Homeಅಂಕಣಗಳುಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

ಪಿಕೆ ಟಾಕೀಸ್: ಕ್ರಿಸ್ತ ಪೂರ್ವದ ಗ್ರೀಸ್ ಇತಿಹಾಸ ಮತ್ತು ಪುರಾಣವನ್ನು ದೃಶ್ಯರೂಪವನ್ನಾಗಿಸಿದ ಕಕೊಯಾನೀಸ್‌ರ ಸಿನಿಮಾಗಳು

- Advertisement -
- Advertisement -

ಇಫಿಗೆನಿಯಾ (1977): ಕ್ರಿಸ್ತ ಪೂರ್ವ 1250ರಲ್ಲಿ ಗ್ರೀಸ್ ಮತ್ತು ಟ್ರಾಯ್ ದೇಶಗಳ ನಡುವೆ ನಡೆದಿರಬಹುದೆಂದು ನಂಬಲಾದ ಮಹಾಸಮರದ ಕುರಿತು ಜನಪದ ಗೀತೆಗಳ ಸಂಗ್ರಹದ ಮೂಲಕ ಮುಂದೆಸಾಗಿ ಕ್ರಿ.ಪೂ 800ರಲ್ಲಿ ಹೋಮರ್ ಎಂಬ ಕುರುಡು ಹಾಡುಗಾರನ ಹಾಡುಗಳನ್ನು ದಾಖಲಿಸಲು ನಡೆದ ಪ್ರಯತ್ನದಲ್ಲಿ ಗ್ರೀಕ್ ಲಿಪಿ ಹುಟ್ಟಿತು ಎನ್ನಲಾಗುತ್ತದೆ. ಹೀಗೆ ಹುಟ್ಟಿಕೊಂಡ ಮೊದಲ ಮಹಾಕಾವ್ಯಗಳೇ ಇಲಿಯಡ್ ಮತ್ತು ಒಡಿಸ್ಸಿ (ಗ್ರೀಕ್ ಟ್ರಾಜಿಡೀಸ್).

ಇಲಿಯಡ್ ಮತ್ತು ಒಡಿಸ್ಸಿ ಮಹಾಕಾವ್ಯಗಳು ಹಾಡುಗಳ ರೂಪದಲ್ಲಿದ್ದು, ಗ್ರೀಕ್ ಯೋಧರ ವೀರತ್ವ ಹಾಗೂ ತ್ಯಾಗ ಬಲಿದಾನಗಳ ಕುರಿತ ದಾಖಲೆಯಾಗಿದೆ. ಹತ್ತು ವರ್ಷಗಳ ಸತತವಾಗಿ ಸಾಗಿದ ಮಹಾಸಮರ ಶುರುವಾಗಿದ್ದಕ್ಕೆ ಕಾರಣ: ಗ್ರೀಸ್ ದೇಶದ ರಾಜ ಆಗಮೆಮ್‌ನೊನ್‌ನ (ಮಿಕೇನ್ ರಾಜ್ಯ) ಸಹೋದರ ಮೆನೆಲಾಯ್‌ನ (ಸ್ಪಾರ್ಥ ರಾಜ್ಯ) ಹೆಂಡತಿಯಾದ ಮಹಾಸುಂದರಿ ಹೆಲೆನಾಳನ್ನು ಟ್ರಾಯ್ ದೇಶದ ರಾಜಕುಮಾರ ಪಾರೀಸ್ ಅಪಹರಿಸಿಕೊಂಡುಹೋಗಿರುವುದು.

ಇಫಿಗೆನಿಯಾ ಸಿನಿಮಾ ಶುರುವಾಗುವುದು ಹೆಲೆನಾಳ ಅಪಹರಣದ ಪರಿಣಾಮವಾಗಿ ಆಗಮೆಮ್‌ನೊನ್ ಮತ್ತು ಮೆನೆಲಾಯ್ ಟ್ರಾಯ್ ದೇಶದ ವಿರುದ್ಧ ಯುದ್ಧ ಸಾರಿ ಸಾವಿರಕ್ಕೂ ಹೆಚ್ಚಿನ ಹಡಗುಗಳು ಮತ್ತು ಸಾವಿರಾರು ಸೈನಿಕರು ಟ್ರಾಯ್‌ನತ್ತ ಸಾಗಲು ಸಿದ್ಧರಾಗುವುದರಿಂದ. ಆದರೆ ಆಗಮೆಮ್‌ನೊನ್ ಬೇಟೆಯಾಡುವಾಗ ಪವಿತ್ರವಾದ ಸ್ಥಳದಲ್ಲಿ ಜಿಂಕೆಯನ್ನು ಕೊಂದಿದ್ದರಿಂದ ಪಡೆಯುವ ಶಾಪದಿಂದ ಹಡಗುಗಳು ಮುಂದೆಸಾಗಲು ಗಾಳಿ ಇಲ್ಲದಂತಾಗುತ್ತದೆ.

