Homeಅಂಕಣಗಳುಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

- Advertisement -
- Advertisement -

ಇಂದಿಗೆ ಸುಮಾರು 103 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರ ಚಂಪಾರಣ ಕೃಷಿ ಕಾಯಿದೆ ತಂದಿತು. ಅದರ ಮೂಲ ಉದ್ದೇಶಗಳು ಎರಡು- ವಿವಾದಿತ ತೀನ್ ಕಥಿಯಾ ಉಳುಮೆ ಪದ್ಧತಿ ರದ್ದು ಮಾಡುವುದು ಹಾಗೂ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ರೈತರಿಗೆ ಸ್ವತಂತ್ರ ನೀಡುವುದು. ಇದು ಯಾಕ್ ಬಂತಪಾ ಅಂದ್ರ ಅದರ ಹಿಂದ ಎಂಟು ತಿಂಗಳ ರೈತರ ಹೋರಾಟ ಇತ್ತು. ಅದರ ಹಿಂದ ಸುಮಾರು ಒಂದು ಶತಮಾನದ ಶೋಷಣೆ ಇತ್ತು.

ಈಸ್ಟ್ ಇಂಡಿಯಾ ಕಂಪನಿ 1790ರೊಳಗ ಜಮೀನ್ದಾರಿ ಪದ್ಧತಿ ಜಾರಿಗೆ ತಂದಿತ್ತು. ಅದರ ಪ್ರಕಾರ ಊರಾಗಿನ ಎಲ್ಲಾ ಜಮೀನಿನ ಸುಂಕ ಒಂದೇ ಕುಟುಂಬದವರು ಕೊಡಬೇಕಾಗಿತ್ತು. ಈ ಸುಂಕ ಸುಲಿಗೆದಾರರು, ಇತರ ರೈತರಿಂದ ತೆರಿಗೆ ಸಂಗ್ರಹ ಮಾಡಿ, ಅದರಲ್ಲಿ ಸ್ವಲ್ಪ ಕಮಿಷನ್ ಮುರಕೊಂಡು ಬ್ರಿಟಿಷರಿಗೆ ಕೊಡಬೇಕಾಗಿತ್ತು.

ಆ ತೆರಿಗೆ ಕಟ್ಟುವ ಮುನೀಂ-ಮುನ್ಷಿಗಳು ಸಣ್ಣ ಸಣ್ಣ ರೈತರ ಜೊತೆ ಏನು ವ್ಯವಹಾರ ಮಾಡೋದು ಬಿಡು ಅಂತ ಹೇಳಿ ಜಾರಡಿನ ಮತೆಸೊನ, ಈ. ಪಬಾನೆ, ಸಸೂನ, ವಾಡಿಯಾ, ಸ್ವೈರನಂತಾ ದೊಡ್ಡ ದೊಡ್ಡ ಕೆಮಿಕಲ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡರು. ಆ ಕಂಪನಿಗಳು ರೈತರ ಜೊತೆ ಒಪ್ಪಂದ ಮಾಡಿಕೊಂಡರು. ಅದಕ್ಕ ಅನುಕೂಲ ಆಗಲಿ ಅಂತ ಬಿಹಾರ, ಒರಿಸ್ಸಾ ಹಾಗೂ ಬಂಗಾಳ ರಾಜ್ಯಗಳ ಸರಕಾರಗಳು ತೀನ್ ಕಥಿಯ ನಿಯಮಗಳಿಗೆ ಒಪ್ಪಿಗೆ ನೀಡಿದವು. ತೀನ್ ಕಥಿಯ ಅಂದ್ರ ಪ್ರತಿ 10 ಎಕರೆ ಜಮೀನಿನ ಒಳಗ ಮೂರು ಎಕರೆ ಇಂಡಿಗೋ ನೀಲಿ ಬೆಳಿ ಬೆಳಿಯಬೇಕು. ಇದು ಕಡ್ಡಾಯ. ಇದಕ್ಕೆ ತಪ್ಪಿದರೆ ಜಮೀನುದಾರ, ಗುಮಾಸ್ತ ಹಾಗೂ ಕಂಪನೀ ಸರಕಾರ ಅವರಿಗೆ ಶಿಕ್ಷೆ ಕೊಡಬಹುದಾಗಿತ್ತು. ನೀಲಿ ಗಿಡದಿಂದ ನೀಲಿ ಬಣ್ಣ ತಯಾರು ಆಗುತ್ತಿತ್ತು.

