Homeಅಂಕಣಗಳುಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

- Advertisement -
- Advertisement -

ಇಫಿಗೆನಿಯಾ (1977): ಕ್ರಿಸ್ತ ಪೂರ್ವ 1250ರಲ್ಲಿ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವೆ ನಡೆದಿರಬಹುದೆಂದು ನಂಬಲಾದ ಮಹಾಸಮರದ ಕುರಿತು ಜನಪದ ಗೀತೆಗಳ ಸಂಗ್ರಹದ ಮೂಲಕ ಮುಂದೆಸಾಗಿ ಕ್ರಿ.ಪೂ 800ರಲ್ಲಿ ಹೋಮರ್ ಎಂಬ ಕುರುಡು ಹಾಡುಗಾರನ ಹಾಡುಗಳನ್ನು ದಾಖಲಿಸಲು ನಡೆದ ಪ್ರಯತ್ನದಲ್ಲಿ ಗ್ರೀಕ್ ಲಿಪಿ ಹುಟ್ಟಿತು ಎನ್ನಲಾಗುತ್ತದೆ. ಹೀಗೆ ಹುಟ್ಟಿಕೊಂಡ ಮೊದಲ ಮಹಾಕಾವ್ಯಗಳೇ ಇಲಿಯಡ್ ಮತ್ತು ಒಡಿಸ್ಸಿ (ಗ್ರೀಕ್ ಟ್ರಾಜಿಡೀಸ್).

ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಹಾಡುಗಳ ರೂಪದಲ್ಲಿದ್ದು, ಗ್ರೀಕ್ ಯೋಧರ ವೀರತ್ವ ಹಾಗೂ ತ್ಯಾಗ ಬಲಿದಾನಗಳ ಕುರಿತ ದಾಖಲೆಯಾಗಿದೆ. ಹತ್ತು ವರ್ಷಗಳ ಸತತವಾಗಿ ಸಾಗಿದ ಮಹಾಸಮರ ಶುರುವಾಗಿದ್ದಕ್ಕೆ ಕಾರಣ: ಗ್ರೀಸ್ ದೇಶದ ರಾಜ ಆಗಮೆಮ್‌ನೊನ್‌ನ (ಮಿಕೇನ್ ರಾಜ್ಯ) ಸಹೋದರ ಮೆನೆಲಾಯ್‌ನ (ಸ್ಪಾರ್ಥ ರಾಜ್ಯ) ಹೆಂಡತಿಯಾದ ಮಹಾಸುಂದರಿ ಹೆಲೆನಾಳನ್ನು ಟ್ರಾಯ್ ದೇಶದ ರಾಜಕುಮಾರ ಪಾರೀಸ್ ಅಪಹರಿಸಿಕೊಂಡುಹೋಗಿರುವುದು.

ಇಫಿಗೆನಿಯಾ ಸಿನಿಮಾ ಶುರುವಾಗುವುದು ಹೆಲೆನಾಳ ಅಪಹರಣದ ಪರಿಣಾಮವಾಗಿ ಆಗಮೆಮ್‌ನೊನ್ ಮತ್ತು ಮೆನೆಲಾಯ್ ಟ್ರಾಯ್ ದೇಶದ ವಿರುದ್ಧ ಯುದ್ಧ ಸಾರಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಮತ್ತು ಸಾವಿರಾರು ಸೈನಿಕರು ಟ್ರಾಯ್‌ನತ್ತ ಸಾಗಲು ಸಿದ್ಧರಾಗುವುದರಿಂದ. ಆದರೆ ಆಗಮೆಮ್‌ನೊನ್ ಬೇಟೆಯಾಡುವಾಗ ಪವಿತ್ರವಾದ ಸ್ಥಳದಲ್ಲಿ ಜಿಂಕೆಯನ್ನು ಕೊಂದಿದ್ದರಿಂದ ಪಡೆಯುವ ಶಾಪದಿಂದ ಹಡಗುಗಳು ಮುಂದೆಸಾಗಲು ಗಾಳಿ ಇಲ್ಲದಂತಾಗುತ್ತದೆ.

