Homeಅಂಕಣಗಳುಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಹಿಂದಿ ಹೇರಿಕೆಯೆಂಬ ಸಾಂಸ್ಕೃತಿಕ ಸರ್ವಾಧಿಕಾರ! ದಕ್ಷಿಣದ ಭಾಷೆಗಳಿರಲಿ, ಉತ್ತರದ ತಾಯ್ನುಡಿಗಳನ್ನೂ ತಿಂದು ತೇಗಿದೆ ಹಿಂದಿ!

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ?

- Advertisement -
- Advertisement -

‘ನನ್ನ ತಾಯಿನುಡಿಯು ನಿನ್ನ ಪ್ರಭುತ್ವದ ಅಡಿಪಾಯಗಳನ್ನು ಅಲ್ಲಾಡಿಸತೊಡಗಿದ್ದರೆ, ನೀನು ನಿನ್ನ ರಾಜ್ಯವನ್ನು ನನ್ನ ನೆಲದ ಮೇಲೆ ಕಟ್ಟಿದ್ದೀಯಾ ಎಂದೇ ಅರ್ಥ’- ತುರ್ಕಿ ಸರ್ಕಾರ 1992ರಲ್ಲಿ ಹತ್ಯೆ ಮಾಡಿದ ಕುರ್ಡಿಶ್ ಬರೆಹಗಾರ ಮೂಸಾ ಅ್ಯಂಟರ್‌ನ ಈ ನುಡಿಗಳಲ್ಲಿ ಸಾರ್ವತ್ರಿಕ ಸತ್ಯವೊಂದು ನಿಹಿತವಾಗಿದೆ.

ರಾಜಕೀಯ ಜನತಾಂತ್ರಿಕ ವ್ಯವಸ್ಥೆಯನ್ನು ಒಂದೆಡೆ ಗೌರವಿಸುತ್ತ, ಮತ್ತೊಂದೆಡೆ ಭಾಷಾ ಜನತಂತ್ರವನ್ನು ತುಳಿಯುವುದು ಆಷಾಡಭೂತಿತನ ಅಲ್ಲವೇ? ‘ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಪಕ್ಷ, ಒಬ್ಬ ನಾಯಕ’ ಎಂಬುದು ಪರಿಶುದ್ಧ ಫ್ಯಾಸಿಸಮ್ಮೇ ವಿನಾ ಜನತಂತ್ರ ಅಲ್ಲ. ಹಿಂದಿ-ಹಿಂದು-ಹಿಂದುಸ್ತಾನ ಎಂಬ ಸಾಂಸ್ಕೃತಿಕ ರಾಷ್ಟ್ರವಾದದ ಘೋಷಣೆ ಕೋಮುವಾದ- ಬಹುಸಂಖ್ಯಾತವಾದದ ಹೆಗ್ಗುರುತು.

ನರೇಂದ್ರ ಮೋದಿ ಸರ್ಕಾರದ ಸೈದ್ಧಾಂತಿಕ ಬೇರುಗಳು ಹಿಂದೀ-ಹಿಂದು-ಹಿಂದುತ್ವವಾದಿ ಚಿಂತನೆಯ ಮೂಲದವು. ಹೀಗಾಗಿ ಅವರು ಅಧಿಕಾರ ಹಿಡಿದೊಡನೆ ಹಿಂದೀ ಭಾಷೆಗೆ ದೊರೆಯತೊಡಗಿರುವ ಅಗ್ರಪ್ರಾಶಸ್ತ್ಯವು ಕಳೆದ ಐದಾರು ವರ್ಷಗಳಲ್ಲಿ ‘ಹಿಂದೀ ಸಾಮ್ರಾಜ್ಯಶಾಹಿ’ಯ ಆತಂಕವನ್ನು ಹುಟ್ಟಿಹಾಕಿದೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ದಾಖಲಿಸಿರುವ ಆಡು ಭಾಷೆಗಳು 19,569. ಹತ್ತು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 40. ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಮಾತಾಡುವ ಭಾಷೆಗಳು 60. ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಆಡುವ ಭಾಷೆಗಳ ಸಂಖ್ಯೆ 122. ಸಂಸ್ಕೃತವನ್ನು ತಮ್ಮ ತಾಯಿನುಡಿ ಎಂದು ಈ ಜನಗಣತಿಯಲ್ಲಿ ಬರೆಯಿಸಿರುವವರ ಸಂಖ್ಯೆ 24,821. ಕೇಂದ್ರ ಸರ್ಕಾರದ ಭಾಷಾ ಅಭಿವೃದ್ಧಿ ಯೋಜನೆಗಳ ಸಿಂಹಪಾಲು ಸಲ್ಲುತ್ತಿರುವುದು ಸಂಸ್ಕೃತಕ್ಕೇ.

