Homeಕರ್ನಾಟಕ‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

- Advertisement -
- Advertisement -

“ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿರುವುದಕ್ಕೂ ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ” ಎಂದು ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಹೇಳಿದ್ದನ್ನು ವಿರೋಧಿಸುವ ಭರದಲ್ಲಿ ಪತ್ರಕರ್ತ, ‘ಪಬ್ಲಿಕ್‌ ಟಿ.ವಿ.’ ಸಂಪಾದಕ ಎಚ್‌.ಆರ್‌.ರಂಗನಾಥ್‌ ಆಡಿರುವ ಮಾತುಗಳು ವಿವಾದ ಸೃಷ್ಟಿಸಿವೆ. ಸಾಯಿ ಪಲ್ಲವಿಯವರನ್ನು ಟೀಕಿಸುವ ಭರದಲ್ಲಿ ಮತ್ತೊಬ್ಬರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತೆ ಮಾತನಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

“ಈ ಯಮ್ಮ ತುಂಬಾ ಫೇಮಸ್ಸಾ? ಬಾಯಿ ಮುಚ್ಕೊಂಡು ಫಿಲ್ಮ್‌ ಮಾಡೋಕೆ ಹೇಳಿ. ಕಾಮನ್‌ ಸೆನ್ಸ್‌ ಇದೆಯ ಆ ಯಮ್ಮನಿಗೆ” ಹೀಗೆ ರಂಗನಾಥ್‌ ಅವರು ನಾಲಗೆ ಹರಿಬಿಟ್ಟಿದ್ದು ಸಾಯಿಪಲ್ಲವಿಯವರ ಅಭಿಮಾನಿಗಳನ್ನು ಕೆರಳಿಸಿದೆ. ಹಲವು ಜನಪರ ಮನಸ್ಸುಗಳು ರಂಗನಾಥ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

 

“ಈ ರಂಗನಾಥನಿಗೆ ಯಾರಾದ್ರೂ ಹೇಳ್ರಪ್ಪಾ. ಸಾಯಿಪಲ್ಲವಿ ಎಂಬ ನಟಿ ಸಿನಿಮಾ ಕಲಾವಿದೆಯಾಗಿದ್ದುಕೊಂಡು ಸಾರ್ವಜನಿಕ ಬದುಕು ಮತ್ತು ಪ್ರಸಕ್ತ ರಾಜಕಾರಣ ಕುರಿತಂತೆ ಪ್ರಬುದ್ಧತೆ ಹೊಂದಿದ್ದಾಳೆ. ಜೊತೆಗೆ ಆಕೆಯ ಮಾತುಗಳು ಖಚಿತ ನಿಲುವಿನಿಂದ ಕೂಡಿವೆ. ನಿನ್ನ ಹಾಗೆ ಹುಚ್ಚುತನದಿಂದ ಕೂಡಿಲ್ಲ. ಆಕೆ ತನ್ನ ವೃತ್ತಿಯ ಜೊತೆಗೆ ಕಾಪಾಡಿಕೊಂಡು ಬಂದಿರುವ ಘನತೆಯನ್ನು ನೀನು ಪತ್ರಿಕೋದ್ಯಮದ ಜೊತೆ ಕಾಪಾಡಿಕೊಂಡು ಬಂದಿದ್ದಿಯಾ ಎಂದು ಆತ್ಮ ವಿಮರ್ಶೆ ಮಾಡಿಕೊ ತಮ್ಮಾ” ಎಂದು ಹಿರಿಯ ಲೇಖಕರಾದ ಜಗದೀಶ್ ಕೊಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

“ಕ್ರೈಂ ರಿಪೋರ್ಟರ್ ಹೆಚ್. ಆರ್. ರಂಗನಾಥರವರೇ, ನೀವು ಪತ್ರಿಕೋದ್ಯಮಕ್ಕೆ ನ್ಯಾಯ ಒದಗಿಸಿದ್ದೀರಾ? ಸಾಯಿ ಪಲ್ಲವಿ ತನ್ನ ಅಭಿಪ್ರಾಯವನ್ನು ಹೇಳುವ ಹಕ್ಕನ್ನು ಹೊಂದಿಲ್ಲವೇ? ನೋಟಿನಲ್ಲಿ ಚಿಪ್ಪಿದೆ ಅಂತ ಒಂದು ಗಂಟೆ ಕಾರ್ಯಕ್ರಮ ಮಾಡಿದಾಗಲೇ ನೀವು ಪತ್ರಿಕೋದ್ಯಮದಿಂದ ನಿರ್ಗಮಿಸಬೇಕಿತ್ತು. ಆದರೂ ತಾನು ಮಾಡಿದ್ದೇ ಸರಿ ಅಂತ ಡಿಕ್ಟೇಟರ್‌‌ನಂತೆ ನಡೆದುಕೊಳ್ಳುತ್ತಿದ್ದೀರಿ” ಎಂದು ರಾಜು ಮೌರ್ಯ ದಾವಣಗೆರೆ ಅಭಿಪ್ರಾಯಪಟ್ಟಿದ್ದಾರೆ.