ಇಫಿಗೆನಿಯಾ

ಆಗ ದೈವವಾಣಿಯಾಗಿ ಬರುವ ಪರಿಹಾರ ಆಗಮೆಮ್‌ನೊನ್‌ನ ಮೊದಲ ಮುದ್ದಿನ ಮಗಳಾದ ಇಫಿಗೆನಿಯಾಳನ್ನು ಬಲಿ ನೀಡಿದರೆ ಮಾತ್ರ ಟ್ರಾಯ್‌ನತ್ತ ಹಡಗುಗಳು ಸಾಗಲು ಗಾಳಿ ಬೀಸುತ್ತದೆ ಎಂಬುದು. ಇದನ್ನು ಕೇಳಿ ಆತಂಕ ಮತ್ತು ಧರ್ಮಸಂಕಟದಲ್ಲಿ ಆಗಮೆಮ್‌ನೊನ್ ಸಿಲುಕುತ್ತಾನೆ. ಗ್ರೀಸಿನ ಗೌರವಕ್ಕಾಗಿ ತನ್ನ ಮುದ್ದಿನ ಮಗಳನ್ನು ಕೊಲ್ಲುವ ಸಂದಿಗ್ಧತೆಯಲ್ಲಿ ಸಿಕ್ಕಿ ಒದ್ದಾಡುತ್ತಾನೆ.

ಸಾವಿರಾರು ಸೈನಿಕರ ಯುದ್ಧಾಕ್ರೋಶದ ಮುಂದೆ ತಲೆ ಬಾಗುವ ಆಗಮೆಮ್‌ನೊನ್ ಇಫಿಗೆನಿಯಾಳಿಗೆ ತಾನಿರುವ ಸ್ಥಳಕ್ಕೆ ಬರುವಂತೆ ಸುದ್ದಿ ಕಳಿಸುತ್ತಾನೆ. ಸುದ್ದಿ ಕೊಂಡೊಯ್ಯುವವನ ಬಳಿಯಲ್ಲಿ ’ಇಫಿಗೆನಿಯಾಳಿಗೆ ಮತ್ತು ನೆರೆಯ ರಾಜ್ಯದ ಆಕಿಲೀಸ್‌ನಿಗೆ ಮದುವೆಯೆಂದು’ ಸುಳ್ಳು ಹೇಳಲು ತಿಳಿಸಿರುತ್ತಾನೆ. ಇದನ್ನು ನಿಜವೆಂದುಕೊಂಡ ಆಗಮೆಮ್‌ನೊನ್‌ನ ಹೆಂಡತಿ ಕ್ಲಿಟೆಮ್ನೆಸ್ಟ್ರಾ ತನ್ನ ಮಕ್ಕಳೊಂದಿಗೆ ಬರುತ್ತಾಳೆ.

ಈ ಬರಸಿಡಿಲಿನಂತ ನಿರ್ಧಾರದಿಂದ ಆಗಮೆಮ್‌ನೊನ್ ತಳಮಳ ಸಿನಿಮಾದ ಮೊದಲ ಭಾಗ ಹಿಡಿದಿಟ್ಟರೆ, ಒಮ್ಮೆ ಮಗಳು ಇಪಿಜೆನಿಯಾ ಮತ್ತು ಹೆಂಡತಿ ಕ್ಲಿಟೆಮ್ನೆಸ್ಟ್ರಾ ಬಂದ ನಂತರ ಈ ಸುದ್ದಿ ತಿಳಿದು ಉಂಟಾಗುವ ಸಂಘರ್ಷ ಮತ್ತು ಆಗಮೆಮ್‌ನೊನ್ ಅಸಹಾಯಕತೆಯನ್ನು ಸಿನಿಮಾದ ಕೊನೆಯವರೆಗೂ ಕಟ್ಟಲಾಗಿದೆ.

