Homeಅಂಕಣಗಳುಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

ಸಂಪಿಗೆ ಬನದ ಹಾಡು ಹೇಳೋರು ಯಾರು? ಚಂಪಾರಣ ಸತ್ಯಾಗ್ರಹ ಮತ್ತು ರೈತ ಹೋರಾಟ

- Advertisement -
- Advertisement -

ಇಂದಿಗೆ ಸುಮಾರು 103 ವರ್ಷಗಳ ಹಿಂದೆ ಬ್ರಿಟಿಷ್ ಸರಕಾರ ಚಂಪಾರಣ ಕೃಷಿ ಕಾಯಿದೆ ತಂದಿತು. ಅದರ ಮೂಲ ಉದ್ದೇಶಗಳು ಎರಡು- ವಿವಾದಿತ ತೀನ್ ಕಥಿಯಾ ಉಳುಮೆ ಪದ್ಧತಿ ರದ್ದು ಮಾಡುವುದು ಹಾಗೂ ತಮಗೆ ಬೇಕಾದ ಬೆಳೆ ಬೆಳೆದುಕೊಳ್ಳಲು ರೈತರಿಗೆ ಸ್ವತಂತ್ರ ನೀಡುವುದು. ಇದು ಯಾಕ್ ಬಂತಪಾ ಅಂದ್ರ ಅದರ ಹಿಂದ ಎಂಟು ತಿಂಗಳ ರೈತರ ಹೋರಾಟ ಇತ್ತು. ಅದರ ಹಿಂದ ಸುಮಾರು ಒಂದು ಶತಮಾನದ ಶೋಷಣೆ ಇತ್ತು.

ಈಸ್ಟ್ ಇಂಡಿಯಾ ಕಂಪನಿ 1790ರೊಳಗ ಜಮೀನ್ದಾರಿ ಪದ್ಧತಿ ಜಾರಿಗೆ ತಂದಿತ್ತು. ಅದರ ಪ್ರಕಾರ ಊರಾಗಿನ ಎಲ್ಲಾ ಜಮೀನಿನ ಸುಂಕ ಒಂದೇ ಕುಟುಂಬದವರು ಕೊಡಬೇಕಾಗಿತ್ತು. ಈ ಸುಂಕ ಸುಲಿಗೆದಾರರು, ಇತರ ರೈತರಿಂದ ತೆರಿಗೆ ಸಂಗ್ರಹ ಮಾಡಿ, ಅದರಲ್ಲಿ ಸ್ವಲ್ಪ ಕಮಿಷನ್ ಮುರಕೊಂಡು ಬ್ರಿಟಿಷರಿಗೆ ಕೊಡಬೇಕಾಗಿತ್ತು.

ಆ ತೆರಿಗೆ ಕಟ್ಟುವ ಮುನೀಂ-ಮುನ್ಷಿಗಳು ಸಣ್ಣ ಸಣ್ಣ ರೈತರ ಜೊತೆ ಏನು ವ್ಯವಹಾರ ಮಾಡೋದು ಬಿಡು ಅಂತ ಹೇಳಿ ಜಾರಡಿನ ಮತೆಸೊನ, ಈ. ಪಬಾನೆ, ಸಸೂನ, ವಾಡಿಯಾ, ಸ್ವೈರನಂತಾ ದೊಡ್ಡ ದೊಡ್ಡ ಕೆಮಿಕಲ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡರು. ಆ ಕಂಪನಿಗಳು ರೈತರ ಜೊತೆ ಒಪ್ಪಂದ ಮಾಡಿಕೊಂಡರು. ಅದಕ್ಕ ಅನುಕೂಲ ಆಗಲಿ ಅಂತ ಬಿಹಾರ, ಒರಿಸ್ಸಾ ಹಾಗೂ ಬಂಗಾಳ ರಾಜ್ಯಗಳ ಸರಕಾರಗಳು ತೀನ್ ಕಥಿಯ ನಿಯಮಗಳಿಗೆ ಒಪ್ಪಿಗೆ ನೀಡಿದವು. ತೀನ್ ಕಥಿಯ ಅಂದ್ರ ಪ್ರತಿ 10 ಎಕರೆ ಜಮೀನಿನ ಒಳಗ ಮೂರು ಎಕರೆ ಇಂಡಿಗೋ ನೀಲಿ ಬೆಳಿ ಬೆಳಿಯಬೇಕು. ಇದು ಕಡ್ಡಾಯ. ಇದಕ್ಕೆ ತಪ್ಪಿದರೆ ಜಮೀನುದಾರ, ಗುಮಾಸ್ತ ಹಾಗೂ ಕಂಪನೀ ಸರಕಾರ ಅವರಿಗೆ ಶಿಕ್ಷೆ ಕೊಡಬಹುದಾಗಿತ್ತು. ನೀಲಿ ಗಿಡದಿಂದ ನೀಲಿ ಬಣ್ಣ ತಯಾರು ಆಗುತ್ತಿತ್ತು.

