Homeಅಂಕಣಗಳುಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ?

- Advertisement -
- Advertisement -

ಹಿಂದೆ ಎಂದೂ ಇಲ್ಲದಷ್ಟು ಅಶಾಂತಿ ಈಗ ರಾಷ್ಟ್ರವನ್ನು ಆವರಿಸಿದೆ. ಇತ್ತೀಚಿನ ಘಟನೆಗಳು ಹಾಗೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೊಂದು ರಾಜಕೀಯ ತಿಕ್ಕಾಟಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾರ್ಯಾಂಗ ಈಗ ಬಹುಮಟ್ಟಿಗೆ ಆಡಳಿತಾಂಗದ ಗುಲಾಮನಾಗುತ್ತಿದೆ. Enforcement Directorateನ್ನು ಮೋದಿ ಸರ್ಕಾರ ಕಬ್ಜಾ ಮಾಡಿಬಿಟ್ಟಿದೆ. ಮೋದಿ ಆಣತಿಯಂತೆ ಅದು ಕೆಲಸ ಮಾಡುತ್ತಿದೆ. ಸಿಬಿಐನ್ನು ಸರ್ವೋಚ್ಚ ನ್ಯಾಯಾಲಯವೇ ಒಮ್ಮೆ ‘ಪಂಜರದಗಿಣಿ’ ಎಂದು ಬಣ್ಣಿಸಿದೆ.

ಈಚೆಗೆ ಎಲ್ಲ ಸರ್ಕಾರಿ ನೌಕರರನ್ನೂ ಅವರ ಮನೆಯೊಳಗಿರುವ ಎಲ್ಲ ಪರಿವಾರದವರೂ ಯಡಿಯೂರಪ್ಪ ಸರ್ಕಾರಕ್ಕೆ ಅಧೀನರಾಗಿರಬೇಕೆಂದು ಒಂದು ಸರ್ಕ್ಯುಲರ್ ಹೊರಡಿಸಲಾಗಿದೆ. ರಾಜಕೀಯ ಸಭೆಗಳಿಗೆ ಹೋಗಕೂಡದು. ಯಾವ ರಾಜಕೀಯ ಪಕ್ಷಕ್ಕೂ ಒಲವು ತೋರಬಾರದು ಎಂದು ಈ ಫರ್ಮಾನು ಎಚ್ಚರಿಸುತ್ತದೆ. ಅಷ್ಟೇ ಅಲ್ಲ, ಅವರ ಮನೆಯವರು ರಾಜಕೀಯ ಕುರಿತು ಮಾತನಾಡಬಾರದು. ರಾಜಕೀಯ ಪಕ್ಷಗಳ ಸದಸ್ಯರಾಗಕೂಡದು, ಪ್ರಚಾರಕ್ಕೂ ಹೋಗಬಾರದು ಎಂದು ಎಚ್ಚರಿಕೆ ನೀಡಿ ಅವರ ಸ್ವಾತಂತ್ರ್ಯಹರಣ ಮಾಡುವ ರಾಜ್ಯಾಂಗವಿರೋಧಿ ನಿಲುವು ತಳೆದಿದೆ. ಸರ್ಕಾರಿ ನೌಕರರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಕೂಡದು,

PC : Mumbai Mirror

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ ಸರ್ಕಾರಕ್ಕೆ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ? ಸರ್ಕಾರಿ ನೌಕರನ ಮನೆಯ ಜನರೆಲ್ಲ ಸರ್ಕಾರಿ ಅಧಿಕಾರಿಗಳಲ್ಲ, ಅವರಿಗೆ ಕೆಲವು ಹಕ್ಕುಗಳಿವೆ. ತಮಗೆ ಸರಿತೋರಿದ ಪಕ್ಷವನ್ನು ಬೆಂಬಲಿಸುವ ಅವರು ನಡೆಸುವ ಸಭೆಸಮ್ಮೇಳನಗಳಿಗೆ ಹೋಗುವ ಅಧಿಕಾರವಿದೆ. ವಾಕ್ ಸ್ವಾತಂತ್ರ್ಯವಿದೆ, ವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಹಕ್ಕನ್ನು ಮೋದಿಗೆ, ಯಡಿಯೂರಪ್ಪನವರಿಗೆ ಕೊಟ್ಟವರು ಯಾರು?