19ನೆಯ ಶತಮಾನದಲ್ಲಿ ಮುಸಲ್ಮಾನರ ಭಾಷೆಯೆಂದು ಹಣೆಪಟ್ಟಿ ಹಚ್ಚಲಾದ ಉರ್ದುವನ್ನು (ಪರ್ಷಿಯನೀಕೃತ ಹಿಂದುಸ್ತಾನಿ) ತೊಲಗಿಸಿ ಅದರ ಜಾಗದಲ್ಲಿ ಸಂಸ್ಕೃತೀಕೃತ ಹಿಂದುಸ್ತಾನಿಯಾದ ಹಿಂದಿಗೆ ಪಟ್ಟ ಕಟ್ಟುವ ಮೇಲಾಟ ಜರುಗಿತು. ಉರ್ದು ಮುಸ್ಲಿಮ್ ಆದರೆ ಹಿಂದೀ ಹಿಂದೂ ಆಯಿತು. ಹಿಂದೀ ಭಾಷಿಕರ ಸಂಖ್ಯೆಯನ್ನು ಉಬ್ಬಿಸಿ ಸತ್ಯದೂರ ಕಥನ ಕಟ್ಟಲಾಯಿತು. ಅಂದಿನ ಬ್ರಿಟಿಷ್ ಆಡಳಿತವನ್ನು ನಂಬಿಸುವ ಈ ತಂತ್ರ ಫಲ ನೀಡಿತು. ಉರ್ದು ಅದಾಗಲೇ ಆಡಳಿತ ಭಾಷೆಯಾಗಿತ್ತು. ಅದರೊಂದಿಗೆ ಹಿಂದಿಗೂ ಆಡಳಿತ ಭಾಷೆಯ ಸ್ಥಾನ ಗಿಟ್ಟಿತು. ಅಲ್ಲಿಯತನಕ ನ್ಯಾಯಾಲಯದ ದಾಖಲೆ ದಸ್ತಾವೇಜುಗಳು ಕೇವಲ ಉರ್ದುವಿನಲ್ಲೇ ಇರುತ್ತಿದ್ದ ಕಾರಣ, ಆ ಭಾಷೆಯನ್ನು ಅರಿಯದ ಜನಕ್ಕೆ ದಾಖಲೆಗಳಲ್ಲಿ ಏನು ಬರೆದಿದೆಯೆಂದೇ ಅರ್ಥವಾಗುತ್ತಿರಲಿಲ್ಲ. ದೇಶವಿಭಜನೆಯ ನಂತರ ಇದೇ ಪರಿಸ್ಥಿತಿಯನ್ನು ಹಿಂದೀ ಭಾಷಿಕರಲ್ಲದವರು ಎದುರಿಸಬೇಕಾಯಿತು. ಉದಾಹರಣೆಗೆ ಐಎಎಸ್-ಐಪಿಎಸ್ ಮುಂತಾದ ಸಿವಿಲ್ ಸರ್ವೀಸಸ್ ಪ್ರವೇಶ ಪರೀಕ್ಷೆಗಳು, ಐಐಟಿ ಮತ್ತು ಅಖಿಲ ಭಾರತ ವೈದ್ಯ ವಿಜ್ಞಾನಗಳ ಸಂಸ್ಥೆಗಳ ಪ್ರವೇಶ ಪರೀಕ್ಷೆಗಳನ್ನು ಹಿಂದಿಯ ವಿನಾ ಉಳಿದ ಯಾವುದೇ ಮಾತೃಭಾಷಾ ಮಾಧ್ಯಮಗಳಲ್ಲಿ ಬರೆಯುವಂತಿಲ್ಲ. ಅಲಹಾಬಾದ್ ಹೈಕೋರ್ಟ್ ತನ್ನ ವ್ಯವಹಾರಗಳನ್ನು ಹಿಂದಿಯಲ್ಲಿ ನಡೆಸಲು ಅವಕಾಶ ನೀಡಲಾಗಿದೆ. ಆದರೆ ದಕ್ಷಿಣ ರಾಜ್ಯಗಳ ಹೈಕೋರ್ಟುಗಳು ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹರಿಸಲು ಅವಕಾಶ ನಿರಾಕರಿಸಲಾಗಿದೆ. ಕಡೆಗೆ ಸಂವಿಧಾನದ ಪಠ್ಯದ ವಿಷಯದಲ್ಲೂ ಅಷ್ಟೇ. ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಪಠ್ಯಗಳು ಮಾತ್ರವೇ ಸರ್ಕಾರದಿಂದ ಮಾನ್ಯತೆ ಪಡೆದ ಪಠ್ಯಗಳು.