ಅಷ್ಟರಾಗ ಜರ್ಮನಿ ವಿಜ್ಞಾನಿಗಳು 1901ಕ್ಕ ಒಂದು ಕೃತಕ ನೀಲಿ ಬಣ್ಣ ಕಂಡುಹಿಡಿದರು. ಆಗ ಇಂಡಿಗೋದ ಬೇಡಿಕೆ ಕಮ್ಮಿ ಆತು. ಬ್ರಿಟಿಷರ ಬೆಂಬಲಿತ ಕೆಮಿಕಲ್ ಕಂಪನಿಗಳು ರೈತರಿಗೆ ಕೊಡೋ ಹಣ ಕಮ್ಮಿ ಮಾಡಿದರು. 1910-1915ರ ನಡುವಿನ ಮೊದಲನೇ ಮಹಾಯುದ್ಧದ ಕಾಲಕ್ಕ ಮತ್ತೊಮ್ಮೆ ಇಂಡಿಗೋಗೆ ಬೆಲೆ ಬಂತು. ಅದರ ದುರಾಸೆಗೆ ಕಂಪನಿಗಳು ರೈತರಿಗೆ ಹೆಚ್ಚು ನೀಲಿ ಬೆಳಿಯಲಿಕ್ಕೆ ಒತ್ತಾಯ ಮಾಡಿದವು. ಒಲ್ಲೆ ಅಂದವರಿಗೆ ಹಿಂಸೆ ಕೊಟ್ಟರು. ಅವರ ಜಮೀನು ಕಸಗೊಂಡರು, ಜೈಲಿಗೆ ಹಾಕಿದರು.

ಮೋಹನ್ ದಾಸ್ ಗಾಂಧಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕ 1915ಕ್ಕ ಬಂದಿದ್ದರು. ಅವರನ್ನ ಕಾಂಗ್ರೆಸ್ ಸಮಾವೇಶದೊಳಗ ಭೇಟಿ ಮಾಡಿದ ಚಂಪಾರಣದ ರಾಜ್‌ಕುಮಾರ್ ಶುಕ್ಲ ಹಾಗೂ ಸಂತ ರಾವುತ ಅನ್ನುವ ಇಬ್ಬರು ಕಾರ್ಯಕರ್ತರು ನಮ್ಮೂರಿಗೆ ಬನ್ನಿ, ಅಲ್ಲಿ ರೈತರು ಸಂಕಷ್ಟದೊಳಗ ಅದಾರು, ಅವರಿಗೆ ಒಂದು ಹೋರಾಟ ರೂಪಿಸಿಕೊಡರಿ ಅಂತ ಕೇಳಿದರು. ಒಂದು ವರ್ಷದ ನಂತರ ಗಾಂಧೀಜಿ ಅಲ್ಲಿಗೆ ಹೋದರು. ಅಲ್ಲಿ ಅಸಹಕಾರ ಚಳವಳಿ ನಡೆಸಿ, ಜೈಲಿಗೆ ಹೋದರು. ಸುಮಾರು ಎಂಟು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದ್ದಕ್ಕ ಬ್ರಿಟಿಷರ ಮನಸ್ಸು ಕರಗಿತು. ಅವರು ಚಂಪಾರಣ ಕೃಷಿ ಕಾಯಿದೆ ರೂಪಿಸಿದರು. ತೀನ್ ಕಥಿಯಾ ನಿಯಮ ರದ್ದಾಗಿ ರೈತರು ತಮಗೆ ತಿಳಿದ ಬೆಲೆ ಬೆಳಿಯಲಿಕ್ಕೆ ಅವಕಾಶ ಮಾಡಿಕೊಟ್ಟರು.

