Homeಅಂಕಣಗಳುಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

- Advertisement -
- Advertisement -

ಇಂದಿಗೆ ಸುಮಾರು 103 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರ ಚಂಪಾರಣ ಕೃಷಿ ಕಾಯಿದೆ ತಂದಿತು. ಅದರ ಮೂಲ ಉದ್ದೇಶಗಳು ಎರಡು- ವಿವಾದಿತ ತೀನ್ ಕಥಿಯಾ ಉಳುಮೆ ಪದ್ಧತಿ ರದ್ದು ಮಾಡುವುದು ಹಾಗೂ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ರೈತರಿಗೆ ಸ್ವತಂತ್ರ ನೀಡುವುದು. ಇದು ಯಾಕ್ ಬಂತಪಾ ಅಂದ್ರ ಅದರ ಹಿಂದ ಎಂಟು ತಿಂಗಳ ರೈತರ ಹೋರಾಟ ಇತ್ತು. ಅದರ ಹಿಂದ ಸುಮಾರು ಒಂದು ಶತಮಾನದ ಶೋಷಣೆ ಇತ್ತು.

ಈಸ್ಟ್ ಇಂಡಿಯಾ ಕಂಪನಿ 1790ರೊಳಗ ಜಮೀನ್ದಾರಿ ಪದ್ಧತಿ ಜಾರಿಗೆ ತಂದಿತ್ತು. ಅದರ ಪ್ರಕಾರ ಊರಾಗಿನ ಎಲ್ಲಾ ಜಮೀನಿನ ಸುಂಕ ಒಂದೇ ಕುಟುಂಬದವರು ಕೊಡಬೇಕಾಗಿತ್ತು. ಈ ಸುಂಕ ಸುಲಿಗೆದಾರರು, ಇತರ ರೈತರಿಂದ ತೆರಿಗೆ ಸಂಗ್ರಹ ಮಾಡಿ, ಅದರಲ್ಲಿ ಸ್ವಲ್ಪ ಕಮಿಷನ್ ಮುರಕೊಂಡು ಬ್ರಿಟಿಷರಿಗೆ ಕೊಡಬೇಕಾಗಿತ್ತು.

ಆ ತೆರಿಗೆ ಕಟ್ಟುವ ಮುನೀಂ-ಮುನ್ಷಿಗಳು ಸಣ್ಣ ಸಣ್ಣ ರೈತರ ಜೊತೆ ಏನು ವ್ಯವಹಾರ ಮಾಡೋದು ಬಿಡು ಅಂತ ಹೇಳಿ ಜಾರಡಿನ ಮತೆಸೊನ, ಈ. ಪಬಾನೆ, ಸಸೂನ, ವಾಡಿಯಾ, ಸ್ವೈರನಂತಾ ದೊಡ್ಡ ದೊಡ್ಡ ಕೆಮಿಕಲ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡರು. ಆ ಕಂಪನಿಗಳು ರೈತರ ಜೊತೆ ಒಪ್ಪಂದ ಮಾಡಿಕೊಂಡರು. ಅದಕ್ಕ ಅನುಕೂಲ ಆಗಲಿ ಅಂತ ಬಿಹಾರ, ಒರಿಸ್ಸಾ ಹಾಗೂ ಬಂಗಾಳ ರಾಜ್ಯಗಳ ಸರಕಾರಗಳು ತೀನ್ ಕಥಿಯ ನಿಯಮಗಳಿಗೆ ಒಪ್ಪಿಗೆ ನೀಡಿದವು. ತೀನ್ ಕಥಿಯ ಅಂದ್ರ ಪ್ರತಿ 10 ಎಕರೆ ಜಮೀನಿನ ಒಳಗ ಮೂರು ಎಕರೆ ಇಂಡಿಗೋ ನೀಲಿ ಬೆಳಿ ಬೆಳಿಯಬೇಕು. ಇದು ಕಡ್ಡಾಯ. ಇದಕ್ಕೆ ತಪ್ಪಿದರೆ ಜಮೀನುದಾರ, ಗುಮಾಸ್ತ ಹಾಗೂ ಕಂಪನೀ ಸರಕಾರ ಅವರಿಗೆ ಶಿಕ್ಷೆ ಕೊಡಬಹುದಾಗಿತ್ತು. ನೀಲಿ ಗಿಡದಿಂದ ನೀಲಿ ಬಣ್ಣ ತಯಾರು ಆಗುತ್ತಿತ್ತು.

