Homeಅಂಕಣಗಳುಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

- Advertisement -
- Advertisement -

ಇಫಿಗೆನಿಯಾ (1977): ಕ್ರಿಸ್ತ ಪೂರ್ವ 1250ರಲ್ಲಿ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವೆ ನಡೆದಿರಬಹುದೆಂದು ನಂಬಲಾದ ಮಹಾಸಮರದ ಕುರಿತು ಜನಪದ ಗೀತೆಗಳ ಸಂಗ್ರಹದ ಮೂಲಕ ಮುಂದೆಸಾಗಿ ಕ್ರಿ.ಪೂ 800ರಲ್ಲಿ ಹೋಮರ್ ಎಂಬ ಕುರುಡು ಹಾಡುಗಾರನ ಹಾಡುಗಳನ್ನು ದಾಖಲಿಸಲು ನಡೆದ ಪ್ರಯತ್ನದಲ್ಲಿ ಗ್ರೀಕ್ ಲಿಪಿ ಹುಟ್ಟಿತು ಎನ್ನಲಾಗುತ್ತದೆ. ಹೀಗೆ ಹುಟ್ಟಿಕೊಂಡ ಮೊದಲ ಮಹಾಕಾವ್ಯಗಳೇ ಇಲಿಯಡ್ ಮತ್ತು ಒಡಿಸ್ಸಿ (ಗ್ರೀಕ್ ಟ್ರಾಜಿಡೀಸ್).

ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಹಾಡುಗಳ ರೂಪದಲ್ಲಿದ್ದು, ಗ್ರೀಕ್ ಯೋಧರ ವೀರತ್ವ ಹಾಗೂ ತ್ಯಾಗ ಬಲಿದಾನಗಳ ಕುರಿತ ದಾಖಲೆಯಾಗಿದೆ. ಹತ್ತು ವರ್ಷಗಳ ಸತತವಾಗಿ ಸಾಗಿದ ಮಹಾಸಮರ ಶುರುವಾಗಿದ್ದಕ್ಕೆ ಕಾರಣ: ಗ್ರೀಸ್ ದೇಶದ ರಾಜ ಆಗಮೆಮ್‌ನೊನ್‌ನ (ಮಿಕೇನ್ ರಾಜ್ಯ) ಸಹೋದರ ಮೆನೆಲಾಯ್‌ನ (ಸ್ಪಾರ್ಥ ರಾಜ್ಯ) ಹೆಂಡತಿಯಾದ ಮಹಾಸುಂದರಿ ಹೆಲೆನಾಳನ್ನು ಟ್ರಾಯ್ ದೇಶದ ರಾಜಕುಮಾರ ಪಾರೀಸ್ ಅಪಹರಿಸಿಕೊಂಡುಹೋಗಿರುವುದು.

ಇಫಿಗೆನಿಯಾ ಸಿನಿಮಾ ಶುರುವಾಗುವುದು ಹೆಲೆನಾಳ ಅಪಹರಣದ ಪರಿಣಾಮವಾಗಿ ಆಗಮೆಮ್‌ನೊನ್ ಮತ್ತು ಮೆನೆಲಾಯ್ ಟ್ರಾಯ್ ದೇಶದ ವಿರುದ್ಧ ಯುದ್ಧ ಸಾರಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಮತ್ತು ಸಾವಿರಾರು ಸೈನಿಕರು ಟ್ರಾಯ್‌ನತ್ತ ಸಾಗಲು ಸಿದ್ಧರಾಗುವುದರಿಂದ. ಆದರೆ ಆಗಮೆಮ್‌ನೊನ್ ಬೇಟೆಯಾಡುವಾಗ ಪವಿತ್ರವಾದ ಸ್ಥಳದಲ್ಲಿ ಜಿಂಕೆಯನ್ನು ಕೊಂದಿದ್ದರಿಂದ ಪಡೆಯುವ ಶಾಪದಿಂದ ಹಡಗುಗಳು ಮುಂದೆಸಾಗಲು ಗಾಳಿ ಇಲ್ಲದಂತಾಗುತ್ತದೆ.

