Homeಮುಖಪುಟ’ಅಮಿತ್ ಶಾ ಮನೆ ಮುಂದೆ ಈ ಇಬ್ಬರು ಪ್ರತಿಭಟಿಸುವಂತಿಲ್ಲ’: ದೆಹಲಿ ಪೊಲೀಸರ ’ವಿಚಿತ್ರ’ ನಿರ್ಧಾರ!

’ಅಮಿತ್ ಶಾ ಮನೆ ಮುಂದೆ ಈ ಇಬ್ಬರು ಪ್ರತಿಭಟಿಸುವಂತಿಲ್ಲ’: ದೆಹಲಿ ಪೊಲೀಸರ ’ವಿಚಿತ್ರ’ ನಿರ್ಧಾರ!

ಅನುಮತಿಯಿಲ್ಲದೆ ಪ್ರತಿಭಟಿಸಲು ಯತ್ನಿಸಿದ್ದಾರೆಂದು ಇಬ್ಬರನ್ನು ಡಿಸೆಂಬರ್ 13, 2020 ರಂದು ಪೊಲೀಸರು ವಶಕ್ಕೆ ಪಡೆದಿದ್ದರು.

- Advertisement -
- Advertisement -

ರಾಜಧಾನಿಯಲ್ಲಿ ಜನವರಿ 31 ರವರೆಗೆ ರಾಜಕೀಯ ಕೂಟಗಳನ್ನು ನಿಷೇಧಿಸಲಾಗಿದೆ ಮತ್ತು ಸೆಕ್ಷನ್ 144 ಅಡಿಯಲ್ಲಿ ನಿಷೇಧಿತ ಆದೇಶಗಳು ಸೆಂಟ್ರಲ್ ದೆಹಲಿಯಲ್ಲಿ ಜಾರಿಯಲ್ಲಿರುವುದರಿಂದ ಪ್ರತಿಭಟನೆಗಳಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಎಎಪಿ ಶಾಸಕರಾದ ರಾಘವ್ ಛಡ್ಡಾ ಮತ್ತು ಅತೀಶಿ ಮರ್ಲೆನಾ ಅವರಿಗೆ ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿವಾಸಗಳ ಹೊರಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುವುದಿಲ್ಲ ಎಂದು ಎಎಪಿ ಸರ್ಕಾರ ಮತ್ತು ಪೊಲೀಸರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಜನವರಿ 31 ರವರೆಗೆ ದೆಹಲಿ ರಾಜ್ಯ ವಿಪತ್ತು ನಿವಾರಣಾ ಘಟಕವು ರಾಜಕೀಯ ಸಭೆಗಳಿಗೆ ನಿಷೇಧ ಹೇರಿದೆ ಎಂದು ಹೈಕೋರ್ಟಿಗೆ ಸಲ್ಲಿಸಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇಬ್ಬರು ಎಎಪಿ ಮುಖಂಡರಿಗೆ ಅನುಮತಿ ನಿರಾಕರಿಸಿದ್ದಕ್ಕಾಗಿ ದೆಹಲಿ ಪೊಲೀಸರು ಉಲ್ಲೇಖಿಸಿರುವ ಇನ್ನೊಂದು ಕಾರಣವೆಂದರೆ, ಎರಡು ನಿವಾಸಗಳು ಇರುವ ಇಡೀ ಸೆಂಟ್ರಲ್ ದೆಹಲಿಯಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಹೊರಡಿಸಲಾದ ನಿಷೇಧಿತ ಆದೇಶಗಳು ಜಾರಿಯಲ್ಲಿವೆ.

ಇದನ್ನೂ ಓದಿ: ದೆಹಲಿ ರೈತ ಹೋರಾಟ ಸಾಗಿ ಬಂದ ಹಾದಿ: ಮಂಡಿಯೂರುತ್ತಿರುವ ಕೇಂದ್ರ ಸರ್ಕಾರ!

ಕೇಂದ್ರ ಗೃಹ ಸಚಿವರು ಮತ್ತು ಲೆಫ್ಟಿನೆಂಟ್‌‌‌ ಗವರ್ನರ್‌ ಅವರ ಮನೆಗಳ ಹೊರಗೆ ಪ್ರತಿಭಟನೆ ನಡೆಸಲು ಅನುಮತಿ ಕೋರಿ ನಿರಾಕರಿಸಿದ್ದನ್ನು ಪ್ರಶ್ನಿಸಿ ಇಬ್ಬರು ಎಎಪಿ ನಾಯಕರ ಮನವಿಗೆ ಸ್ಪಂದಿಸಿ ಪೊಲೀಸರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಲ್ಲಿಕೆಗಳನ್ನು ಮಾಡಲಾಗಿದೆ.