ಅಷ್ಟರಾಗ ಜರ್ಮನಿ ವಿಜ್ಞಾನಿಗಳು 1901ಕ್ಕ ಒಂದು ಕೃತಕ ನೀಲಿ ಬಣ್ಣ ಕಂಡುಹಿಡಿದರು. ಆಗ ಇಂಡಿಗೋದ ಬೇಡಿಕೆ ಕಮ್ಮಿ ಆತು. ಬ್ರಿಟಿಷರ ಬೆಂಬಲಿತ ಕೆಮಿಕಲ್ ಕಂಪನಿಗಳು ರೈತರಿಗೆ ಕೊಡೋ ಹಣ ಕಮ್ಮಿ ಮಾಡಿದರು. 1910-1915ರ ನಡುವಿನ ಮೊದಲನೇ ಮಹಾಯುದ್ಧದ ಕಾಲಕ್ಕ ಮತ್ತೊಮ್ಮೆ ಇಂಡಿಗೋಗೆ ಬೆಲೆ ಬಂತು. ಅದರ ದುರಾಸೆಗೆ ಕಂಪನಿಗಳು ರೈತರಿಗೆ ಹೆಚ್ಚು ನೀಲಿ ಬೆಳಿಯಲಿಕ್ಕೆ ಒತ್ತಾಯ ಮಾಡಿದವು. ಒಲ್ಲೆ ಅಂದವರಿಗೆ ಹಿಂಸೆ ಕೊಟ್ಟರು. ಅವರ ಜಮೀನು ಕಸಗೊಂಡರು, ಜೈಲಿಗೆ ಹಾಕಿದರು.

ಮೋಹನ್ ದಾಸ್ ಗಾಂಧಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕ 1915ಕ್ಕ ಬಂದಿದ್ದರು. ಅವರನ್ನ ಕಾಂಗ್ರೆಸ್ ಸಮಾವೇಶದೊಳಗ ಭೇಟಿ ಮಾಡಿದ ಚಂಪಾರಣದ ರಾಜ್‌ಕುಮಾರ್ ಶುಕ್ಲ ಹಾಗೂ ಸಂತ ರಾವುತ ಅನ್ನುವ ಇಬ್ಬರು ಕಾರ್ಯಕರ್ತರು ನಮ್ಮೂರಿಗೆ ಬನ್ನಿ, ಅಲ್ಲಿ ರೈತರು ಸಂಕಷ್ಟದೊಳಗ ಅದಾರು, ಅವರಿಗೆ ಒಂದು ಹೋರಾಟ ರೂಪಿಸಿಕೊಡರಿ ಅಂತ ಕೇಳಿದರು. ಒಂದು ವರ್ಷದ ನಂತರ ಗಾಂಧೀಜಿ ಅಲ್ಲಿಗೆ ಹೋದರು. ಅಲ್ಲಿ ಅಸಹಕಾರ ಚಳವಳಿ ನಡೆಸಿ, ಜೈಲಿಗೆ ಹೋದರು. ಸುಮಾರು ಎಂಟು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದ್ದಕ್ಕ ಬ್ರಿಟಿಷರ ಮನಸ್ಸು ಕರಗಿತು. ಅವರು ಚಂಪಾರಣ ಕೃಷಿ ಕಾಯಿದೆ ರೂಪಿಸಿದರು. ತೀನ್ ಕಥಿಯಾ ನಿಯಮ ರದ್ದಾಗಿ ರೈತರು ತಮಗೆ ತಿಳಿದ ಬೆಲೆ ಬೆಳಿಯಲಿಕ್ಕೆ ಅವಕಾಶ ಮಾಡಿಕೊಟ್ಟರು.

