Homeಮುಖಪುಟಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

ಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

- Advertisement -
- Advertisement -

ಇಡೀ ಮನುಷ್ಯ ಕುಲವನ್ನೇ ನಿರ್ನಾಮ ಮಾಡುವತ್ತ ಮುನ್ನುಗ್ಗುತ್ತಿರುವ ಕೊರೊನ ರೋಗದ ವಿರುದ್ಧ ಹೋರಾಟ ನಡೆದಿರುವ ಈ ಸಂದರ್ಭದಲ್ಲಿ, ಒಂದು ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಮನೋಸ್ಥಿತಿಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ನಡೆದಿರುವ ಹೊತ್ತಿನಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅತ್ಯಂತ ಹೊಣೆಗಾರಿಕೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ದ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂಬ ಸಂದೇಶ ಸಾರಿದ ಕೆಲವೆ ನಿಮಿಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾರಾದರೂ ಕೋಮುದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಅಥವಾ ಯಾವುದೇ ಧರ್ಮ, ಜಾತಿಯವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸುವ ಆದೇಶಗಳು ಹೊರಡಿಸಿದ್ದಾರೆ. ಅಂದರೆ ಮುಖ್ಯಮಂತ್ರಿಗಳ ಮಾತು ಕಾರ್ಯರೂಪಕ್ಕೆ ಬಂದಿದೆ. ಇದುವೆ ಅಧಿಕಾರದ ಇಚ್ಛಾಶಕ್ತಿ ಎಂದು ಭಾವಿಸಬಹುದು. ಇಂತಹದ್ದೊಂದು ಮುತ್ಸದ್ದಿತನ ಜನ ಹೋರಾಟದ ನೆಲೆಯಲ್ಲಿ ಬೆಳೆದು ಬಂದ ನಾಯಕನಿಗೆ ಮಾತ್ರ ದಕ್ಕಬಲ್ಲದೇನೋ. ಈಗ ಯಡಿಯೂರಪ್ಪ ಅವರು ಆಡಿದ ಮಾತಿಗೆ ಬದ್ದರಾಗಿಯೂ ನಡೆದುಕೊಳ್ಳಬೇಕಾದ ಪಾರದರ್ಶಕತೆಯನ್ನು ತೋರಬೇಕಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ದ ತಮ್ಮ ಪಕ್ಷದ ಶಾಸಕರು, ಸಂಸದರು, ಮುಂದಾಳುಗಳ ನಾಲಿಗೆಗೂ ಕಾನೂನು ಕುಣಿಕೆ ಹಾಕಿ ಹದ್ದುಬಸ್ತಿನಲ್ಲಿಡಬೇಕು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ 


ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ಮತ್ತದರ ಮಾತೃಕೋಣೆ ಪರಿವಾರದಲ್ಲಿ ಕೊರೊನ ಬಾಧಿತ ನರಳಾಟ ವಕ್ಕರಿಸಿಕೊಂಡಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ಹರಡುವಿಕೆಗೆ ತಬ್ಲೀಘಿಗಳೆ ಕಾರಣ. ಕೊರೊನಾ ಹರುಡುವಿಕೆ ಇದೊಂದು ರೂಪದ ಜಿಹಾದ್ ಎಂದು ಬಹಿರಂಗವಾಗಿ ಹೇಳಿದ್ದರು. ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕ ,ಸಂಸದರುಗಳು ಅಲ್ಪಸಂಖ್ಯಾತ ಸಮುದಾಯವನ್ನೆ ಗುರಿಯಾಗಿಸಿಕೊಂಡು ನಾಲಿಗೆ ಹರಿಬಿಟ್ಟಿದ್ದರು. ಕೊರೊನಾ ಸೋಂಕಿಗೆ ಮುಸ್ಲಿಮರೇ ಕಾರಣ ಎಂಬಂತೆ ಅವರ ವಿರುದ್ದ ಸಂಪಾದ್ರಾಯಿಕ ನ್ಯೂಸ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು ಒಂದೇ ಸಮನೆ ಚೀರಿಕೊಳ್ಳತೊಡಗಿದ್ದವು. ಇವೆಲ್ಲದಕ್ಕೂ ಯಡಿಯೂರಪ್ಪ ಅವರ ಈ ಮೇಲಿನ ಮಾತು ಅಂಕುಶವಿಟ್ಟಂತಾಗಿದೆ.

