Homeಮುಖಪುಟಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆಯಿಂದ ಹೊರಗಿಡಲು ಸಾಧ್ಯವೇ?

ಶಿಕ್ಷಣ ವ್ಯವಸ್ಥೆಯನ್ನು ಧಾರ್ಮಿಕತೆಯಿಂದ ಹೊರಗಿಡಲು ಸಾಧ್ಯವೇ?

- Advertisement -
- Advertisement -

ಸರ್ವಧರ್ಮ ಸಮಭಾವವನ್ನು (Secularism) ಪ್ರತಿಪಾದಿಸುವ ಬೇರೆಲ್ಲಾ ರಾಷ್ಟ್ರಗಳಂತೆಯೇ, ಭಾರತಕ್ಕೂ ಕೂಡ ತನ್ನ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮಕ್ಕೆ ಯಾವ ಸ್ಥಾನವಿರಬೇಕು ಎಂದು ನಿರ್ಧರಿಸಲು ತನ್ನದೇ ಆದ ಹಲವು ಸವಾಲುಗಳಿದ್ದವು. ಸ್ವಾತಂತ್ರ್ಯಾನಂತರದಲ್ಲಿ, ಭಾರತವು ಕೈಗೊಂಡ ಸರ್ವಧರ್ಮ ಸಮಭಾವದ ನಿಲುವು ಧರ್ಮವನ್ನು ಪ್ರಭುತ್ವದಿಂದ (ರಾಜ್ಯಾಂಗ) ಬೇರ್ಪಡಿಸಲು ಉದ್ದೇಶಿಸಿತು. ಆದರೂ, ಸರ್ವಧರ್ಮ ಸಮಭಾವದ ಭಾರತೀಯ ಆವೃತ್ತಿಯು ತನ್ನ ಸಂಕೀರ್ಣತೆಯನ್ನೂ ಮತ್ತು ’ಬಹು-ಮೌಲಿಕತೆ’ಯನ್ನೂ ಉಳಿಸಿಕೊಂಡಿತು. ಪ್ರಭುತ್ವದ ನಿಲುವುಗಳು ಮತ್ತು ಪರಿಣಾಮಕಾರಿ ಕಲಿಕೆಗಿರುವ ಬೇಡಿಕೆಯಿಂದಾಗಿ, ಈ ಸಂಕೀರ್ಣತೆಯು ಶಿಕ್ಷಣ ವ್ಯವಸ್ಥೆಯಲ್ಲಿಯೂ ಪ್ರತಿಧ್ವನಿಸಿತು.

ಸೋಶಿಯಲ್ ಕ್ಯಾರೆಕ್ಟರ್ ಆಫ್ ಲರ್ನಿಂಗ್ ಎಂಬ ಪುಸ್ತಕದಲ್ಲಿ ಎನ್.ಸಿ.ಈ.ಆರ್.ಟಿಯ ಮಾಜಿ ನಿರ್ದೇಶಕರಾದ ಕೃಷ್ಣ ಕುಮಾರರು, ಹೇಗೆ ಶಿಕ್ಷಣ ವ್ಯವಸ್ಥೆಗಳು ಶಿಕ್ಷಣಾರ್ಥಿಯ ಸಾಮಾಜಿಕ ಅಸ್ಮಿತೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ ಎಂಬುದನ್ನು ತಿಳಿಸುತ್ತಾರೆ. ಶಿಕ್ಷಣಾರ್ಥಿಗಳ ಮನೆಯ ಮತ್ತು ಸಾಮುದಾಯಿಕ ಮೌಲ್ಯಗಳನ್ನು ತರಗತಿಗೆ ಕೊಂಡುಬರುವುದು ಅವರ ಕಲಿಕೆಯಲ್ಲಿ ಒಂದು ಸಕಾರಾತ್ಮಕ ಪಾತ್ರ ವಹಿಸುತ್ತದೆ. ಭಾರತದ ಶಿಕ್ಷಣ ನೀತಿಗಳು ಶಿಕ್ಷಣ ಹಾಗೂ ಸಾಮುದಾಯಿಕ ಅನುಭವಗಳ ನಡುವಿನ ಸಂಬಂಧವನ್ನು ಗುರುತಿಸುತ್ತವೆ ಮತ್ತು ತರಗತಿಗಳ ಸಂಸ್ಕೃತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಇದು ವಿವರಿಸುತ್ತದೆ.

ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು [ನ್ಯಾಷನಲ್ ಕರಿಕ್ಯುಲಮ್ ಫ್ರೇಮ್ ವರ್ಕ್ (2000, 2005)] ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯು (2020) ವಿವಿಧ ಧರ್ಮಗಳ ಬಗ್ಗೆ ಅರಿವು ಮೂಡಿಸುವ ಹಾದಿಯಲ್ಲಿ ಎಲ್ಲಾ ಧರ್ಮಗಳನ್ನು ಗೌರವಯುತವಾಗಿ ಕಾಣುವುದನ್ನು ಶಿಫಾರಸ್ಸು ಮಾಡುತ್ತದೆ. ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಸ್ಟ್ರಿಕ್ಟ್ ಪ್ರೈಮರಿ ಎಜುಕೇಷನ್ ಪ್ರೋಗ್ರಾಮ್ – ಡಿ.ಪಿ.ಈ.ಪಿ) ಮತ್ತು ಶಾಲಾ ಆಡಳಿತ ಸಮಿತಿ (ಸ್ಕೂಲ್ ಮ್ಯಾನೇಜ್‌ಮೆಂಟ್ ಕಮಿಟಿ – ಎಸ್.ಎಂ.ಸಿ) ಮತ್ತು ಇತರೆ ಹಲವು ಕಾರ್ಯಕ್ರಮಗಳೂ ಕೂಡ ಸ್ಥಳೀಯರನ್ನು ಮತ್ತು ಸ್ಥಳೀಯ ಸೂಕ್ಷ್ಮತೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಒಳಗೊಳ್ಳುವ ಉದ್ದೇಶಗಳನ್ನು ಹೊಂದಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಾಲೆಯಲ್ಲಿ ಈ ರೀತಿಯ ಕಲಿಕಾ ವಾತಾವರಣವನ್ನು ಸೃಷ್ಟಿಸುವುದು ಎರಡು ರೀತಿಯಲ್ಲಿ ಉಪಕಾರಿಯಾಗುತ್ತದೆ. ಮೊದಲನೆಯದಾಗಿ, ಈ ರೀತಿಯ ವಾತಾವರಣವು ವಿದ್ಯಾರ್ಥಿಗಳಿಗೆ ದಿನನಿತ್ಯ ಜೀವನಾನುಭವದ ಉದಾಹರಣೆಗಳನ್ನು ನೀಡುವ ಮೂಲಕ ಅವರ ಗ್ರಹಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ, ವಿದ್ಯಾರ್ಥಿಗಳು ತಮ್ಮ ಸಮುದಾಯದ ಅನುಭವಗಳನ್ನು ತರಗತಿಗಳಲ್ಲಿ ಹಂಚಿಕೊಳ್ಳುವುದು, ನಾವು ಅವರನ್ನು ಕೇವಲ ಅವರ ಬುದ್ಧಿಮತ್ತೆಗೆ ಮಾತ್ರವಲ್ಲದೇ, ಅವರನ್ನು ಇಡಿಯಾಗಿ ಅವರಿರುವಂತೆಯೇ ಸ್ವೀಕರಿಸುತ್ತೇವೆ ಎಂಬುದನ್ನೂ ತಿಳಿಸುತ್ತದೆ. ಇದು, ಅವರು ಯಾವುದೇ ಭಯ ಅಥವಾ ಅಳುಕಿಲ್ಲದೆ ಕಲಿಯಲು ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಹಿನ್ನೆಲೆಗಳು ಮತ್ತು ಅನುಭವಗಳು ಅವರ ಕಲಿಕೆಯನ್ನು ಹೆಚ್ಚಿಸುತ್ತದೆಯೇ ಹೊರತು ಕುಂದಿಸುವುದಿಲ್ಲ. ಹಾಗಾಗಿಯೇ, ಸ್ಪೇನ್, ಐಲೆಂಡ್, ಸ್ವೀಡನ್‌ಗಳಂತಹ ರಾಷ್ಟ್ರಗಳ ಸರ್ವಧರ್ಮ ಸಮಭಾವದ ಪಠ್ಯಕ್ರಮದಲ್ಲಿಯೂ (secular curriculum) ಕೂಡ ಧಾರ್ಮಿಕ ಮೌಲ್ಯಗಳು ಹಾಗೂ ನೀತಿಗಳು ಮತ್ತು ಧರ್ಮಗಳ ತೌಲನಿಕ ಅಧ್ಯಯನವನ್ನು ಒಳಗೊಂಡಿರುತ್ತದೆ. ಸ್ಪೇನಿನ ಸರ್ಕಾರಿ ಶಾಲೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಧಾರ್ಮಿಕ ಉಡುಪುಗಳ ಮತ್ತು ಸಂಕೇತಗಳ ಮೇರೆಗೆ ಯಾವುದೇ ರೀತಿಯ ನಿರ್ಬಂಧವನ್ನು ಹೇರದೆ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುತ್ತವೆ.

