Homeಮುಖಪುಟನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’...

ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಕೋಮು ರಾಜಕಾರಣದ ಆಯಾಮವನ್ನು ‘ದಿ ವೈರ್‌‌’ ವರದಿ ಬಯಲಿಗೆಳೆದಿದೆ. (ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.)

- Advertisement -
- Advertisement -

(ಇದು ‘ಎಲ್ಲರ ಕನ್ನಡ’ದ ಪ್ರಾಯೋಗಿಕ ವರದಿಯಾಗಿದೆ)

ದ್ವೇಶವನ್ನು ವ್ಯವಸ್ತಿತವಾಗಿ ಹರಡಲೆಂದೇ ಬಿಜೆಪಿ ತನ್ನದೇ ಆದ ಅಪ್ಲಿಕೇಶನ್‌ ಚಾಲ್ತಿಗೆ ತಂದಿರುವ ಆತಂಕಕಾರಿ ವಿಶಯವನ್ನು ದಿ ವೈರ್‌ ಸುದ್ದಿ ಜಾಲತಾಣ ಹೊರಗೆಳೆದಿದೆ. ಆಯುಶ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಮಾಡಿರುವ ವಿಶೇಶ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ತನ್ನ ರಾಜಕೀಯ ವಿರೋದಿಗಳ ವಿರುದ್ದ ದ್ವೇಶ ಹರಡಲು, ಅವರಿಗೆ ಕಿರುಕುಳ ನೀಡಲು ಈ ಅಪ್ಲಿಕೇಶನ್‌ಗಳು ಬಳಕೆಯಾಗುತ್ತಿವೆ ಎಂಬ ವಿಚಾರವನ್ನು ‘ದಿ ವೈರ್‌’ ವರದಿ ಬಯಲಿಗೆಳೆದಿದೆ.

ಆರತಿ ಶರ್‍ಮಾ ಎಂಬವರು 2020ರ ಏಪ್ರಿಲ್‌ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ವಿರುದ್ದ ಅಸಮಾದಾನ ಹೊರಹಾಕಿ ಸರಣಿ ಟ್ವೀಟ್ ಮಾಡಿದ್ದರು. ಅದರ ಜಾಡು ಹಿಡಿದು ಹೊರಟ ದಿ ವೈರ್‌‌, ಬಿಜೆಪಿ ಐಟಿ ಸೆಲ್‌ ಚಾಲ್ತಿಗೆ ತಂದಿದ್ದ ಟೆಕ್‌ ಪಾಗ್‌ (Tek Fog) ಎಂಬ ಅಪ್ಲಿಕೇಶನ್‌ ಮಾಡುತ್ತಿದ್ದ ಕಾರ್‍ಯವೈಕರಿಯನ್ನು ಹೊರಗೆಡವಿದೆ.

Tek Fog ಅಪ್ಲಿಕೇಶನ್ ಮೂಲಕ ಆಡಳಿತ ರೂಡ ಬಿಜೆಪಿಯ ವಿರೋದಿ ರಾಜಕೀಯ ಪಕ್ಷಗಳನ್ನು ಟೀಕಿಸಲು, ಸರ್ಕಾರವನ್ನು ವಿಮರ್‍ಶಿಸುವವರ ವಿರುದ್ದ ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಗ್ನಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರತಿ ಶರ್‍ಮಾ ಅವರ ಸರಣಿ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಕಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್‍ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋದಿಗಳನ್ನು ಗುರಿಮಾಡಿಸಲು ವಿಶಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಈ ಆಪ್ ಮೂಲಕ ನಿರ್‍ವಹಿಸಲಾಗುತ್ತಿತ್ತು ಎನ್ನಲಾಗಿದೆ.

“2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್‍ಕಾರಿ ಉದ್ಯೋಗ ನೀಡುವುದಾಗಿ ಆಮಿಶಗಳನ್ನು ನೀಡಲಾಗಿತ್ತು” ಎಂಬ ಆರೋಪವನ್ನೂ ಆ ಟ್ವಿಟ್ಟರ್ ಕಾತೆ ಮಾಡಿತ್ತು. ಹೀಗಾಗಿ ಅಸಮಾದಾನಗೊಂಡು ಕಾತೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿತ್ತು.

ಎರಡು ವರ್‍ಶಗಳ ಕಾಲ ತನಿಕೆ ನಡೆಸಿರುವ ದಿ ವೈರ್‌ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಈ ಆಪ್‌ ಒಂದು ಪಕ್ಶದಪರ ಹೇಗೆ ಕೆಲಸ ಮಾಡಿದೆ ಎನ್ಬುದನ್ನು ವೈರ್‌ ವಿಶ್ಲೇಶಿಸಿದೆ.

