಮುಖ್ಯಮಂತ್ರಿ ಆದ ಎರಡು ತಿಂಗಳಲ್ಲೇ ಮರೆತುಬಿಟ್ಟಿರಾ ಎಂದು ರಾಥೋಡ್ ಪ್ರಶ್ನಿಸಿದ್ದಾರೆ.

ಬಸವರಾಜ್ ಬೊಮ್ಮಾಯಿಯವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಥೋಡ್‌ರವರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. “ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಹುಟ್ಟಿಕೊಂಡ, ಸ್ವಾತಂತ್ರ್ಯ ಚಳವಳಿ ಮೂಲಕವೇ ದೇಶದ ಜನಮಾನಸದಲ್ಲಿ ಬೇರು ಬಿಟ್ಟ ಕಾಂಗ್ರೆಸ್ಸನ್ನು ಗುಲಾಮಗಿರಿ ಪಕ್ಷ ಎಂದು ಕರೆದಿದ್ದೀರಿ. ಬ್ರಿಟಿಷರ ವಿರುದ್ಧ ಹೋರಾಡಿ, ಹುತಾತ್ಮರಾಗಿ, ಜೈಲು ಸೇರಿ, ತಮ್ಮ ಆಸ್ತಿ ಪಾಸ್ತಿಯನ್ನೆಲ್ಲಾ ದೇಶಕ್ಕೆ ಬಿಟ್ಟುಕೊಟ್ಟ ಲಕ್ಷಾಂತರ ಮಂದಿ ಕಾಂಗ್ರೆಸ್ಸಿನವರು. ಈ ಚರಿತ್ರೆ ಬಿಜೆಪಿಗೆ ಇದೆಯೇ? ಬ್ರಿಟಿಷರ ಗುಲಾಮಗಿರಿ ಮಾಡಿಕೊಂಡಿದ್ದ ಬಿಜೆಪಿಯ ಚರಿತ್ರೆ ನಿಮಗೆ ಮುಖ್ಯಮಂತ್ರಿ ಕುರ್ಚಿ ಸಿಕ್ಕ ತಕ್ಷಣ ಅಳಿಸಿ ಹೋಗುತ್ತದೆಯೇ” ಎಂದಿದ್ದಾರೆ.