“ಆವೊಮ್ಮುಂಗೆ ನೆಟ್ಟಗೆ ಸಿನಿಮಾ ಮಾಡ್ಕಂಡ್ ಇರಕ್ಕೇಳಿ, ಈಡಿಯಾಟಿಕ್ ಸ್ಟೇಟ್ ಮೆಂಟ್ ಅದು. ಈಡಿಯಾಟಿಕ್ ಕಂಪೇರಿಷನ್, ಕಾಶ್ಮೀರಿ ಪಂಡಿತರು ಯಾವನ್ನೋ ಸಾಯ್ಸಕ್ಕೆ ಬಂದೂಕು ತಗೊಂಡು ಹೋಗಿರಲಿಲ್ಲ… ಬ್ಲಾ ಬ್ಲಾ ಬ್ಲಾ.. ಇದು ಪಬ್ಲಿಕ್ ಟಿವಿ ರಂಗನಾಥ್ ಆಡಿದ ಈಡಿಯಾಟಿಕ್ ಮಾತುಗಳು. ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದ ಗುಂಪಿನಿಂದ ಸಾಯಿಸಲ್ಪಟ್ಟ ಬಡ ಮುಸ್ಲಿಮನೂ ಯಾರಿಗೂ ಬಂದೂಕು ತಗೊಂಡು ಹೋಗಿ ಸಾಯಿಸಿರಲಿಲ್ಲ ಎಂಬ ಕಾಮನ್ ಸೆನ್ಸ್ ಇಲ್ಲವೇ ಈ ವ್ಯಕ್ತಿಗೆ? ಪತ್ರಕರ್ತ ಅನಿಸಿಕೊಂಡಿದ್ದಕ್ಕಾದರೂ ಒಂಚೂರು ವಿವೇಕದಿಂದ ಮಾತನಾಡಬಾರದೇ? ಅಸಹ್ಯ. ಇಷ್ಟೆಲ್ಲ ಆತ್ಮವಂಚನೆ ಮಾಡಿಕೊಂಡು ಬದುಕ್ತೀರಲ್ಲ, ತಿಂದಿದ್ದು ಮೈಗೆ ಹಿಡಿಯುತ್ತಾ ನಿಜವಾಗ್ಲೂ?” ಎಂದು ಬರಹಗಾರ ಎಸ್‌.ಸಿ.ದಿನೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.

“ಅಂತರ್ಜಾಲದಲ್ಲಿ ಬಹುಶಃ ಗರಿಷ್ಠ ಸಂಚಾರ ಮಾಡಿದ ವೀಡಿಯೋಗಳಲ್ಲಿ ಈ ಐತಿಹಾಸಿಕ ವೀಡಿಯೋ ಕೂಡಾ ಒಂದು. ಪತ್ರಕರ್ತ/ಸಂಪಾದಕ ಎಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬನ ಬುದ್ಧಿಮತ್ತೆಯ ಮತ್ತು ಜರ್ನಲಿಸಂನ ಮೂಲ ತತ್ವಕ್ಕೆ ಬದ್ಧತೆಯ ಅಭೂತಪೂರ್ವ ನಿದರ್ಶನ” ಎಂಬ ಸಾಲುಗಳೊಂದಿಗೆ ಚಿಂತಕ ಶ್ರೀನಿವಾಸ ಕಾರ್ಕಳ ಅವರು ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