ಇಫಿಗೆನಿಯಾ

ಆಗ ದೈವವಾಣಿಯಾಗಿ ಬರುವ ಪರಿಹಾರ ಆಗಮೆಮ್‌ನೊನ್‌ನ ಮೊದಲ ಮುದ್ದಿನ ಮಗಳಾದ ಇಫಿಗೆನಿಯಾಳನ್ನು ಬಲಿ ನೀಡಿದರೆ ಮಾತ್ರ ಟ್ರಾಯ್‌ನತ್ತ ಹಡಗುಗಳು ಸಾಗಲು ಗಾಳಿ ಬೀಸುತ್ತದೆ ಎಂಬುದು. ಇದನ್ನು ಕೇಳಿ ಆತಂಕ ಮತ್ತು ಧರ್ಮಸಂಕಟದಲ್ಲಿ ಆಗಮೆಮ್‌ನೊನ್ ಸಿಲುಕುತ್ತಾನೆ. ಗ್ರೀಸಿನ ಗೌರವಕ್ಕಾಗಿ ತನ್ನ ಮುದ್ದಿನ ಮಗಳನ್ನು ಕೊಲ್ಲುವ ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ.

ಸಾವಿರಾರು ಸೈನಿಕರ ಯುದ್ಧಾಕ್ರೋಶದ ಮುಂದೆ ತಲೆ ಬಾಗುವ ಆಗಮೆಮ್‌ನೊನ್ ಇಫಿಗೆನಿಯಾಳಿಗೆ ತಾನಿರುವ ಸ್ಥಳಕ್ಕೆ ಬರುವಂತೆ ಸುದ್ದಿ ಕಳಿಸುತ್ತಾನೆ. ಸುದ್ದಿ ಕೊಂಡೊಯ್ಯುವವನ ಬಳಿಯಲ್ಲಿ ’ಇಫಿಗೆನಿಯಾಳಿಗೆ ಮತ್ತು ನೆರೆಯ ರಾಜ್ಯದ ಆಕಿಲೀಸ್‌ನಿಗೆ ಮದುವೆಯೆಂದು’ ಸುಳ್ಳು ಹೇಳಲು ತಿಳಿಸಿರುತ್ತಾನೆ. ಇದನ್ನು ನಿಜವೆಂದುಕೊಂಡ ಆಗಮೆಮ್‌ನೊನ್‌ನ ಹೆಂಡತಿ ಕ್ಲಿಟೆಮ್ನೆಸ್ಟ್ರಾ ತನ್ನ ಮಕ್ಕಳೊಂದಿಗೆ ಬರುತ್ತಾಳೆ.

ಈ ಬರಸಿಡಿಲಿನಂತ ನಿರ್ಧಾರದಿಂದ ಆಗಮೆಮ್‌ನೊನ್ ತಳಮಳ ಸಿನಿಮಾದ ಮೊದಲ ಭಾಗ ಹಿಡಿದಿಟ್ಟರೆ, ಒಮ್ಮೆ ಮಗಳು ಇಪಿಜೆನಿಯಾ ಮತ್ತು ಹೆಂಡತಿ ಕ್ಲಿಟೆಮ್ನೆಸ್ಟ್ರಾ ಬಂದ ನಂತರ ಈ ಸುದ್ದಿ ತಿಳಿದು ಉಂಟಾಗುವ ಸಂಘರ್ಷ ಮತ್ತು ಆಗಮೆಮ್‌ನೊನ್ ಅಸಹಾಯಕತೆಯನ್ನು ಸಿನಿಮಾದ ಕೊನೆಯವರೆಗೂ ಕಟ್ಟಲಾಗಿದೆ.

ಸಾವಿರಾರು ಸೈನಿಕರು ಯುದ್ದದ ರೋಷಾಗ್ನಿಯಿಂದ ಇಫಿಗೆನಿಯಾಳ ಬಲಿಗಾಗಿ ಕೂಗಾಟ ಕಿರುಚಾಟಗಳ ಮಧ್ಯೆ, ಇಪಿಜೆನಿಯಾಳಿಗೆ ಬೇರೆ ದಾರಿಯಿಲ್ಲದೆ ’ಮದುವೆಗೆಂದು ಬಂದೆ, ಈ ಸಾವೇ ನನ್ನ ಮದುವೆ, ನಿಮ್ಮ ಯುದ್ದದ ಗೆಲ್ಲುವೆ ನನ್ನ ಮಕ್ಕಳು’ ಎಂದು ಹೇಳಿ ಬಲಿಪೀಠದತ್ತ ಸಾಗುತ್ತಾಳೆ.

