Homeನೂರರ ನೋಟಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

- Advertisement -
- Advertisement -

ಭಾರತೀಯ ಮತದಾರರಲ್ಲಿ ಕೆಲವರು ಜಾತಿಗೆ, ದುಡ್ಡಿಗೆ, ಹೆಂಡಕ್ಕೆ ತಮ್ಮನ್ನು ಮಾರಾಟ ಮಾಡಿಕೊಂಡರೂ, ಒಟ್ಟಿನಲ್ಲಿ ಅವರು ಜಾಣರಾಗಿದ್ದರು. ಒಮ್ಮೆ ಕಾಂಗ್ರೆಸ್ಸಿಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುತ್ತಿದ್ದರು. ಅವರು ಸರಿಯಾಗಿ ಸರ್ಕಾರ ನಿರ್ವಹಿಸಿಲ್ಲ ಎಂದಾದರೆ ಮುಂದಿನ ಚುನಾವಣೆಯಲ್ಲಿ ಎಲ್ಲ ಮತದಾರರೂ ಕುಳಿತು ಮಾತಾಡಿಕೊಂಡು, ತೀರ್ಮಾನ ಕೈಗೊಂಡಹಾಗೆ ಮುಂದಿನ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಬಹುಮತ ನೀಡಿ ಹಿಂದಿನ ಸರ್ಕಾರವನ್ನು ಉರುಳಿಸುತ್ತಿದ್ದರು. ಇದು ಸ್ವಾತಂತ್ರ್ಯ ಪ್ರಾಪ್ತವಾದ 30 ವರ್ಷಗಳ ಮೇಲೆ ಮತದಾರರಲ್ಲಿ ಆದ ಬದಲಾವಣೆ. ಮತದಾರರು ಹೆಚ್ಚು ಓದಿಲ್ಲದಿರಬಹುದು. ಆದರೆ ಅವರಿಗೆ ವ್ಯವಹಾರ ಜ್ಞಾನ ಬಹಳಷ್ಟಿತ್ತು. ಯಾವುದು ಒಳ್ಳೆಯ ಆಡಳಿತ, ಕೆಟ್ಟ ಆಡಳಿತ ಯಾವುದು ಎನ್ನುವುದನ್ನು ಗ್ರಹಿಸುವಷ್ಟು ತಿಳಿವಳಿಕೆ ಇತ್ತು. ಆದರೆ ಅವರಿಗಿದ್ದ ಅವಕಾಶ ಸೀಮಿತ. ಸ್ಪರ್ಧಿಸಿರುವ ರಾಜಕೀಯ ಪಕ್ಷಗಳಲ್ಲಿ ಒಂದನ್ನು ಆಯ್ಕೆ ಮಾಡುವ ಹಕ್ಕು ಮಾತ್ರ ಇದ್ದು ಆದ್ದರಿಂದ ಅವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದರು.

ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಎಲ್ಲಾ ತಲೆಕೆಳಗಾಯಿತು. ಮತದಾರ ತನ್ನ ಆಲೋಚನಾ ಶಕ್ತಿಯನ್ನು ಕಳೆದುಕೊಂಡ. ದೇಶ ಮತ್ತು ತನ್ನ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದ ಮತದಾರ ಈಗ ಮೋದಿ, ಅವರ ಪೊಳ್ಳು ಘೋಷಣೆಗೆ ಬಲಿಯಾಗುತ್ತಿದ್ದಾನೆ. ಸ್ವಂತಿಕೆಯ ಗುಣ ಏಕೆ ಕಳೆದುಕೊಂಡ ಎಲ್ಲದರ ಕುರಿತು ಗಂಭೀರವಾಗಿ ವಿಚಾರ ಮಾಡಬೇಕೆಂದು ಮತದಾರರಲ್ಲಿ ವಿನಂತಿಮಾಡಿಕೊಳ್ಳುತ್ತೇನೆ. ಆವೇಶಕ್ಕೆ ಎಡೆಮಾಡದೆ ಮತದಾರ ದೇಶದ ಪರಿಸ್ಥಿತಿಯ ಬಗೆಗೆ ಗಮನ ಕೊಡಬೇಕು. ಅಬ್ಬರದ ಪ್ರಚಾರ ಭಾಷಣಗಳು, ಪೊಳ್ಳು ಘೋಷಣೆಗಳು, ಯುದ್ಧದ ಮಾತನಾಡಿ ತನ್ನಿಂದಲೇ ಈ ದೇಶದ ರಕ್ಷಣೆ ಸಾಧ್ಯ, ಹಿಂದಿನವರು ಏನೂ ಮಾಡದೆ ನಿಷ್ಕ್ರೀಯರಾಗಿದ್ದರು ನಾನು ದೇವದೂತ ಅವತರಿಸಿ ಬಂದಿದ್ದೇನೆ ಎಂಬ ರೀತಿಯಲ್ಲಿ ಮೋದಿಯವರು ಮಾತನಾಡುತ್ತಾರೆ. ಹಿಂದೆ ಸರ್ಕಾರ ನಡೆಸಿದವರು ಪಾಕಿಸ್ತಾನದ ಮೇಲೆ 2 ಸಾರಿ ಯುದ್ಧದಲ್ಲಿ ಗೆದ್ದಿದ್ದಾರೆ ಎಂಬುದನ್ನು ಮೋದಿ ತಿಳಿಯಬೇಕು. ನೆಹರು ಕಾಲದಲ್ಲಿ ಚೀನೀಯರು ಭಾರತ ಭಾಯಿ ಭಾಯಿ ಎಂದು ಸ್ಲೋಗನ್ ಹಾಕುತ್ತ ಏಮಾರಿಸಿ ಭಾರತದ ಮೇಲೆ ಏಕಾಏಕಿ ಯುದ್ಧ ಹೂಡಿದರು. ಚೀನೀಯರು ನಂಬಿಕೆದ್ರೋಹಿಗಳು ಎಂಬುದನ್ನು ಸಾಬೀತುಮಾಡಿಕೊಟ್ಟರು. ಯುದ್ಧದ ಸುಳಿವು ಕೂಡ ಕೊಡದೆ ಹಠಾತ್ತಾಗಿ ಮೇಲೆ ಏರಗಿದರು. ಭಾರತೀಯ ಸೈನ್ಯ ಯುದ್ಧದ ಮೂಡಿನಲ್ಲೇ ಇರಲಿಲ್ಲ. ಆದರೆ ಮೋದಿಯವರು, ಜವಾಹರ್‌ಲಾಲ್‌ರನ್ನು ಹಂಗಿಸಲು ಚೈನಾದ ವಿಚಾರ ಪ್ರಸ್ತಾಪ ಮಾಡುತ್ತಾರೆ. ಯಾವ ಸರ್ಕಾರ ಬರಲಿ ದೇಶ ರಕ್ಷಣೆ ಮಾಡಬೇಕಾದದ್ದು ಅವರ ಕರ್ತವ್ಯ. ಅದನ್ನು ಅವರು ಮಾಡೇ ಮಾಡುತ್ತಾರೆ. ಭಾರತ ಸೈನ್ಯವನ್ನು ಮೊದಲ ಬಾರಿಗೆ ಮೋದಿ ಬಂದು ಸಂಘಟಿಸಲಿಲ್ಲ ಭಾರತೀಯ ಸೈನ್ಯ ಮೊದಲಿನಿಂದಲೂ ಬಲಿಷ್ಠವಾಗಿದೆ. ಸುಸಂಘಟಿತವಾಗಿದೆ. ಇದನ್ನು ನಮ್ಮ ಮತದಾರರು ತಿಳಿಯಬೇಕು. ಆವೇಶ ತೋರುವವರಿಗೆ ನಮಗೂ ಭಾರತೀಯ ಸೈನ್ಯದ ಬಲದ ಬಗೆಗೆ ಅರಿವಿದೆ, ನೀವು ಉತ್ಪ್ರೇಕ್ಷೆ ಮಾಡಿ ಸುಳ್ಳು ಪ್ರಚಾರ ಮಾಡಬೇಡಿ ಎಂದು ಖಡಕ್ಕಾಗಿ ಹೇಳಬೇಕು.

ಮೋದಿಯವರು ಅಧಿಕಾರಕ್ಕೆ ಬಂದು 6 ವರ್ಷ ಆಯಿತು. ಈ 6 ವರ್ಷದಲ್ಲಿ ಏನೇನು ನಡೆಯಿತು ಎಂಬುದನ್ನು ಮತದಾರರು ಗಮನಿಸಬೇಕು. 1000, 500ರೂಗಳ ಹಳೇ ನೋಟುನ್ನು ರದ್ದು ಮಾಡಿದ್ದರಿಂದ ಕಪ್ಪು ಹಣ ಹೊರಬರಲಿಲ್ಲ, ಭ್ರಷ್ಟಾಚಾರ ಕಡಿಮೆಯಾಗಲಿಲ್ಲ. ಅದರ ಬದಲು ಬ್ಯಾಂಕ್ ಅಧಿಕಾರಿಗಳು, ರಾಜಕಾರಣಿಗಳು ಕೂಡಿಕೊಂಡು ಲಕ್ಷಾಂತರ ಕಪ್ಪುಹಣವನ್ನೆಲ್ಲ ಬಿಳೀದು ಮಾಡಿಕೊಂಡರು. ಪಟ್ಟಭದ್ರರ ಹಿತಕಾಯ್ದರು.

