Homeಮುಖಪುಟನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’...

ನಕಲಿ ಅಬಿಯಾನ, ದ್ವೇಶ ರಾಜಕಾರಣಕ್ಕೆ ಬಿಜೆಪಿ ಬಳಸಿದ ಅಪ್ಲಿಕೇಶನ್‌ ಹೆಸರು ‘Tek Fog’: ‘ದಿ ವೈರ್‌’ ಸ್ಪೋಟಕ ವರದಿ

ಕೋಮು ರಾಜಕಾರಣದ ಆಯಾಮವನ್ನು ‘ದಿ ವೈರ್‌‌’ ವರದಿ ಬಯಲಿಗೆಳೆದಿದೆ. (ಈ ವರದಿಯಲ್ಲಿ ಮಹಾಪ್ರಾಣ ಬಳಕೆ ಕಡಿತಗೊಳಿಸಲಾಗಿದೆ.)

- Advertisement -
- Advertisement -

(ಇದು ‘ಎಲ್ಲರ ಕನ್ನಡ’ದ ಪ್ರಾಯೋಗಿಕ ವರದಿಯಾಗಿದೆ)

ದ್ವೇಶವನ್ನು ವ್ಯವಸ್ತಿತವಾಗಿ ಹರಡಲೆಂದೇ ಬಿಜೆಪಿ ತನ್ನದೇ ಆದ ಅಪ್ಲಿಕೇಶನ್‌ ಚಾಲ್ತಿಗೆ ತಂದಿರುವ ಆತಂಕಕಾರಿ ವಿಶಯವನ್ನು ದಿ ವೈರ್‌ ಸುದ್ದಿ ಜಾಲತಾಣ ಹೊರಗೆಳೆದಿದೆ. ಆಯುಶ್ಮಾನ್‌ ಕೌಲ್‌ ಹಾಗೂ ದೇವೇಶ್‌ ಕುಮಾರ್‌ ಮಾಡಿರುವ ವಿಶೇಶ ವರದಿಯು ಹಲವು ಆತಂಕಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದೆ. ತನ್ನ ರಾಜಕೀಯ ವಿರೋದಿಗಳ ವಿರುದ್ದ ದ್ವೇಶ ಹರಡಲು, ಅವರಿಗೆ ಕಿರುಕುಳ ನೀಡಲು ಈ ಅಪ್ಲಿಕೇಶನ್‌ಗಳು ಬಳಕೆಯಾಗುತ್ತಿವೆ ಎಂಬ ವಿಚಾರವನ್ನು ‘ದಿ ವೈರ್‌’ ವರದಿ ಬಯಲಿಗೆಳೆದಿದೆ.

ಆರತಿ ಶರ್‍ಮಾ ಎಂಬವರು 2020ರ ಏಪ್ರಿಲ್‌ ತಿಂಗಳಲ್ಲಿ ಬಿಜೆಪಿ ಐಟಿ ಸೆಲ್‌ ವಿರುದ್ದ ಅಸಮಾದಾನ ಹೊರಹಾಕಿ ಸರಣಿ ಟ್ವೀಟ್ ಮಾಡಿದ್ದರು. ಅದರ ಜಾಡು ಹಿಡಿದು ಹೊರಟ ದಿ ವೈರ್‌‌, ಬಿಜೆಪಿ ಐಟಿ ಸೆಲ್‌ ಚಾಲ್ತಿಗೆ ತಂದಿದ್ದ ಟೆಕ್‌ ಪಾಗ್‌ (Tek Fog) ಎಂಬ ಅಪ್ಲಿಕೇಶನ್‌ ಮಾಡುತ್ತಿದ್ದ ಕಾರ್‍ಯವೈಕರಿಯನ್ನು ಹೊರಗೆಡವಿದೆ.

Tek Fog ಅಪ್ಲಿಕೇಶನ್ ಮೂಲಕ ಆಡಳಿತ ರೂಡ ಬಿಜೆಪಿಯ ವಿರೋದಿ ರಾಜಕೀಯ ಪಕ್ಷಗಳನ್ನು ಟೀಕಿಸಲು, ಸರ್ಕಾರವನ್ನು ವಿಮರ್‍ಶಿಸುವವರ ವಿರುದ್ದ ವ್ಯಕ್ತಿಗತ ಟ್ರಾಲ್ ಮಾಡಲು ಸ್ವಯಂಚಾಲಿತ ತಂತ್ರಗ್ನಾನವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರತಿ ಶರ್‍ಮಾ ಅವರ ಸರಣಿ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ಈ ಟ್ವಿಟರ್ ಕಾತೆಯನ್ನು ಸಂಪರ್ಕಿಸಿರುವ ದಿ ವೈರ್ ತಂಡಕ್ಕೆ ಅಪ್ಲಿಕೇಶನ್ ನಿರ್‍ವಹಿಸುವ ರಹಸ್ಯ ಕೆಲಸಗಳ ಕುರಿತು ಮಾಹಿತಿ ದೊರೆತಿದ್ದು, ಬಿಜೆಪಿ ಪರವಾಗಿರುವ ವಾಟ್ಸಪ್ ಗುಂಪುಗಳನ್ನು ರಚಿಸುವುದು, ಐಟಿ ಸೆಲ್ ಉದ್ಯೋಗಿಗಳಿಗೆ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋದಿಗಳನ್ನು ಗುರಿಮಾಡಿಸಲು ವಿಶಯಗಳನ್ನು ಕೊಡುವುದು ಮೊದಲಾದ ಹಲವು ಕೆಲಸವನ್ನು ಈ ಆಪ್ ಮೂಲಕ ನಿರ್‍ವಹಿಸಲಾಗುತ್ತಿತ್ತು ಎನ್ನಲಾಗಿದೆ.

“2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಸರ್‍ಕಾರಿ ಉದ್ಯೋಗ ನೀಡುವುದಾಗಿ ಆಮಿಶಗಳನ್ನು ನೀಡಲಾಗಿತ್ತು” ಎಂಬ ಆರೋಪವನ್ನೂ ಆ ಟ್ವಿಟ್ಟರ್ ಕಾತೆ ಮಾಡಿತ್ತು. ಹೀಗಾಗಿ ಅಸಮಾದಾನಗೊಂಡು ಕಾತೆಯಲ್ಲಿ ಬೇಸರ ವ್ಯಕ್ತಪಡಿಸಲಾಗಿತ್ತು.

ಎರಡು ವರ್‍ಶಗಳ ಕಾಲ ತನಿಕೆ ನಡೆಸಿರುವ ದಿ ವೈರ್‌ ಹಲವು ಮಾಹಿತಿಗಳನ್ನು ಕಲೆ ಹಾಕಿದೆ. ಈ ಆಪ್‌ ಒಂದು ಪಕ್ಶದಪರ ಹೇಗೆ ಕೆಲಸ ಮಾಡಿದೆ ಎನ್ಬುದನ್ನು ವೈರ್‌ ವಿಶ್ಲೇಶಿಸಿದೆ.

1. ಟ್ವಿಟ್ಟರ್‌‌ನ ‘ಟ್ರೆಂಡಿಂಗ್‌’ ಫೇಸ್‌ಬುಕ್‌ನ ಟ್ರೆಂಡ್‌ ವಿಬಾಗವನ್ನು ಹೈಜಾಕ್‌ ಮಾಡುವುದು:

ಇದರ ಅರ್ತವೇನು?

ಅಪ್ಲಿಕೇಶನ್ ಆಪರೇಟರ್‌ಗಳೇ ವ್ಯಕ್ತಿಗಳು ಅತವಾ ಗುಂಪುಗಳ ಟ್ವೀಟ್‌ಗಳನ್ನು, ಪೋಸ್ಟ್‌ಗಳನ್ನು ‘ತಂತಾನೇ- ರೀಟ್ವೀಟ್’ ಅಥವಾ ‘ತಂತಾನೇ- ಹಂಚಿಕೊಳ್ಳಬಹುದು. ಆಪರೇಟರ್‌ಗಳು ವಾಸ್ತವದಲ್ಲಿ ಇರುವುದಕ್ಕಿಂತ ಅತಿರೇಕದ ನಿರೂಪಣೆ ಹಾಗೂ ರಾಜಕೀಯ ಅಬಿಯಾನವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುವುದು.

ಸಮಸ್ಯೆಯೇನು?

ಯಾವುದು ನಿಯಂತ್ರಿಸಲ್ಪಡುತ್ತಿದೆ ಯಾವುದು ನಿಜವಾಗಿದೆ ಎಂಬುದನ್ನು ತಿಳಿಯದಂತಾಗುತ್ತೇವೆ. ಸದ್ಯದ ಟ್ರೆಂಡ್‌ಗಳನ್ನು ಬುಡಮೇಲು ಮಾಡಿ ಕೆಲವು ಗುಂಪುಗಳ, ಕೆಲವು ವ್ಯಕ್ತಿಗಳನ್ನು ಗುರಿಮಾಡಲಾಗುತ್ತದೆ. ಕಿರುಕುಳ ನೀಡಲಾಗುತ್ತದೆ.

