Homeಕರೋನಾ ತಲ್ಲಣಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ - ಇದು ಕಂಪನಿಗಳು ಅತಿಹೆಚ್ಚು...

ಕೋವಿಡ್ ಲಸಿಕೆ: ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರದ ಮೂಲಭೂತ ಕರ್ತವ್ಯ – ಇದು ಕಂಪನಿಗಳು ಅತಿಹೆಚ್ಚು ಲಾಭ ಮಾಡುವ ಸಮಯವಲ್ಲ!

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಕೆ. ಸುಜಾತಾ ರಾವ್‌ರವರು ಲಸಿಕೆ ಕುರಿತಂತೆ ಇಂದು ಅನಗತ್ಯವಾಗಿ ಸಂಕೀರ್ಣಗೊಳಿಸಿರುವ ವಿಚಾರಗಳನ್ನು, ಹುನ್ನಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ.

- Advertisement -
- Advertisement -

ಕೇಂದ್ರ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಕೆ. ಸುಜಾತಾ ರಾವ್‌ರವರು ಲಸಿಕೆ ಕುರಿತಂತೆ ಇಂದು ಅನಗತ್ಯವಾಗಿ ಸಂಕೀರ್ಣಗೊಳಿಸಿರುವ ವಿಚಾರಗಳನ್ನು, ಹುನ್ನಾರಗಳನ್ನು ಸರಳ ಭಾಷೆಯಲ್ಲಿ ನಿರೂಪಿಸಿದ್ದಾರೆ. ಈ ಲೇಖನ ಮೊದಲು ಇಂಡಿಯನ್ ಎಕ್ಸ್‌ಪ್ರೆಸ್‌ ನಲ್ಲಿ ಪ್ರಕಟವಾಗಿತ್ತು. ಲೇಖಕರ ಒಪ್ಪಿಗೆಯ ಮೇರೆಗೆ ನಾನುಗೌರಿ ಓದುಗರಿಗಾಗಿ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಲಾಗುತ್ತಿದೆ.

ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್‌

  • ಕೆ. ಸುಜಾತಾ ರಾವ್‌

ಆಘಾತಕ್ಕೊಳಗಾದ ಭಾರತದಲ್ಲಿ, ವಯಸ್ಕ ಜನಸಂಖ್ಯೆಯ ಶೇ. 70 ಪ್ರತಿಶತ ಅಥವಾ 654 ಮಿಲಿಯನ್ ಜನರಿಗೆ ಲಸಿಕೆ ಹಾಕುವ ಮೂಲಕ ಜೀವಗಳನ್ನು ಉಳಿಸುವುದು ಹೆಚ್ಚಿನ ಆದ್ಯತೆಯಾಗಿದೆ. ಈ ಲೇಖನವು ಏಪ್ರಿಲ್ 20 ರಂದು ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಲಸಿಕೆ ನೀತಿ ಪ್ರಕಟಣೆಗಳ ಪರಿಣಾಮಗಳನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ.

ಕಳೆದ ಮೂರು ತಿಂಗಳಲ್ಲಿ, 30 ಕೋಟಿ ಹೆಚ್ಚಿನ ಅಪಾಯದ (ಹೈ ರಿಸ್ಕ್) ಜನಸಂಖ್ಯೆಯಲ್ಲಿ ಕೇವಲ ಶೇ. 40 ಪ್ರತಿಶತದಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಯಿತು. ಭಾಗಶಃ ಆರಂಭಿಕದಲ್ಲಿ ಜನರಿಗೆ ಲಸಿಕೆ ಹಿಂಜರಿಕೆ ಮತ್ತು ನಂತರದ ಲಸಿಕೆ ಕೊರತೆಯಿಂದಾಗಿ ಇದು ಸಂಭವಿಸಿರಬಹುದು. ಎರಡನೆ ಅಲೆಯ ಮರಣ ಪ್ರಮಾಣದ ಮಾಹಿತಿ ಪ್ರಕಾರ, ಒಟ್ಟು ಕೋವಿಡ್ ಸಾವುಗಳಲ್ಲಿ ಶೇ. 44ರಷ್ಟು ಜನ 20-50 ವರ್ಷ ವಯಸ್ಸಿನವರಿದ್ದಾರೆ. ಹೀಗಾಗಿ, ಮೇ 1 ರಿಂದ ಎಲ್ಲಾ ವಯಸ್ಕರನ್ನು (18 ದಾಟಿದ) ಲಸಿಕೆ ಅಭಿಯಾನಕ್ಕೆ ಸೇರಿಸಲು ಸರ್ಕಾರ ಅರ್ಹತಾ ಮಾನದಂಡಗಳನ್ನು ವಿಸ್ತರಿಸಿದೆ.

