Homeಮುಖಪುಟನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’...

ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಕೋಮು ರಾಜಕಾರಣದ ಆಯಾಮವನ್ನು ‘ದಿ ವೈರ್‌‌’ ವರದಿ ಬಯಲಿಗೆಳೆದಿದೆ. (ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.)

- Advertisement -
- Advertisement -

(ಇದು ‘ಎಲ್ಲರ ಕನ್ನಡ’ದ ಪ್ರಾಯೋಗಿಕ ವರದಿಯಾಗಿದೆ)

ದ್ವೇಶವನ್ನು ವ್ಯವಸ್ತಿತವಾಗಿ ಹರಡಲೆಂದೇ ಬಿಜೆಪಿ ತನ್ನದೇ ಆದ ಅಪ್ಲಿಕೇಶನ್‌ ಚಾಲ್ತಿಗೆ ತಂದಿರುವ ಆತಂಕಕಾರಿ ವಿಶಯವನ್ನು ದಿ ವೈರ್‌ ಸುದ್ದಿ ಜಾಲತಾಣ ಹೊರಗೆಳೆದಿದೆ. ಆಯುಶ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಮಾಡಿರುವ ವಿಶೇಶ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ತನ್ನ ರಾಜಕೀಯ ವಿರೋದಿಗಳ ವಿರುದ್ದ ದ್ವೇಶ ಹರಡಲು, ಅವರಿಗೆ ಕಿರುಕುಳ ನೀಡಲು ಈ ಅಪ್ಲಿಕೇಶನ್‌ಗಳು ಬಳಕೆಯಾಗುತ್ತಿವೆ ಎಂಬ ವಿಚಾರವನ್ನು ‘ದಿ ವೈರ್‌’ ವರದಿ ಬಯಲಿಗೆಳೆದಿದೆ.

ಆರತಿ ಶರ್‍ಮಾ ಎಂಬವರು 2020ರ ಏಪ್ರಿಲ್‌ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ವಿರುದ್ದ ಅಸಮಾದಾನ ಹೊರಹಾಕಿ ಸರಣಿ ಟ್ವೀಟ್ ಮಾಡಿದ್ದರು. ಅದರ ಜಾಡು ಹಿಡಿದು ಹೊರಟ ದಿ ವೈರ್‌‌, ಬಿಜೆಪಿ ಐಟಿ ಸೆಲ್‌ ಚಾಲ್ತಿಗೆ ತಂದಿದ್ದ ಟೆಕ್‌ ಪಾಗ್‌ (Tek Fog) ಎಂಬ ಅಪ್ಲಿಕೇಶನ್‌ ಮಾಡುತ್ತಿದ್ದ ಕಾರ್‍ಯವೈಕರಿಯನ್ನು ಹೊರಗೆಡವಿದೆ.

Tek Fog ಅಪ್ಲಿಕೇಶನ್ ಮೂಲಕ ಆಡಳಿತ ರೂಡ ಬಿಜೆಪಿಯ ವಿರೋದಿ ರಾಜಕೀಯ ಪಕ್ಷಗಳನ್ನು ಟೀಕಿಸಲು, ಸರ್ಕಾರವನ್ನು ವಿಮರ್‍ಶಿಸುವವರ ವಿರುದ್ದ ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಗ್ನಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರತಿ ಶರ್‍ಮಾ ಅವರ ಸರಣಿ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಕಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್‍ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋದಿಗಳನ್ನು ಗುರಿಮಾಡಿಸಲು ವಿಶಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಈ ಆಪ್ ಮೂಲಕ ನಿರ್‍ವಹಿಸಲಾಗುತ್ತಿತ್ತು ಎನ್ನಲಾಗಿದೆ.

“2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್‍ಕಾರಿ ಉದ್ಯೋಗ ನೀಡುವುದಾಗಿ ಆಮಿಶಗಳನ್ನು ನೀಡಲಾಗಿತ್ತು” ಎಂಬ ಆರೋಪವನ್ನೂ ಆ ಟ್ವಿಟ್ಟರ್ ಕಾತೆ ಮಾಡಿತ್ತು. ಹೀಗಾಗಿ ಅಸಮಾದಾನಗೊಂಡು ಕಾತೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿತ್ತು.

ಎರಡು ವರ್‍ಶಗಳ ಕಾಲ ತನಿಕೆ ನಡೆಸಿರುವ ದಿ ವೈರ್‌ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಈ ಆಪ್‌ ಒಂದು ಪಕ್ಶದಪರ ಹೇಗೆ ಕೆಲಸ ಮಾಡಿದೆ ಎನ್ಬುದನ್ನು ವೈರ್‌ ವಿಶ್ಲೇಶಿಸಿದೆ.

