ದಾನ ಪಡೆದವರ ‘ಧಾರ್ಮಿಕ ನಂಬಿಕೆ’ಯ ಮೇಲೆ ಪ್ರಭಾವ ಬೀರಲು ದಾನವನ್ನು ಬಳಸುವುದು ಪ್ರಜಾಪ್ರಭುತ್ವಕ್ಕೆ ಗಂಭೀರ ಸವಾಲುಗಳನ್ನು ಒಡ್ಡುತ್ತದೆ, ಅಗತ್ಯವಿರುವವರಿಗೆ ಬೇಷರತ್ತಾಗಿ ಸಹಾಯ ಮಾಡಬೇಕು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಖರ್ ಒತ್ತಿ ಹೇಳಿದ್ದಾರೆ. ಅವರು ಶುಕ್ರವಾರ ಮಂಡ್ಯದ ಬಿಜಿ ನಗರದಲ್ಲಿರುವ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ದಾನದ ಹೆಸರಿನಲ್ಲಿ
“ದಾನ, ನೆರವು ಅಥವಾ ಅಶಕ್ತರ ಕೈಹಿಡಿಯುವುದ ಯಾವುದೆ ನಿರೀಕ್ಷೆಗಳು ಅಥವಾ ಯಾವುದೆ ಪ್ರತಿಪಾದನೆಗಳು ಇಲ್ಲದೆ ಮಾಡಬೇಕು. ನಮ್ಮ ತತ್ತ್ವಶಾಸ್ತ್ರವು ಒಳ್ಳೆಯದನ್ನು ಮಾಡಿ, ಅದನ್ನು ಮರೆತುಬಿಡಲು ಹೇಳುತ್ತದೆ” ಎಂದು ಅವರು ಹೇಳಿದ್ದಾರೆ. ದಾನವು ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯವನ್ನು ನಿರ್ಬಂಧಿಸಿದರೆ ಅದು ರಾಷ್ಟ್ರೀಯ ಏಕತೆಗೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದೇಶದ ಯುವಜನರು ಸಾಂಪ್ರದಾಯಿಕವಾಗಿ ಹುಡುಕುವ ಸರ್ಕಾರಿ ಉದ್ಯೋಗಗಳ ಅನ್ವೇಷಣೆಯಿಂದ ದೂರವಿರಲು ಹೇಳಿದ ಅವರು, ಬದಲಿಯಾಗಿ ವೇಗವಾಗಿ ಮುನ್ನಡೆಯುತ್ತಿರುವ ಭಾರತದಲ್ಲಿ ಹೊರಹೊಮ್ಮುತ್ತಿರುವ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ಒತ್ತಾಯಿಸಿದ್ದಾರೆ. ದಾನದ ಹೆಸರಿನಲ್ಲಿ
“ನಿಮ್ಮಲ್ಲಿ ಕೆಲವರು ಸರ್ಕಾರಿ ಸೇವೆಯೊಂದೇ ದಾರಿ ಎಂದು ಭಾವಿಸುತ್ತಾರೆ. ಅದರೆ ಅದು ಹಾಗೆ ಇಲ್ಲ. ಸುತ್ತಲೂ ನೋಡಿ, ಭಾರತವು ಸಮುದ್ರ, ಭೂಮಿ, ಆಕಾಶ ಮತ್ತು ಬಾಹ್ಯಾಕಾಶದಲ್ಲಿ ಮುನ್ನಡೆಯುತ್ತಿರುವಾಗ ನೀವು ಅವಕಾಶಗಳನ್ನು ಕಂಡುಕೊಳ್ಳುತ್ತೀರಿ” ಎಂದು ಧನಖರ್ ಹೇಳಿದ್ದಾರೆ. ಸುಳ್ಳು ಮತ್ತು ತಪ್ಪು ಮಾಹಿತಿಯ ವಿರುದ್ಧ ಜಾಗರೂಕರಾಗಿರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು, ಇವುಗಳು ರಾಷ್ಟ್ರೀಯ ಆರೋಗ್ಯಕ್ಕೆ ಹಾನಿಕಾರಕವೆಂದು ವಿವರಿಸಿದ್ದಾರೆ.
“ನಾವು 5,000 ವರ್ಷಗಳಿಂದ ಒಳಗೊಳ್ಳುವಿಕೆಯನ್ನು ಮಾಡುತ್ತಲೆ ಬಂದಿದ್ದು, ಅದರಲ್ಲಿ ನಮಗೆ ಯಾವುದೆ ಪಾಠಗಳ ಅಗತ್ಯವಿಲ್ಲ. ಈ ತತ್ತ್ವಶಾಸ್ತ್ರ ಮಾತ್ರ ಸಮರ್ಥನೀಯವಾಗಿದ್ದು, ಜಾಗತಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಉಂಟುಮಾಡುತ್ತದೆ. ಆದರೆ ಕೆಲವು ಜನರು ಅಂತರ್ಗತತೆಯ ಪ್ರಜ್ಞೆಯನ್ನು ವಿನಾಶಗೊಳಿಸುವ ವಿಭಿನ್ನ ಪರಿಕಲ್ಪನೆಯನ್ನು ಹೊಂದಿದ್ದಾರೆ. ಅಂತವರ ಬಗ್ಗೆ ನಾವು ಅತ್ಯಂತ ಜಾಗರೂಕರಾಗಿರಬೇಕು” ಎಂದು ಹೇಳಿದ್ದಾರೆ.
ಆದಿಚುಂಚನಗಿರಿ ಮಠವು ಜಾಗತಿಕವಾಗಿ ತನ್ನ 26 ಶಾಖಾ ಮಠಗಳು ಮತ್ತು 500 ಶಿಕ್ಷಣ ಸಂಸ್ಥೆಗಳ ಮೂಲಕ ವ್ಯಾಪಕವಾದ ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಎಂದು ಶ್ಲಾಘಿಸಿದ ಅವರು, ತಳಮಟ್ಟದ ಗುಂಪುಗಳಿಗೆ ಅದು ಮಾಡಿರುವ ಸಮರ್ಪಣೆಯನ್ನು ಶ್ಲಾಘಿಸಿದ್ದಾರೆ. “ದುರ್ಬಲರಿಗಾಗಿ ಸಂಸ್ಥೆ ಮಾಡುತ್ತಿರುವ ಸೇವೆಯು ಸನಾತನ ಧರ್ಮದ ವಿಮರ್ಶಕರಿಗೆ ಪ್ರತಿಕ್ರಿಯೆಯಾಗಿ ನಿಂತಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೋಲ್ಡ್ಪ್ಲೇ, ದಿಲ್ಜೀತ್ ದೋಸಾಂಜ್ನ ಸಂಗೀತ ಕಚೇರಿಗಳ ಟಿಕೆಟ್ ಮಾರಾಟದಲ್ಲಿ ‘ಅಕ್ರಮ’ ಪತ್ತೆ – ಇಡಿ ಹೇಳಿಕೆ
ಕೋಲ್ಡ್ಪ್ಲೇ, ದಿಲ್ಜೀತ್ ದೋಸಾಂಜ್ನ ಸಂಗೀತ ಕಚೇರಿಗಳ ಟಿಕೆಟ್ ಮಾರಾಟದಲ್ಲಿ ‘ಅಕ್ರಮ’ ಪತ್ತೆ – ಇಡಿ ಹೇಳಿಕೆ