ಅಷ್ಟರಾಗ ಜರ್ಮನಿ ವಿಜ್ಞಾನಿಗಳು 1901ಕ್ಕ ಒಂದು ಕೃತಕ ನೀಲಿ ಬಣ್ಣ ಕಂಡುಹಿಡಿದರು. ಆಗ ಇಂಡಿಗೋದ ಬೇಡಿಕೆ ಕಮ್ಮಿ ಆತು. ಬ್ರಿಟಿಷರ ಬೆಂಬಲಿತ ಕೆಮಿಕಲ್ ಕಂಪನಿಗಳು ರೈತರಿಗೆ ಕೊಡೋ ಹಣ ಕಮ್ಮಿ ಮಾಡಿದರು. 1910-1915ರ ನಡುವಿನ ಮೊದಲನೇ ಮಹಾಯುದ್ಧದ ಕಾಲಕ್ಕ ಮತ್ತೊಮ್ಮೆ ಇಂಡಿಗೋಗೆ ಬೆಲೆ ಬಂತು. ಅದರ ದುರಾಸೆಗೆ ಕಂಪನಿಗಳು ರೈತರಿಗೆ ಹೆಚ್ಚು ನೀಲಿ ಬೆಳಿಯಲಿಕ್ಕೆ ಒತ್ತಾಯ ಮಾಡಿದವು. ಒಲ್ಲೆ ಅಂದವರಿಗೆ ಹಿಂಸೆ ಕೊಟ್ಟರು. ಅವರ ಜಮೀನು ಕಸಗೊಂಡರು, ಜೈಲಿಗೆ ಹಾಕಿದರು.

ಮೋಹನ್ ದಾಸ್ ಗಾಂಧಿ ಅವರು ದಕ್ಷಿಣ ಆಫ್ರಿಕಾ ಬಿಟ್ಟು ಭಾರತಕ್ಕ 1915ಕ್ಕ ಬಂದಿದ್ದರು. ಅವರನ್ನ ಕಾಂಗ್ರೆಸ್ ಸಮಾವೇಶದೊಳಗ ಭೇಟಿ ಮಾಡಿದ ಚಂಪಾರಣದ ರಾಜ್‌ಕುಮಾರ್ ಶುಕ್ಲ ಹಾಗೂ ಸಂತ ರಾವುತ ಅನ್ನುವ ಇಬ್ಬರು ಕಾರ್ಯಕರ್ತರು ನಮ್ಮೂರಿಗೆ ಬನ್ನಿ, ಅಲ್ಲಿ ರೈತರು ಸಂಕಷ್ಟದೊಳಗ ಅದಾರು, ಅವರಿಗೆ ಒಂದು ಹೋರಾಟ ರೂಪಿಸಿಕೊಡರಿ ಅಂತ ಕೇಳಿದರು. ಒಂದು ವರ್ಷದ ನಂತರ ಗಾಂಧೀಜಿ ಅಲ್ಲಿಗೆ ಹೋದರು. ಅಲ್ಲಿ ಅಸಹಕಾರ ಚಳವಳಿ ನಡೆಸಿ, ಜೈಲಿಗೆ ಹೋದರು. ಸುಮಾರು ಎಂಟು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿದ್ದಕ್ಕ ಬ್ರಿಟಿಷರ ಮನಸ್ಸು ಕರಗಿತು. ಅವರು ಚಂಪಾರಣ ಕೃಷಿ ಕಾಯಿದೆ ರೂಪಿಸಿದರು. ತೀನ್ ಕಥಿಯಾ ನಿಯಮ ರದ್ದಾಗಿ ರೈತರು ತಮಗೆ ತಿಳಿದ ಬೆಲೆ ಬೆಳಿಯಲಿಕ್ಕೆ ಅವಕಾಶ ಮಾಡಿಕೊಟ್ಟರು.