1. ಟ್ವಿಟ್ಟರ್‌‌ನ ‘ಟ್ರೆಂಡಿಂಗ್‌’ ಫೇಸ್‌ಬುಕ್‌ನ ಟ್ರೆಂಡ್‌ ವಿಬಾಗವನ್ನು ಹೈಜಾಕ್‌ ಮಾಡುವುದು:

ಇದರ ಅರ್ತವೇನು?

ಅಪ್ಲಿಕೇಶನ್ ಆಪರೇಟರ್‌ಗಳೇ ವ್ಯಕ್ತಿಗಳು ಅತವಾ ಗುಂಪುಗಳ ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ‘ತಂತಾನೇ- ರೀಟ್ವೀಟ್’ ಅಥವಾ ‘ತಂತಾನೇ- ಹಂಚಿಕೊಳ್ಳಬಹುದು. ಆಪರೇಟರ್‌ಗಳು ವಾಸ್ತವದಲ್ಲಿ ಇರುವುದಕ್ಕಿಂತ ಅತಿರೇಕದ ನಿರೂಪಣೆ ಹಾಗೂ ರಾಜಕೀಯ ಅಬಿಯಾನವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು.

ಸಮಸ್ಯೆಯೇನು?

ಯಾವುದು ನಿಯಂತ್ರಿಸಲ್ಪಡುತ್ತಿದೆ ಯಾವುದು ನಿಜವಾಗಿದೆ ಎಂಬುದನ್ನು ತಿಳಿಯದಂತಾಗುತ್ತೇವೆ. ಸದ್ಯದ ಟ್ರೆಂಡ್‌ಗಳನ್ನು ಬುಡಮೇಲು ಮಾಡಿ ಕೆಲವು ಗುಂಪುಗಳ, ಕೆಲವು ವ್ಯಕ್ತಿಗಳನ್ನು ಗುರಿಮಾಡಲಾಗುತ್ತದೆ. ಕಿರುಕುಳ ನೀಡಲಾಗುತ್ತದೆ.

ವೈರ್‌ಗೆ ಸಿಕ್ಕಿರುವ ಆಧಾರ

#CongressAgainstLabourers, #कर्मयोगी ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುವ ಮೊದಲು ಒದಗಿಸಲಾದ ಮೂಲಗಳು ಅನುಮಾನಾಸ್ಪದ, ಅನದಿಕೃತವಾಗಿದ್ದು ಆನ್‌ಲೈನ್‌ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

2. ನಿಶ್ಕ್ರಿಯ ವಾಟ್ಸ್‌ಆಪ್‌‌ ಖಾತೆಗಳ ಪಿಶಿಂಗ್‌ (ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಕ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುವ ಸಲುವಾಗಿ ಪ್ರತಿಶ್ಟಿತ ಕಂಪನಿಗಳಿಂದ ಇಮೇಲ್‌ಗಳನ್ನು ಕಳುಹಿಸುವ ಮೋಸದ ಅಬ್ಯಾಸ):

ಇದರ ಅರ್ತವೇನು?

ಆಪ್ ಆಪರೇಟರ್‌ಗಳು ಕಾಸಗಿ ವ್ಯಕ್ತಿಯ ‘ನಿಶ್ಕ್ರಿಯ’ ವಾಟ್ಸ್‌ಅಪ್‌‌ ಕಾತೆಗಳನ್ನು ಹೈಜಾಕ್ ಮಾಡಬಹುದು. ‘ಪದೇ ಪದೇ ಸಂಪರ್‍ಕಿಸುವ’ ಅತವಾ ‘ಎಲ್ಲಾ ಸಂಪರ್‍ಕಗಳಿಗೆ’ ಸಂದೇಶ ಕಳುಹಿಸಲು ಕಾಸಗಿ ವ್ಯಕ್ತಿಯ ಪೋನ್‌ ನಂಬರ್‌ಗಳನ್ನು ಬಳಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಸಂಪರ್‍ಕ ಪಟ್ಟಿಯನ್ನು ಟೆಕ್ ಪಾಗ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ನಡೆಸಬಹುದಾದ ಕಿರುಕುಳ ಮತ್ತು ಟ್ರೋಲಿಂಗ್ ಅಬಿಯಾನಗಳಿಗೆ ಬಳಸಲಾಗುತ್ತದೆ.

ನಾನೇಕೆ ಚಿಂತೆಪಡಬೇಕು?

ಇದು ನಿಮ್ಮ ಕಾಸಗಿತನದ ಹಕ್ಕನ್ನು ಉಲ್ಲಂಗಿಸಿದೆ.

ವೈರ್‌ಗೆ ಲಭ್ಯವಾದ ಆಧಾರ

ವಾಟ್ಸ್‌ಅಪ್‌ನ ಶೋಶಣೆಯ ರಿಯಲ್‌ ಟೈಮ್‌ ತೋರಿಸಲು ಮೂಲವನ್ನು ಕೇಳಲಾಯಿತು. ಪ್ರಾತಿಕ್ಷಿಕೆಯ ಮೂಲಕ ಹೈಜಾಕ್‌ ಮಾಡುವ ರೀತಿಯನ್ನು ದೃಡಪಡಿಸಿಕೊಳ್ಳಲಾಗಿದೆ.

3. ಉದ್ದೇಶಿತ ಕಿರುಕುಳಕ್ಕಾಗಿ ಕಾಸಗಿ ನಾಗರಿಕರ ಡೇಟಾಬೇಸ್ ಬಳಸುವುದು

ಇದರ ಅರ್ತವೇನು?

ಕಾಸಗಿ ನಾಗರಿಕರ ಉದ್ಯೋಗ, ದರ್ಮ, ಬಾಷೆ, ವಯಸ್ಸು, ಲಿಂಗ, ರಾಜಕೀಯ ಒಲವು ಅಷ್ಟೇ ಅಲ್ಲದೆ ಚರ್ಮದ ಬಣ್ಣ, ಸ್ತನದ ಗಾತ್ರದಂತಹ ದೈಹಿಕ ಗುಣಲಕ್ಷಣಗಳಿಗೆ ಅನುಗುಣವಾಗಿಯೂ ಡೇಟ್‌‌ಬೇಸ್‌ ಅನ್ನು ವರ್ಗೀಕರಿಸಲಾಗಿದೆ.

ನಾನೇಕೆ ಚಿಂತಿಸಬೇಕು?

ವಿಶುವಲ್‌ ಪುರಾವೆ

ವೈರ್‌ ಹೇಗೆ ಕಚಿತಪಡಿಸಿಕೊಂಡಿದೆ?

ಅಪ್ಲಿಕೇಶನ್‌ನಲ್ಲಿ ತೋರಿಸಲಾದ ಉದ್ದೇಶಿತ ಗುಂಪುಗಳಲ್ಲಿ ಒಂದಾದ ‘ಮಹಿಳಾ ಪತ್ರಕರ್‍ತರಿಗೆ’ ಕಳುಹಿಸಲಾದ ಪ್ರತ್ಯುತ್ತರಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಈ ರೀತಿಯಾಗಿ ಈ ವರದಿ ಪ್ರಕಟಗೊಂಡ ನಂತರ ದೊಡ್ಡ ಚರ್ಚೆಗಳು ಆರಂಬವಾಗಿವೆ. ಬಿಜೆಪಿಯು ಚುನಾವಣೆಯ ಹೊಸ್ತಿಲಲ್ಲಿ ಎಂತಹ ಹೀನಕೃತ್ಯಕ್ಕಿಳಿದಿದೆ ಎಂದು ಹಲವರು ವಿರೋದ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಛತ್ತೀಸ್‌ಗಡ: ಗ್ರಾಮಸ್ಥರಿಂದ ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು; ತನಿಖೆಗೆ ಪೊಲೀಸ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ‘ಎಲ್ಲರ ಎಂದರೆ ಮಹಾಪ್ರಾಣ ಅಕ್ಕರಗಳನ್ನು ಬಳಸದಿರುವುದೊಂದೇ ಅಲ್ಲ.
    ಆದಶ್ಟು ಕನ್ನಡ ಬೇರಿನ ಪದಗಳನ್ನು ಬಳಸುವುದು.
    ಮೇಲುನೋಟಕ್ಕೆ “ವಿಜಾತಿಯ” ಒತ್ತಕ್ಶರ” ಗಳಿಲ್ಲದ ಪದಗಳು.
    ಎತ್ತಗೆ:
    ದ್ವೇಶ…ಹಗೆತನ

    ಪ್ರತ್ಯುತ್ತರ..ಮರುಹೇಳಿಕೆ/ ಮರುಉತ್ತರ
    ಹೀನಕೃತ್ಯ..ಕೇಡುಕಿನ ಕೆಲಸ
    ….

  2. ಎಲ್ಲರ ಕನ್ನಡ ಎಂದರೆ, ಕೇವಲ ಮಹಾಪ್ರಾಣ ಗಳನ್ನು ಕಯ್ಬಿಡುವುದಲ್ಲ.
    ಹೆಚ್ಚು ಕನ್ನಡ ಬೇರಿನ ಪದಗಳ ಬಳಕೆ.
    ಎತ್ತುಗೆ,
    ಹೀನಕೃತ್ಯ..ಕೆಡುಕಿನ ಕೆಲಸ.
    ಕನ್ನಡಪದಗಳಲ್ಲಿ ವಿಜಾತಿಯ ಒತ್ತಕ಼್ಶರ ಇರುವುದಿಲ್ಲ.

  3. ದನ್ಯವಾದಗಳು
    “ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು”….ಇಲ್ಲಿ ಒಂದೇ ಒಂದು ಮಹಾಪ್ರಾಣ ನುಸುಳಿದೆ. ದಯವಿಟ್ಟು ತಿದ್ದಿ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...