ಈ ಹೋರಾಟದ ನಂತರ ಶುಕ್ಲ ಹಾಗೂ ರಾವುತ ಅವರು ಗಾಂಧಿಗೆ ಬಾಪು ಹಾಗೂ ಮಹಾತ್ಮ ಅಂತ ಕರೆದರು. ‘ಗಾಂಧಿ ಚಂಪಾರಣ—ತಿವನ್ನು ಬದಲು ಮಾಡಲಿಲ್ಲ. ಚಂಪಾರಣ ಗಾಂಧಿಯನ್ನು ಬದಲು ಮಾಡಿತು. ಸತ್ಯ ಹಾಗೂ ಅಹಿಂಸೆಯ ದಾರಿ ಅವರಿಗೆ ಕಾಯಂ ಆಗುವಂತೆ ಮಾಡಿತು’ ಅಂತ ಇತಿಹಾಸಕಾರ ಡೇವಿಡ್ ಅರ್ನಾಲ್ಡ್ ಹೇಳಿದರು.

ಇಷ್ಟು ಹೊತ್ತು ಕೇಳಿದ ಕತಿ ಒಂಥರಾ ಒಪ್ಪಂದ ಕೃಷಿಯ ಕತಿ ಕೇಳಿದ ಹಂಗ ಆತಲ್ಲಾ. ಈಗ ನೋಡ್ರಿ, ಕೇಂದ್ರ ಸರಕಾರದವರು ಮೂರು ಕೃಷಿ ಕಾನೂನು ಪಾಸು ಮಾಡಿದಾರು. ರಾಜ್ಯದವರು ಅವರಿಗೆ ಮುಂದ ಹೋಗಿ ಐದು ಕಾಯಿದೆ ಪಾಸು ಮಾಡಿದಾರು. ಇವು ರೈತರಿಗೆ ಅನುಕೂಲ. ಅವರ ಸ್ವಾತಂತ್ರ್ಯ ಹೆಚ್ಚಿಸಿ ಅವರ ಆದಾಯ ದುಪ್ಪಟ್ಟು ಮಾಡುವ ಕಾಯಿದೆ ಅಂತ ಹೇಳಿದಾರು. ಆದರ ಅವು ಆಳುವ ಪಕ್ಷದ ಗೆಳೆಯರ ಆದಾಯ ದುಪ್ಪಟ್ಟುಗಿಂತಲೂ ಹೆಚ್ಚು ಮಾಡಿದಾವು. ಅವರ ಸ್ವಾತಂತ್ರ್ಯವನ್ನು ಅತಿಯಾಗಿ ಜಾಸ್ತಿ ಮಾಡಿ ಅವರ ಮ್ಯಾಲೆ ಯಾವ ನಿಯಂತ್ರಣ ಇರಲಾರದ ಹಂಗ ಮಾಡಿಬಿಟ್ಟಾವು.

