Homeಮುಖಪುಟಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

ಮೋದಿಗೆ ಯಡಿಯೂರಪ್ಪ ಯಾಕೆ ಈ ಹೊತ್ತಿನ ಆದರ್ಶವಾಗಬಲ್ಲರು ಗೊತ್ತಾ?

- Advertisement -
- Advertisement -

ಇಡೀ ಮನುಷ್ಯ ಕುಲವನ್ನೇ ನಿರ್ನಾಮ ಮಾಡುವತ್ತ ಮುನ್ನುಗ್ಗುತ್ತಿರುವ ಕೊರೊನ ರೋಗದ ವಿರುದ್ಧ ಹೋರಾಟ ನಡೆದಿರುವ ಈ ಸಂದರ್ಭದಲ್ಲಿ, ಒಂದು ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡು ವಿಕೃತ ಮನೋಸ್ಥಿತಿಯನ್ನು ಸಮಾಜದಲ್ಲಿ ಬಿತ್ತುವ ಕೆಲಸ ನಡೆದಿರುವ ಹೊತ್ತಿನಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್ ಯಡಿಯೂರಪ್ಪನವರು ಅತ್ಯಂತ ಹೊಣೆಗಾರಿಕೆಯ ಎಚ್ಚರಿಕೆಯನ್ನು ನೀಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ. ಅಲ್ಪಸಂಖ್ಯಾತರ ವಿರುದ್ದ ಯಾರೇ ಟೀಕೆ ಮಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಪೋಸ್ಟ್ ಮಾಡಲಿ ಅಂತಹವರ ವಿರುದ್ದ ಕಾನೂನು ಕ್ರಮ ಅನಿವಾರ್ಯ ಎಂಬ ಸಂದೇಶ ಸಾರಿದ ಕೆಲವೆ ನಿಮಿಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಯಾರಾದರೂ ಕೋಮುದ್ವೇಷ ಬಿತ್ತುವ, ಸೌಹಾರ್ದತೆ ಕದಡುವ ಅಥವಾ ಯಾವುದೇ ಧರ್ಮ, ಜಾತಿಯವರ ವಿರುದ್ದ ಅವಹೇಳನಕಾರಿ ಮಾತುಗಳನ್ನು ಆಡಿದರೆ ಅವರ ವಿರುದ್ದ ಕಾನೂನುಕ್ರಮ ಜರುಗಿಸುವ ಆದೇಶಗಳು ಹೊರಡಿಸಿದ್ದಾರೆ. ಅಂದರೆ ಮುಖ್ಯಮಂತ್ರಿಗಳ ಮಾತು ಕಾರ್ಯರೂಪಕ್ಕೆ ಬಂದಿದೆ. ಇದುವೆ ಅಧಿಕಾರದ ಇಚ್ಛಾಶಕ್ತಿ ಎಂದು ಭಾವಿಸಬಹುದು. ಇಂತಹದ್ದೊಂದು ಮುತ್ಸದ್ದಿತನ ಜನ ಹೋರಾಟದ ನೆಲೆಯಲ್ಲಿ ಬೆಳೆದು ಬಂದ ನಾಯಕನಿಗೆ ಮಾತ್ರ ದಕ್ಕಬಲ್ಲದೇನೋ. ಈಗ ಯಡಿಯೂರಪ್ಪ ಅವರು ಆಡಿದ ಮಾತಿಗೆ ಬದ್ದರಾಗಿಯೂ ನಡೆದುಕೊಳ್ಳಬೇಕಾದ ಪಾರದರ್ಶಕತೆಯನ್ನು ತೋರಬೇಕಿದೆ. ಅಲ್ಪಸಂಖ್ಯಾತ ಸಮುದಾಯದ ವಿರುದ್ದ ತಮ್ಮ ಪಕ್ಷದ ಶಾಸಕರು, ಸಂಸದರು, ಮುಂದಾಳುಗಳ ನಾಲಿಗೆಗೂ ಕಾನೂನು ಕುಣಿಕೆ ಹಾಕಿ ಹದ್ದುಬಸ್ತಿನಲ್ಲಿಡಬೇಕು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ 


