Homeಅಂಕಣಗಳುಕುಸಿಯುತ್ತಿರುವ ಲಿಬರಲ್ ಪ್ರಜಾಪ್ರಬುತ್ವ: ಬಿ. ಶ್ರೀಪಾದ್ ಭಟ್

ಕುಸಿಯುತ್ತಿರುವ ಲಿಬರಲ್ ಪ್ರಜಾಪ್ರಬುತ್ವ: ಬಿ. ಶ್ರೀಪಾದ್ ಭಟ್

- Advertisement -
| ಬಿ. ಶ್ರೀಪಾದ ಭಟ್ |
ಹಿರಿಯ ಪತ್ರಕರ್ತರಾದ ಪ್ರೇಮಶಂಕರ ಜಾ ಅವರು ‘2002ರ ಗೋದ್ರಾ ದುರಂತಕ್ಕೂ 2019ರ ಪುಲ್ವಮಾ ದುರಂತಕ್ಕೂ ಕ್ಷೋಬೆಗೊಳಿಸುವಂತಹ ಸಾಮ್ಯತೆಗಳಿವೆ’ ಎಂದು ಹೇಳಿದ್ದರು. ಇದು ಸತ್ಯ. ಫೆಬ್ರವರಿ 27, 2002ರಲ್ಲಿ ಗೋದ್ರಾ ರೈಲು ನಿಲ್ದಾಣದಲ್ಲಿ 59 ಅಮಾಯಕ ಹಿಂದೂಗಳು ಬೆಂಕಿ ದುರಂತದಲ್ಲಿ ಬೆಂದು ಹೋದರು. ಆದರೆ ಆ ನಂತರದ ಹತ್ಯಾಕಾಂಡದಲ್ಲಿ 1000 ಕ್ಕೂ ಹೆಚ್ಚು ಮುಸ್ಲಿಮರು ಹತ್ಯೆಯಾದರು ಮತ್ತು 2000ಕ್ಕೂ ಹೆಚ್ಚಿನ ಕುಟುಂಬಗಳು ನಿರಾಶ್ರಿತವಾದವು. ಆದರೆ ಗೋದ್ರಾ ದುರಂತಕ್ಕೂ ಮೊದಲು ಇಂಟೆಲಿಜೆನ್ಸ್ ಬ್ಯೂರೋ ಆಗಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರಿಗೆ 20 ಬಾರಿ ಈ ಗೋದ್ರಾ ಮಾದರಿಯ ದುರ್ಘಟನೆ ನಡೆಯುವ ಸಂಬವವಿದೆ, ‘ವಿಎಚ್‍ಪಿ, ಬಜರಂಗದಳ ಕಾರ್ಯಕರ್ತರು ಲಾಠಿ, ಖಡ್ಗಗಳೊಂದಿಗೆ ದಿನನಿತ್ಯ ಪೆರೇಡ್, ತಾಲೀಮು ನಡೆಸುತ್ತಿದ್ದಾರೆ’ ಎಂದು ಎಚ್ಚರಿಕೆಯ ಮುನ್ಸೂಚನೆ ನೀಡಿದ್ದರು. ಇದರ ಕುರಿತು ಜಾ ಅವರು ‘ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಮೋದಿ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದರು. ಇನ್ನೂ ಹತ್ಯಾಕಾಂಡದ ಶವಗಳ ಸಂಸ್ಕಾರ ಪೂರ್ತಿಗೊಂಡಿರಲಿಲ್ಲ, ಆದರೆ ಮೋದಿ ಮಾರ್ಚ್ 2003ರ ಬದಲಿಗೆ ಜುಲೈ 2002ಕ್ಕೆ (ಅಂದರೆ ಒಂಬತ್ತು ತಿಂಗಳು ಮೊದಲು) ರಾಜ್ಯ ಚುನಾವಣೆ ನಡೆಸಬೇಕೆಂದು ಆಯೋಗಕ್ಕೆ ಕೇಳಿಕೊಂಡರು. ಆಯೋಗವೂ ಸಹ ಇದಕ್ಕೆ ಮಣಿದು ಡಿಸೆಂಬರ್ 2002ರಲ್ಲಿ ಗುಜರಾತ್ ರಾಜ್ಯದ ಚುನಾವಣೆ ಘೋಶಿಸಿತು’ ಎಂದು ಬರೆಯುತ್ತಾರೆ. ನಂತರ ನಡೆದದ್ದು ಇತಿಹಾಸ. 
