Homeಕರ್ನಾಟಕಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ಚಿಲ್ಲರೆ ನೆಪದಲ್ಲಿ ದಲಿತರಿಗೆ ಹಾಲು ನೀಡದ ‘ಬ್ಯಾಲಹಳ್ಳಿ ಹಾಲು ಉತ್ಪಾದಕರ ಸಂಘ’

ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯವಿದ್ದು, ಎಲ್ಲ ಜಾತಿ ಜನಾಂಗಗಳೂ ಪ್ರವೇಶಿಸಬಹುದು ಎಂಬ ಬೋರ್ಡ್‌ ಇತ್ತು. ಅದನ್ನು ಹಾಳು ಮಾಡಲಾಗಿದೆ.

- Advertisement -
- Advertisement -

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಕಡಬ ಹೋಬಳಿ ವ್ಯಾಪ್ತಿಗೆ ಸೇರಿದ ಬ್ಯಾಲಹಳ್ಳಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘವು ದಲಿತರು ಹಾಲು ಕೊಳ್ಳದಂತೆ ಅನಪೇಕ್ಷಿತ ನಿಲುವನ್ನು ತಾಳಿದೆ.

ಸುಮಾರು 15 ದಲಿತ ಕುಟುಂಬಗಳು ಇರುವ ಹಳ್ಳಿ ಇದಾಗಿದ್ದು, ಲಿಂಗಾಯತ-ವೀರಶೈವ, ನಾಯಕ ಸಮುದಾಯಗಳು ಇವೆ. ಮರಾಠಿ ಭಾಷೆ ಮಾತನಾಡುವ ಸಮುದಾಯವಿರುವ ಮರಾಠಿ ಪಾಳ್ಯವು ಬ್ಯಾಲಹಳ್ಳಿಗೆ ಹೊಂದಿಕೊಂಡಂತೆ ಇದೆ.

ಬ್ಯಾಲಹಳ್ಳಿಯಲ್ಲಿರುವ ಮಾದಿಗ ಸಮುದಾಯವು ಮೊದಲಿನಿಂದಲೂ ಆರ್ಥಿಕವಾಗಿ ಹಿಂದುಳಿದಿದೆ. ಸ್ವತಃ ಹಸು ಕಟ್ಟಿಕೊಳ್ಳುವಷ್ಟು ಶಕ್ತಿ ಇಲ್ಲದ ಕುಟುಂಬಗಳು ಇವು. ಈ ಬಡ ಕುಟುಂಬಗಳು ದಲಿತ ಕಾಲೋನಿ ಪಕ್ಕದಲ್ಲಿನ ಹಾಲು ಉತ್ಪಾದಕರ ಸಂಘದಿಂದ ಮೊದಲಿನಿಂದಲೂ ಹಾಲು ಖರೀದಿಸುತ್ತಿದ್ದವು.

ಸಾಮಾನ್ಯವಾಗಿ 100 ಎಂ.ಎಲ್‌., 200 ಎಂ.ಎಲ್‌. ಹಾಲು ಖರೀದಿಸಿ ಚಹಾ ಮಾಡಿಕೊಂಡು ಕುಡಿದು ಕೂಲಿಗೆ ಹೋಗುತ್ತಿದ್ದರು. ಆದರೆ ಈಗ ಚಹಾ  ಕಾಯಿಸಿಕೊಳ್ಳಲು ಅರ್ಧ ಲೀಟರ್‌ ಅಥವಾ ಒಂದು ಲೀಟರ್‌ ಹಾಲನ್ನಷ್ಟೇ ಖರೀದಿಸಬೇಕು. ಇಲ್ಲವಾದರೆ ಹಾಲು ಕೊಡುವುದಿಲ್ಲ ಎಂದು ಇಲ್ಲಿನ ಸಹಕಾರ ಸಂಘ ಹೇಳಿದೆ.

