ಮಾಧ್ಯಮಗಳು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕೆಲವೇ ದಿನಗಳಲ್ಲಿ ಹೀರೋನ್ನನ್ನಾಗಿ ಮಾಡುತ್ತವೆ. ಹೀರೋ ಆದವನು ತಮ್ಮ ಮಾತು ಕೇಳದಿದ್ದರೆ ಮತ್ತೆ ಕೆಲವೇ ದಿನಗಳಲ್ಲಿ ಆತನನ್ನು ದೊಡ್ಡ ವಿಲನ್ ಎಂದು ಚಿತ್ರಿಸಿಬಿಡುತ್ತವೆ. ಈ ಮಾತು ಈಗ ಏಕೆಂದರೆ, ಕಳೆದೆರಡು ದಿನಗಳಿಂದ ಗುಡಿಸಲಿನಿಂದ ಪಾರ್ಲಿಮೆಂಟ್ ವರೆಗೆ, ಸೈಕಲ್ ನಿಂದ ಸಂಸತ್ತಿನವರೆಗೆ ಸಾಗಿದ ಬಡ ಸಾಧು, ಸರಳ ಜೀವಿ, ಓರಿಸ್ಸಾದ ಮೋದಿ, ರಾಜಕಾರಣದ ಫಕೀರ ಎಂದು ಇನ್ನಿತ್ಯಾದಿ ಭೂಷಣಗಳಿಂದ ಪ್ರತಾಪಚಂದ್ರ ಸಾರಂಗಿ ರವರ ಕುರಿತು ಒಂದೇ ಸಮನೇ ಎಲ್ಲಾ ಮಾಧ್ಯಮಗಳು ವಿಪರೀತ ಹೊಗಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿ ಸಂಪುಟದಲ್ಲಿ ಸಣ್ಣ, ಅತಿಸಣ್ಣ ಉದ್ಯಮಗಳ ಇಲಾಖೆ ಮತ್ತು ಪಶುಸಂಗೋಪನೆ ಇಲಾಖೆಯ ರಾಜ್ಯ ಸಚಿವರಾಗಿ ಪ್ರತಾಪಚಂದ್ರ ಸಾರಂಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗಾಗಿ ಮಾಧ್ಯಮಗಳು ಬಹುಪರಾಕ್ ಹೇಳುವುದನ್ನು ಇನ್ನು ನಿಲ್ಲಿಸಿಲ್ಲ. ಅತಿ ಎನಿಸುವಷ್ಟು ಹೊಗಳಿ ಅಟ್ಟಕ್ಕೇರಿಸಿಬಿಟ್ಟಿದ್ದಾರೆ. ಇದಕ್ಕೆ ಸಾಮಾಜಿಕ ಜಾಲಾತಾಣಗಳಲ್ಲಿ ಚಪ್ಪಾಳೆ ತಟ್ಟುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೆ ಕೇಂದ್ರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರತಾಪ ಸಾರಂಗಿ ವಿರುದ್ಧ ಗಂಭೀರವಾದ ಕ್ರಿಮಿನಲ್ ಆರೋಪಗಳಿವೆ ಎಂಬ ಸತ್ಯ ಬಯಲಿಗೆ ಬಂದಿದೆ. ಸಾರಂಗಿಯವರ ಈ ಇನ್ನೊಂದು ಮುಖವನ್ನು ತೋರಿಸಲು ಯಾವ ಮುಖ್ಯವಾಹಿನಿ ಮಾಧ್ಯಮಗಳು ಮನಸ್ಸು ಮಾಡುತ್ತಿಲ್ಲ.
ಸಾರಂಗಿಯವರು ತಮ್ಮ ಮೇಲೆ ಏಳು ಗಂಭೀರ ಕ್ರಿಮಿನಲ್ ಆಪಾದನೆಗಳಿವೆ ಎಂದು ಚುನಾವಣಾ ಅಫಿಡವಿಟ್ ನಲ್ಲಿ ಹೇಳಿಕೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಕೇಸ್ ಗಳು ದಾಖಲಾಗಿರುವುದು ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾಗ. ಇಂತಹ ಗಂಭೀರ ಆರೋಪಿ ಈಗ ಕೇಂದ್ರದ ಸಚಿವ. ಅದೂ, ಹಲವಾರು ಖಾತೆಗಳಿಗೆ ಎಂದು ಫೇಸ್ ಬುಕ್ ನಲ್ಲಿ ನೂರಾರು ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
2002ರ ಮಾರ್ಚ್ ನಲ್ಲಿ ಒರಿಸ್ಸಾದ ವಿಧಾನಸಭೆಯ ಮೇಲೆ ಬಜರಂಗದಳದ ಸುಮಾರು 500 ಶಸ್ತ್ರದಾರಿ ಸದಸ್ಯರು ದಾಳಿ ನಡೆಸಿದಾಗ ಅದರ ರಾಜ್ಯ ಅಧ್ಯಕ್ಷರಾಗಿದ್ದು ಇದೇ ಸಾರಂಗಿ. 1999ರ ಫೆಬ್ರವರಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ ಗ್ರಹಾಂ ಸ್ಟೈನ್ ಮತ್ತು ಅವರ ಮೂವರು ಪುಟ್ಟ ಮಕ್ಕಳನ್ನು ಬೆಂಕಿ ಹಚ್ಚಿ ಸುಟ್ಟುಹಾಕಿದ ದಾರಾಸಿಂಗನ ಗುರು ಈ ಸಾರಂಗಿ.