ಒಂದು ಕಡೆ ಆಸಹಾಯಕತೆಯಲ್ಲಿ ನಿಂತು ನೋಡುತ್ತಿರುವ ಆಗಮೆಮ್‌ನೊನ್, ಕೋಪದಲ್ಲಿ ಕುದಿಯುತ್ತಿರುವ ಕ್ಲಿಟೆಮ್ನೆಸ್ಟ್ರಾ ಇನ್ನೊಂದು ಕಡೆ. ಕೊನೆಗೆ ಗಾಳಿ ಬೀಸಲಾರಂಭಿಸುತ್ತದೆ. ಸೈನಿಕರು ಮತ್ತು ಹಡಗುಗಳು ಯುದ್ಧದ ಉತ್ಸಾಹದಿಂದ ಟ್ರಾಯ್‌ನತ್ತ ಸಾಗುತ್ತಾರೆ. ಕ್ಲಿಟೆಮ್ನೆಸ್ಟ್ರಾಳ ಕೋಪ ಸೇಡಿನ ರೂಪಾಂತರವಾಗುವುದೆಂಬ ಊಹೆಯಲ್ಲಿಯೇ ಸಿನಿಮಾದ ಅಂತ್ಯ.

ಎಲೆಕ್ಟ್ರಾ (1962): ಇಫಿಗೆನಿಯಾಳ ಬಲಿಯ ನಂತರ ಆಗಮೆಮ್‌ನೊನ್ ಟ್ರಾಯ್‌ನ ಮೇಲೆ ಮಾಡಿದ ಹತ್ತು ವರ್ಷಗಳ ಮಹಾಸಮರವನ್ನು ಮುಗಿಸಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಸ್ನಾನದ ಕೋಣೆಯಲ್ಲಿ ಹೆಂಡತಿ ಕ್ಲಿಟೆಮ್ನೆಸ್ಟ್ರಾ ಮತ್ತು ಅವಳ ಪ್ರಿಯಕರ ಎಗೀಸ್‌ನ ಸಹಾಯದಿಂದ ಆಗಮೆಮ್‌ನೊನ್‌ನನ್ನು ಕೊಲ್ಲುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಾಳೆ.

ಕ್ಲಿಟೆಮ್ನೆಸ್ಟ್ರಾ ಆಗಮೆಮ್‌ನೊನ್‌ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಿಯಕರನೊಂದಿಗೆ ಇರುವುದನ್ನು ಗಮನಿಸುವ ಆಕೆಯ ಮಗ ಒರೆಸ್ಟೆಸ್ ಹಲವು ವರ್ಷಗಳ ಮೊದಲೇ ಅರಮನೆಯಿಂದ ದೂರವಾಗಿ ತನ್ನ ಗುರುವಿನ ಬಳಿ ರಾಜತಂತ್ರಗಳನ್ನು ಕಲಿಯುತ್ತಿರುತ್ತಾನೆ. ಅರಮನೆಯಲ್ಲಿ ಉಳಿದಿದ್ದು ಮಗಳು ಎಕ್ಟ್ರಾ.

ಆಗಮೆಮ್‌ನೊನ್‌ನ ಸಾವಿನ ನಂತರ ಮಗಳನ್ನು ಅವಮಾನಿಸಲು, ಅವಳ ಕೂದಲನ್ನು ಕತ್ತರಿಸಿ ಬಡ ಮುದಿ ರೈತನೊಂದಿಗೆ ಮದುವೆ ಮಾಡಿಸಿ ಕ್ಲಿಟೆಮ್ನೆಸ್ಟ್ರಾ ಮತ್ತು ಪ್ರಿಯಕರ ಎಗೀಸ್ ಆಕೆಯನ್ನು ರಾಜ್ಯದಿಂದ ಹೊರತಳ್ಳುತ್ತಾರೆ. ಇದರಿಂದ ನೊಂದ ಎಲೆಕ್ಟ್ರಾ ತನ್ನ ತಮ್ಮ ಒಂದು ದಿನ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿಯೇ ಹಳ್ಳಿಯೊಂದರಲ್ಲಿ ಬದುಕುತ್ತಿರುತ್ತಾಳೆ, ಊರಿನ ಹೆಂಗಸರೆಲ್ಲಾ ಎಲೆಕ್ಟ್ರಾಳಿಗೆ ಸಹಾಯ ಮಾಡುತ್ತಿರುತ್ತಾರೆ.

ಕೊನೆಗೊಂದು ದಿನ ತಮ್ಮ ಒರೆಸ್ಟೆಸ್‌ನ ಕಡೆಯವರೆಂದು ಹೇಳಿಕೊಂಡು ಬರುವ ಇಬ್ಬರು ಅಪರಿಚಿತರು ಎಲೆಕ್ಟ್ರಾಳನ್ನು ಭೇಟಿಯಾಗುತ್ತಾರೆ. ಆಗ ತನ್ನ ತಂದೆ ಆಗಮೆಮ್‌ನೊನ್‌ನ ಸಹಾಯಕನಾಗಿದ್ದ ಕುರುಡ ಮುದುಕನೊಬ್ಬನ ಸಹಾಯದಿಂದ, ಆ ಇಬ್ಬರು ಅಪರಿಚಿತರಲ್ಲೊಬ್ಬ ಎಲೆಕ್ಟ್ರಾಳ ತಮ್ಮ ಒರೆಸ್ಟೆಸ್ ಎಂಬ ಸತ್ಯ ತಿಳಿಯುತ್ತದೆ.