ಇದನ್ನೂ ಓದಿರಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ

ಅರ್ಧ ಲೀಟರ್ ಹಾಲು ತೆಗೆದುಕೊಂಡು ನಾವು ಏನು ಮಾಡಲಿ? ನಮಗೆ ದಿನಕ್ಕೆ ಅರ್ಧ ಲೀಟರ್‌, ಒಂದು ಲೀಟರ್‌ ಹಾಲು ಖರೀದಿಸಲು ಸಾಧ್ಯವಾಗದು. ದಯವಿಟ್ಟು ಮೊದಲಿನಂತೆ ನೂರು ಎಂ.ಎಲ್., ಇನ್ನೂರು ಎಂ.ಎಲ್‌. ಹಾಲು ನೀಡಿ ಎಂದು ಗೋಗರೆಯುವಂತಾಗಿದೆ.

“ಹಾಲನ್ನು ಪರೀಕ್ಷಿಸಿದ ನಂತರ ಗುಣಮಟ್ಟದ ಹಾಲನ್ನು ಖರೀದಿಸಲು ಈ ಮೊದಲು ಅವಕಾಶವಿತ್ತು. ಸಣ್ಣ ಅವ್ಯವಹಾರವೇನೋ ಸಂಘದಲ್ಲಿ ನಡೆದಿದ್ದು, ಹೀಗಾಗಿ ಸಂಘದ ಸದಸ್ಯರು, ಪದಾಧಿಕಾರಿಗಳ ನಡುವೆ ಗಲಾಟೆಯಾದಂತಿದೆ. ಇನ್ನು ಮುಂದೆ ಚಿಲ್ಲರೆ ಲೆಕ್ಕದಲ್ಲಿ ಹಾಲನ್ನೇ ಮಾರುವುದು ಬೇಡ. ಅರ್ಧ ಅಥವಾ ಒಂದು ಲೀಟರ್‌ ಹಾಲನ್ನು ಖರೀದಿಸಿದರೆ ಲೆಕ್ಕ ಸಿಗುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಒಳಗೊಳಗೆ ಅವರು ಭ್ರಷ್ಟಾಚಾರ ಮಾಡಿಕೊಂಡು, ನಮಗೆ ಹಾಲು ನೀಡುವುದನ್ನು ನಿಲ್ಲಿಸುವುದು ಎಷ್ಟು ಸರಿ?” ಎಂದು ದಲಿತರು ಕೇಳುತ್ತಿದ್ದಾರೆ.

“ತುಮಕೂರು ಹಾಲು ಒಕ್ಕೂಟದ ಪದಾಧಿಕಾರಿಗಳು ಬ್ಯಾಲಹಳ್ಳಿಗೆ ಬಂದು ಸಾಮಾನ್ಯ ಸಭೆ ನಡೆಸಿದ ಸಂದರ್ಭದಲ್ಲಿ ದಲಿತರು ಪ್ರಶ್ನಿಸಿದ್ದಾರೆ. ಹಾಲು ಒಕ್ಕೂಟದಲ್ಲಿ ಈ ಥರದ ನಿಯಮವೇನೂ ಇಲ್ಲ. ಅದು ಇಲ್ಲಿನ ಸಂಘದವರು ಮಾಡಿರುವ ತೀರ್ಮಾನ. ಸಂಘದೊಂದಿಗೆ ಮಾತನಾಡಿ ಒಂದು ನಿರ್ಧಾರಕ್ಕೆ ಬನ್ನಿ ಎಂದು ಒಕ್ಕೂಟದವರು ತಿಳಿಸಿದ್ದಾರೆ. ಮೊದಲಿನಂತೆ ಹಾಲು ಕೊಡಿ ಎಂದು ಕೇಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳಲಿಲ್ಲ” ಎನ್ನುತ್ತಾರೆ ದಲಿತ ಮುಖಂಡ ಬಿ.ಸಿ.ರೇಣುಕಪ್ಪ.

