Homeಮುಖಪುಟಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

ಭಾರತದ ವಿವಿಧ ಭಾಷೆಗಳ ಇತ್ತೀಚಿನ ಸಿನಿಮಾಗಳಲ್ಲಿ ದಲಿತ ಕಥನಗಳು; ಭಾಗ-1

- Advertisement -
- Advertisement -

ಈ ದೇಶದ ಸಿನಿಮಾ ಉದ್ಯಮಕ್ಕೆ ನೂರು ವರ್ಷದ ಇತಿಹಾಸವಿದೆ. ಈ ನೂರು ವರ್ಷಗಳಲ್ಲಿ ನಮ್ಮ ಸಿನಿಮಾಗಳು ಎಷ್ಟು ದೂರ ಕ್ರಮಿಸಿವೆ, ಆಯಾ ಕಾಲಘಟ್ಟದ ತಲ್ಲಣಗಳಿಗೆ ಎಷ್ಟು ಸ್ಪಂದಿಸಿವೆ, ನಮ್ಮ ಸುತ್ತಲಿನ ಸಮಾಜವನ್ನು ವಸ್ತುನಿಷ್ಠವಾಗಿ ಬಿಂಬಿಸಿದ್ದಾವೆಯೇ ಎಂದು ಒಮ್ಮೆ ಹಿಂತಿರುಗಿ ನೋಡಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಈ ದೇಶದ ಬಹುಪಾಲು ಸಿನಿಮಾಗಳು ಅಗ್ಗದ ಮನರಂಜನೆಯ ಸರಕು ಎಂಬ ಅಪವಾದವನ್ನ ಮೀರಿ ಬೆಳೆದದ್ದು ಅತಿ ಕಡಿಮೆ ಎನ್ನಬಹುದು. ಪ್ರೇಕ್ಷಕನಿಗೆ ಯೋಗ್ಯವಾದದ್ದನ್ನು ನೀಡಿ ಅವನ ಪ್ರಜ್ಞೆಯನ್ನ ಬೆಳೆಸುವ ಬದಲು ತಮ್ಮ ಸಿನಿಮಾಗಳ ಮುಖಾಂತರ ತಲೆತಲೆಮಾರುಗಳ ಆಲೋಚನೆಯನ್ನೆ ತುಂಬಿ ಸಮಾಜವನ್ನು ಹಳ್ಳ ಹಿಡಿಸಿ ಅವನತಿಗೆ ನೂಕುವ ಪರಂಪರೆಯನ್ನು ಮುಂದುವರೆಸಿದ ಹೆಗ್ಗಳಿಕೆಯೇ ಭಾರತದ ಸಿನಿಮಾ ರಂಗದ್ದು. ಇದಕ್ಕೆ ಅಪವಾದ ಇಲ್ಲ ಅಂತಲ್ಲ. ಆದರೆ ಅವು ಬೆರಳೆಣಿಕೆಯಷ್ಟು ಮಾತ್ರ. ಅವುಗಳಿಗೆ ಇರುವ ಸೀಮಿತ ಅವಕಾಶದ ಕಾರಣವಾಗಿಯೋ ಅಥವಾ ಬೌದ್ಧಿಕ ಅಹಂಕಾರವೋ ಅವು ತಮ್ಮದೇ ಪ್ರತ್ಯೇಕ ದಾರಿಯಲ್ಲಿ ಚಲಿಸುತ್ತಿದ್ದಾವೆ.
ಅಂದರೆ ಅವು ಪ್ರೇಕ್ಷಕರ ಮಧ್ಯೆ ಜನಪ್ರಿಯವಾಗಿ ಮನೆಮಾತಾಗಿದ್ದೂ ಕಡಿಮೆ ಎಂಬರ್ಥದಲ್ಲಿ.

