Homeಅಂಕಣಗಳುಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

- Advertisement -
- Advertisement -

ಇಫಿಗೆನಿಯಾ (1977): ಕ್ರಿಸ್ತ ಪೂರ್ವ 1250ರಲ್ಲಿ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವೆ ನಡೆದಿರಬಹುದೆಂದು ನಂಬಲಾದ ಮಹಾಸಮರದ ಕುರಿತು ಜನಪದ ಗೀತೆಗಳ ಸಂಗ್ರಹದ ಮೂಲಕ ಮುಂದೆಸಾಗಿ ಕ್ರಿ.ಪೂ 800ರಲ್ಲಿ ಹೋಮರ್ ಎಂಬ ಕುರುಡು ಹಾಡುಗಾರನ ಹಾಡುಗಳನ್ನು ದಾಖಲಿಸಲು ನಡೆದ ಪ್ರಯತ್ನದಲ್ಲಿ ಗ್ರೀಕ್ ಲಿಪಿ ಹುಟ್ಟಿತು ಎನ್ನಲಾಗುತ್ತದೆ. ಹೀಗೆ ಹುಟ್ಟಿಕೊಂಡ ಮೊದಲ ಮಹಾಕಾವ್ಯಗಳೇ ಇಲಿಯಡ್ ಮತ್ತು ಒಡಿಸ್ಸಿ (ಗ್ರೀಕ್ ಟ್ರಾಜಿಡೀಸ್).

ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಹಾಡುಗಳ ರೂಪದಲ್ಲಿದ್ದು, ಗ್ರೀಕ್ ಯೋಧರ ವೀರತ್ವ ಹಾಗೂ ತ್ಯಾಗ ಬಲಿದಾನಗಳ ಕುರಿತ ದಾಖಲೆಯಾಗಿದೆ. ಹತ್ತು ವರ್ಷಗಳ ಸತತವಾಗಿ ಸಾಗಿದ ಮಹಾಸಮರ ಶುರುವಾಗಿದ್ದಕ್ಕೆ ಕಾರಣ: ಗ್ರೀಸ್ ದೇಶದ ರಾಜ ಆಗಮೆಮ್‌ನೊನ್‌ನ (ಮಿಕೇನ್ ರಾಜ್ಯ) ಸಹೋದರ ಮೆನೆಲಾಯ್‌ನ (ಸ್ಪಾರ್ಥ ರಾಜ್ಯ) ಹೆಂಡತಿಯಾದ ಮಹಾಸುಂದರಿ ಹೆಲೆನಾಳನ್ನು ಟ್ರಾಯ್ ದೇಶದ ರಾಜಕುಮಾರ ಪಾರೀಸ್ ಅಪಹರಿಸಿಕೊಂಡುಹೋಗಿರುವುದು.

ಇಫಿಗೆನಿಯಾ ಸಿನಿಮಾ ಶುರುವಾಗುವುದು ಹೆಲೆನಾಳ ಅಪಹರಣದ ಪರಿಣಾಮವಾಗಿ ಆಗಮೆಮ್‌ನೊನ್ ಮತ್ತು ಮೆನೆಲಾಯ್ ಟ್ರಾಯ್ ದೇಶದ ವಿರುದ್ಧ ಯುದ್ಧ ಸಾರಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಮತ್ತು ಸಾವಿರಾರು ಸೈನಿಕರು ಟ್ರಾಯ್‌ನತ್ತ ಸಾಗಲು ಸಿದ್ಧರಾಗುವುದರಿಂದ. ಆದರೆ ಆಗಮೆಮ್‌ನೊನ್ ಬೇಟೆಯಾಡುವಾಗ ಪವಿತ್ರವಾದ ಸ್ಥಳದಲ್ಲಿ ಜಿಂಕೆಯನ್ನು ಕೊಂದಿದ್ದರಿಂದ ಪಡೆಯುವ ಶಾಪದಿಂದ ಹಡಗುಗಳು ಮುಂದೆಸಾಗಲು ಗಾಳಿ ಇಲ್ಲದಂತಾಗುತ್ತದೆ.