ಸಂಘದ ಕಾರ್ಯದರ್ಶಿ ಶಂಕರಪ್ಪ ಪ್ರತಿಕ್ರಿಯೆ

‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಸಂಘದ ಕಾರ್ಯದರ್ಶಿ ಶಂಕರಪ್ಪ, “ಅವರು ತೆಗೆದುಕೊಳ್ಳುವುದು ನೂರು ಎಂ.ಎಲ್‌., ಇನ್ನೂರು ಎಂ.ಎಲ್‌. ಹಾಲು ಅಷ್ಟೇ. ಎರಡು ಲೀಟರ್‌ ಒಟ್ಟಿಗೆ ತೆಗೆದುಕೊಂಡು ಹಂಚಿಕೊಂಡು ಬಿಡಿ ಎಂದು ಮೀಟಿಂಗ್‌ನಲ್ಲಿ ತಿಳಿಸಿದ್ದೇವೆ. ಹಾಲು ಕೊಡಬೇಕೆಂದೇನೂ ಇಲ್ಲ. ಸಂಘ ಹಾಲು ಖರೀದಿಸಲು ಮಾತ್ರ ಇರುವುದು. ಆದರೂ ಜನರ ಹಿತಾದೃಷ್ಟಿಯಿಂದ ಮೊದಲಿನಿಂದಲೂ ಹಾಲು ಮಾರಲಾಗುತ್ತಿತ್ತು” ಎಂದರು.

ಇದನ್ನೂ ಓದಿರಿ: ಗುಜರಾತ್: ರಾಮಮಂದಿರ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಮಾರಣಾಂತಿಕ ಹಲ್ಲೆ

“ಒಂದು ಲೀಟರ್‌ಗೆ 36 ರೂ.ಗಳಿಗೆ ಕೊಡುತ್ತೇವೆ. ನೂರು ಎಂ.ಎಲ್‌. ತೆಗೆದುಕೊಂಡರೆ 3.60 ರೂ. ತೆಗೆದುಕೊಳ್ಳಬೇಕು. ಆದರೆ 40 ಪೈಸೆ ಚಿಲ್ಲರೆ ಇರುವುದಿಲ್ಲವಲ್ಲ. ನಾಲ್ಕು ರೂ. ತೆಗೆದುಕೊಳ್ಳಬೇಕಾಗುತ್ತದೆ. 40 ಪೈಸೆ ಚಿಲ್ಲರೆಗೂ ಕೆಲವರು ತಕರಾರು ತೆಗೆದರು. ಹೀಗಾಗಿ ಚಿಲ್ಲರೆ ಕೊಡಲು ಆಗಲ್ಲ. ಅರ್ಧ ಲೀಟರ್, ಕಾಲು ಲೀಟರ್‌ ತೆಗೆದುಕೊಳ್ಳಿ ಎಂದೆವು. ಅಷ್ಟು ತೆಗೆದುಕೊಳ್ಳಲು ಶಕ್ತಿ ಇಲ್ಲ ಅಂದರೆ ನಾವೇನು ಮಾಡಲಿ” ಎಂದು ಸಂಘದ ನಡೆಯನ್ನು ಸಮರ್ಥಿಸಿಕೊಂಡರು.

“ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದರೂ ಆಗಲ್ಲ. ಲೀಟರ್‌ಗೆ ನಲವತ್ತು ರೂಪಾಯಿ ಏರಿಕೆಯಾದರೆ ಇದೆಲ್ಲ ಸಮಸ್ಯೆಯಾಗಲ್ಲ” ಎಂದು ಪ್ರತಿಕ್ರಿಯೆ ನೀಡಿದರು ಶಂಕರಪ್ಪ.