ಕಳೆದ ಎಂಟು ವರ್ಷಗಳಿಂದೀಚೆಗೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಕೊಂಚ ವಾಸ್ತವದ ಹೊಸ ಗಾಳಿ ಬೀಸಿದೆ. ಈ ಗಾಳಿ ಮುಂದಿನ ದಿನಗಳಲ್ಲಿ ವಿಶಾಲವಾಗಿ ಪಸರಿಸುತ್ತದೆ ಎಂಬ ಆಶಾವಾದ ದಿನೆ ದಿನೆ ಹೆಚ್ಚಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ತಮಿಳು, ಮಲೆಯಾಳಂ, ಮರಾಠಿ ಮತ್ತು ಹಿಂದಿಯ ಭಾಷೆಗಳ ಕೆಲವು ಸಿನಿಮಾಗಳನ್ನು ಗಮನಿಸಿದರೆ ಈ ಹೊಸ ಗಾಳಿಯ ಬೆಳವಣಿಗೆಯನ್ನು ಬಹಳ ಸ್ಪಷ್ಟವಾಗಿ ಗುರುತಿಸಬಹುದು.

ಮರಾಠಿಯಲ್ಲಿ ನಾಗರಾಜ್ ಮಂಜುಳೆ ನಿರ್ದೇಶನದ ’ಫಂಡ್ರಿ’ ಮತ್ತು ’ಸೈರಾಟ್’, ಮಲೆಯಾಳಂನ ವಿಧು ವಿನ್ಸೆಂಟ್‌ರ ’ಮ್ಯಾನ್ ಹೋಲ್’, ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ತಮಿಳಿನಲ್ಲಿ ಪ.ರಂಜಿತ್‌ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ’ವೆಟ್ರಿ ಮಾರನ್’ರ ’ಅಸುರನ್’, ಹಿಂದಿಯಲ್ಲಿ ನೀರಜ್ ಗಾಯ್ವಾನ್‌ರ ’ಮಸಾನ್’, ಅನುಭವ ಸಿನ್ಹಾರ ’ಆರ್ಟಿಕಲ್-15’ – ಹೀಗೆ ಇನ್ನೂ ಇರಬಹುದು, ಆದರೆ ನಾನು ಗಮನಿಸಿದ ಇಷ್ಟು ಸಿನಿಮಾಗಳು ಭಾರತದ ವಾಸ್ತವಗಳನ್ನು ತಮ್ಮ ನಿರೂಪಣೆಯ ಮೂಲಕ ಹೇಳಲು ಪ್ರಯತ್ನಿಸಿವೆ. ಇಷ್ಟು ವರ್ಷ ಬೆಳ್ಳಿತೆರಗೆ ಅಂಟಿಕೊಂಡಿದ್ದ ಪೊರೆಯನ್ನು ಕಳಚಿ ಆ ಮೂಲಕ ಪ್ರಜ್ಞಾವಂತ ಪ್ರೇಕ್ಷಕರನ್ನ ಸೃಷ್ಟಿ ಮಾಡುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ.

ಈ ಮೇಲೆ ಹೆಸರಿಸಿದ ಎಲ್ಲಾ ಸಿನಿಮಾಗಳನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ಆಳೆಯುವುದು ಸಾಧ್ಯವಿಲ್ಲವಾದರೂ, ಭಾರತೀಯ ಸಿನಿಮಾ ದಾರಿಯಲ್ಲಿ ಇವುಗಳಿಗೆ ವಿಶೇಷವಾದ ಸ್ಥಾನವಿದೆ. ನಮ್ಮಲ್ಲಿ ಸಹಜವಾಗಿ ಕಮರ್ಷಿಯಲ್, ಬ್ರಿಡ್ಜ್, ಕಲಾತ್ಮಕ ಮುಂತಾದ ಹೆಸರುಗಳಲ್ಲಿ ಸಿನಿಮಾಗಳನ್ನ ವಿಂಗಡಿಸಿ ನೋಡುವುದಿದೆ. ಆದರೆ ಮೇಲೆನ ಈ ಸಿನಿಮಾಗಳನ್ನ ಅವುಗಳ ಕಟ್ಟುವಿಕೆಯಲ್ಲಿ ನಿರ್ದೇಶಕರ ಮೂಲ ಉದ್ದೇಶದ ಆಧಾರದ ಮೇಲೆ ’ಜನಪ್ರಿಯವಲ್ಲದ – ಜನಪ್ರಿಯ ಮಾದರಿ’ ಎಂದು ವಿಭಾಗಿಸಿಕೊಂಡು ಇವುಗಳ ಸಣ್ಣ ಪರಿಚಯ ಮಾಡಿಕೊಡಲು ಬಯಸುತ್ತೇನೆ.