ಈ ಹೋರಾಟದ ನಂತರ ಶುಕ್ಲ ಹಾಗೂ ರಾವುತ ಅವರು ಗಾಂಧಿಗೆ ಬಾಪು ಹಾಗೂ ಮಹಾತ್ಮ ಅಂತ ಕರೆದರು. ‘ಗಾಂಧಿ ಚಂಪಾರಣ—ತಿವನ್ನು ಬದಲು ಮಾಡಲಿಲ್ಲ. ಚಂಪಾರಣ ಗಾಂಧಿಯನ್ನು ಬದಲು ಮಾಡಿತು. ಸತ್ಯ ಹಾಗೂ ಅಹಿಂಸೆಯ ದಾರಿ ಅವರಿಗೆ ಕಾಯಂ ಆಗುವಂತೆ ಮಾಡಿತು’ ಅಂತ ಇತಿಹಾಸಕಾರ ಡೇವಿಡ್ ಅರ್ನಾಲ್ಡ್ ಹೇಳಿದರು.

ಇಷ್ಟು ಹೊತ್ತು ಕೇಳಿದ ಕತಿ ಒಂಥರಾ ಒಪ್ಪಂದ ಕೃಷಿಯ ಕತಿ ಕೇಳಿದ ಹಂಗ ಆತಲ್ಲಾ. ಈಗ ನೋಡ್ರಿ, ಕೇಂದ್ರ ಸರಕಾರದವರು ಮೂರು ಕೃಷಿ ಕಾನೂನು ಪಾಸು ಮಾಡಿದಾರು. ರಾಜ್ಯದವರು ಅವರಿಗೆ ಮುಂದ ಹೋಗಿ ಐದು ಕಾಯಿದೆ ಪಾಸು ಮಾಡಿದಾರು. ಇವು ರೈತರಿಗೆ ಅನುಕೂಲ. ಅವರ ಸ್ವಾತಂತ್ರ್ಯ ಹೆಚ್ಚಿಸಿ ಅವರ ಆದಾಯ ದುಪ್ಪಟ್ಟು ಮಾಡುವ ಕಾಯಿದೆ ಅಂತ ಹೇಳಿದಾರು. ಆದರ ಅವು ಆಳುವ ಪಕ್ಷದ ಗೆಳೆಯರ ಆದಾಯ ದುಪ್ಪಟ್ಟುಗಿಂತಲೂ ಹೆಚ್ಚು ಮಾಡಿದಾವು. ಅವರ ಸ್ವಾತಂತ್ರ್ಯವನ್ನು ಅತಿಯಾಗಿ ಜಾಸ್ತಿ ಮಾಡಿ ಅವರ ಮ್ಯಾಲೆ ಯಾವ ನಿಯಂತ್ರಣ ಇರಲಾರದ ಹಂಗ ಮಾಡಿಬಿಟ್ಟಾವು.

ಕೇಂದ್ರದವರು ಮಾಡಿದ ಕಾನೂನುಗಳು ಇಡೀ ದೇಶಕ್ಕೆ ದುಷ್ಪರಿಣಾಮ ಬೀರಿದರೂ ಸಹಿತ ಅವು ಕೇವಲ ಪಂಜಾಬಿನ ಸಮಸ್ಯೆ ಅಂತ ಕೆಲವರು ಅದನ್ನ ದುರ್ಲಕ್ಷ್ಯ ಮಾಡಿದಾರ. ಕರ್ನಾಟಕದ ಘನ ಸರಕಾರ ‘ಒಂದು ಜಿಲ್ಲೆಗೆ ಒಂದು ಪ್ರಮುಖ ಬೆಳೆ’ ಅಂತ ಹೇಳಿ ಒಂದು ಪಟ್ಟಿ ಹೊರಡಿಸಿಬಿಟ್ಟೆತಿ. ಕೇಂದ್ರದ ಒಪ್ಪಂದ ಕೃಷಿ ಕಾನೂನಿನಾಗ ಕಂಪನಿಗಳು ರೈತರಿಗೆ ಮೂಲ ಒಪ್ಪಂದದ ಪ್ರಕಾರ ಹಣ ಕೊಡದೆ ಹೋದರೆ ರೈತರು ಕೋರ್ಟಿಗೆ ಹೋಗಲಿಕ್ಕೆ ಬರೋದಿಲ್ಲ ಅಂತ ಒಂದು ಮಾತು ಐತಿ. ಅವರು ಉಪವಿಭಾಗ ಅಧಿಕಾರಿಯ ಮಂಡಳಿಗೆ ಆರ್ಜಿ ಸಲ್ಲಿಸಬೇಕು. ಅವರು ಆದೇಶ ನೀಡಬಹುದು, ಅಥವಾ ಪರ್ಯಾಯ ನ್ಯಾಯ ನಿರ್ಣಯದ ಮೂಲಕ ಅವರಿಗೆ ನಷ್ಟ ತುಂಬಿ ಕೊಡಬೇಕು ಅಂತ ಅದರಾಗ ಶಿಫಾರಸು ಐತಿ. ಭಾರತದ ಯಾವ ಉಪವಿಭಾಗ ಅಧಿಕಾರಿ, ಬಹು ರಾಷ್ಟ್ರೀಯ ಕಂಪನಿ ಅಥವಾ ಮದ್ದಾನಿ ಕಂಪನಿಗಳ ವಿರುದ್ಧ ಆದೇಶ ಪಾಸು ಮಾಡುವ ಧೈರ್ಯ ತೋರಸ್ತಾನ ಅನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ಇಲ್ಲ.