ಸಾವಿರಾರು ಸೈನಿಕರು ಯುದ್ದದ ರೋಷಾಗ್ನಿಯಿಂದ ಇಫಿಗೆನಿಯಾಳ ಬಲಿಗಾಗಿ ಕೂಗಾಟ ಕಿರುಚಾಟಗಳ ಮಧ್ಯೆ, ಇಪಿಜೆನಿಯಾಳಿಗೆ ಬೇರೆ ದಾರಿಯಿಲ್ಲದೆ ’ಮದುವೆಗೆಂದು ಬಂದೆ, ಈ ಸಾವೇ ನನ್ನ ಮದುವೆ, ನಿಮ್ಮ ಯುದ್ದದ ಗೆಲ್ಲುವೆ ನನ್ನ ಮಕ್ಕಳು’ ಎಂದು ಹೇಳಿ ಬಲಿಪೀಠದತ್ತ ಸಾಗುತ್ತಾಳೆ.

ಒಂದು ಕಡೆ ಆಸಹಾಯಕತೆಯಲ್ಲಿ ನಿಂತು ನೋಡುತ್ತಿರುವ ಆಗಮೆಮ್‌ನೊನ್, ಕೋಪದಲ್ಲಿ ಕುದಿಯುತ್ತಿರುವ ಕ್ಲಿಟೆಮ್ನೆಸ್ಟ್ರಾ ಇನ್ನೊಂದು ಕಡೆ. ಕೊನೆಗೆ ಗಾಳಿ ಬೀಸಲಾರಂಭಿಸುತ್ತದೆ. ಸೈನಿಕರು ಮತ್ತು ಹಡಗುಗಳು ಯುದ್ಧದ ಉತ್ಸಾಹದಿಂದ ಟ್ರಾಯ್‌ನತ್ತ ಸಾಗುತ್ತಾರೆ. ಕ್ಲಿಟೆಮ್ನೆಸ್ಟ್ರಾಳ ಕೋಪ ಸೇಡಿನ ರೂಪಾಂತರವಾಗುವುದೆಂಬ ಊಹೆಯಲ್ಲಿಯೇ ಸಿನಿಮಾದ ಅಂತ್ಯ.

ಎಲೆಕ್ಟ್ರಾ (1962): ಇಫಿಗೆನಿಯಾಳ ಬಲಿಯ ನಂತರ ಆಗಮೆಮ್‌ನೊನ್ ಟ್ರಾಯ್‌ನ ಮೇಲೆ ಮಾಡಿದ ಹತ್ತು ವರ್ಷಗಳ ಮಹಾಸಮರವನ್ನು ಮುಗಿಸಿ ತನ್ನ ರಾಜ್ಯಕ್ಕೆ ಹಿಂದಿರುಗುತ್ತಾನೆ. ಸ್ನಾನದ ಕೋಣೆಯಲ್ಲಿ ಹೆಂಡತಿ ಕ್ಲಿಟೆಮ್ನೆಸ್ಟ್ರಾ ಮತ್ತು ಅವಳ ಪ್ರಿಯಕರ ಎಗೀಸ್‌ನ ಸಹಾಯದಿಂದ ಆಗಮೆಮ್‌ನೊನ್‌ನನ್ನು ಕೊಲ್ಲುವುದರ ಮೂಲಕ ಸೇಡನ್ನು ತೀರಿಸಿಕೊಳ್ಳುತ್ತಾಳೆ.

ಕ್ಲಿಟೆಮ್ನೆಸ್ಟ್ರಾ ಆಗಮೆಮ್‌ನೊನ್‌ನ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪ್ರಿಯಕರನೊಂದಿಗೆ ಇರುವುದನ್ನು ಗಮನಿಸುವ ಆಕೆಯ ಮಗ ಒರೆಸ್ಟೆಸ್ ಹಲವು ವರ್ಷಗಳ ಮೊದಲೇ ಅರಮನೆಯಿಂದ ದೂರವಾಗಿ ತನ್ನ ಗುರುವಿನ ಬಳಿ ರಾಜತಂತ್ರಗಳನ್ನು ಕಲಿಯುತ್ತಿರುತ್ತಾನೆ. ಅರಮನೆಯಲ್ಲಿ ಉಳಿದಿದ್ದು ಮಗಳು ಎಕ್ಟ್ರಾ.