ಎಲೆಕ್ಟ್ರಾ

ಹೀಗೆ ಒಂದಾದ ಒರೆಸ್ಟೆಸ್ ಮತ್ತು ಎಲೆಕ್ಟ್ರಾ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಅದರಂತೆ ರಾತ್ರಿ ಸಮಯದಲ್ಲಿ ಅರಮನೆಯ ಹೊರಾಂಗಣದಲ್ಲಿ ಕುಡಿದು ಮೋಜು ಮಾಡುತ್ತಿರುವ ಎಗೀಸ್‌ನ ಕೂಟಕ್ಕೆ, ಒರೆಸ್ಟೆಸ್ ತನ್ನ ಗೆಳೆಯನೊಂದಿಗೆ ದಾರಿಹೋಕರಂತೆ ಸೇರಿಕೊಳ್ಳುತ್ತಾರೆ. ಎಗೀಸ್ ಒರೆಸ್ಟೆಸ್‌ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಕುಡಿದು ಮೈಮರೆತ ಕ್ಷಣದಲ್ಲಿ ಎಗೀಸ್‌ನ ಕೊಲೆಯಾಗುತ್ತಾನೆ.

ಎಗೀಸ್‌ನ ಹೆಣವನ್ನು ಅಕ್ಕ ಎಲೆಕ್ಟ್ರಾಳ ಮನೆಯ ಮುಂದೆ ತಂದಿಡುತ್ತಾನೆ. ಎಲೆಕ್ಟ್ರಾಳ ಸೇಡು ಅಲ್ಲಿಗೆ ತಣಿಯುತ್ತದೆ. ಇದಾದ ತುಸು ಸಮಯಕ್ಕೆ ತಾಯಿ ಕ್ಲಿಟೆಮ್ನೆಸ್ಟ್ರಾ ಎಲೆಕ್ಟ್ರಾಳ ಮನೆಗೆ ಬರುತ್ತಾಳೆ. ಇಬ್ಬರ ನಡುವಿನ ತಪ್ಪು-ಸರಿ ವಾಗ್ವಾದಗಳ ನಂತರ, ಪ್ರಿಯಕರನನ್ನು ಕಾಣಲು ಮನೆಯೊಳಗೆ ಬರಲು, ಎಲೆಕ್ಟ್ರಾ ಮತ್ತು ಒರೆಸ್ಟೆಸ್ ಸೇರಿ ತಾಯಿ ಕ್ಲಿಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾರೆ.

ಈ ಭೀಕರ ಸಂದರ್ಭವನ್ನು ಊರಿನ ಜನರೆಲ್ಲ ತಿಳಿದು ಆಘಾತದಲ್ಲಿರುತ್ತಾರೆ. ಮನೆಯಿಂದ ಹೊರ ಬಂದು ಅಕ್ಕ-ತಮ್ಮರಿಬ್ಬರೂ ನೋವು ಮತ್ತು ದುಃಖದ ಭಾವನೆಯಿಂದ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಹೋಗುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ.

ಮಿಕೇಲ್ ಕಕೊಯಾನೀಸ್: ಮಿಕೇಲ್ ಗ್ರೀಸ್ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಇವರ ಮುಖ್ಯ ಕಥಾವಸ್ತುಗಳೆಂದರೆ ಇತಿಹಾಸ, ಪುರಾಣಗಳು, ಗ್ರೀಕ್ ಟ್ರಾಜಿಡಿಗಳು ಹಾಗೂ ಹೆಣ್ಣು ಮತ್ತು ಸಮಾಜದ ನಡುವಿನ ಸಂಘರ್ಷಗಳು.

ಮಿಕೇಲ್ ಬ್ರಿಟನ್‌ನಲ್ಲಿ ಓದಿ ವಕೀಲರನ್ನಾಗಿಸಲು ಅವರ ತಂದೆ ಇಚ್ಛಿಸಿದ್ದರು. ಆದರೆ ಮಿಕಾಲ್‌ರು ಬಿಬಿಸ್ ವರ್ಲ್ಡ್ ಸರ್ವಿಸ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಿಕಾಲ್‌ರಿಗೆ ದೃಶ್ಯದ ಮಾಧ್ಯಮದ ಪರಿಚಯವಾಯಿತು.

