Homeಕರ್ನಾಟಕಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

ಬಿಜೆಪಿ ಜತೆ ಜೆಡಿಎಸ್ ಮೈತ್ರಿಗೆ ದೇವೇಗೌಡರ ಮುದ್ರೆ!

- Advertisement -
- Advertisement -

| ನೀಲಗಾರ |

ಕಳೆದ ವಾರ ‘ಆಗಿಯೇಬಿಟ್ಟಿತಾ ಜೆಡಿಎಸ್-ಬಿಜೆಪಿ ಮೈತ್ರಿ?’ ಎಂಬ ವರದಿ ನಮ್ಮಲ್ಲಿ ಪ್ರಕಟವಾಗಿತ್ತು. ಮೇಲ್ನೋಟಕ್ಕೆ ಕುಮಾರಸ್ವಾಮಿಯವರ ಸಿದ್ಧಾಂತಹೀನ ದುಡುಕಿನ ಹೇಳಿಕೆಯಂತೆ ಕಂಡಿದ್ದ ಬೆಂಬಲದ ಹೇಳಿಕೆಯ ಹಿಂದೆ ಸ್ಪಷ್ಟ ಲೆಕ್ಕಾಚಾರವಿತ್ತು. ಸಿದ್ಧಾಂತಕ್ಕೂ ಅವರಿಗೂ ಸಂಬಂಧ ಹೇಗೂ ಇರಲಿಲ್ಲ. ಆದರೆ ಜೆಡಿಎಸ್‌ನ ಅಸ್ತಿತ್ವವೇ ಅಲುಗಾಡುತ್ತಿದೆ ಎಂಬುದನ್ನು ವಿವರಿಸುವ ನಾಲ್ಕು ಅಂಶಗಳನ್ನು ಆ ವರದಿಯಲ್ಲಿ ಬರೆಯಲಾಗಿತ್ತು.

ಇದೀಗ ದೇವೇಗೌಡರು ಒಂದು ಹೆಜ್ಜೆ ಮುಂದೆ ಹೋಗಿ, ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಅಭಯವನ್ನು ನೀಡಿದ್ದಾರೆ. ಬಹಳ ನಾಜೂಕಿನಿಂದ ಅದಕ್ಕೆ ಬೇಕಾದ ಸಮರ್ಥನೆಯನ್ನೂ ಕೊಡುವ ಪ್ರಯತ್ನ ಮಾಡಿದ್ದಾರೆ. ‘ಸಿದ್ದರಾಮಯ್ಯ ಅಹಿಂದ ನಾಯಕ. ನಾನು ಯಾವ ಹಿಂದ ನಾಯಕನೋ ಗೊತ್ತಿಲ್ಲ. ಅವರು ಬೇಕಾದರೆ ಇನ್ನೊಂದು ಚುನಾವಣೆ ಬರಲಿ ಎಂತಲೂ ಹೇಳಬಹುದು. ನಾನು ಅಷ್ಟು ಶಕ್ತನಲ್ಲ. ಹಾಗಾಗಿ ಚುನಾವಣೆ ಬರುವುದು ಬೇಡ’ ಎಂದಿದ್ದಾರೆ. ದೇವೇಗೌಡರು ಖುದ್ದಾಗಿ ಫೋನ್ ಮಾಡಿ ಯಡಿಯೂರಪ್ಪನವರ ಹತ್ತಿರ ಮಾತಾಡಿದ್ದಾರೆ ಎಂತಲೂ ಹೇಳಲಾಗುತ್ತಿದೆ.

