HomeUncategorizedದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು

ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು

- Advertisement -
- Advertisement -

ನವದೆಹಲಿ: ‘ಮೋದಿ, ಮಹಿಳಾ (ಮಹಿಳೆ), ಮಧ್ಯಮ ವರ್ಗದ’ ಮಂತ್ರವು ದೆಹಲಿಯಲ್ಲಿ ಬಿಜೆಪಿಯ ಪುನರಾಗಮನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು 2025ರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆಯ ಸಮಯದಲ್ಲಿ ತಜ್ಞರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮಹಿಳೆಯರು ಮತ್ತು ದೆಹಲಿಯ ಮಧ್ಯಮ ವರ್ಗದ ನಿವಾಸಿಗಳ ದೊಡ್ಡ ವಿಭಾಗವು ಎಎಪಿಯನ್ನು ತಿರಸ್ಕರಿಸಿದೆ ಮತ್ತು ಈ ಬಾರಿ ಮತದಾರರಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿರಂತರ ಪ್ರಭಾವವು ಅರವಿಂದ್ ಕೇಜ್ರಿವಾಲ್ ಅವರ ಎಎಪಿಯನ್ನು ದೊಡ್ಡ ಸೋಲಿನ ಅಂಚಿಗೆ ತಳ್ಳಿತು. ಬಿಜೆಪಿ ಗೆಲುವು ಸಾಧಿಸಿದೆ.

ಈ ಚುನಾವಣೆಯಲ್ಲಿ ಎಎಪಿಯ ಪ್ರಭಾವಿಗಳಾದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಲನ್ನನುಭವಿಸಿದ್ದಾರೆ. 2013ರಿಂದ ನವದೆಹಲಿ ಕ್ಷೇತ್ರದಿಂದ  ಕೇಜ್ರಿವಾಲ್ ಮತ್ತು ಜಂಗ್‌ಪುರ ಕ್ಷೇತ್ರದಿಂದ ಸಿಸೋಡಿಯಾ ಗೆಲುವು ಸಾಧಿಸುತ್ತಾ ಬಂದಿದ್ದರು.

2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪ್ರಾಬಲ್ಯ ಸಾಧಿಸಿತ್ತು. ಆಗ ಎಎಪಿಯು 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿತು. 2015ರಲ್ಲಿ ಅದು ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಬಹುತೇಕ 67 ಸ್ಥಾನಗಳನ್ನು ಬಾಚಿಕೊಂಡಿತ್ತು.

ಮಾಜಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತನಾಗಿದ್ದ ಕೇಜ್ರಿವಾಲ್ ಅವರ ಮೇಲೆ ‘ಶೀಶ್‌ಮಹಲ್’ ವಿವಾದದಿಂದ ಹಿಡಿದು ಮದ್ಯ ಅಬಕಾರಿ ನೀತಿ ಹಗರಣದವರೆಗೆ ಆರೋಪಗಳನ್ನು ಹೊರಿಸಲಾಗಿತ್ತು. ಈ ಸೋಲು ದೆಹಲಿ ಮೇಲಿನ ಅವರ ದಶಕದ ನಿಯಂತ್ರಣವನ್ನು ಕೊನೆಗೊಳಿಸಿದಂತಾಗಿದೆ.

ಆದರೆ ಬಿಜೆಪಿಯ (ಎಲ್ಲವೂ ಖಚಿತವಲ್ಲ) ಗೆಲುವಿನ ಹಿಂದಿನ ದೊಡ್ಡ ಅಂಶಗಳು ಮಧ್ಯಮ ವರ್ಗ ಮತ್ತು ಮಹಿಳಾ ಮತದಾರರಾಗಿದ್ದಾರೆ. ಈ ಎರಡು ವರ್ಗ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಎಎಪಿಯ ಬಲವಾದ ಬೆಂಬಲಿಗರಾಗಿದ್ದರು.

‘ಮಹಿಳಾ’ ಮತದಾರರು

ಈ ಚುನಾವಣೆಯ ಆರಂಭದಲ್ಲಿಯೇ ಮಹಿಳೆಯರನ್ನು ಸಂಭಾವ್ಯ ಪ್ರಮುಖ ಮತಗಳ ನೆಲೆಯಾಗಿ ಗುರುತಿಸಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಎಲ್ಲರೂ ತಮ್ಮ ಪ್ರಣಾಳಿಕೆಗಳಲ್ಲಿ ಅವರಿಗಾಗಿ ವಿಶೇಷ ಭರವಸೆಗಳನ್ನು ನೀಡಿದ್ದರು. ದೆಹಲಿಯ ನೋಂದಾಯಿತ ಮತದಾರರಲ್ಲಿ ಶೇ.46ಕ್ಕಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಅಂದರೆ ಸುಮಾರು 71 ಲಕ್ಷ ಮಹಿಳಾ ಮತದಾರನ್ನು ದೆಹಲಿ ವಿಧಾನಸಭಾ ಕ್ಷೇತ್ರವು ಹೊಂದಿದೆ.