ಅಷ್ಟೇ ಅಲ್ಲ, ಸರ್ಕಾರಿ ನೌಕರನೂ ಮೊದಲು ಭಾರತದ ಪ್ರಜೆ. ಅವನು ಸರ್ಕಾರಿ ಅಧಿಕಾರಿಯಾದೊಡನೆ ಅವನು ಎಲ್ಲ ಪ್ರಜಾ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇಂತಹದ್ದೇ ಒಂದು ಪ್ರಸಂಗ ನಡೆಯಿತು. ಎಂ.ಸಿ ಚಾಗ್ಲಾರವರು ಆಗ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ಜೆಪಿಯವರ ಒಂದು ಸಾರ್ವಜನಿಕ ಸಭೆಗೆ ಹೋಗಿದ್ದರು ಎಂದು ಇಂದಿರಾಗಾಂಧಿ ಸರ್ಕಾರ ಚಾಗ್ಲಾರವರ ಮೇಲೆ ಒಂದು ಕೇಸು ಹಾಕಿತು. ಚಾಗ್ಲಾರವರು ಕಾನೂನನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ಅರ್ಜಿ ಸಲ್ಲಿಸಲಾಯಿತು. ಚಾಗ್ಲಾರವರ ವಕೀಲರು ಅವರ ನಡಾವಳಿಯನ್ನೂ ಸಮರ್ಥಿಸುತ್ತಾ ಹೀಗೆ ವಾದ ಮಾಡಿದರು: ಚಾಗ್ಲಾರವರು ಜೆಪಿ ಅವರ ಬಹಿರಂಗ ಸಭೆಗೆ ಹೋಗಿದ್ದು ನಿಜ. ಜೆಪಿಯವರ ಭಾಷಣವನ್ನು ಚಾಗ್ಲಾರವರು ಕೇಳಿದ್ದು ಅಪರಾಧವಲ್ಲ. ಒಬ್ಬ ರಾಷ್ಟ್ರನಾಯಕ ಮಾತನಾಡಿದರೆ, ಅವರೇನು ಮಾತಾಡಿದರು ಎಂದು ತಿಳಿಯಲು ಅವರು ನಡೆಸಿಕೊಡುವ ಸಾರ್ವಜನಿಕ ಸಭೆಗೆ ಹೋಗಿ ಅದನ್ನು ಆಲಿಸುವುದು ಒಂದು ಕ್ರಮ. ಅದೇ ಭಾಷಣದ ಮುಖ್ಯ ವಿಚಾರಗಳನ್ನು ಪತ್ರಿಕೆಗಳು ಅಚ್ಚು ಮಾಡುತ್ತವೆ. ಅದನ್ನು ಓದಿ ತಿಳಿದುಕೊಳ್ಳುವುದು ಎರಡನೆಯ ಮಾರ್ಗ. ಮೂರನೆಯದೆಂದರೆ ದೃಶ್ಯಮಾಧ್ಯಮಗಳಲ್ಲಿ ಮಾಡಲಾಗುವ ಜೆಪಿ ಭಾಷಣವನ್ನು ಆಲಿಸುವುದು. ಈ ಮೂರು ರೀತಿಯಲ್ಲಿ ಭಾಷಣದ ಸಾರಾಂಶವನ್ನು ತಿಳಿಯಲು ಅವಕಾಶವಿದೆ. ಜೆಪಿ ಭಾಷಣ ಕೇಳಲು ಹೋಗದೆಯೂ ಜೆಪಿ ಏನು ಭಾಷಣ ಮಾಡಿದರು ಎಂದು ತಿಳಿಯಲು ಈ ಎರಡು ಮಾಧ್ಯಮಗಳಿವೆ. ಸರ್ಕಾರದ ನಿಲುವು ಜೆಪಿ ಭಾಷಣದ ಕೇಳಬಾರದು ಎಂಬುದಾದರೆ ಸರ್ಕಾರಿ ನೌಕರರು ಭಾಷಣ ಕೇಳಲೂ ಹೋಗಬಾರದು, ಪತ್ರಿಕೆ ಓದಲೂಬಾರದು, ದೃಶ್ಯಮಾಧ್ಯಮ ವೀಕ್ಷಿಸಲುಬಾರದು ಎಂದು ಆಜ್ಞೆಮಾಡಿ ಎಂದು ಚಾಗ್ಲಾರವರ ವಕೀಲರು ವಾದ ಮಂಡಿಸಿದರು. ಚಾಗ್ಲಾರವರ ಮೇಲೆ ಹಾಕಿದ್ದ ಕೇಸು ವಜಾ ಆಯಿತು. ಮೋದಿ ಸರ್ಕಾರ ಮತ್ತು ಯಡಿಯೂರಪ್ಪನವರ ಸರ್ಕಾರ ಸರ್ಕಾರಿ ನೌಕರರ ಮೇಲೆ ಹೇರಲು ರಚಿಸಿರುವ ಕಾನೂನನ್ನು ರದ್ದುಮಾಡಿ ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡುತ್ತೇನೆ.