ಇಫಿಗೆನಿಯಾ

ಆಗ ದೈವವಾಣಿಯಾಗಿ ಬರುವ ಪರಿಹಾರ ಆಗಮೆಮ್‌ನೊನ್‌ನ ಮೊದಲ ಮುದ್ದಿನ ಮಗಳಾದ ಇಫಿಗೆನಿಯಾಳನ್ನು ಬಲಿ ನೀಡಿದರೆ ಮಾತ್ರ ಟ್ರಾಯ್‌ನತ್ತ ಹಡಗುಗಳು ಸಾಗಲು ಗಾಳಿ ಬೀಸುತ್ತದೆ ಎಂಬುದು. ಇದನ್ನು ಕೇಳಿ ಆತಂಕ ಮತ್ತು ಧರ್ಮಸಂಕಟದಲ್ಲಿ ಆಗಮೆಮ್‌ನೊನ್ ಸಿಲುಕುತ್ತಾನೆ. ಗ್ರೀಸಿನ ಗೌರವಕ್ಕಾಗಿ ತನ್ನ ಮುದ್ದಿನ ಮಗಳನ್ನು ಕೊಲ್ಲುವ ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ.

ಸಾವಿರಾರು ಸೈನಿಕರ ಯುದ್ಧಾಕ್ರೋಶದ ಮುಂದೆ ತಲೆ ಬಾಗುವ ಆಗಮೆಮ್‌ನೊನ್ ಇಫಿಗೆನಿಯಾಳಿಗೆ ತಾನಿರುವ ಸ್ಥಳಕ್ಕೆ ಬರುವಂತೆ ಸುದ್ದಿ ಕಳಿಸುತ್ತಾನೆ. ಸುದ್ದಿ ಕೊಂಡೊಯ್ಯುವವನ ಬಳಿಯಲ್ಲಿ ’ಇಫಿಗೆನಿಯಾಳಿಗೆ ಮತ್ತು ನೆರೆಯ ರಾಜ್ಯದ ಆಕಿಲೀಸ್‌ನಿಗೆ ಮದುವೆಯೆಂದು’ ಸುಳ್ಳು ಹೇಳಲು ತಿಳಿಸಿರುತ್ತಾನೆ. ಇದನ್ನು ನಿಜವೆಂದುಕೊಂಡ ಆಗಮೆಮ್‌ನೊನ್‌ನ ಹೆಂಡತಿ ಕ್ಲಿಟೆಮ್ನೆಸ್ಟ್ರಾ ತನ್ನ ಮಕ್ಕಳೊಂದಿಗೆ ಬರುತ್ತಾಳೆ.

ಈ ಬರಸಿಡಿಲಿನಂತ ನಿರ್ಧಾರದಿಂದ ಆಗಮೆಮ್‌ನೊನ್ ತಳಮಳ ಸಿನಿಮಾದ ಮೊದಲ ಭಾಗ ಹಿಡಿದಿಟ್ಟರೆ, ಒಮ್ಮೆ ಮಗಳು ಇಪಿಜೆನಿಯಾ ಮತ್ತು ಹೆಂಡತಿ ಕ್ಲಿಟೆಮ್ನೆಸ್ಟ್ರಾ ಬಂದ ನಂತರ ಈ ಸುದ್ದಿ ತಿಳಿದು ಉಂಟಾಗುವ ಸಂಘರ್ಷ ಮತ್ತು ಆಗಮೆಮ್‌ನೊನ್ ಅಸಹಾಯಕತೆಯನ್ನು ಸಿನಿಮಾದ ಕೊನೆಯವರೆಗೂ ಕಟ್ಟಲಾಗಿದೆ.

ಸಾವಿರಾರು ಸೈನಿಕರು ಯುದ್ದದ ರೋಷಾಗ್ನಿಯಿಂದ ಇಫಿಗೆನಿಯಾಳ ಬಲಿಗಾಗಿ ಕೂಗಾಟ ಕಿರುಚಾಟಗಳ ಮಧ್ಯೆ, ಇಪಿಜೆನಿಯಾಳಿಗೆ ಬೇರೆ ದಾರಿಯಿಲ್ಲದೆ ’ಮದುವೆಗೆಂದು ಬಂದೆ, ಈ ಸಾವೇ ನನ್ನ ಮದುವೆ, ನಿಮ್ಮ ಯುದ್ದದ ಗೆಲ್ಲುವೆ ನನ್ನ ಮಕ್ಕಳು’ ಎಂದು ಹೇಳಿ ಬಲಿಪೀಠದತ್ತ ಸಾಗುತ್ತಾಳೆ.

ಒಂದು ಕಡೆ ಆಸಹಾಯಕತೆಯಲ್ಲಿ ನಿಂತು ನೋಡುತ್ತಿರುವ ಆಗಮೆಮ್‌ನೊನ್, ಕೋಪದಲ್ಲಿ ಕುದಿಯುತ್ತಿರುವ ಕ್ಲಿಟೆಮ್ನೆಸ್ಟ್ರಾ ಇನ್ನೊಂದು ಕಡೆ. ಕೊನೆಗೆ ಗಾಳಿ ಬೀಸಲಾರಂಭಿಸುತ್ತದೆ. ಸೈನಿಕರು ಮತ್ತು ಹಡಗುಗಳು ಯುದ್ಧದ ಉತ್ಸಾಹದಿಂದ ಟ್ರಾಯ್‌ನತ್ತ ಸಾಗುತ್ತಾರೆ. ಕ್ಲಿಟೆಮ್ನೆಸ್ಟ್ರಾಳ ಕೋಪ ಸೇಡಿನ ರೂಪಾಂತರವಾಗುವುದೆಂಬ ಊಹೆಯಲ್ಲಿಯೇ ಸಿನಿಮಾದ ಅಂತ್ಯ.

ಎಲೆಕ್ಟ್ರಾ (1962): ಇಫಿಗೆನಿಯಾಳ ಬಲಿಯ ನಂತರ ಆಗಮೆಮ್‌ನೊನ್ ಟ್ರಾಯ್‌ನ ಮೇಲೆ ಮಾಡಿದ ಹತ್ತು ವರ್ಷಗಳ ಮಹಾಸಮರವನ್ನು ಮುಗಿಸಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಸ್ನಾನದ ಕೋಣೆಯಲ್ಲಿ ಹೆಂಡತಿ ಕ್ಲಿಟೆಮ್ನೆಸ್ಟ್ರಾ ಮತ್ತು ಅವಳ ಪ್ರಿಯಕರ ಎಗೀಸ್‌ನ ಸಹಾಯದಿಂದ ಆಗಮೆಮ್‌ನೊನ್‌ನನ್ನು ಕೊಲ್ಲುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಾಳೆ.

ಕ್ಲಿಟೆಮ್ನೆಸ್ಟ್ರಾ ಆಗಮೆಮ್‌ನೊನ್‌ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಿಯಕರನೊಂದಿಗೆ ಇರುವುದನ್ನು ಗಮನಿಸುವ ಆಕೆಯ ಮಗ ಒರೆಸ್ಟೆಸ್ ಹಲವು ವರ್ಷಗಳ ಮೊದಲೇ ಅರಮನೆಯಿಂದ ದೂರವಾಗಿ ತನ್ನ ಗುರುವಿನ ಬಳಿ ರಾಜತಂತ್ರಗಳನ್ನು ಕಲಿಯುತ್ತಿರುತ್ತಾನೆ. ಅರಮನೆಯಲ್ಲಿ ಉಳಿದಿದ್ದು ಮಗಳು ಎಕ್ಟ್ರಾ.

ಆಗಮೆಮ್‌ನೊನ್‌ನ ಸಾವಿನ ನಂತರ ಮಗಳನ್ನು ಅವಮಾನಿಸಲು, ಅವಳ ಕೂದಲನ್ನು ಕತ್ತರಿಸಿ ಬಡ ಮುದಿ ರೈತನೊಂದಿಗೆ ಮದುವೆ ಮಾಡಿಸಿ ಕ್ಲಿಟೆಮ್ನೆಸ್ಟ್ರಾ ಮತ್ತು ಪ್ರಿಯಕರ ಎಗೀಸ್ ಆಕೆಯನ್ನು ರಾಜ್ಯದಿಂದ ಹೊರತಳ್ಳುತ್ತಾರೆ. ಇದರಿಂದ ನೊಂದ ಎಲೆಕ್ಟ್ರಾ ತನ್ನ ತಮ್ಮ ಒಂದು ದಿನ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿಯೇ ಹಳ್ಳಿಯೊಂದರಲ್ಲಿ ಬದುಕುತ್ತಿರುತ್ತಾಳೆ, ಊರಿನ ಹೆಂಗಸರೆಲ್ಲಾ ಎಲೆಕ್ಟ್ರಾಳಿಗೆ ಸಹಾಯ ಮಾಡುತ್ತಿರುತ್ತಾರೆ.

ಕೊನೆಗೊಂದು ದಿನ ತಮ್ಮ ಒರೆಸ್ಟೆಸ್‌ನ ಕಡೆಯವರೆಂದು ಹೇಳಿಕೊಂಡು ಬರುವ ಇಬ್ಬರು ಅಪರಿಚಿತರು ಎಲೆಕ್ಟ್ರಾಳನ್ನು ಭೇಟಿಯಾಗುತ್ತಾರೆ. ಆಗ ತನ್ನ ತಂದೆ ಆಗಮೆಮ್‌ನೊನ್‌ನ ಸಹಾಯಕನಾಗಿದ್ದ ಕುರುಡ ಮುದುಕನೊಬ್ಬನ ಸಹಾಯದಿಂದ, ಆ ಇಬ್ಬರು ಅಪರಿಚಿತರಲ್ಲೊಬ್ಬ ಎಲೆಕ್ಟ್ರಾಳ ತಮ್ಮ ಒರೆಸ್ಟೆಸ್ ಎಂಬ ಸತ್ಯ ತಿಳಿಯುತ್ತದೆ.