ಈ ಹೋರಾಟದ ನಂತರ ಶುಕ್ಲ ಹಾಗೂ ರಾವುತ ಅವರು ಗಾಂಧಿಗೆ ಬಾಪು ಹಾಗೂ ಮಹಾತ್ಮ ಅಂತ ಕರೆದರು. ‘ಗಾಂಧಿ ಚಂಪಾರಣ—ತಿವನ್ನು ಬದಲು ಮಾಡಲಿಲ್ಲ. ಚಂಪಾರಣ ಗಾಂಧಿಯನ್ನು ಬದಲು ಮಾಡಿತು. ಸತ್ಯ ಹಾಗೂ ಅಹಿಂಸೆಯ ದಾರಿ ಅವರಿಗೆ ಕಾಯಂ ಆಗುವಂತೆ ಮಾಡಿತು’ ಅಂತ ಇತಿಹಾಸಕಾರ ಡೇವಿಡ್ ಅರ್ನಾಲ್ಡ್ ಹೇಳಿದರು.

ಇಷ್ಟು ಹೊತ್ತು ಕೇಳಿದ ಕತಿ ಒಂಥರಾ ಒಪ್ಪಂದ ಕೃಷಿಯ ಕತಿ ಕೇಳಿದ ಹಂಗ ಆತಲ್ಲಾ. ಈಗ ನೋಡ್ರಿ, ಕೇಂದ್ರ ಸರಕಾರದವರು ಮೂರು ಕೃಷಿ ಕಾನೂನು ಪಾಸು ಮಾಡಿದಾರು. ರಾಜ್ಯದವರು ಅವರಿಗೆ ಮುಂದ ಹೋಗಿ ಐದು ಕಾಯಿದೆ ಪಾಸು ಮಾಡಿದಾರು. ಇವು ರೈತರಿಗೆ ಅನುಕೂಲ. ಅವರ ಸ್ವಾತಂತ್ರ್ಯ ಹೆಚ್ಚಿಸಿ ಅವರ ಆದಾಯ ದುಪ್ಪಟ್ಟು ಮಾಡುವ ಕಾಯಿದೆ ಅಂತ ಹೇಳಿದಾರು. ಆದರ ಅವು ಆಳುವ ಪಕ್ಷದ ಗೆಳೆಯರ ಆದಾಯ ದುಪ್ಪಟ್ಟುಗಿಂತಲೂ ಹೆಚ್ಚು ಮಾಡಿದಾವು. ಅವರ ಸ್ವಾತಂತ್ರ್ಯವನ್ನು ಅತಿಯಾಗಿ ಜಾಸ್ತಿ ಮಾಡಿ ಅವರ ಮ್ಯಾಲೆ ಯಾವ ನಿಯಂತ್ರಣ ಇರಲಾರದ ಹಂಗ ಮಾಡಿಬಿಟ್ಟಾವು.