ಯಡಿಯೂರಪ್ಪ ಅವರ ಹೇಳಿಕೆ ಬಿಜೆಪಿ ಮತ್ತದರ ಮಾತೃಕೋಣೆ ಪರಿವಾರದಲ್ಲಿ ಕೊರೊನ ಬಾಧಿತ ನರಳಾಟ ವಕ್ಕರಿಸಿಕೊಂಡಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಸದೆ ಶೋಭಾ ಕರಂದ್ಲಾಜೆ ಅವರು ಕೊರೊನಾ ಹರಡುವಿಕೆಗೆ ತಬ್ಲೀಘಿಗಳೆ ಕಾರಣ. ಕೊರೊನಾ ಹರುಡುವಿಕೆ ಇದೊಂದು ರೂಪದ ಜಿಹಾದ್ ಎಂದು ಬಹಿರಂಗವಾಗಿ ಹೇಳಿದ್ದರು. ಶಾಸಕ ರೇಣುಕಾಚಾರ್ಯ ಸೇರಿದಂತೆ ಅನೇಕ ಬಿಜೆಪಿ ಶಾಸಕ ,ಸಂಸದರುಗಳು ಅಲ್ಪಸಂಖ್ಯಾತ ಸಮುದಾಯವನ್ನೆ ಗುರಿಯಾಗಿಸಿಕೊಂಡು ನಾಲಿಗೆ ಹರಿಬಿಟ್ಟಿದ್ದರು. ಕೊರೊನಾ ಸೋಂಕಿಗೆ ಮುಸ್ಲಿಮರೇ ಕಾರಣ ಎಂಬಂತೆ ಅವರ ವಿರುದ್ದ ಸಂಪಾದ್ರಾಯಿಕ ನ್ಯೂಸ್ ಚಾನಲ್‌ಗಳು, ಸಾಮಾಜಿಕ ಜಾಲತಾಣಗಳು ಒಂದೇ ಸಮನೆ ಚೀರಿಕೊಳ್ಳತೊಡಗಿದ್ದವು. ಇವೆಲ್ಲದಕ್ಕೂ ಯಡಿಯೂರಪ್ಪ ಅವರ ಈ ಮೇಲಿನ ಮಾತು ಅಂಕುಶವಿಟ್ಟಂತಾಗಿದೆ.

ರಾಜ್ಯದಲ್ಲಿ ಈಗಾಗಲೆ ಧರ್ಮನಿಂದನೆ ಧೂರ್ತರ ವಿರುದ್ದ ಕೇಸುಗಳು ದಾಖಲಾಗತೊಡಗಿವೆ. ಇದೊಂದು ಪರಿಣಾಮಕಾರಿ ಬೆಳವಣಿಗೆ ಮತ್ತು ಅಲ್ಪಸಂಖ್ಯಾತ ಜನ ಸಮುದಾಯದಲ್ಲಿ ಭರವಸೆ ಮೂಡಿಸಿದ ಬಗೆ ಎನ್ನಬಹುದು. ಹಾಗೆ ನೋಡಿದರೆ ಯಡಿಯೂರಪ್ಪ ಎಂದಿಗೂ ಕೋಮುವಾದಿಯಲ್ಲ ಎಂಬುದನ್ನು ಅನೇಕ ಸಾರಿ ಅವರ ನಡೆ-ನುಡಿಗಳು ಸಾಬೀತು ಮಾಡುತ್ತಲೆ ಬಂದಿವೆ. ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಮುಸ್ಲಿಂ ಸಮುದಾಯದ ವಿಶ್ವಾಸವನ್ನು ಅತ್ಯಂತ ಸೌಹಾರ್ದಮಯವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದಲೇ ಎಂತಹುದ್ದೇ ಸಂದರ್ಭದಲ್ಲೂ ಶೇ. ೩೦ ರಷ್ಟು ಮುಸ್ಲಿಂ ಮತಗಳು ಯಡಿಯೂರಪ್ಪ ಅವರಿಗೆ ಮೀಸಲಾಗಿರುತ್ತದೆ. ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದಾಗ ಪ್ರಬಲ ಲಿಂಗಾಯಿತ ಸಮುದಾಯದ ನಂತರ ಯಡಿಯೂರಪ್ಪ ಅವರಿಗೆ ಬೆಂಬಲ ಕೊಟ್ಟ ಇನ್ನೊಂದು ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ. ಅವರೆಂದೂ ಮುಸ್ಲಿಂರ ವಿರುದ್ದ ಬಹಿರಂಗವಾಗಿ ಕಾರಿಕೊಂಡ ಸನ್ನಿವೇಶವಂತೂ ಕಂಡಿದ್ದಿಲ್ಲ. ರಾಜಕೀಯ ಕಾರಣಗಳಿಗಾಗಿ ಅಂತಹ ವೇದಿಕೆಗಳನ್ನು ಹಂಚಿಕೊಂಡಿದ್ದರೂ ಯಡಿಯೂರಪ್ಪ ಆಂತರ್ಯದಲ್ಲಿ ಧರ್ಮ ದ್ವೇಷದ ಸೋಂಕು ಅಂಟಿಸಿಕೊಂಡವರಲ್ಲ ಎಂಬುದನ್ನು ಒಪ್ಪಲೇ ಬೇಕಾದ ಮಾತು. ಇಂತಹ ಕಾರಣಗಳಿಂದಲೇ ರಾಜ್ಯ ಬಿಜೆಪಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿಶ್ವಾಸ ಉಳಿಸಿಕೊಂಡಿರುವವರಲ್ಲಿ ಯಡಿಯೂರಪ್ಪ ಅಗ್ರಮಾನ್ಯರು ಎನ್ನಬಹುದು.

ಕೊರೊನ ಸೋಂಕು ವಿರುದ್ದದ ಹೋರಾಟದ ಜೊತೆಗೆ ಮತಾಂಧರ ಧೋರಣೆಗಳನ್ನು ಹತ್ತಿಕ್ಕುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಒಂದು ಸವಾಲಿನ ಕೆಲಸವೂ ಆಗಿದೆ. ಅದಕ್ಕಾಗಿ ಮಾನಸಿಕವಾಗಿ ಅವರು ಸಿದ್ದರಾದಂತೆ ಕಂಡಿದ್ದಾರೆ. ವಾಸ್ತವವಾಗಿ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಆರೆಸ್ಸೆಸ್ಸಿನ ವ್ಯಕ್ತಿಯಾಗಿ ಇಂದು ಉಳಿದಿಲ್ಲ. ಅವರೆಂದೂ ಯಾರ ಕೈಗೊಂಬೆಯಂತೆ ಕೆಲಸ ಮಾಡುವ ಜಯಮಾನದವರೇ ಅಲ್ಲ. ಹಾಗಾಗಿಯೇ ಅವರು ಬಹುತೇಕ ಸಂದರ್ಭಗಳಲ್ಲಿ ಸ್ವಪಕ್ಷೀಯರ ಅಸಮಾಧಾನಗಳಿಗೆ ತುತ್ತಾಗುತ್ತಲೆ, ಸ್ಫೋಟಗೊಳ್ಳತ್ತಲೆ ಬಂದಿದ್ದಾರೆ. ರಾಜ್ಯದಲ್ಲಿರುವುದು ಪರಿವಾರ ಪ್ರೇಣಿತ ಬಿಜೆಪಿ ಸರ್ಕಾರವಲ್ಲ. ಹೋರಾಟಗಾರ ಯಡಿಯೂರಪ್ಪ ಅವರ ಸರ್ಕಾರ. ಇದು ಪರಿವಾರಕ್ಕೆ ನುಂಗಲಾರದ ತುತ್ತಾಗಿದೆ. ಸರ್ಕಾರವನ್ನು ತಮ್ಮ ನಿರ್ಧಾರಗಳಿಗೆ ತಕ್ಕಂತೆ ನಿರ್ದೇಶಿಸುವ ಪರಿವಾರದ ತಲೆಯಾಳುಗಳ ಆಟ ಯಡಿಯೂರಪ್ಪನವರ ಮುಂದೆ ನಡೆಯದ ಕಾರಣವೇ ಅವರೆಲ್ಲಾ ಈಗ ಸರ್ಕಾರ ಮತ್ತು ಪಕ್ಷವನ್ನು ಬೇರ್ಪಡಿಸಿಕೊಂಡು ಯಡಿಯೂರಪ್ಪನವರ ಪದಚ್ಯುತಿಗಾಗಿ ಕಾಯತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಹಿತದ ಯಡಿಯೂರಪ್ಪ ಅವರ ಮಾತುಗಳು ಪರಿವಾರದ ತಲೆಯಾಳುಗಳಿಗೆ ಬಿಜೆಪಿಯಲ್ಲಿನ ಯಡಿಯೂರಪ್ಪ ಅವರ ವಿರೋಧಿಗಳಿಗೆ ಅಸ್ತ್ರವೊಂದು ಸಿಕ್ಕಂತಾಗಿದೆ. ಆಟ ಮುಂದಿದೆ.