ಮೋದಿ ಸರ್ಕಾರ ನೈತಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿಡಿಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಅಧಿಕಾರವನ್ನು ಅನೀತಿಯಿಂದ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನೂ ಪಡೆಯದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಕಿತ್ತುಹಾಕಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆ.

ಆಡಳಿತ ಕುಸಿದು ಬಿದ್ದಿರುವುದಕ್ಕೆ ಹತ್ತಾರು ಉದಾಹರಣೆಗಳನ್ನ ಕೊಡಬಹುದು. ಹೆಣ್ಣುಮಕ್ಕಳು, ಸಣ್ಣಮಕ್ಕಳು, ದಲಿತರು, ಮುಸ್ಲಿಮರು ಇವರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶ ಮತ್ತು ಮಂಗಳೂರಿನಲ್ಲಿ ದಿನನಿತ್ಯ ನಡೆಯುತ್ತಿವೆ. ಅಪೌಷ್ಠಿಕತೆಯಿಂದ, ಹಸಿವಿನಿಂದ ಸಾಯುವ ಗರ್ಭಿಣಿಯರು, ಸಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಮೋದಿಯವರು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವಿದೇಶ ಪ್ರವಾಸಗಳಿಗೆ ಬಳಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಮೋದಿಯವರ ಸರ್ಕಾರ ಕೋಟಿ ಕೋಟಿ ರೂ ಪಾಯಿಗಳನ್ನು ತಮ್ಮ ಪ್ರಜಾರಕ್ಕೋಸ್ಕರ ಸುರಿದಿದೆ. ದೃಶ್ಯಮಾಧ್ಯಮಗಳು ತಮ್ಮ ಪ್ರಜಾಪ್ರಭುತ್ವದ ಕಾವಲುಗಾರನಂತೆ ವರ್ತಿಸುವುದು ಬಿಟ್ಟು ಸಾಕುನಾಯಿಗಳಾಗಿ ಪರಿವರ್ತನೆಗೊಂಡಿವೆ. ಮಾಧ್ಯಮಗಳು ರಾಜಕೀಯದಲ್ಲಿ ತೊಡಗಿಕೊಂಡು ಮೋದಿಯವರ ಹಿಂಬಾಲಕರಂತೆ ವರ್ತಿಸುತ್ತಿವೆ.