ರಾಜ್ಯದಲ್ಲಿ ಈಗಾಗಲೆ ಧರ್ಮನಿಂದನೆ ಧೂರ್ತರ ವಿರುದ್ದ ಕೇಸುಗಳು ದಾಖಲಾಗತೊಡಗಿವೆ. ಇದೊಂದು ಪರಿಣಾಮಕಾರಿ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಭರವಸೆ ಮೂಡಿಸಿದ ಬಗೆ ಎನ್ನಬಹುದು. ಹಾಗೆ ನೋಡಿದರೆ ಯಡಿಯೂರಪ್ಪ ಎಂದಿಗೂ ಕೋಮುವಾದಿಯಲ್ಲ ಎಂಬುದನ್ನು ಅನೇಕ ಸಾರಿ ಅವರ ನಡೆ-ನುಡಿಗಳು ಸಾಬೀತು ಮಾಡುತ್ತಲೆ ಬಂದಿವೆ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಅತ್ಯಂತ ಸೌಹಾರ್ದಮಯವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದಲೇ ಎಂತಹುದ್ದೇ ಸಂದರ್ಭದಲ್ಲೂ ಶೇ. ೩೦ ರಷ್ಟು ಮುಸ್ಲಿಂ ಮತಗಳು ಯಡಿಯೂರಪ್ಪ ಅವರಿಗೆ ಮೀಸಲಾಗಿರುತ್ತದೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಪ್ರಬಲ ಲಿಂಗಾಯಿತ ಸಮುದಾಯದ ನಂತರ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟ ಇನ್ನೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಅವರೆಂದೂ ಮುಸ್ಲಿಂರ ವಿರುದ್ದ ಬಹಿರಂಗವಾಗಿ ಕಾರಿಕೊಂಡ ಸನ್ನಿವೇಶವಂತೂ ಕಂಡಿದ್ದಿಲ್ಲ. ರಾಜಕೀಯ ಕಾರಣಗಳಿಗಾಗಿ ಅಂತಹ ವೇದಿಕೆಗಳನ್ನು ಹಂಚಿಕೊಂಡಿದ್ದರೂ ಯಡಿಯೂರಪ್ಪ ಆಂತರ್ಯದಲ್ಲಿ ಧರ್ಮ ದ್ವೇಷದ ಸೋಂಕು ಅಂಟಿಸಿಕೊಂಡವರಲ್ಲ ಎಂಬುದನ್ನು ಒಪ್ಪಲೇ ಬೇಕಾದ ಮಾತು. ಇಂತಹ ಕಾರಣಗಳಿಂದಲೇ ರಾಜ್ಯ ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ ಉಳಿಸಿಕೊಂಡಿರುವವರಲ್ಲಿ ಯಡಿಯೂರಪ್ಪ ಅಗ್ರಮಾನ್ಯರು ಎನ್ನಬಹುದು.