ಇಫಿಗೆನಿಯಾ

ಆಗ ದೈವವಾಣಿಯಾಗಿ ಬರುವ ಪರಿಹಾರ ಆಗಮೆಮ್‌ನೊನ್‌ನ ಮೊದಲ ಮುದ್ದಿನ ಮಗಳಾದ ಇಫಿಗೆನಿಯಾಳನ್ನು ಬಲಿ ನೀಡಿದರೆ ಮಾತ್ರ ಟ್ರಾಯ್‌ನತ್ತ ಹಡಗುಗಳು ಸಾಗಲು ಗಾಳಿ ಬೀಸುತ್ತದೆ ಎಂಬುದು. ಇದನ್ನು ಕೇಳಿ ಆತಂಕ ಮತ್ತು ಧರ್ಮಸಂಕಟದಲ್ಲಿ ಆಗಮೆಮ್‌ನೊನ್ ಸಿಲುಕುತ್ತಾನೆ. ಗ್ರೀಸಿನ ಗೌರವಕ್ಕಾಗಿ ತನ್ನ ಮುದ್ದಿನ ಮಗಳನ್ನು ಕೊಲ್ಲುವ ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ.

ಸಾವಿರಾರು ಸೈನಿಕರ ಯುದ್ಧಾಕ್ರೋಶದ ಮುಂದೆ ತಲೆ ಬಾಗುವ ಆಗಮೆಮ್‌ನೊನ್ ಇಫಿಗೆನಿಯಾಳಿಗೆ ತಾನಿರುವ ಸ್ಥಳಕ್ಕೆ ಬರುವಂತೆ ಸುದ್ದಿ ಕಳಿಸುತ್ತಾನೆ. ಸುದ್ದಿ ಕೊಂಡೊಯ್ಯುವವನ ಬಳಿಯಲ್ಲಿ ’ಇಫಿಗೆನಿಯಾಳಿಗೆ ಮತ್ತು ನೆರೆಯ ರಾಜ್ಯದ ಆಕಿಲೀಸ್‌ನಿಗೆ ಮದುವೆಯೆಂದು’ ಸುಳ್ಳು ಹೇಳಲು ತಿಳಿಸಿರುತ್ತಾನೆ. ಇದನ್ನು ನಿಜವೆಂದುಕೊಂಡ ಆಗಮೆಮ್‌ನೊನ್‌ನ ಹೆಂಡತಿ ಕ್ಲಿಟೆಮ್ನೆಸ್ಟ್ರಾ ತನ್ನ ಮಕ್ಕಳೊಂದಿಗೆ ಬರುತ್ತಾಳೆ.

ಈ ಬರಸಿಡಿಲಿನಂತ ನಿರ್ಧಾರದಿಂದ ಆಗಮೆಮ್‌ನೊನ್ ತಳಮಳ ಸಿನಿಮಾದ ಮೊದಲ ಭಾಗ ಹಿಡಿದಿಟ್ಟರೆ, ಒಮ್ಮೆ ಮಗಳು ಇಪಿಜೆನಿಯಾ ಮತ್ತು ಹೆಂಡತಿ ಕ್ಲಿಟೆಮ್ನೆಸ್ಟ್ರಾ ಬಂದ ನಂತರ ಈ ಸುದ್ದಿ ತಿಳಿದು ಉಂಟಾಗುವ ಸಂಘರ್ಷ ಮತ್ತು ಆಗಮೆಮ್‌ನೊನ್ ಅಸಹಾಯಕತೆಯನ್ನು ಸಿನಿಮಾದ ಕೊನೆಯವರೆಗೂ ಕಟ್ಟಲಾಗಿದೆ.

ಸಾವಿರಾರು ಸೈನಿಕರು ಯುದ್ದದ ರೋಷಾಗ್ನಿಯಿಂದ ಇಫಿಗೆನಿಯಾಳ ಬಲಿಗಾಗಿ ಕೂಗಾಟ ಕಿರುಚಾಟಗಳ ಮಧ್ಯೆ, ಇಪಿಜೆನಿಯಾಳಿಗೆ ಬೇರೆ ದಾರಿಯಿಲ್ಲದೆ ’ಮದುವೆಗೆಂದು ಬಂದೆ, ಈ ಸಾವೇ ನನ್ನ ಮದುವೆ, ನಿಮ್ಮ ಯುದ್ದದ ಗೆಲ್ಲುವೆ ನನ್ನ ಮಕ್ಕಳು’ ಎಂದು ಹೇಳಿ ಬಲಿಪೀಠದತ್ತ ಸಾಗುತ್ತಾಳೆ.

