Homeಅಂಕಣಗಳುಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ?

- Advertisement -
- Advertisement -

ಹಿಂದೆ ಎಂದೂ ಇಲ್ಲದಷ್ಟು ಅಶಾಂತಿ ಈಗ ರಾಷ್ಟ್ರವನ್ನು ಆವರಿಸಿದೆ. ಇತ್ತೀಚಿನ ಘಟನೆಗಳು ಹಾಗೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೊಂದು ರಾಜಕೀಯ ತಿಕ್ಕಾಟಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾರ್ಯಾಂಗ ಈಗ ಬಹುಮಟ್ಟಿಗೆ ಆಡಳಿತಾಂಗದ ಗುಲಾಮನಾಗುತ್ತಿದೆ. Enforcement Directorateನ್ನು ಮೋದಿ ಸರ್ಕಾರ ಕಬ್ಜಾ ಮಾಡಿಬಿಟ್ಟಿದೆ. ಮೋದಿ ಆಣತಿಯಂತೆ ಅದು ಕೆಲಸ ಮಾಡುತ್ತಿದೆ. ಸಿಬಿಐನ್ನು ಸರ್ವೋಚ್ಚ ನ್ಯಾಯಾಲಯವೇ ಒಮ್ಮೆ ‘ಪಂಜರದಗಿಣಿ’ ಎಂದು ಬಣ್ಣಿಸಿದೆ.

ಈಚೆಗೆ ಎಲ್ಲ ಸರ್ಕಾರಿ ನೌಕರರನ್ನೂ ಅವರ ಮನೆಯೊಳಗಿರುವ ಎಲ್ಲ ಪರಿವಾರದವರೂ ಯಡಿಯೂರಪ್ಪ ಸರ್ಕಾರಕ್ಕೆ ಅಧೀನರಾಗಿರಬೇಕೆಂದು ಒಂದು ಸರ್ಕ್ಯುಲರ್ ಹೊರಡಿಸಲಾಗಿದೆ. ರಾಜಕೀಯ ಸಭೆಗಳಿಗೆ ಹೋಗಕೂಡದು. ಯಾವ ರಾಜಕೀಯ ಪಕ್ಷಕ್ಕೂ ಒಲವು ತೋರಬಾರದು ಎಂದು ಈ ಫರ್ಮಾನು ಎಚ್ಚರಿಸುತ್ತದೆ. ಅಷ್ಟೇ ಅಲ್ಲ, ಅವರ ಮನೆಯವರು ರಾಜಕೀಯ ಕುರಿತು ಮಾತನಾಡಬಾರದು. ರಾಜಕೀಯ ಪಕ್ಷಗಳ ಸದಸ್ಯರಾಗಕೂಡದು, ಪ್ರಚಾರಕ್ಕೂ ಹೋಗಬಾರದು ಎಂದು ಎಚ್ಚರಿಕೆ ನೀಡಿ ಅವರ ಸ್ವಾತಂತ್ರ್ಯಹರಣ ಮಾಡುವ ರಾಜ್ಯಾಂಗವಿರೋಧಿ ನಿಲುವು ತಳೆದಿದೆ. ಸರ್ಕಾರಿ ನೌಕರರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಕೂಡದು,

PC : Mumbai Mirror

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ ಸರ್ಕಾರಕ್ಕೆ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ? ಸರ್ಕಾರಿ ನೌಕರನ ಮನೆಯ ಜನರೆಲ್ಲ ಸರ್ಕಾರಿ ಅಧಿಕಾರಿಗಳಲ್ಲ, ಅವರಿಗೆ ಕೆಲವು ಹಕ್ಕುಗಳಿವೆ. ತಮಗೆ ಸರಿತೋರಿದ ಪಕ್ಷವನ್ನು ಬೆಂಬಲಿಸುವ ಅವರು ನಡೆಸುವ ಸಭೆಸಮ್ಮೇಳನಗಳಿಗೆ ಹೋಗುವ ಅಧಿಕಾರವಿದೆ. ವಾಕ್ ಸ್ವಾತಂತ್ರ್ಯವಿದೆ, ವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಹಕ್ಕನ್ನು ಮೋದಿಗೆ, ಯಡಿಯೂರಪ್ಪನವರಿಗೆ ಕೊಟ್ಟವರು ಯಾರು?