ಗಮನಿಸಬೇಕಾದ ಅಂಶಗಳು: ಇನ್ನೂ 60 ಪ್ರತಿಶತದಷ್ಟು ಜನಸಂಖ್ಯೆಗೆ ಒಂದು ಡೋಸ್ ಕೂಡ ಹಾಕಿಲ್ಲ. ಇನ್ನೊಂದು ಕಡೆ ಲಸಿಕೆಯನ್ನು ಅಸಮವಾಗಿ ಸರಬರಾಜು ಮಾಡಲಾಗಿದೆ. ಈ ಎರಡು ಅಂಶಗಳು ವಿರೂಪಗಳು ಮತ್ತು ಅಸಮಾನತೆಗಳಿಗೆ ಕಾರಣವಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರ ಕೊಳೆಗೇರಿಗಳಲಿನ್ಲ ಶಕ್ತಿಹೀನ ಮತ್ತು ದುರ್ಬಲರಿಗಿಂತ ನಗರ ಪ್ರದೇಶಗಳಲ್ಲಿನ ದೊಡ್ಡ ಧ್ವನಿ ಇರುವ ಸ್ಥಿತಿವಂತರಿಗೆ ಈ ನೀತಿ ಪೂರಕವಾಗಿದೆ.

ಭಾರತದ ಮಾಸಿಕ ಕೋವಿಡ್ ಲಸಿಕೆ ಉತ್ಪಾದನಾ ಸಾಮರ್ಥ್ಯವು ಸುಮಾರು 60-65 ಮಿಲಿಯನ್ ಡೋಸ್‌ಗಳು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕಂಪನಿಯಿಂದ ಮಾಸಿಕ 60 ಮಿಲಿಯನ್ ಮತ್ತು ಭಾರತ್ ಬಯೋಟೆಕ್ (ಬಿಬಿ) 1-5 ಮಿಲಿಯನ್ ಡೋಸ್ ಉತ್ಪಾದನೆ ಸಾಧ್ಯ. ಆದರೆ ನಮ್ಮ ಅಂತಿಮ ಅವಶ್ಯಕತೆ ಬೃಹತ್ತಾಗಿದೆ. ಶೇ .70 ರಷ್ಟು ವಯಸ್ಕರಿಗೆ ಲಸಿಕೆ ನೀಡಲು ಒಟ್ಟು 1,45 ಬಿಲಿಯನ್ ಡೋಸ್‌ಗಳು ಬೇಕಾಗುತ್ತವೆ.

ಎಲ್ಲಿ ತಪ್ಪಿತು ಭಾರತ ಅಥವಾ ಕೇಂದ್ರ ಸರ್ಕಾರ? ಇತರ ಲಸಿಕೆ ಉತ್ಪಾದಕರೊಂದಿಗೆ ಮುಂಗಡ ಖರೀದಿ ಒಪ್ಪಂದಗಳನ್ನು ದೃಢಿಕರಿಸುವಲ್ಲಿ ಸರ್ಕಾರ ವಿಫಲವಾಗಿದೆ, ಸ್ಪುಟ್ನಿಕ್ ಲಸಿಕೆಯೊಂದಿಗಿನ ವ್ಯವಹಾರದಲ್ಲೂ ವಿಫಲವಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಏಕೆಂದರೆ ಅದು, ಎಸ್‌ಐಐ (ಸೀರಂ) ಮತ್ತು ಬಿಬಿ (ಭಾರತ್ ಬಯೋಟೆಕ್) ಉತ್ಪಾದಿಸುವ ಲಸಿಕೆಗಳು ಭಾರತದ ಅಗತ್ಯಗಳಿಗೆ ಸಾಕಾಗುತ್ತದೆ ಎಂಬ ಆಧಾರರಹಿತ, ತಪ್ಪು ಕಲ್ಪನೆಯನ್ನು ಹೊಂದಿದ್ದು ಇದಕ್ಕೆ ಕಾರಣವಾಗಿದೆ. ವಿವರವಾದ ಬೇಡಿಕೆ-ಪೂರೈಕೆಯ ವಿಶ್ಲೇಷಣೆಯನ್ನು ವೈಜ್ಞಾನಿಕ ಮತ್ತು ಲಸಿಕೆ ಮಾರುಕಟ್ಟೆ ನೆಲೆಯಲ್ಲಿ ಮಾಡಿದ್ದರೆ, ಯಾವ ವಯಸ್ಸಿನವರಿಗೆ, ಯಾವ ಸಮಸ್ಯೆ ಇರುವವರಿಗೆ ಮೊದಲು ನೀಡಬೇಕು ಎಂಬ ಅರ್ಹತಾ ಮಾನದಂಡಗಳಲ್ಲಿ ಸ್ಪಷ್ಟತೆ ಇರುತ್ತಿತ್ತು.