ವೈರ್‌ಗೆ ಸಿಕ್ಕಿರುವ ಆಧಾರ

#CongressAgainstLabourers, #कर्मयोगी ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗುವ ಮೊದಲು ಒದಗಿಸಲಾದ ಮೂಲಗಳು ಅನುಮಾನಾಸ್ಪದ, ಅನದಿಕೃತವಾಗಿದ್ದು ಆನ್‌ಲೈನ್‌ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

2. ನಿಶ್ಕ್ರಿಯ ವಾಟ್ಸ್‌ಆಪ್‌‌ ಖಾತೆಗಳ ಪಿಶಿಂಗ್‌ (ಪಾಸ್‌ವರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಸಂಕ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಲು ವ್ಯಕ್ತಿಗಳನ್ನು ಪ್ರೇರೇಪಿಸುವ ಸಲುವಾಗಿ ಪ್ರತಿಶ್ಟಿತ ಕಂಪನಿಗಳಿಂದ ಇಮೇಲ್‌ಗಳನ್ನು ಕಳುಹಿಸುವ ಮೋಸದ ಅಬ್ಯಾಸ):

ಇದರ ಅರ್ತವೇನು?

ಆಪ್ ಆಪರೇಟರ್‌ಗಳು ಕಾಸಗಿ ವ್ಯಕ್ತಿಯ ‘ನಿಶ್ಕ್ರಿಯ’ ವಾಟ್ಸ್‌ಅಪ್‌‌ ಕಾತೆಗಳನ್ನು ಹೈಜಾಕ್ ಮಾಡಬಹುದು. ‘ಪದೇ ಪದೇ ಸಂಪರ್‍ಕಿಸುವ’ ಅತವಾ ‘ಎಲ್ಲಾ ಸಂಪರ್‍ಕಗಳಿಗೆ’ ಸಂದೇಶ ಕಳುಹಿಸಲು ಕಾಸಗಿ ವ್ಯಕ್ತಿಯ ಪೋನ್‌ ನಂಬರ್‌ಗಳನ್ನು ಬಳಸಬಹುದು.

ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಸಂಪರ್‍ಕ ಪಟ್ಟಿಯನ್ನು ಟೆಕ್ ಪಾಗ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಮುಂದೆ ನಡೆಸಬಹುದಾದ ಕಿರುಕುಳ ಮತ್ತು ಟ್ರೋಲಿಂಗ್ ಅಬಿಯಾನಗಳಿಗೆ ಬಳಸಲಾಗುತ್ತದೆ.

ನಾನೇಕೆ ಚಿಂತೆಪಡಬೇಕು?

ಇದು ನಿಮ್ಮ ಕಾಸಗಿತನದ ಹಕ್ಕನ್ನು ಉಲ್ಲಂಗಿಸಿದೆ.

ವೈರ್‌ಗೆ ಲಭ್ಯವಾದ ಆಧಾರ

ವಾಟ್ಸ್‌ಅಪ್‌ನ ಶೋಶಣೆಯ ರಿಯಲ್‌ ಟೈಮ್‌ ತೋರಿಸಲು ಮೂಲವನ್ನು ಕೇಳಲಾಯಿತು. ಪ್ರಾತಿಕ್ಷಿಕೆಯ ಮೂಲಕ ಹೈಜಾಕ್‌ ಮಾಡುವ ರೀತಿಯನ್ನು ದೃಡಪಡಿಸಿಕೊಳ್ಳಲಾಗಿದೆ.

3. ಉದ್ದೇಶಿತ ಕಿರುಕುಳಕ್ಕಾಗಿ ಕಾಸಗಿ ನಾಗರಿಕರ ಡೇಟಾಬೇಸ್ ಬಳಸುವುದು

ಇದರ ಅರ್ತವೇನು?