14, ಫೆಬ್ರವರಿ 2019ರಂದು ಉಗ್ರರ ದಾಳಿಗೆ ಬಲಿಯಾಗಿ 49 ಸಿಆರ್‍ಪಿಎಫ್ ಯೋದರು ಹತರಾದರು. ಆದರೆ ಈ ದುರಂತ ನಡೆಯವುದಕ್ಕೂ 15 ದಿನಗಳಿಗೂ ಮೊದಲು ಇಂಟೆಲಿಜೆನ್ಸ್ ಬ್ಯೂರೋ ಕೇಂದ್ರ ಗೃಹ ಇಲಾಖೆಗೆ ಬಯೋತ್ಪಾದಕರ ದಾಳಿ ನಡೆಯುವ ಸಂಬವವಿದೆ ಎಂದು ಎಚ್ಚರಿಕೆ ನೀಡಿತ್ತು. ಕಾಶ್ಮೀರದ ಪೋಲೀಸರು ಈ ಕುರಿತು ಮುನ್ಸೂಚನೆ ನೀಡಿದ್ದರು. ಅಲ್ಲದೆ ಜೈಸ್ ಬಯೋತ್ಪಾದಕ ಸಂಘಟನೆ ಪುಲ್ವಾಮ ಘಟನೆಗೆ ಎರಡು ದಿನಕ್ಕೂ ಮೊದಲು ಅಫಘಾನಿಸ್ತಾನದಲ್ಲಿ ಟ್ರಕ್ ದಾಳಿ ಮೂಲಕ ನಡಸಿದ ಹತ್ಯಾಕಾಂಡದ ವಿಡಿಯೋ ಬಿಡುಗಡೆ ಮಾಡಿ ಬಾರತಕ್ಕೂ ಇದೆ ಗತಿ ಕಾದಿದೆ ಎಂದು ಕೊಚ್ಚಿಕೊಂಡಿತ್ತು. ಆದರೆ ಮೋದಿ ಸರಕಾರ ಇವೆಲ್ಲವನ್ನ ನಿರ್ಲಕ್ಷಿಸಿತು. ಬಹುಶಃ ಪ್ರದಾನಿ ಮೋದಿ ಈ ಪುಲ್ವಾಮ ದುರಂತದ ನಂತರ ಅದರಿಂದ ದೊರಕುವ ರಾಜಕೀಯ ಲಾಭದ ಲೆಕ್ಕಾಚಾರವನ್ನ ಮೊದಲೆ ಗ್ರಹಿಸಿದ್ದರು ಎನ್ನುವುದು ಖಾತರಿಯಾಗುತ್ತದೆ. ಏಕೆಂದರೆ 2002ರಲ್ಲಿ ಈ ತಂತ್ರವು ಫಲ ಕೊಟ್ಟಿತ್ತು. ನಂತರ ಅವರು ಅಲ್ಲಿನ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಈಗ ಹೆಣಗಳ ಮೇಲಿನ ರಾಜಕಾರಣವನ್ನು ರಾಶ್ಟ್ರ ಚುನಾವಣೆಗೂ ವಿಸ್ತರಿಸುತ್ತಿದ್ದಾರೆ. ಕಳೆದ ಇಪ್ಪತ್ತು ದಿನಗಳಿಂದ ಪ್ರತಿ ಚುನಾವಣಾ ಬಾಶಣದಲ್ಲಿ ಪುಲ್ವಾಮ ಘಟನೆಯನ್ನ ಉಲ್ಲೇಖಿಸುತ್ತ ಆ ಮೂಲಕ ಹಿಂದೂ ಮತಾಂದತೆಯನ್ನ ಕೆರಳಿಸುತ್ತಿದ್ದಾರೆ. ಯೋದರ ಹೆಣಗಳ ಮೇಲೆ ಸಾದ್ಯವಾದಶ್ಟು ಮತಗಳನ್ನು ಗಳಿಸುವ ಹುನ್ನಾರದಲ್ಲಿದ್ದಾರೆ ಮತ್ತು ಇಡಿ ಬಿಜೆಪಿ ಪಕ್ಷವು ಈ ತಂತ್ರವನ್ನ ಅನುಸರಿಸುತ್ತಿದೆ.
