Homeಮುಖಪುಟಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

ಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮ ದೇಶದ ಸಂಸತ್ತಿಗೆ ಅದರದೆ ಆದ ಘನತೆ ಗೌರವ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರೆಲ್ಲರ ಮಾನವನ್ನು  ಕಾಪಾಡುತ್ತ ಬಂದಿದೆ. ನಮ್ಮ ರಾಷ್ಟ್ರ , ಧರ್ಮ ನಿರಪೇಕ್ಷವಾದ ರಾಷ್ಟ್ರವಾದರೂ ಸಹ ಹಲವಾರು ಮತ ಧರ್ಮಗಳನ್ನು ತನ್ನ ಒಡಲಲ್ಲಿ ಇದು ಇಂಬಿಟ್ಟುಕೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅದರ ತತ್ವಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಹಾಗಂತ ಎಲ್ಲರೂ ಧರ್ಮದ ಅಡಿಯಲ್ಲಿಯೆ ಬದುಕಬೇಕು ಎಂದೆನಿಲ್ಲ. ಅದೆಷ್ಟೋ ಜನರಿಗೆ ಧರ್ಮ ಒಂದು ಅಫೀಮಾಗಿ ಕಾಣಿಸಿದೆ. ಅಂಥವರು ತಮ್ಮ ವಿವೇಚನೆಯಂತೆ ಭಾರತದ ಸೌರ್ವಭೌಮತ್ವಕ್ಕೆ ದಕ್ಕೆಯಾಗದಂತೆ ವರ್ತಿಸುವ ಉದಾಹರಣೆಗಳು ಸಾಕಷ್ಟು ಇವೆ. ಗುಡಿ ಗುಂಡಾರ ಚರ್ಚು ಮಸೀದಿ ಗುರುದ್ವಾರ ಅನುಭವ ಮಂಟಪ ಮುಂತಾದವು ನಮ್ಮಲ್ಲಿ ಸಾಲು ಸಾಲಾಗಿ ಸಿಕ್ಕುತ್ತವೆ. ಆಯಾ ಧರ್ಮಿಯರು ತಮ್ಮ ತಮ್ಮ ನಂಬಿಕೆ ಆಚರಣೆಗಳನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಯಾವುದೆ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆಸಬಾರದು. ಧರ್ಮದ ಮೂಲ ತಳಹದಿಯೆ ದಯೆ, ಪ್ರೀತಿ, ವಿಶ್ವಾಸ, ಅಂತಃಕರಣ ಎಂಬುದನ್ನು ನಾವು ಯಾರೂ ಮರೆಯಬಾರದು. ಆಯಾ ಧರ್ಮದ ಮೂಲಭೂತ ತತ್ವಗಳ ಕುರಿತು ಆರೋಗ್ಯಕರವಾಗಿ ಚಿಂತಿಸಬಹುದೆ ಹೊರತು ಆಕ್ರಮಣಕಾರಿಯಾಗಿ ಅದರ ವಿರುದ್ಧ ದಂಡೆತ್ತಿ ಹೋಗುವುದಲ್ಲ. ಸಮಾಜದಲ್ಲಿ ವಿಚಾರಗಳನ್ನು ಹರಿಬಿಡುವ ಮೂಲಕ ಧರ್ಮದ ಆಚರಣೆಗಳು ತಪ್ಪಾಗಿದ್ದರೆ ಅವನ್ನು ಒಪ್ಪಮಾಡಲು ಶ್ರಮಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಮೂಲತಃ ಧರ್ಮ ಸಂಸ್ಥಾಪಕರು ಯಾರಿಗೂ ಕೇಡುಂಟು ಮಾಡದ, ಎಲ್ಲರಿಗೂ ಒಳಿತನ್ನು ಉಂಟು ಮಾಡುವ ತತ್ವಗಳಿಂದ ಧರ್ಮವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅವನ್ನು ಆಚರಣೆಗೆ ತರಬೇಕಾದ ಮುಲ್ಲಾ ಪಾದ್ರಿ ಪೂಜಾರಿಗಳು ತಮ್ಮ ತಪ್ಪು ಗ್ರಹಿಕೆಯಿಂದ ಮೂಲ ಗ್ರಂಥದ ತತ್ವಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿದ್ದಾರೆ. ಇದರಿಂದಾಗಿ ಧರ್ಮ ವಿವೇಚನೆಯ ಮಾರ್ಗವಾಗುವ ಬದಲು ಇಂದು ಧರ್ಮ ಬಂಧನದವಾಗಿದೆ. ಸ್ವಚ್ಚಂದ ಹಕ್ಕಿಯನ್ನು ಕೂಡಿಹಾಕಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.

