Homeಕರ್ನಾಟಕಕುಲಕ್ಕೆ ಮೂಲ ಕೊಡಲಿ ಕಾವು- ದೇವು

ಕುಲಕ್ಕೆ ಮೂಲ ಕೊಡಲಿ ಕಾವು- ದೇವು

- Advertisement -
- Advertisement -

ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಬಂಡಾಯವೆದ್ದು ಬೊಂಬಾಯಿಗೆ ಹೋಗಿದ್ದ ಶಾಸಕರ ಸಾಹಸ ಏನೋ ಮಾಡಲು ಹೋಗಿ ಇನ್ನೇನೋ ಆದಂತಿದೆಯಲ್ಲಾ. ಸೂಕ್ಷ್ಮವಾಗಿ ನೋಡಿದರೆ, ಅಂದರೆ ವಿಶ್ವನಾಥ್ ತರ ಆಲೋಚಿಸಿದರೆ, ಅಂತಹ ಆಗಬಾರದ್ದೇನೂ ಆಗಿಲ್ಲವಂತಲ್ಲಾ. ಹೇಗೆಂದರೆ, ಈ ಕುಮಾರಸ್ವಾಮಿ ಸರಕಾರದಲ್ಲಿದ್ದರೆ ಭಿಕ್ಷುಕರಂತೆ ಇರಬೇಕಿತ್ತು. ಕ್ಷೇತ್ರದ ಕೆಲಸಗಳಿಗಾಗಿ ಬೇಡಬೇಕಿತ್ತು. ಆ ಬೇಡಿಕೆ, ರೇವಣ್ಣನ ಖಾತೆಗೆ ಸಂಬಂಧಿಸಿದ್ದರೆ, ಮುಗಿದೇಹೋಯ್ತು. ಮೂಡ್ಕಿಗಿರಪ್ಪನಿಗೆ ಕೋಳಿ ಕೂದು ಪೊರಮಾಡಿ ಕೈಮುಗಿದಂತಾಗುತ್ತಿತ್ತು. ಇನ್ನುಳಿದ ಬೇಡಿಕೆಗಳು ಪಿತಾಜಿಯವರಾದ ದ್ಯಾವೇಗೌಡರ ಆವಗಾಹನೆಗೆ ಹೋಗಬೇಕಿತ್ತು. ಇಂತಹ ಯಾಚಕತನದಲ್ಲಿ ಶಾಸಕರಾಗಿದ್ದುಕೊಂಡು, ಚಿಲ್ಲರೆ ಹಣದೊಂದಿಗೆ ಮನೆಗೆ ಹೋಗಿ ಮತ್ತು ಚುನಾವಣೆಗೆ ಹೋಗಿ ಸೋಲುವುದಕ್ಕಿಂತ ಮಕ್ಕಳ ಕಾಲಕ್ಕೂ ಮುಗಿಯದಷ್ಟು ಹಣವನ್ನು ಮೋದಿ ಶಾರಿಂದ ಪಡೆದು, ಆ ರಮೇಶ್ ಕುಮಾರ್ ಅದೇನು ಮಾಡುತ್ತಾನೋ ನೋಡೇಬಿಡೋಣ ಎಂಬ ತೀರ್ಮಾನಕ್ಕೆ ಬಂದಿದ್ದರಂತಲ್ಲಾ ಥೂತ್ತೇರಿ.

*****

ಕರ್ನಾಟಕದ ರಾಜಕಾರಣಕ್ಕೇ ಶಾಪದಂತಿರುವ ಅಥವಾ ಒಕ್ಕಲಿಗ ಜನಾಂಗದ ನಾಯಕರುಗಳಿಗೇ ಕಂಟಕವಾಗಿರುವ ದ್ಯಾವೇಗೌಡರು ಮೊನ್ನೆ ತಮ್ಮ ಪಾರ್ಟಿ ಕಾರ್ಯಕರ್ತರ ಎದುರು ಒಂದೇ ಕಣ್ಣಿನಲ್ಲಿ ಎಷ್ಟು ಅತ್ತರೂ ಕಣ್ಣೀರು ಬರದೇ ಕರವಸ್ತ್ರದಿಂದ ವರಸಿಕೊಂಡರಂತಲ್ಲಾ. ಗೌಡರ ಈ ಕಣ್ಣೀರಿಗೆ ಮಂಡ್ಯದ ಮಂತ್ರಿಗಳು ಶಾಸಕರು ಮತ್ತು ನಿಷ್ಠಾವಂತರು ಗೌಡರಿಗೆ ಬರೆಯುತ್ತಿರುವ ಅಥವಾ ಬರೆಯಲು ಯತ್ನಿಸುತ್ತಿರುವ ಕಾಗದಗಳ ಪರಿಣಾಮವೆಂದು ಗೌಡರ ಆಪ್ತವಲಯದ ಆಪಾದನೆಯಾಗಿದೆಯಲ್ಲಾ. ಗೌಡರ ಆವಗಾಹನೆಗೆ ಮಂಡ್ಯದ ಮುಖಂಡರು ಬರೆಯುತ್ತಿರುವ ದೂರಿನ ಪಟ್ಟಿ ಇಂತಿದೆಯಲ್ಲಾ.