“ಈ ಡಿಕ್ಟೇಟರಿಸಂ ಪತ್ರಕರ್ತರಿಗೆ, ‘ಕಾಮನ್‌ಸೆನ್ಸ್’ ಪಾಠ ಮಾಡೋರು ಯಾರೂ ಇಲ್ವಾ. ಒಬ್ಬ ನಟಿ ಮಾನವೀಯತೆಯ ಬಗ್ಗೆ ಮಾತನಾಡಲೇಬಾರದಾ? ಆ ನಟಿ ಮಾನವೀಯತೆಯ ಬಗ್ಗೆ ಮಾತನಾಡಿದರೆ ಇವರಿಗ್ಯಾಕೆ ಉರಿ? ಇವ್ರೂ ಸುದ್ದಿ ಏನಿದೆಯೋ ಅದನ್ನು ಹೇಳೋದಷ್ಟೇ ಇವರ ಕೆಲಸ ಅಲ್ವಾ, ಯಾರು ಏನು ಮಾತನಾಡಬೇಕು, ಏನು ಕೆಲಸ ಮಾಡಬೇಕು ಅಂತ ಆಜ್ಞೆ ಮಾಡೋ ಹಕ್ಕು ಇವರಿಗೆ ಯಾರು ಕೊಟ್ಟಿದ್ದು? ಈಡಿಯಾಟಿಕಲೀ ಟಾಕಿಂಗ್ ನಾನ್‌ಸೆನ್ಸ್ ಇನ್ ದ ನೇಮ್ ಆಫ್ ಜರ್ನಲಿಸಂ” ಎಂದು ನಿರ್ದೇಶಕ ಮಂಸೋರೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ಸುವರ್ಣ ನ್ಯೂಸ್‌ನಿಂದಲೂ ಆದೇಶ

ಪಬ್ಲಿಕ್ ಟಿ.ವಿ.ಯಷ್ಟೇ ಅಲ್ಲದೇ ಸುವರ್ಣ ಟಿ.ವಿ. ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ ರೀತಿ ಪೋಸ್ಟ್ ಮಾಡಿದೆ. “ಕೆಲವೊಮ್ಮೆ ಈ ನಟ, ನಟಿಯರು ಮೌನವಾಗಿದ್ದರೆ ಒಳ್ಳೆಯದು. ಆದರೆ ನಾಲಗೆ ಹರಿಯಬಿಟ್ಟು ಟ್ರೋಲ್‌ ಆಗುತ್ತಾರೆ” ಎಂದು ಫೇಸ್‌ಬುಕ್‌ ಪೋಸ್ಟ್‌ ಹಾಕಿರುವ ಸುವರ್ಣ ನ್ಯೂಸ್‌ ಚಾನೆಲ್‌ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.

“ಯಾರು ಬಾಯಿ ಬಿಡಬೇಕು, ಯಾರು ಬಾಯಿ ಮುಚ್ಚಿಕೊಳ್ಳಬೇಕು” ಎಂದು ಸುವರ್ಣ ನ್ಯೂಸ್ ಆದೇಶ ಹೊರಡಿಸುತ್ತದೆ” ಎಂದು ವಿನಯ್‌ ಕಸ್ವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

7 COMMENTS

  1. ದೇಶದ ಪ್ರತಿಯೊಬ್ಬರಿಗೂ ತನ್ನ ಭಾವನೆಗಳನ್ನ ವ್ಯಕ್ತಪಡಿಸೋಕೆ ದೇಶದ ಸಂವಿಧಾನ ಅಭಿವ್ಯಕ್ತ ಸ್ವಾತಂತ್ರ ದ ಹಕ್ಕು ಪ್ರದಾನಿಸಿದೆ, ಅವರ ಸ್ವಾತಂತ್ರ್ಯಕ್ಕೆ ಅಡ್ಡಪಡಿಸಲು ಇವನಾರು?

  2. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ಬೇಕೋ ಅಲ್ಲಿ ಮಾತ್ರ ಉಪಯೋಗಿಸಲಾಗುತ್ತಿದೆ…!!!

  3. What is the problem for you she expressed her view and given in democracy. What you tell in the news we6listen and no body argue for you what a logic sir

  4. Like how Sai pallavi has given her views, Mr.Ranganath has given his views on that if you look at that angle.Comibg to comparison what she made is unacceptable if you r a real hindu.

  5. Sai pallavi has talked about great India. She was right. This ranganath is a bastard. He and his takes money from politics party. Telling wrong statement. He is useless person. He talks likes supreme court judge. He doesn’t know anything. He talks only support ing BJP. He can his name BJP tv

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...