Homeಅಂಕಣಗಳುಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ?

- Advertisement -
- Advertisement -

‘ನನ್ನ ತಾಯಿನುಡಿಯು ನಿನ್ನ ಪ್ರಭುತ್ವದ ಅಡಿಪಾಯಗಳನ್ನು ಅಲ್ಲಾಡಿಸತೊಡಗಿದ್ದರೆ, ನೀನು ನಿನ್ನ ರಾಜ್ಯವನ್ನು ನನ್ನ ನೆಲದ ಮೇಲೆ ಕಟ್ಟಿದ್ದೀಯಾ ಎಂದೇ ಅರ್ಥ’- ತುರ್ಕಿ ಸರ್ಕಾರ 1992ರಲ್ಲಿ ಹತ್ಯೆ ಮಾಡಿದ ಕುರ್ಡಿಶ್ ಬರೆಹಗಾರ ಮೂಸಾ ಅ್ಯಂಟರ್‌ನ ಈ ನುಡಿಗಳಲ್ಲಿ ಸಾರ್ವತ್ರಿಕ ಸತ್ಯವೊಂದು ನಿಹಿತವಾಗಿದೆ.

ರಾಜಕೀಯ ಜನತಾಂತ್ರಿಕ ವ್ಯವಸ್ಥೆಯನ್ನು ಒಂದೆಡೆ ಗೌರವಿಸುತ್ತ, ಮತ್ತೊಂದೆಡೆ ಭಾಷಾ ಜನತಂತ್ರವನ್ನು ತುಳಿಯುವುದು ಆಷಾಡಭೂತಿತನ ಅಲ್ಲವೇ? ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ’ ಎಂಬುದು ಪರಿಶುದ್ಧ ಫ್ಯಾಸಿಸಮ್ಮೇ ವಿನಾ ಜನತಂತ್ರ ಅಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಸಾಂಸ್ಕೃತಿಕ ರಾಷ್ಟ್ರವಾದದ ಘೋಷಣೆ ಕೋಮುವಾದ- ಬಹುಸಂಖ್ಯಾತವಾದದ ಹೆಗ್ಗುರುತು.

ನರೇಂದ್ರ ಮೋದಿ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದೀ-ಹಿಂದು-ಹಿಂದುತ್ವವಾದಿ ಚಿಂತನೆಯ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದೀ ಭಾಷೆಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ಕಳೆದ ಐದಾರು ವರ್ಷಗಳಲ್ಲಿ ‘ಹಿಂದೀ ಸಾಮ್ರಾಜ್ಯಶಾಹಿ’ಯ ಆತಂಕವನ್ನು ಹುಟ್ಟಿಹಾಕಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ದಾಖಲಿಸಿರುವ ಆಡು ಭಾಷೆಗಳು 19,569. ಹತ್ತು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 40. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 60. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆಡುವ ಭಾಷೆಗಳ ಸಂಖ್ಯೆ 122. ಸಂಸ್ಕೃತವನ್ನು ತಮ್ಮ ತಾಯಿನುಡಿ ಎಂದು ಈ ಜನಗಣತಿಯಲ್ಲಿ ಬರೆಯಿಸಿರುವವರ ಸಂಖ್ಯೆ 24,821. ಕೇಂದ್ರ ಸರ್ಕಾರದ ಭಾಷಾ ಅಭಿವೃದ್ಧಿ ಯೋಜನೆಗಳ ಸಿಂಹಪಾಲು ಸಲ್ಲುತ್ತಿರುವುದು ಸಂಸ್ಕೃತಕ್ಕೇ.