ಸರ್ಕಾರ ಮೂರು ಪ್ರಮುಖ ನಿರ್ಧಾರಗಳನ್ನು ಘೋಷಿಸಿದೆ: ಒಂದು, ಭಾರತ ಸರ್ಕಾರಕ್ಕೆ ಶೇ.50ರಷ್ಟು ಲಸಿಕೆಗಳನ್ನು ಎರಡೂ ಕಂಪನಿಗಳು ನೀಡಬೇಕು. ಉಳಿದವು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ. ಎರಡನೇದು, ವಿದೇಶಿ ಕಂಪನಿಗಳ ಮಾರುಕಟ್ಟೆ ಪ್ರವೇಶಕ್ಕಾಗಿ ಬ್ರಿಡ್ಜಿಂಗ್ ಅಧ್ಯಯನಗಳನ್ನು ಮನ್ನಾ ಮಾಡುವುದು ಮತ್ತು ಮೂರನೇದಾಗಿ, ಮತ್ತು ಆಶ್ಚರ್ಯಕರವಾಗಿ, ಕಂಪನಿಗಳಿಗೆ ಬೆಲೆಯನ್ನು ನಿಗದಿಪಡಿಸಲು ಸ್ವಾತಂತ್ರ್ಯ ನೀಡಿರುವುದು.

ಕೇಂದ್ರ ಸರ್ಕಾರದ ಈ ಲಸಿಕಾ ನೀತಿ ಸ್ಪಷ್ಟವಾಗಿಲ್ಲ ಮತ್ತು ಸಂಶಯಾತ್ಮಕವಾಗಿದೆ. ಕೇಂದ್ರ ಖರೀದಿಸುವ ಲಸಿಕೆಗಳ ಬಳಕೆಯು ಎಲ್ಲಿ ಆಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಅವು ರಾಜ್ಯಗಳಿಗಾಗಿಯೇ ಮತ್ತು ಹಾಗಿದ್ದರೆ ಎಷ್ಟು ಪ್ರಮಾಣದಲ್ಲಿ, ಅದಕ್ಕೆ ನಿಯಮಗಳೇನು ಎಂಬ ಪ್ರಶ್ನೆ ಏಳುತ್ತವೆ. ಅಥವಾ ಮತ್ತೆ ಲಸಿಕೆ ರಾಜತಾಂತ್ರಿಕತೆ (ವಿದೇಶಗಳಿಗೆ ಕೊಡುವುದು) ಮೆರೆಯಲೋ? ಕಳಿಸಲೇಬೇಕು ಎಂಬ ವಿದೇಶಿ ಕಟ್ಟುಪಾಡುಗಳಿವೆಯೇ? ಇದ್ದರೆ ಅಂತವನ್ನು ಪೂರೈಸಲು ಯಾವ ಕೋಟಾದ ಲಸಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಯಾವುದೂ ಸ್ಪಷ್ಟವಿಲ್ಲ.

ಪ್ರತಿ ರಾಜ್ಯವು ಪ್ರತ್ಯೇಕವಾಗಿ ಸರಬರಾಜುದಾರರನ್ನು ಸಂಪರ್ಕಿಸಿ ಮತ್ತು ಚೌಕಾಶಿ ಬೆಲೆಗೆ ಇಳಿದರೆ, ಅಂತಿಮ ನಿರ್ಧಾರ/ವಿವೇಚನೆಯು ಸರಬರಾಜುದಾರನ ಬಳಿ ಇರುತ್ತದೆ- ಯಾರಿಗೆ ಮಾರಾಟ ಮಾಡಬೇಕು, ಯಾವಾಗ, ಎಲ್ಲಿ, ಎಷ್ಟು ಮತ್ತು ಯಾವ ದರದಲ್ಲಿ ಎಂಬುದನ್ನು ಸರಬರಾಜುದಾರನೇ ನಿರ್ಧರಿಸಲಿದ್ದಾನೆ. ಇದು ನಿಸ್ಸಂದೇಹವಾಗಿ ಅಂತರರಾಜ್ಯ ಅಸಮಾನತೆಗಳನ್ನು ಸೃಷ್ಟಿಸುತ್ತದೆ. ಬಡ ರಾಜ್ಯಗಳು ಕಳಪೆ ಚೌಕಾಶಿ ಶಕ್ತಿಯಿಂದ ಬಳಲುತ್ತಿವೆ, ಬಳಲಿವೆ. ಆದರೆ ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳು ಹೆಚ್ಚಿನ ದರವನ್ನು ಪಾವತಿ ಲಸಿಕೆ ಕೊಂಡುಕೊಳ್ಳಬಹುದು. ಆದರೆ ಈಗಾಗಲೇ ಕಲ್ಯಾಣ ಯೋಜನೆಗಳಿಗೆ ಇರುವ ಹಣವೇ ಕಡಿಮೆಯಿದೆ, ಈಗ ಅವು ಅದನ್ನೂ ಲಸಿಕೆಗಾಗಿ ಕಳೆದುಕೊಳ್ಳಲಿವೆ.