ವರ್ತಮಾನದ ಪ್ರತಿಕ್ರಿಯೆ
ಇಂದು ಬಾರತದ ಪ್ರಜಾಪ್ರಬುತ್ವದ ಆರೋಗ್ಯ ಹೇಗಿದೆ? ಒಂದೆ ಮಾತಿನಲ್ಲಿ ಹೇಳಬೇಕೆಂದರೆ ಹದಗೆಡುತ್ತಿದೆ
ಫ್ರೊ. ಸ್ಟೆನ್ ವಿಡ್ಮಾಲಂ ಅವರು ಹೇಳಿದಂತೆ 2009-2014 ಕಾಲಘಟ್ಟದಲ್ಲಿಯೆ ಪ್ರಜಾಪ್ರಬುತ್ವದ ಕುಸಿತದ ಆರಂಬದ ಲಕ್ಷಣಗಳು ಶುರುವಾದವು. ಮೋದಿಯಂತಹ ನಿರಂಕುಶ ಮನಸ್ಥಿತಿಯ ರಾಜಕಾರಣಿಗೆ ಮತ್ತು ಆರೆಸ್ಸಸ್‍ನಂತಹ ಮತಾಂದ ಸಂಘಟನೆಗೆ ದೇಶವನ್ನ ದ್ವಂಸಗೊಳಿಸಲು ಆ 2009-14 ಕಾಲದ ಯುಪಿಎ2 ಆಡಳಿತ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿತು.  ಪ್ರಜಾಪ್ರಬುತ್ವದ ವೈವಿದ್ಯತೆ (ವಿ-ಡೆಮ್)ನ ಯೋಜನೆಯ ಸಮೀಕ್ಷೆ 0-1 ಸೂಚ್ಯಂಕ ಕ್ರಮದಲ್ಲಿ 1947-2017ರ ವರೆಗಿನ ಎಪ್ಪತ್ತು ವರ್ಶಗಳ ಬಾರತದ ಲಿಬರಲ್ ಪ್ರಜಾಪ್ರಬುತ್ವದ ಕಥನವನ್ನ ವಿವರಿಸುತ್ತದೆ. (ಇದರ ವಿವರಗಳಿಗೆ 6/4/2019ರ ವೈರ್.ಇನ್ ಲೇಖನ ನೋಡಿ) ಮಾನವ ಹಕ್ಕುಗಳು, ಅಬಿವ್ಯಕ್ತಿ ಸ್ವಾತಂತ್ರ್ಯ, ಕಾನೂನು ಪಾಲನೆ, ನ್ಯಾಯಾಂಗದ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ಸ್ವಾತಂತ್ರ್ಯ ಮತ್ತು ಚುನಾವಣಾ ಪ್ರಜಾಪ್ರಬುತ್ವಗಳ ವಲಯಗಳಲ್ಲಿ ಲಿಬರಲ್ ಪ್ರಜಾಪ್ರಬುತ್ವದ ಸೂಚ್ಯಂಕವು 50-60ರ ದಶಕಗಳಲ್ಲಿ 0.55 ಮಟ್ಟದಲ್ಲಿತ್ತು. ಆದರೆ 1977ರ ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ 0.28 ಮಟ್ಟಕ್ಕೆ ಕುಸಿಯಿತು. ಮರಳಿ 1990-2001ರ ಅವದಿಯಲ್ಲಿ 0.60 ಸೂಚ್ಯಂಕಕ್ಕೆ ಏರಿಕೆ ಕಂಡಿತು. ಆದರೆ 2107ರ ಹೊತ್ತಿಗೆ ಮರಳಿ 0.40 ಸೂಚ್ಯಂಕಕ್ಕೆ ಕುಸಿದಿದೆ. 