ಪಿತೃ ಸಮಾನರು ದೈವ ಸಮಾನರೂ ಆದ ಅಪ್ಪಾಜಿಯವರು ಮತ್ತು ಕುಮಾರಣ್ಣನವರಿಗೆ, ನಮ್ಮ ಶಿರಸಾಷ್ಟಾಂಗ ನಮಸ್ಕಾರಗಳು. ಧೈರ್ಯ ಮಾಡಿ ಈ ಪತ್ರ ಬರೆಯುವ ಉದ್ದೇಶವೇನೆಂದರೆ ಮಂಡ್ಯದಲ್ಲಿ ಚಿರಂಜೀವಿ ನಿಖಿಲ್ ಸೋತ ಮೇಲೆ ತಮ್ಮ ಮನೆಯ ವಾತಾವರಣ ಬದಲಾಗಿದೆ. ಮುಖ್ಯವಾಗಿ ನಾವು ಬಂದಾಗ ಮಡಿಮೈಲಿಗೆ ಬ್ರಾಹ್ಮಣ ಅಸ್ಪøಶ್ಯರನ್ನು ನೋಡಿದಂತೆ ನೋಡುತ್ತೀರಿ ಎಂಬ ವಾಕ್ಯಕ್ಕೆ ಗೌಡರು ಸಿಡಿಮಿಡಿಗೊಂಡರಂತಲ್ಲಾ ಥೂತ್ತೇರಿ…

*****

ಮತ್ತೊಂದು ಪತ್ರದ ಸಾರಾಂಶ. ಅಪ್ಪಾಜಿಯವರೆ ನಾವು ನೀವು ಹೇಳಿದಂತೆ ಕೇಳಿದ್ದೇವೆ. ಕಾಲಲ್ಲಿ ತೋರಿದ ಕೆಲಸವನ್ನ ಕೈಲಿ ಮಾಡಿದ್ದೇವೆ. ಕೈಯಿಂದಲೇ ಹಣ ಹಾಕಿ ರಾಜಕಾರಣ ಮಾಡುತ್ತಿದ್ದೇವೆಯೇ ಹೊರತು ನಿಮ್ಮಿಂದ ಹಣ ಪಡೆದಿಲ್ಲ. ಆದರೂ ನಿಮ್ಮ ಮನೆಗೆ ಬಂದಾಗ, ನಮ್ಮನ್ನು ಕಳ್ಳರಂತೆ ನೋಡುತ್ತೀರಿ. ಇಂತಹ ಅವಮಾನ ಸಹಿಸಲಾಗದೆ ಕೆ.ಆರ್.ಪೇಟೆ ನಾರಾಯಣಗೌಡ ಬಿಕರಿಯಾಗಿ ಹೋದ. ನಮಗೆ ಬೂಕನಕೆರೆ ಎಡೂರಪ್ಪ ದೂರದವನಲ್ಲ. ಆದರೂ ನಾವು ನಿಮ್ಮ ಜೊತೆ ಇದ್ದೇವೆ. ಹೇಳಿದ ಕೆಲಸ ಮಾಡಿದ್ದೇವೆ. ಎಳೆ ಹುಡುಗನನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದಾಗ ಕುಮಾರಣ್ಣನೇ ಸ್ಪರ್ಧಿಸಿದ್ದಾನೆ ಎನ್ನುವಂತೆ ಕೆಲಸ ಮಾಡಿದ್ದೇವೆ. ಕೈಲಿದ್ದ ಕಾಸು ಖಾಲಿಯಾದ ಮೇಲೆ ಕೈ ಸಾಲ ಮಾಡಿದ್ದೇವೆ. ಎಣ್ಣೆ ಅಂಗಡಿ, ಮಿಲಿಟ್ರಿ ಹೋಟೆಲ್ ಬಾಕಿ ಹಾಗೇ ಇದೆ. ಕಿರುಜಾತಿ ಲೀಡರುಗಳನ್ನೆಲ್ಲಾ ತಂದು ನಿಮ್ಮ ಮುಂದೆ ನಿಲ್ಲಿಸಿ ಬಿಕರಿ ಮಾಡಿದೆವು. ಅವರ ಹಳೆ ಬಾಕಿ ಹಾಗೇ ಇದೆ. ನಮ್ಮ ಭಾಷಣದಿಂದ ಜನ ರೊಚ್ಚಿಗೆದ್ದಿದ್ದಾರೆ. ಹೀಗೆ ಮಾತನಾಡಿ ಎಂದು ಹೇಳಿದವರೂ ನೀವೆ. ಈಗ ನಮ್ಮನ್ನ ದೂರುತ್ತಿರುವವರೂ ನೀವೆ. ಹೇಳಿ ನಾವು ಇಲ್ಲೇ ಇರಬೇಕೋ ಅಥವಾ ಬೂಕನಕೆರೆಗೆ ಹೋಗಬೇಕೊ ತಿಳಿಸಿ ಎಂದು ಬರೆದುಬಿಟ್ಟಿದ್ದಾರಲ್ಲ ಥೂತ್ತೇರಿ…

*****

ಮತ್ತೊಂದು ಪತ್ರದ ಒಕ್ಕಣೆ ಇಂತಿದೆಯಲ್ಲಾ. ತಂದೆಯಿಲ್ಲದ ನನಗೆ ತಂದೆ ಸಮಾನರೂ ಅಣ್ಣನಿಲ್ಲದ ನನಗೆ ಅಣ್ಣನಂತಿರುವ ಕುಮಾರಣ್ಣ, ಮಂಡ್ಯದ ಚುನಾವಣಾ ಫಲಿತಾಂಶದ ನಂತರ ನಾನು ನಿಮ್ಮ ಮನೆಗೆ ಬಂದಾಗ ಅಪ್ಪಾಜಿಯವರು ಅತ್ತ ನೋಡುತ್ತಿದ್ದರು. ನನ್ನ ಕಡೆ ತಿರುಗಲಿಲ್ಲ. ನೀವು ಪ್ರಜಾವಾಣಿಯ ಜಾಹೀರಾತು ನೋಡುತ್ತ ತಲೆ ಎತ್ತಲಿಲ್ಲ. ನಿಜಕ್ಕೂ ಮಂಡ್ಯದಲ್ಲಿ ನಮ್ಮ ನಿಖಿಲ್ ಸೋತಿದ್ದು ನಮ್ಮಿಂದಲ್ಲ ನಿಮ್ಮಿಂದ. ಕೇಳಿ ಮೊದಲನೆಯದಾಗಿ ಮಂಡ್ಯಕ್ಕೆ ಒಂಟಿ ಕರುವಿನಂತೆ ಆ ಹುಡುಗನನ್ನ ತಂದು ನಿಲ್ಲಿಸಿದ್ದು ದೊಡ್ಡ ತಪ್ಪು. ಆ ನಂತರ ಕುಮಾರಣ್ಣ ಮೂರು ಸುಮಲತಾರನ್ನ ಹುಡುಕಿ ತಂದು ನಿಲ್ಲಿಸಿದ್ದು ಇನ್ನು ದೊಡ್ಡ ತಪ್ಪು. ಆನಂತರ ಕುಮಾರಣ್ಣ ಯಶ್ ಎಂಬ ನಟನನ್ನು ಕೀಳಾಗಿ ನಿಂದಿಸಿದ್ದು ಮಹಾ ಅಪರಾಧ. ಆ ನಟನ ಅಭಿಮಾನಿಗಳು ಇಡೀ ಕರ್ನಾಟಕದಲ್ಲಿ ನಮಗೂ ಓಟಾಕಲಿಲ್ಲ. ಕಾಂಗ್ರೆಸ್ಸಿಗೂ ಓಟು ಹಾಕಲಿಲ್ಲ. ಇನ್ನ ದರ್ಶನ್ ಎಂಬ ದೊಡ್ಡ ನಟನನ್ನ ಕುಮಾರಣ್ಣ ಆಡಿಕೊಂಡರು. ಆ ನಟನ ಇಡೀ ಕರ್ನಾಟಕದ ಅಭಿಮಾನಿಗಳು ದಳಕ್ಕೆ ಓಟು ಮಾಡಲಿಲ್ಲ. ಈ ಹಾಳು ಟಿ.ವಿ ಜನ ಕುಮಾರಣ್ಣನ ಮಾತನ್ನ ಒಂದು ತಿಂಗಳು ಅರೆದರು. ಇನ್ನ ರೇವಣ್ಣನ ಮಾತು ಮಂಡ್ಯದ ಮಹಿಳೆಯರ ಓಟನ್ನೇ ಕಸಿಯಿತು. ನಿಖಿಲರನ್ನು ಸೋಲಿಸಿದವರು ನೀವೇ ಹೊರತು ನಾವಲ್ಲ ಥೂತ್ತೇರಿ…