ಇತ್ತೀಚೆಗೆ, ಸೀರಂ ಮತ್ತು ಭಾರತ್ ಬಯೋಟೆಕ್ ತಮ್ಮ ಬೆಲೆ ನೀತಿಯನ್ನು ಘೋಷಿಸಿವೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 400. ರೂ.ಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಎಂದು ದರ ನಿಗದಿ ಮಾಡಿದೆ. ಭಾರತ್ ಬಯೋಟೆಕ್ ಕೊವಾಕ್ಸಿನ್‌ ಲಸಿಕೆಯ ಒಂದು ಡೋಸ್‌ಗೆ ರಾಜ್ಯ ಸರ್ಕಾರಗಳಿಗೆ 600 ರೂ ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಎಂದು ನಿಗದಿ ಮಾಡಿದೆ. ಎಸ್‌ಐಐ ಲಸಿಕೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಪ್ರತಿ ಡೋಸ್‌ಗೆ 161 ರೂ., GAVI (ಲಸಿಕೆ ವಿತರಣೆಗೆಂದು ಸ್ಥಾಪಿಸಲಾದ ಜಾಗತಿಕ ವೇದಿಕೆ) ಲಸಿಕೆಗೆ 210 ರೂ.ಗೆ ಲಭ್ಯವಿದೆ. ಆದರೆ ಇದೇ ಲಸಿಕೆಯನ್ನು ಕೇಂದ್ರ ಸರ್ಕಾರಕ್ಕೆ 150 ರೂ.ಗೆ ನೀಡಲಾಗುತ್ತಿದೆ. (ರಾಜ್ಯಗಳಿಗೆ ಮಾತ್ರ ವಿದೇಶಿ ದರಕ್ಕಿಂತ ದುಬಾರಿ ಎಂಬುದನ್ನು ಗಮನಿಸಿ). ಮೂರನೆಯ ಲಸಿಕೆಯಾಗಿ ಭಾರತ ಪ್ರವೇಶಿಸುತ್ತಿರುವ ರಷ್ಯಾದ ಸ್ಪುಟ್ನಿಕ್ ಜೂನ್‌ನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಪ್ರಸ್ತಾಪಿಸಿದೆ ಮತ್ತು ಪ್ರತಿ ಡೋಸ್‌ಗೆ 750 ರೂ. ದರ ನಿಗದಿ ಮಾಡಿದೆ.

ಎಸ್‌ಐಐನ (ಸೀರಂ) ಸಿಇಒ ಸಂದರ್ಶನಗಳಲ್ಲಿ ಮೂರು ಆಸಕ್ತಿದಾಯಕ ವಿಷಯಗಳನ್ನು ಸಹ ಹೇಳಿದ್ದಾರೆ: ಪ್ರತಿ ಡೋಸ್ ಅನ್ನು 150 ರೂ.ಗೆ ಮಾರಿದರೂ ನಷ್ಟವಿಲ್ಲ, ಅದು ಸಾಮಾನ್ಯ ಲಾಭವನ್ನು ಕೊಟ್ಟೇ ಕೊಡುತ್ತದೆ. ಆದರೆ ನಮ್ಮ ಉದ್ದೇಶವು ಸೂಪರ್ ಪ್ರಾಫಿಟ್ ಗಳಿಸುವುದಾಗಿದೆ. ಎರಡನೇ ಅಂಶ, ಈ ಸಿಇಒ ಅವರ (ರಾಷ್ಟ್ರವಲ್ಲ) ಮೊದಲ ಆದ್ಯತೆಯೆಂದರೆ ಮಹಾರಾಷ್ಟ್ರಕ್ಕೆ ಲಸಿಕೆಗಳನ್ನು ಪೂರೈಸುವುದು ಮತ್ತು ಮೂರನೆಯದಾಗಿ, ಅತ್ಯಂತ ಆತಂಕಕಾರಿಯಾಗಿ, ಖಾಸಗಿ ವಲಯವು ದೇಶದಲ್ಲಿ ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೀಡುವ ಮುಖ್ಯ ಪೂರೈಕೆದಾರನಾಗಿ ಹೊರಹೊಮ್ಮುತ್ತದೆ…..

ಲಸಿಕೆಯ ದರ ನಿರ್ಧರಿಸುವ ಅಂಶಗಳೇನು? ಇನ್‌ಪುಟ್‌ಗಳ (ಕಚ್ಚಾ ವಸ್ತು, ಮಾನವ ಸಂಪನ್ಮೂಲ ಇತ್ಯಾದಿ) ನಿಜವಾದ ವೆಚ್ಚ, ಕ್ಲಿನಿಕಲ್ ಪ್ರಯೋಗಗಳಿಗೆ ಮಾಡಿದ ಖರ್ಚು, ಮಾರಾಟ ಪ್ರಚಾರ ಮತ್ತು ಸಣ್ಣ ಲಾಭದ ಆಧಾರದ ಮೇಲೆ ದರ ನಿಗದಿ ಅವಲಂಬಿತವಾಗಿರುತ್ತದೆ. ಎಸ್‌ಐಐ (ಸೀರಂ) ವಿಚಾರಕ್ಕೆ ಬಂದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿ ವೆಚ್ಚಗಳನ್ನು ಭರಿಸಿದ್ದರಿಂದ ಹೂಡಿಕೆ ಕಡಿಮೆ ಆಗಿದೆ. ಲಸಿಕೆ ಉತ್ಪಾದನೆಯನ್ನು ವಿಸ್ತರಿಸಲು ಈಗಾಗಲೇ ಕೇಂದ್ರ ಸರ್ಕಾರವು 3 ಸಾವಿರ ಕೋಟಿ ರೂ. ನೀಡಿದೆ. ಇದರೊಂದಿಗೆ ಈಗಾಗಲೇ GAVI ಉತ್ಪಾದನಾ ವಿಸ್ತರಣೆಗೆ 300 ಮಿಲಿಯನ್ ಡಾಲರ್ ನೀಡಿಯಾಗಿದೆ. GAVI ಅನುದಾನವನ್ನು ಆರು ತಿಂಗಳ ಹಿಂದೆ ನೀಡಲಾಗಿದ್ದರೂ, ಸೀರಂ ತನ್ನ ಉತ್ಪಾದನೆಯನ್ನು ವಿಸ್ತರಿಸಿದಂತೆ ಕಾಣುತ್ತಿಲ್ಲ. ಈಗ ಜುಲೈ ಅಂತ್ಯದ ವೇಳೆಗೆ ತಿಂಗಳಿಗೆ 100 ಮಿಲಿಯನ್ ಡೋಸ್ ತಯಾರಿಸುವ ಭರವಸೆ ನೀಡಿದೆ. ಇದರಲ್ಲಿ ಭಾರತಕ್ಕೆ ಎಷ್ಟು ಲಭ್ಯವಿರುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