2020ರ ವರೆಗೆ ಬಿಜೆಪಿಯ ಇದೇ ದಮನಕಾರಿ ದೋರಣೆ, ನೀತಿಗಳು ಮುಂದುವರೆದರೆ ಈ ಸೂಚ್ಯಂಕವು 0.20 ಮಟ್ಟಕ್ಕೆ ಕುಸಿಯುತ್ತದೆ. ಅಬಿವ್ಯಕ್ತಿ ಸ್ವಾತಂತ್ರ್ಯದ ಸೂಚ್ಯಂಕವು 2004ರಲ್ಲಿ 0.85 ಮಟ್ಟದಲ್ಲಿದ್ದರೆ 2017ರಲ್ಲಿ ಅದು 0.40 ಮಟ್ಟಕ್ಕೆ ಕುಸಿದಿದೆ. ಇದೇ ಆಡಳಿತ ಮುಂದುವರೆದರೆ 2020ರಲ್ಲಿ ಈ ಸೂಚ್ಯಂಕವು 0.2 ಮಟ್ಟಕ್ಕೆ  ಕುಸಿಯುತ್ತದೆ. 2004ರಲ್ಲಿ ದಾರ್ಮಿಕ ಸ್ವಾತಂತ್ರ್ಯದ ಸೂಚ್ಯಂಕವು 0.8 ಮಟ್ಟದಲ್ಲಿದ್ದರೆ 2017ಕ್ಕೆ 0.55 ಕ್ರಮಾಂಕಕ್ಕೆ ಕುಸಿದಿದೆ. ದಾರ್ಮಿಕ ಸಂಘಟನೆಗಳ ಪ್ರಾತಿನಿದ್ಯವನ್ನ ಕಾಪಾಡುವ ನಿಟ್ಟಿನಲ್ಲಿ 2004ರಲ್ಲಿ ಸೂಚ್ಯಂಕವು 0.9 ಮಟ್ಟದಲ್ಲಿದ್ದರೆ 2017ರ ಮೋದಿ ಆಡಳಿತದಲ್ಲಿ 0.65 ಸೂಚ್ಯಂಕಕ್ಕೆ ಕುಸಿದಿದೆ. ಈ ಎಲ್ಲ ಸಮೀಕ್ಷೆಗಳು ಕಳೆದ ಹತ್ತು ವರ್ಶಗಳಲ್ಲಿ ಪ್ರಜಾಪ್ರಬುತ್ವವು ಹಂತ ಹಂತವಾಗಿ ತನ್ನ ಆಸ್ತಿತ್ವವನ್ನ ಕಳೆದುಕೊಳ್ಳುತ್ತ ಬಂದಿರುವುದನ್ನ ಸೂಚಿಸುತ್ತವೆ. ಹಾಗಿದ್ದಲ್ಲಿ ಚುನಾವಣೆಯ ಸಂದರ್ಬದಲ್ಲಿ ಪ್ರಜೆಗಳು ತಮ್ಮ ಮತದಾನದ ಅಸ್ತ್ರವನ್ನ ಬಳಸಿ ದಮನಕಾರಿ ಸರಕಾರಕ್ಕೆ ಶಿಕ್ಷೆ ವಿದಿಸಬಲ್ಲರೆ? ಇದೆ ಇಂದಿನ ಅತ್ಯಂತ ಸಂಕೀರ್ಣವಾದ, ಬಿಕ್ಕಟ್ಟಿನ ಅಂಶವಾಗಿದೆ.
2002ರಲ್ಲಿ ಮುಸ್ಲಿಮರ ಹತ್ಯೆಯನ್ನ ಸಮರ್ಥಿಸಿಕೊಂಡ ಮನಸ್ಸುಗಳ ಸಂಖ್ಯೆ ಹದಿನೈದು ವರ್ಶಗಳ ನಂತರ ಹತ್ತು ಪಟ್ಟು ಹೆಚ್ಚಿದೆ. ಇಂದು ಆ ಮನಸ್ಸುಗಳು ಮೋದಿಯ ಪುನರಾಯ್ಕೆ ಬಯಸುತ್ತಿವೆ ಮತ್ತು ಮೋದಿಯ ಪರವಾಗಿ ತಳಸಮುದಾಯಗಳನ್ನು ಪ್ರಬಾವಗೊಳಿಸುತ್ತಿವೆ. ಇದರಲ್ಲಿ ಯಶಸ್ಸು ಗಳಿಸಿವೆಯೆ ಎಂಬುದನ್ನ ಪಲಿತಾಂಶಗಳು ಮಾತ್ರ ಹೇಳಬಲ್ಲವು. ಮಾದ್ಯಮಗಳ ವರದಿಗಳನ್ನು ನಂಬುವುದಾದರೆ ಪ್ರತಿ ಹತ್ತು ಜನರಲ್ಲಿ 8 ಜನರು ಮೋದಿ ಕಾರಣಕ್ಕೆ ದೇಶದ ಬದ್ರತೆ ಉಳಿದುಕೊಂಡಿದೆ ಎಂದು ನಂಬಿದ್ದಾರೆ. ನಂತರ ಮಾರ್ಚ 2019ರಲ್ಲಿ ನಡೆಸಿದ ಚುನಾವಣಪೂರ್ವ ಸಮೀಕ್ಷೆಗಳಲ್ಲಿಯೂ ಶೇಕಡಾ 10% ಪ್ರಮಾಣದ ಜನಸಂಖ್ಯೆ ಪುಲ್ವಾಮ ದುರಂತ ಮತ್ತು ನಂತರದ ಬಾಲಾಕೋಟ್ ದಾಳಿ ಚುನಾವಣೆಯಲ್ಲಿ ಮುಖ್ಯ ವಿಶಯ ಎಂದು ಅಬಿಪ್ರಾಯಪಟ್ಟಿದ್ದಾರೆ. ಶೇಕಡಾ 47% ಪ್ರಮಾಣದ ಜನತೆ ಮೋದಿಯ ಪುನರಾಯ್ಕೆ ಬಯಸಿದ್ದಾರೆ. ಈ ಸಮೀಕ್ಷೆಯ ಸತ್ಯಾಸತ್ಯತೆ ಮತ್ತು ವಿಶ್ವಾಸರ್ಹತೆಯನ್ನ ಖಚಿತಪಡಿಸಲು ಸಾದ್ಯವಿಲ್ಲ. ಕಳೆದ ಐದು ವರ್ಶಗಳಲ್ಲಿ ಗರಿಶ್ಟ ಮಟ್ಟದ ನಿರುದ್ಯೋಗ (ಶೇಕಡಾ 7%), ಅಸಮಾನ ಆದಾಯ ಅನುಪಾತ, ಅಸುಂತುಶ್ಟ ಮನಸ್ಥಿತಿಯುಳ್ಳ ದೇಶ, ಗಡಿಯಲ್ಲಿ ಪದೆ ಪದೆ ಕದನ ವಿರಾಮದ ಉಲ್ಲಂಘನೆ, ಗರಿಶ್ಟ ಮಟ್ಟದಲ್ಲಿ ಸೈನಿಕರ ಹತ್ಯೆ, ಗರಿಶ್ಟ ಮಟ್ಟದಲ್ಲಿ ಉಗ್ರವಾದದ ಸೆಳೆತಕ್ಕೆ ಒಳಗಾಗುತ್ತಿರುವ ಕಾಶ್ಮೀರಿ ಯುವಕರು, ಗರಿಶ್ಟ ಮಟ್ಟದ ದೊಂಬಿ ಹತ್ಯೆಗಳು, ಕುಸಿದ ಉತ್ಪಾದನೆ, ಕೃಶಿ ಬಿಕ್ಕಟ್ಟು, ಮತಾಂದತೆ, ದಲಿತರ ಮೇಲಿನ ದೌರ್ಜನ್ಯ, ರಫಲ್ ಹಗರಣ ಹೀಗೆ ಇನ್ನೂ ಅನೇಕ ವಿಫಲತೆಗಳ ಪಟ್ಟಿಯೆ ಇದೆ. ಆದರೆ ತಮ್ಮ ಬದುಕಿಗೆ ನೇರವಾಗಿ ಸಂಬಂದಿಸಿದ ಈ ಸಂಗತಿಗಳು ಜನರಿಗೆ ಏತಕ್ಕೆ ಮುಖ್ಯವಾಗುತ್ತಿಲ್ಲ? ಜನರ ಬದುಕಿನ ಈ ಸಮಸ್ಯೆಗಳು ಯಾಕೆ ಪ್ರಮುಖ ಚರ್ಚೆಯ ವಿಶಯವಾಗುತ್ತಿಲ್ಲ?  ಉದ್ಯೋಗ, ಬಡನಕ್ಕೆ ಸಂಬಂದಿಸಿದ ವಾಸ್ತವಾದ, ವೈಜ್ಞಾನಿಕ ದತ್ತಾಂಶಗಳನ್ನೆ ತನ್ನ ಅನುಕೂಲಕ್ಕೆ ತಕ್ರಕಂತೆ ತಿರುಚಿದ ಮೋದಿ ಸರಕಾರದ ವಿರುದ್ದ ಸಾಮಾಜಿಕವಾಗಿ ಸಣ್ಣ ಪ್ರತಿರೋದವೂ ಹುಟ್ಟಲಿಲ್ಲವೇಕೆ? ಇದು ಪ್ರತಿಯೊಬ್ಬ ಪ್ರಜ್ಞಾವಂತರನ್ನ ಕಾಡುತ್ತಿದೆ. ಮೋದಿ-ಆರೆಸ್ಸಸ್ ಬಯಸಿದಂತೆ ಬಾರತದ ಜನತೆ ಗುಜರಾತ್ ಜನರ ಮನಸ್ಥಿತಿಯತ್ತ ವಾಲಿದ್ದಾರೆ ಎಂದು ಇದು ಸಾಬೀತುಪಡಿಸುತ್ತದೆಯೆ? ಮೌಂಕ್ ಹೇಳಿದಂತೆ ಜನರು ವರ್ಸಸ್ ಪ್ರಜಾಪ್ರಬುತ್ವ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆಯೆ? ಕಳೆದ ಎಪ್ಪತ್ತು ವರ್ಶಗಳಲ್ಲಿ ಅತ್ಯಂತ ಜತನದಿಂದ, ಜವಬ್ದಾರಿಯಿಂದ ಕಟ್ಟಿದ ಪ್ರಜಾಪ್ರಬುತ್ವವನ್ನೆ ದುರ್ಬಲಗೊಳಿಸುತ್ತಿರುವ ಈಗಿನ ಚುನಾವಣ ವಿದ್ಯಾಮಾನಗಳು ಬವಿಶ್ಯದಲ್ಲಿ ಅರಾಜಕತೆ, ಫ್ಯಾಸಿಸಂ ಭಾರತದ ಮುನ್ಸೂಚನೆಯತಿಂವೆಯೆ? ಇಲ್ಲಿ ಮೋದಿ ಗೆದ್ದರೂ ಅಥವಾ ಸೋತರೂ ಗಮನಾರ್ಹ ಬದಲಾವಣೆಗಳು ಸದ್ಯಕ್ಕಂತೂ ಕಶ್ಟ ಎಂಬಂತೆ ಬೇಜವಬ್ದಾರಿಯಿಂದ ವರ್ತಿಸುತ್ತಿರುವ ವಿರೋದಪಕ್ಷಗಳು ಜನತೆಯಲ್ಲಿ ಸಿನಿಕತನ. ನಿರಾಶವಾದ ಮೂಡಿಸುತ್ತಿವೆಯೆ? ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ ಕಳೆದ ಕೆಲ ತಿಂಗಳುಗಳ ಹಿಂದೆ ಮೋದಿ ಸರಕಾರ “ಪೌರತ್ವ (ತಿದ್ದುಪಡಿ) ಮಸೂದೆ 2019”(ಎನ್‍ಆರ್‍ಸಿ)  ಅನ್ನು ಜಾರಿಗೆ ತರಲು ಹೊರಟಾಗ ಇಡೀ ಈಶಾನ್ಯ ರಾಜ್ಯಗಳಲ್ಲಿ ವಿರೋಧ ಬುಗಿಲೆದ್ದಿತು. ಅದರಲ್ಲೂ ಅಸ್ಸಾಂ ರಾಜ್ಯವು ಬಿಜೆಪಿ ಪಕ್ಷದ ಈ ಒಡೆದು ಆಳುವ ನೀತಿ ಮತ್ತು ಮತೀಯವಾದದ ಮೂಸದೆಯ ವಿರುದ್ದ ಹೋರಾಟವನ್ನೆ ಪ್ರಾರಂಬಿಸಿತು. ಅಸ್ಸಾಂ ಗಣ ಪರಿಶದ್ ಪಕ್ಸವು ಬಿಜೆಪಿ ಮೈತ್ರಿಯಿಂದ ಹೊರಬಂದಿತ್ತು. ಆದರೆ ಚುನಾವಣಾ ಘೋಶಿಸಿದ ನಂತರ ಇಡೀ ಚಿತ್ರಣವೆ ಬದಲಾಗಿದೆ. ಮತ್ತೆ ಬಿಜೆಪಿ ಹಾಗೂ ಎಜಿಪಿ ಮೈತ್ರಿ ಮಾಡಿಕೊಂಡಿವೆ. ಸಮೀಕ್ಷೆಗಳು ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ ಗರಿಶ್ಟ ಕ್ಷೇತ್ರಗಳನ್ನ ಗೆಲ್ಲಲಿದೆ ಎಂದು ಹೇಳುತ್ತಿವೆ. ಯಾಕೆ ಅಸ್ಸಾಂ ಜನತೆ ಮರಳಿ ಮರಳಿ ತಮ್ಮನ್ನ ದಮನ ಮಾಡುವವರನ್ನೆ ಅರಿಸುತ್ತಿದ್ದಾರೆ? ಇದು ದೇಶದ್ಯಾಂತ ಕಂಡುಬರುತ್ತಿರುವ ವಿದ್ಯಾಮಾನವೆನ್ನಬಹುದಾಗಿದೆ. ಇಲ್ಲಿನ ಸಬಲ್ಟ್ರಾನ್ ಅಸಹಾಯಕತೆ, ಆತಂಕ, ಅವಜ್ಞೆಯಿಂದ ತನ್ನ ಶೋಷಕನನ್ನೆ ಬೆಂಬಲಿಸುತ್ತಿದ್ದಾನೆ (ಈ ಅನುಮಾನಗಳು ಮತ್ತು ವಿಶ್ಲೇಶಣೆಗಳು ಮಾದ್ಯಮದ ಸಮೀಕ್ಷೆ ಮತ್ತು ವೈಯುಕ್ತಿಕ ಅನುಬವದಿಂದ ಮೂಡಿವೆ. ಇದು ಅರ್ದಸತ್ಯ ಮಾತ್ರ, ನಿಜದಲ್ಲಿ ಜನತೆಯ ಲೆಕ್ಕಾಚಾರಗಳೆ ಈ ಪ್ರಬುತ್ವಕ್ಕೆ ಪಾಠ ಕಲಿಸುವ ದಿಕ್ಕಿನಲ್ಲಿರಬಹುದು)
ಪ್ರಜೆಗಳು ಒಟ್ಟಾರೆ ರಾಜಕಾರಣದ ಬಗ್ಗೆ ಬ್ರಮನಿರಸನಗೊಂಡಿದ್ದಾರೆ. ಆವರು ಕುಪಿತರಾಗಿದ್ದಾರೆ, ಆಕ್ರೋಶಗೊಂಡಿದ್ದಾರೆ, ಅಸಹಾಯಕರಾಗಿದ್ದಾರೆ. ಆದರೆ ಆಡಳಿತ ವಿರೋದಿ ಮತ ಚಲಾಯಿಸುವ ಬದಲು ಮೇಲ್ನೋಟಕ್ಕೆ ಕಾಣುವಂತೆ ಮೋದಿಯ ಪುನರಾಯ್ಕೆ ಬಯಸುತ್ತಿದ್ದಾರೆ. ಒಂದು ಕಾಲದಲ್ಲಿ ಮಾದರಿಯಾಗಿದ್ದ ಬಾರತದ ಲಿಬರಲ್ ಪ್ರಜಾಪ್ರಬುತ್ವ ಇಂದು ರೋಗಗ್ರಸ್ಥವಾಗಿದೆ. ಮೋದಿ ಸರಕಾರದ ಜೀವವಿರೋದಿ, ದಮನಕಾರಿ ಆರ್ಥಿಕ, ಸಾಮಾಜಿಕ ನೀತಿಗಳು, ಆರೆಸ್ಸಸ್‍ನ ಮತೀಯವಾದದ ರಾಜಕಾರಣದ ಜೊತೆಗೆ ಕಾಂಗ್ರೆಸ್ ಒಳಗೊಂಡಂತೆ ವಿರೋದಪಕ್ಷಗಳ ಯಾವುದೆ ಕಾರ್ಯಯೋಜನೆಗಳಿಲ್ಲದ ಬೇಜವಬ್ದಾರಿ ವರ್ತನೆಗಳಿಂದಾಗಿ ಭಾರತದ ಪ್ರಜಾಪ್ರಬುತ್ವದ ಮೌಲ್ಯಗಳು ಕ್ಷೀಣಿಸುತ್ತಿವೆ. ಆದರೆ ಈ ಮೇಲಿನ ದೋಶಗಳು ಮತ್ತು ತಪ್ಪು ಹೆಜ್ಜೆಗಳನ್ನ ಸರಿಪಡಿಸುವುದರ ಬದಲಾಗಿ ಚುನಾವಣೆಯ ಗೆಲುವು-ಸೋಲುಗಳ ಮೂಲಕ ಪ್ರಜಾಪ್ರಬುತ್ವದ ಅರ್ಥವಂತಿಕೆಯನ್ನ ಮರುಸ್ಥಾಪಿಸಬಯಸುತ್ತಿದ್ದೇವೆ. ಜಾತಿ, ದರ್ಮದ, ಮತಾಂದತೆ, ಹಣದ ಥೈಲಿಯ ಆದಾರದ ಮೇಲೆ ನಿಮ್ಮ ಪ್ರತಿನಿದಿಯನ್ನ ಆಯ್ಕೆ ಮಾಡಿ ಎಂದು ಮತದಾರರ ಮೇಲೆ ಒತ್ತಡ ಹೇರಲಾಗುತ್ತಿದೆ ಮತ್ತು  ಇದೆ ಪ್ರಜಾಪ್ರಬುತ್ವದ ವೈಶಿಷ್ಟತೆ ಎಂದು ಬಣ್ಣಿಸಲಾಗುತ್ತಿದೆ.