ಜನಪ್ರಿಯವಲ್ಲದ ಶೈಲಿ

ಮಂಜುಳೆಯವರ ’ಫಂಡ್ರಿ’, ವಿಧು ವಿನ್ಸೆಂಟ್ರ ’ಮ್ಯಾನ್ ಹೋಲ್’ ಮತ್ತು ನೀರಜ್ ಗಾಯ್ವಾನ್ರ ’ಮಸಾನ್’ ಈ ಮೂರು ಸಿನಿಮಾಗಳಲ್ಲಿ ನಿರ್ದೇಶಕರು ತಮ್ಮ ಅಲೋಚನೆಯನ್ನ ಯಾವ ಕ್ರಮದಲ್ಲಿ ಯಾವ ದೃಶ್ಯಕಟ್ಟುಗಳ ಮುಖಾಂತರ ಮತ್ತು ಯಾವ ತಾರಾಗಣದಲ್ಲಿ ಹೇಳಿದರೆ ಹೆಚ್ಚು ಪ್ರೇಕ್ಷಕನಿಗೆ ಬೇಗ ತಲುಪುತ್ತದೆ ಎಂಬ ಸಂಗತಿಗಿಂತ ಬಹುಶಃ ತಾನು ಸಿನಿಮಾದಲ್ಲಿ ಹೇಳಬೇಕಂದಿರುವ ಐಡಿಯಾ ಅಥವಾ ಅಲೋಚನಾ ಕ್ರಮವನ್ನ ಸಾಧ್ಯವಾದಷ್ಟು ಹೆಚ್ಚು ಪರಿಣಾಮಕಾರಿಯಾಗಿ ದೃಶ್ಯ ಕಟ್ಟುಗಳ ಮುಖಾಂತರ ಕಟ್ಟಬೇಕು ಎಂಬುದಷ್ಟೆ ಮೂಲ ಉದ್ದೇಶವಾಗಿದೆ ಅನಿಸುತ್ತೆ.

ನಾಗರಾಜ್ ಮಂಜುಳೆಯ ’ಫಂಡ್ರಿ’ ಭಾರತೀಯ ಸಿನಿಮಾ ಚರಿತ್ರೆಯಲ್ಲಿ ಒಂದು ಮೈಲಿಗಲ್ಲು. ಇವತ್ತು ಅದನ್ನ ಮೈಲಿಗಲ್ಲು ಎಂದು ಗುರುತಿಸದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಆ ರೀತಿ ಗುರುತಿಸುವ ಸಂದರ್ಭ ಬಂದೇ ಬರುತ್ತೆ. ಜಾತಿ ದೌರ್ಜನ್ಯದ ಬಗ್ಗೆ ಯಾವುದೇ ಧಾವಂತವಿಲ್ಲದೆ ತಣ್ಣಗೆ ಎಳೆ ಎಳೆಯಾಗಿ ಅಷ್ಟೇ ಗಾಢವಾಗಿ ತೆರೆ ಮೇಲೆ ಈ ಸಿನಿಮಾವನ್ನು ತಂದಿದ್ದಾರೆ ಮಂಜುಳೆ. ’ಜಬ್ಯಾ’ ಪಾತ್ರದ ಕನಸು, ಪ್ರೀತಿ, ಜಾತಿ ಕಾರಣಕ್ಕೆ
ಅವನು ಅನುಭವಿಸುವ ಅವಮಾನಗಳು – ಇವುಗಳಲ್ಲಿ ಕೆಲವನ್ನು ನೇರವಾಗಿ ಕೆಲವನ್ನು ಪ್ರತಿಮೆಗಳ ಮುಖಾಂತರ ಮಂಜುಳೆ ಕಟ್ಟುತ್ತಾ ಹೋಗುತ್ತಾರೆ. ಜಬ್ಯಾ ಕಾಣುವ ’ಕಪ್ಪು ಗುಬ್ಬಚ್ಚಿ’ ಹಕ್ಕಿ ಕನಸೋ ವಾಸ್ತವೋ! ಆದರೆ ಆ ರೀತಿಯ ಪ್ರತಿಮೆ ಬಹಳ ಅದ್ಭುತವಾದೆ. ಸಿನಿಮಾದ ಕೊನೆಯ ಅರ್ಧಗಂಟೆಯಲ್ಲಿ ಮೂಡಿರುವ ಜಾತಿ ಕ್ರೌರ್ಯದ ಚಿತ್ರಣವಂತೂ ಭಾರತದ ಸಿನಿಮಾ ನಿರೂಪಣೆಯಲ್ಲಿ ’ಅಜರಾಮರ’. ಅದರಲ್ಲೂ ಕಡೆಯ ದೃಶ್ಯ ಜಬ್ಯಾನ ಪ್ರತಿರೋಧ ಮುಂದಿನ ಸಿನಿಮಾ ನಿರ್ದೇಶಕರಿಗೆ ’ಮುನ್ನುಡಿ’.