ಮೋದಿಯ ನೋಟು ಅಮಾನ್ಯೀಕರಣದ ಅಮಾನವೀಯತೆ

ಯುವಕರಿಗೆ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಓಟು
ಕಿತ್ತುಕೊಂಡರು. ಈಗಲಾದರೂ ಯುವ ಮತದಾರರು ಎಚ್ಚೆತ್ತುಕೊಳ್ಳಬೇಡವೆ?

109 ರೈಲು ಮಾರ್ಗಗಳನ್ನು ಖಾಸಗಿಯವರಿಗೆ ವಹಿಸುವ, ಕಲ್ಲಿದ್ದಲು ಗಣಿಗಳನ್ನು ಖಾಸಗಿಯವರಿಗೆ ಹರಾಜು ಮಾಡುವ ಸರ್ಕಾರದ ಷೇರುಗಳನ್ನು ಮಾರಿಹಾಕುತ್ತ ಇಂತಹ ಎಷ್ಟೋ ಅವಿವೇಕದ ಕೆಲಸಗಳನ್ನು ಮೋದಿ ಕೈಗೆತ್ತಿಕೊಂಡಿದ್ದಾರೆ. ದೊಡ್ಡ ಬಹುಮತ ಇದೆಯೆಂದು ಜನದ್ರೋಹಿ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಿದ್ದಾರೆ. ಕೊರೊನಾದಿಂದ ಜನ ಒಂದೇಸಮನೆ ಸಾಯುತ್ತಿದ್ದರೆ, ಜನಪರ ಕಾಯ್ದೆಗಳಿಗೆ ತಮಗೆ ಬೇಕಾದಂತೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸುವುದರಲ್ಲಿ ಮೋದಿ ಮಗ್ನರಾಗಿದ್ದಾರೆ. ಇದನ್ನು ಪ್ರಶ್ನಿಸಿದರೆ ಅಂಥವರ ಧ್ವನಿಯನ್ನು ಅಡಗಿಸಲಾಗುತ್ತದೆ.

ಕಾಶ್ಮೀರಕ್ಕೆ ಸಂಬಂಧಪಟ್ಟ 371ನೇ ವಿಧಿಯನ್ನು ಸಂವಿಧಾನ ಬದಲಾಯಿಸಿದೆ ರದ್ದುಗೊಳಿಸಲಾಗಿದೆ. ಕಾಶ್ಮೀರದ ಜನತೆಯಲ್ಲಿ ಈ ವಿಚಾರ ಪ್ರಸ್ತಾಪಿಸದೆ ಸರ್ವಾಧಿಕಾರಿ ಮನೋಭಾವದಿಂದ ಈ ವಿಧಿಯನ್ನು ರದ್ದು ಮಾಡಲಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಹಿಂದುತ್ವ ಪ್ರತಿಪಾದಕರನ್ನೇ ನೇಮಿಸಲಾಗುತ್ತಿದೆ. ನಾಯಕರನ್ನು ಪ್ರಶ್ನಿಸಬಾರದು ಅವರು ಹೇಳಿದಂತೆ ಕೇಳಿಕೊಂಡಿರಬೇಕು ಎಂದು ಆರ್‌ಎಸ್‌ಎಸ್ ಸಿದ್ಧಾಂತ ಹೇಳುತ್ತದೆ. ಅದನ್ನೇ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೂ ಅನ್ವಯಿಸುವ ಕೆಲಸ ಆರಂಭವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಸಿ ಪೌರತ್ವ(ತಿದ್ದುಪಡಿ) ಶಾಸನವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಸಾಕಷ್ಟು ಪ್ರತಿಭಟನೆ ನಡೆದಿದೆ. ವೈಚಾರಿಕ ಚಿಂತನೆ ಮಾಡುವವರ ಮೇಲೆ ದಾಳಿ ನಡೆಸಲಾಗಿದೆ. ಈ 6 ವರ್ಷಗಳಲ್ಲಿ 200 ಪತ್ರಕರ್ತರ ಮೇಲೆ ದಾಳಿ ನಡೆದಿದೆ. ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಯಾವುದರ ವಿಚಾರಣೆಯೂ ಆಗಿಲ್ಲ. ಇದೆಲ್ಲವನ್ನೂ ಮತದಾರರು ಪ್ರಶ್ನಿಸದಿದ್ದಲ್ಲಿ ಮುಂದೆ ಭಾರೀ ಅನಾಹುತ ಎದುರಿಸಬೇಕಾಗುತ್ತದೆ.

  • ಎಚ್.ಎಸ್ ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಜನಪರ ಚಿಂತಕರು.

ಇದನ್ನೂ ಓದಿ: ಊಟ, ಉದ್ಯೋಗ, ಸ್ವಾವಲಂಬನೆ ಎಲ್ಲರ ಹಕ್ಕಾಗಲಿ: 103ನೇ ಜನ್ಮದಿನದಂದು HS ದೊರೆಸ್ವಾಮಿಯವರ ಆಶಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...