*****

ಮತ್ತೊಂದು ಪತ್ರದಲ್ಲಿ ದೇವೇಗೌಡರನ್ನ ನೇರಾನೇರ ಪ್ರಶ್ನಿಸಿದೆಯಂತಲ್ಲಾ. ಮಾನ್ಯ ದೇವೇಗೌಡರೆ ತಮ್ಮ ರಾಜಕಾರಣವನ್ನ ನೋಡಿದರೆ, ಕುಲಕ್ಕೆ ಮೂಲ ಕೊಡಲಿ ಕಾವು ಎನ್ನುವಂತೆ ಕಾಣುತ್ತಿದ್ದೀರಿ. ಇವತ್ತು ಒಬ್ಬನೇ ಒಬ್ಬ ಧೀಮಂತ ನಾಯಕ ಒಕ್ಕಲಿಗ ಜನಾಂಗದಲ್ಲಿ ಇಲ್ಲದಂತೆ ಮಾಡಿಬಿಟ್ಟಿದ್ದೀರಿ. ಕಾಂಗ್ರೆಸ್‍ನಲ್ಲೂ ಇಲ್ಲ, ದಳದಲ್ಲೂ ಇಲ್ಲ. ಅದಕ್ಕೆ ಇಲ್ಲಿ ಬಿಜೆಪಿ ಕಾಲೂರಿದ್ದು. ಕುಮಾರಣ್ಣ ಅವರ ಜೊತೆ ಸರಕಾರ ಮಾಡಿ ಕಾಲೂರಲು ಅವಕಾಶ ಮಾಡಿದರು. ಈಗ ನಿಮ್ಮಿಬ್ಬರ ಮನೆತನದ ಬುದ್ಧಿಯಿಂದ ಅತ್ತ ಕಾಂಗ್ರೆಸ್ಸೂ ಹಾಳಾಯ್ತು. ದಳವೂ ಉದುರೊಯ್ತು. ಬಿಜೆಪಿ ಕಾಲೂರಿತು. ಕಾರಣ ಇಷ್ಟೆ. ತಾವು ಅನಾದಿಕಾಲದಿಂದ ಕರ್ನಾಟಕ ಮತ್ತು ದೇಶವನ್ನು ಕುರಿತು ಯೋಚಿಸಿದವರಲ್ಲ. ಬರೇ ಕುಟುಂಬವನ್ನು ಕುರಿತು ಯೋಚಿಸಿದಿರಿ. ಅವರ ಅಂತಿಮ ಹಂತ ಯಾವುದು ಎಂದರೆ, ನಾಡಿನ ಒಕ್ಕಲಿಗ ಜನಾಂಗ ನಿಮ್ಮನ್ನ ನಿಮ್ಮ ಕುಟುಂಬವನ್ನು ತಿರಸ್ಕರಿಸಿದೆ. ನಿಮ್ಮ ಪಾರ್ಟಿ ಆಫೀಸು ಹಾಳಾಗಿದೆ. ನೀವೇ ನೇಮಿಸಿದ ಅಧ್ಯಕ್ಷ ನಿಮಗೆ ತಕ್ಕ ಶಾಸ್ತಿ ಮಾಡಿದ. ಈಗಲಾದರೂ ಸಮಗ್ರ ಕರ್ನಾಟಕದಲ್ಲಿ, ದಳ ಎಂಬ ಪ್ರಾದೇಶಿಕ ಪಾರ್ಟಿ ಉಳಿಸಲು ಕಣ್ಣು ತೆರೆಯಿರಿ. ಮಿಸ್ಟರ್ ದೇವೇಗೌಡ್ ಓಪನ್ ಯುವರ್ ಐ ಥೂತ್ತೇರಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...