ಕೃಪೆ: ಪಂಜು ಗಂಗೊಳ್ಳಿ

ಭಾರತದ ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಂಬಾ ಭೀಕರವಾಗಿದೆ. ಧರ್ಮದ ಆಶಯಗಳು ಸಂಸತ್ತನ್ನು ಪ್ರವೇಶಿಸಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ  ಅಧರ್ಮದ ಹಿನ್ನೆಲೆಯ ಉಗ್ರವಾದ ನಮ್ಮ ಸಂಸತ್ತನ್ನು ಪ್ರವೇಶಿಸಿದೆ. ಮೊನ್ನೆ ಮೊನ್ನೆಯ ಸಂಸತ್ತಿನ ಆರಂಭದಲ್ಲಿ ಮೊಳಗಿದ ಜೈಶ್ರೀರಾಮ್, ತಕ್ಬಿರ್ ಅಲ್ಲಾಹು ಅಕ್ಬರ್, ಜೈ ಕಾಳಿ ಮಾತೆ ಎಂಬ ಮಾತುಗಳು ಅವರವ ಅಂತಃಕರಣದಿಂದ ಬಂದಿದ್ದರೆ ಯಾವ ಪ್ರಶ್ನೆಯೂ ನಮ್ಮಲ್ಲಿ ಮೊಳೆಯುತ್ತಿರಲಿಲ್ಲ. ಆದರೆ ಆ ಘೋಷಣೆಗಳ ಹಿಂದೆ ದೇಶದ ಜನರ ಭಾವನಾತ್ಮಕ ಮನಸ್ಸುಗಳನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ತುಡಿತ ಇವರಲ್ಲಿ ಇದ್ದದ್ದು ಯಾರಿಗಾದರೂ ಕಾಣುತ್ತದೆ. ನಿಜವಾದ ಧರ್ಮದ ತಿರುಳುಗಳು ಓಟ್ ಬ್ಯಾಂಕ್ ಮಾಡಿಕೊಂಡರೆ ಯಾರದೂ ತಕರಾರು ಇಲ್ಲ. ಆದರೆ ಧರ್ಮದ ತತ್ವಗಳನ್ನು ಮೂಲೆಗುಂಪು ಮಾಡಿ, ಆ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಓಟಿನ ರಾಜಕಾರಣ ಮಾಡುವುದು ಇದೆಯಲ್ಲ ಇದು ಜನತೆಯನ್ನು ಗಂಡಾಂತರಕ್ಕೆ ದೂಡಬಲ್ಲುದು.

ಕೃಪೆ: ಪಿ ಮಹಮ್ಮದ್

ಈ ಮನೋಭಾವದ ಹಿನ್ನೆಲೆಯ ಜೈಶ್ರೀರಾಮ ಘೋಷಣೆ ತುಂಬಾ ಅಪಾಯಕಾರಿಯಾದ ಬೆಳವಣಿಗೆ. ಜೈಶ್ರೀರಾಮ ಘೋಷಣೆ ಕೂಗುವುದು ಸಂವಿಧಾನ ವಿರೋಧಿ ಅಲ್ಲ, ಆದರೆ ಆ ಘೋಷಣೆಯೊಳಗೆ ಇನ್ನೊಬ್ಬರ ಕೆರಳಿಸುವುದು, ಅವಮಾನಿಸುವುದು, ತುಚ್ಛವಾಗಿ ಕಾಣುವುದು ಇದೆಯಲ್ಲ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜೈ ಶ್ರೀರಾಮ ಘೋಷಣೆ ಕೂಗಿದಾಕ್ಷಣ ಅವರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಅಟ್ಟುವುದು ಎಷ್ಟು ತಪ್ಪೋ, ಮಮತಾ ಅವರನ್ನು ಕಂಡಾಕ್ಷಣ ಅವರ ಚಿತ್ತಾವಣೆಗಾಗಿ ಜೈ ಶ್ರೀರಾಮ ಕೂಗುವುದು ಕೂಡ ತಪ್ಪು.