ಇನ್ನೂ ರಾಜ್ಯ ಕೃಷಿ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ್ ಅವರು ಒನ್ ಜಿಲ್ಲಾ ಒನ್ ಕ್ರಾಪ್ ಅನ್ನೋದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ, ಅದರಿಂದ ರೈತರಿಗೆ ಒಳ್ಳೆ ಮಾರುಕಟ್ಟೆ ಸಿಗತದ ಅಂತ ಘೋಷಣೆ ಮಾಡಿದಾರು. ಅವರ ಪ್ರಕಾರ ಖರೀದಿ ಮಾಡುವನಿಗೆ ಅನುಕೂಲ ಮಾಡಿಕೊಟ್ಟರ ರೈತರಿಗೆ ಒಳ್ಳೆ ಬೆಲೆ ಕೊಟ್ಟ ಹಂಗ.

ಇದು ಲೆಕ್ಕಾಚಾರ ಏನಾದರೂ ತಪ್ಪಿದರ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದರಿಂದ ರೈತರಿಗೆ ತಮ್ಮ ಮನಸ್ಸಿನ ಬೆಳೆ ಬೆಳೆಯುವ ಸ್ವಾತಂತ್ರ್ಯ ತಪ್ಪಿ ಹೋಗತದ ಅನ್ನುವ ಸಂದೇಹಕ್ಕ ಅವರು ಪರಿಹಾರ ಸೂಚಿಸಿಲ್ಲ.

ಒಂದು ಜಿಲ್ಲೆಯ ಎಲ್ಲಾ ರೈತರು ಒಂದೇ ಬೆಳೆ ಬೆಳೆದರ ಕೀಟ ಬಾಧೆ ಕಾಡಬಹುದು ಅಂತ ಕೆಲವರು ತಜ್ಞರು ಹೇಳತಾರ. ಆದರ ಸರಕಾರ ಅದಕ್ಕ ಇನ್ನೂ ಉತ್ತರ ಕೊಡಲಿಕ್ಕೆ ಹತ್ತಿಲ್ಲ. ಮುಂದೆ ಒಂದು ದಿವಸ ಮದ್ದಾನೀ ಕಂಪನಿಗಳ ಕೀಟ ನಾಶಕ ಉಪಯೋಗಿಸಿರಿ ಅಂತ ಹೇಳಬಹುದು.

ಎಲ್ಲರೂ ಒಂದೇ ಬೆಳೆ ಬೆಳೆದರೆ ಪೂರೈಕೆ ಹಾಗೂ ಬೇಡಿಕೆಯ ತಕ್ಕಡಿ ಉಲ್ಟಾ ಆಗಿ ರೈತರಿಗೆ ಅನ್ಯಾಯ ಆಗಬಹುದು ಅನ್ನುವುದಕ್ಕೆ ಅವರಲ್ಲಿ ಉತ್ತರ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳೆ ಆಯ್ಕೆ ಮಾಡದೆ ಇತರ ಬೆಳೆ ಬೆಳೆದರೆ ಅವರಿಗೆ ಸರಕಾರದಿಂದ ಸಿಗೋ ಅನುಕೂಲಗಳು ಸಿಗೋದಿಲ್ಲ, ಸಾಲ ಸಿಗದೇ ಇರಬಹುದು, ಬೆಳೆ ವಿಮೆ ಸಿಗದೇ ಇರಬಹುದು ಅಂತ ಕೆಲವು ಏಜೆಂಟರು ಪಿಸುಗುಟ್ಟಲಿಕ್ಕೆ ಹತ್ತಿಬಿಟ್ಟಾರು.