ಕೊನೆ ಮಾತು:

ಉತ್ತರದ ರಾಜ್ಯಗಳಲ್ಲಿ ದಲಿತರನ್ನು ಭಕ್ತಗಣ ಗುಂಪು ಹತ್ಯೆ ಮಾಡುತ್ತಿರುವಾಗ, ಹತ್ಯಾಚಾರವೆಸಗುತ್ತಿರುವಾಗ, ಐಷಾರಾಮಿ ಕಾರಿಗೆ ಕಟ್ಟಿ ನಡುರಸ್ತೆಯಲ್ಲೇ ಚರ್ಮಸುಲಿದು ಬಡಿಯುತ್ತಿರುವಾಗ ಅಂತಹ ಕೊಲೆಪಾತಕರಿಗೆ ಖಡಕ್ ಆದ ಅಧಿಕಾರಯುಕ್ತ ಎಚ್ಚರಿಕೆಯೊಂದನ್ನು ಕೊಡಬೇಕಾದ ಅಧಿಕಾರ ದಂಡ ಹಿಡಿದ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಆಡಿದ ಹೇಡಿತನದ ಮಾತೇನು ಗೊತ್ತಾ? ಬೇಕಾದರೆ ನನ್ನ ಎದೆಗೆ ಗುಂಡಿಡಿ, ದಲಿತರನ್ನು ಮಾತ್ರ ಕೊಲ್ಲಬೇಡಿ. ಈ ಮಾತು ಒಬ್ಬ ಹೇಡಿ ಮಾತ್ರ ಆಡಬಲ್ಲ. ಅಧಿಕಾರ ದಂಡ ಕೈಯಲ್ಲಿಟ್ಟುಕೊಂಡು ಅವರನ್ನು ಕೊಲ್ಲಬೇಡಿ ನನ್ನನ್ನು ಕೊಲ್ಲಿ ಎಂದು ಹೇಳುವುದು ನ್ಯಾಯ ನಿಷ್ಠುರ, ಕಾನೂನು ಕಾಯಬೇಕಾದ ನಾಯಕನೊಬ್ಬ ಸ್ವತಃ ಕೊಲ್ಲುವ ಕ್ರಿಯೆಯನ್ನು ಮಾನ್ಯ ಮಾಡಿದಂತಲ್ಲವೇ? ಯಾವತ್ತಾದರೂ ಪ್ರಧಾನಿ ಈ ನೆಲದ ಯಾವೊಬ್ಬ ನಾಗರೀಕರನಿಗೂ ಜೀವಹಾನಿ, ಮಾನಹಾನಿ ಆಗಿದ್ದೇ ಆದರೆ ಅಂತಹವರನ್ನು ಕಾನೂನು ಕ್ರಮಗಳಿಂದ ಶಿಕ್ಷಿಸುತ್ತೇನೆ ಎಂದು ಆಡಿದ್ದೇ(ರಾಜಧರ್ಮ ಪಾಲನೆ) ಆಗಿದ್ದರೆ ಇಂದು ದೇಶದಲ್ಲಿ ಇಷ್ಟೊಂದು ಧರ್ಮದ್ವೇಷ, ಜಾತಿ ದ್ವೇಷದ ರಕ್ತಪಾತಗಳು ಆಗುತ್ತಿರಲಿಲ್ಲವೇನೊ?. ಇಂದು ಈ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಡಿದ ಮಾತನ್ನೇ ಈ ದೇಶದ ಪ್ರಧಾನಮಂತ್ರಿ ಆಡಬೇಕು. ದೀಪ ಹಚ್ಚುವುದು, ಜಾಗಟೆ ಬಾರಿಸುವುದು, ತಪ್ಪಾಳೆ ತಟ್ಟಿ ಬೀದಿಯಲ್ಲಿ ಅರಚಲು ಕರೆ ಕೊಡುವುದನ್ನು ಬಿಟ್ಟು ಅದಕ್ಕಾಗಿ ಮೋದಿ ಈ ಹೊತ್ತಿಗೆ ಯಡಿಯೂರಪ್ಪ ಅವರನ್ನು ರಾಜಧರ್ಮದ ಆದರ್ಶವನ್ನಾಗಿ ಅನುಸರಿಸಲಿ.