ಆಗಮೆಮ್‌ನೊನ್‌ನ ಸಾವಿನ ನಂತರ ಮಗಳನ್ನು ಅವಮಾನಿಸಲು, ಅವಳ ಕೂದಲನ್ನು ಕತ್ತರಿಸಿ ಬಡ ಮುದಿ ರೈತನೊಂದಿಗೆ ಮದುವೆ ಮಾಡಿಸಿ ಕ್ಲಿಟೆಮ್ನೆಸ್ಟ್ರಾ ಮತ್ತು ಪ್ರಿಯಕರ ಎಗೀಸ್ ಆಕೆಯನ್ನು ರಾಜ್ಯದಿಂದ ಹೊರತಳ್ಳುತ್ತಾರೆ. ಇದರಿಂದ ನೊಂದ ಎಲೆಕ್ಟ್ರಾ ತನ್ನ ತಮ್ಮ ಒಂದು ದಿನ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿಯೇ ಹಳ್ಳಿಯೊಂದರಲ್ಲಿ ಬದುಕುತ್ತಿರುತ್ತಾಳೆ, ಊರಿನ ಹೆಂಗಸರೆಲ್ಲಾ ಎಲೆಕ್ಟ್ರಾಳಿಗೆ ಸಹಾಯ ಮಾಡುತ್ತಿರುತ್ತಾರೆ.

ಕೊನೆಗೊಂದು ದಿನ ತಮ್ಮ ಒರೆಸ್ಟೆಸ್‌ನ ಕಡೆಯವರೆಂದು ಹೇಳಿಕೊಂಡು ಬರುವ ಇಬ್ಬರು ಅಪರಿಚಿತರು ಎಲೆಕ್ಟ್ರಾಳನ್ನು ಭೇಟಿಯಾಗುತ್ತಾರೆ. ಆಗ ತನ್ನ ತಂದೆ ಆಗಮೆಮ್‌ನೊನ್‌ನ ಸಹಾಯಕನಾಗಿದ್ದ ಕುರುಡ ಮುದುಕನೊಬ್ಬನ ಸಹಾಯದಿಂದ, ಆ ಇಬ್ಬರು ಅಪರಿಚಿತರಲ್ಲೊಬ್ಬ ಎಲೆಕ್ಟ್ರಾಳ ತಮ್ಮ ಒರೆಸ್ಟೆಸ್ ಎಂಬ ಸತ್ಯ ತಿಳಿಯುತ್ತದೆ.

ಎಲೆಕ್ಟ್ರಾ

ಹೀಗೆ ಒಂದಾದ ಒರೆಸ್ಟೆಸ್ ಮತ್ತು ಎಲೆಕ್ಟ್ರಾ ತಮ್ಮ ಮುಂದಿನ ಯೋಜನೆಯನ್ನು ರೂಪಿಸುತ್ತಾರೆ. ಅದರಂತೆ ರಾತ್ರಿ ಸಮಯದಲ್ಲಿ ಅರಮನೆಯ ಹೊರಾಂಗಣದಲ್ಲಿ ಕುಡಿದು ಮೋಜು ಮಾಡುತ್ತಿರುವ ಎಗೀಸ್‌ನ ಕೂಟಕ್ಕೆ, ಒರೆಸ್ಟೆಸ್ ತನ್ನ ಗೆಳೆಯನೊಂದಿಗೆ ದಾರಿಹೋಕರಂತೆ ಸೇರಿಕೊಳ್ಳುತ್ತಾರೆ. ಎಗೀಸ್ ಒರೆಸ್ಟೆಸ್‌ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಕುಡಿದು ಮೈಮರೆತ ಕ್ಷಣದಲ್ಲಿ ಎಗೀಸ್‌ನ ಕೊಲೆಯಾಗುತ್ತಾನೆ.