1. ಟ್ವಿಟ್ಟರ್‌‌ನ ‘ಟ್ರೆಂಡಿಂಗ್‌’ ಫೇಸ್‌ಬುಕ್‌ನ ಟ್ರೆಂಡ್‌ ವಿಬಾಗವನ್ನು ಹೈಜಾಕ್‌ ಮಾಡುವುದು:

ಇದರ ಅರ್ತವೇನು?

ಅಪ್ಲಿಕೇಶನ್ ಆಪರೇಟರ್‌ಗಳೇ ವ್ಯಕ್ತಿಗಳು ಅತವಾ ಗುಂಪುಗಳ ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ‘ತಂತಾನೇ- ರೀಟ್ವೀಟ್’ ಅಥವಾ ‘ತಂತಾನೇ- ಹಂಚಿಕೊಳ್ಳಬಹುದು. ಆಪರೇಟರ್‌ಗಳು ವಾಸ್ತವದಲ್ಲಿ ಇರುವುದಕ್ಕಿಂತ ಅತಿರೇಕದ ನಿರೂಪಣೆ ಹಾಗೂ ರಾಜಕೀಯ ಅಬಿಯಾನವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು.

ಸಮಸ್ಯೆಯೇನು?

ಯಾವುದು ನಿಯಂತ್ರಿಸಲ್ಪಡುತ್ತಿದೆ ಯಾವುದು ನಿಜವಾಗಿದೆ ಎಂಬುದನ್ನು ತಿಳಿಯದಂತಾಗುತ್ತೇವೆ. ಸದ್ಯದ ಟ್ರೆಂಡ್‌ಗಳನ್ನು ಬುಡಮೇಲು ಮಾಡಿ ಕೆಲವು ಗುಂಪುಗಳ, ಕೆಲವು ವ್ಯಕ್ತಿಗಳನ್ನು ಗುರಿಮಾಡಲಾಗುತ್ತದೆ. ಕಿರುಕುಳ ನೀಡಲಾಗುತ್ತದೆ.

ವೈರ್‌ಗೆ ಸಿಕ್ಕಿರುವ ಆಧಾರ

#CongressAgainstLabourers, #कर्मयोगी ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುವ ಮೊದಲು ಒದಗಿಸಲಾದ ಮೂಲಗಳು ಅನುಮಾನಾಸ್ಪದ, ಅನದಿಕೃತವಾಗಿದ್ದು ಆನ್‌ಲೈನ್‌ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

2. ನಿಶ್ಕ್ರಿಯ ವಾಟ್ಸ್‌ಆಪ್‌‌ ಖಾತೆಗಳ ಪಿಶಿಂಗ್‌ (ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಕ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುವ ಸಲುವಾಗಿ ಪ್ರತಿಶ್ಟಿತ ಕಂಪನಿಗಳಿಂದ ಇಮೇಲ್‌ಗಳನ್ನು ಕಳುಹಿಸುವ ಮೋಸದ ಅಬ್ಯಾಸ):

ಇದರ ಅರ್ತವೇನು?

ಆಪ್ ಆಪರೇಟರ್‌ಗಳು ಕಾಸಗಿ ವ್ಯಕ್ತಿಯ ‘ನಿಶ್ಕ್ರಿಯ’ ವಾಟ್ಸ್‌ಅಪ್‌‌ ಕಾತೆಗಳನ್ನು ಹೈಜಾಕ್ ಮಾಡಬಹುದು. ‘ಪದೇ ಪದೇ ಸಂಪರ್‍ಕಿಸುವ’ ಅತವಾ ‘ಎಲ್ಲಾ ಸಂಪರ್‍ಕಗಳಿಗೆ’ ಸಂದೇಶ ಕಳುಹಿಸಲು ಕಾಸಗಿ ವ್ಯಕ್ತಿಯ ಪೋನ್‌ ನಂಬರ್‌ಗಳನ್ನು ಬಳಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಸಂಪರ್‍ಕ ಪಟ್ಟಿಯನ್ನು ಟೆಕ್ ಪಾಗ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ನಡೆಸಬಹುದಾದ ಕಿರುಕುಳ ಮತ್ತು ಟ್ರೋಲಿಂಗ್ ಅಬಿಯಾನಗಳಿಗೆ ಬಳಸಲಾಗುತ್ತದೆ.

ನಾನೇಕೆ ಚಿಂತೆಪಡಬೇಕು?

ಇದು ನಿಮ್ಮ ಕಾಸಗಿತನದ ಹಕ್ಕನ್ನು ಉಲ್ಲಂಗಿಸಿದೆ.

ವೈರ್‌ಗೆ ಲಭ್ಯವಾದ ಆಧಾರ

ವಾಟ್ಸ್‌ಅಪ್‌ನ ಶೋಶಣೆಯ ರಿಯಲ್‌ ಟೈಮ್‌ ತೋರಿಸಲು ಮೂಲವನ್ನು ಕೇಳಲಾಯಿತು. ಪ್ರಾತಿಕ್ಷಿಕೆಯ ಮೂಲಕ ಹೈಜಾಕ್‌ ಮಾಡುವ ರೀತಿಯನ್ನು ದೃಡಪಡಿಸಿಕೊಳ್ಳಲಾಗಿದೆ.