3 ನೇ ಹಂತದ ಪ್ರಯೋಗ ಒಳಗೊಂಡಂತೆ ಲಸಿಕೆ ಅಭಿವೃದ್ಧಿಗೆ ಭಾರತ್ ಬಯೋಟೆಕ್ ಸುಮಾರು 350 ಕೋಟಿ ರೂ. ವೆಚ್ಚ ಮಾಡಿದೆ ಎಂದು ಅದರ ಮುಖ್ಯಸ್ಥ ಕೃಷ್ಣ ಎಲಾ ಹೇಳುತ್ತಾರೆ. ಕೇಂದ್ರದಿಂದ 1,500 ಕೋಟಿ ರೂ.ಗಳ ಅನುದಾನ ಬೆಂಬಲದೊಂದಿಗೆ, ಭಾರತ್ ಬಯೋಟೆಕ್ ಪ್ರಸ್ತುತ 60 ದಶಲಕ್ಷ ಮಟ್ಟದಿಂದ ಉತ್ಪಾದನೆಯನ್ನು ವರ್ಷಕ್ಕೆ 700 ದಶಲಕ್ಷಕ್ಕೆ ವಿಸ್ತರಿಸಲು ಆಶಿಸಿದೆ.

ಏಳು ರಾಜ್ಯಗಳು (ಸದ್ಯ ಕರ್ನಾಟಕ ಸೇರಿ 11 ರಾಜ್ಯಗಳು) ತಮ್ಮ ಜನರಿಗೆ ಉಚಿತ ಲಸಿಕೆ ನೀಡಲು ನಿರ್ಧರಿಸಿವೆ. ಗಮನಿಸಿ, ಉತ್ತರಪ್ರದೇಶ ಮತ್ತು ಬಿಹಾರ್ ರಾಜ್ಯಗಳು ಯೋಗ್ಯವಾದ ಪ್ರಯೋಗಾಲಯಗಳನ್ನು ಹೊಂದಿಲ್ಲವಾದರೂ, ತಮ್ಮ ಆರೋಗ್ಯ ವಿತರಣಾ ವ್ಯವಸ್ಥೆಯನ್ನು ನಿರ್ಮಿಸಲು ತಮ್ಮ ಸಂಪನ್ಮೂಲಗಳನ್ನು ಖರ್ಚು ಮಾಡುವ ಬದಲು, ಉಚಿತ ಲಸಿಕೆಗಳನ್ನು ಒದಗಿಸಲು ಖರ್ಚು ಮಾಡಬೇಕಾಗಿದೆ. ಉತ್ತರಪ್ರದೇಶ ಎಸ್‌ಡಿಪಿಯ ಅಂದಾಜು 0.47ರಷ್ಟು ಮತ್ತು ಬಿಹಾರ್ ಎಸ್‌ಡಿಪಿಯ ಶೇಕಡಾ 0.6 ರಷ್ಟು ಅಮೂಲ್ಯ ಮೊತ್ತವನ್ನು ಲಸಿಕೆ ಖರೀದಿಗೆ ವೆಚ್ಚ ಮಾಡಬೇಕಾಗಿದೆ.