ಒಂದು ಕಡೆ ಆಸಹಾಯಕತೆಯಲ್ಲಿ ನಿಂತು ನೋಡುತ್ತಿರುವ ಆಗಮೆಮ್‌ನೊನ್, ಕೋಪದಲ್ಲಿ ಕುದಿಯುತ್ತಿರುವ ಕ್ಲಿಟೆಮ್ನೆಸ್ಟ್ರಾ ಇನ್ನೊಂದು ಕಡೆ. ಕೊನೆಗೆ ಗಾಳಿ ಬೀಸಲಾರಂಭಿಸುತ್ತದೆ. ಸೈನಿಕರು ಮತ್ತು ಹಡಗುಗಳು ಯುದ್ಧದ ಉತ್ಸಾಹದಿಂದ ಟ್ರಾಯ್‌ನತ್ತ ಸಾಗುತ್ತಾರೆ. ಕ್ಲಿಟೆಮ್ನೆಸ್ಟ್ರಾಳ ಕೋಪ ಸೇಡಿನ ರೂಪಾಂತರವಾಗುವುದೆಂಬ ಊಹೆಯಲ್ಲಿಯೇ ಸಿನಿಮಾದ ಅಂತ್ಯ.

ಎಲೆಕ್ಟ್ರಾ (1962): ಇಫಿಗೆನಿಯಾಳ ಬಲಿಯ ನಂತರ ಆಗಮೆಮ್‌ನೊನ್ ಟ್ರಾಯ್‌ನ ಮೇಲೆ ಮಾಡಿದ ಹತ್ತು ವರ್ಷಗಳ ಮಹಾಸಮರವನ್ನು ಮುಗಿಸಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಸ್ನಾನದ ಕೋಣೆಯಲ್ಲಿ ಹೆಂಡತಿ ಕ್ಲಿಟೆಮ್ನೆಸ್ಟ್ರಾ ಮತ್ತು ಅವಳ ಪ್ರಿಯಕರ ಎಗೀಸ್‌ನ ಸಹಾಯದಿಂದ ಆಗಮೆಮ್‌ನೊನ್‌ನನ್ನು ಕೊಲ್ಲುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಾಳೆ.

ಕ್ಲಿಟೆಮ್ನೆಸ್ಟ್ರಾ ಆಗಮೆಮ್‌ನೊನ್‌ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಿಯಕರನೊಂದಿಗೆ ಇರುವುದನ್ನು ಗಮನಿಸುವ ಆಕೆಯ ಮಗ ಒರೆಸ್ಟೆಸ್ ಹಲವು ವರ್ಷಗಳ ಮೊದಲೇ ಅರಮನೆಯಿಂದ ದೂರವಾಗಿ ತನ್ನ ಗುರುವಿನ ಬಳಿ ರಾಜತಂತ್ರಗಳನ್ನು ಕಲಿಯುತ್ತಿರುತ್ತಾನೆ. ಅರಮನೆಯಲ್ಲಿ ಉಳಿದಿದ್ದು ಮಗಳು ಎಕ್ಟ್ರಾ.

ಆಗಮೆಮ್‌ನೊನ್‌ನ ಸಾವಿನ ನಂತರ ಮಗಳನ್ನು ಅವಮಾನಿಸಲು, ಅವಳ ಕೂದಲನ್ನು ಕತ್ತರಿಸಿ ಬಡ ಮುದಿ ರೈತನೊಂದಿಗೆ ಮದುವೆ ಮಾಡಿಸಿ ಕ್ಲಿಟೆಮ್ನೆಸ್ಟ್ರಾ ಮತ್ತು ಪ್ರಿಯಕರ ಎಗೀಸ್ ಆಕೆಯನ್ನು ರಾಜ್ಯದಿಂದ ಹೊರತಳ್ಳುತ್ತಾರೆ. ಇದರಿಂದ ನೊಂದ ಎಲೆಕ್ಟ್ರಾ ತನ್ನ ತಮ್ಮ ಒಂದು ದಿನ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿಯೇ ಹಳ್ಳಿಯೊಂದರಲ್ಲಿ ಬದುಕುತ್ತಿರುತ್ತಾಳೆ, ಊರಿನ ಹೆಂಗಸರೆಲ್ಲಾ ಎಲೆಕ್ಟ್ರಾಳಿಗೆ ಸಹಾಯ ಮಾಡುತ್ತಿರುತ್ತಾರೆ.

ಕೊನೆಗೊಂದು ದಿನ ತಮ್ಮ ಒರೆಸ್ಟೆಸ್‌ನ ಕಡೆಯವರೆಂದು ಹೇಳಿಕೊಂಡು ಬರುವ ಇಬ್ಬರು ಅಪರಿಚಿತರು ಎಲೆಕ್ಟ್ರಾಳನ್ನು ಭೇಟಿಯಾಗುತ್ತಾರೆ. ಆಗ ತನ್ನ ತಂದೆ ಆಗಮೆಮ್‌ನೊನ್‌ನ ಸಹಾಯಕನಾಗಿದ್ದ ಕುರುಡ ಮುದುಕನೊಬ್ಬನ ಸಹಾಯದಿಂದ, ಆ ಇಬ್ಬರು ಅಪರಿಚಿತರಲ್ಲೊಬ್ಬ ಎಲೆಕ್ಟ್ರಾಳ ತಮ್ಮ ಒರೆಸ್ಟೆಸ್ ಎಂಬ ಸತ್ಯ ತಿಳಿಯುತ್ತದೆ.

