Homeಕರ್ನಾಟಕ‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

- Advertisement -
- Advertisement -

“ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿರುವುದಕ್ಕೂ ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ” ಎಂದು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹೇಳಿದ್ದನ್ನು ವಿರೋಧಿಸುವ ಭರದಲ್ಲಿ ಪತ್ರಕರ್ತ, ‘ಪಬ್ಲಿಕ್‌ ಟಿ.ವಿ.’ ಸಂಪಾದಕ ಎಚ್‌.ಆರ್‌.ರಂಗನಾಥ್‌ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ. ಸಾಯಿ ಪಲ್ಲವಿಯವರನ್ನು ಟೀಕಿಸುವ ಭರದಲ್ಲಿ ಮತ್ತೊಬ್ಬರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತೆ ಮಾತನಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

“ಈ ಯಮ್ಮ ತುಂಬಾ ಫೇಮಸ್ಸಾ? ಬಾಯಿ ಮುಚ್ಕೊಂಡು ಫಿಲ್ಮ್‌ ಮಾಡೋಕೆ ಹೇಳಿ. ಕಾಮನ್‌ ಸೆನ್ಸ್‌ ಇದೆಯ ಆ ಯಮ್ಮನಿಗೆ” ಹೀಗೆ ರಂಗನಾಥ್‌ ಅವರು ನಾಲಗೆ ಹರಿಬಿಟ್ಟಿದ್ದು ಸಾಯಿಪಲ್ಲವಿಯವರ ಅಭಿಮಾನಿಗಳನ್ನು ಕೆರಳಿಸಿದೆ. ಹಲವು ಜನಪರ ಮನಸ್ಸುಗಳು ರಂಗನಾಥ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

 

“ಈ ರಂಗನಾಥನಿಗೆ ಯಾರಾದ್ರೂ ಹೇಳ್ರಪ್ಪಾ. ಸಾಯಿಪಲ್ಲವಿ ಎಂಬ ನಟಿ ಸಿನಿಮಾ ಕಲಾವಿದೆಯಾಗಿದ್ದುಕೊಂಡು ಸಾರ್ವಜನಿಕ ಬದುಕು ಮತ್ತು ಪ್ರಸಕ್ತ ರಾಜಕಾರಣ ಕುರಿತಂತೆ ಪ್ರಬುದ್ಧತೆ ಹೊಂದಿದ್ದಾಳೆ. ಜೊತೆಗೆ ಆಕೆಯ ಮಾತುಗಳು ಖಚಿತ ನಿಲುವಿನಿಂದ ಕೂಡಿವೆ. ನಿನ್ನ ಹಾಗೆ ಹುಚ್ಚುತನದಿಂದ ಕೂಡಿಲ್ಲ. ಆಕೆ ತನ್ನ ವೃತ್ತಿಯ ಜೊತೆಗೆ ಕಾಪಾಡಿಕೊಂಡು ಬಂದಿರುವ ಘನತೆಯನ್ನು ನೀನು ಪತ್ರಿಕೋದ್ಯಮದ ಜೊತೆ ಕಾಪಾಡಿಕೊಂಡು ಬಂದಿದ್ದಿಯಾ ಎಂದು ಆತ್ಮ ವಿಮರ್ಶೆ ಮಾಡಿಕೊ ತಮ್ಮಾ” ಎಂದು ಹಿರಿಯ ಲೇಖಕರಾದ ಜಗದೀಶ್ ಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

“ಕ್ರೈಂ ರಿಪೋರ್ಟರ್ ಹೆಚ್. ಆರ್. ರಂಗನಾಥರವರೇ, ನೀವು ಪತ್ರಿಕೋದ್ಯಮಕ್ಕೆ ನ್ಯಾಯ ಒದಗಿಸಿದ್ದೀರಾ? ಸಾಯಿ ಪಲ್ಲವಿ ತನ್ನ ಅಭಿಪ್ರಾಯವನ್ನು ಹೇಳುವ ಹಕ್ಕನ್ನು ಹೊಂದಿಲ್ಲವೇ? ನೋಟಿನಲ್ಲಿ ಚಿಪ್ಪಿದೆ ಅಂತ ಒಂದು ಗಂಟೆ ಕಾರ್ಯಕ್ರಮ ಮಾಡಿದಾಗಲೇ ನೀವು ಪತ್ರಿಕೋದ್ಯಮದಿಂದ ನಿರ್ಗಮಿಸಬೇಕಿತ್ತು. ಆದರೂ ತಾನು ಮಾಡಿದ್ದೇ ಸರಿ ಅಂತ ಡಿಕ್ಟೇಟರ್‌‌ನಂತೆ ನಡೆದುಕೊಳ್ಳುತ್ತಿದ್ದೀರಿ” ಎಂದು ರಾಜು ಮೌರ್ಯ ದಾವಣಗೆರೆ ಅಭಿಪ್ರಾಯಪಟ್ಟಿದ್ದಾರೆ.