ಅಷ್ಟೇ ಅಲ್ಲ, ಸರ್ಕಾರಿ ನೌಕರನೂ ಮೊದಲು ಭಾರತದ ಪ್ರಜೆ. ಅವನು ಸರ್ಕಾರಿ ಅಧಿಕಾರಿಯಾದೊಡನೆ ಅವನು ಎಲ್ಲ ಪ್ರಜಾ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇಂತಹದ್ದೇ ಒಂದು ಪ್ರಸಂಗ ನಡೆಯಿತು. ಎಂ.ಸಿ ಚಾಗ್ಲಾರವರು ಆಗ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ಜೆಪಿಯವರ ಒಂದು ಸಾರ್ವಜನಿಕ ಸಭೆಗೆ ಹೋಗಿದ್ದರು ಎಂದು ಇಂದಿರಾಗಾಂಧಿ ಸರ್ಕಾರ ಚಾಗ್ಲಾರವರ ಮೇಲೆ ಒಂದು ಕೇಸು ಹಾಕಿತು. ಚಾಗ್ಲಾರವರು ಕಾನೂನನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ಅರ್ಜಿ ಸಲ್ಲಿಸಲಾಯಿತು. ಚಾಗ್ಲಾರವರ ವಕೀಲರು ಅವರ ನಡಾವಳಿಯನ್ನೂ ಸಮರ್ಥಿಸುತ್ತಾ ಹೀಗೆ ವಾದ ಮಾಡಿದರು: ಚಾಗ್ಲಾರವರು ಜೆಪಿ ಅವರ ಬಹಿರಂಗ ಸಭೆಗೆ ಹೋಗಿದ್ದು ನಿಜ. ಜೆಪಿಯವರ ಭಾಷಣವನ್ನು ಚಾಗ್ಲಾರವರು ಕೇಳಿದ್ದು ಅಪರಾಧವಲ್ಲ. ಒಬ್ಬ ರಾಷ್ಟ್ರನಾಯಕ ಮಾತನಾಡಿದರೆ, ಅವರೇನು ಮಾತಾಡಿದರು ಎಂದು ತಿಳಿಯಲು ಅವರು ನಡೆಸಿಕೊಡುವ ಸಾರ್ವಜನಿಕ ಸಭೆಗೆ ಹೋಗಿ ಅದನ್ನು ಆಲಿಸುವುದು ಒಂದು ಕ್ರಮ. ಅದೇ ಭಾಷಣದ ಮುಖ್ಯ ವಿಚಾರಗಳನ್ನು ಪತ್ರಿಕೆಗಳು ಅಚ್ಚು ಮಾಡುತ್ತವೆ. ಅದನ್ನು ಓದಿ ತಿಳಿದುಕೊಳ್ಳುವುದು ಎರಡನೆಯ ಮಾರ್ಗ. ಮೂರನೆಯದೆಂದರೆ ದೃಶ್ಯಮಾಧ್ಯಮಗಳಲ್ಲಿ ಮಾಡಲಾಗುವ ಜೆಪಿ ಭಾಷಣವನ್ನು ಆಲಿಸುವುದು. ಈ ಮೂರು ರೀತಿಯಲ್ಲಿ ಭಾಷಣದ ಸಾರಾಂಶವನ್ನು ತಿಳಿಯಲು ಅವಕಾಶವಿದೆ. ಜೆಪಿ ಭಾಷಣ ಕೇಳಲು ಹೋಗದೆಯೂ ಜೆಪಿ ಏನು ಭಾಷಣ ಮಾಡಿದರು ಎಂದು ತಿಳಿಯಲು ಈ ಎರಡು ಮಾಧ್ಯಮಗಳಿವೆ. ಸರ್ಕಾರದ ನಿಲುವು ಜೆಪಿ ಭಾಷಣದ ಕೇಳಬಾರದು ಎಂಬುದಾದರೆ ಸರ್ಕಾರಿ ನೌಕರರು ಭಾಷಣ ಕೇಳಲೂ ಹೋಗಬಾರದು, ಪತ್ರಿಕೆ ಓದಲೂಬಾರದು, ದೃಶ್ಯಮಾಧ್ಯಮ ವೀಕ್ಷಿಸಲುಬಾರದು ಎಂದು ಆಜ್ಞೆಮಾಡಿ ಎಂದು ಚಾಗ್ಲಾರವರ ವಕೀಲರು ವಾದ ಮಂಡಿಸಿದರು. ಚಾಗ್ಲಾರವರ ಮೇಲೆ ಹಾಕಿದ್ದ ಕೇಸು ವಜಾ ಆಯಿತು. ಮೋದಿ ಸರ್ಕಾರ ಮತ್ತು ಯಡಿಯೂರಪ್ಪನವರ ಸರ್ಕಾರ ಸರ್ಕಾರಿ ನೌಕರರ ಮೇಲೆ ಹೇರಲು ರಚಿಸಿರುವ ಕಾನೂನನ್ನು ರದ್ದುಮಾಡಿ ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡುತ್ತೇನೆ.