ಮತದಾನದ ಹಿಂದಿನ ದಿನಗಳಲ್ಲಿ (ಅದು ಬುಧವಾರ), ಹೆಚ್ಚಿನ ಮಹಿಳೆಯರು ಮತ ಚಲಾಯಿಸಲು ಸಹಿ ಹಾಕುತ್ತಿದ್ದರು ಮತ್ತು ಅದು ಹೆಚ್ಚಿನ ಮತಗಳಾಗಿ ಬದಲಾಯಿತು. ಇದರಿಂದಾಗಿ ಈ ಚುನಾವಣಾ ಸಂದರ್ಭ ಮಹಿಳಾ ಮತದಾರರ ಸಂಖ್ಯೆ ಸುಮಾರು ಎರಡು ಪ್ರತಿಶತದಷ್ಟು ಏರಿಕೆ ಕಂಡಿತ್ತು.

2020ರ  ಚುನಾವಣೆಯಲ್ಲಿ ಎಎಪಿಯು ಸುಮಾರು ಶೇ. 60ರಷ್ಟು ಮಹಿಳಾ ಮತಗಳನ್ನು ಗಳಿಸಿತ್ತು ಎಂದು ರಾಜಕೀಯ ವಿಶ್ಲೇಷಕರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆಗ ಬಿಜೆಪಿಯು ಕೇವಲ ಶೇ.35 ರಷ್ಟು ಮಾತ್ರ ಮಹಿಳಾ ಮತಗಳನ್ನು ಗಳಿಸಿತ್ತು. ಈ ಬಾರಿ ಎಲ್ಲವೂ ತಲೆಕೆಳಗಾಗಿರುವಂತೆ ಕಾಣುತ್ತಿದೆ. ತಿಂಗಳಿಗೆ ರೂ. 2,500 ನೇರ ನಗದು ವರ್ಗಾವಣೆಯ ಭರವಸೆ ನೀಡಿದ ಕೇಸರಿ ಪಕ್ಷದ ಕಡೆ ಮಹಿಳೆಯರು ತಿರುಗಿರುವುದು ಕಾಣುತ್ತಿದೆ.

ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದಂತಹ ಇತರ ಭರವಸೆಗಳನ್ನು ಬಿಜೆಪಿ ಮತ್ತು ಎಎಪಿಗಳೆರಡರಿಂದ ನೀಡಲಾಗಿತ್ತು. ಇದರ ಜೊತೆ ಬಿಜೆಪಿಯು ಗರ್ಭಿಣಿ ಮಹಿಳೆಯರಿಗೆ ನಗದು ಸಹಾಯ ನೀಡುವ ಎರಡನೇ ವಿಶೇಷ ಪ್ರತಿಜ್ಞೆ ಮಾಡಿತ್ತು. ಎಎಪಿ ಇದೇ ರೀತಿಯ ತಿಂಗಳಿಗೆ ರೂ. 2,100 ನೀಡುವ ಭರವಸೆ ನೀಡಿತ್ತು. ಆದರೆ ಇದು ನಿಷ್ಪರಿಣಾಮಕಾರಿಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷವು ಇದರ ಅನುಷ್ಠಾನ ವಿಳಂಬದ ತಪ್ಪು ಕಾರ್ಯತಂತ್ರ ಇದಕ್ಕೆ ಕಾರಣವೆಂದು  ತಜ್ಞರು ಎನ್‌ಡಿಟಿವಿಗೆ  ಎಂದು ಹೇಳಿದ್ದಾರೆ.

ಈ ಸಂಬಂಧ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಎಎಪಿ ನಡುವೆ ಹಲವಾರು ಪೈಪೋಟಿಗಳು ನಡೆದವು. ಆಗಲೂ ಕೇಜ್ರಿವಾಲ್ ಇದನ್ನು ಕಾರ್ಯರೂಪಕ್ಕೆ ತರಬೇಕಿತ್ತು ಎಂದು ತಜ್ಞರು ಹೇಳಿದ್ದಾರೆ.