1999 ರಲ್ಲಿ ಒಡಿಶಾ ರಾಜ್ಯದ ಮಯೂಬರ್ಂಜ್ ಜಿಲ್ಲೆಯಲ್ಲಿ ಕುಷ್ಠ ರೋಗ ಮಿತಿ ಮೀರೀತ್ತು. ಆಗ ಗ್ರಹಾಂ ಸ್ಟೈನ್ಸ್ ಎಂಬ ಕ್ರೈಸ್ತ ಮಿಷನರಿ ರೋಗಿಗಳ ಚಿಕಿತ್ಸೆ, ಆರೈಕೆ ಮಾಡುತ್ತಿದ್ದರು. ಆದರೆ ಹಲವು ಜನರನ್ನು ಮತಾಂತಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಾರಾ ಸಿಂಗ್ ಮತ್ತು ಹಲವರು ಗ್ರಹಾಂ ಸ್ಟೈನ್ಸ್ ಅವರರನ್ನು ಅವರ ಮಕ್ಕಳ ಸಮೇತ ವಾಹನವೊಂದಕ್ಕೆ ಕೂಡಿ ಹಾಕಿ ಸಜೀವ ದಹನ ಮಾಡಿದ್ದರು. ಆ ತಂಡಕ್ಕೆ ಗುರುವಾಗಿದ್ದವರು ಇದೇ ಸಾರಂಗಿ ಎಂಬ ಆರೋಪವಿದೆ.
1999 ರಲ್ಲಿ ಒಡಿಶಾ ರಾಜ್ಯದ ಬಜರಂಗದಳ ಸಂಚಾಲಕರಾಗಿದ್ದ ಸಾರಂಗಿ, ದಾರಾ ಸಿಂಗ್ ತಂಡಕ್ಕೆ ನೇರಾ ಹಾಗೂ ಪರೋಕ್ಷವಾಗಿ ಸಹಕಾರಿಸಿದ್ದಾರೆ ಎಂಬ ಆರೋಪದ ಮೇಲೆ ಸಾರಂಗಿಯವರಿಗೆ 2003ರಲ್ಲಿ ಅಪರಾಧಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿದಿಸಿತ್ತು. ನಂತರ ಓರಿಸ್ಸಾ ಹೈಕೋರ್ಟ್ ಸಾಕ್ಷ್ಯಗಳ ಕೊರತೆಯ ನೆಪದಿಂದ ಜೀವಾವಧಿ ಶಿಕ್ಷೆಯನ್ನು ಎರಡು ವರ್ಷಕ್ಕೆ ಇಳಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು.
ಸಾರಂಗಿಯವರು ಹಲವು ಸಂದರ್ಶನಗಳಲ್ಲಿ ಈಗಲೂ ತಾವು ಕ್ರೈಸ್ತ ಮಿಷನರಿಗಳಿಗೆ ವಿರುದ್ಧವಾಗಿದ್ದೇನೆಂದು ಬಹಿರಂಗವಾಗಿ ಎಂದು ಹೇಳಿಕೊಂಡಿದ್ದಾರೆ. ಇಂತಹ ವ್ಯಕ್ತಿಯನ್ನು ಹೀರೊ ಮಾಡಲು ಮಾಧ್ಯಮಗಳು ಹೊರಟಿವೆ. ಸಂಪೂರ್ಣ ಪರಾಮರ್ಶಿಸುವ ಗುಣವನ್ನು ಎಂದೋ ಕಳೆದುಕೊಂಡ ಬಹಳಷ್ಟು ಭಾರತೀಯರು ಅದಕ್ಕೆ ದನಿಗೂಡಿಸಿ ಬಹುಪರಾಕ್ ಹೇಳುತ್ತಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)
ಇದನ್ನೂ ಓದಿ: ಬ್ರಾಹ್ಮಣ್ಯದ ಉಗಮ ಮತ್ತು ಹೂರಣ: ಅಂದು-ಇಂದು – ಜಿ ಎನ್ ನಾಗರಾಜ್
ಹೀರೊ ಯಾವತ್ತಿಗು ಹೀರೊನೆ,
ಅವರ ಸರಳತೆ ಹಾಗು ಜೀವನ ಶೈಲಿಯ ಬಗ್ಗೆ ತಿಳಿದು ಇಂತಹ ವ್ಯಕ್ತಿಯನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡಿ ಗೆಲ್ಲಿಸಿದಂತಹ ವಿಷಯ ಬಹಳ ಮಹತ್ವದಾಗಿತ್ತು,ನಿಜವಾದ ಅಚ್ಚೆ ದಿನ ಇದಾಗಿತ್ತು ಹೀಗಿದ್ದು ಅವರು ಸಂಘ ಪರಿವಾರ,ಭಜರಂಗದಳದ ವ್ಯಕ್ತಿಯೆಂಬ ಮಾಹಿತಿ ತಿಳಿದು ಇನ್ನಷ್ಟು ಹೆಮ್ಮೆ ಮೂಡುತ್ತಿದೆ ನಿಮ್ಮ ಈ ಮಾಹಿತಿಗಾಗಿ ಧನ್ಯವಾದಗಳು.
ಸಂಘ ಶಕ್ತಿಗೆ ಜಯವಾಗಲಿ
ಜೈ ಭಜರಂಗದಳ???