ಹಿಂದಿಯ ದೈತ್ಯ ರಥಚಕ್ರಗಳಡಿ ದಕ್ಷಿಣದ ಭಾಷೆಗಳಿರಲಿ, ಉತ್ತರ ಭಾರತದ ತಾಯಿನುಡಿಗಳೂ ನುಗ್ಗಾಗತೊಡಗಿವೆ. ಉತ್ತರ ಮತ್ತು ಮಧ್ಯಭಾರತದ 50ಕ್ಕೂ ಹೆಚ್ಚು ಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡು ಅಳಿವಿನ ಅಂಚು ತಲುಪಿವೆ. ಭೋಜಪುರಿ, ಅವಧಿ, ಹರಿಯಾಣ್ವಿ, ಆದಿವಾಸಿ ಭಾರತದ ಗೊಂಡಿ, ಒರಾನಿ, ಸಂತಾಲ್, ಮುಂದಾರಿ ಇತ್ಯಾದಿ ಭಾಷೆಗಳು, ಬಿಹಾರ, ಝಾಖರ್ಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಾತಾಡುವ ಮಗಧಿ, ಮೈಥಿಲಿ, ಬಿಹಾರಿ, ಚಾದ್ರಿ, ಪಹಾಡಿ, ಗಢವಾಲಿ, ಡೋಗ್ರಿ, ಆಂಗಿಕ, ಬುಂದೇಲಿ, ರಾಜಸ್ತಾನಿ, ಛತ್ತೀಸಗಢೀ, ಬ್ರಜಭಾಷಾ ಹಾಗೂ ಖಡೀಬೋಲಿ ಹಿಂದೀ ಹೇರಿಕೆ- ದಬ್ಬಾಳಿಕೆಯ ಕಾರಣ ತಮ್ಮ ಸ್ಥಾನಮಾನ ಕಳೆದುಕೊಂಡಿವೆ. ಅವಧಿ ಮಾತಾಡುವವರ ಸಂಖ್ಯೆ 3.80 ಕೋಟಿ ಮಂದಿ. ವಿಶ್ವದ 29ನೆಯ ಅತಿಹೆಚ್ಚು ಜನಸಂಖ್ಯೆ ಮಾತಾಡುವ ಭಾಷೆಯಿದು. ಫಿಜಿ ಹಿಂದೀ ಎಂಬ ಹೆಸರು ಪಡೆದು ಆ ದೇಶದಲ್ಲಿ ಈ ನುಡಿಗಟ್ಟು ಬದುಕಿರುವುದು