ಗೋಡ್ಸೆಯಿಂದ ಕೊಲೆಯಾದ ಮಹಾತ್ಮಗಾಂಧಿ, ಅಖಂಡ ಭಾರತಕ್ಕಾಗಿ ಖಲಿಸ್ತಾನ ಉಗ್ರರನ್ನು ಸದೆ ಬಡಿದು ಅವರ ಗುಂಡಿಗೆ ಬಲಿಯಾಗಿ ಹುತಾತ್ಮರಾದ ಇಂದಿರಾಗಾಂಧಿ, LTTEಗೆ ಹುತಾತ್ಮರಾದ ರಾಜೀವ್ ಗಾಂಧಿ ಯಾರಿಗಾಗಿ ಹುತಾತ್ಮರಾದರು? ಅಂಬಾನಿ- ಅದಾನಿಯ ಗುಲಾಮಗಿರಿ ಮಾಡಿಕೊಂಡಿರುವ ನಿಮ್ಮ ಪರಿವಾರದ ನಾಯಕರಿಗೆ ಕೇಳಿ ಹೇಳಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಪರಿವಾರದ ಒಂದು ನಾಯಿ ಕೂಡ ದೇಶಕ್ಕಾಗಿ ಹುತಾತ್ಮರಾದ ಚರಿತ್ರೆ ಇಲ್ಲ. ಈ ಪಾಪಪ್ರಜ್ಞೆಯಿಂದ ಹೊರಗೆ ಬರಲಾರದ ಆತ್ಮವಂಚನೆ ಮತ್ತು ದೇಶದ್ರೋಹವನ್ನೇ ಆಚರಿಸುತ್ತಿರುವ ಬಿಜೆಪಿ ಪರಿವಾರ ಸ್ವಾತಂತ್ರ್ಯ ಬಂದ ನಂತರವಾದರೂ ದೇಶಭಕ್ತಿ ರೂಢಿಸಿಕೊಂಡ, ದೇಶಭಕ್ತಿ ಆಚರಿಸಿದ ಉದಾಹರಣೆ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದರೂ ನಿಮ್ಮ ಸಂಘ ಪರಿವಾರದ ಕಚೇರಿ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ದೇಶದ ತ್ರಿವರ್ಣ ಬಾವುಟ ಹಾರಿಸುವುದಿಲ್ಲ. ಇದಕ್ಕಿಂತ ದೇಶದ್ರೋಹ ಬೇರೆ ಇದೆಯೇ ? ನೀವೇಕೆ ಭಾರತದ ಧ್ವಜ ಹಾರಿಸದೆ ಏಕಿನ್ನೂ ಬ್ರಿಟಿಷರ ಗುಲಾಮಗಿರಿ ಮನಸ್ಥಿಯಿಂದ ಹೊರಗೆ ಬಂದಿಲ್ಲ ಎಂದು ನಿಮ್ಮ ಪರಿವಾರದ ನಾಯಕರನ್ನು ಪ್ರಶ್ನಿಸಿದ್ದೀರಾ? ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ವಿಮಾನ-ರೈಲು ನಿಲ್ದಾಣಗಳು, ಬಂದರುಗಳು, ಟೆಲಿಕಾಂ, ಹೆದ್ದಾರಿಗಳು, ಕೃಷಿ ಮಾರುಕಟ್ಟೆಗಳನ್ನು ಖಾಸಗಿ ಕಾರ್ಪೋರೇಟ್ ಗಳಿಗೆ ಮಾರಾಟ ಮಾಡುವುದೇ ದೇಶಭಕ್ತಿ ಎಂದು ನಿಮಗೆ ಹೇಳಿಕೊಟ್ಟಿದ್ದು ನಿಮ್ಮ ಪರಿವಾರದ ನಾಯಕರೇ? ಅಂಬಾನಿ, ಅದಾನಿ ಹಾಗೂ ನಿಮ್ಮ ನಾಲ್ಕೈದು ಮಂದಿ ಕಾರ್ಪೋರೇಟ್ ಸ್ನೇಹಿತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವುದು ದೇಶಭಕ್ತಿಯೇ? ಮೋದಿ ಅವರು ಪ್ರಧಾನಿ ಆಗುವ ಮೊದಲು ಭಾರತದ ಸಾಲ ಇದ್ದದ್ದು 53.11 ಲಕ್ಷ ಕೋಟಿ. ಮೋದಿ ದರ್ಬಾರಿನ 7 ವರ್ಷಗಳಲ್ಲಿ ದೇಶದ ಸಾಲ 135 ಲಕ್ಷ ಕೋಟಿಗೆ ಏರಿಸಿದ್ದೀರಿ. ದೇಶದ ಪ್ರತಿಯೊಬ್ಬ ಪ್ರಜೆ ತಾನು ದುಡಿದ 100 ರೂಪಾಯಿಯಲ್ಲಿ 35-45 ರೂಪಾಯಿಯನ್ನು ಪ್ರತ್ಯಕ್ಷ- ಪರೋಕ್ಷ ತೆರಿಗೆ ಕಟ್ಟುತ್ತಿದ್ದಾನೆ. ಪ್ರತಿಯೊಬ್ಬ ಭಾರತೀಯನನ್ನು ಇಂಚಿಂಚಾಗಿ ಸುಲಿಯುತ್ತಾ ರಕ್ತ ಹೀರುತ್ತಿರುವುದು ದೇಶಭಕ್ತಿಯೇ ಎಂದು ಪ್ರಶ್ನಿಸಿದ್ದಾರೆ.

ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದು ಕೊಟ್ಟು/ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಬ್ರಿಟಿಷರ ಗುಲಾಮರಾದಿರಿ. ನಿಮ್ಮ ಪರಿವಾರದ ಸಿದ್ದಾಂತ ಜರ್ಮನಿಯ ನಾಜಿಗಳದ್ದು. ಸೈದ್ಧಾಂತಿಕವಾಗಿಯೂ ನೀವು ನಾಜಿ ಗುಲಾಮರು. ಸ್ವಾತಂತ್ರ್ಯಾ ನಂತರದಲ್ಲಿ ಅಂಬಾನಿ ಮತ್ತು ಅದಾನಿ ಗ್ಯಾಂಗಿನ ಗುಲಾಮಗಿರಿ ಮಾಡುತ್ತಿರುವವರು ನೀವು ಎಂದು ಕಿಡಿಕಾರಿದ್ದಾರೆ.


ಇದನ್ನೂ ಓದಿ: ಮೈಸೂರು ದೇವಾಲಯ ಧ್ವಂಸ – ತಹಶೀಲ್ದಾರ್‌ ತಲೆದಂಡ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...