ಕೊರೊನ ಸೋಂಕು ವಿರುದ್ದದ ಹೋರಾಟದ ಜೊತೆಗೆ ಮತಾಂಧರ ಧೋರಣೆಗಳನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲಿನ ಕೆಲಸವೂ ಆಗಿದೆ. ಅದಕ್ಕಾಗಿ ಮಾನಸಿಕವಾಗಿ ಅವರು ಸಿದ್ದರಾದಂತೆ ಕಂಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಆರೆಸ್ಸೆಸ್ಸಿನ ವ್ಯಕ್ತಿಯಾಗಿ ಇಂದು ಉಳಿದಿಲ್ಲ. ಅವರೆಂದೂ ಯಾರ ಕೈಗೊಂಬೆಯಂತೆ ಕೆಲಸ ಮಾಡುವ ಜಯಮಾನದವರೇ ಅಲ್ಲ. ಹಾಗಾಗಿಯೇ ಅವರು ಬಹುತೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರ ಅಸಮಾಧಾನಗಳಿಗೆ ತುತ್ತಾಗುತ್ತಲೆ, ಸ್ಫೋಟಗೊಳ್ಳತ್ತಲೆ ಬಂದಿದ್ದಾರೆ. ರಾಜ್ಯದಲ್ಲಿರುವುದು ಪರಿವಾರ ಪ್ರೇಣಿತ ಬಿಜೆಪಿ ಸರ್ಕಾರವಲ್ಲ. ಹೋರಾಟಗಾರ ಯಡಿಯೂರಪ್ಪ ಅವರ ಸರ್ಕಾರ. ಇದು ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರವನ್ನು ತಮ್ಮ ನಿರ್ಧಾರಗಳಿಗೆ ತಕ್ಕಂತೆ ನಿರ್ದೇಶಿಸುವ ಪರಿವಾರದ ತಲೆಯಾಳುಗಳ ಆಟ ಯಡಿಯೂರಪ್ಪನವರ ಮುಂದೆ ನಡೆಯದ ಕಾರಣವೇ ಅವರೆಲ್ಲಾ ಈಗ ಸರ್ಕಾರ ಮತ್ತು ಪಕ್ಷವನ್ನು ಬೇರ್ಪಡಿಸಿಕೊಂಡು ಯಡಿಯೂರಪ್ಪನವರ ಪದಚ್ಯುತಿಗಾಗಿ ಕಾಯತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತದ ಯಡಿಯೂರಪ್ಪ ಅವರ ಮಾತುಗಳು ಪರಿವಾರದ ತಲೆಯಾಳುಗಳಿಗೆ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ. ಆಟ ಮುಂದಿದೆ.

ಕೊನೆ ಮಾತು:

ಉತ್ತರದ ರಾಜ್ಯಗಳಲ್ಲಿ ದಲಿತರನ್ನು ಭಕ್ತಗಣ ಗುಂಪು ಹತ್ಯೆ ಮಾಡುತ್ತಿರುವಾಗ, ಹತ್ಯಾಚಾರವೆಸಗುತ್ತಿರುವಾಗ, ಐಷಾರಾಮಿ ಕಾರಿಗೆ ಕಟ್ಟಿ ನಡುರಸ್ತೆಯಲ್ಲೇ ಚರ್ಮಸುಲಿದು ಬಡಿಯುತ್ತಿರುವಾಗ ಅಂತಹ ಕೊಲೆಪಾತಕರಿಗೆ ಖಡಕ್ ಆದ ಅಧಿಕಾರಯುಕ್ತ ಎಚ್ಚರಿಕೆಯೊಂದನ್ನು ಕೊಡಬೇಕಾದ ಅಧಿಕಾರ ದಂಡ ಹಿಡಿದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಡಿದ ಹೇಡಿತನದ ಮಾತೇನು ಗೊತ್ತಾ? ಬೇಕಾದರೆ ನನ್ನ ಎದೆಗೆ ಗುಂಡಿಡಿ, ದಲಿತರನ್ನು ಮಾತ್ರ ಕೊಲ್ಲಬೇಡಿ. ಈ ಮಾತು ಒಬ್ಬ ಹೇಡಿ ಮಾತ್ರ ಆಡಬಲ್ಲ. ಅಧಿಕಾರ ದಂಡ ಕೈಯಲ್ಲಿಟ್ಟುಕೊಂಡು ಅವರನ್ನು ಕೊಲ್ಲಬೇಡಿ ನನ್ನನ್ನು ಕೊಲ್ಲಿ ಎಂದು ಹೇಳುವುದು ನ್ಯಾಯ ನಿಷ್ಠುರ, ಕಾನೂನು ಕಾಯಬೇಕಾದ ನಾಯಕನೊಬ್ಬ ಸ್ವತಃ ಕೊಲ್ಲುವ ಕ್ರಿಯೆಯನ್ನು ಮಾನ್ಯ ಮಾಡಿದಂತಲ್ಲವೇ? ಯಾವತ್ತಾದರೂ ಪ್ರಧಾನಿ ಈ ನೆಲದ ಯಾವೊಬ್ಬ ನಾಗರೀಕರನಿಗೂ ಜೀವಹಾನಿ, ಮಾನಹಾನಿ ಆಗಿದ್ದೇ ಆದರೆ ಅಂತಹವರನ್ನು ಕಾನೂನು ಕ್ರಮಗಳಿಂದ ಶಿಕ್ಷಿಸುತ್ತೇನೆ ಎಂದು ಆಡಿದ್ದೇ(ರಾಜಧರ್ಮ ಪಾಲನೆ) ಆಗಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಧರ್ಮದ್ವೇಷ, ಜಾತಿ ದ್ವೇಷದ ರಕ್ತಪಾತಗಳು ಆಗುತ್ತಿರಲಿಲ್ಲವೇನೊ?. ಇಂದು ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಡಿದ ಮಾತನ್ನೇ ಈ ದೇಶದ ಪ್ರಧಾನಮಂತ್ರಿ ಆಡಬೇಕು. ದೀಪ ಹಚ್ಚುವುದು, ಜಾಗಟೆ ಬಾರಿಸುವುದು, ತಪ್ಪಾಳೆ ತಟ್ಟಿ ಬೀದಿಯಲ್ಲಿ ಅರಚಲು ಕರೆ ಕೊಡುವುದನ್ನು ಬಿಟ್ಟು ಅದಕ್ಕಾಗಿ ಮೋದಿ ಈ ಹೊತ್ತಿಗೆ ಯಡಿಯೂರಪ್ಪ ಅವರನ್ನು ರಾಜಧರ್ಮದ ಆದರ್ಶವನ್ನಾಗಿ ಅನುಸರಿಸಲಿ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯದ ವಿರುದ್ದ ಹೋರಾಡುತ್ತಾ ತಮ್ಮ ಯೌವ್ವನದ ಆಯಸ್ಸಿನ ಕಾಲು ಶತಮಾನವನ್ನೆ (೨೭ವರ್ಷ) ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಅವರು ಶಾಂತಿಯಹೋರಾಟದ ಫಲವಾಗಿಯೇ ಆ ದೇಶದ ಅಧ್ಯಕ್ಷರಾದಾಗ ಜಗತ್ತಿನ ಇಡೀ ಬಿಳಿಯರ ಸಾಮ್ರಾಜ್ಯ ಭಯ, ಅತಂಕದಿಂದ ನೆಲ್ಸನ್ ಮಂಡೇಲ ಅವರ ಕಡೆ ನೋಡುತ್ತಿತ್ತು. ಅವರ ಮೊದಲ ಅಧ್ಯಕ್ಷೀಯ ಭಾಷಣಕ್ಕಾಗಿ ಬಿಳಿಯರ ಜಗತ್ತು ಭಯದಿಂದ ಕಾಯುತ್ತಿದ್ದರೆ. ತಮ್ಮ ಮೇಲೆ ಅಮಾನುಷ ಕ್ರೌರ್ಯ ಮೆರೆದ ಬಿಳಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾದು ಕುಂತ ಕರಿಯ ಸಮುದಾಯ ರಣೋತ್ಸಾಹದಿಂದ ತಮ್ಮ ನಾಯಕನ ಸೇಡಿನ ಆದೇಶದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಆದರೆ ಮಂಡಲೇ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅಡಿದ ಮಾತು ಎಂದರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬಿಳಿಯನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಿದ್ದೇ ಆದರೆ ಅದಕ್ಕೆ ಕಾರಣರಾದವರೂ ಯಾರೇ ಇರಲಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂಬುದಾಗಿತ್ತು. ಈ ಕಾರಣಕ್ಕಾಗಿಯೇ ಮಂಡೇಲ ಜಗತ್ತಿನ ಮಾನವತೆಯ ಮಹಾ ಸಂತನಂತೆ ಚರಿತ್ರೆಯಲ್ಲಿ ಉಳಿದು ಹೋಗಿದ್ದಾರೆ.
ಚರಿತ್ರೆಯನ್ನು ಅರಿಯದವನು ಚರಿತ್ರೆಯನ್ನು ಸೃಷ್ಟಿಸಲಾರ.
ಎಲ್ಲಿಯ ಮಂಡೇಲ.. ? ಎಲ್ಲಿಯ ಯಡಿಯೂರಪ್ಪ…? ಎಲ್ಲಿಯ ಮೋದಿ.?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ವಿದ್ಯಾರ್ಥಿನಿ ಕೊಲೆ ಪ್ರಕರಣ: ಪ್ರತಿಭಟನಾಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್; ಯೋಗಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

ನವದೆಹಲಿ: ಜುಲೈ 8 ರಂದು ಮೀರತ್‌ನಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರ ಮೇಲೆ ಉತ್ತರ ಪ್ರದೇಶ ಪೊಲೀಸರು ಭೀಕರ ಹಲ್ಲೆ,...

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ನಾಪತ್ತೆ, 10 ಜನರ ರಕ್ಷಣೆ: ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ: ಜುಲೈ 12 ರಂದು ಒಮಾನ್ ಕರಾವಳಿಯ ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಸಾಗುತ್ತಿದ್ದ ‘ಜಿಎಫ್‌ಎಸ್ ಗ್ಯಾಲಕ್ಸಿ’ (GFS Galaxy) ಎಂಬ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಭೀಕರ...

SIR ಪ್ರಕ್ರಿಯೆಯಲ್ಲಿ ಎಐ ಬಳಕೆ, ಭಾರೀ ಪ್ರಮಾಣದಲ್ಲಿ ಮತದಾರರ ಹೆಸರು ಡಿಲೀಟ್ : ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆಯ ವಿಶೇಷ ವರದಿಗಾರರು

ಭಾರತೀಯ ಚುನಾವಣಾ ಆಯೋಗ (ಇಸಿಐ) ಕೈಗೊಂಡ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು (ಎಸ್‌ಐಆರ್) ವ್ಯಾಪಕ ಪ್ರಮಾಣದಲ್ಲಿ ಮತದಾರರ ಹೆಸರುಗಳ ಅಳಿಸುವಿಕೆಗೆ ಕಾರಣವಾಗಿದೆ ಮತ್ತು ಇದು ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ...

ಮಹಾರಾಷ್ಟ್ರ: ನಂದೂರ್ಬಾರ್‌ನ ಸರ್ಕಾರಿ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ; ತೀವ್ರಗೊಂಡ ತನಿಖೆ 

ನಂದೂರ್ಬಾರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಶಹಾಡಾ ತಾಲೂಕಿನಲ್ಲಿರುವ ಸರ್ಕಾರಿ ಸಮಾಜ ಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಶಂಕಿತ ವಿಷಪೂರಿತ ಆಹಾರ ಸೇವಿಸಿ ಸುಮಾರು 40 ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಕಳವಳಕಾರಿ ಘಟನೆ ವರದಿಯಾಗಿದೆ.  ಹಾಸ್ಟೆಲ್‌ನಲ್ಲಿ...

ಇರಾನ್‌ನ 140 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕದಿಂದ ದಾಳಿ : ಬಹ್ರೇನ್, ಕತಾರ್, ಯುಎಇ ಮೇಲೆ ಇರಾನ್‌ನಿಂದ ಪ್ರತಿದಾಳಿ

ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನಡೆಸಿದ ದಾಳಿಯಿಂದಾಗಿ ಸರಕು ಸಾಗಣೆ ಹಡಗೊಂದು ಹೊತ್ತಿ ಉರಿದು, ಅದರಲ್ಲಿದ್ದ ಸಿಬ್ಬಂದಿ ಹಡಗು ಬಿಟ್ಟು ಹೊರಡುವಂತಾಗಿತ್ತು. ಈ ಘಟನೆಯನ್ನು ಖಂಡಿಸಿ ಅಮೆರಿಕ ಭಾನುವಾರ (ಜು.12) ಮುಂಜಾನೆ ಇರಾನ್ ಮೇಲೆ...

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...