ಚಂಪಾರಣ ಅಂದ್ರ ಸಂಪಿಗೆ ಬನ ಅಂತ. ಆ ಬನಕ್ಕೆ ಬೆಂಕಿ ಬಿದ್ದಾಗ ಅದನ್ನು ಆರಿಸಲು ಗಾಂಧಿ ಬಂದರು. ರೈತರು ಒಗ್ಗಟ್ಟು ತೋರಿಸಿ ಹೋರಾಟ ಮಾಡಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ಈಸ್ಟ್ ಇಂಡಿಯಾ ಕಂಪನಿ ಮಂದಿಯ ಕಲ್ಲಿನ ಹೃದಯ ಕರಗಿಹೋತು. ರೈತರ ಬವಣೆ ತಪ್ಪಿಸಲು ಅವರು ಕಾನೂನು ಮಾಡಿದರು. ಈಗ ಗಾಂಧಿ ಇಲ್ಲ. ಸಂಪಿಗೆ ಬನದ ನೊಂದವರ ಹಾಡು ಕೇಳಿ ಕರಗುವ ಹೃದಯ ಇಂದಿನ ಆಳುವವರಿಗೆ ಇಲ್ಲ. ತಮ್ಮ ಗೆಳೆಯರಾಗಿರುವ ವೆಸ್ಟ್ ಇಂಡಿಯಾ ಕಂಪನಿಗಳಿಗೆ ಲುಕ್ಸಾನ ಆಗತದ ಅಂತ ಗೊತ್ತಾದರ ಸರಕಾರಗಳು ಯಾವ ಕಾನೂನನ್ನು ಕೂಡ ಬದಲು ಮಾಡೋ ಹಂಗ ಕಾಣೋದಿಲ್ಲಾ. ಈಗ ಸಂಪಿಗೆ ಬನದ ಹಾಡು ಹೇಳೋರು ಯಾರು? ಹೇಳಿದರೂ ಕೇಳೋರು ಯಾರು?


ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯ ಸಂಸದರಿಗೆ ಸಂಕಷ್ಟ: 7 ದಿನಗಳಲ್ಲಿ ಉತ್ತರಿಸಲು ಲೋಕಸಭೆ ಸಚಿವಾಲಯ ತಾಕೀತು

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 20 ಬಂಡಾಯ ಸಂಸದರಿಗೆ ಲೋಕಸಭಾ ಸಚಿವಾಲಯವು ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳ ಒಳಗಾಗಿ ಸೂಕ್ತ ಉತ್ತರ ನೀಡುವಂತೆ ಸೂಚಿಸಿದೆ. ಪಕ್ಷಾಂತರ ಕಾಯ್ದೆಯಡಿ ಸಂಸದರ ಅನರ್ಹತೆ ಪ್ರಕ್ರಿಯೆಗಳನ್ನು...

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ನ್ಯೂಯಾರ್ಕ್ ಮೇಯರ್ ವಿರೋಧ: ಸಂಘದ ‘ಹೊರಗಿಡುವ ದೃಷ್ಟಿಕೋನ’ ಖಂಡಿಸಿದ ಮಮ್ದಾನಿ

ಅಮೆರಿಕದ ನ್ಯೂಯಾರ್ಕ್ ನಗರದ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿರುವ ಬೃಹತ್ ಭಾರತೀಯ ಮೂಲದವರ ಸಮಾವೇಶವು...

ಕರ್ನಾಟಕದಲ್ಲಿ ವಂದೇ ಮಾತರಂನ ಎರಡು ಚರಣ ಮಾತ್ರ ಬಳಕೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಕರ್ನಾಟಕದಲ್ಲಿ ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ರೌಂಡ್‌ಟೇಬಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ...