ಕಳೆದ ವಾರವೇ ಹೇಳಿದ್ದಂತೆ ಹಲವು ಶಾಸಕರು ಬಿಜೆಪಿಯ ಕಡೆಗೆ ಒಲವು ತೋರಿಸಿರುವುದು ಸ್ಪಷ್ಟವಿತ್ತು ಮತ್ತು ಬಿಜೆಪಿಯು ಘಾತುಕತನದಿಂದ ಇನ್ನಷ್ಟು ಜನರನ್ನು ಸೆಳೆದುಕೊಳ್ಳುವುದೂ ಕಷ್ಟವಿರಲಿಲ್ಲ. ಈ ವಾರದ ಬೆಳವಣಿಗೆ ಎಂದರೆ ಜೆಡಿಎಸ್‌ನ ವಿಧಾನಪರಿಷತ್ತಿನ ಸದಸ್ಯರು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಸೇರಿದಂತೆ ಹಲವರು ಸಭೆಯೊಂದನ್ನು ನಡೆಸಿದರು ಮತ್ತು ರೆಸಾರ್ಟ್ವೊಂದಕ್ಕೆ ಜೊತೆಗೂಡಿ ಹೋಗುವ ಕುರಿತೂ ಚರ್ಚಿಸಿದರು. ಶಾಸಕರ ಅಸಮಾಧಾನ ತಣಿಸಲು ದೇವೇಗೌಡರು ಸಭೆ ಕರೆದರೆ, ಕುಮಾರಸ್ವಾಮಿ ಲಂಡನ್ ವಿಮಾನ ಹತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ತಂದೆ, ಮಗ ಏನೋ ಭಿನ್ನ ನಿಲುವು ತಳೆದಂತೆ ಮಾಡುವುದು, ಸಭೆಯಲ್ಲಿ ತನ್ನ ಅಸಹಾಯಕತೆಯನ್ನು ತಂದೆ ಮಗನ ಮೇಲೆ ಅಥವಾ ಮಗ ತಂದೆಯ ಮೇಲೆ ಹಾಕುವುದು ಇವೆಲ್ಲವೂ ಸಂದಿಗ್ಧವನ್ನು ಮ್ಯಾನೇಜ್ ಮಾಡುವ ಗೌಡರ ಕುಟುಂಬದ ವಿಧಾನಗಳಲ್ಲಿ ಒಂದು. ಆದರೆ, ಅಂತಿಮವಾಗಿ ಇಬ್ಬರೂ ಒಂದೇ ನಿಲುವಿಗೆ ಬಂದಿರುತ್ತಾರೆ. ಇದರಲ್ಲಿ ನಿಜಕ್ಕೂ ದೊಡ್ಡಗೌಡರು ಮತ್ತು ಎಚ್‌ಡಿಕೆ ನಡುವಿನ ಅಭಿಪ್ರಾಯಬೇಧವೂ ಕೆಲಸ ಮಾಡದಿರುವುದಿಲ್ಲ. ಆದರೆ ಅದನ್ನೇ ಭಿನ್ನಮತ ನಿಭಾಯಿಸುವ ಅಸ್ತ್ರವಾಗಿ ಬಳಸುವ ಚಾಕಚಕ್ಯತೆ ಅವರಿಗೆ ಸಿದ್ಧಿಸಿದೆ.

