Homeಮುಖಪುಟಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

ಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

- Advertisement -
- Advertisement -

ತಜ್ಞರ ತಂಡವೊಂದು ಲಭ್ಯವಿರುವ ಸಂಶೋಧನೆಗಳನ್ನು ಪರಿಷ್ಕರಣೆ ಮಾಡಿ, SARS-CoV-2 ನ ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (airborne) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಮೌಲ್ಯಮಾಪನವನ್ನು ಪ್ರಕಟಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕಳೆದ ವರ್ಷದಿಂದ, ಕೊರೊನಾ ವೈರಸ್ SARS-CoV-2 ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಹಿಡಿದವು. ವಿಶ್ವ ಆರೋಗ್ಯ ಸಂಸ್ಥೆಯಿಂದ ಧನಸಹಾಯ ಪಡೆದಿರುವ ಇತರ ಅಧ್ಯಯನಗಳು ಸಹ ನಡೆದಿವೆ, ಅವುಗಳು ಸಾಕ್ಷ್ಯ, ಆಧಾರಗಳನ್ನು ಅನಿರ್ದಿಷ್ಟವೆಂದು ಹೇಳಿದ್ದವು.

ಈಗ, ತಜ್ಞರ ಒಂದು ತಂಡವು ಲಭ್ಯವಿರುವ ಸಂಶೋಧನೆಗಳನ್ನು ಪರೀಕ್ಷಿಸಿ ಅದರ ಮೌಲ್ಯಮಾಪನವನ್ನು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಿದೆ: SARS-CoV-2 ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (ಗಾಳಿಯ ಮೂಲಕ) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಅದು ಪ್ರತಿಪಾದಿಸಿದೆ.

ತಜ್ಞರು ಈ ತೀರ್ಮಾನಕ್ಕೆ ಹೇಗೆ ಬಂದರು?

ಅಸ್ತಿತ್ವದಲ್ಲಿರುವ ಸಂಶೋಧನೆಗಳನ್ನು ಪರಿಶೀಲಿಸಿರುವ ಯುಕೆ, ಯುಎಸ್ ಮತ್ತು ಕೆನಡಾದ ಆರು ತಜ್ಞರು SARS-CoV-2 ಕೊರೊನಾ ಪ್ರಾಥಮಿಕವಾಗಿ ವಾಯುಗಾಮಿ ಮಾರ್ಗದ ಮೂಲಕ ಹರಡುತ್ತದೆ ಎಂಬ ಪ್ರಮೇಯವನ್ನು ಒಟ್ಟಾಗಿ ಬೆಂಬಲಿಸುವ 10 ಪುರಾವೆಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ

1. ಸೂಪರ್-ಸ್ಪ್ರೆಡರ್ ಘಟನೆಗಳು ಗಣನೀಯ SARS-CoV-2 ಪ್ರಸರಣಕ್ಕೆ ಕಾರಣವಾಗಿವೆ. ವಾಸ್ತವವಾಗಿ, ಅಂತಹ ಘಟನೆಗಳು ಸಾಂಕ್ರಾಮಿಕ ರೋಗದ ಪ್ರಾಥಮಿಕ ಚಾಲಕರಾಗಿರಬಹುದು. ಸಂಗೀತ ಕಚೇರಿಗಳು, ಕ್ರೂಸ್ ಹಡಗುಗಳು ಇತ್ಯಾದಿಗಳಲ್ಲಿನ ಮಾನವ ನಡವಳಿಕೆಗಳು ಮತ್ತು ಇತರ ಅಸ್ಥಿರಗಳ ವಿವರವಾದ ವಿಶ್ಲೇಷಣೆಗಳು “SARS-CoV-2 ವಾಯುಗಾಮಿ ಹರಡುವಿಕೆಗೆ ಅನುಗುಣವಾಗಿರುತ್ತವೆ, ಅದನ್ನು ಹನಿಗಳು ಅಥವಾ ಫೋಮೈಟ್‌ಗಳಿಂದ ಸಮರ್ಪಕವಾಗಿ ವಿವರಿಸಲಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.

2. ಅಕ್ಕಪಕ್ಕದ ಕೋಣೆಗಳಲ್ಲಿನ ಜನರ ನಡುವೆ SARS-CoV-2 ನ ದೀರ್ಘ-ವ್ಯಾಪ್ತಿಯ ಪ್ರಸರಣವನ್ನು ಕ್ವಾರಂಟೈನ್ ಹೋಟೆಲ್‌ಗಳಲ್ಲಿ ದಾಖಲಿಸಲಾಗಿದೆ. ಆದರೆ ಅವರು ಎಂದಿಗೂ ಪರಸ್ಪರ ಭೇಟಿ ಆಗಿರಲಿಲ್ಲ.

3. ರೋಗ ಲಕ್ಷಣ ಇರದ ಅಥವಾ ಇರುವ ಕೊರೊನಾ ಪೀಡಿತರ ಕೆಮ್ಮು ಅಥವಾ ಸೀನದೇ ಇರುವಾಗಲೂ ಸಂಭವಿಸುವ ಹರಡುವಿಕೆಯು ಜಾಗತಿಕವಾಗಿ ಎಲ್ಲಾ ಪ್ರಸರಣಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು, ಮತ್ತು ಬಹುಶಃ 59% ವರೆಗೆ ಕಾರಣವಾಗಬಹುದು. ಇದು ಕೂಡ ಗಾಳಿಯ ಮೂಲಕ ಪ್ರಸರಣದ ಸಾಧ್ಯತೆಯನ್ನು ತೋರಿಸುತ್ತದೆಯೇ ಹೊರು ಡ್ರಾಪಲೆಟ್‌ಗಳ ಮೂಲಕ ಅಲ್ಲ.

4. ಕೊರೊನಾ ಪ್ರಸಾರವು ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ಹೆಚ್ಚಾಗಿದೆ. ಆದರೆ ಒಳಾಂಗಣ ವಾತಾಯನದಿಂದ (ವೆಂಟಿಲೇಷನ್) ಗಣನೀಯವಾಗಿ ಕಡಿಮೆಯಾಗುತ್ತದೆ. ಎರಡೂ ಅವಲೋಕನಗಳು ಪ್ರಧಾನವಾಗಿ ವಾಯುಗಾಮಿ ಪ್ರಸರಣ ಮಾರ್ಗವನ್ನು ಬೆಂಬಲಿಸುತ್ತವೆ ಎಂದು ಲೇಖಕರು ಬರೆದಿದ್ದಾರೆ.

5. ಆರೋಗ್ಯ ಸಂಸ್ಥೆಗಳಲ್ಲಿ ಹೊಸ ಸೋಂಕುಗಳನ್ನು ದಾಖಲಿಸಲಾಗಿದೆ, ಅಲ್ಲಿ ಕಟ್ಟುನಿಟ್ಟಾದ ಸಂಪರ್ಕ ಮತ್ತು ಡ್ರಾಪ್‌ಲೆಟ್ ಮುನ್ನೆಚ್ಚರಿಕೆಗಳ ಜಾರಿ ಮತ್ತು ಪಿಪಿಇ ಬಳಕೆಯನ್ನು ಹನಿಗಳಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಏರೋಸಾಲ್ (ಗಾಳಿ ಪ್ರಸರಣದ) ವ್ಯವಸ್ಥೆ ಇಲ್ಲ.

6. ಸಕ್ರಿಯ ಕೊರೊನಾ ಗಾಳಿಯಲ್ಲಿ ಪತ್ತೆಯಾಗಿದೆ. ಪ್ರಯೋಗಾಲಯದ ಪ್ರಯೋಗಗಳಲ್ಲಿ, ಕೊರೊನಾ 3 ಗಂಟೆಗಳವರೆಗೆ ಗಾಳಿಯಲ್ಲಿ ಸಾಂಕ್ರಾಮಿಕವಾಗಿ ಉಳಿಯಿತು.

7. ಕೋವಿಡ್ -19 ರೋಗಿಗಳಿರುವ ಆಸ್ಪತ್ರೆಗಳಲ್ಲಿ ಏರ್ ಫಿಲ್ಟರ್‌ಗಳು ಮತ್ತು ಕಟ್ಟಡದ ನಾಳಗಳಲ್ಲಿ ಕೊರೋನಾ ಅನ್ನು ಗುರುತಿಸಲಾಗಿದೆ; ಅಂತಹ ಸ್ಥಳಗಳನ್ನು ಏರೋಸಾಲ್ ಅಂದರೆ ಗಾಳಿಯಿಂದ ಮಾತ್ರ ತಲುಪಬಹುದು.

8. ಒಂದು ಪಂಜರದಲ್ಲಿ ಸೋಂಕುಯುಕ್ತ ಪ್ರಾಣಿಗಳು ಮತ್ತು ಇನ್ನೊಂದರಲ್ಲಿ ಸೋಂಕುರಹಿತ ಪ್ರಾಣಿಗಳನ್ನು ಇರಿಸಿ ಎರಡರ ನಡುವೆ ನಾಳದ ಮೂಲಕ ಗಾಳಿ ಸಂಪರ್ಕ ಏರ್ಪಡಿಸಿದಾಗ ಸೋಂಕು ಪ್ರಸಾರವಾಗಿದ್ದನ್ನು ಹಲವು ಅಧ್ಯನಗಳು ತೋರಿಸಿವೆ.

9. ವಾಯುಗಾಮಿ ಪ್ರಸರಣದ ಊಹೆಯನ್ನು ನಿರಾಕರಿಸಲು “ನಮ್ಮ ಜ್ಞಾನಕ್ಕೆ” ಯಾವುದೇ ಅಧ್ಯಯನವು ಬಲವಾದ ಅಥವಾ ಸ್ಥಿರವಾದ ಪುರಾವೆಗಳನ್ನು ಒದಗಿಸಿಲ್ಲ. ಸೋಂಕಿತ ಜನರೊಂದಿಗೆ ಗಾಳಿಯನ್ನು ಹಂಚಿಕೊಂಡಾಗ ಕೆಲವರು ಸೋಂಕನ್ನು ಪಡೆದಿಲ್ಲ, ಆದರೆ ಸಾಂಕ್ರಾಮಿಕ ವ್ಯಕ್ತಿಗಳ ನಡುವಿನ ವೈರಲ್ ಹರಡುವಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಮತ್ತು ವಿವಿಧ ಪರಿಸರ ಪರಿಸ್ಥಿತಿಗಳು ಸೇರಿದಂತೆ ಹಲವು ಅಂಶಗಳ ಸಂಯೋಜನೆಯಿಂದ ಈ ಪರಿಸ್ಥಿತಿಯನ್ನು ವಿವರಿಸಬಹುದು.

10. ಪ್ರಸರಣದ ಇತರ ಪ್ರಬಲ ಮಾರ್ಗಗಳನ್ನು ಬೆಂಬಲಿಸಲು ಸೀಮಿತ ಪುರಾವೆಗಳಿವೆ. ಅಂದರೆ, ಉಸಿರಾಟದ ಹನಿ ಅಥವಾ ಫೋಮೈಟ್ ಪ್ರಸರಣ ಬೆಂಬಲಿಸಲು ಸಿಮೀತ ಆಧಾರಗಳಿವೆ.


ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...