ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ ಎಂಬ ಸಚಿವ ಸುಧಾಕರ್ ರವರ ವಿವಾದಾತ್ಮಕ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿಯೇ ಆ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮರ್ಥಿಸಿಕೊಂಡಿದ್ದಾರೆ.
ಸುದ್ದಿವಾಹಿನಿ ಎಎನ್ಐ ಜೊತೆ ಮಾತನಾಡಿರುವ ಸಿ.ಟಿ ರವಿಯವರು, “ಸುಧಾಕರ್ರವರು ಹೇಳಿಕೆ ಗಮನಿಸಿದೆ. ಎಲ್ಲ ಮಹಿಳೆಯರು ಹಾಗಿಲ್ಲ. ಆದರೆ ಸ್ವಲ್ಪ ಓದಿರುವವರು, ಕೆಲಸ ಮಾಡುವವರು, ಮುಖ್ಯವಾಗಿ ಐಟಿ-ಬಿಟಿಯಲ್ಲಿ ಕೆಲಸ ಮಾಡುವವರ ಮನಸ್ಥಿತಿ ಹೆಚ್ಚು ಹಾಗಾಗಿದೆ. ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯವಾಗಿದ್ದು ನಾವು ಇದರ ಬಗ್ಗೆ ಆಲೋಚಿಸುತ್ತೇವೆ” ಎಂದಿದ್ದಾರೆ.
ಮುಂದುವರಿದು ಸಣ್ಣ ಕುಟುಂಬಗಳು ಮತ್ತು ಪಾಶ್ಚಿಮಾತ್ಯ ಪ್ರಭಾವ ಹೆಚ್ಚಾದ ಕಾರಣಕ್ಕೆ ಹೀಗಾಗಿದೆ. ಆದರೆ ಎಲ್ಲ ಮಹಿಳೆಯರು ಹಾಗಿಲ್ಲ. ಇಂದಿಗೂ ಹೆಚ್ಚು ಭಾರತೀಯ ಮಹಿಳೆಯರು ಕುಟುಂಬದ ಮೇಲೆ ನಂಬಿಕೆಯಿಟ್ಟಿದ್ದಾರೆ. ನಮ್ಮ ದೇಶ ಅಮೆರಿಕ ಅಥವಾ ಇಂಗ್ಲೆಂಡ್ ರೀತಿಯದ್ದಲ್ಲ… ಇದರ ಬಗ್ಗೆ ನಾವು ಆಲೋಚಿಸಬೇಕಾಗಿದೆ ಎಂದಿದ್ದಾರೆ.
#WATCH | Every woman is not like this… It is happening because of western influence and micro families. In India, we still have faith in family unlike countries such as USA & UK: BJP General Secretary leader CT Ravi on Karnataka Minister K Sudhakar's statement on women pic.twitter.com/JppXi4yaUo
— ANI (@ANI) October 11, 2021
ಅಕ್ಟೋಬರ್ 10 ರಂದು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ ಭಾನುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘‘ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದ ನಂತರ ಕೂಡಾ ಅವರು ಜನ್ಮ ನೀಡಲು ಇಷ್ಟಪಡುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಾರೆ, ಇದು ಸರಿಯಲ್ಲ. ಭಾರತೀಯ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವ ಹೆಚ್ಚಾಗಿದೆ. ಜನರು ತಮ್ಮ ಹೆತ್ತವರು ತಮ್ಮೊಂದಿಗೆ ಇರಲು ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ.’’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.
‘‘ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದ ನಂತರ ಕೂಡಾ ಅವರು ಜನ್ಮ ನೀಡಲು ಇಷ್ಟಪಡುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಾರೆ, ಇದು ಒಳ್ಳೆಯದಲ್ಲ’’
ಆರೋಗ್ಯ ಸಚಿವ ಡಾ.ಕೆ. ಸುಧಾಕರ್( @mla_sudhakar ) ವಿವಾದಾತ್ಮಕ ಹೇಳಿಕೆ.#NaanuGauri #ModernWomen #WesternCulture pic.twitter.com/MKooxU2ttR
— Naanu Gauri (@naanugauri) October 11, 2021
ಸುಧಾಕರ್ರವರ ಹೇಳಿಕೆಗೆ ಸಮಾಜದ ಎಲ್ಲಾ ವಿಭಾಗಗಳಿಂದ ವ್ಯಾಪಕ ಟೀಕೆ ಕೇಳಿಬಂದಿತ್ತು. ಮಹಿಳೆಯರು ಹೀಗೆ ಇರಬೇಕೆಂದು ನಿರ್ಧರಿಸುವ ಹಕ್ಕು ನಿಮಗೆ ಕೊಟ್ಟವರ್ಯಾರು ಎಂದು ಕಿಡಿಕಾರಿದ್ದರು. ತದನಂತರ ಸ್ಪಷ್ಟೀಕರಣ ನೀಡಿದ್ದ ಸಚಿವರು, “ನಾವು ಇಂದು ಎದುರಿಸುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಮ್ಮ ಭಾರತೀಯ ಕುಟುಂಬ ಮೌಲ್ಯ ವ್ಯವಸ್ಥೆಯು ಹೇಗೆ ಪರಿಹರಿಸಬಹುದು ಎಂಬುದರ ಬಗೆ ಮಾತನಾಡಲು ಬಯಸಿದ್ದೆ. ಮಹಿಳೆಯರನ್ನು ಪ್ರತ್ಯೇಕಗೊಳಿಸುವ ಉದ್ದೇಶ ಹೊಂದಿರಲಿಲ್ಲ” ಎಂದಿದ್ದರು.