3. ಉದ್ದೇಶಿತ ಕಿರುಕುಳಕ್ಕಾಗಿ ಕಾಸಗಿ ನಾಗರಿಕರ ಡೇಟಾಬೇಸ್ ಬಳಸುವುದು

ಇದರ ಅರ್ತವೇನು?

ಕಾಸಗಿ ನಾಗರಿಕರ ಉದ್ಯೋಗ, ದರ್ಮ, ಬಾಷೆ, ವಯಸ್ಸು, ಲಿಂಗ, ರಾಜಕೀಯ ಒಲವು ಅಷ್ಟೇ ಅಲ್ಲದೆ ಚರ್ಮದ ಬಣ್ಣ, ಸ್ತನದ ಗಾತ್ರದಂತಹ ದೈಹಿಕ ಗುಣಲಕ್ಷಣಗಳಿಗೆ ಅನುಗುಣವಾಗಿಯೂ ಡೇಟ್‌‌ಬೇಸ್‌ ಅನ್ನು ವರ್ಗೀಕರಿಸಲಾಗಿದೆ.

ನಾನೇಕೆ ಚಿಂತಿಸಬೇಕು?

ವಿಶುವಲ್‌ ಪುರಾವೆ

ವೈರ್‌ ಹೇಗೆ ಕಚಿತಪಡಿಸಿಕೊಂಡಿದೆ?

ಅಪ್ಲಿಕೇಶನ್‌ನಲ್ಲಿ ತೋರಿಸಲಾದ ಉದ್ದೇಶಿತ ಗುಂಪುಗಳಲ್ಲಿ ಒಂದಾದ ‘ಮಹಿಳಾ ಪತ್ರಕರ್‍ತರಿಗೆ’ ಕಳುಹಿಸಲಾದ ಪ್ರತ್ಯುತ್ತರಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಈ ರೀತಿಯಾಗಿ ಈ ವರದಿ ಪ್ರಕಟಗೊಂಡ ನಂತರ ದೊಡ್ಡ ಚರ್ಚೆಗಳು ಆರಂಬವಾಗಿವೆ. ಬಿಜೆಪಿಯು ಚುನಾವಣೆಯ ಹೊಸ್ತಿಲಲ್ಲಿ ಎಂತಹ ಹೀನಕೃತ್ಯಕ್ಕಿಳಿದಿದೆ ಎಂದು ಹಲವರು ವಿರೋದ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಛತ್ತೀಸ್‌ಗಡ: ಗ್ರಾಮಸ್ಥರಿಂದ ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು; ತನಿಖೆಗೆ ಪೊಲೀಸ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ‘ಎಲ್ಲರ ಎಂದರೆ ಮಹಾಪ್ರಾಣ ಅಕ್ಕರಗಳನ್ನು ಬಳಸದಿರುವುದೊಂದೇ ಅಲ್ಲ.
    ಆದಶ್ಟು ಕನ್ನಡ ಬೇರಿನ ಪದಗಳನ್ನು ಬಳಸುವುದು.
    ಮೇಲುನೋಟಕ್ಕೆ “ವಿಜಾತಿಯ” ಒತ್ತಕ್ಶರ” ಗಳಿಲ್ಲದ ಪದಗಳು.
    ಎತ್ತಗೆ:
    ದ್ವೇಶ…ಹಗೆತನ

    ಪ್ರತ್ಯುತ್ತರ..ಮರುಹೇಳಿಕೆ/ ಮರುಉತ್ತರ
    ಹೀನಕೃತ್ಯ..ಕೇಡುಕಿನ ಕೆಲಸ
    ….

  2. ಎಲ್ಲರ ಕನ್ನಡ ಎಂದರೆ, ಕೇವಲ ಮಹಾಪ್ರಾಣ ಗಳನ್ನು ಕಯ್ಬಿಡುವುದಲ್ಲ.
    ಹೆಚ್ಚು ಕನ್ನಡ ಬೇರಿನ ಪದಗಳ ಬಳಕೆ.
    ಎತ್ತುಗೆ,
    ಹೀನಕೃತ್ಯ..ಕೆಡುಕಿನ ಕೆಲಸ.
    ಕನ್ನಡಪದಗಳಲ್ಲಿ ವಿಜಾತಿಯ ಒತ್ತಕ಼್ಶರ ಇರುವುದಿಲ್ಲ.

  3. ದನ್ಯವಾದಗಳು
    “ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು”….ಇಲ್ಲಿ ಒಂದೇ ಒಂದು ಮಹಾಪ್ರಾಣ ನುಸುಳಿದೆ. ದಯವಿಟ್ಟು ತಿದ್ದಿ.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...