ಎಲೆಕ್ಟ್ರಾ

ಹೀಗೆ ಒಂದಾದ ಒರೆಸ್ಟೆಸ್ ಮತ್ತು ಎಲೆಕ್ಟ್ರಾ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಅದರಂತೆ ರಾತ್ರಿ ಸಮಯದಲ್ಲಿ ಅರಮನೆಯ ಹೊರಾಂಗಣದಲ್ಲಿ ಕುಡಿದು ಮೋಜು ಮಾಡುತ್ತಿರುವ ಎಗೀಸ್‌ನ ಕೂಟಕ್ಕೆ, ಒರೆಸ್ಟೆಸ್ ತನ್ನ ಗೆಳೆಯನೊಂದಿಗೆ ದಾರಿಹೋಕರಂತೆ ಸೇರಿಕೊಳ್ಳುತ್ತಾರೆ. ಎಗೀಸ್ ಒರೆಸ್ಟೆಸ್‌ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಕುಡಿದು ಮೈಮರೆತ ಕ್ಷಣದಲ್ಲಿ ಎಗೀಸ್‌ನ ಕೊಲೆಯಾಗುತ್ತಾನೆ.

ಎಗೀಸ್‌ನ ಹೆಣವನ್ನು ಅಕ್ಕ ಎಲೆಕ್ಟ್ರಾಳ ಮನೆಯ ಮುಂದೆ ತಂದಿಡುತ್ತಾನೆ. ಎಲೆಕ್ಟ್ರಾಳ ಸೇಡು ಅಲ್ಲಿಗೆ ತಣಿಯುತ್ತದೆ. ಇದಾದ ತುಸು ಸಮಯಕ್ಕೆ ತಾಯಿ ಕ್ಲಿಟೆಮ್ನೆಸ್ಟ್ರಾ ಎಲೆಕ್ಟ್ರಾಳ ಮನೆಗೆ ಬರುತ್ತಾಳೆ. ಇಬ್ಬರ ನಡುವಿನ ತಪ್ಪು-ಸರಿ ವಾಗ್ವಾದಗಳ ನಂತರ, ಪ್ರಿಯಕರನನ್ನು ಕಾಣಲು ಮನೆಯೊಳಗೆ ಬರಲು, ಎಲೆಕ್ಟ್ರಾ ಮತ್ತು ಒರೆಸ್ಟೆಸ್ ಸೇರಿ ತಾಯಿ ಕ್ಲಿಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾರೆ.

ಈ ಭೀಕರ ಸಂದರ್ಭವನ್ನು ಊರಿನ ಜನರೆಲ್ಲ ತಿಳಿದು ಆಘಾತದಲ್ಲಿರುತ್ತಾರೆ. ಮನೆಯಿಂದ ಹೊರ ಬಂದು ಅಕ್ಕ-ತಮ್ಮರಿಬ್ಬರೂ ನೋವು ಮತ್ತು ದುಃಖದ ಭಾವನೆಯಿಂದ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಹೋಗುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ.

ಮಿಕೇಲ್ ಕಕೊಯಾನೀಸ್: ಮಿಕೇಲ್ ಗ್ರೀಸ್ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಇವರ ಮುಖ್ಯ ಕಥಾವಸ್ತುಗಳೆಂದರೆ ಇತಿಹಾಸ, ಪುರಾಣಗಳು, ಗ್ರೀಕ್ ಟ್ರಾಜಿಡಿಗಳು ಹಾಗೂ ಹೆಣ್ಣು ಮತ್ತು ಸಮಾಜದ ನಡುವಿನ ಸಂಘರ್ಷಗಳು.

ಮಿಕೇಲ್ ಬ್ರಿಟನ್‌ನಲ್ಲಿ ಓದಿ ವಕೀಲರನ್ನಾಗಿಸಲು ಅವರ ತಂದೆ ಇಚ್ಛಿಸಿದ್ದರು. ಆದರೆ ಮಿಕಾಲ್‌ರು ಬಿಬಿಸ್ ವರ್ಲ್ಡ್ ಸರ್ವಿಸ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಿಕಾಲ್‌ರಿಗೆ ದೃಶ್ಯದ ಮಾಧ್ಯಮದ ಪರಿಚಯವಾಯಿತು.

