Homeಮುಖಪುಟನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’...

ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಕೋಮು ರಾಜಕಾರಣದ ಆಯಾಮವನ್ನು ‘ದಿ ವೈರ್‌‌’ ವರದಿ ಬಯಲಿಗೆಳೆದಿದೆ. (ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.)

- Advertisement -
- Advertisement -

(ಇದು ‘ಎಲ್ಲರ ಕನ್ನಡ’ದ ಪ್ರಾಯೋಗಿಕ ವರದಿಯಾಗಿದೆ)

ದ್ವೇಶವನ್ನು ವ್ಯವಸ್ತಿತವಾಗಿ ಹರಡಲೆಂದೇ ಬಿಜೆಪಿ ತನ್ನದೇ ಆದ ಅಪ್ಲಿಕೇಶನ್‌ ಚಾಲ್ತಿಗೆ ತಂದಿರುವ ಆತಂಕಕಾರಿ ವಿಶಯವನ್ನು ದಿ ವೈರ್‌ ಸುದ್ದಿ ಜಾಲತಾಣ ಹೊರಗೆಳೆದಿದೆ. ಆಯುಶ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಮಾಡಿರುವ ವಿಶೇಶ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ತನ್ನ ರಾಜಕೀಯ ವಿರೋದಿಗಳ ವಿರುದ್ದ ದ್ವೇಶ ಹರಡಲು, ಅವರಿಗೆ ಕಿರುಕುಳ ನೀಡಲು ಈ ಅಪ್ಲಿಕೇಶನ್‌ಗಳು ಬಳಕೆಯಾಗುತ್ತಿವೆ ಎಂಬ ವಿಚಾರವನ್ನು ‘ದಿ ವೈರ್‌’ ವರದಿ ಬಯಲಿಗೆಳೆದಿದೆ.

ಆರತಿ ಶರ್‍ಮಾ ಎಂಬವರು 2020ರ ಏಪ್ರಿಲ್‌ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ವಿರುದ್ದ ಅಸಮಾದಾನ ಹೊರಹಾಕಿ ಸರಣಿ ಟ್ವೀಟ್ ಮಾಡಿದ್ದರು. ಅದರ ಜಾಡು ಹಿಡಿದು ಹೊರಟ ದಿ ವೈರ್‌‌, ಬಿಜೆಪಿ ಐಟಿ ಸೆಲ್‌ ಚಾಲ್ತಿಗೆ ತಂದಿದ್ದ ಟೆಕ್‌ ಪಾಗ್‌ (Tek Fog) ಎಂಬ ಅಪ್ಲಿಕೇಶನ್‌ ಮಾಡುತ್ತಿದ್ದ ಕಾರ್‍ಯವೈಕರಿಯನ್ನು ಹೊರಗೆಡವಿದೆ.

Tek Fog ಅಪ್ಲಿಕೇಶನ್ ಮೂಲಕ ಆಡಳಿತ ರೂಡ ಬಿಜೆಪಿಯ ವಿರೋದಿ ರಾಜಕೀಯ ಪಕ್ಷಗಳನ್ನು ಟೀಕಿಸಲು, ಸರ್ಕಾರವನ್ನು ವಿಮರ್‍ಶಿಸುವವರ ವಿರುದ್ದ ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಗ್ನಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರತಿ ಶರ್‍ಮಾ ಅವರ ಸರಣಿ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಕಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್‍ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋದಿಗಳನ್ನು ಗುರಿಮಾಡಿಸಲು ವಿಶಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಈ ಆಪ್ ಮೂಲಕ ನಿರ್‍ವಹಿಸಲಾಗುತ್ತಿತ್ತು ಎನ್ನಲಾಗಿದೆ.

“2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್‍ಕಾರಿ ಉದ್ಯೋಗ ನೀಡುವುದಾಗಿ ಆಮಿಶಗಳನ್ನು ನೀಡಲಾಗಿತ್ತು” ಎಂಬ ಆರೋಪವನ್ನೂ ಆ ಟ್ವಿಟ್ಟರ್ ಕಾತೆ ಮಾಡಿತ್ತು. ಹೀಗಾಗಿ ಅಸಮಾದಾನಗೊಂಡು ಕಾತೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿತ್ತು.

ಎರಡು ವರ್‍ಶಗಳ ಕಾಲ ತನಿಕೆ ನಡೆಸಿರುವ ದಿ ವೈರ್‌ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಈ ಆಪ್‌ ಒಂದು ಪಕ್ಶದಪರ ಹೇಗೆ ಕೆಲಸ ಮಾಡಿದೆ ಎನ್ಬುದನ್ನು ವೈರ್‌ ವಿಶ್ಲೇಶಿಸಿದೆ.

