Homeಮುಖಪುಟಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

ಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮ ದೇಶದ ಸಂಸತ್ತಿಗೆ ಅದರದೆ ಆದ ಘನತೆ ಗೌರವ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರೆಲ್ಲರ ಮಾನವನ್ನು  ಕಾಪಾಡುತ್ತ ಬಂದಿದೆ. ನಮ್ಮ ರಾಷ್ಟ್ರ , ಧರ್ಮ ನಿರಪೇಕ್ಷವಾದ ರಾಷ್ಟ್ರವಾದರೂ ಸಹ ಹಲವಾರು ಮತ ಧರ್ಮಗಳನ್ನು ತನ್ನ ಒಡಲಲ್ಲಿ ಇದು ಇಂಬಿಟ್ಟುಕೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅದರ ತತ್ವಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಹಾಗಂತ ಎಲ್ಲರೂ ಧರ್ಮದ ಅಡಿಯಲ್ಲಿಯೆ ಬದುಕಬೇಕು ಎಂದೆನಿಲ್ಲ. ಅದೆಷ್ಟೋ ಜನರಿಗೆ ಧರ್ಮ ಒಂದು ಅಫೀಮಾಗಿ ಕಾಣಿಸಿದೆ. ಅಂಥವರು ತಮ್ಮ ವಿವೇಚನೆಯಂತೆ ಭಾರತದ ಸೌರ್ವಭೌಮತ್ವಕ್ಕೆ ದಕ್ಕೆಯಾಗದಂತೆ ವರ್ತಿಸುವ ಉದಾಹರಣೆಗಳು ಸಾಕಷ್ಟು ಇವೆ. ಗುಡಿ ಗುಂಡಾರ ಚರ್ಚು ಮಸೀದಿ ಗುರುದ್ವಾರ ಅನುಭವ ಮಂಟಪ ಮುಂತಾದವು ನಮ್ಮಲ್ಲಿ ಸಾಲು ಸಾಲಾಗಿ ಸಿಕ್ಕುತ್ತವೆ. ಆಯಾ ಧರ್ಮಿಯರು ತಮ್ಮ ತಮ್ಮ ನಂಬಿಕೆ ಆಚರಣೆಗಳನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಯಾವುದೆ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆಸಬಾರದು. ಧರ್ಮದ ಮೂಲ ತಳಹದಿಯೆ ದಯೆ, ಪ್ರೀತಿ, ವಿಶ್ವಾಸ, ಅಂತಃಕರಣ ಎಂಬುದನ್ನು ನಾವು ಯಾರೂ ಮರೆಯಬಾರದು. ಆಯಾ ಧರ್ಮದ ಮೂಲಭೂತ ತತ್ವಗಳ ಕುರಿತು ಆರೋಗ್ಯಕರವಾಗಿ ಚಿಂತಿಸಬಹುದೆ ಹೊರತು ಆಕ್ರಮಣಕಾರಿಯಾಗಿ ಅದರ ವಿರುದ್ಧ ದಂಡೆತ್ತಿ ಹೋಗುವುದಲ್ಲ. ಸಮಾಜದಲ್ಲಿ ವಿಚಾರಗಳನ್ನು ಹರಿಬಿಡುವ ಮೂಲಕ ಧರ್ಮದ ಆಚರಣೆಗಳು ತಪ್ಪಾಗಿದ್ದರೆ ಅವನ್ನು ಒಪ್ಪಮಾಡಲು ಶ್ರಮಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಮೂಲತಃ ಧರ್ಮ ಸಂಸ್ಥಾಪಕರು ಯಾರಿಗೂ ಕೇಡುಂಟು ಮಾಡದ, ಎಲ್ಲರಿಗೂ ಒಳಿತನ್ನು ಉಂಟು ಮಾಡುವ ತತ್ವಗಳಿಂದ ಧರ್ಮವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅವನ್ನು ಆಚರಣೆಗೆ ತರಬೇಕಾದ ಮುಲ್ಲಾ ಪಾದ್ರಿ ಪೂಜಾರಿಗಳು ತಮ್ಮ ತಪ್ಪು ಗ್ರಹಿಕೆಯಿಂದ ಮೂಲ ಗ್ರಂಥದ ತತ್ವಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿದ್ದಾರೆ. ಇದರಿಂದಾಗಿ ಧರ್ಮ ವಿವೇಚನೆಯ ಮಾರ್ಗವಾಗುವ ಬದಲು ಇಂದು ಧರ್ಮ ಬಂಧನದವಾಗಿದೆ. ಸ್ವಚ್ಚಂದ ಹಕ್ಕಿಯನ್ನು ಕೂಡಿಹಾಕಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.

ಕೃಪೆ: ಪಂಜು ಗಂಗೊಳ್ಳಿ

ಭಾರತದ ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಂಬಾ ಭೀಕರವಾಗಿದೆ. ಧರ್ಮದ ಆಶಯಗಳು ಸಂಸತ್ತನ್ನು ಪ್ರವೇಶಿಸಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ  ಅಧರ್ಮದ ಹಿನ್ನೆಲೆಯ ಉಗ್ರವಾದ ನಮ್ಮ ಸಂಸತ್ತನ್ನು ಪ್ರವೇಶಿಸಿದೆ. ಮೊನ್ನೆ ಮೊನ್ನೆಯ ಸಂಸತ್ತಿನ ಆರಂಭದಲ್ಲಿ ಮೊಳಗಿದ ಜೈಶ್ರೀರಾಮ್, ತಕ್ಬಿರ್ ಅಲ್ಲಾಹು ಅಕ್ಬರ್, ಜೈ ಕಾಳಿ ಮಾತೆ ಎಂಬ ಮಾತುಗಳು ಅವರವ ಅಂತಃಕರಣದಿಂದ ಬಂದಿದ್ದರೆ ಯಾವ ಪ್ರಶ್ನೆಯೂ ನಮ್ಮಲ್ಲಿ ಮೊಳೆಯುತ್ತಿರಲಿಲ್ಲ. ಆದರೆ ಆ ಘೋಷಣೆಗಳ ಹಿಂದೆ ದೇಶದ ಜನರ ಭಾವನಾತ್ಮಕ ಮನಸ್ಸುಗಳನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ತುಡಿತ ಇವರಲ್ಲಿ ಇದ್ದದ್ದು ಯಾರಿಗಾದರೂ ಕಾಣುತ್ತದೆ. ನಿಜವಾದ ಧರ್ಮದ ತಿರುಳುಗಳು ಓಟ್ ಬ್ಯಾಂಕ್ ಮಾಡಿಕೊಂಡರೆ ಯಾರದೂ ತಕರಾರು ಇಲ್ಲ. ಆದರೆ ಧರ್ಮದ ತತ್ವಗಳನ್ನು ಮೂಲೆಗುಂಪು ಮಾಡಿ, ಆ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಓಟಿನ ರಾಜಕಾರಣ ಮಾಡುವುದು ಇದೆಯಲ್ಲ ಇದು ಜನತೆಯನ್ನು ಗಂಡಾಂತರಕ್ಕೆ ದೂಡಬಲ್ಲುದು.

ಕೃಪೆ: ಪಿ ಮಹಮ್ಮದ್

ಈ ಮನೋಭಾವದ ಹಿನ್ನೆಲೆಯ ಜೈಶ್ರೀರಾಮ ಘೋಷಣೆ ತುಂಬಾ ಅಪಾಯಕಾರಿಯಾದ ಬೆಳವಣಿಗೆ. ಜೈಶ್ರೀರಾಮ ಘೋಷಣೆ ಕೂಗುವುದು ಸಂವಿಧಾನ ವಿರೋಧಿ ಅಲ್ಲ, ಆದರೆ ಆ ಘೋಷಣೆಯೊಳಗೆ ಇನ್ನೊಬ್ಬರ ಕೆರಳಿಸುವುದು, ಅವಮಾನಿಸುವುದು, ತುಚ್ಛವಾಗಿ ಕಾಣುವುದು ಇದೆಯಲ್ಲ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜೈ ಶ್ರೀರಾಮ ಘೋಷಣೆ ಕೂಗಿದಾಕ್ಷಣ ಅವರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಅಟ್ಟುವುದು ಎಷ್ಟು ತಪ್ಪೋ, ಮಮತಾ ಅವರನ್ನು ಕಂಡಾಕ್ಷಣ ಅವರ ಚಿತ್ತಾವಣೆಗಾಗಿ ಜೈ ಶ್ರೀರಾಮ ಕೂಗುವುದು ಕೂಡ ತಪ್ಪು.