ಬೀದಿ ಬದಿ ವ್ಯಾಪಾರಿಗಳ ತೆರವು ಅಕ್ರಮ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ

ಮಂಗಳೂರಿನ ಟೌನ್ ಹಾಲ್ ಸಮೀಪ ನಡೆಯುವ ಸಂಡೇ ಬಜಾರ್‌ನಲ್ಲಿ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ದಕ್ಷಿಣ ಕನ್ನಡ ಜಿಲ್ಲಾ...

ತೆಲಂಗಾಂಣ | ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಭೀಕರ ಅಪಘಾತ: 6 ಮಂದಿ ಸಾವು; ಹಲವರಿಗೆ ಗಾಯ

ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ಬುಧವಾರ (ಆ.26) ಮುಂಜಾನೆ ಖಾಸಗಿ ಎಲೆಕ್ಟ್ರಿಕ್ ಬಸ್‌ವೊಂದು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 12 ಜನರು ಗಾಯಗೊಂಡಿದ್ದಾರೆ...

ಬಿಡದಿ ಟೌನ್‌ಶಿಪ್: ಸರ್ಕಾರಕ್ಕೆ ನಾಲ್ಕು ಪ್ರಮುಖ ಹಕ್ಕೊತ್ತಾಯ, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ.

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಬಿಡದಿ ರೈತರು ಹಾಗೂ ಸಂಯುಕ್ತ ಹೋರಾಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಹೋರಾಟ...

ತಮಿಳುನಾಡು| ಮರ್ಯಾದೆಗೇಡು ಹತ್ಯೆ ಶಂಕೆ; 25 ವರ್ಷದ ದಲಿತ ಯುವಕನ ಭೀಕರ ಕೊಲೆ

ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯಲ್ಲಿ 23 ವರ್ಷದ ದಲಿತ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದ್ದು, ಮರ್ಯಾದೆಗೇಡು ಕೊಲೆಯ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 16 ರಂದು ರಾತ್ರಿ ಚೆಂಗಲ್ಪಟ್ಟುವಿನ ಕೇಳಂಬಾಕ್ಕಂ ನಿವಾಸಿ ಪ್ರವೀಣ್ ಅವರ ಮೇಲೆ ದಾಳಿಕೋರರಾದ...

44 ಲಕ್ಷ ಮತದಾರರಿಗೆ ನೋಟಿಸ್: BLA ಗಳಿಗೆ ಪಟ್ಟಿ ನೀಡಿ, ಪಾರದರ್ಶಕತೆ ಕಾಯ್ದುಕೊಳ್ಳಲು ‘ಜಾಗೃತ ಕರ್ನಾಟಕ’ ಒತ್ತಾಯ

ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಪ್ರಕಟಗೊಳ್ಳುತ್ತಿರುವ ಕರಡು ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಎಚ್ಚರವಹಿಸಬೇಕು ಹಾಗೂ ನೋಟಿಸ್ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಿಸಬೇಕು ಎಂದು ಆಗ್ರಹಿಸಿ ‘ಜಾಗೃತ...

ಕೇರಳ ಬಿಜೆಪಿಗೆ ಹಿರಿಯ ನಟ ಎಸ್. ದೇವನ್ ಗುಡ್‌ಬೈ: ‘ದಳಪತಿ’ ವಿಜಯ್ ಟಿವಿಕೆ ಪಕ್ಷ ಸೇರಲು ಒಲವು!

ಮಲಯಾಳಂ ನಟ ಹಾಗೂ ರಾಜಕಾರಣಿ ಎಸ್. ದೇವನ್ ಅವರು ತಮಿಳುನಾಡಿನ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಕೇರಳ...

ಮತ್ತೆ ಜೈಲಿನಿಂದ ಹೊರಬಂದ ಅತ್ಯಾಚಾರಿ ರಾಮ್ ರಹೀಮ್! 6 ವರ್ಷದಲ್ಲಿ 17ನೇ ಬಾರಿ ಪೆರೋಲ್

ನವದೆಹಲಿ/ರೋಹ್ಟಕ್: ಇಬ್ಬರು ಮಹಿಳಾ ಶಿಷ್ಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಪುನಃ...