Homeಮುಖಪುಟಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

ಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮ ದೇಶದ ಸಂಸತ್ತಿಗೆ ಅದರದೆ ಆದ ಘನತೆ ಗೌರವ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರೆಲ್ಲರ ಮಾನವನ್ನು  ಕಾಪಾಡುತ್ತ ಬಂದಿದೆ. ನಮ್ಮ ರಾಷ್ಟ್ರ , ಧರ್ಮ ನಿರಪೇಕ್ಷವಾದ ರಾಷ್ಟ್ರವಾದರೂ ಸಹ ಹಲವಾರು ಮತ ಧರ್ಮಗಳನ್ನು ತನ್ನ ಒಡಲಲ್ಲಿ ಇದು ಇಂಬಿಟ್ಟುಕೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅದರ ತತ್ವಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಹಾಗಂತ ಎಲ್ಲರೂ ಧರ್ಮದ ಅಡಿಯಲ್ಲಿಯೆ ಬದುಕಬೇಕು ಎಂದೆನಿಲ್ಲ. ಅದೆಷ್ಟೋ ಜನರಿಗೆ ಧರ್ಮ ಒಂದು ಅಫೀಮಾಗಿ ಕಾಣಿಸಿದೆ. ಅಂಥವರು ತಮ್ಮ ವಿವೇಚನೆಯಂತೆ ಭಾರತದ ಸೌರ್ವಭೌಮತ್ವಕ್ಕೆ ದಕ್ಕೆಯಾಗದಂತೆ ವರ್ತಿಸುವ ಉದಾಹರಣೆಗಳು ಸಾಕಷ್ಟು ಇವೆ. ಗುಡಿ ಗುಂಡಾರ ಚರ್ಚು ಮಸೀದಿ ಗುರುದ್ವಾರ ಅನುಭವ ಮಂಟಪ ಮುಂತಾದವು ನಮ್ಮಲ್ಲಿ ಸಾಲು ಸಾಲಾಗಿ ಸಿಕ್ಕುತ್ತವೆ. ಆಯಾ ಧರ್ಮಿಯರು ತಮ್ಮ ತಮ್ಮ ನಂಬಿಕೆ ಆಚರಣೆಗಳನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಯಾವುದೆ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆಸಬಾರದು. ಧರ್ಮದ ಮೂಲ ತಳಹದಿಯೆ ದಯೆ, ಪ್ರೀತಿ, ವಿಶ್ವಾಸ, ಅಂತಃಕರಣ ಎಂಬುದನ್ನು ನಾವು ಯಾರೂ ಮರೆಯಬಾರದು. ಆಯಾ ಧರ್ಮದ ಮೂಲಭೂತ ತತ್ವಗಳ ಕುರಿತು ಆರೋಗ್ಯಕರವಾಗಿ ಚಿಂತಿಸಬಹುದೆ ಹೊರತು ಆಕ್ರಮಣಕಾರಿಯಾಗಿ ಅದರ ವಿರುದ್ಧ ದಂಡೆತ್ತಿ ಹೋಗುವುದಲ್ಲ. ಸಮಾಜದಲ್ಲಿ ವಿಚಾರಗಳನ್ನು ಹರಿಬಿಡುವ ಮೂಲಕ ಧರ್ಮದ ಆಚರಣೆಗಳು ತಪ್ಪಾಗಿದ್ದರೆ ಅವನ್ನು ಒಪ್ಪಮಾಡಲು ಶ್ರಮಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಮೂಲತಃ ಧರ್ಮ ಸಂಸ್ಥಾಪಕರು ಯಾರಿಗೂ ಕೇಡುಂಟು ಮಾಡದ, ಎಲ್ಲರಿಗೂ ಒಳಿತನ್ನು ಉಂಟು ಮಾಡುವ ತತ್ವಗಳಿಂದ ಧರ್ಮವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅವನ್ನು ಆಚರಣೆಗೆ ತರಬೇಕಾದ ಮುಲ್ಲಾ ಪಾದ್ರಿ ಪೂಜಾರಿಗಳು ತಮ್ಮ ತಪ್ಪು ಗ್ರಹಿಕೆಯಿಂದ ಮೂಲ ಗ್ರಂಥದ ತತ್ವಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿದ್ದಾರೆ. ಇದರಿಂದಾಗಿ ಧರ್ಮ ವಿವೇಚನೆಯ ಮಾರ್ಗವಾಗುವ ಬದಲು ಇಂದು ಧರ್ಮ ಬಂಧನದವಾಗಿದೆ. ಸ್ವಚ್ಚಂದ ಹಕ್ಕಿಯನ್ನು ಕೂಡಿಹಾಕಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.

ಕೃಪೆ: ಪಂಜು ಗಂಗೊಳ್ಳಿ

ಭಾರತದ ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಂಬಾ ಭೀಕರವಾಗಿದೆ. ಧರ್ಮದ ಆಶಯಗಳು ಸಂಸತ್ತನ್ನು ಪ್ರವೇಶಿಸಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ  ಅಧರ್ಮದ ಹಿನ್ನೆಲೆಯ ಉಗ್ರವಾದ ನಮ್ಮ ಸಂಸತ್ತನ್ನು ಪ್ರವೇಶಿಸಿದೆ. ಮೊನ್ನೆ ಮೊನ್ನೆಯ ಸಂಸತ್ತಿನ ಆರಂಭದಲ್ಲಿ ಮೊಳಗಿದ ಜೈಶ್ರೀರಾಮ್, ತಕ್ಬಿರ್ ಅಲ್ಲಾಹು ಅಕ್ಬರ್, ಜೈ ಕಾಳಿ ಮಾತೆ ಎಂಬ ಮಾತುಗಳು ಅವರವ ಅಂತಃಕರಣದಿಂದ ಬಂದಿದ್ದರೆ ಯಾವ ಪ್ರಶ್ನೆಯೂ ನಮ್ಮಲ್ಲಿ ಮೊಳೆಯುತ್ತಿರಲಿಲ್ಲ. ಆದರೆ ಆ ಘೋಷಣೆಗಳ ಹಿಂದೆ ದೇಶದ ಜನರ ಭಾವನಾತ್ಮಕ ಮನಸ್ಸುಗಳನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ತುಡಿತ ಇವರಲ್ಲಿ ಇದ್ದದ್ದು ಯಾರಿಗಾದರೂ ಕಾಣುತ್ತದೆ. ನಿಜವಾದ ಧರ್ಮದ ತಿರುಳುಗಳು ಓಟ್ ಬ್ಯಾಂಕ್ ಮಾಡಿಕೊಂಡರೆ ಯಾರದೂ ತಕರಾರು ಇಲ್ಲ. ಆದರೆ ಧರ್ಮದ ತತ್ವಗಳನ್ನು ಮೂಲೆಗುಂಪು ಮಾಡಿ, ಆ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಓಟಿನ ರಾಜಕಾರಣ ಮಾಡುವುದು ಇದೆಯಲ್ಲ ಇದು ಜನತೆಯನ್ನು ಗಂಡಾಂತರಕ್ಕೆ ದೂಡಬಲ್ಲುದು.

ಕೃಪೆ: ಪಿ ಮಹಮ್ಮದ್

ಈ ಮನೋಭಾವದ ಹಿನ್ನೆಲೆಯ ಜೈಶ್ರೀರಾಮ ಘೋಷಣೆ ತುಂಬಾ ಅಪಾಯಕಾರಿಯಾದ ಬೆಳವಣಿಗೆ. ಜೈಶ್ರೀರಾಮ ಘೋಷಣೆ ಕೂಗುವುದು ಸಂವಿಧಾನ ವಿರೋಧಿ ಅಲ್ಲ, ಆದರೆ ಆ ಘೋಷಣೆಯೊಳಗೆ ಇನ್ನೊಬ್ಬರ ಕೆರಳಿಸುವುದು, ಅವಮಾನಿಸುವುದು, ತುಚ್ಛವಾಗಿ ಕಾಣುವುದು ಇದೆಯಲ್ಲ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜೈ ಶ್ರೀರಾಮ ಘೋಷಣೆ ಕೂಗಿದಾಕ್ಷಣ ಅವರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಅಟ್ಟುವುದು ಎಷ್ಟು ತಪ್ಪೋ, ಮಮತಾ ಅವರನ್ನು ಕಂಡಾಕ್ಷಣ ಅವರ ಚಿತ್ತಾವಣೆಗಾಗಿ ಜೈ ಶ್ರೀರಾಮ ಕೂಗುವುದು ಕೂಡ ತಪ್ಪು.

ಮತ್ತೊಂದು ಸಂಗತಿ : ಧರ್ಮದ ಆಚರಣೆಗಳು , ತತ್ವಗಳು ತೀರಾ ಖಾಸಗಿಯಾದ ಸಂಗತಿಗಳು. ಗಂಡ ಹೆಂಡತಿಯ ಸಂಬಂಧದಂತೆ ಅದು ಅಂತರಂಗದ ಸತ್ಯ. ಅದನ್ನು ಎಲ್ಲರಿಗೂ ಕಾಣಿಸುವಂತೆ ತೋರಿಸುವ ಅಗತ್ಯತೆ ಕಾಣುವುದಿಲ್ಲ. ಎಲ್ಲರಿಗೂ ಕಾಣಲಿ ಎಂಬಂತೆ ಧರ್ಮದ ಆಚರಣೆಗಳು ಮಾಡುತ್ತಿದ್ದರೆ ಅದು ಕೇವಲ ಆಡಂಬರದ ಆಚರಣೆಯಾಗುತ್ತದೆ. ಅಂತರಂಗದ ಆಚರಣೆ ಆಗಿರುವುದಿಲ್ಲ. ಧರ್ಮ ನಮ್ಮ ನಮ್ಮ ಮನದ ಕೊಳೆಯನ್ನು ತೊಳೆಯಲು ಉಪಯೋಗಿಸಿಕೊಳ್ಳಬೇಕೇ ಹೊರತು, ನಮ್ಮ ಅಂತರಂಗಕ್ಕೆ ಎಲ್ಲಿಯದೋ ಕಸ ಕಡ್ಡಿ ತಂದು ಹಾಕುವುದಕ್ಕೆ ಅಲ್ಲ. ಧರ್ಮ ಹರಿವ ನೀರಿನಂತೆ ನಿರ್ಮಲ. ನಿಷ್ಕಲ್ಮಶ. ಅದು ನಿಂತ ನೀರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಸಂಸತ್ ಸದಸ್ಯರು ಭಾರತವನ್ನು ಊಧ್ರ್ವಮುಖದತ್ತ ಕೊಂಡು ಹೋಗಬಲ್ಲರು.

ಸ್ವವಿಮರ್ಶೆ , ಆತ್ಮವಲೋಕನ ಇಲ್ಲದೆ ನಾ ಹೆಚ್ಚು ನೀ ಹೆಚ್ಚು ಎಂಬ ದಾಟಿಯಲ್ಲಿ ಹೊರಟ ಸಂಸದರ ಮಾತು ವರ್ತನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ನಮ್ಮ ಭಾರತದ ಸಂಸತ್ತು ಅಧರ್ಮ ಸಂಸತ್ತಾಗಿ ಮಾರ್ಪಾಟಾಗುತ್ತದೆ. ಸಂತೆಯ ಗದ್ದಲ,  ಬಲಶಾಲಿಯ ನಡೆ ನುಡಿಗಳೆ ಶ್ರೇಷ್ಠ ಎಂಬ ಕಾಡು ನ್ಯಾಯ ಸಂಸತ್ತು ಪ್ರವೇಶಿಸಿದರೆ ದೇಶದ ಜನತೆ ಮತ ಧರ್ಮಗಳ ನೆಪದಲ್ಲಿ ಹತರಾಗುವ ಕಾಲ ದೂರವಿಲ್ಲವೆನಿಸುತ್ತದೆ. ಧರ್ಮ ಅಫೀಮಾಗಿ ಮಾರ್ಪಟ್ಟಾಗ ಇದೆಲ್ಲ ಸಾಧ್ಯವಾಗುತ್ತದೆ. ಭಾರತ ನಿಜವಾದ ಧರ್ಮದ ಆಶಯಗಳನ್ನು ಹೊತ್ತುಕೊಂಡು ಹೋಗಲಿ. ಸಂವಿಧಾನದ ಮಾನವನ್ನು ಸಂಸದರು ಹಾಳು ಮಾಡದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...