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರ ಕ್ರೌರ್ಯದ ವಿರುದ್ದ ಹೋರಾಡುತ್ತಾ ತಮ್ಮ ಯೌವ್ವನದ ಆಯಸ್ಸಿನ ಕಾಲು ಶತಮಾನವನ್ನೆ (೨೭ವರ್ಷ) ಜೈಲಿನ ಕತ್ತಲೆ ಕೋಣೆಯಲ್ಲಿ ಕಳೆದ ನೆಲ್ಸನ್ ಮಂಡೇಲಾ ಅವರು ಶಾಂತಿಯಹೋರಾಟದ ಫಲವಾಗಿಯೇ ಆ ದೇಶದ ಅಧ್ಯಕ್ಷರಾದಾಗ ಜಗತ್ತಿನ ಇಡೀ ಬಿಳಿಯರ ಸಾಮ್ರಾಜ್ಯ ಭಯ, ಅತಂಕದಿಂದ ನೆಲ್ಸನ್ ಮಂಡೇಲ ಅವರ ಕಡೆ ನೋಡುತ್ತಿತ್ತು. ಅವರ ಮೊದಲ ಅಧ್ಯಕ್ಷೀಯ ಭಾಷಣಕ್ಕಾಗಿ ಬಿಳಿಯರ ಜಗತ್ತು ಭಯದಿಂದ ಕಾಯುತ್ತಿದ್ದರೆ. ತಮ್ಮ ಮೇಲೆ ಅಮಾನುಷ ಕ್ರೌರ್ಯ ಮೆರೆದ ಬಿಳಿಯ ವಿರುದ್ದ ಸೇಡು ತೀರಿಸಿಕೊಳ್ಳಲು ಕಾದು ಕುಂತ ಕರಿಯ ಸಮುದಾಯ ರಣೋತ್ಸಾಹದಿಂದ ತಮ್ಮ ನಾಯಕನ ಸೇಡಿನ ಆದೇಶದ ನಿರೀಕ್ಷೆಯಲ್ಲಿ ಕಾಯುತ್ತಿತ್ತು. ಆದರೆ ಮಂಡಲೇ ತಮ್ಮ ಮೊದಲ ಅಧ್ಯಕ್ಷೀಯ ಭಾಷಣದಲ್ಲಿ ಅಡಿದ ಮಾತು ಎಂದರೆ ದಕ್ಷಿಣ ಆಫ್ರಿಕಾದ ಯಾವೊಬ್ಬ ಬಿಳಿಯನ ಒಂದು ತೊಟ್ಟು ರಕ್ತ ನೆಲಕ್ಕೆ ಬಿದ್ದಿದ್ದೇ ಆದರೆ ಅದಕ್ಕೆ ಕಾರಣರಾದವರೂ ಯಾರೇ ಇರಲಿ ಅವರನ್ನು ಅತ್ಯಂತ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂಬುದಾಗಿತ್ತು. ಈ ಕಾರಣಕ್ಕಾಗಿಯೇ ಮಂಡೇಲ ಜಗತ್ತಿನ ಮಾನವತೆಯ ಮಹಾ ಸಂತನಂತೆ ಚರಿತ್ರೆಯಲ್ಲಿ ಉಳಿದು ಹೋಗಿದ್ದಾರೆ.
ಚರಿತ್ರೆಯನ್ನು ಅರಿಯದವನು ಚರಿತ್ರೆಯನ್ನು ಸೃಷ್ಟಿಸಲಾರ.
ಎಲ್ಲಿಯ ಮಂಡೇಲ.. ? ಎಲ್ಲಿಯ ಯಡಿಯೂರಪ್ಪ…? ಎಲ್ಲಿಯ ಮೋದಿ.?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...