Homeಕರ್ನಾಟಕಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಿದ್ದು, ಎಲ್ಲ ಜಾತಿ ಜನಾಂಗಗಳೂ ಪ್ರವೇಶಿಸಬಹುದು ಎಂಬ ಬೋರ್ಡ್‌ ಇತ್ತು. ಅದನ್ನು ಹಾಳು ಮಾಡಲಾಗಿದೆ.

- Advertisement -
- Advertisement -

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ ವ್ಯಾಪ್ತಿಗೆ ಸೇರಿದ ಬ್ಯಾಲಹಳ್ಳಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘವು ದಲಿತರು ಹಾಲು ಕೊಳ್ಳದಂತೆ ಅನಪೇಕ್ಷಿತ ನಿಲುವನ್ನು ತಾಳಿದೆ.

ಸುಮಾರು 15 ದಲಿತ ಕುಟುಂಬಗಳು ಇರುವ ಹಳ್ಳಿ ಇದಾಗಿದ್ದು, ಲಿಂಗಾಯತ-ವೀರಶೈವ, ನಾಯಕ ಸಮುದಾಯಗಳು ಇವೆ. ಮರಾಠಿ ಭಾಷೆ ಮಾತನಾಡುವ ಸಮುದಾಯವಿರುವ ಮರಾಠಿ ಪಾಳ್ಯವು ಬ್ಯಾಲಹಳ್ಳಿಗೆ ಹೊಂದಿಕೊಂಡಂತೆ ಇದೆ.

ಬ್ಯಾಲಹಳ್ಳಿಯಲ್ಲಿರುವ ಮಾದಿಗ ಸಮುದಾಯವು ಮೊದಲಿನಿಂದಲೂ ಆರ್ಥಿಕವಾಗಿ ಹಿಂದುಳಿದಿದೆ. ಸ್ವತಃ ಹಸು ಕಟ್ಟಿಕೊಳ್ಳುವಷ್ಟು ಶಕ್ತಿ ಇಲ್ಲದ ಕುಟುಂಬಗಳು ಇವು. ಈ ಬಡ ಕುಟುಂಬಗಳು ದಲಿತ ಕಾಲೋನಿ ಪಕ್ಕದಲ್ಲಿನ ಹಾಲು ಉತ್ಪಾದಕರ ಸಂಘದಿಂದ ಮೊದಲಿನಿಂದಲೂ ಹಾಲು ಖರೀದಿಸುತ್ತಿದ್ದವು.

ಸಾಮಾನ್ಯವಾಗಿ 100 ಎಂ.ಎಲ್‌., 200 ಎಂ.ಎಲ್‌. ಹಾಲು ಖರೀದಿಸಿ ಚಹಾ ಮಾಡಿಕೊಂಡು ಕುಡಿದು ಕೂಲಿಗೆ ಹೋಗುತ್ತಿದ್ದರು. ಆದರೆ ಈಗ ಚಹಾ  ಕಾಯಿಸಿಕೊಳ್ಳಲು ಅರ್ಧ ಲೀಟರ್‌ ಅಥವಾ ಒಂದು ಲೀಟರ್‌ ಹಾಲನ್ನಷ್ಟೇ ಖರೀದಿಸಬೇಕು. ಇಲ್ಲವಾದರೆ ಹಾಲು ಕೊಡುವುದಿಲ್ಲ ಎಂದು ಇಲ್ಲಿನ ಸಹಕಾರ ಸಂಘ ಹೇಳಿದೆ.

ಇದನ್ನೂ ಓದಿರಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ

ಅರ್ಧ ಲೀಟರ್ ಹಾಲು ತೆಗೆದುಕೊಂಡು ನಾವು ಏನು ಮಾಡಲಿ? ನಮಗೆ ದಿನಕ್ಕೆ ಅರ್ಧ ಲೀಟರ್‌, ಒಂದು ಲೀಟರ್‌ ಹಾಲು ಖರೀದಿಸಲು ಸಾಧ್ಯವಾಗದು. ದಯವಿಟ್ಟು ಮೊದಲಿನಂತೆ ನೂರು ಎಂ.ಎಲ್., ಇನ್ನೂರು ಎಂ.ಎಲ್‌. ಹಾಲು ನೀಡಿ ಎಂದು ಗೋಗರೆಯುವಂತಾಗಿದೆ.