“ಆವೊಮ್ಮುಂಗೆ ನೆಟ್ಟಗೆ ಸಿನಿಮಾ ಮಾಡ್ಕಂಡ್ ಇರಕ್ಕೇಳಿ, ಈಡಿಯಾಟಿಕ್ ಸ್ಟೇಟ್ ಮೆಂಟ್ ಅದು. ಈಡಿಯಾಟಿಕ್ ಕಂಪೇರಿಷನ್, ಕಾಶ್ಮೀರಿ ಪಂಡಿತರು ಯಾವನ್ನೋ ಸಾಯ್ಸಕ್ಕೆ ಬಂದೂಕು ತಗೊಂಡು ಹೋಗಿರಲಿಲ್ಲ… ಬ್ಲಾ ಬ್ಲಾ ಬ್ಲಾ.. ಇದು ಪಬ್ಲಿಕ್ ಟಿವಿ ರಂಗನಾಥ್ ಆಡಿದ ಈಡಿಯಾಟಿಕ್ ಮಾತುಗಳು. ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದ ಗುಂಪಿನಿಂದ ಸಾಯಿಸಲ್ಪಟ್ಟ ಬಡ ಮುಸ್ಲಿಮನೂ ಯಾರಿಗೂ ಬಂದೂಕು ತಗೊಂಡು ಹೋಗಿ ಸಾಯಿಸಿರಲಿಲ್ಲ ಎಂಬ ಕಾಮನ್ ಸೆನ್ಸ್ ಇಲ್ಲವೇ ಈ ವ್ಯಕ್ತಿಗೆ? ಪತ್ರಕರ್ತ ಅನಿಸಿಕೊಂಡಿದ್ದಕ್ಕಾದರೂ ಒಂಚೂರು ವಿವೇಕದಿಂದ ಮಾತನಾಡಬಾರದೇ? ಅಸಹ್ಯ. ಇಷ್ಟೆಲ್ಲ ಆತ್ಮವಂಚನೆ ಮಾಡಿಕೊಂಡು ಬದುಕ್ತೀರಲ್ಲ, ತಿಂದಿದ್ದು ಮೈಗೆ ಹಿಡಿಯುತ್ತಾ ನಿಜವಾಗ್ಲೂ?” ಎಂದು ಬರಹಗಾರ ಎಸ್‌.ಸಿ.ದಿನೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

“ಅಂತರ್ಜಾಲದಲ್ಲಿ ಬಹುಶಃ ಗರಿಷ್ಠ ಸಂಚಾರ ಮಾಡಿದ ವೀಡಿಯೋಗಳಲ್ಲಿ ಈ ಐತಿಹಾಸಿಕ ವೀಡಿಯೋ ಕೂಡಾ ಒಂದು. ಪತ್ರಕರ್ತ/ಸಂಪಾದಕ ಎಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬನ ಬುದ್ಧಿಮತ್ತೆಯ ಮತ್ತು ಜರ್ನಲಿಸಂನ ಮೂಲ ತತ್ವಕ್ಕೆ ಬದ್ಧತೆಯ ಅಭೂತಪೂರ್ವ ನಿದರ್ಶನ” ಎಂಬ ಸಾಲುಗಳೊಂದಿಗೆ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