ವಿಡಂಬನೆಯೇ ಸರಿ. ಹಾಗೆಯೇ ಭೋಜಪುರಿ ಭಾಷಿಕರ ಸಂಖ್ಯೆ ನಾಲ್ಕು ಕೋಟಿ. ಇದನ್ನೂ ಹಿಂದಿಯ ಲೆಕ್ಕಕ್ಕೆ ಸೇರಿಸಿ ಎಣಿಸಿಕೊಳ್ಳಲಾಗಿದೆ. ಈ ಎಲ್ಲವೂ ಹಿಂದಿ ಭಾಷೆಯ ಭಿನ್ನ ನುಡಿಗಟ್ಟುಗಳು ಎಂಬ ಸುಳ್ಳನ್ನು ಪ್ರಚಾರ ಮಾಡಿಕೊಂಡು ಬರಲಾಗಿದೆ. ಈ ಭಾಷಿಕರನ್ನೂ ಹಿಂದಿ ಮಾತೃಭಾಷಿಕರೆಂಬ ಲೆಕ್ಕಕ್ಕೆ ಸೇರಿಸಿಕೊಂಡಿರುವುದು ಜನಗಣತಿಗಳ ಮಹಾಮೋಸ. ಮುತ್ತಿಗೆ ಹಾಕಿರುವ ಹಿಂದಿ ದಬ್ಬಾಳಿಕೆಯನ್ನು ಈ ನುಡಿಗಟ್ಟುಗಳು ಒಪ್ಪಿಕೊಳ್ಳತೊಡಗಿವೆ. ತಮ್ಮ ಭಾಷೆ ಹಿಂದಿ ಎಂದೇ ಬರೆಯಿಸತೊಡಗಿವೆ. ಈ ವಂಚನೆಯ ಲೆಕ್ಕ ಹಿಡಿದರೆ ಅಸಲಿ ಹಿಂದಿ ಸಮುದ್ರದ ಪುಟ್ಟ ದ್ವೀಪಗಳಾಗಿರುವ ಅವುಗಳಿಗೆ ಕನ್ನಡ, ತೆಲುಗು, ತಮಿಳು ಮಲೆಯಾಳದಂತಹ ರಕ್ಷಣೆ, ಮೂಲಸೌಲಭ್ಯಗಳು ಇಲ್ಲ. ಹೀಗಾಗಿ ಶರಣಾಗದೆ ವಿಧಿಯಿಲ್ಲ. ಹೀಗಾಗಿ ಹೊಸ್ತಿಲೊಳಗಣ ಭಾಷೆಗಳಾಗಿಯೂ, ಅಡಿಗೆ ಮನೆ, ಹಿತ್ತಿಲ ಭಾಷೆಗಳಾಗಿಯೂ ಮೂಲೆಗುಂಪಾಗತೊಡಗಿವೆ. ಹಿಂದಿ ಭಾಷಿಕರ ಪ್ರಮಾಣ ಶೇ.43.63 ರಿಂದ ಶೇ.20ಕ್ಕೆ ಕುಸಿಯುತ್ತದೆ.