PC : The Asian Age

ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಲಕ್ಷಾಂತರ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಅವರನ್ನು ಹೊರಗೆಡಹಲಾದರೂ, ಅಂತಹ ಅಧಿಕಾರಿಗಳಿಗೆ ಸರ್ಕಾರ ಕೊಡುವ ಶಿಕ್ಷೆ, ವರ್ಗಾವಣೆ, ಸಸ್ಪೆನ್‍ಷನ್ ಮಾತ್ರ. ಆಡಳಿತ ಕುಸಿದು ಬಿದ್ದರೂ ಅದನ್ನು ಸದೃಢಗೊಳಿಸಲು ಯಾವ ಕಠಿಣ ಕ್ರಮಕೈಗೊಳ್ಳದೆ, ನೆಪಮಾತ್ರಕ್ಕೆ ಒಂದು ವಿಚಾರಣಾ ಸಮಿತಿ ರಚಿಸಿ ಸುಮ್ಮನಾಗುವುದು ಇಂದಿನ ಸರ್ಕಾರದ ನೀತಿಯಾಗಿದೆ. ಹಿಂಸಾಚಾರ, ಅನ್ಯಾಯ ಮತ್ತು ಆಡಳಿತ ವೈಫಲ್ಯಗಳು ಒಂದಾದಮೇಲೆ ಒಂದು ನಡೆಯುತ್ತಿದ್ದರೂ ವೈಫಲ್ಯಕ್ಕೆ ಮೂಲಕಾರಣ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ. ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಕಾಯಂ ಆಗಿ ಇರುವ ಅಧಿಕಾರಿಗಳು ಹೆದರಿ, ಕಾನೂನು ರೀತ್ಯಾ ಕೆಲಸ ಮಾಡುವುದನ್ನು ಕೈಬಿಟ್ಟು, ಆಳುವ ಜನರ ಆಜ್ಞಾಧಾರಕರಂತೆ ವರ್ತಿಸುವ ಅಧಿಕಾರಿಗಳಿಂದ ನ್ಯಾಯ ದೊರಕುವುದಾದರೂ ಸಂಭವನೀಯವೇ?

ಅಧಿಕಾರಿ ಕಾನೂನುರೀತ್ಯಾ ಕೆಲಸ ಮಾಡಬೇಕು. ಪ್ರಧಾನಿ ಅಥವ ಮಂತ್ರಿ ಒಂದು ಕಾನೂನುಬಾಹಿರ ಬೇಡಿಕೆಯ ಅರ್ಜಿಗೆ ನಿಮ್ಮ ಸಮ್ಮತಿ ಸೂಚಿಸಿ ಅರ್ಜಿದಾರನ ಕೆಲಸ ಮಾಡಿಕೊಡಿ ಎಂದರೆ ಇಂತಹ ಅನ್ಯಾಯದ ಕೆಲಸ ನಾನು ಮಾಡುವುದಿಲ್ಲ ಎಂದು ಹೇಳುವ ಎದೆಗಾರಿಕೆ ಸರ್ಕಾರಿ ಅಧಿಕಾರಿಗೆ ಇರಬೇಕು. ಆದರೆ ಇಂದಿನ ಆಡಳಿತ ಹೀಗೆ ನಡೆಯುತ್ತಿಲ್ಲ. ಸರ್ಕಾರ ನಡೆಸುವವರ ರಾಜಕೀಯ ಜಗ್ಗಾಟದ ವೈಪರೀತ್ಯ ಅವ್ಯಾಹತವಾಗಿ ನಡೆಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ರಾಜ್ಯಾಂಗಕ್ಕೆ ಅಂಟಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು. ಇದನ್ನು ಉಪೇಕ್ಷ ಮಾಡಿದರೆ ಅವರು ಚುನಾಯಿತ ಸರ್ವಾಧಿಕಾರದ ಭಾಗವಾಗಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಅವರು ಅಲಿಪ್ತರಾಗಿದ್ದುಕೊಂಡು ತಮ್ಮ ಅಂತರಾತ್ಮ ಒಪ್ಪುವ ರೀತಿ ಕಾರ್ಯಪ್ರವರ್ತಕರಾಗಬೇಕು. ಉನ್ನತಮಟ್ಟದ ಅಧಿಕಾರದಲ್ಲಿರುವ ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಸರ್ಕಾರ ನಡೆಸುವವರ ಎಳೆದಾಟ, ಸೆಣಸಾಟಗಳಿಗೆ ಜಗ್ಗದೆ ಅವರಿಗಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ರಾಜ್ಯಾಂಗದ ಆಶಯಗಳನ್ನು ಕಾರ್ಯಗತಗೊಳಿಸುವ ಪವಿತ್ರ ಕೆಲಸದಲ್ಲಿ ತೊಡಗಿರೆಂದು ವಿನಂತಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...