ಮೋದಿ ಸರ್ಕಾರ ನೈತಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿಡಿಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಅಧಿಕಾರವನ್ನು ಅನೀತಿಯಿಂದ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನೂ ಪಡೆಯದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಕಿತ್ತುಹಾಕಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆ.

ಆಡಳಿತ ಕುಸಿದು ಬಿದ್ದಿರುವುದಕ್ಕೆ ಹತ್ತಾರು ಉದಾಹರಣೆಗಳನ್ನ ಕೊಡಬಹುದು. ಹೆಣ್ಣುಮಕ್ಕಳು, ಸಣ್ಣಮಕ್ಕಳು, ದಲಿತರು, ಮುಸ್ಲಿಮರು ಇವರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶ ಮತ್ತು ಮಂಗಳೂರಿನಲ್ಲಿ ದಿನನಿತ್ಯ ನಡೆಯುತ್ತಿವೆ. ಅಪೌಷ್ಠಿಕತೆಯಿಂದ, ಹಸಿವಿನಿಂದ ಸಾಯುವ ಗರ್ಭಿಣಿಯರು, ಸಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಮೋದಿಯವರು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವಿದೇಶ ಪ್ರವಾಸಗಳಿಗೆ ಬಳಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಮೋದಿಯವರ ಸರ್ಕಾರ ಕೋಟಿ ಕೋಟಿ ರೂ ಪಾಯಿಗಳನ್ನು ತಮ್ಮ ಪ್ರಜಾರಕ್ಕೋಸ್ಕರ ಸುರಿದಿದೆ. ದೃಶ್ಯಮಾಧ್ಯಮಗಳು ತಮ್ಮ ಪ್ರಜಾಪ್ರಭುತ್ವದ ಕಾವಲುಗಾರನಂತೆ ವರ್ತಿಸುವುದು ಬಿಟ್ಟು ಸಾಕುನಾಯಿಗಳಾಗಿ ಪರಿವರ್ತನೆಗೊಂಡಿವೆ. ಮಾಧ್ಯಮಗಳು ರಾಜಕೀಯದಲ್ಲಿ ತೊಡಗಿಕೊಂಡು ಮೋದಿಯವರ ಹಿಂಬಾಲಕರಂತೆ ವರ್ತಿಸುತ್ತಿವೆ.

PC : The Asian Age

ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಲಕ್ಷಾಂತರ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಅವರನ್ನು ಹೊರಗೆಡಹಲಾದರೂ, ಅಂತಹ ಅಧಿಕಾರಿಗಳಿಗೆ ಸರ್ಕಾರ ಕೊಡುವ ಶಿಕ್ಷೆ, ವರ್ಗಾವಣೆ, ಸಸ್ಪೆನ್‍ಷನ್ ಮಾತ್ರ. ಆಡಳಿತ ಕುಸಿದು ಬಿದ್ದರೂ ಅದನ್ನು ಸದೃಢಗೊಳಿಸಲು ಯಾವ ಕಠಿಣ ಕ್ರಮಕೈಗೊಳ್ಳದೆ, ನೆಪಮಾತ್ರಕ್ಕೆ ಒಂದು ವಿಚಾರಣಾ ಸಮಿತಿ ರಚಿಸಿ ಸುಮ್ಮನಾಗುವುದು ಇಂದಿನ ಸರ್ಕಾರದ ನೀತಿಯಾಗಿದೆ. ಹಿಂಸಾಚಾರ, ಅನ್ಯಾಯ ಮತ್ತು ಆಡಳಿತ ವೈಫಲ್ಯಗಳು ಒಂದಾದಮೇಲೆ ಒಂದು ನಡೆಯುತ್ತಿದ್ದರೂ ವೈಫಲ್ಯಕ್ಕೆ ಮೂಲಕಾರಣ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ. ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಕಾಯಂ ಆಗಿ ಇರುವ ಅಧಿಕಾರಿಗಳು ಹೆದರಿ, ಕಾನೂನು ರೀತ್ಯಾ ಕೆಲಸ ಮಾಡುವುದನ್ನು ಕೈಬಿಟ್ಟು, ಆಳುವ ಜನರ ಆಜ್ಞಾಧಾರಕರಂತೆ ವರ್ತಿಸುವ ಅಧಿಕಾರಿಗಳಿಂದ ನ್ಯಾಯ ದೊರಕುವುದಾದರೂ ಸಂಭವನೀಯವೇ?

ಅಧಿಕಾರಿ ಕಾನೂನುರೀತ್ಯಾ ಕೆಲಸ ಮಾಡಬೇಕು. ಪ್ರಧಾನಿ ಅಥವ ಮಂತ್ರಿ ಒಂದು ಕಾನೂನುಬಾಹಿರ ಬೇಡಿಕೆಯ ಅರ್ಜಿಗೆ ನಿಮ್ಮ ಸಮ್ಮತಿ ಸೂಚಿಸಿ ಅರ್ಜಿದಾರನ ಕೆಲಸ ಮಾಡಿಕೊಡಿ ಎಂದರೆ ಇಂತಹ ಅನ್ಯಾಯದ ಕೆಲಸ ನಾನು ಮಾಡುವುದಿಲ್ಲ ಎಂದು ಹೇಳುವ ಎದೆಗಾರಿಕೆ ಸರ್ಕಾರಿ ಅಧಿಕಾರಿಗೆ ಇರಬೇಕು. ಆದರೆ ಇಂದಿನ ಆಡಳಿತ ಹೀಗೆ ನಡೆಯುತ್ತಿಲ್ಲ. ಸರ್ಕಾರ ನಡೆಸುವವರ ರಾಜಕೀಯ ಜಗ್ಗಾಟದ ವೈಪರೀತ್ಯ ಅವ್ಯಾಹತವಾಗಿ ನಡೆಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ರಾಜ್ಯಾಂಗಕ್ಕೆ ಅಂಟಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು. ಇದನ್ನು ಉಪೇಕ್ಷ ಮಾಡಿದರೆ ಅವರು ಚುನಾಯಿತ ಸರ್ವಾಧಿಕಾರದ ಭಾಗವಾಗಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಅವರು ಅಲಿಪ್ತರಾಗಿದ್ದುಕೊಂಡು ತಮ್ಮ ಅಂತರಾತ್ಮ ಒಪ್ಪುವ ರೀತಿ ಕಾರ್ಯಪ್ರವರ್ತಕರಾಗಬೇಕು. ಉನ್ನತಮಟ್ಟದ ಅಧಿಕಾರದಲ್ಲಿರುವ ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಸರ್ಕಾರ ನಡೆಸುವವರ ಎಳೆದಾಟ, ಸೆಣಸಾಟಗಳಿಗೆ ಜಗ್ಗದೆ ಅವರಿಗಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ರಾಜ್ಯಾಂಗದ ಆಶಯಗಳನ್ನು ಕಾರ್ಯಗತಗೊಳಿಸುವ ಪವಿತ್ರ ಕೆಲಸದಲ್ಲಿ ತೊಡಗಿರೆಂದು ವಿನಂತಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....