ವಿಧು ವಿನ್ಸೆಂಟ್ ಅವರ ಮಲೆಯಾಳಂ ಭಾಷೆಯ ’ಮ್ಯಾನ್ ಹೋಲ್, ’ಫಂಡ್ರಿ’ಯಷ್ಟೇ ಪರಿಣಾಮಕಾರಿಯಾದ ಸಿನಿಮಾ. ವಿಚಿತ್ರ ಅನಿಸೋದು ಇದು ಕೇರಳದ ಹೊರಗೆ ಹೆಚ್ಚು ಪ್ರದರ್ಶನವಾಗಲಿ ಚರ್ಚೆಯಾಗಲಿ ಆಗಲಿಲ್ಲ. ಇದು 2016ರ ಕೇರಳ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFK) ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಿತ್ತು. ವಿಧು ವಿನ್ಸೆಂಟ್ ಈ ರೀತಿ ಆಯ್ಕೆಯಾದ ಮೊದಲ ಮಹಿಳಾ ನಿರ್ದೇಶಕಿ. ಕೇರಳ ರಾಜ್ಯ ಪ್ರಶಸ್ತಿ ಕೂಡ ಈ ಸಿನಿಮಾಗೆ ಲಭಿಸಿದೆ. ಚಿತ್ರದ ಪ್ರಧಾನ ಪಾತ್ರ ’ಶಾಲಿನಿ’ ಸಾಮಾಜಿಕ ಬಹಿಷ್ಕಾರದ ಭಯದಿಂದ ತನ್ನ ಜಾತಿ ಹಿನ್ನೆಲೆಯನ್ನು ಬಚ್ಚಿಟ್ಟುಕೊಂಡಿರುತ್ತಾಳೆ. ತಂದೆ ಹ್ಯೂಮನ್ ಸ್ಕಾವೆಂಜರ್. ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವಾಗಲೇ ಮರಣ ಹೊಂದುತ್ತಾನೆ. ಈ ಸುದ್ದಿಯಿಂದ ಶಾಲೆಯಲ್ಲಿ ಶಾಲಿನಿಯ ಜಾತಿ ಬಹಿರಂಗವಾಗುತ್ತೆ.