ಕೇಂದ್ರದವರು ಮಾಡಿದ ಕಾನೂನುಗಳು ಇಡೀ ದೇಶಕ್ಕೆ ದುಷ್ಪರಿಣಾಮ ಬೀರಿದರೂ ಸಹಿತ ಅವು ಕೇವಲ ಪಂಜಾಬಿನ ಸಮಸ್ಯೆ ಅಂತ ಕೆಲವರು ಅದನ್ನ ದುರ್ಲಕ್ಷ್ಯ ಮಾಡಿದಾರ. ಕರ್ನಾಟಕದ ಘನ ಸರಕಾರ ‘ಒಂದು ಜಿಲ್ಲೆಗೆ ಒಂದು ಪ್ರಮುಖ ಬೆಳೆ’ ಅಂತ ಹೇಳಿ ಒಂದು ಪಟ್ಟಿ ಹೊರಡಿಸಿಬಿಟ್ಟೆತಿ. ಕೇಂದ್ರದ ಒಪ್ಪಂದ ಕೃಷಿ ಕಾನೂನಿನಾಗ ಕಂಪನಿಗಳು ರೈತರಿಗೆ ಮೂಲ ಒಪ್ಪಂದದ ಪ್ರಕಾರ ಹಣ ಕೊಡದೆ ಹೋದರೆ ರೈತರು ಕೋರ್ಟಿಗೆ ಹೋಗಲಿಕ್ಕೆ ಬರೋದಿಲ್ಲ ಅಂತ ಒಂದು ಮಾತು ಐತಿ. ಅವರು ಉಪವಿಭಾಗ ಅಧಿಕಾರಿಯ ಮಂಡಳಿಗೆ ಆರ್ಜಿ ಸಲ್ಲಿಸಬೇಕು. ಅವರು ಆದೇಶ ನೀಡಬಹುದು, ಅಥವಾ ಪರ್ಯಾಯ ನ್ಯಾಯ ನಿರ್ಣಯದ ಮೂಲಕ ಅವರಿಗೆ ನಷ್ಟ ತುಂಬಿ ಕೊಡಬೇಕು ಅಂತ ಅದರಾಗ ಶಿಫಾರಸು ಐತಿ. ಭಾರತದ ಯಾವ ಉಪವಿಭಾಗ ಅಧಿಕಾರಿ, ಬಹು ರಾಷ್ಟ್ರೀಯ ಕಂಪನಿ ಅಥವಾ ಮದ್ದಾನಿ ಕಂಪನಿಗಳ ವಿರುದ್ಧ ಆದೇಶ ಪಾಸು ಮಾಡುವ ಧೈರ್ಯ ತೋರಸ್ತಾನ ಅನ್ನುವ ಪ್ರಶ್ನೆಗೆ ಅಲ್ಲಿ ಉತ್ತರ ಇಲ್ಲ.

ಇನ್ನೂ ರಾಜ್ಯ ಕೃಷಿ ಸಚಿವ ಬಸನಗೌಡ ಚನ್ನಬಸನಗೌಡ ಪಾಟೀಲ್ ಅವರು ಒನ್ ಜಿಲ್ಲಾ ಒನ್ ಕ್ರಾಪ್ ಅನ್ನೋದು ನಮ್ಮ ಸರ್ಕಾರದ ಹೆಮ್ಮೆಯ ಯೋಜನೆ, ಅದರಿಂದ ರೈತರಿಗೆ ಒಳ್ಳೆ ಮಾರುಕಟ್ಟೆ ಸಿಗತದ ಅಂತ ಘೋಷಣೆ ಮಾಡಿದಾರು. ಅವರ ಪ್ರಕಾರ ಖರೀದಿ ಮಾಡುವನಿಗೆ ಅನುಕೂಲ ಮಾಡಿಕೊಟ್ಟರ ರೈತರಿಗೆ ಒಳ್ಳೆ ಬೆಲೆ ಕೊಟ್ಟ ಹಂಗ.

ಇದು ಲೆಕ್ಕಾಚಾರ ಏನಾದರೂ ತಪ್ಪಿದರ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದರಿಂದ ರೈತರಿಗೆ ತಮ್ಮ ಮನಸ್ಸಿನ ಬೆಳೆ ಬೆಳೆಯುವ ಸ್ವಾತಂತ್ರ್ಯ ತಪ್ಪಿ ಹೋಗತದ ಅನ್ನುವ ಸಂದೇಹಕ್ಕ ಅವರು ಪರಿಹಾರ ಸೂಚಿಸಿಲ್ಲ.

ಒಂದು ಜಿಲ್ಲೆಯ ಎಲ್ಲಾ ರೈತರು ಒಂದೇ ಬೆಳೆ ಬೆಳೆದರ ಕೀಟ ಬಾಧೆ ಕಾಡಬಹುದು ಅಂತ ಕೆಲವರು ತಜ್ಞರು ಹೇಳತಾರ. ಆದರ ಸರಕಾರ ಅದಕ್ಕ ಇನ್ನೂ ಉತ್ತರ ಕೊಡಲಿಕ್ಕೆ ಹತ್ತಿಲ್ಲ. ಮುಂದೆ ಒಂದು ದಿವಸ ಮದ್ದಾನೀ ಕಂಪನಿಗಳ ಕೀಟ ನಾಶಕ ಉಪಯೋಗಿಸಿರಿ ಅಂತ ಹೇಳಬಹುದು.