ಎಗೀಸ್‌ನ ಹೆಣವನ್ನು ಅಕ್ಕ ಎಲೆಕ್ಟ್ರಾಳ ಮನೆಯ ಮುಂದೆ ತಂದಿಡುತ್ತಾನೆ. ಎಲೆಕ್ಟ್ರಾಳ ಸೇಡು ಅಲ್ಲಿಗೆ ತಣಿಯುತ್ತದೆ. ಇದಾದ ತುಸು ಸಮಯಕ್ಕೆ ತಾಯಿ ಕ್ಲಿಟೆಮ್ನೆಸ್ಟ್ರಾ ಎಲೆಕ್ಟ್ರಾಳ ಮನೆಗೆ ಬರುತ್ತಾಳೆ. ಇಬ್ಬರ ನಡುವಿನ ತಪ್ಪು-ಸರಿ ವಾಗ್ವಾದಗಳ ನಂತರ, ಪ್ರಿಯಕರನನ್ನು ಕಾಣಲು ಮನೆಯೊಳಗೆ ಬರಲು, ಎಲೆಕ್ಟ್ರಾ ಮತ್ತು ಒರೆಸ್ಟೆಸ್ ಸೇರಿ ತಾಯಿ ಕ್ಲಿಟೆಮ್ನೆಸ್ಟ್ರಾಳನ್ನು ಕೊಲ್ಲುತ್ತಾರೆ.

ಈ ಭೀಕರ ಸಂದರ್ಭವನ್ನು ಊರಿನ ಜನರೆಲ್ಲ ತಿಳಿದು ಆಘಾತದಲ್ಲಿರುತ್ತಾರೆ. ಮನೆಯಿಂದ ಹೊರ ಬಂದು ಅಕ್ಕ-ತಮ್ಮರಿಬ್ಬರೂ ನೋವು ಮತ್ತು ದುಃಖದ ಭಾವನೆಯಿಂದ ಪರಸ್ಪರ ವಿರುದ್ಧ ದಿಕ್ಕುಗಳಿಗೆ ಹೋಗುವ ಮೂಲಕ ಸಿನಿಮಾ ಅಂತ್ಯವಾಗುತ್ತದೆ.

ಮಿಕೇಲ್ ಕಕೊಯಾನೀಸ್: ಮಿಕೇಲ್ ಗ್ರೀಸ್ ದೇಶದ ಪ್ರಮುಖ ನಿರ್ದೇಶಕರಲ್ಲೊಬ್ಬರು. ಇವರ ಮುಖ್ಯ ಕಥಾವಸ್ತುಗಳೆಂದರೆ ಇತಿಹಾಸ, ಪುರಾಣಗಳು, ಗ್ರೀಕ್ ಟ್ರಾಜಿಡಿಗಳು ಹಾಗೂ ಹೆಣ್ಣು ಮತ್ತು ಸಮಾಜದ ನಡುವಿನ ಸಂಘರ್ಷಗಳು.

ಮಿಕೇಲ್ ಬ್ರಿಟನ್‌ನಲ್ಲಿ ಓದಿ ವಕೀಲರನ್ನಾಗಿಸಲು ಅವರ ತಂದೆ ಇಚ್ಛಿಸಿದ್ದರು. ಆದರೆ ಮಿಕಾಲ್‌ರು ಬಿಬಿಸ್ ವರ್ಲ್ಡ್ ಸರ್ವಿಸ್ಸ್ ಸಂಸ್ಥೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿಂದ ಮಿಕಾಲ್‌ರಿಗೆ ದೃಶ್ಯದ ಮಾಧ್ಯಮದ ಪರಿಚಯವಾಯಿತು.

ಇವರು ಮಾಡಿದ ಯೂರಿಪಿಡೀಸ್‌ರ ಟ್ರಿಯಾಲಜಿಯಲ್ಲಿ ಎಲೆಕ್ಟ್ರಾ (1962), ದಿ ಟ್ರೋಜನ್ ವಿಮೆನ್(1971) ಮತ್ತು ಇಪಿಜೆನಿಯಾ (1977) ಸಿನಿಮಾಗಳಿವೆ. ದಿ ಟ್ರೋಜನ್ ವಿಮೆನ್ ಸಿನಿಮಾದಲ್ಲಿ ಟ್ರಾಯ್ ನಗರದ ಧ್ವಂಸದ ನಂತರದಲ್ಲಿ ಯುದ್ಧದಿಂದ ಕದಡಿದ ಮಹಿಳೆಯರ ಮುಖ್ಯವಾದ ಕಥಾನಕವಿದೆ.