ಜಾತಿಕಾರಣವಾಗಿ ಶಾಲಿನಿ ಈಗಾಗಲೇ ಯಾರು ಸ್ನೇಹಿತರಾಗಿದ್ದರೋ ಅವರಿಂದಲೇ ನಿರಾಕರಿಸಲ್ಪಡುತ್ತಾಳೆ. ತಂದೆ ಮ್ಯಾನ್ ಹೋಲ್‌ನಲ್ಲಿ ಕೆಲಸ ಮಾಡುವ ಅನಿವಾರ್ಯತೆ, ಜಾತಿ ಕಾರಣವಾಗಿ ತಾನು ಅನುಭವಿಸಬೇಕಾದ ಅವಮಾನ ಮತ್ತು ತನ್ನ ಸಮುದಾಯ ಶಿಕ್ಷಣದಿಂದ ವಂಚಿತರಾಗಿ ಪ್ರತಿಭಟಿಸುವ ಸಣ್ಣ ಧೈರ್ಯವನ್ನು ಕಳೆದುಕೊಂಡಿರುವ ಸಂಗತಿಗಳು ಶಾಲಿನಿಯನ್ನು ಕಾನೂನು ಪದವಿ ಪಡೆಯಲು ಪ್ರೇರೇಪಿಸುತ್ತವೆ. ಮುಂದೆ ವಕೀಲೆಯಾಗಿ ಈ ರೀತಿ ದೌರ್ಜನ್ಯಕ್ಕೆ ಒಳಗಾದ ತನ್ನ ಸಮುದಾಯದವರ ಪರವಾಗಿ ಕಾನೂನು ಹೋರಾಟ ಪ್ರಾರಂಭಿಸುತ್ತಾಳೆ. ಅದಕ್ಕೂ ಸರಿಯಾದ ನ್ಯಾಯ ಸಿಗದಿದ್ದಾಗ, ಎಲ್ಲರನ್ನೂ ಸಂಘಟಿಸಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವ ದೃಶ್ಯದೊಂದಿಗೆ ಸಿನಿಮಾ ಮುಗಿಯುತ್ತದೆ. ಇಲ್ಲಿ ಸಿನಿಮಾ ಕುರಿತಂತೆ ನನ್ನ ನಿರೂಪಣೆ ಬಹಳ ಸರಳವಾಗಿದೆ. ಆದರೆ, ವಿಧು ವಿನ್ಸೆಂಟ್ ಬಹಳ ಅದ್ಭುತವಾಗಿ ದೃಶ್ಯದಲ್ಲಿ ಹಿಡಿದಿಟ್ಟಿದ್ದಾರೆ. ಯಾವ ಮಾಗಿದ ದೃಶ್ಯ ಕಲಾಕಾರನಿಗೂ ಕಡಿಮೆಯೇನಿಲ್ಲ ವಿನ್ಸೆಂಟ್.

ನೀರಜ್ ಗಾಯ್ವಾನ್‌ರ ’ಮಸಾನ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರು ಮಾಡಿದ ಸಿನಿಮಾ. ಕಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಪ್ರತಿಷ್ಠಿತ ಎರಡು ಪ್ರಶಸ್ತಿಗಳನ್ನು ಪಡೆಯಿತು. ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಓಪನಿಂಗ್ ಸಿನಿಮಾವಾಗಿ ಪ್ರದರ್ಶನಗೊಂಡ ಹೆಗ್ಗಳಿಕೆ ’ಮಸಾನ್’ದು. ಈ ಸಿನಿಮಾದಲ್ಲಿ ಬರುವ ಎರಡು ಪ್ರಧಾನ ಪಾತ್ರಗಳು ಸಾಮಾಜಿಕವಾಗಿ ಬಹಳ ಅಂತರವಿರುವ ಎರಡು ಜಾತಿಗಳನ್ನು ಪ್ರತಿನಿಧಿಸುತ್ತಾರೆ. ದೇವಿಪಾತಕ್ ಪಾತ್ರ ಬ್ರಾಹ್ಮಣ ಸಮುದಾಯವನ್ನು ಮತ್ತು ದೀಪಕ್ ಕುಮಾರ್ ಪಾತ್ರ ದೊಮ್ ಎಂಬ ಕೆಳ ಜಾತಿಯನ್ನು ಪ್ರತಿನಿಧಿಸುತ್ತಾರೆ. ಕಥೆ ನಡೆಯುವ ಪರಿಸರ ವಾರಣಾಸಿ ನಗರದ ಗಂಗಾ ನದಿಯ ತಟದಲ್ಲಿರುವ ಸ್ಮಶಾನದ ಸುತ್ತಮುತ್ತ. ಈ ಎರಡು ಪಾತ್ರಗಳು, ತಾವು ದೈಹಿಕವಾಗಿ ಈಗಿರುವ ಪರಿಸರದಿಂದ ತಪ್ಪಿಸಿಕೊಳ್ಳಲು ಮತ್ತು ಮಾನಸಿಕವಾಗಿ ತಾವು ಪ್ರೀತಿಸಿದವರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಪ್ರಯತ್ನಿಸುತ್ತಾರೆ.