ಇವರು ಮಾಡಿದ ಯೂರಿಪಿಡೀಸ್‌ರ ಟ್ರಿಯಾಲಜಿಯಲ್ಲಿ ಎಲೆಕ್ಟ್ರಾ (1962), ದಿ ಟ್ರೋಜನ್ ವಿಮೆನ್(1971) ಮತ್ತು ಇಪಿಜೆನಿಯಾ (1977) ಸಿನಿಮಾಗಳಿವೆ. ದಿ ಟ್ರೋಜನ್ ವಿಮೆನ್ ಸಿನಿಮಾದಲ್ಲಿ ಟ್ರಾಯ್ ನಗರದ ಧ್ವಂಸದ ನಂತರದಲ್ಲಿ ಯುದ್ಧದಿಂದ ಕದಡಿದ ಮಹಿಳೆಯರ ಮುಖ್ಯವಾದ ಕಥಾನಕವಿದೆ.

ಮಿಕೇಲ್ ಕಕೊಯಾನೀಸ್

ಮಿಕೇಲ್, ನಾಟಕಗಳಾಗಿದ್ದ ಗ್ರೀಕ್ ಟ್ರಾಜಿಡಿಗಳನ್ನು ಅತ್ಯಂತ ಬಿಗಿಯಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಕಕೊಯಾನೀಸ್‌ರ ಸಿನಿಮಾಟೋಗ್ರಾಫರ್ ವಲ್ಟರ್ ಲೆಸೆಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಹೇಳುವಂತೆ, ’ಮಿಕೇಲ್ ಅವರು ಸ್ಕ್ರಿಪ್ಟ್‌ನಲ್ಲಿ ಪ್ರತಿ ಪುಟ್ಟ ವಿವರಣೆಗಳನ್ನು ಬರೆದುಕೊಂಡಿರುತ್ತಾರೆ. ಪ್ರತಿ ಶಾಟ್ ಹೇಗಿರಬೇಕೆಂದು ಶೂಟಿಂಗ್‌ಗೆ ಬರುವ ಮೊದಲೇ ನಿರ್ಧರಿಸಲಾಗಿರುತ್ತದೆ.

ನಟನಟಿಯರ ಹಾವ-ಭಾವಗಳು, ಭಂಗಿಗಳು, ಕ್ಯಾಮರಾದ ಮುಂದೆ ಅವರ ಚಲನವಲನಗಳನ್ನು ನಿರ್ದೇಶಕರ ಮಿಕೇಲ್‌ರ ಇಚ್ಛೆಯಂತೆ ನಡೆಯುತ್ತಿತ್ತು. ಯಾವುದೇ ರೀತಿಯ ಗೊಂದಲ, ಬದಲಾವಣೆ ಇರುತ್ತಿರಲಿಲ್ಲ.’

ಮಿಕೇಲ್ ಅವರು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ ಫಿಲ್ಮ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣದಿಂದಲೇ ಎಲ್ಲವನ್ನು ಮೊದಲೇ ಪ್ಲಾನ್ ಮಾಡಬೇಕಿತ್ತು. ಯಾವುದೇ ಒಂದು ತಪ್ಪಾದರೂ ಅಥವಾ ಅನಗತ್ಯ ಶಾಟ್‌ನಿಂದ ಫಿಲ್ಮ್ ರೀಲ್ ವ್ಯರ್ಥವಾಗುತ್ತಿತ್ತು. ಇದೇ ಕಾರಣದಿಂದ ನಿರ್ದೇಶಕ ಮಿಕೇಲ್ ಅವರಿಗೆ ತಮ್ಮ ಸಿನಿಮಾಗಳ ದೃಶ್ಯಗಳ ಮೇಲಿರುವ ಸ್ಪಷ್ಟತೆ ಮತ್ತು ಹಿಡಿತವನ್ನು ಅವರ ಎಲ್ಲ ಸಿನಿಮಾಗಳಲ್ಲಿ ನೋಡಬಹುದು.

ಮಿಕೇಲ್ ಗ್ರೀಕ್ ಸಿನಿಮಾಲೋಕದಲ್ಲಿ ಮಾಸ್ಟರ್. ಇವರ ಎಲ್ಲ ಸಿನಿಮಾಗಳು ಸಿನಿಮಾ ರಸಿಕರಿಗೆ ರಸದೌತಣವಾದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಕಲಿಸುವ ಪಠ್ಯಪುಸ್ತಕಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...