ಇವರು ಮಾಡಿದ ಯೂರಿಪಿಡೀಸ್‌ರ ಟ್ರಿಯಾಲಜಿಯಲ್ಲಿ ಎಲೆಕ್ಟ್ರಾ (1962), ದಿ ಟ್ರೋಜನ್ ವಿಮೆನ್(1971) ಮತ್ತು ಇಪಿಜೆನಿಯಾ (1977) ಸಿನಿಮಾಗಳಿವೆ. ದಿ ಟ್ರೋಜನ್ ವಿಮೆನ್ ಸಿನಿಮಾದಲ್ಲಿ ಟ್ರಾಯ್ ನಗರದ ಧ್ವಂಸದ ನಂತರದಲ್ಲಿ ಯುದ್ಧದಿಂದ ಕದಡಿದ ಮಹಿಳೆಯರ ಮುಖ್ಯವಾದ ಕಥಾನಕವಿದೆ.

ಮಿಕೇಲ್ ಕಕೊಯಾನೀಸ್

ಮಿಕೇಲ್, ನಾಟಕಗಳಾಗಿದ್ದ ಗ್ರೀಕ್ ಟ್ರಾಜಿಡಿಗಳನ್ನು ಅತ್ಯಂತ ಬಿಗಿಯಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಕಕೊಯಾನೀಸ್‌ರ ಸಿನಿಮಾಟೋಗ್ರಾಫರ್ ವಲ್ಟರ್ ಲೆಸೆಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಹೇಳುವಂತೆ, ’ಮಿಕೇಲ್ ಅವರು ಸ್ಕ್ರಿಪ್ಟ್‌ನಲ್ಲಿ ಪ್ರತಿ ಪುಟ್ಟ ವಿವರಣೆಗಳನ್ನು ಬರೆದುಕೊಂಡಿರುತ್ತಾರೆ. ಪ್ರತಿ ಶಾಟ್ ಹೇಗಿರಬೇಕೆಂದು ಶೂಟಿಂಗ್‌ಗೆ ಬರುವ ಮೊದಲೇ ನಿರ್ಧರಿಸಲಾಗಿರುತ್ತದೆ.

ನಟನಟಿಯರ ಹಾವ-ಭಾವಗಳು, ಭಂಗಿಗಳು, ಕ್ಯಾಮರಾದ ಮುಂದೆ ಅವರ ಚಲನವಲನಗಳನ್ನು ನಿರ್ದೇಶಕರ ಮಿಕೇಲ್‌ರ ಇಚ್ಛೆಯಂತೆ ನಡೆಯುತ್ತಿತ್ತು. ಯಾವುದೇ ರೀತಿಯ ಗೊಂದಲ, ಬದಲಾವಣೆ ಇರುತ್ತಿರಲಿಲ್ಲ.’

ಮಿಕೇಲ್ ಅವರು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ ಫಿಲ್ಮ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣದಿಂದಲೇ ಎಲ್ಲವನ್ನು ಮೊದಲೇ ಪ್ಲಾನ್ ಮಾಡಬೇಕಿತ್ತು. ಯಾವುದೇ ಒಂದು ತಪ್ಪಾದರೂ ಅಥವಾ ಅನಗತ್ಯ ಶಾಟ್‌ನಿಂದ ಫಿಲ್ಮ್ ರೀಲ್ ವ್ಯರ್ಥವಾಗುತ್ತಿತ್ತು. ಇದೇ ಕಾರಣದಿಂದ ನಿರ್ದೇಶಕ ಮಿಕೇಲ್ ಅವರಿಗೆ ತಮ್ಮ ಸಿನಿಮಾಗಳ ದೃಶ್ಯಗಳ ಮೇಲಿರುವ ಸ್ಪಷ್ಟತೆ ಮತ್ತು ಹಿಡಿತವನ್ನು ಅವರ ಎಲ್ಲ ಸಿನಿಮಾಗಳಲ್ಲಿ ನೋಡಬಹುದು.

ಮಿಕೇಲ್ ಗ್ರೀಕ್ ಸಿನಿಮಾಲೋಕದಲ್ಲಿ ಮಾಸ್ಟರ್. ಇವರ ಎಲ್ಲ ಸಿನಿಮಾಗಳು ಸಿನಿಮಾ ರಸಿಕರಿಗೆ ರಸದೌತಣವಾದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಕಲಿಸುವ ಪಠ್ಯಪುಸ್ತಕಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...