ಈ ಚಲನೆಯನ್ನ ಸಿನಿಮಾ ಪ್ರಸ್ತುತಪಡಿಸುತ್ತದೆ. ಆದರೆ, ಗಾಯ್ವಾನ್ ತಳ ಸಮುದಾಯದ ಪರಿಸ್ಥಿತಿಯನ್ನಷ್ಟೆ ಸಿನಿಮಾದಲ್ಲಿ ತರುತ್ತಾರೆ. ಆದರೆ ವಾಸ್ತವದಲ್ಲಿರುವ ದೌರ್ಜನ್ಯವನ್ನ ಎಲ್ಲೂ ನಿರೂಪಿಸುವುದಿಲ್ಲ. ಇನ್ನೂ ಮೇಲ್ಜಾತಿಯ ದೇವಿಪಾತಕ್ ಮೇಲೆ ವ್ಯವಸ್ಥೆ ನಡೆಸುವ ದೌರ್ಜನ್ಯವನ್ನ ಒತ್ತಿ ಹೇಳಲಾಗಿದೆ. ಆದರೆ ಕೆಳ ಜಾತಿಯ ದೀಪಕ್ ಪ್ರೀತಿಸುವ ಮೇಲ್ಜಾತಿ ಹುಡುಗಿ ’ನನ್ನ ಮನೆಯವರು ವಿರೋಧಿಸಿದವರು ಸರಿಯೇ ನಾನು ನಿನ್ನನ್ನು ಮದುವೆ ಆಗುತ್ತೇನೆ’ ಎನ್ನುತ್ತಾಳೆ ಆದರೆ, ಈ ಜಾತಿ ಸಂಘರ್ಷಕ್ಕೆ ಮುಂಚಿತವಾಗಯೇ ದೀಪಕ್ ಪ್ರೀತಿಸಿದ ಹುಡುಗಿ ಸಾಯುತ್ತಾಳೆ. ಗಾಯ್ವಾನ್ ತಾನು ಹೇಳಬೇಕಾದ ಕತೆ/ಸಂಗತಿಗಳನ್ನು ದೃಶ್ಯಗಳಲ್ಲಿ ಬಹಳ ಅದ್ಭುತವಾಗಿ ನರೇಟ್ ಮಾಡಿದ್ದಾರೆ.

ಜನಪ್ರಿಯ ಶೈಲಿ

ನಾಗರಾಜ್ ಮಂಜುಳೆಯ ’ಸೈರಾಟ್’, ರಾಜೀವ್ ರವಿಯ ರಾಜೀವ್ ರವಿಯವರ ’ಕಮ್ಮಾಟಿ ಪಾಡಂ’, ಪ.ರಂಜಿತ್ ರ ’ಮದ್ರಾಸ್’, ’ಕಬಾಲಿ’, ’ಕಾಲ’ ಮತ್ತು ’ಸರ್‌ಪಟ್ಟ ಪರಂಬರೈ’, ಮಾರಿ ಸೆಲ್ವರಾಜ್‌ರ ’ಪರಿಯೇರುಂ ಪೆರುಮಾಳ್’ ಮತ್ತು ’ಕರ್ಣನ್’ ಮತ್ತು ವೆಟ್ರಿ ಮಾರನ್‌ರ ’ಅಸುರನ್’ ಮತ್ತು ಅನುಭವ್ ಸಿನ್ಹಾ ಅವರ ’ಆರ್ಟಿಕಲ್-15’ ಸಿನಿಮಾಗಳ ಬಗ್ಗೆ ಸಂಕ್ಷಿಪ್ತವಾಗಿ ಮುಂದಿನ ಭಾಗದಲ್ಲಿ ಚರ್ಚಿಸಲಾಗುವುದು.

ಯದುನಂದನ್ ಕೀಲಾರ

ಯದುನಂದನ್ ಕೀಲಾರ
ಜಗತ್ತಿನ ಸಿನಿಮಾಗಳ ವೀಕ್ಷಣೆ ಮತ್ತು ಅವುಗಳು ಬೀರುವ ಸಾಮಾಜಿಕ ಪ್ರಭಾವದ ಸಾಧ್ಯತೆಗಳ ಬಗ್ಗೆ ಅಪಾರ ಉತ್ಸಾಹ ಇರುವ ಯದುನಂದನ್ ಸಿನಿಮಾಗಳ ರಾಜಕೀಯ ನಿಲುವುಗಳನ್ನು ತೀಕ್ಷ್ಣವಾಗಿ ಶೋಧಿಸುತ್ತಾರೆ.


ಇದನ್ನೂ ಓದಿ: ‘ಮೊದಲು ಆಕಾಶ.. ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್‌ ಎಲಿಫೆಂಟ್ಸ್‌ ಕಿರುಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...