19ನೆಯ ಶತಮಾನದಲ್ಲಿ ಮುಸಲ್ಮಾನರ ಭಾಷೆಯೆಂದು ಹಣೆಪಟ್ಟಿ ಹಚ್ಚಲಾದ ಉರ್ದುವನ್ನು (ಪರ್ಷಿಯನೀಕೃತ ಹಿಂದುಸ್ತಾನಿ) ತೊಲಗಿಸಿ ಅದರ ಜಾಗದಲ್ಲಿ ಸಂಸ್ಕೃತೀಕೃತ ಹಿಂದುಸ್ತಾನಿಯಾದ ಹಿಂದಿಗೆ ಪಟ್ಟ ಕಟ್ಟುವ ಮೇಲಾಟ ಜರುಗಿತು. ಉರ್ದು ಮುಸ್ಲಿಮ್ ಆದರೆ ಹಿಂದೀ ಹಿಂದೂ ಆಯಿತು. ಹಿಂದೀ ಭಾಷಿಕರ ಸಂಖ್ಯೆಯನ್ನು ಉಬ್ಬಿಸಿ ಸತ್ಯದೂರ ಕಥನ ಕಟ್ಟಲಾಯಿತು. ಅಂದಿನ ಬ್ರಿಟಿಷ್ ಆಡಳಿತವನ್ನು ನಂಬಿಸುವ ಈ ತಂತ್ರ ಫಲ ನೀಡಿತು. ಉರ್ದು ಅದಾಗಲೇ ಆಡಳಿತ ಭಾಷೆಯಾಗಿತ್ತು. ಅದರೊಂದಿಗೆ ಹಿಂದಿಗೂ ಆಡಳಿತ ಭಾಷೆಯ ಸ್ಥಾನ ಗಿಟ್ಟಿತು. ಅಲ್ಲಿಯತನಕ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಕೇವಲ ಉರ್ದುವಿನಲ್ಲೇ ಇರುತ್ತಿದ್ದ ಕಾರಣ, ಆ ಭಾಷೆಯನ್ನು ಅರಿಯದ ಜನಕ್ಕೆ ದಾಖಲೆಗಳಲ್ಲಿ ಏನು ಬರೆದಿದೆಯೆಂದೇ ಅರ್ಥವಾಗುತ್ತಿರಲಿಲ್ಲ. ದೇಶವಿಭಜನೆಯ ನಂತರ ಇದೇ ಪರಿಸ್ಥಿತಿಯನ್ನು ಹಿಂದೀ ಭಾಷಿಕರಲ್ಲದವರು ಎದುರಿಸಬೇಕಾಯಿತು. ಉದಾಹರಣೆಗೆ ಐಎಎಸ್-ಐಪಿಎಸ್ ಮುಂತಾದ ಸಿವಿಲ್ ಸರ್ವೀಸಸ್ ಪ್ರವೇಶ ಪರೀಕ್ಷೆಗಳು, ಐಐಟಿ ಮತ್ತು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳನ್ನು ಹಿಂದಿಯ ವಿನಾ ಉಳಿದ ಯಾವುದೇ ಮಾತೃಭಾಷಾ ಮಾಧ್ಯಮಗಳಲ್ಲಿ ಬರೆಯುವಂತಿಲ್ಲ. ಅಲಹಾಬಾದ್ ಹೈಕೋರ್ಟ್ ತನ್ನ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಆದರೆ ದಕ್ಷಿಣ ರಾಜ್ಯಗಳ ಹೈಕೋರ್ಟುಗಳು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನಿರಾಕರಿಸಲಾಗಿದೆ. ಕಡೆಗೆ ಸಂವಿಧಾನದ ಪಠ್ಯದ ವಿಷಯದಲ್ಲೂ ಅಷ್ಟೇ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪಠ್ಯಗಳು ಮಾತ್ರವೇ ಸರ್ಕಾರದಿಂದ ಮಾನ್ಯತೆ ಪಡೆದ ಪಠ್ಯಗಳು.