ಯಾವ ಶಿಕ್ಷಣ ವ್ಯವಸ್ಥೆಯು ಸಾಮಾಜಿಕ- ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಕೇತಗಳನ್ನು ಶಾಲೆಯಿಂದ ಹೊರಗಿಡಲು ಪ್ರಯತ್ನಿಸುತ್ತದೋ, ಅದು ಅಲ್ಪಸಂಖ್ಯಾತರ ಸಂಸ್ಕೃತಿಗಳನ್ನು ಕೆಳದರ್ಜೆಯವೆಂದೂ, ಕೀಳುಮಟ್ಟದ್ದೆಂದೂ ಚಿತ್ರಿಸುತ್ತದೆ. ಇದು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಮೇಲೆ ಮಾನಸಿಕ ಹಿಂಸೆಯನ್ನೆಸಗಿ ಅವರ ಕಲಿಕೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ, ಶೋಷಿತ ಸಮುದಾಯವನ್ನು ಸುಧಾರಿಸುವ ಗುರಿಹೊಂದಿದ ಶಿಕ್ಷಣ ವ್ಯವಸ್ಥೆಯೇ ಅವರ ಸ್ವಂತಿಕೆಯನ್ನು ಹಾಳುಗೆಡವಿ ಅವರನ್ನು ಇನ್ನಷ್ಟು ದೂರತಳ್ಳುತ್ತದೆ. ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಇದಕ್ಕೆ ಉದಾಹರಣೆಗಳಾಗಿವೆ.

ಈ ದೇಶಗಳು ಧರ್ಮವನ್ನು ಶಿಕ್ಷಣದಿಂದ ಸಂಪೂರ್ಣವಾಗಿ ಬೇರ್ಪಡಿಸಲಿಕ್ಕೆ ಪ್ರಯತ್ನಿಸಿದರೂ, ತಮ್ಮ ಶಾಲೆಗಳಲ್ಲಿ ಧಾರ್ಮಿಕ ಮೌಲ್ಯಗಳು ಮತ್ತು ಸಂಕೇತಗಳು ಯಥೇಚ್ಛವಾಗಿಯೇ ಕಂಡುಬರುವುದನ್ನು ಸಂಶೋಧಕರು ಗುರುತಿಸಿದ್ದಾರೆ. ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಮೌಲ್ಯಗಳು ಹಾಗೂ ಸಂಕೇತಗಳನ್ನು ಶಾಲೆಯ ಅಂಗಳಕ್ಕೆ ಹೊತ್ತು ತರುವ ಬಗ್ಗೆ ಯಾವುದೇ ಆಕ್ಷೇಪಣೆಗಳಿರುವುದಿಲ್ಲ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ.

ಇದು ಭಾರತಕ್ಕೂ ಅನ್ವಯಿಸುತ್ತದೆ. ಧರ್ಮವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿದೆ. ಶಾಲೆಗಳು ದಿನನಿತ್ಯ ಕಾರ್ಯ ನಿರ್ವಹಿಸುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಧಾರ್ಮಿಕ ಮೌಲ್ಯಗಳು, ಸಂಕೇತಗಳು ಮತ್ತು ಆಹಾರ ಪದ್ಧತಿಗಳು ಶಾಲೆಗಳ ಸಂಸ್ಕೃತಿಯ ಭಾಗವೇ ಆಗಿರುವುದನ್ನು ನಾವು ಗಮನಿಸಬಹುದಾಗಿದೆ. ದೀಪ ಬೆಳಗಿಸುವುದು, ಪೂಜೆಗಳು, ಸರಸ್ವತಿ ವಂದನೆಗಳು, ಗಣೇಶ ಸ್ತುತಿಗಳನ್ನೂ ಒಳಗೊಂಡಂತೆ ಅನೇಕ ಆಚರಣೆಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಅಲ್ಲದೇ, ದಸರಾ ಮತ್ತು ದೀಪಾವಳಿಗೆ ದೀರ್ಘಕಾಲದ ರಜೆಗಳನ್ನೂ ನೀಡಲಾಗುತ್ತದೆ.