ಹಿಂದಿ
Courtesy: Facebook

ಉತ್ತರ ಭಾರತ ನಿಜವಾಗಿಯೂ ಹಿಂದಿ ಭಾಷಿಕ ಸೀಮೆಯೇ ಆಗಿದ್ದಲ್ಲಿ ಪ್ರತಿವರ್ಷ ಅಲ್ಲಿ ಲಕ್ಷಾಂತರ ಶಾಲಾಮಕ್ಕಳು ಹಿಂದಿ ಭಾಷೆಯ ಪರೀಕ್ಷೆಯಲ್ಲಿ ಫೇಲಾಗುತ್ತಿರುವುದು ಯಾಕೆ? ಉದಾಹರಣೆಗೆ 2019ರಲ್ಲಿ ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಹಿಂದಿ ಪರೀಕ್ಷೆಗಳಲ್ಲಿ ಹತ್ತು ಲಕ್ಷ ವಿದ್ಯಾರ್ಥಿಗಳು ಫೇಲಾದರು. ಈ ಬೆಳವಣಿಗೆಯ ಹಿಂದಿನ ಕಟುಸತ್ಯವೆಂದರೆ ಉತ್ತರ ಭಾರತದ ಬಹುತೇಕರ ಮಾತೃಭಾಷೆ ಹಿಂದಿ ಅಲ್ಲ. ಅವರ ಮಾತೃಭಾಷೆಗಳು ನೂರಾರು ಇಲ್ಲವೇ ಸಾವಿರಾರು ವರ್ಷಗಳಿಂದ ವಿಕಾಸಗೊಂಡು ಭಾಷಿಕರ ಬಾಯಲ್ಲಿ ನಲಿಯುವಂತಹವು. ಅವರ ಬದುಕುಗಳೊಂದಿಗೆ ಬೆಸೆದುಕೊಂಡಂತಹವು. ಸಂಸ್ಕೃತ ಭೂಯಿಷ್ಟ ಹಿಂದಿ ಭಾಷೆಗೆ ಹೋಲಿಸಿದರೆ ಸುಲಿದ ಬಾಳೆ ಅಥವಾ ತಣಿದ ಉಷ್ಣದ ಹಾಲಿನಂತಹವು.

ಭಾಷೆಯೊಂದು ಸಾಯುವುದೆಂದರೆ ಸಂವಹನದ ಮಾಧ್ಯಮವೊಂದು ಸತ್ತಂತೆ. ಆ ಭಾಷೆಯನ್ನು ಆಡುವ ಜನರ ಇತಿಹಾಸ, ಪರಂಪರೆ, ನಂಬಿಕೆಗಳು, ಪದ್ಧತಿಗಳು, ಸಂಸ್ಕೃತಿಯ ಮುಂದುವರಿಕೆ ಮುರಿದುಬಿದ್ದಂತೆ. ರಾಜಸ್ತಾನಿ ಭಾಷೆಯಲ್ಲಿ ಒಂಟೆಗೆ 45 ಭಿನ್ನ ಹೆಸರುಗಳಿವೆಯಂತೆ. ಅಂತೆಯೇ ತಿಂಗಳು ತಿಂಗಳಿಗೂ ಬದಲಾಗುವ ಮೋಡಗಳಿಗೂ ಅಷ್ಟೇ ಸಂಖ್ಯೆಯ ಹೆಸರುಗಳಿವೆಯಂತೆ. ಈಗ ಅಳಿದುಹೋಗಿರುವ ಭಾಷೆಗಳಲ್ಲೂ ಇಂತಹ ಸಿರಿವಂತಿಕೆ ಇದ್ದಿರಬಹುದು. ಕಳೆದ ಐವತ್ತು ವರ್ಷಗಳಲ್ಲಿ 220 ಭಾರತೀಯ ಭಾಷೆಗಳನ್ನು ಕೊಂದು ಹುಗಿಯಲಾಗಿದೆ.

ಹಿಂದಿ ಭಾಷಿಕರ ಪ್ರಮಾಣ ಶೇ.43 ಎಂದು ವಾದಕ್ಕಾಗಿ ಒಂದು ಗಳಿಗೆ ಒಪ್ಪಿಕೊಂಡರೂ, ಹಿಂದಿ ಮಾತೃಭಾಷೆ ಅಲ್ಲದವರ ಪ್ರಮಾಣ ಶೇ.57ರಷ್ಟಿದೆ ಎಂದಾಯಿತು. ಶೇ. 20 ಮಂದಿ ಆಡುವ ಭಾಷೆಯನ್ನು ಶೇ.80 ಮಂದಿಯ ಮೇಲೆ ಹೇರುವುದು ಸಾಂಸ್ಕೃತಿಕ ಸರ್ವಾಧಿಕಾರ.


ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...