ಎಲ್ಲರೂ ಒಂದೇ ಬೆಳೆ ಬೆಳೆದರೆ ಪೂರೈಕೆ ಹಾಗೂ ಬೇಡಿಕೆಯ ತಕ್ಕಡಿ ಉಲ್ಟಾ ಆಗಿ ರೈತರಿಗೆ ಅನ್ಯಾಯ ಆಗಬಹುದು ಅನ್ನುವುದಕ್ಕೆ ಅವರಲ್ಲಿ ಉತ್ತರ ಇಲ್ಲ. ಸರ್ಕಾರದ ನಿಯಮದ ಪ್ರಕಾರ ಬೆಳೆ ಆಯ್ಕೆ ಮಾಡದೆ ಇತರ ಬೆಳೆ ಬೆಳೆದರೆ ಅವರಿಗೆ ಸರಕಾರದಿಂದ ಸಿಗೋ ಅನುಕೂಲಗಳು ಸಿಗೋದಿಲ್ಲ, ಸಾಲ ಸಿಗದೇ ಇರಬಹುದು, ಬೆಳೆ ವಿಮೆ ಸಿಗದೇ ಇರಬಹುದು ಅಂತ ಕೆಲವು ಏಜೆಂಟರು ಪಿಸುಗುಟ್ಟಲಿಕ್ಕೆ ಹತ್ತಿಬಿಟ್ಟಾರು.

ಚಂಪಾರಣ ಅಂದ್ರ ಸಂಪಿಗೆ ಬನ ಅಂತ. ಆ ಬನಕ್ಕೆ ಬೆಂಕಿ ಬಿದ್ದಾಗ ಅದನ್ನು ಆರಿಸಲು ಗಾಂಧಿ ಬಂದರು. ರೈತರು ಒಗ್ಗಟ್ಟು ತೋರಿಸಿ ಹೋರಾಟ ಮಾಡಿದರು. ಸೂರ್ಯ ಮುಳುಗದ ಸಾಮ್ರಾಜ್ಯದ ಈಸ್ಟ್ ಇಂಡಿಯಾ ಕಂಪನಿ ಮಂದಿಯ ಕಲ್ಲಿನ ಹೃದಯ ಕರಗಿಹೋತು. ರೈತರ ಬವಣೆ ತಪ್ಪಿಸಲು ಅವರು ಕಾನೂನು ಮಾಡಿದರು. ಈಗ ಗಾಂಧಿ ಇಲ್ಲ. ಸಂಪಿಗೆ ಬನದ ನೊಂದವರ ಹಾಡು ಕೇಳಿ ಕರಗುವ ಹೃದಯ ಇಂದಿನ ಆಳುವವರಿಗೆ ಇಲ್ಲ. ತಮ್ಮ ಗೆಳೆಯರಾಗಿರುವ ವೆಸ್ಟ್ ಇಂಡಿಯಾ ಕಂಪನಿಗಳಿಗೆ ಲುಕ್ಸಾನ ಆಗತದ ಅಂತ ಗೊತ್ತಾದರ ಸರಕಾರಗಳು ಯಾವ ಕಾನೂನನ್ನು ಕೂಡ ಬದಲು ಮಾಡೋ ಹಂಗ ಕಾಣೋದಿಲ್ಲಾ. ಈಗ ಸಂಪಿಗೆ ಬನದ ಹಾಡು ಹೇಳೋರು ಯಾರು? ಹೇಳಿದರೂ ಕೇಳೋರು ಯಾರು?


ಇದನ್ನೂ ಓದಿ: ರೈತ ವಿರೋಧಿ ಕಾಯಿದೆಗಳು: ಪ್ರಧಾನಿ ಮೋದಿ v/s ಮುಖ್ಯಮಂತ್ರಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...