ಹಿಂದಿಯ ದೈತ್ಯ ರಥಚಕ್ರಗಳಡಿ ದಕ್ಷಿಣದ ಭಾಷೆಗಳಿರಲಿ, ಉತ್ತರ ಭಾರತದ ತಾಯಿನುಡಿಗಳೂ ನುಗ್ಗಾಗತೊಡಗಿವೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚು ತಲುಪಿವೆ. ಭೋಜಪುರಿ, ಅವಧಿ, ಹರಿಯಾಣ್ವಿ, ಆದಿವಾಸಿ ಭಾರತದ ಗೊಂಡಿ, ಒರಾನಿ, ಸಂತಾಲ್, ಮುಂದಾರಿ ಇತ್ಯಾದಿ ಭಾಷೆಗಳು, ಬಿಹಾರ, ಝಾಖರ್ಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತಾಡುವ ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿ ಹಿಂದೀ ಹೇರಿಕೆ- ದಬ್ಬಾಳಿಕೆಯ ಕಾರಣ ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮಾತಾಡುವವರ ಸಂಖ್ಯೆ 3.80 ಕೋಟಿ ಮಂದಿ. ವಿಶ್ವದ 29ನೆಯ ಅತಿಹೆಚ್ಚು ಜನಸಂಖ್ಯೆ ಮಾತಾಡುವ ಭಾಷೆಯಿದು. ಫಿಜಿ ಹಿಂದೀ ಎಂಬ ಹೆಸರು ಪಡೆದು ಆ ದೇಶದಲ್ಲಿ ಈ ನುಡಿಗಟ್ಟು ಬದುಕಿರುವುದು ವಿಡಂಬನೆಯೇ ಸರಿ. ಹಾಗೆಯೇ ಭೋಜಪುರಿ ಭಾಷಿಕರ ಸಂಖ್ಯೆ ನಾಲ್ಕು ಕೋಟಿ. ಇದನ್ನೂ ಹಿಂದಿಯ ಲೆಕ್ಕಕ್ಕೆ ಸೇರಿಸಿ ಎಣಿಸಿಕೊಳ್ಳಲಾಗಿದೆ. ಈ ಎಲ್ಲವೂ ಹಿಂದಿ ಭಾಷೆಯ ಭಿನ್ನ ನುಡಿಗಟ್ಟುಗಳು ಎಂಬ ಸುಳ್ಳನ್ನು ಪ್ರಚಾರ ಮಾಡಿಕೊಂಡು ಬರಲಾಗಿದೆ. ಈ ಭಾಷಿಕರನ್ನೂ ಹಿಂದಿ ಮಾತೃಭಾಷಿಕರೆಂಬ ಲೆಕ್ಕಕ್ಕೆ ಸೇರಿಸಿಕೊಂಡಿರುವುದು ಜನಗಣತಿಗಳ ಮಹಾಮೋಸ. ಮುತ್ತಿಗೆ ಹಾಕಿರುವ ಹಿಂದಿ ದಬ್ಬಾಳಿಕೆಯನ್ನು ಈ ನುಡಿಗಟ್ಟುಗಳು ಒಪ್ಪಿಕೊಳ್ಳತೊಡಗಿವೆ. ತಮ್ಮ ಭಾಷೆ ಹಿಂದಿ ಎಂದೇ ಬರೆಯಿಸತೊಡಗಿವೆ. ಈ ವಂಚನೆಯ ಲೆಕ್ಕ ಹಿಡಿದರೆ ಅಸಲಿ ಹಿಂದಿ ಸಮುದ್ರದ ಪುಟ್ಟ ದ್ವೀಪಗಳಾಗಿರುವ ಅವುಗಳಿಗೆ ಕನ್ನಡ, ತೆಲುಗು, ತಮಿಳು ಮಲೆಯಾಳದಂತಹ ರಕ್ಷಣೆ, ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಶರಣಾಗದೆ ವಿಧಿಯಿಲ್ಲ. ಹೀಗಾಗಿ ಹೊಸ್ತಿಲೊಳಗಣ ಭಾಷೆಗಳಾಗಿಯೂ, ಅಡಿಗೆ ಮನೆ, ಹಿತ್ತಿಲ ಭಾಷೆಗಳಾಗಿಯೂ ಮೂಲೆಗುಂಪಾಗತೊಡಗಿವೆ. ಹಿಂದಿ ಭಾಷಿಕರ ಪ್ರಮಾಣ ಶೇ.43.63 ರಿಂದ ಶೇ.20ಕ್ಕೆ ಕುಸಿಯುತ್ತದೆ.