ಸರ್ವವ್ಯಾಪಿಯಾಗಿರುವ ಧಾರ್ಮಿಕ ಸಂಕೇತಗಳು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟು ಸಾಮಾನ್ಯಗೊಳಿಸಲಾಗಿದೆ (normalise) ಎಂದರೆ, ಅದನ್ನು ಯಾರೂ ಗಮನಿಸಲಾಗುವುದೂ ಇಲ್ಲ, ಪ್ರಶ್ನಿಸಲಾಗುವುದೂ ಇಲ್ಲ. ಬಹುಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಇವು ಸಾಮಾನ್ಯ ಎನಿಸಿದರೆ, ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳನ್ನು ಇದು ವಿಮುಖಗೊಳಿಸುತ್ತದೆ.

ಶಾಲೆಗಳು ವಿದ್ಯಾರ್ಥಿಗಳನ್ನು ಭವಿಷ್ಯದ ಸಮಾಜದಲ್ಲಿ ಬದುಕಲು ಕಲಿಸುವ ಕಿರು ಸಮಾಜಗಳೇ ಆಗಿವೆ. ಶಾಲೆಗಳ ಕಾರ್ಯಕಲಾಪಗಳಲ್ಲಿ ರೂಪುಗೊಳ್ಳಬೇಕಿರುವ ಪ್ರಜಾಪ್ರಭುತ್ವ ವ್ಯವಸ್ಥೆಯು ಮುಂದೆ ಅವರು ನಿರ್ವಹಿಸಬೇಕಾದ ಪಾತ್ರಗಳಿಗೆ ಸಜ್ಜುಗೊಳಿಸುತ್ತದೆ. ಶಾಲೆ ಅಥವಾ ಕಾಲೇಜುಗಳು ಕೆಲವೇ ಸಮುದಾಯಗಳ ಆಚಾರ ಮತ್ತು ಪದ್ಧತಿಗಳನ್ನು ಸ್ವಾಗತಿಸಿದರೆ, ಶಿಕ್ಷಕರು ಕೂಡ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಅದೇ ಧಾರ್ಮಿಕ ಶ್ರೇಣೀಕರಣವನ್ನು ಸ್ಥಾಪಿಸುತ್ತಾರೆ ಮತ್ತು ಗಟ್ಟಿಗೊಳಿಸುತ್ತಾರೆ.

ಈ ರೀತಿಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಶ್ರೇಷ್ಠತೆಯ ಪರಿಕಲ್ಪನೆಯಲ್ಲಿ ಬದುಕುವ-ಬೆಳೆಯುವ ವಿದ್ಯಾರ್ಥಿಗಳು, ಮುಂದೆ ನಾಗರಿಕರಾಗಿಯೂ ಅದನ್ನೇ ಮುಂದುವರೆಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿ ಜೀವನದಲ್ಲಿ ಸಾಂಸ್ಕೃತಿಕ ಅಧೀನತೆಗೆ ಒಳಪಡುವ ಸಮುದಾಯವು ಪ್ರತ್ಯೇಕಗೊಳಿಸಿದ ಮತ್ತು ಒಂಟಿತನದ ಭಾವನೆಯನ್ನು ಹೊತ್ತು ಬೆಳೆಯುತ್ತದೆ. ಈ ರೀತಿಯ ನಿಷ್ಪ್ರಯೋಜಕ ಮತ್ತು ನಿರರ್ಥಕ
ಸಂದರ್ಭಗಳಲ್ಲಿ, ಮತ್ತದೇ ಶೋಷಿತ ಸಮುದಾಯವು ಬೆಳೆಯಲಿಕ್ಕೆ ಇಚ್ಛಸುತ್ತಿಲ್ಲವೆಂದೂ, ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದೂ ಎಂದೆಂದಿಗೂ ದೂಷಿಸಲ್ಪಡುತ್ತದೆ.

ಶೈಮಾ ಅಮತುಲ್ಲಾಹ್
ಬೆಂಗಳೂರಿನ ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಅಸ್ಮಿತೆಯ ಅನುಸಂಧಾನ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.

ಶಾಲಿನಿ ದೀಕ್ಷಿತ್
ಬೆಂಗಳೂರಿನ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಶಿಕ್ಷಣ ವಿಭಾಗದಲ್ಲಿ ಪ್ರಾಧ್ಯಾಪಕರು.

ಅನುವಾದ: ಶಶಾಂಕ್ ಎಸ್ ಆರ್

(ಈ ಲೇಖನವು ಮೊದಲು ಇಂಗ್ಲಿಷಿನಲ್ಲಿ, newsclick.in ಅಲ್ಲಿ ಪ್ರಕಟಗೊಂಡಿತ್ತು)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...