Homeಮುಖಪುಟದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ದೇಶದ ಸಾಕ್ಷಿಪ್ರಜ್ಞೆ ಬಾಬಾಸಾಹೇಬರ ಬೌದ್ಧಿಕ ವಾರಸುದಾರ: ಚಿಂತಕ ಆನಂದ್ ತೇಲ್ತುಂಬ್ಡೆ

ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ.

- Advertisement -
- Advertisement -

ಸ್ವಾತಂತ್ರ‍್ಯಾನಂತರದಲ್ಲಿ ಅತಿ ಬಡ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ತೇಲ್ತುಂಬ್ಡೆ ಡಾ. ಅಂಬೇಡ್ಕರ್ ಚಿಂತನೆಗಳಿಂದ ಸ್ಪೂರ್ತಿ ಪಡೆದು ಕೇವಲ ತನ್ನ ಸ್ವಂತಶಕ್ತಿಯಿಂದ ಅತ್ಯಂತ ಪ್ರತಿಭಾವಂತನಾದ ಚಿಂತಕನಾಗಿ ಬೆಳೆದರು. ಬಹುಶಃ ನನಗೆ ತಿಳಿದಂತೆ ಅಂಬೇಡ್ಕರ್ ಬರಹಗಳನ್ನು ಅಷ್ಟು ಸಂಪೂರ್ಣವಾಗಿ ಓದಿದವರು ಬಹಳ ಕಡಿಮೆ. ಆನಂದ್ ಅಂಬೇಡ್ಕರ್‌ರನ್ನು ಆಳವಾಗಿ ಅಧ್ಯಯನ ಮಾಡಿದ್ದೇ ಅಲ್ಲದೇ ಮಾರ್ಕ್ಸಿಸಂಅನ್ನು ಕೂಡ ಆಳವಾಗಿ ಅಧ್ಯಯನ ಮಾಡಿದವರು. ಮಾರ್ಕ್ಸಿಸಂನ ಚಾರಿತ್ರಿಕ, ತಾತ್ವಿಕ, ನೈತಿಕ ದೃಷ್ಟಿಕೋನಗಳನ್ನು ಹೆಚ್ಚು ಸಮಗ್ರವಾಗಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನ ಮಾಡಿದವರು. ಬಹಳ ಆಶ್ಚರ್ಯವೆಂದರೆ ಗಾಂಧೀಜಿಯ ಬರಹಗಳನ್ನು ಬಹಳ ಗೌರವದಿಂದ ಓದುವುದೇ ಅಲ್ಲದೇ, ಗಾಂಧಿಯವರನ್ನು ಭಾರತೀಯ ಸಮಾಜ ಮತ್ತಷ್ಟು ಪರಿಣಿತಿಯಿಂದ ಅಂದಾಜು ಮಾಡಬೇಕೆಂದು ತೇಲ್ತುಂಬ್ಡೆ ವಾದಿಸುತ್ತಾರೆ. ಈ ಮೂರು ಚಿಂತನೆಗಳ ಧಾರೆಗಳ ಪ್ರಭಾವದಿಂದ ಅವರು ರಚಿಸಿದ 29 ಪುಸ್ತಕಗಳನ್ನು ನೋಡಬಹುದು. ಈ ಪುಸ್ತಕಗಳೆಲ್ಲಾ ಆನಂದ್ ಅವರ ಬೌದ್ಧಿಕ ಶಿಖರಕ್ಕೆ ಕನ್ನಡಿಯಾಗಿವೆ.

ಆನಂದ್ ಚಿಕ್ಕಂದಿನಿಂದಲೇ ಬಹಳ ಚುರುಕಾದ ವಿದ್ಯಾರ್ಥಿ. ಕಡು ಬಡತನದ ಕಾರಣಕ್ಕೆ ರಜೆಯಲ್ಲಿ ಮನೆಗಳಿಗೆ ಸುಣ್ಣ ಬಳಿಯಲು ಹೋಗಿ ಅದರಿಂದ ಬಂದ ಹಣದಿಂದ ವಿದ್ಯಾಭ್ಯಾಸ ಮಾಡಿದರು. ಒಮ್ಮೆ ನಾನು ಆನಂದ್ ಅವರ ತಾಯಿಯನ್ನು ಭೇಟಿಯಾದಾಗ ನಿಮ್ಮ ಮಗನಿಗೆ ಹೆಸರು ಪ್ರತಿಷ್ಟೆ ಎಲ್ಲಾ ಇದೆ, ಒಳ್ಳೆಯ ಮಗನಿಗೆ ತಾಯಿ ನೀವು ಅಂದಾಗ ನನ್ನ ಮುಖವನ್ನೆಲ್ಲಾ ತನ್ನ ಕೈಗಳಿಂದ ಅಪ್ಯಾಯಮಾನವಾಗಿ ಸವರಿದಳು. ಆ ತಾಯಿ ಮನಸ್ಸೆಲ್ಲಾ ಪ್ರೀತಿ ತುಂಬಿದ ಮನುಷ್ಯಳಂತೆ ಕಂಡರು. ಆನಂದ್ ಎಲೆಕ್ಟ್ರೀಕಲ್ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಆ ನಂತರ ಬಾಂಬೆ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಇದರ ಜೊತೆಗೆ ಪ್ರತಿಷ್ಠಿತ ಅಹ್ಮದಾಬಾದ್ ಐ.ಐ.ಎಮ್‌ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಆಧುನಿಕ ಐ.ಟಿ ರಂಗದಲ್ಲಿ ಮೆಗಾ ಅನಾಲಿಟಿಕ್ಸ್‌ನಲ್ಲಿ ಪ್ರಾವಿಣ್ಯತೆ ಗಳಿಸಿದರು. ಕೆಲಕಾಲ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗಿರುವ ಅನುಭವವನ್ನು ನೋಡಿ ಭಾರತ ಸರ್ಕಾರ ಅವರಿಗೆ ಪೆಟ್ರೋನೆಟ್ ಇಂಡಿಯಾ ಲಿಮಿಟೆಡ್‌ನಲ್ಲಿ ಜವಾಬ್ದಾರಿಯನ್ನು ನೀಡಿತು. ಈ ಅಪಾರವಾದ ಅನುಭವದಿಂದ ಮತ್ತೊಂದು ಪ್ರತಿಷ್ಠಿತ ಐಐಟಿ ಗೋರಕ್‌ಪುರ್‌ನಲ್ಲಿ ಪ್ರಾಧ್ಯಾಪಕರಾಗಿ ಆಹ್ವಾನಿಸಿ, ಮ್ಯಾನೇಜ್‌ಮೆಂಟ್ ಎಕಾನಾಮಿಕ್ಸ್ ಬೋಧನೆಯ ಜವಬ್ದಾರಿಯನ್ನು ನೀಡಿತು. ಅಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಗೋವಾ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೆಗಾ ಅನಾಲಿಟಿಕ್ಸ್ ಬೋಧಿಸುವುದಕ್ಕೆ ಆಹ್ವಾನಿಸಿತು. ಈ ವಲಯದಲ್ಲಿ ಪ್ರಾವೀಣ್ಯತೆ ಹೊಂದಿದ ಕೇವಲ ಇಪ್ಪತ್ತು ಜನ ನಿಪುಣರಲ್ಲಿ ಆನಂದ್ ಒಬ್ಬರು. ನಿಜಕ್ಕೂ ಈ ಅರ್ಹತೆಗಳಿಂದಲೇ ಕರ್ನಾಟಕದ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ಆನಂದ್ ಈ ವಲಯಗಳಿಗೆ ಸೀಮಿತವಾಗಿದ್ದರೆ ಬಹುಶಃ ಭಾರತ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಗಳನ್ನೇ ಕೊಡುತ್ತಿತ್ತು. ಆನಂದ್ ಅವರಿಗೆ ಇರುವ ಸಾಮಾಜಿಕ ಹಿನ್ನೆಲೆಯ ಕಾರಣ ಸಮಾಜದಲ್ಲಿ ಇರುವ ತಾರತಮ್ಯ, ಅಸಮಾನತೆ, ಬಡತನ, ಜಾತಿಪದ್ಧತಿ, ನಿರುದ್ಯೋಗ, ಭೂಮಿ ಸಮಸ್ಯೆ, ಜಾಗತೀಕರಣ, ಸಾಮ್ರಾಜ್ಯಶಾಹಿ ಲೂಟಿ, ಭೂಸ್ವಾಮ್ಯ ಸಂಬಂದಗಳು, ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳ ಮೇಲೆ ಸ್ಪಂದಿಸುತ್ತಾ ಬಂದರು. ಒಂದು ಕಡೆ ತಮ್ಮ ಅನಲಿಟಿಕ್ಸ್ ಜವಾಬ್ದಾರಿಯನ್ನು ನಿರ್ವಹಿಸುತ್ತಾ ನಿರಂತರವಾಗಿ ಈ ಸಮಸ್ಯೆಗಳೆಲ್ಲವುಗಳ ಮೇಲೆ ಬರೆದರು. ಉದಾಹರಣೆಗೆ ಅವರು ರಚಿಸಿದ ಗುಣಮಟ್ಟದ ಪುಸ್ತಕ ಖೈರ್ಲಾಂಜಿ ಕೇವಲ ಹತ್ತು ದಿನಗಳಲ್ಲಿ ಬರೆದದ್ದು. ಅದು ಚೈನಾದ ಬೀಜಿಂಗ್‌ನಿಂದ ಕೀನ್ಯಾಗೆ ಪ್ರಯಾಣಿಸುತ್ತಾ ವಿಮಾನದಲ್ಲಿ, ವಿಮಾನಾಶ್ರಯದಲ್ಲಿ ಕಳೆದ ಸಮಯದಲ್ಲಿ ಬರೆದರು. ನವಯಾನ ಎನ್ನುವ ಪ್ರಕಾಶಕ ಸಂಸ್ಥೆಯ ಮುಖ್ಯಸ್ಥ ಎಸ್.ಆನಂದ್ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಆನಂದ್ ಬಹಳ ಸೃಜನಶೀಲರೆನ್ನುತ್ತಾರೆ.

ಬ್ರಾಹ್ಮಣ್ಯದ ಸಿದ್ಧಾಂತ, ಜಾತಿ ವ್ಯವಸ್ಥೆ, ನಿಯೋ ಲಿಬರಲಿಸಂ, ಭೂಮಾಲೀಕತ್ವ, ಎಲ್ಲದಕ್ಕೂ ಮಿಗಿಲು ದೇಶದಲ್ಲಿ ಬಲಗೊಳ್ಳುತ್ತಿರುವ ಪ್ಯಾಸಿಸ್ಟ್ ಶಕ್ತಿಗಳ ಮೇಲೆ ಅವರು ಗಹನ ಚಿಂತನೆಯುಳ್ಳ ಬರಹಗಳನ್ನು ಬರೆದದ್ದೆ ಅಲ್ಲದೇ, ದೇಶದಲ್ಲಿರುವ ಬಡ ಸಮುದಾಯಗಳಿಗೆ ಡಾ.ಅಂಬೇಡ್ಕರ್ ಸೂಚಿಸಿದ ಹಾಗೆ ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿಯನ್ನು ತಲೆಯ ಮೇಲೆ ಹಾಕಿಕೊಂಡರು. ಬಡ ಸಮುದಾಯಗಳ ಮೇಲೆ, ದಲಿತರ ಮೇಲೆ ದಾಳಿಗಳು ನಡೆದರೆ ಆನಂದ್ ಖುದ್ದಾಗಿ ಅಲ್ಲಿಗೆ ಹೋಗಿ ಅವರ ಪರ ನಿಂತರು. ಹಳೆಯ ಮೆಹಬೂಬನಗರ್ ಜಿಲ್ಲೆಯ ಪಾತಪಲ್ಲೆ ಗ್ರಾಮದಲ್ಲಿ ದಲಿತರ ಮೇಲೆ ಬೋಯ ಸಮುದಾಯ ದಾಳಿ ಮಾಡಿದಾಗ ಎರಡು ಬಾರಿ ಊರಿಗೆ ತೆರಳಿ, ಹೋರಾಡಿ ನ್ಯಾಯ ಸಿಗುವ ಹಾಗೆ ಕೆಲಸ ಮಾಡಿದರು. ಡಾ.ಅಂಬೇಡ್ಕರ್ ಕುಟುಂಬದ ಸದಸ್ಯ ಬಂದರು ಎನ್ನುವುದು ದೊಡ್ಡ ಸುದ್ದಿಯಾಯಿತು. ನಾನು ಪಾತಪಲ್ಲೆಗೆ ಹೋದಾಗ ಬೋಯ ಸಮುದಾಯದವರು ಅಂಬೇಡ್ಕರ್ ಮೊಮ್ಮಗ ಬರುವಷ್ಟು ಅಪರಾಧ ನಾವು ಏನು ಮಾಡಿದ್ದೇವೆ ಎಂದರು. ಆನಂದ್ ಬಂದ ಕಾರಣದಿಂದ ಜಿಲ್ಲಾ ಆಡಳಿತ ಕೂಡ ಸ್ಪಂದಿಸಿತು. ಇದು ಕೇವಲ ಒಂದು ಉದಾಹರಣೆ. ಇಷ್ಟು ಅಪರೂಪವಾದ ವ್ಯಕ್ತಿಯನ್ನು ಯುಎಪಿಎ ಕಾಯ್ದೆಯ ಕೆಳಗೆ ಬಂಧಿಸುವುದು ಎಂದರೆ ದೇಶ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದು.

ಇಷ್ಟಕ್ಕೂ ಆನಂದ್ ಮಾಡಿದ ಅಪರಾಧವೇನು, ಅವರ ಮೇಲೆ ಹೊರೆಸಿದ ಅಪರಾಧವೇನಾಗಿತ್ತು? ಅವರ ಮೇಲೆ ಹೊರೆಸಿದ ಅಪರಾಧ ಭೀಮಾ ಕೊರೆಗಾಂವ್ ಘಟನೆಯ ಜೊತೆ ಸಂಬಂಧವಿದೆ, ಭೀಮಾ ಕೊರೆಗಾಂವ್ ಮಾವೋಯಿಸ್ಟ್ ಪಕ್ಷದ ಬೆಂಬಲದಿಂದ ನಡೆಯಿತೆನ್ನುವುದು ಪ್ರಧಾನವಾದ ಆರೋಪ. ಭೀಮಾ ಕೋರೆಗಾಂವ್ ನಿಜಕ್ಕೂ ಬಾಬಾ ಸಾಹೇಬ್ ಅಂಬೇಡ್ಕರ್ ರಾಜಕೀಯ ಹೋರಾಟದ ಶ್ರಮದ ಭಾಗ. ಅಂದಾಜು ಎರಡು ಶತಮಾನಗಳ ಕೆಳಗೆ ಬ್ರಾಹ್ಮಣ ಪೇಶ್ವೆಗಳನ್ನು ಸೋಲಿಸಿದ ಬ್ರಿಟಿಷ್ ಸೈನ್ಯದಲ್ಲಿ ದಲಿತರು ಮುಖ್ಯವಾದ ಪಾತ್ರ ನಿರ್ವಹಿಸಿದರು. ಈ ಘಟನೆಯ ಮೂಲಕ ದಲಿತರಲ್ಲಿ ಚೈತನ್ಯವನ್ನು, ಆತ್ಮವಿಶ್ವಾಸವನ್ನು ಬೆಳೆಸಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯಾವ ವರ್ಷವೂ ಇಲ್ಲದೇ 2018ರಲ್ಲಿಯೇ ಇದು ವಿವಾದಾಸ್ಪದವಾಗಿ ಬದಲಾಯಿತು. ಕೇಂದ್ರ, ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಇದನ್ನು ಬಳಸಿಕೊಂಡು ದೇಶದಲ್ಲಿನ ಹನ್ನೆರಡು ಅತ್ಯಂತ ಪ್ರತಿಭಾವಂತರನ್ನು ಅರೆಸ್ಟ್ ಮಾಡಿತು.

OBSERVE 16TH MAY AS JUSTICE DAY STAND WITH DR. ANAND TELTUMBDE AND OTHER ACTIVISTS

ಮೌಲ್ಯಗಳುಳ್ಳ, ಮೌಲಿಕ ಬದುಕು ನಡೆಸುತ್ತಿರುವ, ವ್ಯವಸ್ಥೆಯ ಜೊತೆ ರಾಜಿಯಾದರೇ ಅದೆಷ್ಟೋ ಬಿರುದು, ಪದವಿಗಳನ್ನಾದರೂ ಪಡೆದು ಜೀವನದಲ್ಲಿ ಸುಖವಾಗಿ ಬದುಕಬಲ್ಲವರಾಗಿದ್ದ ಆ 12 ಜನರು ಇಂದು ಈ ರೀತಿಯಲ್ಲಿ ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಮೊದಲಿಗೆ ಒಂಬತ್ತು ಮಂದಿಯನ್ನು ಪೂನಾ ಪೋಲಿಸರು ಬಂಧಿಸಿದರು. ಇದರಲ್ಲಿ ಆನಂದ್ ತೇಲ್ತುಂಬ್ಡೆ, ಗೌತಮ್ ನವಲಖ ಹೊರಗಡೆ ಇದ್ದುಬಿಟ್ಟಿದ್ದರು. ಆನಂದ್ ವಿಷಯದಲ್ಲಿ ಬಾಂಬೆ ಹೈಕೋರ್ಟ್, ಹಾಗೆಯೇ ನೌಲಾಖ ವಿಷಯದಲ್ಲಿ ದೆಹಲಿ ಹೈಕೋರ್ಟ್ ಕೆಲವು ತಾಂತ್ರಿಕ ಲೋಪಗಳಿಂದ ಸ್ಟೇ ಕೊಟ್ಟಿದ್ದರು. ಈ ಸ್ಟೇ ಮುಂದುವರೆಯುತ್ತಿರುವ ಸಮಯದಲ್ಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರ ಹೋಯಿತು. ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರದ ಪಾಲುದಾರರನ್ನು ನಾವು ಭೇಟಿಯಾಗಿದ್ದೆವು. ಭೀಮಾ ಕೊರೇಗಾಂವ್ ಘಟನೆ ಹಾಗೂ ಪ್ರಧಾನಮಂತ್ರಿ ಮೇಲೆ ಹತ್ಯೆಗೆ ಪಿತೂರಿ ಎನ್ನುವುದು ಕೇವಲ ಕಾಲ್ಪನಿಕ, ಇವು ಅಮಾಯಕರ ಮೇಲೆ ಹಾಕಿದ ಕೇಸುಗಳೆಂದು ಎನ್.ಸಿ.ಪಿ ಹಿರಿಯ ನಾಯಕ ಶರದ್ ಪವಾರ್ ನಮ್ಮೊಡನೆ ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ, ಪ್ರಕರಣ ದಾಖಲಾದ 18ತಿಂಗಳ ನಂತರ ಕೇಂದ್ರ ಸರ್ಕಾರವು ಈ ಒಟ್ಟು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಯಿಂದ ತೆಗೆದು ತಾವೇ ಇದನ್ನು ಎನ್.ಐ.ಎ ಮುಖಾಂತರ ನಿಭಾಯಿಸುತ್ತೇವೆಂದು ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿತು. ಈ ನಿರ್ಣಯದ ನಂತರ ಆನಂದ್ ತೇಲ್ತುಂಬ್ಡೆ, ಗೌತಮ್ ನೌಲಾಖ ಅವರ ಬಂಧನಕ್ಕಿದ್ದ ತಡೆಯಾಜ್ಞೆ ತೆರವಾಗಿ ಈಗ ಬಂಧವಾಗಿದ್ದಾರೆ.
ಆನಂದ್ ಅವರ ಬಂಧನವನ್ನು ದೇಶದೆಲ್ಲೆಡೆ ಅಲ್ಲದೇ, ಅಂತಾರಾಷ್ಟ್ರೀಯವಾಗಿಯೂ ಚಿಂತಕರು ಜನಸಾಮಾನ್ಯರು ಖಂಡಿಸಿದ್ದಾರೆ. ನೋಮ್ ಚಾಮ್ಸ್ಕಿ ಸೇರಿದಂತೆ ಹಲವು ವಿದ್ವಾಂಸರು ಈ ಬಂಧನದ ವಿರುದ್ಧ ಪ್ರತಿಭಟಿಸಿದರು. ಕಾಕತಾಳೀಯವೇ ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ 129ರ ಜಯಂತಿಯ ದಿನವೇ ಡಾ.ಅಂಬೇಡ್ಕರ್ ಕುಟುಂಬ ಸದಸ್ಯ ಮತ್ತು ಅವರ ಬೌದ್ಧಿಕ ವಾರಸುದಾರ ಹಾಗೂ ಚಿಂತಕ ಆನಂದ್ ತೇಲ್ತುಂಬ್ಡೆ ಜೈಲಿಗೆ ಹೋಗಬೇಕಾಗಿ ಬಂದಿದ್ದು ಒಂದು ಐತಿಹಾಸಿಕ ದುರಂತ. ಒಂದು ಕಡೆ ಅಂಬೇಡ್ಕರ್‌ವರಿಗೆ ಗೌರವ ಸೂಚಿಸುತ್ತಲೇ ಆತನ ಕುಟುಂಬ ಸದಸ್ಯನನ್ನು ಜೈಲು ಪಾಲು ಮಾಡುತ್ತಿರುವುದರಲ್ಲಿ ಸರ್ಕಾರದ ದ್ವಂದ್ವ ನೀತಿ ಕಾಣಿಸುತ್ತದೆ ಎಂದು ಆನಂದ್ ಹೇಳಿರುವುದು ಎಲ್ಲರನ್ನು ಆಲೋಚಿಸುವಂತೆ ಮಾಡುತ್ತಿದೆ. ದೇಶವು ತನ್ನ ಸ್ವಭಾವವನ್ನ ತನಗೆ ತಿಳಿಯದ ಹಾಗೆಯೇ ಬಹಿರಂಗಪಡಿಸುತ್ತದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನದ ಅವಶ್ಯಕತೆ ಇಲ್ಲ.

ಪ್ರೊ. ಜಿ. ಹರಗೋಪಾಲ್,
ಹಿರಿಯ ಚಿಂತಕ ಮತ್ತು ರಾಜಕೀಯ ಶಾಸ್ತ್ರಜ್ಞ. ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಲ್ಲದೆ, ಬೆಂಗಳೂರಿನ ಎನ್‌ಎಲ್‌ಎಸ್‌ಐಯು ಸೇರಿದಂತೆ ದೇಶ ವಿದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಮಾನವ ಹಕ್ಕುಗಳ ಕಾರ್ಯಕರ್ತರಾಗಿ ಹಲವು ಚಳವಳಿಗಳನ್ನು ಮುನ್ನಡೆಸಿದ್ದಾರೆ.

ಅನುವಾದ: ಅನಿಲ್‌ಕುಮಾರ್ ಚಿಕ್ಕದಾಳವಟ್ಟ


ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...