ಈಗಲೂ ಅದೇ ಆಗಿದೆ. ಎಚ್‌ಡಿಕೆ ಹೇಳಿದ್ದನ್ನೇ ಗೌಡರೂ ಹೇಳಿದ್ದಾರೆ. ಕಾರಣಗಳನ್ನು ಅವರ ರೀತಿಯಲ್ಲಿ ಅವರೂ, ಇವರ ರೀತಿಯಲ್ಲಿ ಇವರೂ ಹೇಳಿದ್ದಾರಷ್ಟೇ. ‘ಸಿದ್ದರಾಮಯ್ಯರಿಂದಲೇ ಮೈತ್ರಿ ಸರ್ಕಾರ ಬಿದ್ದಿತು ಎಂದು ನನಗೆ ಈಗ ಮನವರಿಕೆಯಾಗಿದೆ’ ಎಂದು ದೊಡ್ಡ ಗೌಡರು ಇಂದು ಹೇಳಿದ್ದಾರೆ. ಅಂದರೆ ಇಡೀ ಕಾಂಗ್ರೆಸ್ ಪಕ್ಷಕ್ಕಿಂತ ಸಿದ್ದರಾಮಯ್ಯರನ್ನು ಗುರಿ ಮಾಡುವುದು, ಬಿಜೆಪಿಯ ಜೊತೆಗೆ ಕೈ ಜೋಡಿಸುವುದು ಮತ್ತು ಆ ಮೂಲಕ ಅಹಿಂದ ವರ್ಸಸ್ ಮೇಲ್ಜಾತಿ ಧ್ರುವೀಕರಣಕ್ಕೆ ಬೇಕಾದ ಕಥನ ಸಿದ್ಧ ಮಾಡುತ್ತಾ ಹೋಗುವುದು ಇದರ ಹಿಂದಿನ ಲೆಕ್ಕಾಚಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಅನ್ನು ಕೈ ಹಿಡಿದಿದ್ದು ಇದೇ ಆಗಿತ್ತು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಇದಕ್ಕೆ ಒಂದಷ್ಟು ಧಕ್ಕೆ ಬಂದಿತ್ತು. ಈಗ ಮತ್ತೆ ಧ್ರುವೀಕರಣಕ್ಕೆ ಪ್ರಯತ್ನಿಸಿ ತಮ್ಮ ನೆಲೆ ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವುದನ್ನು ಗೌಡರು ಇಂದು ಲೆಕ್ಕಾಚಾರ ಹಾಕಿ ಆಡಿದ ಮಾತುಗಳಲ್ಲಿ ನೋಡಬಹುದು.

ಅತ್ತ ಶರದ್‌ಪವಾರ್ ಜೊತೆಗೂ ಆಪ್ತರಾಗಿರುವ ದೇವೇಗೌಡರು ಹರಿಯಾಣ ಹಾಗೂ ಮಹಾರಾಷ್ಟ್ರಗಳಲ್ಲಿ ಅತಂತ್ರ ಪರಿಸ್ಥಿತಿ ಉಂಟಾದ ನಂತರ ಬಿಜೆಪಿಯ ಜೊತೆಗೆ ಕೈ ಜೋಡಿಸಲಾರರು ಎಂಬ ಮಾತು ಜೆಡಿಎಸ್ ವಲಯಗಳಲ್ಲಿತ್ತು. ಆದರೆ ಕರ್ನಾಟಕದ ಮಟ್ಟಿಗೆ ಜೆಡಿಎಸ್ ಪರಿಸ್ಥಿತಿ ಕಷ್ಟವಿತ್ತು. ಈಗಲೇ ಚುನಾವಣೆ ನಡೆದರೆ ಬಹಳವೇ ಕಷ್ಟವಿದೆ ಎಂಬ ದೇವೇಗೌಡರ ಮಾತು ಸುಳ್ಳಲ್ಲ. ರಾಜ್ಯಗಳ ಮಟ್ಟಿಗೆ ಏನೇ ವ್ಯತ್ಯಾಸ ಉಂಟಾದರೂ, ಕೇಂದ್ರದಲ್ಲಿ ಮೋದಿ-ಶಾರನ್ನು ಅಲುಗಾಡಿಸುವ ಶಕ್ತಿ ಸದ್ಯಕ್ಕಂತೂ ಕಾಣುತ್ತಿಲ್ಲ. ಹೀಗಾಗಿ ಇಲ್ಲದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎನ್ನುವಷ್ಟು ದೂರಾಲೋಚನೆ ಪಳಗಿದ ರಾಜಕಾರಣಿಗಳಿಗೆ ಇರುವುದಿಲ್ಲವೇ?