ಹಿಂದಿ
Courtesy: Facebook

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ? ಉದಾಹರಣೆಗೆ 2019ರಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಹಿಂದಿ ಪರೀಕ್ಷೆಗಳಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ಫೇಲಾದರು. ಈ ಬೆಳವಣಿಗೆಯ ಹಿಂದಿನ ಕಟುಸತ್ಯವೆಂದರೆ ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಅವರ ಮಾತೃಭಾಷೆಗಳು ನೂರಾರು ಇಲ್ಲವೇ ಸಾವಿರಾರು ವರ್ಷಗಳಿಂದ ವಿಕಾಸಗೊಂಡು ಭಾಷಿಕರ ಬಾಯಲ್ಲಿ ನಲಿಯುವಂತಹವು. ಅವರ ಬದುಕುಗಳೊಂದಿಗೆ ಬೆಸೆದುಕೊಂಡಂತಹವು. ಸಂಸ್ಕೃತ ಭೂಯಿಷ್ಟ ಹಿಂದಿ ಭಾಷೆಗೆ ಹೋಲಿಸಿದರೆ ಸುಲಿದ ಬಾಳೆ ಅಥವಾ ತಣಿದ ಉಷ್ಣದ ಹಾಲಿನಂತಹವು.

ಭಾಷೆಯೊಂದು ಸಾಯುವುದೆಂದರೆ ಸಂವಹನದ ಮಾಧ್ಯಮವೊಂದು ಸತ್ತಂತೆ. ಆ ಭಾಷೆಯನ್ನು ಆಡುವ ಜನರ ಇತಿಹಾಸ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಸ್ಕೃತಿಯ ಮುಂದುವರಿಕೆ ಮುರಿದುಬಿದ್ದಂತೆ. ರಾಜಸ್ತಾನಿ ಭಾಷೆಯಲ್ಲಿ ಒಂಟೆಗೆ 45 ಭಿನ್ನ ಹೆಸರುಗಳಿವೆಯಂತೆ. ಅಂತೆಯೇ ತಿಂಗಳು ತಿಂಗಳಿಗೂ ಬದಲಾಗುವ ಮೋಡಗಳಿಗೂ ಅಷ್ಟೇ ಸಂಖ್ಯೆಯ ಹೆಸರುಗಳಿವೆಯಂತೆ. ಈಗ ಅಳಿದುಹೋಗಿರುವ ಭಾಷೆಗಳಲ್ಲೂ ಇಂತಹ ಸಿರಿವಂತಿಕೆ ಇದ್ದಿರಬಹುದು. ಕಳೆದ ಐವತ್ತು ವರ್ಷಗಳಲ್ಲಿ 220 ಭಾರತೀಯ ಭಾಷೆಗಳನ್ನು ಕೊಂದು ಹುಗಿಯಲಾಗಿದೆ.

ಹಿಂದಿ ಭಾಷಿಕರ ಪ್ರಮಾಣ ಶೇ.43 ಎಂದು ವಾದಕ್ಕಾಗಿ ಒಂದು ಗಳಿಗೆ ಒಪ್ಪಿಕೊಂಡರೂ, ಹಿಂದಿ ಮಾತೃಭಾಷೆ ಅಲ್ಲದವರ ಪ್ರಮಾಣ ಶೇ.57ರಷ್ಟಿದೆ ಎಂದಾಯಿತು. ಶೇ. 20 ಮಂದಿ ಆಡುವ ಭಾಷೆಯನ್ನು ಶೇ.80 ಮಂದಿಯ ಮೇಲೆ ಹೇರುವುದು ಸಾಂಸ್ಕೃತಿಕ ಸರ್ವಾಧಿಕಾರ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....