ಈ ವಿಷಯವನ್ನು ಗುರುವಾರ ನ್ಯಾಯಮೂರ್ತಿ ಪ್ರತಿಬಾ ಎಂ. ಸಿಂಗ್ ಅವರ ಮುಂದೆ ಪಟ್ಟಿ ಮಾಡಲಾಗಿತ್ತಾಗಿದ್ದರೂ, ವಿಚಾರಣೆ ನಡೆಯಲಿಲ್ಲ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಪಟ್ಟಿ ನಿಗದಿ ಮಾಡಬೇಕೆಂದು ದೆಹಲಿ ಪೊಲೀಸರ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆಗಳನ್ನು ಜಂತರ್ ಮಂತರ್ ಮತ್ತು ರಾಮ್‌ಲೀಲಾ ಮೈದಾನ ಎಂಬ ಎರಡು ಸ್ಥಳಗಳಲ್ಲಿ ಮಾತ್ರ ನಡೆಸಬಹುದಾಗಿದೆ ಎಂದು ಪೊಲೀಸರು ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರಾಕ್ಟರ್‌ ರ್‍ಯಾಲಿ ದೇಶಕ್ಕೆ ಮುಜುಗರ: ತಡೆಯಾಜ್ಞೆ ಕೋರಿದ ದೆಹಲಿ ಪೊಲೀಸರು

ಕಳೆದ ವರ್ಷ ಸೆಪ್ಟೆಂಬರ್‌ನ ಡಿಡಿಎಂಎ ಅಧಿಸೂಚನೆ ಈಗ ಜನವರಿ 31 ರವರೆಗೆ ವಿಸ್ತರಿಸಲ್ಪಟ್ಟಿದೆ, ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ರೀತಿಯ ರಾಜಕೀಯ ಸಭೆಗಳಿಗೆ ಅನುಮತಿ ಇಲ್ಲ ಎಂದು ಪೊಲೀಸರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಎಎಪಿ ಶಾಸಕರಾದ ರಾಘವ್ ಮತ್ತು ಅತೀಶಿ, 2020 ರ ಡಿಸೆಂಬರ್ 13 ರಂದು ಅಮಿತ್‌ ಶಾ ಮತ್ತು ಲೆಫ್ಟಿನೆಂಟ್ ಗವರ್ನರ್‌ ಬೈಜಾಲ್ ನಿವಾಸಗಳ ಹೊರಗೆ ’ಧರಣಿ’ ನಡೆಸಲು ಬಯಸಿದ್ದರು, ಆದರೆ ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಅನುಮತಿಯಿಲ್ಲದೆ ಎರಡು ಪ್ರದೇಶಗಳಲ್ಲಿ ಪ್ರತಿಭಟಿಸಲು ಯತ್ನಿಸಿದ್ದಕ್ಕಾಗಿ ಇಬ್ಬರನ್ನು ಡಿಸೆಂಬರ್ 13, 2020 ರಂದು ಪೊಲೀಸರು ವಶಕ್ಕೆ ಪಡೆದಿದ್ದರು.

ಅಮಿತ್‌ ಶಾ ಮತ್ತು ಬೈಜಾಲ್ ನಿವಾಸಗಳ ಹೊರಗೆ ಪ್ರತಿಭಟನೆ ನಡೆಸಬೇಕೆಂಬ ಮನವಿಯನ್ನು ದೆಹಲಿ ಪೊಲೀಸರು ತಿರಸ್ಕರಿಸಿದ ನಿರ್ಧಾರವನ್ನು ಡಿಸೆಂಬರ್ 12, 2020 ರಂದು ರದ್ದುಗೊಳಿಸಲು ಇಬ್ಬರೂ ಶಾಸಕರು ಕೋರಿದ್ದರು. 2020 ರ ಡಿಸೆಂಬರ್ 25 ರವರೆಗೆ ಡಿಡಿಎಂಎ ಆದೇಶವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ತಮ್ಮ ಮನವಿಯನ್ನು ತಿರಸ್ಕರಿಸಿದ್ದರು, ಈಗ ಇದನ್ನು 2020 ರ ಡಿಸೆಂಬರ್ 31 ರವರೆಗೆ ನಿಷೇಧಿಸಲಾಗಿದೆ. ಸಾಂಕ್ರಾಮಿಕ ಹರಡುವಿಕೆಯನ್ನು ತಡೆಗಟ್ಟಲು ರಾಷ್ಟ್ರ ರಾಜಧಾನಿಯಾದ್ಯಂತ ಎಲ್ಲಾ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಗಳು ಅಥವಾ ಇತರ ಸಭೆಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ರೈತ ಹೋರಾಟದ ತೀವ್ರ ಒತ್ತಡಕ್ಕೆ ಸಿಲುಕಿದ ಹರಿಯಾಣ ಸರ್ಕಾರ; ಎಲ್ಲ ಶಾಸಕರು ದೆಹಲಿಗೆ ದೌಡು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು ಹಸಿವಿನಿಂದ...