ಮರೆಯುವ ಮುನ್ನ
ಅಂಬೇಡ್ಕರ್ ಅವರು ‘ಒಬ್ಬ ವ್ಯಕ್ತಿ, ಒಂದು ವೋಟು, ಒಂದು ಮೌಲ್ಯ’ ಪ್ರಜಾಪ್ರಬುತ್ವದ ತತ್ವ ಸಿದ್ದಾಂತವಾಗಿದೆ ಎಂದು ದೃಡವಾಗಿ ನಂಬಿದ್ದರು. ಪ್ರಜಾಪ್ರಬುತ್ವವು ವ್ಯಕ್ತಿಯೊಬ್ಬನ ಮನಸ್ಸಿನ ದೋರಣೆ ಮತ್ತು ಬದುಕಿನ ಫಿಲಾಸಫಿ. ಸಮಾನತೆ, ಸ್ವಾತಂತ್ರ್ಯ ಮತ್ತು ಬಂದುತ್ವವನ್ನು ಬೆಳೆಸಲು ಸಾಮಾಜಿಕ ಪ್ರಜಾಪ್ರಬುತ್ವವು ರೂಪುಗೊಳ್ಳಬೇಕು. ಸಮಾನತೆ ಇಲ್ಲದೆ ಕೇವಲ ಸ್ವಾತಂತ್ರ್ಯ ದೊರಕಿದರೆ ಅದು ಕೆಲ ವ್ಯಕ್ತಿಗಳ/ ವ್ಯಕ್ತಿಯ ಅದಿಕಾರಶಾಹಿ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಸಮಾನತೆ ಇದ್ದು ಸ್ವಾತಂತ್ರ್ಯವಿಲ್ಲದೆ ಹೋದರೆ ಅದು ವ್ಯಕ್ತಿಯೊಬ್ಬನ ಸ್ಪೂರ್ತಿ, ಬದ್ದತೆಯನ್ನು ಸಾಯಿಸುತ್ತದೆ. ಸಮಾನತೆ ಮತ್ತು ಸ್ವಾತಂತ್ರ್ಯ ಪ್ರಜಾಪ್ರಬುತ್ವದ ಆದಾರಸ್ತಂಬಗಳು, ಆದರೆ ಬಂದುತ್ವವಿಲ್ಲದೆ ಪ್ರಜಾಪ್ರಬುತ್ವ ಉಳಿಯುವುದಿಲ್ಲ, ಬಂದುತ್ವವು ಪ್ರಜಾಪ್ರಬುತ್ವದ ಬೇರು ಎಂದು ಅಂಬೇಡ್ಕರ್ ಅವರು ವಿವರಿಸಿದ್ದರು. ಮೋದಿ-ಆರೆಸ್ಸಸ್ ಸರಕಾರದ ದುರಾಡಳಿತ ಈ ಫ್ಯಾಸಿಸಂ ಪರಿಸ್ಥಿತಿಗೆ ಕಾರಣವಾದರೆ ಮತ್ತೊಂದೆಡೆ ಕಾಂಗ್ರೆಸ್ ಒಳಗೊಂಡಂತೆ ಇತರ ವಿರೋದಪಕ್ಷಗಳು ಪ್ರಜಾಪ್ರಬುತ್ವದ ಕಾವಲುಗಾರರಂತೆ ತಮ್ಮ ಜವಬ್ದಾರಿ ನಿರ್ವಹಿಸಲು ಸೋತಿವೆ. ಆದರೆ ದುರಂತವೆಂದರೆ ಈ ವಿರೋದ ಪಕ್ಷಗಳು ಫ್ಯಾಸಿಸಂ ಆಡಳಿತದ ವಿರುದ್ದ ನಮ್ಮ ಅನಿವಾರ್ಯ ಆಯ್ಕೆಗಳೂ ಆಗಿವೆ. ಈ ಎಲ್ಲ ಹಿನ್ನಲೆಯಲ್ಲಿ ಕೇವಲ ಚುನಾವಣಾ ರಾಜಕೀಯದ ಮೇಲೆ ಪ್ರಜಾಪ್ರಬುತ್ವವನ್ನ ಉಳಿಸಿಕೊಳ್ಳಲು ಹೆಣಗುವುದು ಬೆಟ್ಟಕ್ಕೆ ನೀರು ಹೊತ್ತಂತೆ. ಇಂದು ಈ ನಿಜದ ಸಮಾನತೆ, ಸ್ವಾತಂತ್ರ್ಯ, ಬಂದುತ್ವವನ್ನ ಕಟ್ಟಬೇಕಾದ ದೊಡ್ಡ ಜವಬ್ದಾರಿ ಇಲ್ಲಿನ ಜನಪರ ಚಳುವಳಿಗಳ ಹೆಗಲ ಮೇಲಿದೆ.
(ಓದುಗರಿಗೆ ಸೂಚನೆ: ಈ ಲೇಖನದ ನಿರೂಪಣೆ ಡಿ.ಎನ್ ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಖಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು ಫ್ರೂಫ್ ವ್ಯತ್ಯಾಸವೆಂದು ಬಗೆಯಬಾರದೆಂದು ಕೋರುತ್ತೇವೆ)
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...