“ಹಾಲನ್ನು ಪರೀಕ್ಷಿಸಿದ ನಂತರ ಗುಣಮಟ್ಟದ ಹಾಲನ್ನು ಖರೀದಿಸಲು ಈ ಮೊದಲು ಅವಕಾಶವಿತ್ತು. ಸಣ್ಣ ಅವ್ಯವಹಾರವೇನೋ ಸಂಘದಲ್ಲಿ ನಡೆದಿದ್ದು, ಹೀಗಾಗಿ ಸಂಘದ ಸದಸ್ಯರು, ಪದಾಧಿಕಾರಿಗಳ ನಡುವೆ ಗಲಾಟೆಯಾದಂತಿದೆ. ಇನ್ನು ಮುಂದೆ ಚಿಲ್ಲರೆ ಲೆಕ್ಕದಲ್ಲಿ ಹಾಲನ್ನೇ ಮಾರುವುದು ಬೇಡ. ಅರ್ಧ ಅಥವಾ ಒಂದು ಲೀಟರ್‌ ಹಾಲನ್ನು ಖರೀದಿಸಿದರೆ ಲೆಕ್ಕ ಸಿಗುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಒಳಗೊಳಗೆ ಅವರು ಭ್ರಷ್ಟಾಚಾರ ಮಾಡಿಕೊಂಡು, ನಮಗೆ ಹಾಲು ನೀಡುವುದನ್ನು ನಿಲ್ಲಿಸುವುದು ಎಷ್ಟು ಸರಿ?” ಎಂದು ದಲಿತರು ಕೇಳುತ್ತಿದ್ದಾರೆ.

“ತುಮಕೂರು ಹಾಲು ಒಕ್ಕೂಟದ ಪದಾಧಿಕಾರಿಗಳು ಬ್ಯಾಲಹಳ್ಳಿಗೆ ಬಂದು ಸಾಮಾನ್ಯ ಸಭೆ ನಡೆಸಿದ ಸಂದರ್ಭದಲ್ಲಿ ದಲಿತರು ಪ್ರಶ್ನಿಸಿದ್ದಾರೆ. ಹಾಲು ಒಕ್ಕೂಟದಲ್ಲಿ ಈ ಥರದ ನಿಯಮವೇನೂ ಇಲ್ಲ. ಅದು ಇಲ್ಲಿನ ಸಂಘದವರು ಮಾಡಿರುವ ತೀರ್ಮಾನ. ಸಂಘದೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಒಕ್ಕೂಟದವರು ತಿಳಿಸಿದ್ದಾರೆ. ಮೊದಲಿನಂತೆ ಹಾಲು ಕೊಡಿ ಎಂದು ಕೇಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳಲಿಲ್ಲ” ಎನ್ನುತ್ತಾರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ.

ಸಂಘದ ಕಾರ್ಯದರ್ಶಿ ಶಂಕರಪ್ಪ ಪ್ರತಿಕ್ರಿಯೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರಪ್ಪ, “ಅವರು ತೆಗೆದುಕೊಳ್ಳುವುದು ನೂರು ಎಂ.ಎಲ್‌., ಇನ್ನೂರು ಎಂ.ಎಲ್‌. ಹಾಲು ಅಷ್ಟೇ. ಎರಡು ಲೀಟರ್‌ ಒಟ್ಟಿಗೆ ತೆಗೆದುಕೊಂಡು ಹಂಚಿಕೊಂಡು ಬಿಡಿ ಎಂದು ಮೀಟಿಂಗ್‌ನಲ್ಲಿ ತಿಳಿಸಿದ್ದೇವೆ. ಹಾಲು ಕೊಡಬೇಕೆಂದೇನೂ ಇಲ್ಲ. ಸಂಘ ಹಾಲು ಖರೀದಿಸಲು ಮಾತ್ರ ಇರುವುದು. ಆದರೂ ಜನರ ಹಿತಾದೃಷ್ಟಿಯಿಂದ ಮೊದಲಿನಿಂದಲೂ ಹಾಲು ಮಾರಲಾಗುತ್ತಿತ್ತು” ಎಂದರು.

ಇದನ್ನೂ ಓದಿರಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ

“ಒಂದು ಲೀಟರ್‌ಗೆ 36 ರೂ.ಗಳಿಗೆ ಕೊಡುತ್ತೇವೆ. ನೂರು ಎಂ.ಎಲ್‌. ತೆಗೆದುಕೊಂಡರೆ 3.60 ರೂ. ತೆಗೆದುಕೊಳ್ಳಬೇಕು. ಆದರೆ 40 ಪೈಸೆ ಚಿಲ್ಲರೆ ಇರುವುದಿಲ್ಲವಲ್ಲ. ನಾಲ್ಕು ರೂ. ತೆಗೆದುಕೊಳ್ಳಬೇಕಾಗುತ್ತದೆ. 40 ಪೈಸೆ ಚಿಲ್ಲರೆಗೂ ಕೆಲವರು ತಕರಾರು ತೆಗೆದರು. ಹೀಗಾಗಿ ಚಿಲ್ಲರೆ ಕೊಡಲು ಆಗಲ್ಲ. ಅರ್ಧ ಲೀಟರ್, ಕಾಲು ಲೀಟರ್‌ ತೆಗೆದುಕೊಳ್ಳಿ ಎಂದೆವು. ಅಷ್ಟು ತೆಗೆದುಕೊಳ್ಳಲು ಶಕ್ತಿ ಇಲ್ಲ ಅಂದರೆ ನಾವೇನು ಮಾಡಲಿ” ಎಂದು ಸಂಘದ ನಡೆಯನ್ನು ಸಮರ್ಥಿಸಿಕೊಂಡರು.

“ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದರೂ ಆಗಲ್ಲ. ಲೀಟರ್‌ಗೆ ನಲವತ್ತು ರೂಪಾಯಿ ಏರಿಕೆಯಾದರೆ ಇದೆಲ್ಲ ಸಮಸ್ಯೆಯಾಗಲ್ಲ” ಎಂದು ಪ್ರತಿಕ್ರಿಯೆ ನೀಡಿದರು ಶಂಕರಪ್ಪ.

ಶಂಕರಪ್ಪ ಅವರು ಹೀಗೆ ಹೇಳುತ್ತಿದ್ದಾರೆಂದು ದಲಿತ ಮುಖಂಡರಿಗೆ ತಿಳಿಸಿದಾಗ, “ಎಲ್ಲ ಅಳತೆ ಮಾಪನಗಳು ಅವರ ಬಳಿಯೇ ಇರುತ್ತವೆ. ಅಳತೆ ಮಾಡಿಕೊಡಲು ಆಗುವುದಿಲ್ಲವೇ? ಇವೆಲ್ಲ ತಾತ್ಸರ ಮನೋಭಾವವಷ್ಟೇ. ನಾವು ನಾಲ್ಕು ರೂಪಾಯಿ ಕೊಡಲು ಸಿದ್ಧರಿದ್ದೇವೆ. ಸಂಘದೊಳಗೆ ಆಗಿರುವ ಕಿತಾಪತಿಗೆ ನಮ್ಮನ್ನು ಬಲಿಪಶು ಮಾಡಲಾಗಿದೆ” ಎಂದರು.

ಮುಜರಾಯಿ ದೇವಾಲಯಕ್ಕೆ ಪ್ರವೇಶಿಸಲು ಹೆದರಿಕೆ

ಬ್ಯಾಲಹಳ್ಳಿ ಗ್ರಾಮದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ತೊಳಸಮ್ಮ ದೇವಸ್ಥಾನವಿದ್ದು, ಸವರ್ಣೀಯ ಸಮುದಾಯದ ಹಿಡಿತದಲ್ಲಿದೆ. ದೇವಾಲಯಕ್ಕೆ ಪ್ರವೇಶಿಸಬೇಕೆಂಬ ಆಸೆ ಅನೇಕ ದಲಿತರಿಗಿದ್ದರೂ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ. ಅಲ್ಲದೆ ದೇವಾಲಯದ ಹೊರಗೆ ಹಾಕಿರುವ ಬೋರ್ಡ್‌‌ ಅನ್ನು ಅಳಿಸಿ ಹಾಕುವ ಪ್ರಯತ್ನವನ್ನು ಸವರ್ಣೀಯ ಜಾತಿಗಳು ಮಾಡಿವೆ.

ಮುಜರಾಯಿ ಇಲಾಖೆಯ ಬೋರ್ಡ್ ಕೆರೆದು ಅಳಿಸಿ ಹಾಕಿರುವುದು….

ಊರಿನ ಬಸ್‌ ನಿಲ್ದಾಣದಲ್ಲಿ ದೇವಾಲಯವಿದ್ದು, ಮುಜರಾಯಿ ಇಲಾಖೆಯು ದೇವಾಲಯದ ಹೊರಗೆ, “ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗ ಭೇದವಿಲ್ಲದೆ ಪ್ರವೇಶ ಮಾಡಬಹುದು” ಎಂದು ಬೋರ್ಡ್ ಹಾಕಿದೆ. ‘ಜಾತಿ, ಜನಾಂಗ, ದೇವಾಲಯ ಪ್ರವೇಶ’ ಇತ್ಯಾದಿ ಪದಗಳನ್ನು ಕಾಣದಂತೆ ಕೆರೆದು ಹಾಕಲಾಗಿದೆ.

ಒಂದು ಚಿಲ್ಲರೆ ನೆಪದಲ್ಲಿ ಹಾಲು ನೀಡಲು ನಿರಾಕರಣೆ, ಮತ್ತೊಂದು ಕಡೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯ ಪ್ರವೇಶಿಸಲು ಅಡ್ಡಿ, ಆತಂಕ… ಇದು ಬ್ಯಾಲಹಳ್ಳಿಯ ಪರಿಸ್ಥಿತಿಯಾಗಿದೆ.

ಬ್ಯಾಲಹಳ್ಳಿ ಗ್ರಾಮದಲ್ಲಿನ ತೊಳಸಮ್ಮ ದೇವಾಲಯ

ಇದನ್ನೂ ಓದಿರಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...