“ಈ ಡಿಕ್ಟೇಟರಿಸಂ ಪತ್ರಕರ್ತರಿಗೆ, ‘ಕಾಮನ್‌ಸೆನ್ಸ್’ ಪಾಠ ಮಾಡೋರು ಯಾರೂ ಇಲ್ವಾ. ಒಬ್ಬ ನಟಿ ಮಾನವೀಯತೆಯ ಬಗ್ಗೆ ಮಾತನಾಡಲೇಬಾರದಾ? ಆ ನಟಿ ಮಾನವೀಯತೆಯ ಬಗ್ಗೆ ಮಾತನಾಡಿದರೆ ಇವರಿಗ್ಯಾಕೆ ಉರಿ? ಇವ್ರೂ ಸುದ್ದಿ ಏನಿದೆಯೋ ಅದನ್ನು ಹೇಳೋದಷ್ಟೇ ಇವರ ಕೆಲಸ ಅಲ್ವಾ, ಯಾರು ಏನು ಮಾತನಾಡಬೇಕು, ಏನು ಕೆಲಸ ಮಾಡಬೇಕು ಅಂತ ಆಜ್ಞೆ ಮಾಡೋ ಹಕ್ಕು ಇವರಿಗೆ ಯಾರು ಕೊಟ್ಟಿದ್ದು? ಈಡಿಯಾಟಿಕಲೀ ಟಾಕಿಂಗ್ ನಾನ್‌ಸೆನ್ಸ್ ಇನ್ ದ ನೇಮ್ ಆಫ್ ಜರ್ನಲಿಸಂ” ಎಂದು ನಿರ್ದೇಶಕ ಮಂಸೋರೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಸುವರ್ಣ ನ್ಯೂಸ್‌ನಿಂದಲೂ ಆದೇಶ

ಪಬ್ಲಿಕ್ ಟಿ.ವಿ.ಯಷ್ಟೇ ಅಲ್ಲದೇ ಸುವರ್ಣ ಟಿ.ವಿ. ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ ರೀತಿ ಪೋಸ್ಟ್ ಮಾಡಿದೆ. “ಕೆಲವೊಮ್ಮೆ ಈ ನಟ, ನಟಿಯರು ಮೌನವಾಗಿದ್ದರೆ ಒಳ್ಳೆಯದು. ಆದರೆ ನಾಲಗೆ ಹರಿಯಬಿಟ್ಟು ಟ್ರೋಲ್‌ ಆಗುತ್ತಾರೆ” ಎಂದು ಫೇಸ್‌ಬುಕ್‌ ಪೋಸ್ಟ್‌ ಹಾಕಿರುವ ಸುವರ್ಣ ನ್ಯೂಸ್‌ ಚಾನೆಲ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

“ಯಾರು ಬಾಯಿ ಬಿಡಬೇಕು, ಯಾರು ಬಾಯಿ ಮುಚ್ಚಿಕೊಳ್ಳಬೇಕು” ಎಂದು ಸುವರ್ಣ ನ್ಯೂಸ್ ಆದೇಶ ಹೊರಡಿಸುತ್ತದೆ” ಎಂದು ವಿನಯ್‌ ಕಸ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ದೇಶದ ಪ್ರತಿಯೊಬ್ಬರಿಗೂ ತನ್ನ ಭಾವನೆಗಳನ್ನ ವ್ಯಕ್ತಪಡಿಸೋಕೆ ದೇಶದ ಸಂವಿಧಾನ ಅಭಿವ್ಯಕ್ತ ಸ್ವಾತಂತ್ರ ದ ಹಕ್ಕು ಪ್ರದಾನಿಸಿದೆ, ಅವರ ಸ್ವಾತಂತ್ರ್ಯಕ್ಕೆ ಅಡ್ಡಪಡಿಸಲು ಇವನಾರು?

  2. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಬೇಕೋ ಅಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ…!!!

  3. What is the problem for you she expressed her view and given in democracy. What you tell in the news we6listen and no body argue for you what a logic sir

  4. Like how Sai pallavi has given her views, Mr.Ranganath has given his views on that if you look at that angle.Comibg to comparison what she made is unacceptable if you r a real hindu.

  5. Sai pallavi has talked about great India. She was right. This ranganath is a bastard. He and his takes money from politics party. Telling wrong statement. He is useless person. He talks likes supreme court judge. He doesn’t know anything. He talks only support ing BJP. He can his name BJP tv

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...