ಮತ್ತೊಂದು ಸಂಗತಿ : ಧರ್ಮದ ಆಚರಣೆಗಳು , ತತ್ವಗಳು ತೀರಾ ಖಾಸಗಿಯಾದ ಸಂಗತಿಗಳು. ಗಂಡ ಹೆಂಡತಿಯ ಸಂಬಂಧದಂತೆ ಅದು ಅಂತರಂಗದ ಸತ್ಯ. ಅದನ್ನು ಎಲ್ಲರಿಗೂ ಕಾಣಿಸುವಂತೆ ತೋರಿಸುವ ಅಗತ್ಯತೆ ಕಾಣುವುದಿಲ್ಲ. ಎಲ್ಲರಿಗೂ ಕಾಣಲಿ ಎಂಬಂತೆ ಧರ್ಮದ ಆಚರಣೆಗಳು ಮಾಡುತ್ತಿದ್ದರೆ ಅದು ಕೇವಲ ಆಡಂಬರದ ಆಚರಣೆಯಾಗುತ್ತದೆ. ಅಂತರಂಗದ ಆಚರಣೆ ಆಗಿರುವುದಿಲ್ಲ. ಧರ್ಮ ನಮ್ಮ ನಮ್ಮ ಮನದ ಕೊಳೆಯನ್ನು ತೊಳೆಯಲು ಉಪಯೋಗಿಸಿಕೊಳ್ಳಬೇಕೇ ಹೊರತು, ನಮ್ಮ ಅಂತರಂಗಕ್ಕೆ ಎಲ್ಲಿಯದೋ ಕಸ ಕಡ್ಡಿ ತಂದು ಹಾಕುವುದಕ್ಕೆ ಅಲ್ಲ. ಧರ್ಮ ಹರಿವ ನೀರಿನಂತೆ ನಿರ್ಮಲ. ನಿಷ್ಕಲ್ಮಶ. ಅದು ನಿಂತ ನೀರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಸಂಸತ್ ಸದಸ್ಯರು ಭಾರತವನ್ನು ಊಧ್ರ್ವಮುಖದತ್ತ ಕೊಂಡು ಹೋಗಬಲ್ಲರು.

ಸ್ವವಿಮರ್ಶೆ , ಆತ್ಮವಲೋಕನ ಇಲ್ಲದೆ ನಾ ಹೆಚ್ಚು ನೀ ಹೆಚ್ಚು ಎಂಬ ದಾಟಿಯಲ್ಲಿ ಹೊರಟ ಸಂಸದರ ಮಾತು ವರ್ತನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ನಮ್ಮ ಭಾರತದ ಸಂಸತ್ತು ಅಧರ್ಮ ಸಂಸತ್ತಾಗಿ ಮಾರ್ಪಾಟಾಗುತ್ತದೆ. ಸಂತೆಯ ಗದ್ದಲ,  ಬಲಶಾಲಿಯ ನಡೆ ನುಡಿಗಳೆ ಶ್ರೇಷ್ಠ ಎಂಬ ಕಾಡು ನ್ಯಾಯ ಸಂಸತ್ತು ಪ್ರವೇಶಿಸಿದರೆ ದೇಶದ ಜನತೆ ಮತ ಧರ್ಮಗಳ ನೆಪದಲ್ಲಿ ಹತರಾಗುವ ಕಾಲ ದೂರವಿಲ್ಲವೆನಿಸುತ್ತದೆ. ಧರ್ಮ ಅಫೀಮಾಗಿ ಮಾರ್ಪಟ್ಟಾಗ ಇದೆಲ್ಲ ಸಾಧ್ಯವಾಗುತ್ತದೆ. ಭಾರತ ನಿಜವಾದ ಧರ್ಮದ ಆಶಯಗಳನ್ನು ಹೊತ್ತುಕೊಂಡು ಹೋಗಲಿ. ಸಂವಿಧಾನದ ಮಾನವನ್ನು ಸಂಸದರು ಹಾಳು ಮಾಡದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...