ಮಿಕೇಲ್ ಕಕೊಯಾನೀಸ್

ಮಿಕೇಲ್, ನಾಟಕಗಳಾಗಿದ್ದ ಗ್ರೀಕ್ ಟ್ರಾಜಿಡಿಗಳನ್ನು ಅತ್ಯಂತ ಬಿಗಿಯಾಗಿ ದೃಶ್ಯರೂಪಕ್ಕೆ ತಂದಿದ್ದಾರೆ. ಕಕೊಯಾನೀಸ್‌ರ ಸಿನಿಮಾಟೋಗ್ರಾಫರ್ ವಲ್ಟರ್ ಲೆಸೆಲ್ಲಿ ತಮ್ಮ ಸಂದರ್ಶನವೊಂದರಲ್ಲಿ ಹೇಳುವಂತೆ, ’ಮಿಕೇಲ್ ಅವರು ಸ್ಕ್ರಿಪ್ಟ್‌ನಲ್ಲಿ ಪ್ರತಿ ಪುಟ್ಟ ವಿವರಣೆಗಳನ್ನು ಬರೆದುಕೊಂಡಿರುತ್ತಾರೆ. ಪ್ರತಿ ಶಾಟ್ ಹೇಗಿರಬೇಕೆಂದು ಶೂಟಿಂಗ್‌ಗೆ ಬರುವ ಮೊದಲೇ ನಿರ್ಧರಿಸಲಾಗಿರುತ್ತದೆ.

ನಟನಟಿಯರ ಹಾವ-ಭಾವಗಳು, ಭಂಗಿಗಳು, ಕ್ಯಾಮರಾದ ಮುಂದೆ ಅವರ ಚಲನವಲನಗಳನ್ನು ನಿರ್ದೇಶಕರ ಮಿಕೇಲ್‌ರ ಇಚ್ಛೆಯಂತೆ ನಡೆಯುತ್ತಿತ್ತು. ಯಾವುದೇ ರೀತಿಯ ಗೊಂದಲ, ಬದಲಾವಣೆ ಇರುತ್ತಿರಲಿಲ್ಲ.’

ಮಿಕೇಲ್ ಅವರು ನಿರ್ದೇಶನ ಮಾಡುತ್ತಿದ್ದ ಕಾಲದಲ್ಲಿ ಫಿಲ್ಮ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದ ಕಾರಣದಿಂದಲೇ ಎಲ್ಲವನ್ನು ಮೊದಲೇ ಪ್ಲಾನ್ ಮಾಡಬೇಕಿತ್ತು. ಯಾವುದೇ ಒಂದು ತಪ್ಪಾದರೂ ಅಥವಾ ಅನಗತ್ಯ ಶಾಟ್‌ನಿಂದ ಫಿಲ್ಮ್ ರೀಲ್ ವ್ಯರ್ಥವಾಗುತ್ತಿತ್ತು. ಇದೇ ಕಾರಣದಿಂದ ನಿರ್ದೇಶಕ ಮಿಕೇಲ್ ಅವರಿಗೆ ತಮ್ಮ ಸಿನಿಮಾಗಳ ದೃಶ್ಯಗಳ ಮೇಲಿರುವ ಸ್ಪಷ್ಟತೆ ಮತ್ತು ಹಿಡಿತವನ್ನು ಅವರ ಎಲ್ಲ ಸಿನಿಮಾಗಳಲ್ಲಿ ನೋಡಬಹುದು.

ಮಿಕೇಲ್ ಗ್ರೀಕ್ ಸಿನಿಮಾಲೋಕದಲ್ಲಿ ಮಾಸ್ಟರ್. ಇವರ ಎಲ್ಲ ಸಿನಿಮಾಗಳು ಸಿನಿಮಾ ರಸಿಕರಿಗೆ ರಸದೌತಣವಾದರೆ, ಸಿನಿಮಾ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಕಲಿಸುವ ಪಠ್ಯಪುಸ್ತಕಗಳು.


ಇದನ್ನೂ ಓದಿ: ಪಿಕೆ ಟಾಕೀಸ್: ಕೌಟುಂಬಿಕ ಕರಾಳತೆಯನ್ನು ಬಿಂಬಿಸುವ ಯಾನಿಸ್‌ನ ವರ್ಣರಹಿತ ಚಿತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....