ಇದರರ್ಥ ಮಹಿಳಾ ಮತದಾರರು ಒಂದು ಕಾಲದಲ್ಲಿ ಎಎಪಿಗೆ ಪ್ರಮುಖವಾಗಿದ್ದರು. ಈಗ ವಿಶೇಷವಾಗಿ ಮಹಿಳಾ ಮಧ್ಯಮ ವರ್ಗದ ಮತದಾರರು ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದಾರೆ.

ಮಧ್ಯಮ ವರ್ಗ

2025ರ ಕೇಂದ್ರ ಬಜೆಟ್ ನಂತರ ಮಧ್ಯಮ ವರ್ಗದವರು ಬಿಜೆಪಿ ಪಾಳಯಕ್ಕೆ ಜಿಗಿದಿರುವುದು ಕಂಡು ಬರುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿ ಮಿತಿಯಲ್ಲಿ ಭಾರಿ ಹೆಚ್ಚಳವನ್ನು ಘೋಷಿಸಿದರು. ರೂ. 12 ಲಕ್ಷ  ಹೊಂದಿರುವ ಜನರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲವೆಂಬುದು ಈ ಘೋಷಣೆಯಾಗಿದೆ. ಈ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಈ ಕ್ರಮವನ್ನು ಶ್ಲಾಘಿಸಿ ಮಾತನಾಡಿದರು. ದಕ್ಷಿಣ ದೆಹಲಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು ಆ ಅಂಶವನ್ನು ಮಂಡಿಸಿದರು.

ಭ್ರಷ್ಟಾಚಾರ ಹಗರಣಗಳಲ್ಲಿ ಎಎಪಿ ಸಿಲುಕಿದ ನಂತರ ಮಧ್ಯಮ ವರ್ಗದ ಮತಗಳು ಬಿಜೆಪಿಯತ್ತ ತಿರುಗಿದವು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಕೇಜ್ರಿವಾಲ್ ಮೇಲಿನ ಮದ್ಯ ನೀತಿ ವಿವಾದದ ಆರೋಪವು ಪ್ರಮುಖವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಮತ್ತು ಅವರ ಆಪ್ತ ಮನೀಶ್ ಸಿಸೋಡಿಯಾ ಇಬ್ಬರೂ ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದರು.

ಮಧ್ಯಮ ವರ್ಗದವರು ದೆಹಲಿಯ ಮತದಾರರಲ್ಲಿ ಸುಮಾರು 40 ಪ್ರತಿಶತದಷ್ಟಿದ್ದಾರೆ. ಇದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಯಾವುದೇ ಚುನಾವಣೆಗೂ ಇವರು ನಿರ್ಣಾಯಕವಾಗಿದ್ದಾರೆ. ಬಿಜೆಪಿಯು ಇವರನ್ನು ತನ್ನ ಕಡೆಗೆ ಸೆಳೆಯಲು ಸಹಾಯ ಮಾಡಿದ್ದು ಆದಾಯ ತೆರಿಗೆ ವಿನಾಯಿತಿಯಾಗಿದೆ. ಇಷ್ಟು ಮಾತ್ರವಲ್ಲ ಕುಸಿಯುತ್ತಿರುವ ಮೂಲಸೌಕರ್ಯ ಮತ್ತು ವಾರ್ಷಿಕ ವಾಯು ಗುಣಮಟ್ಟದ ಬಿಕ್ಕಟ್ಟು ಕೂಡ ಕಾರಣವಾಗಿದೆ.

ಬಿಜೆಪಿ ಕಡೆ ಮತದಾರರು ಒಲವು ತೋರಿಸಲು ಮತ್ತೊಂದು ಪ್ರಮುಖ ‘ಆಕರ್ಷಕ’ವೆಂದರೆ 8ನೇ ವೇತನ ಆಯೋಗವಾಗಿದೆ. ಈ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳಿಗೆ ದೊಡ್ಡ ಪರಿಷ್ಕರಣೆಯನ್ನು ಶಿಫಾರಸು ಮಾಡಿತು. ಅವರಲ್ಲಿ ಹೆಚ್ಚಿನವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಚುನಾವಣೆಯ ಫಲಿತಾಂಶದ ಹೊರತಾಗಿಯೂ, ಕೇಜ್ರಿವಾಲ್ ಅವರ ‘ಸ್ವಚ್ಛ’ ಮತ್ತು ‘ಭ್ರಷ್ಟಾಚಾರ ರಹಿತ’ ಇಮೇಜ್ ಕುಸಿದಿರುವಂತೆ ತೋರುತ್ತಿದೆ.

Delhi Election Results 2025 | ಎಎಪಿ ಘಟಾನುಘಟಿಗಳ ಹೀನಾಯ ಸೋಲು; ಅತಿಶಿ ಗೆಲುವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...