Homeಅಂಕಣಗಳುಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ?

- Advertisement -
- Advertisement -

ಹಿಂದೆ ಎಂದೂ ಇಲ್ಲದಷ್ಟು ಅಶಾಂತಿ ಈಗ ರಾಷ್ಟ್ರವನ್ನು ಆವರಿಸಿದೆ. ಇತ್ತೀಚಿನ ಘಟನೆಗಳು ಹಾಗೂ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದಿನಕ್ಕೊಂದು ರಾಜಕೀಯ ತಿಕ್ಕಾಟಗಳು ಹುಟ್ಟಿಕೊಳ್ಳುತ್ತಲೇ ಇವೆ. ಕಾರ್ಯಾಂಗ ಈಗ ಬಹುಮಟ್ಟಿಗೆ ಆಡಳಿತಾಂಗದ ಗುಲಾಮನಾಗುತ್ತಿದೆ. Enforcement Directorateನ್ನು ಮೋದಿ ಸರ್ಕಾರ ಕಬ್ಜಾ ಮಾಡಿಬಿಟ್ಟಿದೆ. ಮೋದಿ ಆಣತಿಯಂತೆ ಅದು ಕೆಲಸ ಮಾಡುತ್ತಿದೆ. ಸಿಬಿಐನ್ನು ಸರ್ವೋಚ್ಚ ನ್ಯಾಯಾಲಯವೇ ಒಮ್ಮೆ ‘ಪಂಜರದಗಿಣಿ’ ಎಂದು ಬಣ್ಣಿಸಿದೆ.

ಈಚೆಗೆ ಎಲ್ಲ ಸರ್ಕಾರಿ ನೌಕರರನ್ನೂ ಅವರ ಮನೆಯೊಳಗಿರುವ ಎಲ್ಲ ಪರಿವಾರದವರೂ ಯಡಿಯೂರಪ್ಪ ಸರ್ಕಾರಕ್ಕೆ ಅಧೀನರಾಗಿರಬೇಕೆಂದು ಒಂದು ಸರ್ಕ್ಯುಲರ್ ಹೊರಡಿಸಲಾಗಿದೆ. ರಾಜಕೀಯ ಸಭೆಗಳಿಗೆ ಹೋಗಕೂಡದು. ಯಾವ ರಾಜಕೀಯ ಪಕ್ಷಕ್ಕೂ ಒಲವು ತೋರಬಾರದು ಎಂದು ಈ ಫರ್ಮಾನು ಎಚ್ಚರಿಸುತ್ತದೆ. ಅಷ್ಟೇ ಅಲ್ಲ, ಅವರ ಮನೆಯವರು ರಾಜಕೀಯ ಕುರಿತು ಮಾತನಾಡಬಾರದು. ರಾಜಕೀಯ ಪಕ್ಷಗಳ ಸದಸ್ಯರಾಗಕೂಡದು, ಪ್ರಚಾರಕ್ಕೂ ಹೋಗಬಾರದು ಎಂದು ಎಚ್ಚರಿಕೆ ನೀಡಿ ಅವರ ಸ್ವಾತಂತ್ರ್ಯಹರಣ ಮಾಡುವ ರಾಜ್ಯಾಂಗವಿರೋಧಿ ನಿಲುವು ತಳೆದಿದೆ. ಸರ್ಕಾರಿ ನೌಕರರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಕೂಡದು,

PC : Mumbai Mirror

ಯಾವ ಪಕ್ಷಕ್ಕೂ ಅವರು ಸದಸ್ಯರಾಗಕೂಡದು ಎಂಬುದು ಸರಿ. ಆದರೆ ಅವರ ಮನೆಯವರ ಮೇಲೆಲ್ಲ ರಾಜ್ಯಾಂಗವಿರೋಧಿ ಕಾನೂನನ್ನು ಹೇರಲು ಮೋದಿ ಸರ್ಕಾರಕ್ಕೆ, ಯಡಿಯೂರಪ್ಪನವರ ಸರ್ಕಾರಕ್ಕೆ ಯಾವ ಹಕ್ಕಿದೆ? ಸರ್ಕಾರಿ ನೌಕರನ ಮನೆಯ ಜನರೆಲ್ಲ ಸರ್ಕಾರಿ ಅಧಿಕಾರಿಗಳಲ್ಲ, ಅವರಿಗೆ ಕೆಲವು ಹಕ್ಕುಗಳಿವೆ. ತಮಗೆ ಸರಿತೋರಿದ ಪಕ್ಷವನ್ನು ಬೆಂಬಲಿಸುವ ಅವರು ನಡೆಸುವ ಸಭೆಸಮ್ಮೇಳನಗಳಿಗೆ ಹೋಗುವ ಅಧಿಕಾರವಿದೆ. ವಾಕ್ ಸ್ವಾತಂತ್ರ್ಯವಿದೆ, ವ್ಯಕ್ತಿ ಸ್ವಾತಂತ್ರ್ಯವಿದೆ. ಈ ಎಲ್ಲ ಹಕ್ಕುಗಳನ್ನು ಮೊಟಕುಗೊಳಿಸುವ ಹಕ್ಕನ್ನು ಮೋದಿಗೆ, ಯಡಿಯೂರಪ್ಪನವರಿಗೆ ಕೊಟ್ಟವರು ಯಾರು?

ಅಷ್ಟೇ ಅಲ್ಲ, ಸರ್ಕಾರಿ ನೌಕರನೂ ಮೊದಲು ಭಾರತದ ಪ್ರಜೆ. ಅವನು ಸರ್ಕಾರಿ ಅಧಿಕಾರಿಯಾದೊಡನೆ ಅವನು ಎಲ್ಲ ಪ್ರಜಾ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇಂತಹದ್ದೇ ಒಂದು ಪ್ರಸಂಗ ನಡೆಯಿತು. ಎಂ.ಸಿ ಚಾಗ್ಲಾರವರು ಆಗ ಮಹಾರಾಷ್ಟ್ರ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿದ್ದರು. ಅವರು ಜೆಪಿಯವರ ಒಂದು ಸಾರ್ವಜನಿಕ ಸಭೆಗೆ ಹೋಗಿದ್ದರು ಎಂದು ಇಂದಿರಾಗಾಂಧಿ ಸರ್ಕಾರ ಚಾಗ್ಲಾರವರ ಮೇಲೆ ಒಂದು ಕೇಸು ಹಾಕಿತು. ಚಾಗ್ಲಾರವರು ಕಾನೂನನ್ನು ಧಿಕ್ಕರಿಸಿ ನಡೆದುಕೊಂಡಿದ್ದಾರೆ. ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿ ಅರ್ಜಿ ಸಲ್ಲಿಸಲಾಯಿತು. ಚಾಗ್ಲಾರವರ ವಕೀಲರು ಅವರ ನಡಾವಳಿಯನ್ನೂ ಸಮರ್ಥಿಸುತ್ತಾ ಹೀಗೆ ವಾದ ಮಾಡಿದರು: ಚಾಗ್ಲಾರವರು ಜೆಪಿ ಅವರ ಬಹಿರಂಗ ಸಭೆಗೆ ಹೋಗಿದ್ದು ನಿಜ. ಜೆಪಿಯವರ ಭಾಷಣವನ್ನು ಚಾಗ್ಲಾರವರು ಕೇಳಿದ್ದು ಅಪರಾಧವಲ್ಲ. ಒಬ್ಬ ರಾಷ್ಟ್ರನಾಯಕ ಮಾತನಾಡಿದರೆ, ಅವರೇನು ಮಾತಾಡಿದರು ಎಂದು ತಿಳಿಯಲು ಅವರು ನಡೆಸಿಕೊಡುವ ಸಾರ್ವಜನಿಕ ಸಭೆಗೆ ಹೋಗಿ ಅದನ್ನು ಆಲಿಸುವುದು ಒಂದು ಕ್ರಮ. ಅದೇ ಭಾಷಣದ ಮುಖ್ಯ ವಿಚಾರಗಳನ್ನು ಪತ್ರಿಕೆಗಳು ಅಚ್ಚು ಮಾಡುತ್ತವೆ. ಅದನ್ನು ಓದಿ ತಿಳಿದುಕೊಳ್ಳುವುದು ಎರಡನೆಯ ಮಾರ್ಗ. ಮೂರನೆಯದೆಂದರೆ ದೃಶ್ಯಮಾಧ್ಯಮಗಳಲ್ಲಿ ಮಾಡಲಾಗುವ ಜೆಪಿ ಭಾಷಣವನ್ನು ಆಲಿಸುವುದು. ಈ ಮೂರು ರೀತಿಯಲ್ಲಿ ಭಾಷಣದ ಸಾರಾಂಶವನ್ನು ತಿಳಿಯಲು ಅವಕಾಶವಿದೆ. ಜೆಪಿ ಭಾಷಣ ಕೇಳಲು ಹೋಗದೆಯೂ ಜೆಪಿ ಏನು ಭಾಷಣ ಮಾಡಿದರು ಎಂದು ತಿಳಿಯಲು ಈ ಎರಡು ಮಾಧ್ಯಮಗಳಿವೆ. ಸರ್ಕಾರದ ನಿಲುವು ಜೆಪಿ ಭಾಷಣದ ಕೇಳಬಾರದು ಎಂಬುದಾದರೆ ಸರ್ಕಾರಿ ನೌಕರರು ಭಾಷಣ ಕೇಳಲೂ ಹೋಗಬಾರದು, ಪತ್ರಿಕೆ ಓದಲೂಬಾರದು, ದೃಶ್ಯಮಾಧ್ಯಮ ವೀಕ್ಷಿಸಲುಬಾರದು ಎಂದು ಆಜ್ಞೆಮಾಡಿ ಎಂದು ಚಾಗ್ಲಾರವರ ವಕೀಲರು ವಾದ ಮಂಡಿಸಿದರು. ಚಾಗ್ಲಾರವರ ಮೇಲೆ ಹಾಕಿದ್ದ ಕೇಸು ವಜಾ ಆಯಿತು. ಮೋದಿ ಸರ್ಕಾರ ಮತ್ತು ಯಡಿಯೂರಪ್ಪನವರ ಸರ್ಕಾರ ಸರ್ಕಾರಿ ನೌಕರರ ಮೇಲೆ ಹೇರಲು ರಚಿಸಿರುವ ಕಾನೂನನ್ನು ರದ್ದುಮಾಡಿ ಎಂದು ಆಗ್ರಹಪೂರ್ವಕವಾಗಿ ಒತ್ತಾಯ ಮಾಡುತ್ತೇನೆ.

ಮೋದಿ ಸರ್ಕಾರ ನೈತಿಕತೆಗೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬಿಡಿಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕಾಶ್ಮೀರಕ್ಕೆ ಇದ್ದ 370ನೇ ವಿಧಿಯ ವಿಶೇಷ ಅಧಿಕಾರವನ್ನು ಅನೀತಿಯಿಂದ ಕಾಶ್ಮೀರ ಪ್ರಜೆಗಳ ಅಭಿಪ್ರಾಯವನ್ನೂ ಪಡೆಯದೆ ಪಾರ್ಲಿಮೆಂಟಿನಲ್ಲಿ ಚರ್ಚೆಗೂ ಅವಕಾಶ ನೀಡದೆ ಕಿತ್ತುಹಾಕಿರುವುದು ಇದಕ್ಕೆ ಒಂದು ಜ್ವಲಂತ ಉದಾಹರಣೆ.

ಆಡಳಿತ ಕುಸಿದು ಬಿದ್ದಿರುವುದಕ್ಕೆ ಹತ್ತಾರು ಉದಾಹರಣೆಗಳನ್ನ ಕೊಡಬಹುದು. ಹೆಣ್ಣುಮಕ್ಕಳು, ಸಣ್ಣಮಕ್ಕಳು, ದಲಿತರು, ಮುಸ್ಲಿಮರು ಇವರ ಮೇಲೆ ನೂರಾರು ದೌರ್ಜನ್ಯ ಪ್ರಕರಣಗಳು ದೇಶದಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರಪ್ರದೇಶ ಮತ್ತು ಮಂಗಳೂರಿನಲ್ಲಿ ದಿನನಿತ್ಯ ನಡೆಯುತ್ತಿವೆ. ಅಪೌಷ್ಠಿಕತೆಯಿಂದ, ಹಸಿವಿನಿಂದ ಸಾಯುವ ಗರ್ಭಿಣಿಯರು, ಸಣ್ಣಮಕ್ಕಳು ಲೆಕ್ಕವಿಲ್ಲದಷ್ಟು. ಮೋದಿಯವರು ಕೋಟ್ಯಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವಿದೇಶ ಪ್ರವಾಸಗಳಿಗೆ ಬಳಸಿಕೊಂಡಿದ್ದಾರೆ. ಪತ್ರಿಕೆಗಳಿಗೆ ಮೋದಿಯವರ ಸರ್ಕಾರ ಕೋಟಿ ಕೋಟಿ ರೂ ಪಾಯಿಗಳನ್ನು ತಮ್ಮ ಪ್ರಜಾರಕ್ಕೋಸ್ಕರ ಸುರಿದಿದೆ. ದೃಶ್ಯಮಾಧ್ಯಮಗಳು ತಮ್ಮ ಪ್ರಜಾಪ್ರಭುತ್ವದ ಕಾವಲುಗಾರನಂತೆ ವರ್ತಿಸುವುದು ಬಿಟ್ಟು ಸಾಕುನಾಯಿಗಳಾಗಿ ಪರಿವರ್ತನೆಗೊಂಡಿವೆ. ಮಾಧ್ಯಮಗಳು ರಾಜಕೀಯದಲ್ಲಿ ತೊಡಗಿಕೊಂಡು ಮೋದಿಯವರ ಹಿಂಬಾಲಕರಂತೆ ವರ್ತಿಸುತ್ತಿವೆ.

PC : The Asian Age

ಭ್ರಷ್ಟ ಅಧಿಕಾರಿಗಳು ಲಂಚದ ರೂಪದಲ್ಲಿ ಲಕ್ಷಾಂತರ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರೆ, ಅವರನ್ನು ಹೊರಗೆಡಹಲಾದರೂ, ಅಂತಹ ಅಧಿಕಾರಿಗಳಿಗೆ ಸರ್ಕಾರ ಕೊಡುವ ಶಿಕ್ಷೆ, ವರ್ಗಾವಣೆ, ಸಸ್ಪೆನ್‍ಷನ್ ಮಾತ್ರ. ಆಡಳಿತ ಕುಸಿದು ಬಿದ್ದರೂ ಅದನ್ನು ಸದೃಢಗೊಳಿಸಲು ಯಾವ ಕಠಿಣ ಕ್ರಮಕೈಗೊಳ್ಳದೆ, ನೆಪಮಾತ್ರಕ್ಕೆ ಒಂದು ವಿಚಾರಣಾ ಸಮಿತಿ ರಚಿಸಿ ಸುಮ್ಮನಾಗುವುದು ಇಂದಿನ ಸರ್ಕಾರದ ನೀತಿಯಾಗಿದೆ. ಹಿಂಸಾಚಾರ, ಅನ್ಯಾಯ ಮತ್ತು ಆಡಳಿತ ವೈಫಲ್ಯಗಳು ಒಂದಾದಮೇಲೆ ಒಂದು ನಡೆಯುತ್ತಿದ್ದರೂ ವೈಫಲ್ಯಕ್ಕೆ ಮೂಲಕಾರಣ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲು ಸರ್ಕಾರ ತಯಾರಿಲ್ಲ. ಐದು ವರ್ಷಕ್ಕೊಮ್ಮೆ ಬದಲಾಗುವ ಸರ್ಕಾರಕ್ಕೆ ಕಾಯಂ ಆಗಿ ಇರುವ ಅಧಿಕಾರಿಗಳು ಹೆದರಿ, ಕಾನೂನು ರೀತ್ಯಾ ಕೆಲಸ ಮಾಡುವುದನ್ನು ಕೈಬಿಟ್ಟು, ಆಳುವ ಜನರ ಆಜ್ಞಾಧಾರಕರಂತೆ ವರ್ತಿಸುವ ಅಧಿಕಾರಿಗಳಿಂದ ನ್ಯಾಯ ದೊರಕುವುದಾದರೂ ಸಂಭವನೀಯವೇ?

ಅಧಿಕಾರಿ ಕಾನೂನುರೀತ್ಯಾ ಕೆಲಸ ಮಾಡಬೇಕು. ಪ್ರಧಾನಿ ಅಥವ ಮಂತ್ರಿ ಒಂದು ಕಾನೂನುಬಾಹಿರ ಬೇಡಿಕೆಯ ಅರ್ಜಿಗೆ ನಿಮ್ಮ ಸಮ್ಮತಿ ಸೂಚಿಸಿ ಅರ್ಜಿದಾರನ ಕೆಲಸ ಮಾಡಿಕೊಡಿ ಎಂದರೆ ಇಂತಹ ಅನ್ಯಾಯದ ಕೆಲಸ ನಾನು ಮಾಡುವುದಿಲ್ಲ ಎಂದು ಹೇಳುವ ಎದೆಗಾರಿಕೆ ಸರ್ಕಾರಿ ಅಧಿಕಾರಿಗೆ ಇರಬೇಕು. ಆದರೆ ಇಂದಿನ ಆಡಳಿತ ಹೀಗೆ ನಡೆಯುತ್ತಿಲ್ಲ. ಸರ್ಕಾರ ನಡೆಸುವವರ ರಾಜಕೀಯ ಜಗ್ಗಾಟದ ವೈಪರೀತ್ಯ ಅವ್ಯಾಹತವಾಗಿ ನಡೆಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ರಾಜ್ಯಾಂಗಕ್ಕೆ ಅಂಟಿಕೊಳ್ಳುವ ತೀರ್ಮಾನ ಕೈಗೊಳ್ಳಬೇಕು. ಇದನ್ನು ಉಪೇಕ್ಷ ಮಾಡಿದರೆ ಅವರು ಚುನಾಯಿತ ಸರ್ವಾಧಿಕಾರದ ಭಾಗವಾಗಿಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಅವರು ಅಲಿಪ್ತರಾಗಿದ್ದುಕೊಂಡು ತಮ್ಮ ಅಂತರಾತ್ಮ ಒಪ್ಪುವ ರೀತಿ ಕಾರ್ಯಪ್ರವರ್ತಕರಾಗಬೇಕು. ಉನ್ನತಮಟ್ಟದ ಅಧಿಕಾರದಲ್ಲಿರುವ ಸರ್ಕಾರಿ ಅಧಿಕಾರಿಗಳು ಮುಖ್ಯವಾಗಿ ಸರ್ಕಾರ ನಡೆಸುವವರ ಎಳೆದಾಟ, ಸೆಣಸಾಟಗಳಿಗೆ ಜಗ್ಗದೆ ಅವರಿಗಿರುವ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ರಾಜ್ಯಾಂಗದ ಆಶಯಗಳನ್ನು ಕಾರ್ಯಗತಗೊಳಿಸುವ ಪವಿತ್ರ ಕೆಲಸದಲ್ಲಿ ತೊಡಗಿರೆಂದು ವಿನಂತಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಅಮಿತ್ ಶಾ ಪಣ: ಹಗಲುಗನಸು ಎಂದ ಟಿಎಂಸಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...