ಕೇಂದ್ರದವರು ಮಾಡಿದ ಕಾನೂನುಗಳು ಇಡೀ ದೇಶಕ್ಕೆ ದುಷ್ಪರಿಣಾಮ ಬೀರಿದರೂ ಸಹಿತ ಅವು ಕೇವಲ ಪಂಜಾಬಿನ ಸಮಸ್ಯೆ ಅಂತ ಕೆಲವರು ಅದನ್ನ ದುರ್ಲಕ್ಷ್ಯ ಮಾಡಿದಾರ. ಕರ್ನಾಟಕದ ಘನ ಸರಕಾರ ‘ಒಂದು ಜಿಲ್ಲೆಗೆ ಒಂದು ಪ್ರಮುಖ ಬೆಳೆ’ ಅಂತ ಹೇಳಿ ಒಂದು ಪಟ್ಟಿ ಹೊರಡಿಸಿಬಿಟ್ಟೆತಿ. ಕೇಂದ್ರದ ಒಪ್ಪಂದ ಕೃಷಿ ಕಾನೂನಿನಾಗ ಕಂಪನಿಗಳು ರೈತರಿಗೆ ಮೂಲ ಒಪ್ಪಂದದ ಪ್ರಕಾರ ಹಣ ಕೊಡದೆ ಹೋದರೆ ರೈತರು ಕೋರ್ಟಿಗೆ ಹೋಗಲಿಕ್ಕೆ ಬರೋದಿಲ್ಲ ಅಂತ ಒಂದು ಮಾತು ಐತಿ. ಅವರು ಉಪವಿಭಾಗ ಅಧಿಕಾರಿಯ ಮಂಡಳಿಗೆ ಆರ್ಜಿ ಸಲ್ಲಿಸಬೇಕು. ಅವರು ಆದೇಶ ನೀಡಬಹುದು, ಅಥವಾ ಪರ್ಯಾಯ ನ್ಯಾಯ ನಿರ್ಣಯದ ಮೂಲಕ ಅವರಿಗೆ ನಷ್ಟ ತುಂಬಿ ಕೊಡಬೇಕು ಅಂತ ಅದರಾಗ ಶಿಫಾರಸು ಐತಿ. ಭಾರತದ ಯಾವ ಉಪವಿಭಾಗ ಅಧಿಕಾರಿ, ಬಹು ರಾಷ್ಟ್ರೀಯ ಕಂಪನಿ ಅಥವಾ ಮದ್ದಾನಿ ಕಂಪನಿಗಳ ವಿರುದ್ಧ ಆದೇಶ ಪಾಸು ಮಾಡುವ ಧೈರ್ಯ ತೋರಸ್ತಾನ ಅನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ಇಲ್ಲ.

ಇನ್ನೂ ರಾಜ್ಯ ಕೃಷಿ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ್ ಅವರು ಒನ್ ಜಿಲ್ಲಾ ಒನ್ ಕ್ರಾಪ್ ಅನ್ನೋದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ, ಅದರಿಂದ ರೈತರಿಗೆ ಒಳ್ಳೆ ಮಾರುಕಟ್ಟೆ ಸಿಗತದ ಅಂತ ಘೋಷಣೆ ಮಾಡಿದಾರು. ಅವರ ಪ್ರಕಾರ ಖರೀದಿ ಮಾಡುವನಿಗೆ ಅನುಕೂಲ ಮಾಡಿಕೊಟ್ಟರ ರೈತರಿಗೆ ಒಳ್ಳೆ ಬೆಲೆ ಕೊಟ್ಟ ಹಂಗ.

ಇದು ಲೆಕ್ಕಾಚಾರ ಏನಾದರೂ ತಪ್ಪಿದರ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದರಿಂದ ರೈತರಿಗೆ ತಮ್ಮ ಮನಸ್ಸಿನ ಬೆಳೆ ಬೆಳೆಯುವ ಸ್ವಾತಂತ್ರ್ಯ ತಪ್ಪಿ ಹೋಗತದ ಅನ್ನುವ ಸಂದೇಹಕ್ಕ ಅವರು ಪರಿಹಾರ ಸೂಚಿಸಿಲ್ಲ.

ಒಂದು ಜಿಲ್ಲೆಯ ಎಲ್ಲಾ ರೈತರು ಒಂದೇ ಬೆಳೆ ಬೆಳೆದರ ಕೀಟ ಬಾಧೆ ಕಾಡಬಹುದು ಅಂತ ಕೆಲವರು ತಜ್ಞರು ಹೇಳತಾರ. ಆದರ ಸರಕಾರ ಅದಕ್ಕ ಇನ್ನೂ ಉತ್ತರ ಕೊಡಲಿಕ್ಕೆ ಹತ್ತಿಲ್ಲ. ಮುಂದೆ ಒಂದು ದಿವಸ ಮದ್ದಾನೀ ಕಂಪನಿಗಳ ಕೀಟ ನಾಶಕ ಉಪಯೋಗಿಸಿರಿ ಅಂತ ಹೇಳಬಹುದು.