ಹೀಗಾಗಿ ಈ ಸಾರಿ ಗೌಡರು ಯಾವ ಹಿಂಜರಿಕೆಯನ್ನೂ ತೋರಿಲ್ಲ. ಹಿಂದಿನ ಸಾರಿ ಜೆಡಿಎಸ್ ಬಿಜೆಪಿ ಮೈತ್ರಿಯಾದಾಗಲಾದರೂ ‘ಕೋಮುವಾದ, ಜಾತ್ಯಾತೀತತೆ’ ಇತ್ಯಾದಿ ಮಾತುಗಳು ಅವರ ಬಾಯಿಂದ ಬಂದಿದ್ದವು. ಆದರೆ ಈ ಸಾರಿ ಕೇವಲ ಸಿದ್ದರಾಮಯ್ಯರಿಗೆ ವಿರೋಧ ಮಾತ್ರವಲ್ಲದೇ ಯಡಿಯೂರಪ್ಪನವರ ಸರ್ಕಾರಕ್ಕೆ ಅಭಯವನ್ನೂ ನೀಡುವ ಸ್ಪಷ್ಟತೆಯನ್ನೂ ಅವರು ನೀಡಿಬಿಟ್ಟಿದ್ದಾರೆ. ಅದರ ಜೊತೆ ಜೊತೆಗೇ ಮುಂದಿನ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಅದು – ಪಕ್ಷವನ್ನು ಕಟ್ಟುವುದು. ಸೈದ್ಧಾಂತಿಕ ಅವಕಾಶವಾದಿತನದ ಬಗ್ಗೆ ಏನೇ ಟೀಕೆ ಇದ್ದರೂ ಮೆಚ್ಚಿಕೊಳ್ಳಬೇಕಾದ್ದು ಗೌಡರ ಈ ಗುಣವನ್ನು.

ಏನು ತಿಪ್ಪರಲಾಗ ಹಾಕಿದರೂ ಯಡಿಯೂರಪ್ಪನವರ ಸರ್ಕಾರವು ಪೂರ್ಣಾವಧಿ ಬಾಳಲಾರದು ಎಂಬುದು ಖಚಿತ. ಹಾಗಾಗಿ ಒಂದಷ್ಟು ಕಾಲ ಸರ್ಕಾರವನ್ನು ಉಳಿಸಿ, ಅಷ್ಟು ಅವಧಿಯನ್ನು ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಂಡರೆ ಒಳ್ಳೆಯದು ಎಂಬ ಮುಂದಾಲೋಚನೆ ಅವರದ್ದು. ಹೇಗೂ ಮುಂದೆಯೂ ಎರಡರಲ್ಲೊಂದು ಪಕ್ಷಕ್ಕೆ ತಮ್ಮ ಜೊತೆಗೆ ಮೈತ್ರಿ ಮಾಡಿಕೊಳ್ಳಲೇಬೇಕಾದಷ್ಟು ಅನಿವಾರ್ಯತೆಯಿರುವ ಅತಂತ್ರತೆ ಉಂಟಾಗುವಷ್ಟು ಪಕ್ಷ ಬೆಳೆಸುವುದಷ್ಟೇ ಸಾಧ್ಯ. ಆ ಮಧ್ಯೆ ಮಾಡಬೇಕಿರುವುದು ಸಿದ್ದರಾಮಯ್ಯರನ್ನು ಹಣಿಯುವುದಷ್ಟೇ.

ಬಹುಶಃ ಸಿದ್ದರಾಮಯ್ಯನವರ ಬೆಳವಣಿಗೆ ಇರುವುದೂ ಯಡಿಯೂರಪ್ಪ, ದೇವೇಗೌಡ ರಾಜಕಾರಣವನ್ನು ವಿರೋಧಿಸುವುದರಲ್ಲೇ ಇರಬಹುದು. ಹಾಗಾಗಿ ಕರ್ನಾಟಕದ ರಾಜಕಾರಣವು ಮತ್ತೆ 2018ರ ಹೊತ್ತಿಗೇ ಬಂದು ನಿಂತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...