ಪ್ರಸ್ತುತ ರಾಜಕೀಯ ಆರ್ಥಿಕ ‘ಪ್ರವಚನ’ದ ಬಗ್ಗೆ ಆಸಕ್ತಿದಾಯಕ ಸಂಗತಿಯೆಂದರೆ, ಕೇಂದ್ರ ಧನಸಹಾಯ ಭಾರತ ಸರ್ಕಾರಕ್ಕೆ ಸೇರಿದ್ದಂತೆ, ಇವನ್ನು ರಾಜ್ಯಗಳಿಂದ ಪ್ರತ್ಯೇಕವಾಗಿ ಪರಿಗಣಿಸುವ ಪ್ರವೃತ್ತಿ ಜಾರಿಯಲ್ಲಿದೆ. ಖರ್ಚು ಮಾಡಿದ ಹಣವು ಎಲ್ಲ ರಾಜ್ಯಗಳ ಜನರು ಪಾವತಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬಂದಿದ್ದು ಅಲ್ಲವೇ? “ಸಾಂಕ್ರಾಮಿಕ ಕಾಯಿಲೆಗಳ ಅಂತರರಾಜ್ಯ ಹರಡುವಿಕೆಯನ್ನು” ನಿಯಂತ್ರಿಸಲು ಕೇಂದ್ರ ಸರ್ಕಾರವು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿದೆ. ಸಂವಿಧಾನದ VII ನೇ ಶೆಡ್ಯೂಲ್ ಅಡಿಯಲ್ಲಿ 29ನೆ ನಮೂದು ಇದನ್ನು ಒತ್ತಿ ಹೇಳುತ್ತದೆ. ಆದರೆ ಇಲ್ಲಿ ಕೇಂದ್ರ ಜವಾಬ್ದಾರಿಯಿಂದ ನುಣುಚಿಕೊಂಡು ಎಲ್ಲವನ್ನೂ ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿರುವುದು ವಿಚಿತ್ರ ಚಿಂತನೆಯಾಗಿದೆ. ಇಂತಹ ಸಾಂಕ್ರಾಮಿಕ ಕಾಯಿಲೆಗಳನ್ನು ಎದುರಿಸಲು ರಾಜ್ಯಗಳಿಗೆ ಸಹಾಯ ಮಾಡುವುದು ಕೇಂದ್ರ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಸಾಂಕ್ರಾಮಿಕ ಕಾಯಿಲೆಗಳಿಂದ ಉಂಟಾಗುವ ವ್ಯಾಪಕವಾದ ಪರಿಣಾಮಗಳ ಕಾರಣದಿಂದಾಗಿ, ಕೇಂದ್ರವು ಎಲ್ಲಾ ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳ ಅಡಿಯಲ್ಲಿ ರಾಜ್ಯಗಳಿಗೆ ಯಾವಾಗಲೂ ಲಸಿಕೆಗಳು ಮತ್ತು ಇತರ ಉಪಭೋಗ್ಯ ವಸ್ತುಗಳನ್ನು ಸಂಗ್ರಹಿಸಿ ನೀಡಬೇಕಾಗುತ್ತದೆ. ಅದು ಅದರ ಕರ್ತವ್ಯ ಕೂಡ ಆಗಿದೆ.

ಇದಲ್ಲದೆ, ಇಂತಹ ವ್ಯವಸ್ಥೆಯು ಆರ್ಥಿಕ ಪರಿಣಾಮಕಾರಿತ್ವಕ್ಕೆ ಕಾರಣವಾಗುತ್ತದೆ. ಲಸಿಕೆ ಸಂಗ್ರಹಣೆಯನ್ನು ಕೇಂದ್ರೀಕರಿಸುವ ಮೂಲಕ ಮತ್ತು ತಾನೇ ಏಕೈಕ ಖರೀದಿದಾರನಾಗಿರುವ ಮೂಲಕ ಕೇಂದ್ರ ಸರ್ಕಾರವು ದೇಶದ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ. ಸರ್ಕಾರವು ಹೆಚ್ಚು ಸ್ಪರ್ಧಾತ್ಮಕ ದರಗಳನ್ನು ಪಡೆಯಲು ಮತ್ತು ಲಸಿಕೆಗಳಲ್ಲಿ ದೃಢವಾದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಇದು ಸಹಾಯಕಾರಿ. ಎರಡನೆಯದಾಗಿ, ಎನ್‌ಪಿಪಿಎ ನಡೆಸುವ ವೆಚ್ಚದ ಆಧಾರದ ಮೇಲೆ ಎಲ್ಲಾ ಅಗತ್ಯ ಔಷಧಿಗಳ ಬೆಲೆಯನ್ನು ನಿಗದಿಪಡಿಸುವ ಅಧಿಕಾರವೂ ಸರ್ಕಾರಕ್ಕೆ ಇದೆ.

