Homeಮುಖಪುಟಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

ಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

- Advertisement -
- Advertisement -

ತಜ್ಞರ ತಂಡವೊಂದು ಲಭ್ಯವಿರುವ ಸಂಶೋಧನೆಗಳನ್ನು ಪರಿಷ್ಕರಣೆ ಮಾಡಿ, SARS-CoV-2 ನ ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (airborne) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಮೌಲ್ಯಮಾಪನವನ್ನು ಪ್ರಕಟಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕಳೆದ ವರ್ಷದಿಂದ, ಕೊರೊನಾ ವೈರಸ್ SARS-CoV-2 ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಹಿಡಿದವು. ವಿಶ್ವ ಆರೋಗ್ಯ ಸಂಸ್ಥೆಯಿಂದ ಧನಸಹಾಯ ಪಡೆದಿರುವ ಇತರ ಅಧ್ಯಯನಗಳು ಸಹ ನಡೆದಿವೆ, ಅವುಗಳು ಸಾಕ್ಷ್ಯ, ಆಧಾರಗಳನ್ನು ಅನಿರ್ದಿಷ್ಟವೆಂದು ಹೇಳಿದ್ದವು.

ಈಗ, ತಜ್ಞರ ಒಂದು ತಂಡವು ಲಭ್ಯವಿರುವ ಸಂಶೋಧನೆಗಳನ್ನು ಪರೀಕ್ಷಿಸಿ ಅದರ ಮೌಲ್ಯಮಾಪನವನ್ನು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಿದೆ: SARS-CoV-2 ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (ಗಾಳಿಯ ಮೂಲಕ) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಅದು ಪ್ರತಿಪಾದಿಸಿದೆ.

ತಜ್ಞರು ಈ ತೀರ್ಮಾನಕ್ಕೆ ಹೇಗೆ ಬಂದರು?

ಅಸ್ತಿತ್ವದಲ್ಲಿರುವ ಸಂಶೋಧನೆಗಳನ್ನು ಪರಿಶೀಲಿಸಿರುವ ಯುಕೆ, ಯುಎಸ್ ಮತ್ತು ಕೆನಡಾದ ಆರು ತಜ್ಞರು SARS-CoV-2 ಕೊರೊನಾ ಪ್ರಾಥಮಿಕವಾಗಿ ವಾಯುಗಾಮಿ ಮಾರ್ಗದ ಮೂಲಕ ಹರಡುತ್ತದೆ ಎಂಬ ಪ್ರಮೇಯವನ್ನು ಒಟ್ಟಾಗಿ ಬೆಂಬಲಿಸುವ 10 ಪುರಾವೆಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ

1. ಸೂಪರ್-ಸ್ಪ್ರೆಡರ್ ಘಟನೆಗಳು ಗಣನೀಯ SARS-CoV-2 ಪ್ರಸರಣಕ್ಕೆ ಕಾರಣವಾಗಿವೆ. ವಾಸ್ತವವಾಗಿ, ಅಂತಹ ಘಟನೆಗಳು ಸಾಂಕ್ರಾಮಿಕ ರೋಗದ ಪ್ರಾಥಮಿಕ ಚಾಲಕರಾಗಿರಬಹುದು. ಸಂಗೀತ ಕಚೇರಿಗಳು, ಕ್ರೂಸ್ ಹಡಗುಗಳು ಇತ್ಯಾದಿಗಳಲ್ಲಿನ ಮಾನವ ನಡವಳಿಕೆಗಳು ಮತ್ತು ಇತರ ಅಸ್ಥಿರಗಳ ವಿವರವಾದ ವಿಶ್ಲೇಷಣೆಗಳು “SARS-CoV-2 ವಾಯುಗಾಮಿ ಹರಡುವಿಕೆಗೆ ಅನುಗುಣವಾಗಿರುತ್ತವೆ, ಅದನ್ನು ಹನಿಗಳು ಅಥವಾ ಫೋಮೈಟ್‌ಗಳಿಂದ ಸಮರ್ಪಕವಾಗಿ ವಿವರಿಸಲಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.

2. ಅಕ್ಕಪಕ್ಕದ ಕೋಣೆಗಳಲ್ಲಿನ ಜನರ ನಡುವೆ SARS-CoV-2 ನ ದೀರ್ಘ-ವ್ಯಾಪ್ತಿಯ ಪ್ರಸರಣವನ್ನು ಕ್ವಾರಂಟೈನ್ ಹೋಟೆಲ್‌ಗಳಲ್ಲಿ ದಾಖಲಿಸಲಾಗಿದೆ. ಆದರೆ ಅವರು ಎಂದಿಗೂ ಪರಸ್ಪರ ಭೇಟಿ ಆಗಿರಲಿಲ್ಲ.

3. ರೋಗ ಲಕ್ಷಣ ಇರದ ಅಥವಾ ಇರುವ ಕೊರೊನಾ ಪೀಡಿತರ ಕೆಮ್ಮು ಅಥವಾ ಸೀನದೇ ಇರುವಾಗಲೂ ಸಂಭವಿಸುವ ಹರಡುವಿಕೆಯು ಜಾಗತಿಕವಾಗಿ ಎಲ್ಲಾ ಪ್ರಸರಣಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು, ಮತ್ತು ಬಹುಶಃ 59% ವರೆಗೆ ಕಾರಣವಾಗಬಹುದು. ಇದು ಕೂಡ ಗಾಳಿಯ ಮೂಲಕ ಪ್ರಸರಣದ ಸಾಧ್ಯತೆಯನ್ನು ತೋರಿಸುತ್ತದೆಯೇ ಹೊರು ಡ್ರಾಪಲೆಟ್‌ಗಳ ಮೂಲಕ ಅಲ್ಲ.

4. ಕೊರೊನಾ ಪ್ರಸಾರವು ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ಹೆಚ್ಚಾಗಿದೆ. ಆದರೆ ಒಳಾಂಗಣ ವಾತಾಯನದಿಂದ (ವೆಂಟಿಲೇಷನ್) ಗಣನೀಯವಾಗಿ ಕಡಿಮೆಯಾಗುತ್ತದೆ. ಎರಡೂ ಅವಲೋಕನಗಳು ಪ್ರಧಾನವಾಗಿ ವಾಯುಗಾಮಿ ಪ್ರಸರಣ ಮಾರ್ಗವನ್ನು ಬೆಂಬಲಿಸುತ್ತವೆ ಎಂದು ಲೇಖಕರು ಬರೆದಿದ್ದಾರೆ.

5. ಆರೋಗ್ಯ ಸಂಸ್ಥೆಗಳಲ್ಲಿ ಹೊಸ ಸೋಂಕುಗಳನ್ನು ದಾಖಲಿಸಲಾಗಿದೆ, ಅಲ್ಲಿ ಕಟ್ಟುನಿಟ್ಟಾದ ಸಂಪರ್ಕ ಮತ್ತು ಡ್ರಾಪ್‌ಲೆಟ್ ಮುನ್ನೆಚ್ಚರಿಕೆಗಳ ಜಾರಿ ಮತ್ತು ಪಿಪಿಇ ಬಳಕೆಯನ್ನು ಹನಿಗಳಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಏರೋಸಾಲ್ (ಗಾಳಿ ಪ್ರಸರಣದ) ವ್ಯವಸ್ಥೆ ಇಲ್ಲ.

6. ಸಕ್ರಿಯ ಕೊರೊನಾ ಗಾಳಿಯಲ್ಲಿ ಪತ್ತೆಯಾಗಿದೆ. ಪ್ರಯೋಗಾಲಯದ ಪ್ರಯೋಗಗಳಲ್ಲಿ, ಕೊರೊನಾ 3 ಗಂಟೆಗಳವರೆಗೆ ಗಾಳಿಯಲ್ಲಿ ಸಾಂಕ್ರಾಮಿಕವಾಗಿ ಉಳಿಯಿತು.

7. ಕೋವಿಡ್ -19 ರೋಗಿಗಳಿರುವ ಆಸ್ಪತ್ರೆಗಳಲ್ಲಿ ಏರ್ ಫಿಲ್ಟರ್‌ಗಳು ಮತ್ತು ಕಟ್ಟಡದ ನಾಳಗಳಲ್ಲಿ ಕೊರೋನಾ ಅನ್ನು ಗುರುತಿಸಲಾಗಿದೆ; ಅಂತಹ ಸ್ಥಳಗಳನ್ನು ಏರೋಸಾಲ್ ಅಂದರೆ ಗಾಳಿಯಿಂದ ಮಾತ್ರ ತಲುಪಬಹುದು.

8. ಒಂದು ಪಂಜರದಲ್ಲಿ ಸೋಂಕುಯುಕ್ತ ಪ್ರಾಣಿಗಳು ಮತ್ತು ಇನ್ನೊಂದರಲ್ಲಿ ಸೋಂಕುರಹಿತ ಪ್ರಾಣಿಗಳನ್ನು ಇರಿಸಿ ಎರಡರ ನಡುವೆ ನಾಳದ ಮೂಲಕ ಗಾಳಿ ಸಂಪರ್ಕ ಏರ್ಪಡಿಸಿದಾಗ ಸೋಂಕು ಪ್ರಸಾರವಾಗಿದ್ದನ್ನು ಹಲವು ಅಧ್ಯನಗಳು ತೋರಿಸಿವೆ.

9. ವಾಯುಗಾಮಿ ಪ್ರಸರಣದ ಊಹೆಯನ್ನು ನಿರಾಕರಿಸಲು “ನಮ್ಮ ಜ್ಞಾನಕ್ಕೆ” ಯಾವುದೇ ಅಧ್ಯಯನವು ಬಲವಾದ ಅಥವಾ ಸ್ಥಿರವಾದ ಪುರಾವೆಗಳನ್ನು ಒದಗಿಸಿಲ್ಲ. ಸೋಂಕಿತ ಜನರೊಂದಿಗೆ ಗಾಳಿಯನ್ನು ಹಂಚಿಕೊಂಡಾಗ ಕೆಲವರು ಸೋಂಕನ್ನು ಪಡೆದಿಲ್ಲ, ಆದರೆ ಸಾಂಕ್ರಾಮಿಕ ವ್ಯಕ್ತಿಗಳ ನಡುವಿನ ವೈರಲ್ ಹರಡುವಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಮತ್ತು ವಿವಿಧ ಪರಿಸರ ಪರಿಸ್ಥಿತಿಗಳು ಸೇರಿದಂತೆ ಹಲವು ಅಂಶಗಳ ಸಂಯೋಜನೆಯಿಂದ ಈ ಪರಿಸ್ಥಿತಿಯನ್ನು ವಿವರಿಸಬಹುದು.

10. ಪ್ರಸರಣದ ಇತರ ಪ್ರಬಲ ಮಾರ್ಗಗಳನ್ನು ಬೆಂಬಲಿಸಲು ಸೀಮಿತ ಪುರಾವೆಗಳಿವೆ. ಅಂದರೆ, ಉಸಿರಾಟದ ಹನಿ ಅಥವಾ ಫೋಮೈಟ್ ಪ್ರಸರಣ ಬೆಂಬಲಿಸಲು ಸಿಮೀತ ಆಧಾರಗಳಿವೆ.


ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...