ಮತ್ತೊಂದು ಸಂಗತಿ : ಧರ್ಮದ ಆಚರಣೆಗಳು , ತತ್ವಗಳು ತೀರಾ ಖಾಸಗಿಯಾದ ಸಂಗತಿಗಳು. ಗಂಡ ಹೆಂಡತಿಯ ಸಂಬಂಧದಂತೆ ಅದು ಅಂತರಂಗದ ಸತ್ಯ. ಅದನ್ನು ಎಲ್ಲರಿಗೂ ಕಾಣಿಸುವಂತೆ ತೋರಿಸುವ ಅಗತ್ಯತೆ ಕಾಣುವುದಿಲ್ಲ. ಎಲ್ಲರಿಗೂ ಕಾಣಲಿ ಎಂಬಂತೆ ಧರ್ಮದ ಆಚರಣೆಗಳು ಮಾಡುತ್ತಿದ್ದರೆ ಅದು ಕೇವಲ ಆಡಂಬರದ ಆಚರಣೆಯಾಗುತ್ತದೆ. ಅಂತರಂಗದ ಆಚರಣೆ ಆಗಿರುವುದಿಲ್ಲ. ಧರ್ಮ ನಮ್ಮ ನಮ್ಮ ಮನದ ಕೊಳೆಯನ್ನು ತೊಳೆಯಲು ಉಪಯೋಗಿಸಿಕೊಳ್ಳಬೇಕೇ ಹೊರತು, ನಮ್ಮ ಅಂತರಂಗಕ್ಕೆ ಎಲ್ಲಿಯದೋ ಕಸ ಕಡ್ಡಿ ತಂದು ಹಾಕುವುದಕ್ಕೆ ಅಲ್ಲ. ಧರ್ಮ ಹರಿವ ನೀರಿನಂತೆ ನಿರ್ಮಲ. ನಿಷ್ಕಲ್ಮಶ. ಅದು ನಿಂತ ನೀರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಸಂಸತ್ ಸದಸ್ಯರು ಭಾರತವನ್ನು ಊಧ್ರ್ವಮುಖದತ್ತ ಕೊಂಡು ಹೋಗಬಲ್ಲರು.

ಸ್ವವಿಮರ್ಶೆ , ಆತ್ಮವಲೋಕನ ಇಲ್ಲದೆ ನಾ ಹೆಚ್ಚು ನೀ ಹೆಚ್ಚು ಎಂಬ ದಾಟಿಯಲ್ಲಿ ಹೊರಟ ಸಂಸದರ ಮಾತು ವರ್ತನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ನಮ್ಮ ಭಾರತದ ಸಂಸತ್ತು ಅಧರ್ಮ ಸಂಸತ್ತಾಗಿ ಮಾರ್ಪಾಟಾಗುತ್ತದೆ. ಸಂತೆಯ ಗದ್ದಲ,  ಬಲಶಾಲಿಯ ನಡೆ ನುಡಿಗಳೆ ಶ್ರೇಷ್ಠ ಎಂಬ ಕಾಡು ನ್ಯಾಯ ಸಂಸತ್ತು ಪ್ರವೇಶಿಸಿದರೆ ದೇಶದ ಜನತೆ ಮತ ಧರ್ಮಗಳ ನೆಪದಲ್ಲಿ ಹತರಾಗುವ ಕಾಲ ದೂರವಿಲ್ಲವೆನಿಸುತ್ತದೆ. ಧರ್ಮ ಅಫೀಮಾಗಿ ಮಾರ್ಪಟ್ಟಾಗ ಇದೆಲ್ಲ ಸಾಧ್ಯವಾಗುತ್ತದೆ. ಭಾರತ ನಿಜವಾದ ಧರ್ಮದ ಆಶಯಗಳನ್ನು ಹೊತ್ತುಕೊಂಡು ಹೋಗಲಿ. ಸಂವಿಧಾನದ ಮಾನವನ್ನು ಸಂಸದರು ಹಾಳು ಮಾಡದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....