ವಿದೇಶಿ ಕಂಪನಿಗಳಿಗೆ ನೀಡುವ ಪ್ರೋತ್ಸಾಹದೊಂದಿಗೆ, ಈಗ ಹೆಚ್ಚು ಸ್ಪರ್ಧಾತ್ಮಕ ವಾತಾವರಣವಿದೆ. ಕಾರ್ಟೆಲೈಸೇಶನ್ ಪ್ರಯತ್ನಗಳ ಸಂದರ್ಭದಲ್ಲಿ, ಸರ್ಕಾರವು ಕಡ್ಡಾಯ ಪರವಾನಗಿಯನ್ನು ಪಡೆಯಬಹುದು ಮತ್ತು ಭಾರತದ 18 ಉತ್ಪಾದನಾ ಕಂಪನಿಗಳ ಮೂಲಕ ಉತ್ಪಾದನೆಯನ್ನು ವಿಸ್ತರಿಸಬಹುದು, ಇದು ಆಡಳಿತಾತ್ಮಕ ಬೆಲೆಗೆ ಲಭ್ಯತೆಯನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಲಸಿಕೆಗಳ ಮೇಲಿನ ಐಪಿಆರ್ (ಸ್ವಾಮ್ಯ ಹಕ್ಕು) ಮನ್ನಾ ಮಾಡುವ ಬೇಡಿಕೆಯನ್ನು ಬೆಂಬಲಿಸುವ ವಿಷಯವನ್ನು ಭಾರತ ಸರ್ಕಾರವು ಅಮೆರಿಕದೊಂದಿಗೆ ಆಕ್ರಮಣಕಾರಿಯಾಗಿ ಕೈಗೆತ್ತಿಕೊಳ್ಳಬೇಕು. ಇದು ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಅದರ ಲಭ್ಯತೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರ್ಕಾರದ ಅಧಿಕಾರವನ್ನು ಬುದ್ಧಿವಂತಿಕೆಯಿಂದ ಬಳಸುವುದರಿಂದ ಅಂದಾಜು 60,000 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ಅರ್ಧಕ್ಕೆ ಇಳಿಸಬಹುದು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸಲು ಉಳಿಸಿದ ನಿಧಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬಹುದು.

ಮುಂದಿನ ಎರಡು ವರ್ಷಗಳು ಕಷ್ಟವಾಗುತ್ತವೆ. ಖಾಸಗಿ ಕಂಪನಿಗಳು ಏಕಸ್ವಾಮ್ಯವನ್ನು ಸೃಷ್ಟಿಸಲು ಮತ್ತು ಲಾಭವನ್ನು ಪಡೆಯಲು ಇದು ಸಮಯವಲ್ಲ. ಬದಲಾಗಿ, ಅವತ್ತು ಸಿಪ್ಲಾ ಬಹುರಾಷ್ಟ್ರೀಯ ಔಷಧಿ ಕಂನಿಗಳಿಗೆ ಎದುರಾಗಿ ನಿಂತು ವಿಶ್ವದಾದ್ಯಂತ ಲಕ್ಷಾಂತರ ಜೀವಗಳನ್ನು ಉಳಿಸುವ ಕೆಲಸ ಮಾಡಿತ್ತು. ಅದು ಎಚ್‌ಐವಿ/ಏಡ್ಸ್ ವಿರುದ್ಧದ ಹೋರಾಟವಾಗಿತ್ತು. ಎಚ್‌ಐವಿ ಚಿಕಿತ್ಸೆಯ ಚಿಕಿತ್ಸಾ ವೆಚ್ಚ ವ್ಯಕ್ತಿಯೊಬ್ಬನಿಗೆ 12,000 ಡಾಲರ್‌ನಿಂದ ಕೇವಲ 300 ಡಾಲರ್‌ಗೆ ಇಳಿಯಿತು. ಇದು ಲಕ್ಷಾಂತರ ಜೀವ ಉಳಿಸಿತು. ಜನರ ಕಲ್ಯಾಣಕ್ಕೆ ಬದ್ಧವಾದ ಇಂತಹ ಅಗತ್ಯತೆ ಈಗ ತುರ್ತಾಗಿ ಜಾರಿಗೆ ಬರಬೇಕಿದೆ.

ಕನ್ನಡಕ್ಕೆ: ಮಲ್ಲನಗೌಡರ್ ಪಿ.ಕೆ


ಇದನ್ನೂ ಓದಿ: ಲಸಿಕೆ ಸ್ಟಾಕ್ ಇಲ್ಲ: ಮೇ 1ರಿಂದ ‘ಎಲ್ಲರಿಗೂ ಲಸಿಕೆ’ ಅಭಿಯಾನ ಅಸಾಧ್ಯವೆಂದ 4 ರಾಜ್ಯಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಮಾಡದಿದ್ದರೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ: ಮಾದಿಗ ಸಮುದಾಯದ ನಿರ್ಣಯ

ಮಾ.27 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ವಿಶೇಷ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಾದಿಗ ಸಮುದಾಯಕ್ಕೆ ಸರ್ಕಾರಿ ನೇಮಕಾತಿಯಲ್ಲಿ ಶೇ.6 ಒಳಮೀಸಲಾತಿಯನ್ನು ಹಂಚಿಕೆ ಮಾಡದಿದ್ದರೆ ದಾವಣಗೆರೆ ಹಾಗೂ ಬಾಗಲಕೋಟೆ ಉಪ ಚುನಾವಣೆಯಲ್ಲಿ...

ಗುರುಗ್ರಾಮ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಮೂವರು ಮಹಿಳಾ ಐಪಿಎಸ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿದ ಸುಪ್ರೀಂ

ಗುರುಗ್ರಾಮ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಬುಧವಾರ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿದೆ.  ಸಿಜೆಐ ಸೂರ್ಯ ಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ...