ಸಚಿವರು ತಮ್ಮ ಸ್ತ್ರೀದ್ವೇಷದ ಹೇಳಿಕೆಯನ್ನು ಹಿಂಪಡೆದು ಕ್ಷಮೆ ಕೇಳಬೇಕೆಂದು ಸ್ವರಾಜ್ಯ ಇಂಡಿಯಾ ಪಕ್ಷ ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸ್ವರಾಜ್ ಇಂಡಿಯಾ ಬೆಂಗಳೂರು ಅಧ್ಯಕ್ಷೆ ನಿಶಾ ಗೂಳೂರು, “ಸಚಿವರ ಹೇಳಿಕೆ ಸತ್ಯದಿಂದ ಕೂಡಿಲ್ಲ. ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವಂತಿದೆ. ಅವರು ಮಹಿಳೆಯರನ್ನು ಮತ್ತು ಅವರ ಸಂತಾನೋತ್ಪತ್ತಿಯ ಹಕ್ಕುಗಳನ್ನು ಹೇಗೆ ನೋಡುತ್ತಾರೆ ಎಂಬುದರ ಪ್ರತಿಬಿಂಬ ಆ ಹೇಳಿಕೆ” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
Swaraj India strongly condemns anti-women statement made by Karnataka Health Minister @mla_sudhakar Dr. Sudhakar K and demands immediate public apology@_SwarajIndia @swaraj_abhiyan @Youth4Swaraj @swarajchristina @_YogendraYadav @aviksahaindia @SwarajAbhiyanKA @swarajindia_KA pic.twitter.com/jWMxWd7FEj
— Manohar Elavarthi/ ಮನೋಹರ್ ಎಲವರ್ತಿ (@manoharban) October 11, 2021
ರಾಜಕಾರಣಿಗಳ ಅತ್ಯಂತ ಅಸಹ್ಯಕರವಾದ ಸ್ತ್ರೀದ್ವೇಷ, ಲೈಂಗಿಕತೆಯ ಹೇಳಿಕೆಗಳನ್ನು ನೀಡಿದಾಗ ಅದರ ವಿರುದ್ಧ ಹೋರಾಡುವುದು ಬಹಳ ಮುಖ್ಯ, ಇದರಿಂದ ಮಹಿಳೆಯರ ದನಿ ಅಡಗಿಸಲು ಸಾಧ್ಯವಿಲ್ಲ. ಸ್ವರಾಜ್ ಇಂಡಿಯಾ ಮಹಿಳಾ ವಿರೋಧಿ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಈ ಸಚಿವರು ತಕ್ಷಣ ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿಯೂ ಸಚಿವರ ಹೇಳಿಕೆಗೆ ತೀವ್ರ ವಿರೋಧಗಳು ದಾಖಲಾಗಿವೆ.
ಪ್ರಶ್ನೆ ಯಾರ ಬಗ್ಗೆ ಹಾಂಗೆ ಮಾತಾಡಿದ್ರಿ ಅಂತಲ್ಲ, ನಿಮ್ಗೆ ಹಾಂಗೆ ಮಾತಾಡಕ್ಕೆ ಏನ್ ಹಕ್ಕಿದೆ ಅಂತ. ನಾನು ಕಟ್ಗೊಳಲ್ಲ, ಹೆರಲ್ಲ ಅಂದ್ರೆ ನಾನ್ ಹೇಗಪ್ಪಾ ಅಪರಾಧಿ ಆಗ್ತೀನಿ. ಎಲ್ಲಾ ಹೆಣ್ಮಕ್ಳು ಕಟ್ಕೊಳೋದು, ಹೆರೋದು ಕಂಪಲ್ಸರಿ ಅಂತ ಕಾನೂನಿದ್ಯಾ ಈ ದೇಶದಲ್ಲಿ? ಯಾರೋ ಎನೋ ಅವರವರ ಜೀವ್ನ ಡಿಸೈಡ್ ಮಾಡ್ಕೊಂಡ್ರೆ ನಿಮ್ಮ್ ಗಂಟೇನ್ ಹೋಗತ್ತೆ? https://t.co/d7mkeRLa4H
— ಮೈತ್ರೇಯಿ ಹೆಗಡೆ| Maitreyi Hegde | (@maitrihegde18) October 12, 2021
ಇದನ್ನೂ ಓದಿ: ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್ ವಿವಾದಾತ್ಮಕ ಹೇಳಿಕೆ
Bitter truth s said by sudhakar