ಕಾಸಗಿ ನಾಗರಿಕರ ಉದ್ಯೋಗ, ದರ್ಮ, ಬಾಷೆ, ವಯಸ್ಸು, ಲಿಂಗ, ರಾಜಕೀಯ ಒಲವು ಅಷ್ಟೇ ಅಲ್ಲದೆ ಚರ್ಮದ ಬಣ್ಣ, ಸ್ತನದ ಗಾತ್ರದಂತಹ ದೈಹಿಕ ಗುಣಲಕ್ಷಣಗಳಿಗೆ ಅನುಗುಣವಾಗಿಯೂ ಡೇಟ್‌‌ಬೇಸ್‌ ಅನ್ನು ವರ್ಗೀಕರಿಸಲಾಗಿದೆ.

ನಾನೇಕೆ ಚಿಂತಿಸಬೇಕು?

ವಿಶುವಲ್‌ ಪುರಾವೆ

ವೈರ್‌ ಹೇಗೆ ಕಚಿತಪಡಿಸಿಕೊಂಡಿದೆ?

ಅಪ್ಲಿಕೇಶನ್‌ನಲ್ಲಿ ತೋರಿಸಲಾದ ಉದ್ದೇಶಿತ ಗುಂಪುಗಳಲ್ಲಿ ಒಂದಾದ ‘ಮಹಿಳಾ ಪತ್ರಕರ್‍ತರಿಗೆ’ ಕಳುಹಿಸಲಾದ ಪ್ರತ್ಯುತ್ತರಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.

ಈ ರೀತಿಯಾಗಿ ಈ ವರದಿ ಪ್ರಕಟಗೊಂಡ ನಂತರ ದೊಡ್ಡ ಚರ್ಚೆಗಳು ಆರಂಬವಾಗಿವೆ. ಬಿಜೆಪಿಯು ಚುನಾವಣೆಯ ಹೊಸ್ತಿಲಲ್ಲಿ ಎಂತಹ ಹೀನಕೃತ್ಯಕ್ಕಿಳಿದಿದೆ ಎಂದು ಹಲವರು ವಿರೋದ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿರಿ: ಛತ್ತೀಸ್‌ಗಡ: ಗ್ರಾಮಸ್ಥರಿಂದ ಮುಸ್ಲಿಮರನ್ನು ಬಹಿಷ್ಕರಿಸುವ ಪ್ರತಿಜ್ಞೆ ಮಾಡಿಸಿದ ದುಷ್ಕರ್ಮಿಗಳು; ತನಿಖೆಗೆ ಪೊಲೀಸ್‌ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ‘ಎಲ್ಲರ ಎಂದರೆ ಮಹಾಪ್ರಾಣ ಅಕ್ಕರಗಳನ್ನು ಬಳಸದಿರುವುದೊಂದೇ ಅಲ್ಲ.
    ಆದಶ್ಟು ಕನ್ನಡ ಬೇರಿನ ಪದಗಳನ್ನು ಬಳಸುವುದು.
    ಮೇಲುನೋಟಕ್ಕೆ “ವಿಜಾತಿಯ” ಒತ್ತಕ್ಶರ” ಗಳಿಲ್ಲದ ಪದಗಳು.
    ಎತ್ತಗೆ:
    ದ್ವೇಶ…ಹಗೆತನ

    ಪ್ರತ್ಯುತ್ತರ..ಮರುಹೇಳಿಕೆ/ ಮರುಉತ್ತರ
    ಹೀನಕೃತ್ಯ..ಕೇಡುಕಿನ ಕೆಲಸ
    ….

  2. ಎಲ್ಲರ ಕನ್ನಡ ಎಂದರೆ, ಕೇವಲ ಮಹಾಪ್ರಾಣ ಗಳನ್ನು ಕಯ್ಬಿಡುವುದಲ್ಲ.
    ಹೆಚ್ಚು ಕನ್ನಡ ಬೇರಿನ ಪದಗಳ ಬಳಕೆ.
    ಎತ್ತುಗೆ,
    ಹೀನಕೃತ್ಯ..ಕೆಡುಕಿನ ಕೆಲಸ.
    ಕನ್ನಡಪದಗಳಲ್ಲಿ ವಿಜಾತಿಯ ಒತ್ತಕ಼್ಶರ ಇರುವುದಿಲ್ಲ.

  3. ದನ್ಯವಾದಗಳು
    “ಹ್ಯಾಶ್‌ಟ್ಯಾಗ್‌ಗಳನ್ನು ರಚಿಸಿಕೊಡುವುದು, ವಿರೋಧಿಗಳನ್ನು”….ಇಲ್ಲಿ ಒಂದೇ ಒಂದು ಮಹಾಪ್ರಾಣ ನುಸುಳಿದೆ. ದಯವಿಟ್ಟು ತಿದ್ದಿ.

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...