1. ಟ್ವಿಟ್ಟರ್‌‌ನ ‘ಟ್ರೆಂಡಿಂಗ್‌’ ಫೇಸ್‌ಬುಕ್‌ನ ಟ್ರೆಂಡ್‌ ವಿಬಾಗವನ್ನು ಹೈಜಾಕ್‌ ಮಾಡುವುದು:

ಇದರ ಅರ್ತವೇನು?

ಅಪ್ಲಿಕೇಶನ್ ಆಪರೇಟರ್‌ಗಳೇ ವ್ಯಕ್ತಿಗಳು ಅತವಾ ಗುಂಪುಗಳ ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ‘ತಂತಾನೇ- ರೀಟ್ವೀಟ್’ ಅಥವಾ ‘ತಂತಾನೇ- ಹಂಚಿಕೊಳ್ಳಬಹುದು. ಆಪರೇಟರ್‌ಗಳು ವಾಸ್ತವದಲ್ಲಿ ಇರುವುದಕ್ಕಿಂತ ಅತಿರೇಕದ ನಿರೂಪಣೆ ಹಾಗೂ ರಾಜಕೀಯ ಅಬಿಯಾನವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು.

ಸಮಸ್ಯೆಯೇನು?

ಯಾವುದು ನಿಯಂತ್ರಿಸಲ್ಪಡುತ್ತಿದೆ ಯಾವುದು ನಿಜವಾಗಿದೆ ಎಂಬುದನ್ನು ತಿಳಿಯದಂತಾಗುತ್ತೇವೆ. ಸದ್ಯದ ಟ್ರೆಂಡ್‌ಗಳನ್ನು ಬುಡಮೇಲು ಮಾಡಿ ಕೆಲವು ಗುಂಪುಗಳ, ಕೆಲವು ವ್ಯಕ್ತಿಗಳನ್ನು ಗುರಿಮಾಡಲಾಗುತ್ತದೆ. ಕಿರುಕುಳ ನೀಡಲಾಗುತ್ತದೆ.

ವೈರ್‌ಗೆ ಸಿಕ್ಕಿರುವ ಆಧಾರ

#CongressAgainstLabourers, #कर्मयोगी ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುವ ಮೊದಲು ಒದಗಿಸಲಾದ ಮೂಲಗಳು ಅನುಮಾನಾಸ್ಪದ, ಅನದಿಕೃತವಾಗಿದ್ದು ಆನ್‌ಲೈನ್‌ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

2. ನಿಶ್ಕ್ರಿಯ ವಾಟ್ಸ್‌ಆಪ್‌‌ ಖಾತೆಗಳ ಪಿಶಿಂಗ್‌ (ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಕ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುವ ಸಲುವಾಗಿ ಪ್ರತಿಶ್ಟಿತ ಕಂಪನಿಗಳಿಂದ ಇಮೇಲ್‌ಗಳನ್ನು ಕಳುಹಿಸುವ ಮೋಸದ ಅಬ್ಯಾಸ):

ಇದರ ಅರ್ತವೇನು?

ಆಪ್ ಆಪರೇಟರ್‌ಗಳು ಕಾಸಗಿ ವ್ಯಕ್ತಿಯ ‘ನಿಶ್ಕ್ರಿಯ’ ವಾಟ್ಸ್‌ಅಪ್‌‌ ಕಾತೆಗಳನ್ನು ಹೈಜಾಕ್ ಮಾಡಬಹುದು. ‘ಪದೇ ಪದೇ ಸಂಪರ್‍ಕಿಸುವ’ ಅತವಾ ‘ಎಲ್ಲಾ ಸಂಪರ್‍ಕಗಳಿಗೆ’ ಸಂದೇಶ ಕಳುಹಿಸಲು ಕಾಸಗಿ ವ್ಯಕ್ತಿಯ ಪೋನ್‌ ನಂಬರ್‌ಗಳನ್ನು ಬಳಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಸಂಪರ್‍ಕ ಪಟ್ಟಿಯನ್ನು ಟೆಕ್ ಪಾಗ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ನಡೆಸಬಹುದಾದ ಕಿರುಕುಳ ಮತ್ತು ಟ್ರೋಲಿಂಗ್ ಅಬಿಯಾನಗಳಿಗೆ ಬಳಸಲಾಗುತ್ತದೆ.

ನಾನೇಕೆ ಚಿಂತೆಪಡಬೇಕು?

ಇದು ನಿಮ್ಮ ಕಾಸಗಿತನದ ಹಕ್ಕನ್ನು ಉಲ್ಲಂಗಿಸಿದೆ.

ವೈರ್‌ಗೆ ಲಭ್ಯವಾದ ಆಧಾರ

ವಾಟ್ಸ್‌ಅಪ್‌ನ ಶೋಶಣೆಯ ರಿಯಲ್‌ ಟೈಮ್‌ ತೋರಿಸಲು ಮೂಲವನ್ನು ಕೇಳಲಾಯಿತು. ಪ್ರಾತಿಕ್ಷಿಕೆಯ ಮೂಲಕ ಹೈಜಾಕ್‌ ಮಾಡುವ ರೀತಿಯನ್ನು ದೃಡಪಡಿಸಿಕೊಳ್ಳಲಾಗಿದೆ.