ಶಂಕರಪ್ಪ ಅವರು ಹೀಗೆ ಹೇಳುತ್ತಿದ್ದಾರೆಂದು ದಲಿತ ಮುಖಂಡರಿಗೆ ತಿಳಿಸಿದಾಗ, “ಎಲ್ಲ ಅಳತೆ ಮಾಪನಗಳು ಅವರ ಬಳಿಯೇ ಇರುತ್ತವೆ. ಅಳತೆ ಮಾಡಿಕೊಡಲು ಆಗುವುದಿಲ್ಲವೇ? ಇವೆಲ್ಲ ತಾತ್ಸರ ಮನೋಭಾವವಷ್ಟೇ. ನಾವು ನಾಲ್ಕು ರೂಪಾಯಿ ಕೊಡಲು ಸಿದ್ಧರಿದ್ದೇವೆ. ಸಂಘದೊಳಗೆ ಆಗಿರುವ ಕಿತಾಪತಿಗೆ ನಮ್ಮನ್ನು ಬಲಿಪಶು ಮಾಡಲಾಗಿದೆ” ಎಂದರು.

ಮುಜರಾಯಿ ದೇವಾಲಯಕ್ಕೆ ಪ್ರವೇಶಿಸಲು ಹೆದರಿಕೆ

ಬ್ಯಾಲಹಳ್ಳಿ ಗ್ರಾಮದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ತೊಳಸಮ್ಮ ದೇವಸ್ಥಾನವಿದ್ದು, ಸವರ್ಣೀಯ ಸಮುದಾಯದ ಹಿಡಿತದಲ್ಲಿದೆ. ದೇವಾಲಯಕ್ಕೆ ಪ್ರವೇಶಿಸಬೇಕೆಂಬ ಆಸೆ ಅನೇಕ ದಲಿತರಿಗಿದ್ದರೂ ಧೈರ್ಯ ಸಾಲದೆ ಸುಮ್ಮನಾಗಿದ್ದಾರೆ. ಅಲ್ಲದೆ ದೇವಾಲಯದ ಹೊರಗೆ ಹಾಕಿರುವ ಬೋರ್ಡ್‌‌ ಅನ್ನು ಅಳಿಸಿ ಹಾಕುವ ಪ್ರಯತ್ನವನ್ನು ಸವರ್ಣೀಯ ಜಾತಿಗಳು ಮಾಡಿವೆ.

ಮುಜರಾಯಿ ಇಲಾಖೆಯ ಬೋರ್ಡ್ ಕೆರೆದು ಅಳಿಸಿ ಹಾಕಿರುವುದು….

ಊರಿನ ಬಸ್‌ ನಿಲ್ದಾಣದಲ್ಲಿ ದೇವಾಲಯವಿದ್ದು, ಮುಜರಾಯಿ ಇಲಾಖೆಯು ದೇವಾಲಯದ ಹೊರಗೆ, “ಯಾವುದೇ ಜಾತಿ, ಜನಾಂಗ, ಧರ್ಮ, ಲಿಂಗ ಭೇದವಿಲ್ಲದೆ ಪ್ರವೇಶ ಮಾಡಬಹುದು” ಎಂದು ಬೋರ್ಡ್ ಹಾಕಿದೆ. ‘ಜಾತಿ, ಜನಾಂಗ, ದೇವಾಲಯ ಪ್ರವೇಶ’ ಇತ್ಯಾದಿ ಪದಗಳನ್ನು ಕಾಣದಂತೆ ಕೆರೆದು ಹಾಕಲಾಗಿದೆ.

ಒಂದು ಚಿಲ್ಲರೆ ನೆಪದಲ್ಲಿ ಹಾಲು ನೀಡಲು ನಿರಾಕರಣೆ, ಮತ್ತೊಂದು ಕಡೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯ ಪ್ರವೇಶಿಸಲು ಅಡ್ಡಿ, ಆತಂಕ… ಇದು ಬ್ಯಾಲಹಳ್ಳಿಯ ಪರಿಸ್ಥಿತಿಯಾಗಿದೆ.

ಬ್ಯಾಲಹಳ್ಳಿ ಗ್ರಾಮದಲ್ಲಿನ ತೊಳಸಮ್ಮ ದೇವಾಲಯ

ಇದನ್ನೂ ಓದಿರಿ: ದಲಿತರಿಗೆ ಕ್ಷೌರ ಮಾಡುವುದಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಬಹಿರಂಗ ಅಸ್ಪೃಶ್ಯತೆ ಆಚರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....