ಎಲ್ಲರೂ ಒಂದೇ ಬೆಳೆ ಬೆಳೆದರೆ ಪೂರೈಕೆ ಹಾಗೂ ಬೇಡಿಕೆಯ ತಕ್ಕಡಿ ಉಲ್ಟಾ ಆಗಿ ರೈತರಿಗೆ ಅನ್ಯಾಯ ಆಗಬಹುದು ಅನ್ನುವುದಕ್ಕೆ ಅವರಲ್ಲಿ ಉತ್ತರ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳೆ ಆಯ್ಕೆ ಮಾಡದೆ ಇತರ ಬೆಳೆ ಬೆಳೆದರೆ ಅವರಿಗೆ ಸರಕಾರದಿಂದ ಸಿಗೋ ಅನುಕೂಲಗಳು ಸಿಗೋದಿಲ್ಲ, ಸಾಲ ಸಿಗದೇ ಇರಬಹುದು, ಬೆಳೆ ವಿಮೆ ಸಿಗದೇ ಇರಬಹುದು ಅಂತ ಕೆಲವು ಏಜೆಂಟರು ಪಿಸುಗುಟ್ಟಲಿಕ್ಕೆ ಹತ್ತಿಬಿಟ್ಟಾರು.

ಚಂಪಾರಣ ಅಂದ್ರ ಸಂಪಿಗೆ ಬನ ಅಂತ. ಆ ಬನಕ್ಕೆ ಬೆಂಕಿ ಬಿದ್ದಾಗ ಅದನ್ನು ಆರಿಸಲು ಗಾಂಧಿ ಬಂದರು. ರೈತರು ಒಗ್ಗಟ್ಟು ತೋರಿಸಿ ಹೋರಾಟ ಮಾಡಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ಈಸ್ಟ್ ಇಂಡಿಯಾ ಕಂಪನಿ ಮಂದಿಯ ಕಲ್ಲಿನ ಹೃದಯ ಕರಗಿಹೋತು. ರೈತರ ಬವಣೆ ತಪ್ಪಿಸಲು ಅವರು ಕಾನೂನು ಮಾಡಿದರು. ಈಗ ಗಾಂಧಿ ಇಲ್ಲ. ಸಂಪಿಗೆ ಬನದ ನೊಂದವರ ಹಾಡು ಕೇಳಿ ಕರಗುವ ಹೃದಯ ಇಂದಿನ ಆಳುವವರಿಗೆ ಇಲ್ಲ. ತಮ್ಮ ಗೆಳೆಯರಾಗಿರುವ ವೆಸ್ಟ್ ಇಂಡಿಯಾ ಕಂಪನಿಗಳಿಗೆ ಲುಕ್ಸಾನ ಆಗತದ ಅಂತ ಗೊತ್ತಾದರ ಸರಕಾರಗಳು ಯಾವ ಕಾನೂನನ್ನು ಕೂಡ ಬದಲು ಮಾಡೋ ಹಂಗ ಕಾಣೋದಿಲ್ಲಾ. ಈಗ ಸಂಪಿಗೆ ಬನದ ಹಾಡು ಹೇಳೋರು ಯಾರು? ಹೇಳಿದರೂ ಕೇಳೋರು ಯಾರು?


ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...

ನೀಟ್ ಪ್ರತಿಭಟನೆ: ಮಧ್ಯಪ್ರದೇಶ ಪೊಲೀಸರು ಧರ್ಮದ ಕಾರಣಕ್ಕೆ ನನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ: ಜೆಎನ್‌ಯು ವಿದ್ಯಾರ್ಥಿ ನಾಯಕಿ ಡ್ಯಾನಿಶ್ ಅಲಿ ಆರೋಪ

ದೇಶದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯನ್ನು ಪ್ರಶ್ನಿಸಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ, ಮಧ್ಯಪ್ರದೇಶ ಪೊಲೀಸರು ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ...