Homeಮುಖಪುಟಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

ಕೊರೊನಾ ಪ್ರಧಾನವಾಗಿ ಹರಡುವುದು ಗಾಳಿಯ ಮೂಲಕವೇ: 10 ಪುರಾವೆ ನೀಡಿದ ತಜ್ಞರು

- Advertisement -
- Advertisement -

ತಜ್ಞರ ತಂಡವೊಂದು ಲಭ್ಯವಿರುವ ಸಂಶೋಧನೆಗಳನ್ನು ಪರಿಷ್ಕರಣೆ ಮಾಡಿ, SARS-CoV-2 ನ ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (airborne) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಮೌಲ್ಯಮಾಪನವನ್ನು ಪ್ರಕಟಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕಳೆದ ವರ್ಷದಿಂದ, ಕೊರೊನಾ ವೈರಸ್ SARS-CoV-2 ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಹಿಡಿದವು. ವಿಶ್ವ ಆರೋಗ್ಯ ಸಂಸ್ಥೆಯಿಂದ ಧನಸಹಾಯ ಪಡೆದಿರುವ ಇತರ ಅಧ್ಯಯನಗಳು ಸಹ ನಡೆದಿವೆ, ಅವುಗಳು ಸಾಕ್ಷ್ಯ, ಆಧಾರಗಳನ್ನು ಅನಿರ್ದಿಷ್ಟವೆಂದು ಹೇಳಿದ್ದವು.

ಈಗ, ತಜ್ಞರ ಒಂದು ತಂಡವು ಲಭ್ಯವಿರುವ ಸಂಶೋಧನೆಗಳನ್ನು ಪರೀಕ್ಷಿಸಿ ಅದರ ಮೌಲ್ಯಮಾಪನವನ್ನು ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟಿಸಿದೆ: SARS-CoV-2 ಪ್ರಾಥಮಿಕ ಪ್ರಸರಣ ಮಾರ್ಗವು ನಿಜಕ್ಕೂ ವಾಯುಗಾಮಿ (ಗಾಳಿಯ ಮೂಲಕ) ಎಂಬುದಕ್ಕೆ ಬಲವಾದ, ಸ್ಥಿರವಾದ ಪುರಾವೆಗಳಿವೆ ಎಂದು ಅದು ಪ್ರತಿಪಾದಿಸಿದೆ.

ತಜ್ಞರು ಈ ತೀರ್ಮಾನಕ್ಕೆ ಹೇಗೆ ಬಂದರು?

ಅಸ್ತಿತ್ವದಲ್ಲಿರುವ ಸಂಶೋಧನೆಗಳನ್ನು ಪರಿಶೀಲಿಸಿರುವ ಯುಕೆ, ಯುಎಸ್ ಮತ್ತು ಕೆನಡಾದ ಆರು ತಜ್ಞರು SARS-CoV-2 ಕೊರೊನಾ ಪ್ರಾಥಮಿಕವಾಗಿ ವಾಯುಗಾಮಿ ಮಾರ್ಗದ ಮೂಲಕ ಹರಡುತ್ತದೆ ಎಂಬ ಪ್ರಮೇಯವನ್ನು ಒಟ್ಟಾಗಿ ಬೆಂಬಲಿಸುವ 10 ಪುರಾವೆಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ

1. ಸೂಪರ್-ಸ್ಪ್ರೆಡರ್ ಘಟನೆಗಳು ಗಣನೀಯ SARS-CoV-2 ಪ್ರಸರಣಕ್ಕೆ ಕಾರಣವಾಗಿವೆ. ವಾಸ್ತವವಾಗಿ, ಅಂತಹ ಘಟನೆಗಳು ಸಾಂಕ್ರಾಮಿಕ ರೋಗದ ಪ್ರಾಥಮಿಕ ಚಾಲಕರಾಗಿರಬಹುದು. ಸಂಗೀತ ಕಚೇರಿಗಳು, ಕ್ರೂಸ್ ಹಡಗುಗಳು ಇತ್ಯಾದಿಗಳಲ್ಲಿನ ಮಾನವ ನಡವಳಿಕೆಗಳು ಮತ್ತು ಇತರ ಅಸ್ಥಿರಗಳ ವಿವರವಾದ ವಿಶ್ಲೇಷಣೆಗಳು “SARS-CoV-2 ವಾಯುಗಾಮಿ ಹರಡುವಿಕೆಗೆ ಅನುಗುಣವಾಗಿರುತ್ತವೆ, ಅದನ್ನು ಹನಿಗಳು ಅಥವಾ ಫೋಮೈಟ್‌ಗಳಿಂದ ಸಮರ್ಪಕವಾಗಿ ವಿವರಿಸಲಾಗುವುದಿಲ್ಲ” ಎಂದು ಅವರು ಬರೆದಿದ್ದಾರೆ.

2. ಅಕ್ಕಪಕ್ಕದ ಕೋಣೆಗಳಲ್ಲಿನ ಜನರ ನಡುವೆ SARS-CoV-2 ನ ದೀರ್ಘ-ವ್ಯಾಪ್ತಿಯ ಪ್ರಸರಣವನ್ನು ಕ್ವಾರಂಟೈನ್ ಹೋಟೆಲ್‌ಗಳಲ್ಲಿ ದಾಖಲಿಸಲಾಗಿದೆ. ಆದರೆ ಅವರು ಎಂದಿಗೂ ಪರಸ್ಪರ ಭೇಟಿ ಆಗಿರಲಿಲ್ಲ.

3. ರೋಗ ಲಕ್ಷಣ ಇರದ ಅಥವಾ ಇರುವ ಕೊರೊನಾ ಪೀಡಿತರ ಕೆಮ್ಮು ಅಥವಾ ಸೀನದೇ ಇರುವಾಗಲೂ ಸಂಭವಿಸುವ ಹರಡುವಿಕೆಯು ಜಾಗತಿಕವಾಗಿ ಎಲ್ಲಾ ಪ್ರಸರಣಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು, ಮತ್ತು ಬಹುಶಃ 59% ವರೆಗೆ ಕಾರಣವಾಗಬಹುದು. ಇದು ಕೂಡ ಗಾಳಿಯ ಮೂಲಕ ಪ್ರಸರಣದ ಸಾಧ್ಯತೆಯನ್ನು ತೋರಿಸುತ್ತದೆಯೇ ಹೊರು ಡ್ರಾಪಲೆಟ್‌ಗಳ ಮೂಲಕ ಅಲ್ಲ.

4. ಕೊರೊನಾ ಪ್ರಸಾರವು ಹೊರಾಂಗಣಕ್ಕಿಂತ ಒಳಾಂಗಣದಲ್ಲಿ ಹೆಚ್ಚಾಗಿದೆ. ಆದರೆ ಒಳಾಂಗಣ ವಾತಾಯನದಿಂದ (ವೆಂಟಿಲೇಷನ್) ಗಣನೀಯವಾಗಿ ಕಡಿಮೆಯಾಗುತ್ತದೆ. ಎರಡೂ ಅವಲೋಕನಗಳು ಪ್ರಧಾನವಾಗಿ ವಾಯುಗಾಮಿ ಪ್ರಸರಣ ಮಾರ್ಗವನ್ನು ಬೆಂಬಲಿಸುತ್ತವೆ ಎಂದು ಲೇಖಕರು ಬರೆದಿದ್ದಾರೆ.

5. ಆರೋಗ್ಯ ಸಂಸ್ಥೆಗಳಲ್ಲಿ ಹೊಸ ಸೋಂಕುಗಳನ್ನು ದಾಖಲಿಸಲಾಗಿದೆ, ಅಲ್ಲಿ ಕಟ್ಟುನಿಟ್ಟಾದ ಸಂಪರ್ಕ ಮತ್ತು ಡ್ರಾಪ್‌ಲೆಟ್ ಮುನ್ನೆಚ್ಚರಿಕೆಗಳ ಜಾರಿ ಮತ್ತು ಪಿಪಿಇ ಬಳಕೆಯನ್ನು ಹನಿಗಳಿಂದ ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಏರೋಸಾಲ್ (ಗಾಳಿ ಪ್ರಸರಣದ) ವ್ಯವಸ್ಥೆ ಇಲ್ಲ.

6. ಸಕ್ರಿಯ ಕೊರೊನಾ ಗಾಳಿಯಲ್ಲಿ ಪತ್ತೆಯಾಗಿದೆ. ಪ್ರಯೋಗಾಲಯದ ಪ್ರಯೋಗಗಳಲ್ಲಿ, ಕೊರೊನಾ 3 ಗಂಟೆಗಳವರೆಗೆ ಗಾಳಿಯಲ್ಲಿ ಸಾಂಕ್ರಾಮಿಕವಾಗಿ ಉಳಿಯಿತು.

7. ಕೋವಿಡ್ -19 ರೋಗಿಗಳಿರುವ ಆಸ್ಪತ್ರೆಗಳಲ್ಲಿ ಏರ್ ಫಿಲ್ಟರ್‌ಗಳು ಮತ್ತು ಕಟ್ಟಡದ ನಾಳಗಳಲ್ಲಿ ಕೊರೋನಾ ಅನ್ನು ಗುರುತಿಸಲಾಗಿದೆ; ಅಂತಹ ಸ್ಥಳಗಳನ್ನು ಏರೋಸಾಲ್ ಅಂದರೆ ಗಾಳಿಯಿಂದ ಮಾತ್ರ ತಲುಪಬಹುದು.

8. ಒಂದು ಪಂಜರದಲ್ಲಿ ಸೋಂಕುಯುಕ್ತ ಪ್ರಾಣಿಗಳು ಮತ್ತು ಇನ್ನೊಂದರಲ್ಲಿ ಸೋಂಕುರಹಿತ ಪ್ರಾಣಿಗಳನ್ನು ಇರಿಸಿ ಎರಡರ ನಡುವೆ ನಾಳದ ಮೂಲಕ ಗಾಳಿ ಸಂಪರ್ಕ ಏರ್ಪಡಿಸಿದಾಗ ಸೋಂಕು ಪ್ರಸಾರವಾಗಿದ್ದನ್ನು ಹಲವು ಅಧ್ಯನಗಳು ತೋರಿಸಿವೆ.

9. ವಾಯುಗಾಮಿ ಪ್ರಸರಣದ ಊಹೆಯನ್ನು ನಿರಾಕರಿಸಲು “ನಮ್ಮ ಜ್ಞಾನಕ್ಕೆ” ಯಾವುದೇ ಅಧ್ಯಯನವು ಬಲವಾದ ಅಥವಾ ಸ್ಥಿರವಾದ ಪುರಾವೆಗಳನ್ನು ಒದಗಿಸಿಲ್ಲ. ಸೋಂಕಿತ ಜನರೊಂದಿಗೆ ಗಾಳಿಯನ್ನು ಹಂಚಿಕೊಂಡಾಗ ಕೆಲವರು ಸೋಂಕನ್ನು ಪಡೆದಿಲ್ಲ, ಆದರೆ ಸಾಂಕ್ರಾಮಿಕ ವ್ಯಕ್ತಿಗಳ ನಡುವಿನ ವೈರಲ್ ಹರಡುವಿಕೆ ಪ್ರಮಾಣದಲ್ಲಿನ ವ್ಯತ್ಯಾಸ ಮತ್ತು ವಿವಿಧ ಪರಿಸರ ಪರಿಸ್ಥಿತಿಗಳು ಸೇರಿದಂತೆ ಹಲವು ಅಂಶಗಳ ಸಂಯೋಜನೆಯಿಂದ ಈ ಪರಿಸ್ಥಿತಿಯನ್ನು ವಿವರಿಸಬಹುದು.

10. ಪ್ರಸರಣದ ಇತರ ಪ್ರಬಲ ಮಾರ್ಗಗಳನ್ನು ಬೆಂಬಲಿಸಲು ಸೀಮಿತ ಪುರಾವೆಗಳಿವೆ. ಅಂದರೆ, ಉಸಿರಾಟದ ಹನಿ ಅಥವಾ ಫೋಮೈಟ್ ಪ್ರಸರಣ ಬೆಂಬಲಿಸಲು ಸಿಮೀತ ಆಧಾರಗಳಿವೆ.


ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...