Homeಮುಖಪುಟಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

ಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

- Advertisement -
- Advertisement -

ಇಡೀ ಮನುಷ್ಯ ಕುಲವನ್ನೇ ನಿರ್ನಾಮ ಮಾಡುವತ್ತ ಮುನ್ನುಗ್ಗುತ್ತಿರುವ ಕೊರೊನ ರೋಗದ ವಿರುದ್ಧ ಹೋರಾಟ ನಡೆದಿರುವ ಈ ಸಂದರ್ಭದಲ್ಲಿ, ಒಂದು ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಮನೋಸ್ಥಿತಿಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ನಡೆದಿರುವ ಹೊತ್ತಿನಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅತ್ಯಂತ ಹೊಣೆಗಾರಿಕೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ದ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂಬ ಸಂದೇಶ ಸಾರಿದ ಕೆಲವೆ ನಿಮಿಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾರಾದರೂ ಕೋಮುದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಅಥವಾ ಯಾವುದೇ ಧರ್ಮ, ಜಾತಿಯವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸುವ ಆದೇಶಗಳು ಹೊರಡಿಸಿದ್ದಾರೆ. ಅಂದರೆ ಮುಖ್ಯಮಂತ್ರಿಗಳ ಮಾತು ಕಾರ್ಯರೂಪಕ್ಕೆ ಬಂದಿದೆ. ಇದುವೆ ಅಧಿಕಾರದ ಇಚ್ಛಾಶಕ್ತಿ ಎಂದು ಭಾವಿಸಬಹುದು. ಇಂತಹದ್ದೊಂದು ಮುತ್ಸದ್ದಿತನ ಜನ ಹೋರಾಟದ ನೆಲೆಯಲ್ಲಿ ಬೆಳೆದು ಬಂದ ನಾಯಕನಿಗೆ ಮಾತ್ರ ದಕ್ಕಬಲ್ಲದೇನೋ. ಈಗ ಯಡಿಯೂರಪ್ಪ ಅವರು ಆಡಿದ ಮಾತಿಗೆ ಬದ್ದರಾಗಿಯೂ ನಡೆದುಕೊಳ್ಳಬೇಕಾದ ಪಾರದರ್ಶಕತೆಯನ್ನು ತೋರಬೇಕಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ದ ತಮ್ಮ ಪಕ್ಷದ ಶಾಸಕರು, ಸಂಸದರು, ಮುಂದಾಳುಗಳ ನಾಲಿಗೆಗೂ ಕಾನೂನು ಕುಣಿಕೆ ಹಾಕಿ ಹದ್ದುಬಸ್ತಿನಲ್ಲಿಡಬೇಕು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ 


ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ಮತ್ತದರ ಮಾತೃಕೋಣೆ ಪರಿವಾರದಲ್ಲಿ ಕೊರೊನ ಬಾಧಿತ ನರಳಾಟ ವಕ್ಕರಿಸಿಕೊಂಡಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ಹರಡುವಿಕೆಗೆ ತಬ್ಲೀಘಿಗಳೆ ಕಾರಣ. ಕೊರೊನಾ ಹರುಡುವಿಕೆ ಇದೊಂದು ರೂಪದ ಜಿಹಾದ್ ಎಂದು ಬಹಿರಂಗವಾಗಿ ಹೇಳಿದ್ದರು. ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕ ,ಸಂಸದರುಗಳು ಅಲ್ಪಸಂಖ್ಯಾತ ಸಮುದಾಯವನ್ನೆ ಗುರಿಯಾಗಿಸಿಕೊಂಡು ನಾಲಿಗೆ ಹರಿಬಿಟ್ಟಿದ್ದರು. ಕೊರೊನಾ ಸೋಂಕಿಗೆ ಮುಸ್ಲಿಮರೇ ಕಾರಣ ಎಂಬಂತೆ ಅವರ ವಿರುದ್ದ ಸಂಪಾದ್ರಾಯಿಕ ನ್ಯೂಸ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು ಒಂದೇ ಸಮನೆ ಚೀರಿಕೊಳ್ಳತೊಡಗಿದ್ದವು. ಇವೆಲ್ಲದಕ್ಕೂ ಯಡಿಯೂರಪ್ಪ ಅವರ ಈ ಮೇಲಿನ ಮಾತು ಅಂಕುಶವಿಟ್ಟಂತಾಗಿದೆ.

ರಾಜ್ಯದಲ್ಲಿ ಈಗಾಗಲೆ ಧರ್ಮನಿಂದನೆ ಧೂರ್ತರ ವಿರುದ್ದ ಕೇಸುಗಳು ದಾಖಲಾಗತೊಡಗಿವೆ. ಇದೊಂದು ಪರಿಣಾಮಕಾರಿ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಭರವಸೆ ಮೂಡಿಸಿದ ಬಗೆ ಎನ್ನಬಹುದು. ಹಾಗೆ ನೋಡಿದರೆ ಯಡಿಯೂರಪ್ಪ ಎಂದಿಗೂ ಕೋಮುವಾದಿಯಲ್ಲ ಎಂಬುದನ್ನು ಅನೇಕ ಸಾರಿ ಅವರ ನಡೆ-ನುಡಿಗಳು ಸಾಬೀತು ಮಾಡುತ್ತಲೆ ಬಂದಿವೆ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಅತ್ಯಂತ ಸೌಹಾರ್ದಮಯವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದಲೇ ಎಂತಹುದ್ದೇ ಸಂದರ್ಭದಲ್ಲೂ ಶೇ. ೩೦ ರಷ್ಟು ಮುಸ್ಲಿಂ ಮತಗಳು ಯಡಿಯೂರಪ್ಪ ಅವರಿಗೆ ಮೀಸಲಾಗಿರುತ್ತದೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಪ್ರಬಲ ಲಿಂಗಾಯಿತ ಸಮುದಾಯದ ನಂತರ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟ ಇನ್ನೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಅವರೆಂದೂ ಮುಸ್ಲಿಂರ ವಿರುದ್ದ ಬಹಿರಂಗವಾಗಿ ಕಾರಿಕೊಂಡ ಸನ್ನಿವೇಶವಂತೂ ಕಂಡಿದ್ದಿಲ್ಲ. ರಾಜಕೀಯ ಕಾರಣಗಳಿಗಾಗಿ ಅಂತಹ ವೇದಿಕೆಗಳನ್ನು ಹಂಚಿಕೊಂಡಿದ್ದರೂ ಯಡಿಯೂರಪ್ಪ ಆಂತರ್ಯದಲ್ಲಿ ಧರ್ಮ ದ್ವೇಷದ ಸೋಂಕು ಅಂಟಿಸಿಕೊಂಡವರಲ್ಲ ಎಂಬುದನ್ನು ಒಪ್ಪಲೇ ಬೇಕಾದ ಮಾತು. ಇಂತಹ ಕಾರಣಗಳಿಂದಲೇ ರಾಜ್ಯ ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ ಉಳಿಸಿಕೊಂಡಿರುವವರಲ್ಲಿ ಯಡಿಯೂರಪ್ಪ ಅಗ್ರಮಾನ್ಯರು ಎನ್ನಬಹುದು.

ಕೊರೊನ ಸೋಂಕು ವಿರುದ್ದದ ಹೋರಾಟದ ಜೊತೆಗೆ ಮತಾಂಧರ ಧೋರಣೆಗಳನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲಿನ ಕೆಲಸವೂ ಆಗಿದೆ. ಅದಕ್ಕಾಗಿ ಮಾನಸಿಕವಾಗಿ ಅವರು ಸಿದ್ದರಾದಂತೆ ಕಂಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಆರೆಸ್ಸೆಸ್ಸಿನ ವ್ಯಕ್ತಿಯಾಗಿ ಇಂದು ಉಳಿದಿಲ್ಲ. ಅವರೆಂದೂ ಯಾರ ಕೈಗೊಂಬೆಯಂತೆ ಕೆಲಸ ಮಾಡುವ ಜಯಮಾನದವರೇ ಅಲ್ಲ. ಹಾಗಾಗಿಯೇ ಅವರು ಬಹುತೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರ ಅಸಮಾಧಾನಗಳಿಗೆ ತುತ್ತಾಗುತ್ತಲೆ, ಸ್ಫೋಟಗೊಳ್ಳತ್ತಲೆ ಬಂದಿದ್ದಾರೆ. ರಾಜ್ಯದಲ್ಲಿರುವುದು ಪರಿವಾರ ಪ್ರೇಣಿತ ಬಿಜೆಪಿ ಸರ್ಕಾರವಲ್ಲ. ಹೋರಾಟಗಾರ ಯಡಿಯೂರಪ್ಪ ಅವರ ಸರ್ಕಾರ. ಇದು ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರವನ್ನು ತಮ್ಮ ನಿರ್ಧಾರಗಳಿಗೆ ತಕ್ಕಂತೆ ನಿರ್ದೇಶಿಸುವ ಪರಿವಾರದ ತಲೆಯಾಳುಗಳ ಆಟ ಯಡಿಯೂರಪ್ಪನವರ ಮುಂದೆ ನಡೆಯದ ಕಾರಣವೇ ಅವರೆಲ್ಲಾ ಈಗ ಸರ್ಕಾರ ಮತ್ತು ಪಕ್ಷವನ್ನು ಬೇರ್ಪಡಿಸಿಕೊಂಡು ಯಡಿಯೂರಪ್ಪನವರ ಪದಚ್ಯುತಿಗಾಗಿ ಕಾಯತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತದ ಯಡಿಯೂರಪ್ಪ ಅವರ ಮಾತುಗಳು ಪರಿವಾರದ ತಲೆಯಾಳುಗಳಿಗೆ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ. ಆಟ ಮುಂದಿದೆ.

ಕೊನೆ ಮಾತು:

ಉತ್ತರದ ರಾಜ್ಯಗಳಲ್ಲಿ ದಲಿತರನ್ನು ಭಕ್ತಗಣ ಗುಂಪು ಹತ್ಯೆ ಮಾಡುತ್ತಿರುವಾಗ, ಹತ್ಯಾಚಾರವೆಸಗುತ್ತಿರುವಾಗ, ಐಷಾರಾಮಿ ಕಾರಿಗೆ ಕಟ್ಟಿ ನಡುರಸ್ತೆಯಲ್ಲೇ ಚರ್ಮಸುಲಿದು ಬಡಿಯುತ್ತಿರುವಾಗ ಅಂತಹ ಕೊಲೆಪಾತಕರಿಗೆ ಖಡಕ್ ಆದ ಅಧಿಕಾರಯುಕ್ತ ಎಚ್ಚರಿಕೆಯೊಂದನ್ನು ಕೊಡಬೇಕಾದ ಅಧಿಕಾರ ದಂಡ ಹಿಡಿದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಡಿದ ಹೇಡಿತನದ ಮಾತೇನು ಗೊತ್ತಾ? ಬೇಕಾದರೆ ನನ್ನ ಎದೆಗೆ ಗುಂಡಿಡಿ, ದಲಿತರನ್ನು ಮಾತ್ರ ಕೊಲ್ಲಬೇಡಿ. ಈ ಮಾತು ಒಬ್ಬ ಹೇಡಿ ಮಾತ್ರ ಆಡಬಲ್ಲ. ಅಧಿಕಾರ ದಂಡ ಕೈಯಲ್ಲಿಟ್ಟುಕೊಂಡು ಅವರನ್ನು ಕೊಲ್ಲಬೇಡಿ ನನ್ನನ್ನು ಕೊಲ್ಲಿ ಎಂದು ಹೇಳುವುದು ನ್ಯಾಯ ನಿಷ್ಠುರ, ಕಾನೂನು ಕಾಯಬೇಕಾದ ನಾಯಕನೊಬ್ಬ ಸ್ವತಃ ಕೊಲ್ಲುವ ಕ್ರಿಯೆಯನ್ನು ಮಾನ್ಯ ಮಾಡಿದಂತಲ್ಲವೇ? ಯಾವತ್ತಾದರೂ ಪ್ರಧಾನಿ ಈ ನೆಲದ ಯಾವೊಬ್ಬ ನಾಗರೀಕರನಿಗೂ ಜೀವಹಾನಿ, ಮಾನಹಾನಿ ಆಗಿದ್ದೇ ಆದರೆ ಅಂತಹವರನ್ನು ಕಾನೂನು ಕ್ರಮಗಳಿಂದ ಶಿಕ್ಷಿಸುತ್ತೇನೆ ಎಂದು ಆಡಿದ್ದೇ(ರಾಜಧರ್ಮ ಪಾಲನೆ) ಆಗಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಧರ್ಮದ್ವೇಷ, ಜಾತಿ ದ್ವೇಷದ ರಕ್ತಪಾತಗಳು ಆಗುತ್ತಿರಲಿಲ್ಲವೇನೊ?. ಇಂದು ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಡಿದ ಮಾತನ್ನೇ ಈ ದೇಶದ ಪ್ರಧಾನಮಂತ್ರಿ ಆಡಬೇಕು. ದೀಪ ಹಚ್ಚುವುದು, ಜಾಗಟೆ ಬಾರಿಸುವುದು, ತಪ್ಪಾಳೆ ತಟ್ಟಿ ಬೀದಿಯಲ್ಲಿ ಅರಚಲು ಕರೆ ಕೊಡುವುದನ್ನು ಬಿಟ್ಟು ಅದಕ್ಕಾಗಿ ಮೋದಿ ಈ ಹೊತ್ತಿಗೆ ಯಡಿಯೂರಪ್ಪ ಅವರನ್ನು ರಾಜಧರ್ಮದ ಆದರ್ಶವನ್ನಾಗಿ ಅನುಸರಿಸಲಿ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯದ ವಿರುದ್ದ ಹೋರಾಡುತ್ತಾ ತಮ್ಮ ಯೌವ್ವನದ ಆಯಸ್ಸಿನ ಕಾಲು ಶತಮಾನವನ್ನೆ (೨೭ವರ್ಷ) ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಅವರು ಶಾಂತಿಯಹೋರಾಟದ ಫಲವಾಗಿಯೇ ಆ ದೇಶದ ಅಧ್ಯಕ್ಷರಾದಾಗ ಜಗತ್ತಿನ ಇಡೀ ಬಿಳಿಯರ ಸಾಮ್ರಾಜ್ಯ ಭಯ, ಅತಂಕದಿಂದ ನೆಲ್ಸನ್ ಮಂಡೇಲ ಅವರ ಕಡೆ ನೋಡುತ್ತಿತ್ತು. ಅವರ ಮೊದಲ ಅಧ್ಯಕ್ಷೀಯ ಭಾಷಣಕ್ಕಾಗಿ ಬಿಳಿಯರ ಜಗತ್ತು ಭಯದಿಂದ ಕಾಯುತ್ತಿದ್ದರೆ. ತಮ್ಮ ಮೇಲೆ ಅಮಾನುಷ ಕ್ರೌರ್ಯ ಮೆರೆದ ಬಿಳಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾದು ಕುಂತ ಕರಿಯ ಸಮುದಾಯ ರಣೋತ್ಸಾಹದಿಂದ ತಮ್ಮ ನಾಯಕನ ಸೇಡಿನ ಆದೇಶದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಆದರೆ ಮಂಡಲೇ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅಡಿದ ಮಾತು ಎಂದರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬಿಳಿಯನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಿದ್ದೇ ಆದರೆ ಅದಕ್ಕೆ ಕಾರಣರಾದವರೂ ಯಾರೇ ಇರಲಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂಬುದಾಗಿತ್ತು. ಈ ಕಾರಣಕ್ಕಾಗಿಯೇ ಮಂಡೇಲ ಜಗತ್ತಿನ ಮಾನವತೆಯ ಮಹಾ ಸಂತನಂತೆ ಚರಿತ್ರೆಯಲ್ಲಿ ಉಳಿದು ಹೋಗಿದ್ದಾರೆ.
ಚರಿತ್ರೆಯನ್ನು ಅರಿಯದವನು ಚರಿತ್ರೆಯನ್ನು ಸೃಷ್ಟಿಸಲಾರ.
ಎಲ್ಲಿಯ ಮಂಡೇಲ.. ? ಎಲ್ಲಿಯ ಯಡಿಯೂರಪ್ಪ…? ಎಲ್ಲಿಯ ಮೋದಿ.?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...