ಎಲೆಕ್ಟ್ರಾ

ಹೀಗೆ ಒಂದಾದ ಒರೆಸ್ಟೆಸ್ ಮತ್ತು ಎಲೆಕ್ಟ್ರಾ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಅದರಂತೆ ರಾತ್ರಿ ಸಮಯದಲ್ಲಿ ಅರಮನೆಯ ಹೊರಾಂಗಣದಲ್ಲಿ ಕುಡಿದು ಮೋಜು ಮಾಡುತ್ತಿರುವ ಎಗೀಸ್‌ನ ಕೂಟಕ್ಕೆ, ಒರೆಸ್ಟೆಸ್ ತನ್ನ ಗೆಳೆಯನೊಂದಿಗೆ ದಾರಿಹೋಕರಂತೆ ಸೇರಿಕೊಳ್ಳುತ್ತಾರೆ. ಎಗೀಸ್ ಒರೆಸ್ಟೆಸ್‌ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಕುಡಿದು ಮೈಮರೆತ ಕ್ಷಣದಲ್ಲಿ ಎಗೀಸ್‌ನ ಕೊಲೆಯಾಗುತ್ತಾನೆ.

ಎಗೀಸ್‌ನ ಹೆಣವನ್ನು ಅಕ್ಕ ಎಲೆಕ್ಟ್ರಾಳ ಮನೆಯ ಮುಂದೆ ತಂದಿಡುತ್ತಾನೆ. ಎಲೆಕ್ಟ್ರಾಳ ಸೇಡು ಅಲ್ಲಿಗೆ ತಣಿಯುತ್ತದೆ. ಇದಾದ ತುಸು ಸಮಯಕ್ಕೆ ತಾಯಿ ಕ್ಲಿಟೆಮ್ನೆಸ್ಟ್ರಾ ಎಲೆಕ್ಟ್ರಾಳ ಮನೆಗೆ ಬರುತ್ತಾಳೆ. ಇಬ್ಬರ ನಡುವಿನ ತಪ್ಪು-ಸರಿ ವಾಗ್ವಾದಗಳ ನಂತರ, ಪ್ರಿಯಕರನನ್ನು ಕಾಣಲು ಮನೆಯೊಳಗೆ ಬರಲು, ಎಲೆಕ್ಟ್ರಾ ಮತ್ತು ಒರೆಸ್ಟೆಸ್ ಸೇರಿ ತಾಯಿ ಕ್ಲಿಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾರೆ.

ಈ ಭೀಕರ ಸಂದರ್ಭವನ್ನು ಊರಿನ ಜನರೆಲ್ಲ ತಿಳಿದು ಆಘಾತದಲ್ಲಿರುತ್ತಾರೆ. ಮನೆಯಿಂದ ಹೊರ ಬಂದು ಅಕ್ಕ-ತಮ್ಮರಿಬ್ಬರೂ ನೋವು ಮತ್ತು ದುಃಖದ ಭಾವನೆಯಿಂದ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಹೋಗುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ.

ಮಿಕೇಲ್ ಕಕೊಯಾನೀಸ್: ಮಿಕೇಲ್ ಗ್ರೀಸ್ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಇವರ ಮುಖ್ಯ ಕಥಾವಸ್ತುಗಳೆಂದರೆ ಇತಿಹಾಸ, ಪುರಾಣಗಳು, ಗ್ರೀಕ್ ಟ್ರಾಜಿಡಿಗಳು ಹಾಗೂ ಹೆಣ್ಣು ಮತ್ತು ಸಮಾಜದ ನಡುವಿನ ಸಂಘರ್ಷಗಳು.

ಮಿಕೇಲ್ ಬ್ರಿಟನ್‌ನಲ್ಲಿ ಓದಿ ವಕೀಲರನ್ನಾಗಿಸಲು ಅವರ ತಂದೆ ಇಚ್ಛಿಸಿದ್ದರು. ಆದರೆ ಮಿಕಾಲ್‌ರು ಬಿಬಿಸ್ ವರ್ಲ್ಡ್ ಸರ್ವಿಸ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಿಕಾಲ್‌ರಿಗೆ ದೃಶ್ಯದ ಮಾಧ್ಯಮದ ಪರಿಚಯವಾಯಿತು.

ಇವರು ಮಾಡಿದ ಯೂರಿಪಿಡೀಸ್‌ರ ಟ್ರಿಯಾಲಜಿಯಲ್ಲಿ ಎಲೆಕ್ಟ್ರಾ (1962), ದಿ ಟ್ರೋಜನ್ ವಿಮೆನ್(1971) ಮತ್ತು ಇಪಿಜೆನಿಯಾ (1977) ಸಿನಿಮಾಗಳಿವೆ. ದಿ ಟ್ರೋಜನ್ ವಿಮೆನ್ ಸಿನಿಮಾದಲ್ಲಿ ಟ್ರಾಯ್ ನಗರದ ಧ್ವಂಸದ ನಂತರದಲ್ಲಿ ಯುದ್ಧದಿಂದ ಕದಡಿದ ಮಹಿಳೆಯರ ಮುಖ್ಯವಾದ ಕಥಾನಕವಿದೆ.

ಮಿಕೇಲ್ ಕಕೊಯಾನೀಸ್

ಮಿಕೇಲ್, ನಾಟಕಗಳಾಗಿದ್ದ ಗ್ರೀಕ್ ಟ್ರಾಜಿಡಿಗಳನ್ನು ಅತ್ಯಂತ ಬಿಗಿಯಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಕಕೊಯಾನೀಸ್‌ರ ಸಿನಿಮಾಟೋಗ್ರಾಫರ್ ವಲ್ಟರ್ ಲೆಸೆಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಹೇಳುವಂತೆ, ’ಮಿಕೇಲ್ ಅವರು ಸ್ಕ್ರಿಪ್ಟ್‌ನಲ್ಲಿ ಪ್ರತಿ ಪುಟ್ಟ ವಿವರಣೆಗಳನ್ನು ಬರೆದುಕೊಂಡಿರುತ್ತಾರೆ. ಪ್ರತಿ ಶಾಟ್ ಹೇಗಿರಬೇಕೆಂದು ಶೂಟಿಂಗ್‌ಗೆ ಬರುವ ಮೊದಲೇ ನಿರ್ಧರಿಸಲಾಗಿರುತ್ತದೆ.

ನಟನಟಿಯರ ಹಾವ-ಭಾವಗಳು, ಭಂಗಿಗಳು, ಕ್ಯಾಮರಾದ ಮುಂದೆ ಅವರ ಚಲನವಲನಗಳನ್ನು ನಿರ್ದೇಶಕರ ಮಿಕೇಲ್‌ರ ಇಚ್ಛೆಯಂತೆ ನಡೆಯುತ್ತಿತ್ತು. ಯಾವುದೇ ರೀತಿಯ ಗೊಂದಲ, ಬದಲಾವಣೆ ಇರುತ್ತಿರಲಿಲ್ಲ.’

ಮಿಕೇಲ್ ಅವರು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ ಫಿಲ್ಮ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣದಿಂದಲೇ ಎಲ್ಲವನ್ನು ಮೊದಲೇ ಪ್ಲಾನ್ ಮಾಡಬೇಕಿತ್ತು. ಯಾವುದೇ ಒಂದು ತಪ್ಪಾದರೂ ಅಥವಾ ಅನಗತ್ಯ ಶಾಟ್‌ನಿಂದ ಫಿಲ್ಮ್ ರೀಲ್ ವ್ಯರ್ಥವಾಗುತ್ತಿತ್ತು. ಇದೇ ಕಾರಣದಿಂದ ನಿರ್ದೇಶಕ ಮಿಕೇಲ್ ಅವರಿಗೆ ತಮ್ಮ ಸಿನಿಮಾಗಳ ದೃಶ್ಯಗಳ ಮೇಲಿರುವ ಸ್ಪಷ್ಟತೆ ಮತ್ತು ಹಿಡಿತವನ್ನು ಅವರ ಎಲ್ಲ ಸಿನಿಮಾಗಳಲ್ಲಿ ನೋಡಬಹುದು.

ಮಿಕೇಲ್ ಗ್ರೀಕ್ ಸಿನಿಮಾಲೋಕದಲ್ಲಿ ಮಾಸ್ಟರ್. ಇವರ ಎಲ್ಲ ಸಿನಿಮಾಗಳು ಸಿನಿಮಾ ರಸಿಕರಿಗೆ ರಸದೌತಣವಾದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಕಲಿಸುವ ಪಠ್ಯಪುಸ್ತಕಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...