3. ಉದ್ದೇಶಿತ ಕಿರುಕುಳಕ್ಕಾಗಿ ಕಾಸಗಿ ನಾಗರಿಕರ ಡೇಟಾಬೇಸ್ ಬಳಸುವುದು

ಇದರ ಅರ್ತವೇನು?

ಕಾಸಗಿ ನಾಗರಿಕರ ಉದ್ಯೋಗ, ದರ್ಮ, ಬಾಷೆ, ವಯಸ್ಸು, ಲಿಂಗ, ರಾಜಕೀಯ ಒಲವು ಅಷ್ಟೇ ಅಲ್ಲದೆ ಚರ್ಮದ ಬಣ್ಣ, ಸ್ತನದ ಗಾತ್ರದಂತಹ ದೈಹಿಕ ಗುಣಲಕ್ಷಣಗಳಿಗೆ ಅನುಗುಣವಾಗಿಯೂ ಡೇಟ್‌‌ಬೇಸ್‌ ಅನ್ನು ವರ್ಗೀಕರಿಸಲಾಗಿದೆ.

ನಾನೇಕೆ ಚಿಂತಿಸಬೇಕು?

ವಿಶುವಲ್‌ ಪುರಾವೆ

ವೈರ್‌ ಹೇಗೆ ಕಚಿತಪಡಿಸಿಕೊಂಡಿದೆ?

ಅಪ್ಲಿಕೇಶನ್‌ನಲ್ಲಿ ತೋರಿಸಲಾದ ಉದ್ದೇಶಿತ ಗುಂಪುಗಳಲ್ಲಿ ಒಂದಾದ ‘ಮಹಿಳಾ ಪತ್ರಕರ್‍ತರಿಗೆ’ ಕಳುಹಿಸಲಾದ ಪ್ರತ್ಯುತ್ತರಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಈ ರೀತಿಯಾಗಿ ಈ ವರದಿ ಪ್ರಕಟಗೊಂಡ ನಂತರ ದೊಡ್ಡ ಚರ್ಚೆಗಳು ಆರಂಬವಾಗಿವೆ. ಬಿಜೆಪಿಯು ಚುನಾವಣೆಯ ಹೊಸ್ತಿಲಲ್ಲಿ ಎಂತಹ ಹೀನಕೃತ್ಯಕ್ಕಿಳಿದಿದೆ ಎಂದು ಹಲವರು ವಿರೋದ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಛತ್ತೀಸ್‌ಗಡ: ಗ್ರಾಮಸ್ಥರಿಂದ ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು; ತನಿಖೆಗೆ ಪೊಲೀಸ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ‘ಎಲ್ಲರ ಎಂದರೆ ಮಹಾಪ್ರಾಣ ಅಕ್ಕರಗಳನ್ನು ಬಳಸದಿರುವುದೊಂದೇ ಅಲ್ಲ.
    ಆದಶ್ಟು ಕನ್ನಡ ಬೇರಿನ ಪದಗಳನ್ನು ಬಳಸುವುದು.
    ಮೇಲುನೋಟಕ್ಕೆ “ವಿಜಾತಿಯ” ಒತ್ತಕ್ಶರ” ಗಳಿಲ್ಲದ ಪದಗಳು.
    ಎತ್ತಗೆ:
    ದ್ವೇಶ…ಹಗೆತನ

    ಪ್ರತ್ಯುತ್ತರ..ಮರುಹೇಳಿಕೆ/ ಮರುಉತ್ತರ
    ಹೀನಕೃತ್ಯ..ಕೇಡುಕಿನ ಕೆಲಸ
    ….

  2. ಎಲ್ಲರ ಕನ್ನಡ ಎಂದರೆ, ಕೇವಲ ಮಹಾಪ್ರಾಣ ಗಳನ್ನು ಕಯ್ಬಿಡುವುದಲ್ಲ.
    ಹೆಚ್ಚು ಕನ್ನಡ ಬೇರಿನ ಪದಗಳ ಬಳಕೆ.
    ಎತ್ತುಗೆ,
    ಹೀನಕೃತ್ಯ..ಕೆಡುಕಿನ ಕೆಲಸ.
    ಕನ್ನಡಪದಗಳಲ್ಲಿ ವಿಜಾತಿಯ ಒತ್ತಕ಼್ಶರ ಇರುವುದಿಲ್ಲ.

  3. ದನ್ಯವಾದಗಳು
    “ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು”….ಇಲ್ಲಿ ಒಂದೇ ಒಂದು ಮಹಾಪ್ರಾಣ ನುಸುಳಿದೆ. ದಯವಿಟ್ಟು ತಿದ್ದಿ.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...