ಗೋವಾ | 25 ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾದ ಕುರ್ಚೋರೆಮ್ ಪುರಸಭೆಯ ಬಿಜೆಪಿ ಕೌನ್ಸಿಲರ್ ಸುಶಾಂತ್ ನಾಯ್ಕ್ ಅವರ ಮಗ ಸೋಹಮ್ ನಾಯ್ಕ್ (20) ಎಂಬಾತನನ್ನು ಸುಮಾರು 25ರಿಂದ 30 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಕ್ಷಿಣ ಗೋವಾ ಪೊಲೀಸರು ಬಂಧಿಸಿದ್ದಾರೆ.  ಆರೋಪಿ...

ಇರಾನ್‌ ಕದನ ವಿರಾಮಕ್ಕೆ 15 ಅಂಶಗಳ ಪ್ರಸ್ತಾಪ ಮುಂದಿಟ್ಟ ಟ್ರಂಪ್

ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭಗೊಂಡು ನಾಲ್ಕು ವಾರಗಳು ಪೂರ್ಣಗೊಳ್ಳುವಾಗ, ಈವರೆಗೆ ಸುಮಾರು 2000 ಜೀವಗಳನ್ನು ಬಲಿ ಪಡೆದ ಹಾಗೂ ಜಾಗತಿಕವಾಗಿ ಇಂಧನ ಸಮಸ್ಯೆಯನ್ನು ಹುಟ್ಟು ಹಾಕಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಇರಾನ್‌ ಮುಂದೆ...

ಗುಜರಾತ್: ತೀವ್ರ ವಿರೋಧದ ನಡುವೆಯೂ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರ; ಇದು ‘ಮುಸ್ಲಿಂ ವಿರೋಧಿ’ ಎಂದ ಕಾಂಗ್ರೆಸ್

ಗುಜರಾತ್ ವಿಧಾನಸಭೆ ಮಂಗಳವಾರ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸುವ ಸಾಮಾನ್ಯ ಕಾನೂನು ಚೌಕಟ್ಟನ್ನು ರಚಿಸುವ ಗುರಿಯನ್ನು...

ಅಜಿತ್ ಪವಾರ್ ಸಾವಿನ ಕುರಿತು ಹಲವು ಅನುಮಾನ : ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ...

ಇಂಧನ ಕೊರತೆ ವದಂತಿ: ಆತಂಕದಿಂದ ಕುಕ್ಕರ್, ಹಾಲಿನ ಡಬ್ಬಿ, ನೀರಿನ ಬಕೆಟ್ ಗಳಲ್ಲಿ ಇಂಧನ ಸಂಗ್ರಹಣೆಗೆ ಮುಂದಾದ ಜನರು

ಇಂಧನ ಕೊರತೆಯ ವದಂತಿಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಜನರು ಕುಕ್ಕರ್, ಅಡುಗೆ ಪಾತ್ರೆ, ಹಾಲಿನ ಡಬ್ಬಿಗಳು, ನೀರಿನ ಟ್ಯಾಂಕರ್, ನೀರಿನ ಬಕೆಟ್ ಮತ್ತು ಬ್ಯಾರೆಲ್‌ಗಳಂತಹ ಅಡುಗೆ ಸಲಕರಣೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು...

ಪಂಜಾಬ್: ಮಹಿಳೆಗೆ ಲೈಂಗಿಕ ಶೋಷಣೆ, ಬೆದರಿಕೆ ಆರೋಪ; ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಬಂಧನ 

ಕಳೆದ ಸೆಪ್ಟೆಂಬರ್‌ನಿಂದ ಅತ್ಯಾಚಾರ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಎಎಪಿ ಶಾಸಕ ಹರ್ಮೀತ್ ಸಿಂಗ್ ಪಠಾಣಮಜ್ರಾ ಅವರನ್ನು ಪಂಜಾಬ್ ಪೊಲೀಸರು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಸನೂರ್‌ನಿಂದ ಮೊದಲ ಬಾರಿಗೆ ಶಾಸಕರಾಗಿರುವ ಪಠಣಮಜ್ರಾ...

ಆಸ್ತಿ ವಿವರ ಮುಚ್ಚಿಟ್ಟು ನಾಮಪತ್ರ ಸಲ್ಲಿಸಿದ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ : ಕಾಂಗ್ರೆಸ್ ಆರೋಪ

ಬಿಜೆಪಿ ಕೇರಳ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಿರುವನಂತಪುರಂ ಜಿಲ್ಲೆಯ ನೇಮಮ್...

2026ರ ಮೊದಲ 74 ದಿನಗಳಲ್ಲಿ 170 ಕಸ್ಟಡಿ ಸಾವುಗಳು ವರದಿ; ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ 

2026 ರ ಮೊದಲ 74 ದಿನಗಳಲ್ಲಿ (ಜನವರಿ 1 ರಿಂದ ಮಾರ್ಚ್ 15 ರವರೆಗೆ) ಭಾರತದಾದ್ಯಂತ ಒಟ್ಟು 170 ಕಸ್ಟಡಿ ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಗೃಹ...